ಆಂಧ್ರದ ಸಿಎಂಗೆ ಶಾಕ್ ಕೊಟ್ಟ 'ಐರಾವತ' ಬೆಡಗಿ ಊರ್ವಶಿ ರೌಟೇಲಾ! ಕುಡಿದಿದ್ದೀರಾ ಎಂದ ಟ್ರೋಲಿಗರು
ನಟಿ ಊರ್ವಶಿ ರೌಟೇಲಾ, ನಟ ಪವನ್ ಕಲ್ಯಾಣ್ ಅವರನ್ನೇ ಆಂಧ್ರದ ಸಿಎಂ ಅಂದು ಸಕತ್ ಟ್ರೋಲ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಊರ್ವಶಿ ರೌಟೇಲಾ (Uravashi Rautela) ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದ ನಟಿ. ಕ್ರಿಕೆಟಿಗ ರಿಷಬ್ ಪಂತ್ (Rishab Pant) ಅವರನ್ನು ಬಿಟ್ಟೂಬಿಡದೆ ಕಾಡುತ್ತಿದ್ದ ಈ ನಟಿಯ ಬಗ್ಗೆ ರಿಷಬ್ ಪಂತ್ ಅಭಿಮಾನಿಗಳು ಹರಿಹಾಯ್ದಿದ್ದರು. ರಿಷಬ್ ಮತ್ತು ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಆದರೂ ರಿಷಬ್ ಅವರನ್ನು ಊರ್ವಶಿ ಬಿಡದೇ ಕಾಡುತ್ತಿದ್ದರು. ರಿಷಬ್ ಪಂತ್ ಅವರು ನನಗೆ ತುಂಬ ಸಲ ಫೋನ್ ಮಾಡಿದ್ದರು ಎಂದು ಊರ್ವಶಿ ಹೇಳಿಕೆ ನೀಡಿದ್ದರು. ಆಗ ರಿಷಬ್ ಅವರು, 'ಅಕ್ಕಾ ನನ್ನ ಬಿಟ್ಟು ಬಿಡು' ಎಂದಿದ್ದರು. ಹೀಗೆ ಈಕೆ ಅವರನ್ನು ಕಾಡಿದ್ದು ಎಲ್ಲಿಯವರೆಗೆ ಎಂದರೆ ಭೀಕರ ಅಪಘಾತದಲ್ಲಿ ರಿಷಬ್ ಪಂತ್ ಆಸ್ಪತ್ರೆಗೆ ದಾಖಲಾಗಿದ್ದರೂ ಊರ್ವಶಿ ರೌಟೇಲಾ ಅವರ ಹಿಂದೆ ಬಿದ್ದಿದ್ದರು ಎಂದು ಸುದ್ದಿಯಾಗಿತ್ತು. ರಿಷಬ್ ಅವರಿಗೆ ಅಪಘಾತವಾಗಿದೆ ಎಂದು ತಿಳಿದಾಗ ಊರ್ವಶಿ 'ಪ್ರಾರ್ಥನೆ' (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಇದರಿಂದ ಆಕೆಯನ್ನು ರಿಷಬ್ ಅಭಿಮಾನಿಗಳು ಛೀಮಾರಿ ಹಾಕಿದ್ದರು.
ಈ ಗಲಾಟೆಯಾಗಿ ಕೆಲ ತಿಂಗಳೇ ಕಳೆದಿದೆ. ಇದರ ಹೊರತಾಗಿಯೂ ನಟಿ ಒಂದಿಲ್ಲೊಂದು ವಿಚಾರಕ್ಕೆ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ವಿಷಯದಲ್ಲಿ ನಟಿ ಊರ್ವಶಿ ಸಕತ್ ಸದ್ದು ಮಾಡುತ್ತಿದ್ದಾರೆ. ಇವರ ಈ ಮಾತು ಖುದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೂ ಶಾಕ್ ನೀಡುವಂತಿದೆ. ಅಷ್ಟಕ್ಕೂ ನಟಿ ಅಂಥದ್ದೇನು ಮಾಡಿದ್ದಾರೆ ಎಂದರೆ ಅವರು ನೀಡಿರುವ ಹೇಳಿಕೆ. ಹೌದು! ಊರ್ವಶಿ ನಟ, ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂದು ಹೇಳಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಭಾರಿ ಸುದ್ದಿಯಾಗುತ್ತಿದ್ದು, ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ನಟಿ ಇಂಥದ್ದೊಂದು ಹೇಳಿಕೆ ನೀಡಿರುವುದು ಅವರ ಬ್ರೋ ಸಿನಿಮಾ ರಿಲೀಸ್ ವೇಳೆ. ಇಂದು ಅಂದರೆ ಜುಲೈ 28ರಂದು ನಟಿ ನಟಿಸಿರುವ ‘ಬ್ರೋ’ (Bro) ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವರುಣ್ ತೇಜ್ ಹಾಗೂ ಪವನ್ ಕಲ್ಯಾಣ್ ನಟಿಸಿದ್ದಾರೆ. ಈ ಚಿತ್ರದ ಕುರಿತು ವಿಷಯ ಹಂಚಿಕೊಂಡಿರೋ ನಟಿ, . ‘ಗೌರವಾನ್ವಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ಬ್ರೋ ಅವತಾರದಲ್ಲಿ. ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗತ್ತಿದೆ. ಎಲ್ಲರೂ ಸಿನಿಮಾ ವೀಕ್ಷಿಸಿ’ ಎಂದು ಕೋರಿದ್ದಾರೆ.
