Asianet Suvarna News Asianet Suvarna News

ಬಿರಿಯಾನಿ, ಕಬಾಬ್​, ಲ್ಯಾಂಬ್​ ಚಾಪ್ಸ್ ಅಂದರೆ ಪ್ರಾಣ; ವೆಂಕಟೇಶ್- ರಾಣಾ ದಗ್ಗುಬಾಟಿ ವೈರಲ್ ವಿಡಿಯೋ

ಟಾಲಿವುಡ್​ನ ಖ್ಯಾತ ನಟರಾದ ರಾಣಾ  ದಗ್ಗುಬಾಟಿ ಮತ್ತು ವೆಂಕಟೇಶ್​ ದಗ್ಗುಬಾಟಿ ಅವರು ತಮ್ಮ ಖಾಸಗಿ ಮತ್ತು ಸಿನಿ ಜೀವನದ ಕೆಲವೊಂದು ಆಸಕ್ತಿಗಳ ವಿಷಯಗಳನ್ನು ಶೇರ್​ ಮಾಡಿದ್ದಾರೆ.  ಏನದು?
 

Sunday Brunch With Venkatesh Daggubati and Rana Daggubati  Kamiya Jani
Author
First Published Mar 9, 2023, 5:21 PM IST

ತೆಲಗು ಚಿತ್ರರಂಗದ ಸೂಪರ್​ಸ್ಟಾರ್​ಗಳಲ್ಲಿ ಒಬ್ಬರಾಗಿದ್ದಾರೆ ವೆಂಕಟೇಶ್​ ದಗ್ಗುಬಾಟಿ (Venkatesh Duggubati) ಹಾಗೂ ರಾಣಾ ದಗ್ಗುಬಾಟಿ. ಸಂಬಂಧದಲ್ಲಿ ಇವರು ಚಿಕ್ಕಪ್ಪ- ಸೋದರಳಿಯ (ಚಾಚಾ- ಭತೀಜಾ). ಇಬ್ಬರೂ ತೆಲಗು ಮಾತ್ರವಲ್ಲದೇ ಬಾಲಿವುಡ್​ನಲ್ಲಿಯೂ ಸೈ ಎನಿಸಿಕೊಂಡವರು. ಅದರಲ್ಲಿಯೂ ರಾಣಾ ದಗ್ಗುಬಾಟಿ ಬಾಹುಬಲಿ ಚಿತ್ರ ಮಾಡಿದ ಬಳಿಕ ಅವರ ಕೀರ್ತಿ ಉತ್ತುಂಗಕ್ಕೆ ಏರಿದೆ. ಭಾರತದಲ್ಲಿ ಹಾಲಿವುಡ್ ನಿರ್ಮಿಸುವುದು ನನ್ನ ಉದ್ದೇಶ. ಅದು ನನ್ನ ಕೆಲಸ. ಎಲ್ಲ ಇಂಡಸ್ಟ್ರಿ ಒಟ್ಟುಗೂಡುವುದು, ಎಲ್ಲಾ ಟೆಕ್ನಾಲಜಿ ಜೊತೆಯಾಗುವ ಮೂಲಕ ನಾವು ಹಾಲಿವುಡ್​ಗಿಂತ ದೊಡ್ಡವರಾಗುತ್ತೇವೆ ಎಂದು ಇತ್ತೀಚೆಗೆ ರಾಣಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದದರು. ಇವರು  ದಮ್ ಚಿತ್ರದ ಮೂಲಕ ಬಾಲಿವುಡ್​ಗೆ  ಪದಾರ್ಪಣೆ ಮಾಡಿದಾಗ ಪ್ರಾದೇಶಿಕ ಚಲನಚಿತ್ರೋದ್ಯಮಗಳು ಒಂದಾಗುತ್ತವೆ ಎಂದು ಭವಿಷ್ಯ ನುಡಿದಿದ್ದರು. ನಾನು ಒಂಬತ್ತು ವರ್ಷಗಳ ಹಿಂದೆ ಹೇಳಿದ್ದೆ. ಯಾರೂ ನನ್ನನ್ನು ನಂಬಲಿಲ್ಲ. ಈಗ ಅದು ನಿಜವಾಗುತ್ತಿದೆ. ನಾವೆಲ್ಲರೂ ಈಗ ಒಂದೇ ಸ್ಥಳದಲ್ಲಿದ್ದೇವೆ ಎಂದು ಅವರು ಹೇಳುವ ಮೂಲಕ ಚಿತ್ರರಂಗವನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾರೆ. ಅದೇ ಇನ್ನೊಂದೆಡೆ, 74 ಚಿತ್ರಗಳಲ್ಲಿ ಇದಾಗಲೇ ದಾಖಲೆ ಮಾಡಿ 75ನೇ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ ವೆಂಕಟೇಶ್​ ದಗ್ಗುಬಾಟಿ. ಇವರಿಬ್ಬರೂ ಈಗ ತಮ್ಮ ಸಿನಿ ಪಯಣ ಹಾಗೂ ವೈಯಕ್ತಿಕ ಜೀವನದ ಕೆಲವೊಂದು ಕುತೂಹಲದ ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. 

