2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳನ್ನು ಈ ಲೇಖನವು ವಿವರಿಸುತ್ತದೆ. 

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನೀಲಿ ಹಾಸು ಹಾಸಲಾಗಿತ್ತು. ಗ್ಯಾಲರಿಯಲ್ಲಿ ಕಣ್ಣು ಮಿಟುಕಿಸದೆ ಕುಳಿತಿದ್ದ ಜನ ಒಂದು ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅಹಮದಾಬಾದ್‌ನಲ್ಲಿ ಅನುಭವಿಸಿದ ಸೋಲಿನ ನೋವಿಗೆ ಮುಕ್ತಿ ಕೋರಿ ಜನ ಕಾಯುತ್ತಿದ್ದರು. ಅಲ್ಲಿಗೆ ಹೆನ್ರಿಕ್ ಕ್ಲಾಸೆನ್ ಎಂಬ ವ್ಯಕ್ತಿಯ ಅನಿರೀಕ್ಷಿತ ಇನ್ನಿಂಗ್ಸ್ ಮಳೆಯಂತೆ ಸುರಿಯುತ್ತಿತ್ತು. ನಿರೀಕ್ಷೆಗಳನ್ನು ಮೀರಿ, ಆಸೆಗಳನ್ನು ಮೀರಿ, ಕನಸುಗಳನ್ನು ಮೀರಿ. ಅಕ್ಷರ್ ಪಟೇಲ್ ತನ್ನ ಕೊನೆಯ ಓವರ್ ಎಸೆದಾಗ ಡೇವಿಡ್ ಮಿಲ್ಲರ್ ಮುಖದಲ್ಲಿ ವಿಚಿತ್ರ ಉತ್ಸಾಹವಿತ್ತು, ಕ್ಲಾಸೆನ್‌ಗೆ ಮಿಲ್ಲರ್ ಪಂಚ್ ಕೊಟ್ಟ. ಆಗ ನಿರಾಶೆಯಾಗಿತ್ತು. ಮೌನ ಆವರಿಸಿತ್ತು. ಹದಿನೈದು ಸಾವಿರ ಕಿಲೋಮೀಟರ್‌ಗಳಿಗಿಂತಲೂ ದೂರದಲ್ಲಿ ಅನೇಕ ಹೃದಯಗಳು ಬಡಿತವನ್ನು ಹೆಚ್ಚಿಸುತ್ತಿದ್ದವು.

Add Asianetnews Kannada as a Preferred SourcegooglePreferred

30 ಎಸೆತಗಳಲ್ಲಿ 30 ರನ್! ಇದೇ ರೀತಿಯ ಅನೇಕ ಒತ್ತಡದ ಪರಿಸ್ಥಿತಿಗಳನ್ನು ಎದುರಿಸಿದ ರೋಹಿತ್ ಶರ್ಮಾ ಅಲ್ಲಿ ಆತಂಕಕ್ಕೊಳಗಾಗಿದ್ದರು. ಬಾರ್ಬಡೋಸ್‌ಗೆ ಹೋಗುವ ಮೊದಲು ರೋಹಿತ್ ಶರ್ಮಾ ತನ್ನ ತಂಡದ ಸದಸ್ಯರಿಗೆ ಒಂದು ಮಾತು ಹೇಳಿದ್ದರು. ನಾನು ಈ ಪರ್ವತವನ್ನು ಒಬ್ಬಂಟಿಯಾಗಿ ಏರಲು ಸಾಧ್ಯವಿಲ್ಲ. ಗೆಲುವು ಸಾಧಿಸಬೇಕಾದರೆ ಎಲ್ಲರ ಪ್ರಾಣವೂ ಬೇಕು. ನಿಮ್ಮ ಮನಸ್ಸು, ಹೃದಯ ಮತ್ತು ದೇಹವನ್ನು ನೀಡಿ. ಅದು ಸಂಭವಿಸಿದರೆ ನಮಗೆ ನಿರಾಶೆಯ ರಾತ್ರಿ ಇರುವುದಿಲ್ಲ.

ಕ್ಲಾಸೆನ್‌ನ ಅದ್ಭುತ ಆಟವು ಉತ್ತುಂಗದಲ್ಲಿದ್ದಾಗಲೂ ರೋಹಿತ್ ನಂಬಿದ್ದರು, ಇನ್ನೂ ಏನೂ ಮುಗಿದಿಲ್ಲ. ಇನ್ನೂ 30 ಎಸೆತಗಳು ಬಾಕಿ ಇವೆ. ಅಲ್ಲಿಂದ ಅಸಾಧ್ಯವಾದ ಪ್ರಯಾಣ ಆರಂಭವಾಯಿತು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಲಾಸೆನ್ ದೊಡ್ಡ ಹೊಡೆತಕ್ಕೆ ಮುಂದಾಗಿ ಚೆಂಡು ಬ್ಯಾಟ್ ಅಂಚು ಸವರಿ ರಿಷಭ್ ಪಂತ್ ಕೈಗೆ ಬಂದು ಬೀಳುತ್ತದೆ. 17ನೇ ಓವರ್ ಮುಗಿಯುವ ಹೊತ್ತಿಗೆ ಪ್ರೋಟಿಯಾಸ್ ಗೆಲ್ಲಲು 18 ಎಸೆತಗಳಲ್ಲಿ 22 ರನ್‌ಗಳು ಬೇಕಾಗಿದ್ದವು. 19ನೇ ಓವರ್‌ವರೆಗೂ ಬುಮ್ರಾವನ್ನು ಕಾಯ್ದಿರಿಸಿದ್ದರು ರೋಹಿತ್. ಮಾರ್ಕೊ ಯಾನ್ಸನ್ ರಕ್ಷಣೆಯನ್ನು ಭೇದಿಸಿದ ಅದ್ಭುತ ಇನ್ಸ್ವಿಂಗರ್ ವಿಕೆಟ್ ಚೆಲ್ಲಾಪಿಲ್ಲಿ ಮಾಡಿತು.

