Asianet Suvarna News Asianet Suvarna News

Satyaprem Ki Katha: ಕಿಯಾರಾ-ಕಾರ್ತಿಕ್​ ರೊಮ್ಯಾನ್ಸ್​ ನೋಡಿ ಪತಿ ಸಿದ್ಧಾರ್ಥ್​ ಹೇಳಿದ್ದೇನು?

ಇತ್ತೀಚೆಗೆ ಬಿಡುಗಡೆಯಾದ ಸತ್ಯಪ್ರೇಮ್ ಕಿ ಕಥಾದಲ್ಲಿ ಕಿಯಾರಾ ಅಡ್ವಾಣಿ ಹಾಗೂ ಕಾರ್ತಿಕ್ ಆರ್ಯನ್ ಅವರ ರೊಮಾನ್ಸ್​ ದೃಶ್ಯಗಳನ್ನು ನೋಡಿ ಕಿಯಾರಾ ಪತಿ ಸಿದ್ಧಾರ್ಥ್​  ಮಲ್ಹೋತ್ರಾ ಹೇಳಿದ್ದೇನು?
 

Kiara  reveals Sidharth Malhotras advice on being trolled in Satyaprem Ki Katha suc
Author
First Published Jul 19, 2023, 10:34 AM IST

ಕಿಯಾರಾ ಅಡ್ವಾಣಿಯವರ ಇತ್ತೀಚಿಗೆ ಬಿಡುಗಡೆಯಾದ ರೋಮ್ಯಾಂಟಿಕ್ ಚಿತ್ರ ಸತ್ಯಪ್ರೇಮ್ ಕಿ ಕಥಾ. ಇದರಲ್ಲಿ ಅವರು ತಮ್ಮ ಭೂಲ್ ಭುಲೈಯಾ 2 ಸಹ-ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಮೂಲಕ ಬಾಲಿವುಡ್​ನಲ್ಲಿ ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್​ ಆರ್ಯನ್​ ಅವರು ಸೂಪರ್​ ಹಿಟ್​ ಜೋಡಿ ಎನಿಸಿಕೊಂಡಿದೆ. ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಸಿನಿಮಾ ಕೂಡ ಹಿಟ್​ ಆಗಿದ್ದು, ವಿಶ್ವಾದ್ಯಂತ 100 ಕೋಟಿಗೂ ಅಧಿಕ ಹಣ ಗಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮದುವೆಯಾದ ನಂತರ ಕಿಯಾರಾ ಅವರಿಗೆ ಇದು ಮೊದಲ ಚಿತ್ರ. ಆದರೆ ಮದುವೆಯಾದ ಮೇಲೂ ಬೇರೊಬ್ಬ ನಟನ ಜೊತೆ ರೊಮಾನ್ಸ್​ ಮಾಡಿರುವುದಕ್ಕೆ ಕಿಯಾರಾ ಸಕತ್​ ಟ್ರೋಲ್​ ಆಗಿದ್ದರು. ಇದರಿಂದ  ನಟಿ ನೊಂದುಕೊಂಡಿದ್ದರು. ಆದರೆ ಈಗ ಈ ನಕಾರಾತ್ಮಕತೆಯಿಂದ ತಾವು ಹೇಗೆ ಪ್ರಭಾವಿತರಾಗಿದ್ದೆವು ಹಾಗೂ  ಅದನ್ನು ಎದುರಿಸಲು ಸಿದ್ಧಾರ್ಥ್ ಹೇಗೆ ಸಹಾಯ ಮಾಡಿದರು ಎಂಬುದನ್ನು ತಿಳಿಸಿದ್ದಾರೆ.
 
ಸತ್ಯಪ್ರೇಮ್​ ಕಿ ಕಥಾ’ ಸಿನಿಮಾದಲ್ಲಿ ರೊಮ್ಯಾಂಟಿಕ್​ ಲವ್​ ಸ್ಟೋರಿ (Romantic Love Story) ಜೊತೆಗೆ ಒಂದು ಸೋಶಿಯಲ್​ ಮೆಸೇಜ್​ ಕೂಡ ಇದೆ. ಅದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆದರೆ ಈ ರೊಮಾನ್ಸ್​ನಿಂದ ನಟಿ ಸಕತ್​ ಟ್ರೋಲ್​  ಆಗಿದ್ದರು. ಈ ಕುರಿತು ಈಗ ಮಾತನಾಡಿರುವ ನಟಿ,  'ಸತ್ಯಪ್ರೇಮ್ ಕಿ ಕಥಾ ಹೊರಬರುತ್ತಿರುವ ಸಮಯದಲ್ಲಿ ನಾನು ಮೊದಲ ಬಾರಿಗೆ ಅತಿಯಾದ ನೋವನ್ನು ಅನುಭವಿಸಿದೆ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮಂದಿ ಟ್ರೋಲ್​  ಮಾಡಿದ್ದರು. ಮದುವೆಯಾಗುವ ಮುನ್ನ ಈ ರೀತಿ ರೊಮಾನ್ಸ್​ ಮಾಡಿದರೆ ಯಾರಿಗೂ ಏನೂ ಕಷ್ಟ ಇರಲಿಲ್ಲ. ಆದರೆ ನಾನು ಈಗಷ್ಟೇ ಮದುವೆಯಾಗಿದ್ದರಿಂದ ತುಂಬಾ ವಿಚಿತ್ರವಾದ ಕಮೆಂಟ್​ಗಳ ಸುರಿಮಳೆಯಾಯಿತು.  ಅವಳು ಯಾಕೆ ಹೀಗೆ ಮಾಡುತ್ತಿದ್ದಾಳೆ, ಯಾಕೆ ಹಾಗೆ ಮಾಡುತ್ತಿದ್ದಾಳೆ ಎಂದೆಲ್ಲಾ ಹೇಳುತ್ತಿದ್ದರು. ಇದು ನನಗೆ ತುಂಬಾ ನೋವನ್ನುಂಟು ಮಾಡಿತು ಎಂದು ಕಿಯಾರಾ (Kiara Advani) ಹೇಳಿದ್ದಾರೆ.