ಯೂಟ್ಯೂಬ್​ ಚಾನೆಲ್​ ಒಂದಕ್ಕೆ  ಇವರು ಸಂದರ್ಶನ ನೀಡಿದ್ದಾರೆ. ಇಬ್ಬರೂ ಮೊದಲಿಗೆ ತಮ್ಮ ಇಷ್ಟದ ತಿನಿಸುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಹೈದರಾಬಾದ್​ ಆಹಾರ ಎಂದರೆ ತುಂಬಾ ಇಷ್ಟ ಎಂದು ಹೇಳಿರುವ ಇಬ್ಬರೂ ಬಿರಿಯಾನಿ, ಕಬಾಬ್​, ಲ್ಯಾಂಬ್​ ಚಾಪ್ಸ್ ಅಂದರೆ ಪ್ರಾಣ ಎಂದು ಹೇಳಿದ್ದಾರೆ. ಹಾಗೆಯೇ ಇಬ್ಬರಿಗೂ ಹಸಿವು ತಡೆದುಕೊಳ್ಳಲು ಆಗುವುದಿಲ್ಲವಂತೆ. ಒಂದು ವೇಳೆ ಚಿತ್ರೀಕರಣದ ಸಂದರ್ಭದಲ್ಲಿ ಹಸಿವೆಯಾದರೆ ಅದು ಬೇರೆಯವರಿಗೆ ಗೊತ್ತಾಗಬೇಕಾದರೆ ಏನು ಮಾಡುತ್ತೀರಿ ಎಂದು ವೆಂಕಟೇಶ್​ ಅವರಿಗೆ ಪ್ರಶ್ನೆ ಕೇಳಿದಾಗ, ಅವರು 'ನಾನು ಪದೇ ಪದೇ ಹಿಂಬದಿ ತಲೆಯನ್ನು ಸವರಿಕೊಳ್ಳುತ್ತೇನೆ. ನಾನು ತಲೆ ಸವರಿಕೊಳ್ಳುತ್ತಿದ್ದೇನೆ ಎಂದರೆ ನನಗೆ ಹಸಿವು ಆಗಿದೆ ಎಂದು ಎಲ್ಲರಿಗೂ ತಿಳಿಯುತ್ತದೆ. ಆಗ ನನ್ನ ತಿಂಡಿ ತಿನ್ನಲು ಬಿಡುತ್ತಾರೆ' ಎಂದು ಕುತೂಲಹದ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ.

ಪತಿಯೆದುರೇ ಭಾಗ್ಯಶ್ರೀಯನ್ನು ಎತ್ತಿಕೊಂಡ ಸೈಫ್​, ಅಭಿಷೇಕ್​ : ಮುಂದೇನಾಯ್ತು?
 
