Asianet Suvarna News Asianet Suvarna News

ಬಾಯ್​ಫ್ರೆಂಡ್​​ ಜೊತೆ ತಿರುಪತಿಗೆ ಹೋದ ಜಾಹ್ನವಿ ಕಪೂರ್​ ಬೆರಳಲ್ಲಿ ವಜ್ರದ ಉಂಗುರ! ಆಗಿದ್ದೇನು?

ನಟಿ ಜಾಹ್ನವಿ ಕಪೂರ್​ ಬಾಯ್​ಫ್ರೆಂಡ್​​ ಶಿಖರ್​ ಪಹರಿಯಾ ಜೊತೆ ತಿರುಪತಿಗೆ ಹೋಗಿದ್ದ ಸಂದರ್ಭದಲ್ಲಿ ಬೆರಳಿನಲ್ಲಿ ವಜ್ರದ ಉಂಗುರ ಕಾಣಿಸಿಕೊಂಡಿದೆ. ಏನಿದರ ರಹಸ್ಯ?
 

Truth Behind Janhvi Kapoor  Diamond Ring During Tirupati Temple suc
Author
First Published Aug 30, 2023, 1:34 PM IST

ಬಾಲಿವುಡ್‌ನ ಬ್ಯೂಟಿ ಕ್ವೀನ್​ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್​ (Jahnavi Kapoor) ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ.  2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್​,  ಮಿಲಿ ಚಿತ್ರದಲ್ಲಿಯೂ  ಪ್ರಶಂಸೆ ಗಳಿಸಿದವರು. ಇವರು ಸೌತ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು.  ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India)ಹೀರೋ ಎನ್​ಟಿಆರ್​ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.  ಸದಾ ಹಾಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡು ಜಾಹ್ನವಿ ಹಲವು ಬಾರಿ ಟ್ರೋಲ್​ಗೆ ಒಳಗಾಗಿರೋದೂ ಇದೆ. ಶ್ರೀದೇವಿ ಪುತ್ರಿಯಾಗಿ ನಿಮಗೆ ಇದೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿಸಿಕೊಂಡಿರುವುದೂ ಆಗಿದೆ. ಅದೇನೇ ಇದ್ದರೂ ಇಂದಿನ ಚಿತ್ರನಟಿಯರ ಬಗ್ಗೆ ಬೇರೆ ಹೇಳಬೇಕಾಗಿಲ್ಲವಲ್ಲ.  ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡರೇನೇ ತಮಗೆ ಬೆಲೆ ಎನ್ನುವಂಥ ಸ್ಥಿತಿ ಅವರದ್ದು. ನಿನ್ನೆಯಷ್ಟೇ ಜಾಹ್ನವಿ ಕಪೂರ್​ ಹಾಫ್​ ಸ್ಯಾರಿ ತೊಟ್ಟು ತಿರುಪತಿಗೆ ಭೇಟಿ ಕೊಟ್ಟ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ತಮ್ಮ ಬಾಯ್​ಫ್ರೆಂಡ್​ ಶಿಖರ್ ಪಹಾಡಿಯಾ ಅವರ ಜೊತೆಗೆ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ. 

ಚಿತ್ರತಾರೆಯರು ದೇವಾಲಯಗಳಿಗೆ ಭೇಟಿ ಕೊಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ತಮ್ಮ ಬಾಯ್​ಫ್ರೆಂಡ್​ ಜೊತೆಗೆ ಹೋಗಿದ್ದೂ ಅಲ್ಲದೇ ಅವರ ಬೆರಳಿನಲ್ಲಿ ವಜ್ರದ ಉಂಗುರ ಈಗ ಎಲ್ಲರ ಕಣ್ಣು ಕುಕ್ಕಿಸಿದೆ. ಜಾಹ್ನವಿ ಅವರು ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುವ ಸಮಯದಲ್ಲಿ ಈ ವಜ್ರದ ಉಂಗುರ ಎಲ್ಲರ ಕಣ್ಣಿಗೆ ಬಿದ್ದಿದ್ದು, ಅದರ ಬಗ್ಗೆ ಸಕತ್​ ಸುದ್ದಿಯಾಗುತ್ತಿದೆ. ಶಿಖರ್​ ಪಹರಿಯಾ ಜೊತೆ ಗುಟ್ಟಾಗಿ ಎಂಗೇಜ್​ಮೆಂಟ್​ ಆಯ್ತಾ ಎಂದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಮೊದಲೇ ಎಂಗೇಜ್​ಮೆಂಟ್​ ಆಗಿತ್ತಾ ಅಥವಾ ತಿರುಪತಿಯಲ್ಲಿಯೇ ಆಯಿತಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಈ ಜೋಡಿ ತಿರುಪತಿಗೆ ಹೋಗುವಾಗ ಕೈಯನ್ನು ಹೆಚ್ಚು ಮಂದಿ ಗಮನಿಸದಿದ್ದ ಕಾರಣ, ಮೊದಲೇ ಎಂಗೇಜ್​ಮೆಂಟ್​ ಆಗಿತ್ತಾ ಅಥ್ವಾ ತಿರುಪತಿಯಲ್ಲಿಯೇ ಆಗಿದ್ಯಾ ಎನ್ನೋದು ಇವರ ಫ್ಯಾನ್ಸ್​ ಪ್ರಶ್ನೆ. 

