Asianet Suvarna News Asianet Suvarna News

ವಿಶ್ವ ಕಪ್​ನಲ್ಲಿ ಭಾರತ ಗೆಲ್ಲಲು ಬಾಲಿವುಡ್​ ಸ್ಟಾರ್ ಅಮಿತಾಭ್​ ಬಚ್ಚನ್​ ಇದೆಂಥ 'ತ್ಯಾಗ' ಮಾಡಿದ್ರು?

 ವಿಶ್ವ ಕಪ್​ನಲ್ಲಿ ಭಾರತ ಗೆಲ್ಲಲು  ಬಾಲಿವುಡ್​ ಸ್ಟಾರ್ ಅಮಿತಾಭ್​ ಬಚ್ಚನ್​ ಇದೆಂಥ 'ತ್ಯಾಗ' ಮಾಡಿದ್ರು ಗೊತ್ತಾ? 
 

Amitabh Bachchan revealed that he did not watch the ICC Mens T20 World Cup suc
Author
First Published Jul 1, 2024, 5:13 PM IST

ಭಾರತದಲ್ಲಿನ ಪ್ರತಿಯೊಬ್ಬ ಕ್ರಿಕೆಟ್​ ಪ್ರೇಮಿಯೂ ಮೊನ್ನೆ ವಿಶ್ವಕಪ್​ ವೀಕ್ಷಿಸುತ್ತಿದ್ದರು. ಟಿ.ವಿ, ಮೊಬೈಲ್​ ಏನಾದರೊಂದು ಆನ್​ ಇಟ್ಟುಕೊಂಡು ಭಾರತದ ಗೆಲುವಿಗಾಗಿ ಹಾರೈಸುತ್ತಿದ್ದರು. ಕೊನೆಗೂ ಭಾರತ ರೋಚಕವಾಗಿ ವಿಶ್ವಕಪ್​ ಗೆದ್ದುಗೊಂಡಿತು. ವಿಶ್ವಕಪ್​ ಗೆದ್ದ ಬಳಿಕ ಕುತೂಹಲದ ಪೋಸ್ಟ್​ ಒಂದನ್ನು ನಟ ಬಿಗ್​ ಬಿ ಅಮಿತಾಭ್​ ಬಚ್ಚನ್​ ಶೇರ್​ ಮಾಡಿಕೊಂಡಿದ್ದಾರೆ. ವಿಶ್ವಕಪ್​ ಗೆದ್ದ ಖುಷಿಯನ್ನು ಹಂಚಿಕೊಂಡ ಅವರು ಇದೇ ವೇಳೆ ತಾವು ಟಿ.ವಿ, ಮೊಬೈಲ್​ ಯಾವುದನ್ನೂ ನೋಡಿಲ್ಲ. ಟಿವಿಯ ಎದುರೇ ಎದ್ದರೂ, ಭಾರತದ ಪರವಾಗಿ ಪ್ರಾರ್ಥಿಸುತ್ತಿದ್ದರೂ ಮ್ಯಾಚ್​ ಮಾತ್ರ ನೋಡಲೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಭಾರತದ ಗೆಲುವಿಗೆ ಬಿಗ್​-ಬಿ ಆಟವನ್ನು ವೀಕ್ಷಿಸದೇ ಹೀಗೊಂದು ರೀತಿಯಲ್ಲಿ ತ್ಯಾಗ ಮಾಡಿದ್ದಾರೆ. 

ಅಷ್ಟಕ್ಕೂ ನಟ ಈ ರೀತಿಯ ತ್ಯಾಗ ಮಾಡುವ ಹಿಂದೆ ಕಾರಣವೂ ಇದೆ. ಇದು ತಮಾಷೆ ಎನ್ನಿಸಿದರೂ ನಿಜವು ಹೌದಂತೆ. ಅದೇನೆಂದರೆ, ಅಮಿತಾಭ್​ ಬಚ್ಚನ್​ ಭಾರತದ ಮ್ಯಾಚ್​ ನೋಡಿದಾಗಲೆಲ್ಲವೂ ಮ್ಯಾಚ್​ ಸೋಲುತ್ತದೆಯಂತೆ. ಈ ಬಗ್ಗೆ ಹಿಂದೊಮ್ಮೆ ಕೂಡ ಅಮಿತಾಭ್​ ಹೇಳಿಕೊಂಡಿದ್ದರು. ಕಳೆದ ನವೆಂಬರ್​ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಈ ಸೀಕ್ರೇಟ್​ ಅನ್ನು ನಟ ಬಿಚ್ಚಿಟ್ಟಿದ್ದರು.  ಅಮಿತಾಭ್‌ ಬಚ್ಚನ್‌ ಭಾರತದ ತಂಡವನ್ನು ಅಭಿನಂದಿಸಿ ಟ್ವೀಟ್​ ಮಾಡಿದ್ದ ಸಂದರ್ಭದಲ್ಲಿ  ‘ನಾನು ಯಾವಾಗ ಮ್ಯಾಚ್‌ ನೋಡುವುದಿಲ್ಲವೋ ಆ ದಿನವೇ ಭಾರತ ಪಂದ್ಯವನ್ನು ಗೆಲ್ಲುತ್ತದೆ ’ ಎಂದಿದ್ದರು. ಇದನ್ನು ನಟ ತಮಾಷೆಗೆ ಹೇಳಿದ್ದಂತೆ ಕಾಣುತ್ತಿತ್ತು. ಆದರೂ ಬಹುತೇಕ ಎಲ್ಲಾ ಸಮಯದಲ್ಲಿಯೂ ಇದು ನಿಜವಾಗಿದೆಯಂತೆ! 

ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು! ಮಗಳ ಗುಟ್ಟಾದ ಮದ್ವೆ, ಟೀಕೆಗಳಿಂದ ನೊಂದುಬಿಟ್ರಾ ನಟ? ಆಗಿದ್ದೇನು?

ನಟ ಆಗ ತಮಾಷೆಗೆ ಬರೆದಿದ್ದಾಗ,  ಕ್ರಿಕೆಟ್​ ಅಭಿಮಾನಿಗಳು  ಹಾಗಿದ್ದರೆ ದಯವಿಟ್ಟು ಅಂತಿಮ ಪಂದ್ಯ ನೋಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮಿತಾಭ್​ ಅವರನ್ನು ಕೇಳಿಕೊಂಡಿದ್ದರು. ಸರ್​​ ನಿಮ್ಮ ಮೇಲೆ ಅಪಾರ ಗೌರವ ಇದೆ. ಇದೀಗ ನೀವು ಫೈನಲ್ ಮ್ಯಾಚ್ ನೋಡಿದರೆ, ಸೋಲುವ ಭಯ ಶುರುವಾಗಿದೆ ಎಂದು ಮನವಿ ಮಾಡಿದ್ದರು.  ಇನ್ನೂ ಕೆಲವರು ತಮಾಷೆಯ ಸಲಹೆಗಳನ್ನೂ ನೀಡಿದ್ದರು. ಫೈನಲ್​ ಪಂದ್ಯದ ಮುಕ್ಯಾಯದ ನಂತರ ಹೈಲೆಟ್ಸ್​ ನೋಡಿ ಸಂಭ್ರಮಿಸಿ ಎಂದು ಹೇಳಿದ್ದರು.

ಆದರೆ ಕಾಕತಾಳೀಯ ