ಮೋದಿ ಟಾರ್ಚರ್ನಿಂದ ಸುಷ್ಮಾ, ಅರುಣ್ ಜೇಟ್ಲಿ ಸತ್ತು ಹೋದರು ಎಂದ ನಟ, ರಾಜಕಾರಣಿ | ಡಿಎಂಕೆ ಚೀಫ್ ಹೇಳಿಕೆ
ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಹಿಂಸೆ ಮತ್ತು ಒತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಪುತ್ರ ಉದಯಾನಿಧಿ ಸ್ಟಾಲಿನ್ ಆರೋಪಿಸಿದ್ದಾರೆ.
ಗುರುವಾರ ಪ್ರಧಾನಿ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ಉದಯಾನಿಧಿ ಸ್ಟಾಲಿನ್, "ಸುಷ್ಮಾ ಸ್ವರಾಜ್ ಎಂಬ ವ್ಯಕ್ತಿ ಇದ್ದರು. ಮೋದಿಯವರ ಒತ್ತಡದಿಂದಾಗಿ ಅವರು ಸಾವನ್ನಪ್ಪಿದರು. ಅರುಣ್ ಜೇಟ್ಲಿ ಎಂಬ ವ್ಯಕ್ತಿ ಇದ್ದರು. ಮೋದಿಯವರ ಚಿತ್ರಹಿಂಸೆ ಕಾರಣ ಅವರು ಸಾವನ್ನಪ್ಪಿದರು" ಎಂದು ಹೇಳಿದ್ದಾರೆ.
ನಂದಿಗ್ರಾಮ ರಣಾಂಗಣ : ಮತದಾನದ ವೇಳೆ ವ್ಯಾಪಕ ಹಿಂಸಾಚಾರ
ಇದಲ್ಲದೆ, ವೆಂಕಯ್ಯ ನಾಯ್ಡು ಅವರಂತಹ ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರನ್ನು ಪ್ರಧಾನಿ ಬದಿಗಿಟ್ಟಿದ್ದಾರೆ ಎಂದು ಡಿಎಂಕೆ ಮುಖಂಡರು ಆರೋಪಿಸಿದ್ದಾರೆ.
ನೀವು ಅವರೆಲ್ಲರನ್ನೂ ಬದಿಗಿಟ್ಟಿದ್ದೀರಿ. ಶ್ರೀ ಮೋದಿ, ನಿಮಗೆ ಭಯಪಡಲು ಅಥವಾ ನಿಮ್ಮ ಮುಂದೆ ನಮಸ್ಕರಿಸಲು ನಾನು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅಲ್ಲ. ನಾನು ಕಲೈನಾರ್ ಅವರ ಮೊಮ್ಮಗ ಉದಯನಿಧಿ ಸ್ಟಾಲಿನ್ ಎಂದು ಅವರು ಹೇಳಿದ್ದಾರೆ.
2ನೇ ಹಂತದ ಚುನಾವಣೆ: ಬಂಗಾಳದಲ್ಲಿ ಶೇ.80, ಅಸ್ಸಾಂನಲ್ಲಿ ಶೇ.75ರಷ್ಟು ಮತದಾನ!
ಪ್ರಧಾನ ಮಂತ್ರಿಯ ಮೇಲೆ ಉದಯಾನಿಧಿ ಸ್ಟಾಲಿನ್ ಅವರ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಸ್ವರಾಜ್ ಅವರು, ಉದಯಾನಿಧಿ ತಮ್ಮ ತಾಯಿಯ ಸ್ಮರಣೆಯನ್ನು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಬಾರದು ಎಂದು ಹೇಳಿದ್ದಾರೆ.
@udhaystalin ji please do not use my Mother's memory for your poll propaganda! Your statements are false! PM @Narendramodi ji bestowed utmost respect and honour on my Mother. In our darkest hour PM and Party stood by us rock solid! Your statement has hurt us @mkstalin @BJP4India
— Bansuri Swaraj (@BansuriSwaraj) April 1, 2021
ಉದಯಾನಿಧಿ ಜಿ ದಯವಿಟ್ಟು ನಿಮ್ಮ ಚುನಾವಣಾ ಪ್ರಚಾರಕ್ಕಾಗಿ ನನ್ನ ತಾಯಿಯ ಸ್ಮರಣೆಯನ್ನು ಬಳಸಬೇಡಿ! ನಿಮ್ಮ ಹೇಳಿಕೆಗಳು ಸುಳ್ಳು! ಪಿಎಂ ನರೇಂದ್ರ ಮೋದಿ ನನ್ನ ತಾಯಿಗೆ ಅತ್ಯಂತ ಗೌರವವನ್ನು ನೀಡಿದರು. ನಮ್ಮ ಕರಾಳ ಸಮಯದಲ್ಲಿ ಪಿಎಂ ಮತ್ತು ಪಾರ್ಟಿ ಬಿಜೆಪಿ ನಮ್ಮೊಂದಿಗೆ ನಿಂತಿದೆ! ಹೇಳಿಕೆ ನಮಗೆ ನೋವುಂಟು ಮಾಡಿದೆ ಎಂದು ಅವರು ಎಂ.ಕೆ. ಸ್ಟಾಲಿನ್ ಮತ್ತು ಬಿಜೆಪಿಯ ಅಧಿಕೃತ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ್ದಾರೆ.
Last Updated Apr 2, 2021, 1:02 PM IST