ಈ ಸಂದರ್ಭದಲ್ಲಿ, ರಾಣಾ ದಗ್ಗುಬಾಟಿ (Rana Duggubati) ಅವರ ಕುರಿತು ತೀರಾ ಗುಟ್ಟಿನ ವಿಷಯವೂ ಬಹಿರಂಗಗೊಂಡಿದೆ. ಅದೇನೆಂದರೆ, ರಾಣಾ ಅವರಿಗೆ ಒಂದು ಕಣ್ಣು ಕಾಣಿಸುವುದಿಲ್ಲ. ಇದು ಚಿಕ್ಕಂದಿನಿಂದಲೂ ಇದೆ. ಆದರೆ ಹಲವು ಮಂದಿಗೆ ಈ ವಿಷಯವು ತಿಳಿದಿಲ್ಲ ಎಂದು ರಾಣಾ  ಮತ್ತು ವೆಂಕಟೇಶ್​ ಹೇಳಿದ್ದಾರೆ. ಚಿತ್ರೀಕರಣ ಹಾಗೂ ಇತರ ಸಂದರ್ಭಗಳಲ್ಲಿ ಕಣ್ಣಿಗೆ ಲೆನ್ಸ್​ ಹಾಕಿಕೊಳ್ಳುತ್ತೇನೆ. ಆದರೆ ಸ್ವಲ್ಪ ಕಷ್ಟವೇ ಆಗುತ್ತದೆ ಎಂದು ರಾಣಾ ಹೇಳಿದ್ದಾರೆ. ಈ ವಿಷಯ ಚಿಕ್ಕವರಿದ್ದಾಗ ತಮಗೆ ಹೇಗೆ ಗೊತ್ತಾಯಿತು ಎಂಬ ಬಗ್ಗೆ ವೆಂಕಟೇಶ್​ ಮಾಹಿತಿ ಹಂಚಿಕೊಂಡಿದ್ದಾರೆ. 'ರಾಣಾ ಚಿಕ್ಕವನಿರುವಾಗ ಒಮ್ಮೆ ಕ್ರಿಕೆಟ್​ ಆಡುತ್ತಿದ್ದ. ಬ್ಯಾಟಿಂಗ್​ ಮಾಡುತ್ತಿದ್ದವ ಬಾಲ್​ ಒಂದು ಕಡೆ ಎಸೆದಿದ್ದರೆ, ಅದನ್ನು ಹಿಡಿಯಲು ರಾಣಾ ಇನ್ನೊಂದು ಕಡೆ ನುಗ್ಗುತ್ತಿದ್ದ. ಆಗಲೇ ಸಂದೇಹ ಬಂದು ಕಣ್ಣಿನ ಪರೀಕ್ಷೆ ಮಾಡಿಸಿದಾಗ ವಿಷಯ ತಿಳಿಯಿತು' ಎಂದಿದ್ದಾರೆ. 

