ಮಲಯಾಳಂ ಚಿತ್ರ 'ಎಲ್2: ಎಂಪುರಾನ್' ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಚಿಟ್ ಫಂಡ್ ಕಚೇರಿಗಳ ಮೇಲೆ ಇ.ಡಿ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಈ ಶೋಧ ನಡೆದಿದೆ. 1000 ಕೋಟಿ ರೂಪಾಯಿಗಳಿಗೂ ಅಧಿಕ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ ಇದಾಗಿದೆ. ಚಿತ್ರದಲ್ಲಿನ ವಿವಾದಾತ್ಮಕ ಅಂಶಗಳ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮಲಯಾಳಂ ಚಿತ್ರ ' ಎಲ್2: ಎಂಪುರಾನ್ ' ನಿರ್ಮಾಪಕರಲ್ಲಿ ಒಬ್ಬರಾದ ಹಣಕಾಸು ಸೇವಾ ಸಂಸ್ಥೆ ಗೋಕುಲ್ ಚಿಟ್ ಫಂಡ್‌ನ ತಮಿಳುನಾಡು ಮತ್ತು ಕೇರಳ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಪ್ರಕರಣದ ಉಲ್ಲಂಘನೆ ಆರೋಪದ ಮೇಲೆ ವಿವಾದಾತ್ಮಕ ಚಲನಚಿತ್ರ "L2: ಎಂಪುರಾನ್" ನಿರ್ಮಾಪಕರಲ್ಲಿ ಒಬ್ಬರಾದ ಉದ್ಯಮಿ ಗೋಕುಲಂ ಗೋಪಾಲನ್ ಅವರ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಶೋಧ ನಡೆಸಿದೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

ಸಿಕಂದರ್ ಬಿಟ್ಟಾಕಿ! ಛಾವಾ ದಾಖಲೆ ಮುರಿದು ಎಷ್ಟು ಕೋಟಿ ಗಳಿಸಿತು ಗೊತ್ತಾ ಈ ಸೌತ್ ಸಿನಿಮಾ?

1,000 ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚೆನ್ನೈನ ಕೋಡಂಬಾಕಂನಲ್ಲಿರುವ ಗೋಕುಲ್ ಚಿಟ್ ಫಂಡ್ಸ್ ಪ್ರಧಾನ ಕಚೇರಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಶುಕ್ರವಾರ ಮುಂಜಾನೆಯಿಂದ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಕಳೆದ ತಿಂಗಳು ಬಿಡುಗಡೆಯಾದ L2 ಎಂಪುರಾನ್ ಚಿತ್ರದ ವಿವಾದದ ಮಧ್ಯೆ ಈ ಶೋಧಗಳು ನಡೆದಿವೆ. ಈ ಚಿತ್ರವು 2002 ರ ಗುಜರಾತ್ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತದೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ದುರುಪಯೋಗ ಪಡಿಸುತ್ತವೆ ಎಂದು ವಿವಾದ ಹುಟ್ಟುಹಾಕಿದ ಕೂಡಲೇ, ಕೇರಳ ಮತ್ತು ತಮಿಳುನಾಡಿನ ಉದ್ಯಮಿಯ ಕಚೇರಿಗಳ ಮೇಲೆ ಈ ದಾಳಿ ನಡೆದಿದೆ

ಗೋಪಾಲನ್ ಅವರು ಶ್ರೀ ಗೋಕುಲಂ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕರು ಮತ್ತು ಮಾಲೀಕರಾಗಿದ್ದು, ಇದು ಹಣಕಾಸು, ಶಿಕ್ಷಣ, ಆರೋಗ್ಯ ರಕ್ಷಣೆ, ಮಾಧ್ಯಮ ಮತ್ತು ಇತರ ಕ್ಷೇತ್ರಗಳಲ್ಲಿ ವಿವಿಧ ಘಟಕಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಶ್ರೀ ಗೋಕುಲಂ ಚಿಟ್ & ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.

ವಿವಾದದ ಸುಳಿಯಲ್ಲಿ ಮೋಹನ್‌ಲಾಲ್ ಸಿನಿಮಾ.. 17 ಸೀನ್‌ಗಳಿಗೆ ಕತ್ತರಿ ಹಾಕಿದ ಎಂಪುರಾನ್ ಟೀಮ್: ಯಾಕೆ ಗೊತ್ತಾ?

ಚಿತ್ರ ಬಿಡುಗಡೆಯಾಗಿ ಟೀಕೆಗಳನ್ನು ಎದುರಿಸಿತು. ಬಲಪಂಥೀಯ ಗುಂಪುಗಳು ಚಿತ್ರಮಂದಿರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ನಂತರ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಯ್ತು. ಚಿತ್ರದ ಮೇಲೆ ಬಂದ ಟೀಕೆಗಳಿಗೆ ನಟ ಮತ್ತು ನಿರ್ಮಾಪಕ ಮೋಹನ್ ಲಾಲ್ ವಿಷಾದ ವ್ಯಕ್ತಪಡಿಸಿದರು ಮತ್ತು ಚಿತ್ರದಲ್ಲಿನ ವಿವಾದಾತ್ಮಕ ಉಲ್ಲೇಖಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದರು.

ಲೂಸಿಫರ್ ಟ್ರೈಲಾಜಿಯಲ್ಲಿ ಎರಡನೆಯದಾದ ಮೋಹನ್ ಲಾಲ್ ಅಭಿನಯದ ಈ ಚಿತ್ರ ಮಾರ್ಚ್ 27 ರಂದು ಬಿಡುಗಡೆಯಾಯಿತು, ಆದರೆ ಹಲವಾರು ಬಲಪಂಥೀಯ ಕಾರ್ಯಕರ್ತರು 2002 ರ ಗಲಭೆಗಳನ್ನು ಸೂಚಿಸುವ ದೃಶ್ಯಗಳು ಮತ್ತು ಭಾರತೀಯ ರಾಜಕೀಯ ಭೂದೃಶ್ಯದ ಮುಸುಕಿನ ಉಲ್ಲೇಖಗಳೊಂದಿಗೆ ಬಲಪಂಥೀಯ ಪಕ್ಷದ ಚಿತ್ರಣವನ್ನು ಟೀಕಿಸಿದ ನಂತರ ಶೀಘ್ರವೇ ಟೀಕೆಗಳು ಬಂತು. ಕೆಲವು ಗುಂಪುಗಳ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಿರ್ಮಾಪಕರು ಮತ್ತು ನಟರು ಕ್ಷಮೆಯಾಚಿಸಿದ ಬಳಿಕ 24 ಬಾರಿ ಅಂತಹ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ ನಂತರ ಏಪ್ರಿಲ್ 2 ರಂದು ಚಿತ್ರವನ್ನು ಮರು ಬಿಡುಗಡೆ ಮಾಡಲಾಯಿತು. 

ಮೋಹನ್ ಲಾಲ್ ನಟಿಸಿ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ ಈ ಚಿತ್ರ. ಬಿಡುಗಡೆಯಾದ ಮೊದಲ ವಾರದಲ್ಲೇ 88 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಿದೆ.