ಲಖನೌ ತಂಡಕ್ಕೆ ಡಬಲ್ ಶಾಕ್: ಐಪಿಎಲ್ನಿಂದ ಔಟಾದ ಕೆ.ಎಲ್. ರಾಹುಲ್, ಜಯದೇವ್ ಉನದ್ಕತ್
ಆರ್ಸಿಬಿ ತಂಡದ ಪಂದ್ಯದ ವೇಳೆ ಗಂಭೀರವಾದ ಗಾಯಕ್ಕೆ ಒಳಗಾಗಿದ್ದ ನಾಯಕ ಕೆ.ಎಲ್. ರಾಹುಲ್ ಪ್ರಸ್ತುತ ಐಪಿಎಲ್ನಿಂದಲೇ ಔಟಾಗಿದ್ದಾರೆ. ತೊಡೆಯ ಗಾಯಕ್ಕೆ ಒಳಗಾದ ನಂತರ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಐಪಿಎಲ್ನಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ.
ನವದೆಹಲಿ (ಮೇ 3, 2023): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಕಡೆಯ ಪಂದ್ಯದಲ್ಲಿ ಸೋತಿದ್ದ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡಕ್ಕೆ ಶಾಕ್ ಮೇಲೆ ಶಾಕ್ ಕಾದಿದೆ. ಲಖನೌ ತಂಡದ ಇಬ್ಬರು ಭಾರತದ ಪ್ರಮುಖ ಆಟಗಾರರು ಐಪಿಎಲ್ 2023ನಿಂದ ಹೊರಗುಳಿಯಲಿದ್ದಾರೆ. ಹೌದು, ಪ್ರಸ್ತುತ ಐಪಿಎಲ್ ಅರ್ಧ ಮಾತ್ರ ಮುಗಿದಿದ್ದು ಉಳಿದ ಅರ್ಧ ಪಂದ್ಯಗಳು ಬಾಕಿ ಇರುವ ನಡುವೆಯೇ ಈ ಶಾಕ್ ಹೊರಬಂದಿದೆ.
ಆರ್ಸಿಬಿ ತಂಡದ ಪಂದ್ಯದ ವೇಳೆ ಗಂಭೀರವಾದ ಗಾಯಕ್ಕೆ ಒಳಗಾಗಿದ್ದ ನಾಯಕ ಕೆ.ಎಲ್. ರಾಹುಲ್ ಪ್ರಸ್ತುತ ಐಪಿಎಲ್ನಿಂದಲೇ ಔಟಾಗಿದ್ದಾರೆ. ತೊಡೆಯ ಗಾಯಕ್ಕೆ ಒಳಗಾದ ನಂತರ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಲಖನೌ ಸೂಪರ್ ಜೈಂಟ್ಸ್ ತಂಡದ ಅನುಭವಿ ವೇಗಿ ಜಯದೇವ್ ಉನದ್ಕತ್ ಅವರ ಭುಜದ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಕೂಡ ಐಪಿಎಲ್ನಿಂದ ಹೊರಗುಳಿದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನು ಓದಿ: ಬಿಸಿಸಿಐ ಪ್ರವಾಸಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ: ಮೊಹಮ್ಮದ್ ಶಮಿ ವಿರುದ್ಧ ಸುಪ್ರೀಂ ಮೊರೆ ಹೋದ ಪತ್ನಿ
ಇಷ್ಟೇ ಅಲ್ಲ, ಜೂನ್ 7 ರಿಂದ 11 ರವರೆಗೆ ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವುದು ಸಹ ಡೌಟ್ ಎಂದು ಹೇಳಲಾಗುತ್ತಿದೆ. ಆದರೂ, ಹಿರಿಯ ಬ್ಯಾಟರ್-ಕೀಪರ್ ರಾಹುಲ್ ಅವರನ್ನು ಆ ವೇಳೆಗೆ ತಂಡಕ್ಕೆ ಲಭ್ಯವಿರುವಂತೆ ಸಿದ್ಧಗೊಳಿಸಲು ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡಕ್ಕೆ ಸೂಚಿಸಲಾಗಿದೆ. ಹಾಗೂ, ಜಯದೇವ್ ಉನದ್ಕತ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅನುಮಾನ ಎಂದು ವರದಿಯಾಗಿದೆ.