ನಟಿ ಕಿಯಾರಾ ಕ್ಯೂಟ್‌ ಫೋಟೋ ಶೇರ್‌ ಮಾಡಿದ್ರೆ, ಪ್ರೆಗ್ನೆಂಟಾ ಕೇಳ್ತಿದ್ದಾರೆ ಫ್ಯಾನ್ಸ್‌?

ನಾನು ಈ ಟ್ರೋಲ್​ನಿಂದ ತುಂಬಾ ನೊಂದಿದ್ದೆ. ಜೊತೆಗೆ ಕೆಟ್ಟ ಕೆಟ್ಟ ಕಮೆಂಟ್​ಗಳಿಂದ ಸಿದ್ಧಾರ್ಥ್​ ಹೇಗೆ ರಿಯಾಕ್ಟ್​ ಮಾಡುತ್ತಾರೆ ಎನ್ನುವ ಬಗ್ಗೆ ಭಯವಿತ್ತು ಇದು ನಿಜವಾಗಿಯೂ ನನ್ನ ಮೇಲೆ ಪರಿಣಾಮ ಬೀರಿತು.  ಆದರೆ ನನ್ನ ಅದೃಷ್ಟ ಎಂದರೆ, ಈ ಟ್ರೋಲ್‌ಗಳಿಂದ ನಾನು ತಲೆಕೆಡಿಸಿಕೊಳ್ಳಬಾರದು ಎಂದು ಸಿದ್ಧಾರ್ಥ್ (Siddharth Malhotra) . ಅವರು ನನ್ನನ್ನು ಸಮಾಧಾನ ಪಡಿಸಿದರು ಎಂದು ನಟಿ ಕಿಯಾರಾ ಹೇಳಿದರು.

'ನೋಡು ಇಂಥ ಟ್ರೋಲ್​ಗಳು ಸದಾ ಇರುತ್ತದೆ.  ಈ ರೀತಿಯ ನೆಗೆಟಿವ್ ಟ್ರೋಲರ್‌ಗಳಿಗೆ ನೀನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಾದರೆ, ಮನೆಯಲ್ಲಿ ಕುಳಿತು ಅಳುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಆಗುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಸಿದ್ಧಾರ್ಥ್​  ಹೇಳಿದರು ಎಂದು ಕಿಯಾರಾ ಹೇಳಿದ್ದಾರೆ. ನಾವು ಮದುವೆಯಾದುದು ಕೆಲವರಿಗೆ  ಇಷ್ಟವಾಗದೇ ಇರಬಹುದು. ನಮ್ಮಿಬ್ಬರ ಜೋಡಿ ನಿನ್ನ ಕೆಲ ಫ್ಯಾನ್ಸ್​ಗೆ ಇಷ್ಟವಾಗದೇ ಇರಬಹುದು. ಅಂಥವರು ಟ್ರೋಲ್​ಮಾಡುತ್ತಿದ್ದಾರಷ್ಟೆ ಎಂದು ಸಿದ್ಧಾರ್ಥ್​ ಹೇಳಿದ ಮೇಲೆ ನನಗೆ ಧೈರ್ಯ ಬಂತು ಎಂದಿರುವ ನಟಿ,  ದೇವರಿಗೆ ಧನ್ಯವಾದಗಳು, ಈ ವಿಷಯದಲ್ಲಿ ಬುದ್ಧಿವಂತಿಕೆ, ಪ್ರಬುದ್ಧತೆ (Maturity) ಮತ್ತು ಅನುಭವವನ್ನು ಹೊಂದಿರುವ ಯಾರಾದರೂ ನಮ್ಮ ಜೊತೆ ಇದ್ದರೆ ಇಂಥ ಸಮಸ್ಯೆ ಬರುವುದಿಲ್ಲ ಎಂದಿದ್ದಾರೆ.

Kiara Advani: ಮದ್ವೆಯಾದ ಮೇಲೆ ಹರಿದಾಡ್ತಿಗೆ ಬೆತ್ತಲೆ ಫೋಟೋ- ಏನಪ್ಪಾ ಅಂತಿದ್ದಾರೆ ನೆಟ್ಟಿಗರು!

ಅಂದಹಾಗೆ, ಕಿಯಾರಾ ಮತ್ತು ಸಿದ್ಧಾರ್ಥ್ ಅವರು 2021ರಿಂದ  ಡೇಟಿಂಗ್ (Dating) ಮಾಡಲು ಪ್ರಾರಂಭಿಸಿದ್ದರು ಮತ್ತು ಕಳೆದ ಫೆಬ್ರವರಿ 7 ರಂದು ರಾಜಸ್ಥಾನದಲ್ಲಿ ನಡೆದ  ಸಮಾರಂಭದಲ್ಲಿ ಮದುವೆಯಾದರು. 

Follow Us:
Download App:
  • android
  • ios