Asianet Suvarna News Asianet Suvarna News

ಕಾಲಿನ ಸರ್ಜರಿಗಾಗಿ ಸ್ಪೇನ್ ಗೆ ತೆರಳಿದ್ರಾ ಪ್ರಭಾಸ್?

ನಟ ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆ ಬಳಿಕ ಸ್ವೇನ್ ಗೆ ತೆರಳಿದ್ದಾರೆ. ಸ್ಪೇನ್ ನಲ್ಲಿ ಪ್ರಭಾಸ್ ಕಾಲಿನ ಸರ್ಜರಿಗೆ ಒಳಗಾಗಿದ್ದು ಕೆಲವು ದಿನಗಳು ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

telugu actor prabhas likely undergo minor surgery in spain
Author
Bengaluru, First Published Mar 18, 2022, 12:06 PM IST

ತೆಲುಗು ರೆಬಲ್ ಸ್ಟಾರ್ ಪ್ರಭಾಸ್(Prabhas) ಇತ್ತೀಚಿಗೆ ರಾಧೆ ಶ್ಯಾಮ್(Radhe Shyam) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರಾಧೆ ಶ್ಯಾಮ್ ಚಿತ್ರಕ್ಕೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬರುತ್ತಿದ್ದಂತೆ ಪ್ರಭಾಸ್ ಸ್ಪೇನ್ ಕಡೆ ಮುಖಮಾಡಿದ್ದರು. ಬಾಹುಬಲಿ ಸ್ಟಾರ್ ಸದ್ಯ ಸ್ಪೇನ್ ನಲ್ಲಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರದ ಕಾರಣ ಪ್ರಭಾಸ್ ವಿದೇಶಕ್ಕೆ ತೆರಳಿದ್ದಾರೆ. ಮಾಧ್ಯಮಗಳಿಂದ ದೂರ ಇರಲು ಪ್ರಭಾಸ್ ಬಯಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು.

ಸಿನಿಮಾ ಸೋಲಿನಿಂದ ಕಂಗೆಟ್ಟ ಪ್ರಭಾಸ್ ಸ್ಪೇನ್ ಸೇರಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಪ್ರಭಾಸ್ ಸ್ಪೇನ್ ಗೆ ತೆರಳಿರುವ ಅಸಲಿ ವಿಚಾರನೇ ಬೇರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರಭಾಸ್ ಚಿಕ್ಕ ಶಸ್ತ್ರಚಿಕಿತ್ಸೆಗೆ(Minor surgery in spain) ಒಳಗಾಗಿದ್ದು, ಅದೇ ಕಾರಣಕ್ಕಾಗಿ ದಿಢೀರ್ ಸ್ಪೇನ್ ಪ್ರವಾಸ ಕೈಕೊಂಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಎರಡು ತಿಂಗಳ ಹಿಂದೆ ಸಲಾರ್(Salaar) ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡಿದ್ದರು ಎನ್ನಲಾಗಿದೆ. ನೋವಿನಿಂದ ಬಳಲುತ್ತಿದ್ದ ಪ್ರಭಾಸ್ ಸದ್ಯ ಶಸ್ತ್ರ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಬಾರ್ಸಿಲೋನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ( Super Specialty hospital in Barcelona) ಪ್ರಭಾಸ್ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಕೆಲವು ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸೂಪರ್‌ ಸ್ಟಾರ್‌ ಪ್ರಭಾಸ್ ಫ್ಯಾಮಿಲಿ ಬ್ಯಾಕ್‌ಗ್ರ್ಯಾಂಡ್‌ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಭಾಸ್ ಆದಷ್ಟು ಬೇಗ ಚೇತರಿಸಿಕೊಳ್ಳಲಿದ್ದು, ಸದ್ಯದಲ್ಲೇ ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ಅಭಿಮಾನಿಗಳಿಗೆ ಗೊತ್ತಾಗುತ್ತಿದ್ದಂತೆ ಸ್ಪೇನ್ ನಲ್ಲಿ ಪ್ರಭಾಸ್ ಭೇಟಿಯಾಗಲು ಹರಸಾಹ ಪಡುತ್ತಿದ್ದಾರಂತೆ. ಆದರೆ ಪ್ರಭಾಸ್ ಭೇಟಿಗೆ ಯಾರಿಗೂ ಅವಕಾಶ ನೀಡಿಲ್ಲ ಎನ್ನಲಾಗಿದೆ. ಇಷ್ಟೆಲ್ಲ ಆದರೂ ಈ ಬಗ್ಗೆ ಪ್ರಭಾಸ್ ಆಗಲಿ ಅಥವಾ ಅವರ ಟೀಂ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