"ಕೆ.ಎಲ್. ರಾಹುಲ್ ಪ್ರಸ್ತು ಲಖನೌ ತಂಡದೊಂದಿಗೆ ಇದ್ದಾರೆ. ಆದರೆ ಅವರು ಬುಧವಾರ ಸಿಎಸ್ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಶಿಬಿರದಿಂದ ನಿರ್ಗಮಿಸುತ್ತಿದ್ದಾರೆ. ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ರಾಹುಲ್ಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ ಎಂದೂ ತಿಳಿದುಬಂದಿದೆ. ಅವರ ಹಾಗೂ ಜಯದೇವ್ ಉನದ್ಕತ್ ಪ್ರಕರಣವನ್ನು ಬಿಸಿಸಿಐ ನಿರ್ವಹಿಸುತ್ತದೆ ಎಂದು ಬಿಸಿಸಿಐನ ಹಿರಿಯ ಮೂಲವು ಈ ಬಗ್ಗೆ ಪಿಟಿಐಗೆ ತಿಳಿಸಿದ್ದಾರೆ. ಹಾಗೂ, ಇಲ್ಲಿಯವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: IPL 2023 ಗೆಲುವಿನ ಹಳಿಗೆ ಮರಳಲು ಲಖನೌ vs ಚೆನ್ನೈ ಫೈಟ್
"ಯಾರಾದರೂ ಈ ರೀತಿಯ ಗಾಯವನ್ನು ಅನುಭವಿಸಿದಾಗ, ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ನೋವು ಮತ್ತು ಊತವಿರುತ್ತದೆ. ಊತವು ವಾಸಿಯಾಗಲು ಸುಮಾರು 24 ರಿಂದ 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಅದರ ನಂತರ ಮಾತ್ರ ನೀವು ಸ್ಕ್ಯಾನ್ ಮಾಡಬಹುದು’’ ಎಂದೂ ಹೇಳಿದ್ದಾರೆ. "ಅವರು ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿರುವುದರಿಂದ, ಅವರು ಐಪಿಎಲ್ನಲ್ಲಿ ಭಾಗವಹಿಸದಿರುವುದು ಸರಿಯಾದ ನಿರ್ಧಾರ" ಎಂದೂ ಬಿಸಿಸಿಐ ಮೂಲಗಳು ಹೇಳಿದೆ "ಸ್ಕ್ಯಾನ್ಗಳು ಗಾಯದ ಮಟ್ಟವನ್ನು ಖಚಿತಪಡಿಸಿದ ನಂತರ, ಬಿಸಿಸಿಐ ವೈದ್ಯಕೀಯ ತಂಡವು ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ" ಎಂದೂ ಮೂಲಗಳು ತಿಳಿಸಿವೆ.
ಇನ್ನು, ಜಯದೇವ್ ಉನದ್ಕತ್ ಅವರ ವಿಷಯದಲ್ಲಿಯೂ ಸಹ, ಈ ಕ್ಷಣದಲ್ಲಿ ವಿಷಯಗಳು ಉತ್ತಮವಾಗಿ ಕಾಣುತ್ತಿಲ್ಲ ಎಂದು ಹೇಳಲಾಗಿದೆ. ಆದರೂ, ಜಯದೇವ್ ಉನದ್ಕತ್ಗೆ ಯಾವುದೇ ಡಿಸ್ಲೊಕೇಷನ್ ಆಗದಿರುವುದು ಒಳ್ಳೆಯದು, ಆದರೆ ಭುಜವು ಉತ್ತಮ ಸ್ಥಿತಿಯಲ್ಲಿಲ್ಲ ಮತ್ತು ಈ ಋತುವಿನ ಮಟ್ಟಿಗೆ ಅವರು ಇನ್ನು ಮುಂದೆ ಐಪಿಎಲ್ನಲ್ಲಿ ಆಡಲು ಸಾಧ್ಯವಿಲ್ಲ. ಹಾಗೆಯೇ ಅವರು ಡಬ್ಲ್ಯುಟಿಸಿ ಫೈನಲ್ಗೆ ಸಮಯಕ್ಕೆ ಸರಿಯಾಗಿ ಫಿಟ್ ಆಗುತ್ತಾರೋ, ತಂಡದ ಪರ ಆಡುತ್ತಾರೆಯೇ ಎಂದು ನಾವು ಹೇಳಲು ಸಾಧ್ಯವಿಲ್ಲ’’ ಎಂದೂ ಬಿಸಿಸಿಐ ತಂಡದ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಲಖನೌಗೆ ಮತ್ತೆ ಶಾಕ್, ನಾಯಕ ರಾಹುಲ್ ಕೆಲ ಪಂದ್ಯಗಳಿಗೆ ಡೌಟ್..?