ಅದೇ ರೀತಿ ಇಬ್ಬರಿಗೂ ತಾವು ನಟರಾಗುತ್ತೇವೆ ಎಂದು ಗೊತ್ತೇ ಇರಲಿಲ್ಲವಂತೆ. ಇಬ್ಬರೂ ಚಿತ್ರರಂಗಕ್ಕೆ ಬಂದುದು ಆಕಸ್ಮಿಕವೇ. ಈ ಕುರಿತು ವೆಂಕಟೇಶ್​ ಹೇಳಿದ್ದೇನೆಂದರೆ,'ನನಗೆ ಚಿತ್ರರಂಗದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ದೊಡ್ಡ ಬಿಜಿನೆಸ್​ಮನ್​ ಆಗಬೇಕು ಎಂದುಕೊಂಡಿದ್ದೆ. ಎಂಬಿಎ ಮುಗಿಸಿದ ಬಳಿಕ ಸ್ಪೈಸಸ್​ ಮಾರಾಟ ವ್ಯವಹಾರವನ್ನೂ ಮಾಡಿದೆ. ಆದರೆ ಅದು ಕೈ ಹಿಡಿಯಲಿಲ್ಲ. ನನ್ನ ತಂದೆ ಖ್ಯಾತ ನಿರ್ಮಾಪಕರಾಗಿದ್ದ ಡಿ.ರಾಮನಾಯ್ಡು (D. Ramanaidu)ಅವರ ಚಿತ್ರವೊಂದರಲ್ಲಿ ನಟಿಸಬೇಕಿದ್ದ ನಟನಿಗೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಆಗ ತಂದೆಯವರು ನನಗೆ ನಟಿಸುವಂತೆ ಹೇಳಿದರು. ಸ್ವಲ್ಪವೂ ಇಷ್ಟವಿರಲಿಲ್ಲ. ತಂದೆಯವರ ಒತ್ತಾಯಕ್ಕೆ ಆ ಚಿತ್ರದಲ್ಲಿ ನಟಿಸಿದೆ. ಚಿತ್ರ ಯಶಸ್ವು ಆಗಲಿಲ್ಲ. ಅದಾದ ಬಳಿಕ ಹೀಗೆ ಇಷ್ಟವಿಲ್ಲದೇ ನಟಿಸಿದ ನಾಲ್ಕೈದು ಚಿತ್ರಗಳೂ ಫ್ಲಾಪ್​ ಆದವು. ಆದರೆ ಚಿತ್ರರಂಗದಲ್ಲಿ ಆಸಕ್ತಿ ಹುಟ್ಟಿತು. ನಂತರ ಎಲ್ಲ ಚಿತ್ರಗಳೂ ಯಶಸ್ಸಿನ ಹಾದಿ ತುಳಿದವು ಎಂದಿದ್ದಾರೆ. ಆದರೆ ನಾನು ಈಗಲೂ ದುಡ್ಡಿಗಾಗಿಯೇ ಚಿತ್ರ ಮಾಡುತ್ತೇನೆ ಎಂದು ಖುಲ್ಲಂ ಖುಲ್ಲಾ ಆಗಿ ಹೇಳುತ್ತೇನೆ. ಎಲ್ಲರೂ ಇದಕ್ಕೇ ಮಾಡುವುದು. ಆದರೆ ಗ್ಲಾಮರ್​, ನೇಮ್​-ಫೇಮ್​ ಎಂದೆಲ್ಲಾ ಕಾರಣ ಹೇಳುತ್ತಾರೆ. ಅದರೆ ಇವೆಲ್ಲಕ್ಕಿಂತಲೂ ಕೊನೆಯಲ್ಲಿ ಹಣವೇ ಮುಖ್ಯ. ಮೊದಲು ಬಿಜಿನೆಸ್​ಮೆನ್​, ಆಮೇಲೆ ಆ್ಯಕ್ಟರ್​ ಎಂದಿದ್ದಾರೆ. ರಾಣಾ ಕೂಡ ತಾವು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕವೇ ಎಂದಿದ್ದಾರೆ. 

ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ಡಿಮ್ಯಾಂಡ್ ಮಾಡಿದ್ರಾ ರಮ್ಯಾ ಕೃಷ್ಣ?

ಮೊದಲ ಸಂಬಳದ ಕುರಿತು ಕುತೂಹಲದ ಮಾಹಿತಿಯನ್ನು ಇಬ್ಬರೂ ಹಂಚಿಕೊಂಡಿದ್ದಾರೆ. 1970ರಲ್ಲಿ 10 ವರ್ಷದವನಿದ್ದಾಗ ಪ್ರೇಮ್​ ನಾಗರ್​ (Prem Nagar) ಎಂಬ ಫಿಲ್ಮ್​ನಲ್ಲಿ ಆ್ಯಕ್ಟ್​ ಮಾಡುವಂತೆ ತಂದೆ ಹೇಳಿದ್ದರು. ಅದರಲ್ಲಿ ನನ್ನದು ಚಿಕ್ಕ ಪಾತ್ರ. ಆಗ ನನಗೆ ಒಂದು ಸಾವಿರ ರೂಪಾಯಿ ನೀಡಲಾಗಿತ್ತು ಎಂದು ವೆಂಕಟೇಶ್​ ಹೇಳಿದರೆ ಜಾಹೀರಾತಿನಲ್ಲಿ ಕಾಣಿಸಿಕೊಂಡು ನಾನು ಮೊದಲ ಸಂಬಳ ಪಡೆದೆ ಎಂದು ರಾಣಾ ಹೇಳಿದ್ದಾರೆ. 
 

Follow Us:
Download App:
  • android
  • ios