Asianet Suvarna News Asianet Suvarna News

ಧನುಷ್​ ಜೊತೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಹೊತ್ತಲ್ಲೇ ಆರೋಗ್ಯಕರ ಜೀವನದ ಸಲಹೆ ನೀಡಿದ ರಜನಿ ಪುತ್ರಿ ಐಶ್ವರ್ಯಾ!

ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್​ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಐಶ್ವರ್ಯಾ ಅವರು ಸೋಷಿಯಲ್​ ಮೀಡಿಯಾದಲ್ಲಿ ಆರೋಗ್ಯಕರ ಜೀವನದ ಸಲಹೆ ನೀಡಿದ್ದು, ಥಹರೇವಾರಿ ಕಮೆಂಟ್ಸ್​ ಬರುತ್ತಿದೆ.
 

Rajinikanths daughter Aishwarya gave  health tips while making divorce with Dhanush suc
Author
First Published Apr 10, 2024, 6:07 PM IST

ಸೂಪರ್​ಸ್ಟಾರ್ ರಜನೀಕಾಂತ್ ಪುತ್ರಿ ಕಾಲಿವುಡ್ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್  (Aishwarya Rajinikanth) ಮತ್ತು ನಟ ಧನುಷ್ (Dhanush)  ಪ್ರತ್ಯೇಕವಾಗಿದ್ದು ಎರಡು ವರ್ಷಗಳೇ ಕಳೆದು ಹೋಗಿವೆ. ಇವರು ಮತ್ತೆ ಒಂದಾಗುವರು, ಪರಸ್ಪರ ಒಬ್ಬರನ್ನೊಬ್ಬರು ಮತ್ತೆ ಇಷ್ಟಪಡಲು ಶುರು ಮಾಡಿದ್ದಾರೆ, ಇದರಿಂದ ಶೀಘ್ರವೇ ಒಂದಾಗುವ ಗುಡ್​ ನ್ಯೂಸ್ ಕೊಡಲಿದ್ದಾರೆ ಎನ್ನುವ ಅಭಿಮಾನಿಗಳ ಅನಿಸಿಕೆ ಕೊನೆಗೂ ಹುಸಿಯಾಗಿ ಹೋಯ್ತು. ಐಶ್ವರ್ಯಾ ರಜನಿಕಾಂತ್‌ ಮತ್ತು ನಟ ಧನುಷ್‌ ಇದೀಗ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಇವರಿಬ್ಬರು ಕಾನೂನು ಪ್ರಕಾರವಾಗಿ ಡಿವೋರ್ಸ್‌ ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಅಭಿಮಾನಿಗಳಿಗೆ ಶಾಕ್​ ಉಂಟು ಮಾಡಿದೆ. 

ಇದರ ಬೆನ್ನಲ್ಲೇ ಐಶ್ವರ್ಯಾ ಅವರು, ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಆರೋಗ್ಯಕರ ಜೀವನದ ಕುರಿತು ಸಲಹೆ ನೀಡಿದ್ದಾರೆ.  ವಿಶ್ವ ಆರೋಗ್ಯ ದಿನದ ಸಲುವಾಗಿ ಈ ಸಲಹೆ ನೀಡಿದ್ದಾರೆ. ಆದರೆ ಡಿವೋರ್ಸ್​ ಸುದ್ದಿ ಬಹಳ ಸದ್ದು ಮಾಡ್ತಿರೋ ಈ ಹೊತ್ತಿನಲ್ಲಿ ಆರೋಗ್ಯಕರ ಜೀವನದ ಸಲಹೆ ಕೊಟ್ಟಿರುವುದಕ್ಕೆ ಹಲವು ರೀತಿಯ ಕಮೆಂಟ್​ಗಳು ಬರುತ್ತಿವೆ. ಅಷ್ಟಕ್ಕೂ ರಜನೀ ಪುತ್ರಿ ನೀಡಿರುವ ಸಲಹೆ ಏನೆಂದರೆ,  ಪ್ರತಿದಿನ 9 ಸಾವಿರ  ಹೆಜ್ಜೆ ನಡೆಯುವುದು, 8 ಗಂಟೆ ನಿದ್ದೆ, 7 ಗ್ಲಾಸ್ ನೀರು ಕುಡಿಯುವುದು, 6 ನಿಮಿಷ ಧ್ಯಾನ, 5 ಬಾರಿ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು, 4 ವಿರಾಮಗಳನ್ನು ತೆಗೆದುಕೊಳ್ಳುವುದು, ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು 3 ಬಾರಿ ತಿನ್ನುವುದು, ಮಲಗುವ 2 ಗಂಟೆಗಳ ಮೊದಲು ಸೆಲ್ ಫೋನ್ ಬಳಕೆ ಬೇಡ ಎನ್ನುವುದು. ಇದಕ್ಕೆ ಅವರು ಕೊಟ್ಟಿರುವ ಶೀರ್ಷಿಕೆ, ಆರೋಗ್ಯಕರ ದೇಹ + ಸಂತೋಷದ ಮನಸ್ಸು + ಮಾನವ ಹೃದಯ = ಅರ್ಥಪೂರ್ಣ ಜೀವನಕ್ಕಾಗಿ ಮ್ಯಾಜಿಕ್ ಮದ್ದು ಎಂದು. ಇದರ ಜೊತೆ  ಫಿಟ್​ನೆಸ್​  ಸಂಬಂಧಿತ ಕಾರ್ಡ್ ಶೇರ್​ ಮಾಡಿಕೊಂಡಿದ್ದಾರೆ.

