Asianet Suvarna News Asianet Suvarna News

Adhipurush: ನಿರ್ಗತಿಕ ಮಕ್ಕಳಿಗೆ 10 ಸಾವಿರ ಟಿಕೆಟ್ ಬುಕ್ ಮಾಡಿದ ರಣಬೀರ್ ಕಪೂರ್, ಅಭಿಮಾನಿಗಳ ಮೆಚ್ಚುಗೆ

ನಿರ್ಗತಿಕ ಮಕ್ಕಳಿಗಾಗಿ ನಟ ರಣಬೀರ್ ಕಪೂರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ. 

Ranbir Kapoor to book prabhas starrer Adipurush tickets for 10,000 underprivileged kids sgk
Author
First Published Jun 9, 2023, 2:45 PM IST | Last Updated Jun 9, 2023, 2:45 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿನಿಮಾತಂಡ ಭರ್ಜರಿ ಪ್ರಚಾರ ಮಾಡುತ್ತಿದ್ದು ಪ್ರಭಾಸ್ ಮತ್ತು ಇಡೀ ತಂಡ ಅನೇಕ ರಾಜ್ಯಗಳನ್ನು ಸುತ್ತಾಡಿ ಪ್ರಚಾರ ಮಾಡುತ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಮಹಾಕಾವ್ಯವನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಬರೋಬ್ಬರಿ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ರಣಬೀರ್ ಕಪೂರ್ ನಿರ್ಗತಿಕ ಮಕ್ಕಳಿಗಾಗಿ  10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.  

ಓಂ ರಾವುತ್ ನಿರ್ದೇಶನದ ಆದಿಪುರುಷ ಜೂನ್ 16 ರಂದು ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾಸ್ ಆದಿಪುರುಷ್ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಘವ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸನೋನ್ ಜಾನಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಇದಾಗಿದ್ದು ಈ ಸಿನಿಮಾವನ್ನು ಎಲ್ಲಾ ಮಕ್ಕಳು ನೋಡಬೇಕು ಎನ್ನುವುದು ಸಿನಿಮಾತಂಡದ ಬಯಕೆ. ಆದರೆ ಎಲ್ಲಾ ಮಕ್ಕಳಿಗೂ ಸಿನಿಮಾ ಟಿಕೆಟ್ ಖರೀದಿ ಮಾಡಿ ನೋಡಲು ಸಾಧ್ಯವಾಗದ ಕಾರಣ ರಣಬೀರ್ ಕಪೂರ್ ಅಂತ ಮಕ್ಕಳ ಬೆಂಬಲಕ್ಕೆ ನಿಂತಿದ್ದಾರೆ. 

ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಕ್ಕಳಿಗೆ ರಣಬೀರ್ ಕೊಡುತ್ತಿರುವ ಉಡುಗೊರೆ ಬಗ್ಗೆ ಟ್ವೀಟ್ ಮಾಡಿದ್ದು, 'ರಣಬೀರ್ ಕಪೂರ್ ನಿರ್ಗತಿಕ ಮಕ್ಕಳಿಗಾಗಿ 1000 ಆದಿಪುರುಷ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ' ಎಂದು ಪೋಸ್ಟರ್ ಸಮೇತಾ ಬಹಿರಂಗ ಪಡಿಸಿದ್ದಾರೆ.   
 
10 ಸಾವಿರ ಟಿಕೆಟ್ ಬುಕ್ ಮಾಡಿದ ನಿರ್ಮಾಪಕ

ಇನ್ನೂ ಟಾಲಿವುಡ್ ನಿರ್ಮಾಪಕ ಮತ್ತು ವಿತರಕ ಅಭಿಷೇಕ್ ಅಗರ್ವಾಲ್ ಕೂಡ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ. ಅನಾಥ ಮಕ್ಕಳು, ವೃದ್ಧಾಶ್ರಮ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗಾಗಿ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ. ಅಭಿಷೇಕ್ ಬೆನ್ನಲ್ಲೇ ರಣಬೀರ್ ಕಪೂರ್ ಮಾಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

Prabhas: ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಟ್ಟ 'ಆದಿಪುರುಷ' ತಂಡ: ಏನಿದು ವಿಶೇಷ?

ಆದಿಪುರುಷ್ ರಾಮಾಯಣ ಮಹಾಕಾವ್ಯದ ಆಧುನಿಕ ರೂಪಾಂತರವಾಗಿದೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ.

Adipurush: ಸಿನಿಮಾ ಬಿಡುಗಡೆಯೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

ಒಂದು ಆಸನ ಹನುಮನಿಗೆ ಮೀಸಲು

ಆದಿಪುರುಷ್ ಸಿನಿಮಾ ಪ್ರದರ್ಶನವಾಗುವ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಒಂದು ಆಸನವನ್ನು ಹನುಮನಿಗೆ ಮೀಸಲಿಡಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಇತ್ತೀಚೆಗಷ್ಟೆ ಬಹಿರಂಗ ಪಡಿಸಿದೆ.  ಒಂದು ಆಸನವನ್ನು ಹನುಮನಿಗೆ ಅರ್ಪಿಸಲು ಸಿನಿಮಾತಂಡ ನಿರ್ಧರಿಸಿದೆ. ಜೂನ್ 16ರಂದು ತೆರೆಗ ಬರುತ್ತಿರುವ ಆದಿಪುರುಷ್ ಸಿನಿಮಾ ಹೇಗಿದೆ, ವಿವಾದಗಳನ್ನು ಬಿದಿಗೊತ್ತಿ ಸೂಪರ್ ಸಕ್ಸಸ್ ಕಾಣುತ್ತಾ ಕಾದು ನೋಡಬೇಕಿದೆ. 

Latest Videos
Follow Us:
Download App:
  • android
  • ios