ಅಂಡರ್-14 ಕ್ರಿಕೆಟ್: ಕರ್ನಾಟಕಕ್ಕೆ ನೆರವಾದ ಸಮಿತ್ ದ್ರಾವಿಡ್ ಅಜೇಯ ಶತಕ!
ಸಮಿತ್ ದ್ರಾವಿಡ್ ಅಜೇಯ ಶತಕದ ನೆರವಿನಿಂದ ದಕ್ಷಿಣ ವಲಯದ ಅಂಡರ್-14 ಟೂರ್ನಿಯಲ್ಲಿ ಗೋವಾ ಎದುರು ಕರ್ನಾಟಕ 3 ಅಂಕ ಸಂಪಾದಿಸಿದೆ. ಎರಡು ದಿನಗಳ ಪಂದ್ಯ ಡ್ರಾನೊಂದಿಗೆ ಅಂತ್ಯವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು(ಜ.21): ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಬಾರಿಸಿದ ಅಜೇಯ ಶತಕದ ನೆರವಿನಿಂದ ಕರ್ನಾಟಕ ಅಂಡರ್-14 ತಂಡವು ಗೋವಾ ವಿರುದ್ಧ 3 ಅಂಕ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಮತ್ತೆ ಮಿಂಚಿದ ರಾಹುಲ್ ದ್ರಾವಿಡ್ ಪುತ್ರ ಸಮಿತ್
ಇಲ್ಲಿನ ಆಲೂರು ಮೈದಾನದಲ್ಲಿ ಸೋಮವಾರ ಮುಕ್ತಾಯವಾದ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯ ಗೋವಾ ವಿರುದ್ಧದ ಪಂದ್ಯದಲ್ಲಿ, ಸಮಿತ್ 180 ಎಸೆತಗಳನ್ನು ಎದುರಿಸಿ 15 ಬೌಂಡರಿ, 4 ಸಿಕ್ಸರ್ ಸಹಿತ 109 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲ ದಿನದಾಟದ ಅಂತ್ಯಕ್ಕೆ ಸಮಿತ್ ಅಜೇಯ 86 ರನ್ ಬಾರಿಸಿದ್ದರು. ಕರ್ನಾಟಕ ಮೊದಲ ಇನ್ನಿಂಗ್ಸಲ್ಲಿ 3 ವಿಕೆಟ್ಗೆ 245 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
NCA ಸುಧಾರಣೆಗೆ ದ್ರಾವಿಡ್-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ!
ಗೋವಾ ಮೊದಲ ಇನ್ನಿಂಗ್ಸಲ್ಲಿ 84ಕ್ಕೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸಲ್ಲಿ 5 ವಿಕೆಟ್ಗೆ 117 ರನ್ ಗಳಿಸಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ತಂಡವು 3 ಅಂಕ ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಸೋಮವಾರ ಮುಕ್ತಾಯವಾದ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ಹಾಗೂ ಪುದುಚೆರಿ ತಂಡಗಳು ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಕಲೆಹಾಕುವಲ್ಲಿ ಯಶಸ್ವಿಯಾದವು. ಹೈದರಾಬಾದ್ ತಂಡವು ಕೇರಳ ಎದುರು ಡ್ರಾ ಸಾಧಿಸಿದರೆ, ಪುದುಚೆರಿ ತಂಡವು ತಮಿಳುನಾಡಿನ ಎದುರು ಡ್ರಾಗೆ ತೃಪ್ತಿಪಟ್ಟುಕೊಂಡಿತು.