ವಿದ್ಯಾರ್ಥಿಗಳಿಗೆ 1000 ಸೈಕಲ್ ಹಂಚಿದ ಸೋನು ಸೂದ್ 40-45 ಗ್ರಾಮದ ಮಕ್ಕಳಿಗೆ ಸೈಕಲ್ ವರದಾನ

ಬಾಲಿವುಡ್ ನಟ ಸೋನು ಸೂದ್ ಅವರು ಕೋವಿಡ್ -19 ವಿರುದ್ಧ ಹೋರಾಡಲು ರಾಷ್ಟ್ರಕ್ಕೆ ಸಹಾಯ ಮಾಡುವ ನಿರಂತರ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ನಾವು 2022ಕ್ಕೆ ಕಾಲಿಡುತ್ತಿದ್ದಂತೆ, ರಾಷ್ಟ್ರದ ಹೀರೋ ಮೊಗಾ ಡಿ ಧಿ (ಮೊಗಾ ಕಿ ಬೇಟಿ) ಎಂಬ ಮತ್ತೊಂದು ಕಾರ್ಯಕ್ರಮದತ್ತ ಗಮನ ಕೊಟ್ಟಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಟ, ತಮ್ಮ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರೊಂದಿಗೆ ಶಾಲಾ ಬಾಲಕಿಯರಿಗೆ ಮತ್ತು ಮೊಗಾದ ಸಾಮಾಜಿಕ ಕಾರ್ಯಕರ್ತರಿಗೆ 1000 ಸೈಕಲ್‌ಗಳನ್ನು ವಿತರಿಸಲಿದ್ದಾರೆ. ಮೋಗಾ ಸಮೀಪದ ಸುಮಾರು 40-45 ಹಳ್ಳಿಗಳ ವಿದ್ಯಾರ್ಥಿಗಳು ಸೋನು ಸೂದ್ ಅವರ ಅಭಿಯಾನದಿಂದ ಪ್ರಯೋಜನ ಪಡೆಯುತ್ತಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಮಾತನಾಡಿದ ಸೋನು ಸೂದ್, ಶಾಲೆ ಮತ್ತು ಮನೆಯ ನಡುವಿನ ಅಂತರವು ನಿಜವಾಗಿಯೂ ತುಂಬಾ ದೊಡ್ಡದಾಗಿದೆ. ತೀವ್ರವಾದ ಚಳಿಯಲ್ಲಿ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಸಮಸ್ಯೆಯನ್ನು ಕಡಿಮೆ ಮಾಡಿ ಅವರಿಗೆ ಸಹಾಯ ಮಾಡಲು, ನಾವು ಅರ್ಹ ವಿದ್ಯಾರ್ಥಿಗಳಿಗೆ ಸೈಕಲ್ ಒದಗಿಸುವ ಗುರಿಯನ್ನು ಹೊಂದಿದ್ದೇವೆ. 8 ರಿಂದ 12 ನೇ ತರಗತಿಯ ಸೈಕಲ್‌ಗಳು. ನಮ್ಮ ಅಭಿಯಾನದ ಜೊತೆಗೆ ನಾವು ಈ ಸೈಕಲ್‌ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ. ಸರ್ಕಾರಿ ಶಾಲೆಯ ಶಿಕ್ಷಕರು ಹಿಂದುಳಿದ ಹಿನ್ನೆಲೆಯ ಈ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ ಎಂದು ನಟ ಹೇಳಿದ್ದಾರೆ. ಮಾಳವಿಕಾ ಸೂದ್ ಸಾಚಾರ್ ಪ್ರಸಿದ್ಧ ಸೂದ್ ಚಾರಿಟಿ ಫೌಂಡೇಶನ್‌ನೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