ಅಮಾಯಕ ಪತಿಗೆ ಮೋಸ ಯಾಕೆ ಮಾಡಿದ್ರಿ ಎಂದು ಸಮಂತಾರನ್ನು ಕೇಳಿದ ಫ್ಯಾನ್ಸ್​: ನಟಿ ಹೇಳಿದ್ದೇನು?
 
ಆರೋಗ್ಯಕರ ಜೀವನದ ಸಲಹೆಗೆ ಹಲವರು ಧನ್ಯವಾದ ಸಲ್ಲಿಸುತ್ತಿದ್ದರೂ, ದಾಂಪತ್ಯ ಜೀವನ ಅಂತ್ಯಗೊಳಿಸುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಅಂದಹಾಗೆ, 2004 ರಲ್ಲಿ ವಿವಾಹವಾಗಿದ್ದ ಈ ಜೋಡಿ, 2022ರ ಜನವರಿಯಲ್ಲಿ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಇದೀಗ ಇಬ್ಬರೂ  ದೂರವಾಗಿದ್ದರೂ  ಇಬ್ಬರ ನಡುವಿನ ಸ್ನೇಹ, ಗೌರವ ಹಾಗೆಯೇ ಇದೆ ಎನ್ನಲಾಗಿತ್ತು. ಕೆಲ ದಿನಗಳ ಹಿಂದಷ್ಟೇ  ಐಶ್ವರ್ಯ ಅವರು  ಧನುಷ್‌ ಅವರನ್ನು ನೆನಪು ಮಾಡಿಕೊಂಡಿದ್ದರು.  ಮದುವೆಯಾಗಿ ಎರಡು ಮಕ್ಕಳಾದ ಮೇಲೆ 18 ವರ್ಷಗಳ ಬಳಿಕ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿದ್ದ ಜೋಡಿ,  ಮತ್ತೆ ಒಂದಾಗಲಿದ್ದಾರೆ  ಎನ್ನುವ ಮಾತು ಕೇಳಿ ಬಂದಿತ್ತು.  ಅಧಿಕೃತವಾಗಿ ವಿಚ್ಛೇದನವನ್ನು ಇವರು ಘೋಷಿಸದಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಇದೀಗ ಅಧಿಕೃತ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. 

ಇವರಿಬ್ಬರ ನಡುವೆ  ಪರಸ್ಪರ ದ್ವೇಷವಿಲ್ಲ. ಅವರು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿಲ್ಲವಾದರೂ, ಇಬ್ಬರೂ  ಉತ್ತಮ ಸ್ನೇಹಿತರಾಗಿದ್ದೇವೆ ಎಂದಿದ್ದರು ಐಶ್ವರ್ಯ.  ಐಶ್ವರ್ಯಾ ಅವರು ತಮ್ಮ ನಿರ್ದೇಶದನದ ಲಾಲ್ ಸಲಾಂಗಾಗಿ ಸಂದರ್ಶನ ನೀಡುವ ಸಮಯದಲ್ಲಿ ಧನುಷ್​ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು, ಇವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರಾ ಎನ್ನುವಂತೆ ಮಾಡಿತ್ತು. ದಕ್ಷಿಣ ಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಐಶ್ವರ್ಯ ತಮ್ಮ ಪತಿ ಧನುಷ್​ ಅವರನ್ನು ಹೊಗಳಿದ್ದರು. ಅಷ್ಟಕ್ಕೂ ಅನಿರುದ್ಧ್ ರವಿಚಂದರ್  ದೊಡ್ಡ ಸ್ಟಾರ್ ಸಂಗೀತ ನಿರ್ದೇಶಕ. ಸದ್ಯ ಅವರು ಕೋಟಿಗಳ ಲೆಕ್ಕದಲ್ಲಿ  ಸಂಭಾವನೆ ಪಡೆಯುತ್ತಾರೆ. ಆದರೆ, ಅನಿರುದ್ಧ್ ಮೊದಲು ಸಂಗೀತ ನೀಡಿದ್ದು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ '3' ಸಿನಿಮಾಗೆ. ಆಗ ಅವರ ವಯಸ್ಸು 20ರ ಆಸುಪಾಸು ಇತ್ತು. ಅವರನ್ನು ಈ ಮಟ್ಟಿಗೆ ಏರಿಸಿದ್ದು ಧನುಷ್​ ಎಂದು ಪತಿಯ ಬಗ್ಗೆ ಸಾಕಷ್ಟು ಹೊಗಳಿಕೆಯ ಮಾತನಾಡಿದ್ದರು. ಆದರೆ ಇದೀಗ ಶಾಶ್ವತವಾಗಿ ದೂರವಾಗುವ ಯೋಚನೆ ಮಾಡಿರುವುದು ಅಭಿಮಾನಿಗಳಿಗೆ ನೋವು ತಂದಿದೆ. 

ಸದ್ದಿಲ್ಲದೇ ಮದ್ವೆಯಾಗಿ ಫೋಟೋ, ವಿಡಿಯೋ ಶೇರ್​ ಮಾಡದ ನಟಿ ತಾಪ್ಸಿ ಪನ್ನು: ಕೊನೆಗೂ ಕಾರಣ ಬಹಿರಂಗ!

 

Follow Us:
Download App:
  • android
  • ios