Radhe Shyam: ಮೆಟಾವರ್ಸ್​ನಲ್ಲಿ ಪ್ರಭಾಸ್-ಪೂಜಾ ಹೆಗ್ಡೆ ಚಿತ್ರದ​ ಟ್ರೇಲರ್​ ಲಾಂಚ್​!

ಪ್ರಭಾಸ್ ಚೇತರಿಸಿಕೊಳ್ಳುತ್ತಿದ್ದಂತೆ ಸಲಾರ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ. ರಾಧೆ ಶ್ಯಾಮ್ ಸಿನಿಮಾದಲ್ಲಾದ ತಪ್ಪುಗಳನ್ನು ಮುಂದಿನ ಸಿನಿಮಾಗಳಲ್ಲಿ ಆಗದಂತೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದೇನೆ ಇದ್ದರೂ ಪ್ರಭಾಸ್ ಬೇಗ ಗುಣಮುಖರಾಗಿ ಭಾರತಕ್ಕೆ ವಾಪಸ್ ಆಗಲಿ ಎನ್ನುವುದು ಅಭಿಮಾನಿಗಳ ಆಶಯ.

ಇನ್ನು ರಾಧೆ ಶ್ಯಾಮ್ ಸಿನಿಮಾ ಬಗ್ಗೆ ಹೇಳುವುದಾದರೆ ಮಾರ್ಚ್ 1ರಂದು ತೆರೆಗೆ ಬಂದ ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತದಲ್ಲಿ ಭಾರಿ ಬೇಡಿಕೆ ಹೊಂದಿರುವ ನಟಿ ಪೂಜಾ ಮೊದಲ ಬಾರಿಗೆ ಪ್ರಭಾಸ್ ಜೊತೆ ತೆರೆಹಂಚಿಕೊಂಡಿದ್ದರು.

ಸಾಹೋ ಮೂಲಕ ಆಕ್ಷನ್ ಹೀರೋ ಆಗಿ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಭಾಸ್ ರಾಧೆ ಶ್ಯಾಮ್ ನಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ತೆರೆಮೇಲೆ ಬಂದಿದ್ದರು. ನಿರ್ದೇಶಕ ರಾಧ ಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಚಿತ್ರದ ಪೋಸ್ಟರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿತ್ತು. ಆದರೆ ರಾಧೆ ಶ್ಯಾಮ್ ಬಿಡುಗಡೆ ಬಳಿಕ ಭಾರಿ ನಿರಾಸೆ ಮೂಡಿಸಿದೆ.

ರಾಧೆ ಶ್ಯಾಮ್ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಆದರೆ ಉತ್ತಮ ಪ್ರತಿಕ್ರಿಯೆ ಪಡೆಯಲು ವಿಫಲವಾಗಿದೆ. ಅದರಲ್ಲೂ ಹಿಂದಿಯಲ್ಲಿ ರಾಧೆ ಶ್ಯಾಮ್ ಧೂಳಿಪಟವಾಗಿದೆ(Radhe Shyam failur in north). ಉತ್ತರ ಭಾರತದಲ್ಲೂ ಪ್ರಭಾಸ್ ಗೆ ಭಾರಿ ಬೇಡಿಕೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ರಾಧೆ ಶ್ಯಾಮ್ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿಲ್ಲ.

ಪ್ರಭಾಸ್ ಬಳಿ ಅನೇಕ ಸಿನಿಮಾಗಳಿವೆ. ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದ ಚಿತ್ರೀಕರಣ ಇನ್ನು ಮುಕ್ತಾಯವಾಗಿಲ್ಲ. ಈ ಸಿನಿಮಾ ಜೊತೆಗೆ ಆದಿಪುರುಷ ಮತ್ತು ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಇನ್ನೊಂದು ಸಿನಿಮಾವಿದೆ.

 

Follow Us:
Download App:
  • android
  • ios