ನಟಿ ಊರ್ವಶಿ ರೌಟೇಲಾ ಬಗ್ಗೆ ಬರೆದು ಪೇಚಿಗೆ ಸಿಲುಕಿದ ಪತ್ರಕರ್ತ: ಲೀಗಲ್ ನೋಟಿಸ್!
ಇದು ಉದ್ದೇಶಪೂರ್ವಕವಾಗಿಯೇ ಮಾಡಿದ್ದು ಎಂದು ಹಲವರು ಹೇಳುತ್ತಿದ್ದರೆ, ಇನ್ನು ಕೆಲವರು ಸಿನಿಮಾದಲ್ಲಿ ನಟಿಸಿದರೆ ಸಾಲದು, ಕೊನೆಯ ಪಕ್ಷ ನಿಮ್ಮ ರಾಜ್ಯದ ಬಗ್ಗೆಯಾದ್ರೂ ತಿಳಿದುಕೊಳ್ಳಿ ಎಂದಿದ್ದಾರೆ. ನಿಮ್ಮ ಹೇಳಿಕೆ ಕೇಳಿ ಆಂಧ್ರದ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರಿಗೆ ಶಾಕ್ ಆಗಿದೆ ಎಂದಿದ್ದಾರೆ ಇನ್ನು ಕೆಲವರು. ಚಿಕ್ಕಮಕ್ಕಳಿಗೂ ಮುಖ್ಯಮಂತ್ರಿ ಯಾರು ಎಂದು ತಿಳಿದಿರುತ್ತದೆ. ಅಂಥದ್ದರಲ್ಲಿ ನಟಿಯಾಗಿ ಹೀಗೆ ನೀವುಹೇಳಿಕೆ ನೀಡಿರುವುದು ಷೇಮ್ ಷೇಮ್ ಎಂದಿದ್ದಾರೆ. ಇನ್ನು ಕೆಲವರು ನೇರವಾಗಿ ಪವನ್ ಕಲ್ಯಾಣ್ ಅವರನ್ನೇ ಗುರಿಯಾಗಿಸಿಕೊಂಡು ಕಮೆಂಟ್ ಮಾಡಿದ್ದಾರೆ. ಪವನ್ ಅವರು ಮುಖ್ಯಮಂತ್ರಿಯಲ್ಲ, ಅವರಿಂದ ಎಂಎಲ್ಎ ಆಗೋಕೂ ಆಗಲ್ಲ. ಹೀಗಿರುವಾಗಿ ಸಿಎಂ ಎಂದು ಬರೆದಿದ್ದೀರಲ್ಲ, ದಯವಿಟ್ಟು ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ ಎಂದೆಲ್ಲಾ ಹೇಳಿದ್ದಾರೆ. ಇನ್ನು ಕೆಲವರು ಕುಡ್ಕೊಂಡು ಟ್ವೀಟ್ ಮಾಡಿದ್ದೀರಾ ಎಂದಿದ್ದಾರೆ.
ಅಂದಹಾಗೆ ಈಚೆಗಷ್ಟೇ ನಟಿ ಐಶ್ವರ್ಯ ಕಾನ್ ಫೆಸ್ಟಿವಲ್ನಲ್ಲಿ ಕಾಣಿಸಿಕೊಂಡ್ಡು ಸದ್ದು ಮಾಡಿದ್ದರು. ಅವರು ಧರಿಸಿದ್ದ ನೆಕ್ಪೀಸ್ ಎಲ್ಲರ ಗಮನ ಸೆಳೆದಿತ್ತು. ಮೊಸಳೆ ಮರಿಯ ನೆಕ್ಪೀಸ್ ಅದಾಗಿತ್ತು. 3 ಮೊಸಳೆ ಮರಿಗಳು ಆಕೆಯ ಕುತ್ತಿಗೆಯನ್ನು ಸುತ್ತುವರೆದಂತೆ ಇದ್ದ ಆಭರಣ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಇನ್ನು ಕಿವಿಯಲ್ಲಿ ಅದೇ ತರಹದ ಮೊಸಳೆ ಡಿಸೈನಿನ ಓಲೆ (ear ring) ನೇತಾಡುತ್ತಿತ್ತು. ಆಗಲೂ ಟ್ರೋಲಿಗರು ಈಕೆಯನ್ನು ಬಿಟ್ಟಿರಲಿಲ್ಲ. ಇದೀಗ ಎಡವಟ್ಟು ಹೇಳಿಕೆ ನೀಡಿ ಟ್ರೋಲಿಗರ ಬಾಯಿಗೆ ಪುನಃ ಆಹಾರವಾಗಿದ್ದಾರೆ.
Cannes 2023: ಕಿಸ್ ಮಾಡುವಲ್ಲೂ ಐಶ್ವರ್ಯಾ ರೈ ಕಾಪಿ ಮಾಡಿದ್ರಾ ನಟಿ ಊರ್ವಶಿ ರೌಟೇಲಾ?