ಯಾರ್ಕರ್‌ಗಳಿಂದ ಮಹಾರಾಜ್ ಮತ್ತು ಮಿಲ್ಲರ್‌ರನ್ನು ಸುಮ್ಮನಾಗಿಸಿದ ಅರ್ಷದೀಪ್‌ನ 19ನೇ ಓವರ್. ಕೊನೆಗೆ ಹಾರ್ದಿಕ್ ಪಾಂಡ್ಯಗೆ ಆ ಜವಾಬ್ದಾರಿ. ಆರು ಎಸೆತಗಳಲ್ಲಿ 16 ರನ್‌ಗಳು ಗೆಲ್ಲಲು. ಹಾರ್ದಿಕ್‌ನ ವೈಡ್ ಫುಲ್ ಟಾಸ್ ಮಿಲ್ಲರ್ ಬ್ಯಾಟ್‌ನಿಂದ ಸರಿಯಾದ ಸಂಪರ್ಕವಾಗದೇ, ಆಕಾಶವನ್ನು ಮುಟ್ಟಿ ಕೆಳಗೆ ಬೀಳುತ್ತಿದೆ ಆ ಚೆಂಡು. ಸಿಕ್ಸರ್ ಎಂದೇ ಎಲ್ಲರೂ ಭಾವಿಸಿದ್ದರು. ಎಲ್ಲರ ಹೃದಯಬಡಿತ ಜೋರಾಗಿತ್ತು. ಆ ವೇಳೆ ಮಿಂಚಿನಂತೆ ಓಡಿಬಂದ ಸೂರ್ಯಕುಮಾರ್ ಯಾದವ್ ಲಾಂಗ್ ಆಫ್‌ನಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಇದು ಗೇಮ್ ಚೇಂಜಿಂಗ್ ಕ್ಷಣ ಎನಿಸಿಕೊಂಡಿತು. ಮಿಲಿಮೀಟರ್ ವ್ಯತ್ಯಾಸದಿಂದ ಕಿರೀಟ ದಕ್ಷಿಣ ಆಫ್ರಿಕಾದಿಂದ ದೂರ ಸರಿಯಿತು. ಅತ್ಯಂತ ಒತ್ತಡದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಇತಿಹಾಸ ಸೃಷ್ಟಿಸುವಂತೆ ಮಾಡಿತು.

ಕೊನೆಗೆ ಹಾರ್ದಿಕ್ ಎಸೆತವನ್ನು ನೋರ್ಕೆ ಮಿಡ್ ವಿಕೆಟ್‌ಗೆ ಹೊಡೆದಾಗ 17 ವರ್ಷಗಳ ಕಾಯುವಿಕೆಗೆ ಪೂರ್ಣವಿರಾಮ ಹಾಕಿತು. ಹಾರ್ದಿಕ್ ಬಾರ್ಬಡೋಸ್‌ನ ವಿಕೆಟ್‌ನಲ್ಲಿ ಮಂಡಿಯೂರಿ ಕುಳಿತರು, ರೋಹಿತ್ ಶರ್ಮ ಕಣ್ಣೀರು ಸುರಿಸುತ್ತಾ ಮೈದಾನದಲ್ಲಿ ಮಲಗಿದರು, ಕೊಹ್ಲಿ ಅತಿಯಾದ ಭಾವುಕರಾದರು, ಅವರಿಂದ ದೂರವಾಗಿದ್ದ ಆ ಕಿರೀಟ ಅವರನ್ನು ಹುಡುಕಿಕೊಂಡು ಬಂದಿತು.

ಟೂರ್ನಿಯುದ್ದಕ್ಕೂ ಬಿದ್ದ ರಾಜ, ದೇಶಕ್ಕಾಗಿ ಮತ್ತೆ ಎದ್ದು ನಿಂತ ದಿನ. ನಾಯಕನ ನಂಬಿಕೆಯನ್ನು ಪೂರ್ಣಗೊಳಿಸಿದ ಕೊಹ್ಲಿಯ ಫೈನಲ್ ಮಾಸ್ಟರ್‌ಕ್ಲಾಸ್ ಇನ್ನಿಂಗ್ಸ್ ಕಟ್ಟಿದರು. ಬ್ಯಾಟಿಂಗ್ ಕುಸಿತದತ್ತ ಇಂಡಿಯಾ ಹೋದಾಗ ತನ್ನ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಅಕ್ಷರ್ ಹಾಗೂ ವಿರಾಟ್ ಕೊಹ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಮೌಲ್ಯಯುತ ಇನ್ನಿಂಗ್ಸ್ ಆಡಿದರು.'

ಭಾರತ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತ್ತು. ಆಗ ಧೋನಿ ನಾಯಕರಾಗಿದ್ದರು. ಇದಾದ ಬಳಿಕ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚುಟುಕು ವಿಶ್ವಕಪ್ ಗೆದ್ದು ಬೀಗಿತ್ತು. ಆ ಸಂಭ್ರಮದ ಕ್ಷಣಕ್ಕೀಗ ಒಂದು ವರ್ಷದ ಹರೆಯ.