ವೈರಸ್ ಆತಂಕದಿಂದ ಪವನ್ ಕಲ್ಯಾಣ್ ಸೆಲ್ಫ್ ಕ್ವಾರಂಟೈನ್‌ ಆದರೆ ನಟಿ ಖುಷ್ಬೂ ಪತಿ ಸೋಂಕಿಗೆ ತುತ್ತಾಗಿದ್ದಾರೆ.  

ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ ವೈದ್ಯರ ಸಲಹೆ ಪಡೆದು, ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ತಮ್ಮ ಪಕ್ಷದ ಅನೇಕ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದೆ. ಪವನ್‌ಗೆ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ. ಆದರೆ ಮುನ್ನೆಚ್ಚರಿಕೆ ಬೇಕಿದೆ ಎಂದು ಈ ನಿರ್ಧಾರ ಕೈ ಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಕ್ವಾರಂಟೈನ್‌ನಲ್ಲಿರುವ ಕಾರಣ ಕೆಲವು ದಿನಗಳ ಕಾಲ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಕ್ಷದ ಮುಖಂಡರು ಹಾಗೂ ಸಿನಿಮಾ ತಂಡದ ಜೊತೆ ಸಂಪರ್ಕದಲ್ಲಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನೂ ಖುಷ್ಬೂ ಪತಿ ನಿರ್ದೇಶಕ ಸುಂದರ್‌ಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. 'ಸುಂದರ್ ಆರೋಗ್ಯವಾಗಿದ್ದಾರೆ. ವೈದ್ಯರು ನೀಡಿರುವ ಸಲಹೆಯಿಂದ ಆಸ್ಪತ್ರೆ ಸೇರಿದ್ದಾರೆ. ಕೆಲವು ದಿನಗಳಿಂದ ಅವರ ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ,' ಎಂದು ಟ್ಟೀಟ್ ಮಾಡುವ ಮೂಲಕ ನಟಿ ಖುಷ್ಬೂ ಮನವಿ ಮಾಡಿಕೊಂಡಿದ್ದಾರೆ. 

'ವಕೀಲ್ ಸಾಬ್' ಚಿತ್ರದ ಬಗ್ಗೆ ಟ್ವೀಟ್ಸ್ ಸುರಿಮಳೆ; ಚಿತ್ರ ವಿಮರ್ಶೆ ರೆಡಿ! 

ಇತ್ತೀಚಿಗೆ ಪವನ್ ಕಲ್ಯಾಣ ಅಭಿನಯದ ವಕೀಲ್ ಸಾಬ್ ಸಿನಿಮಾ ತೆರೆ ಕಂಡಿದೆ. ಮೂರು ವರ್ಷಗಳ ನಂತರ ಪವನ್‌ ಕಲ್ಯಾಣ್‌ ಅವರನ್ನು ತೆರೆ ಮೇಲೆ ಕಂಡ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಇದು ರಿಮೇಕ್ ಚಿತ್ರವೇ ಆಗಿರಬಹುದು ಆದರೆ ಪವನ್ ಕಲ್ಯಾನ್ ಆ್ಯಕ್ಟಿಂಗ್ ತುಂಬಾನೇ ಯ್ಯೂನಿಕ್‌ ಅದಕ್ಕೆ ಸಿನಿಮಾ ಕ್ಲಿಕ್ ಆಗುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.