ಕದ್ದುಮುಚ್ಚಿ ಸಿಗೋದೆ ಕಷ್ಟವಾಗಿತ್ತು, ಸೋ ಕೈಕೊಟ್ಟೆ: ಜಾಹ್ನವಿ ಮಾತಿಗೆ ಹೆಣ್ಮಕ್ಳಿಗೆ ಬೈತಿರೋ ಹೈಕ್ಳು!

ಅಂದಹಾಗೆ ಶಿಖರ್ ಪಹರಿಯಾ (Shikhar Pahariya) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಮಾರು 6-7 ವರ್ಷಗಳ ಹಿಂದೆ, ಜಾಹ್ವನಿ ಅವರೊಂದಿಗಿನ  ಅವರ ಸಂಬಂಧದ ವಿಷಯವು ಮುನ್ನೆಲೆಗೆ ಬಂದಿತ್ತು.  ಅವರ ಫೋಟೋ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಟಿಯನ್ನು ಚುಂಬಿಸುತ್ತಿರುವುದು ಕಂಡುಬಂದಿತ್ತು. ಇವರಿಬ್ಬರ ನಡುವೆ ನಂತರದಲ್ಲಿ ಏನೋ ಬ್ರೇಕಪ್​ ಆಗಿ ಪುನಃ ಈಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಸದ್ಯ ಇವರು ಉದ್ಯಮಿಯಾಗಿದ್ದಾರೆ.    

ಇನ್ನು ಈ ಉಂಗುರದ ವಿಷಯಕ್ಕೆ ತರುವುದಾದರೆ,  ಈ ಉಂಗುರ ಜಾಹ್ನವಿ ಅವರಿಗೆ ತಾಯಿ ಶ್ರೀದೇವಿ ನೀಡಿದ್ದಂತೆ.  ಆಗಸ್ಟ್ 13  ಶ್ರೀದೇವಿ ಅವರ ಜನ್ಮದಿನವಾಗಿತ್ತು. ಆ ದಿನ, ಜಾಹ್ನವಿ ಅವರು  ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗಿರಲಿಲ್ಲವಂತೆ. ಆದ್ದರಿಂದ ತಿರುಪತಿಗೆ ಭೇಟಿ ಕೊಟ್ಟಿರುವುದಾಗಿ ಹೇಳಲಾಗಿದೆ. ಈ ಉಂಗುರ  ಶ್ರೀದೇವಿ ಅವರದ್ದು ಎಂದು ವರದಿಯಾಗಿದೆ. ತಮ್ಮ ತಾಯಿಯ ಉಂಗುರವನ್ನು ಧರಿಸಿ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆದಿದ್ದಾರೆ ಜಾಹ್ನವಿ. ಅಂದಹಾಗೆ ನಟಿ  ಪ್ರತಿ ವರ್ಷ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಅವರು ಭೋಪಾಲ್‌ನಲ್ಲಿ ‘ಉಲ್ಜ್’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಈ ಹಿನ್ನೆಲೆಯಲ್ಲಿ ಶೂಟಿಂಗ್​  ಮುಗಿಸಿ  ತಿರುಪತಿಗೆ  ಭೇಟಿ ಕೊಟ್ಟಿದ್ದು, ಅಮ್ಮನ ನೆನಪಿಗಾಗಿ ಉಂಗುರ ಧರಿಸಿದ್ದರು ಎನ್ನಲಾಗಿದೆ.

ಸೀರೆ ಮೇಲಕ್ಕೆತ್ತಿ ಜಾಹ್ನವಿ ಕಪೂರ್​ ತಿರುಪತಿ ದರ್ಶನ: ಇಷ್ಟೆಲ್ಲಾ ಕಷ್ಟಪಡ್ಬೇಡಿ ಎಂದ ಫ್ಯಾನ್ಸ್​
 
ಜಾಹ್ನವಿಯವರ ಸಿನಿ ಪಯಣದ ಕುರಿತು ಹೇಳುವುದಾದರೆ ಇವರು,  ಇತ್ತೀಚೆಗೆ ಕರಣ್ ಜೋಹರ್ ಅವರ ‘ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು .  ಸದ್ಯ ‘ಮಿಸ್ಟರ್ ಅಂಡ್ ಮಿಸೆಸ್ ಮಾಹಿ’, ‘ದೇವ್ರಾ’, ‘ಬಡೆ ಮಿಯಾನ್ ಚೋಟೆ ಮಿಯಾನ್ 2’ ಮತ್ತು ಉಲ್ಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

 

Follow Us:
Download App:
  • android
  • ios