ಓದದೆ ಬಾಕಿ ಇದೆ 54 ಸಾವಿರ ಮೇಲ್: 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಪ್ರತಿದಿನ ಅಶಕ್ತರಿಗೆ, ಸಂಕಷ್ಟಕ್ಕೆ ಗಿರಿಯಾದವರಿಗೆ ನೆರವು ನೀಡಿಕೊಂಡೇ ಬಂದಿದ್ದಾರೆ. ಮೊದಲನೇ ಅಲೆಯಲ್ಲಿ ಕಾರ್ಮಿಕರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಿಕೊಟ್ಟರೆ ಎರಡನೇ ಅಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್ ನೀಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕೊರೋನಾ ಕಾಲದಲ್ಲಿ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಉಚಿತ ಶಿಕ್ಷಣಕ್ಕೆ ಸರ್ಕಾರ ಗಮನ ನೀಡಬೇಕು ಎಂದು ನಟ ಮನವಿ ಮಾಡಿಕೊಂಡಿದ್ದರು. ನಟಿ ಪ್ರಿಯಾಂಲಾ ಚೋಪ್ರಾ ಸಹ ಸೋನು ಬೆಂಬಲಕ್ಕೆ ನಿಂತಿದ್ದರು.

ಸೋನು ಸೂದ್ ಅವರೇ ಮುಂದಾಗಿದ್ದು ಕೊರೋನಾದಿಂದ ಅನಾಥರಾದ ಮಕ್ಕಳ ಶಿಕ್ಷಣಕ್ಕೆ ಯೋಜನೆ ರೂಪಿಸಿದ್ದಾರೆ. ಈ ತುರ್ತು ಸಂದರ್ಭದ ಅರಿವು ನನಗಿದೆ. ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳ ಕುಟುಂಬಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೆಲ ರಾಜ್ಯ ಸರ್ಕಾರಗಳು ಉಚಿತ ಶಿಕ್ಷಣದ ಭರವಸೆ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಿಯಲ್ ಹೀರೋ ಸೋನು ಸೂದ್ ಹೇಗಿದ್ರು ನೋಡಿ..!

ಕೊರೋನಾದಿಂದ ತಬ್ಬಲಿಗಳಾದ ಮಕ್ಕಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬಾಲಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆ ಪ್ರಕಾರ ಕೊರೋನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳಿಗೆ 3,500 ರೂಪಾಯಿ, ಸರ್ಕಾರದಿಂದ ಉಚಿತ ಶಿಕ್ಷಣ ಹಾಗೂ ವಿಮೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಹಲವು ಸಂಘ-ಸಂಸ್ಥೆಗಳು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಘೋಷಿಸಿವೆ. 

ಬಾಲಿವುಡ್ ನಟ ಸೋನು ಸೂದ್ ಎರಡು ಬಾರಿ ರಾಜ್ಯಸಭಾ ಸೀಟ್ ತರಿಸ್ಕರಿಸಿರುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋ ಬಗ್ಗೆ ಈಗಾಗಲೇ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದ್ದು ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಜೊತೆಗೂ ಕಾಣಿಸಿಕೊಂಡಿದ್ದರು. ಆ ಸಂದರ್ಭ ನಟ ರಾಜಕೀಯ ಎಂಟ್ರಿಯ ಇರಾದೆ ಇಲ್ಲ ಎಂದಿದ್ದರು. ಇತ್ತೀಚೆಗೆ ಪ್ರತಿಕ್ರಿಯಿಸಿದ ನಟ ನಾನಿನ್ನೂ ರೆಡಿಯಾಗಿಲ್ಲ ಎಂದಿದ್ದಾರೆ.

ಸೂದ್ ಹೆಚ್ಚು ವಿವರಗಳನ್ನು ನೀಡದಿದ್ದರೂ, ಎರಡು ವಿಭಿನ್ನ ರಾಜಕೀಯ ಪಕ್ಷಗಳಿಂದ ಆಫರ್‌ಗಳು ಬಂದಿವೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಮಾನಸಿಕವಾಗಿ ನಾನು ಸಿದ್ಧವಾಗಿರಲಿಲ್ಲ. ನಾನು ಈಗ ನನ್ನ ಸ್ಥಾನದಲ್ಲಿ ಸಂತೋಷವಾಗಿದ್ದೇನೆ. ನಾನು ಯಾವಾಗ ರೆಡಿ ಎನಿಸುತ್ತದೋ ಆಗ ನಾನು ಸಿದ್ಧ ಎಂದು ಗಟ್ಟಿಯಾಗಿ ಹೇಳುತ್ತೇನೆ ಎಂದಿದ್ದಾರೆ.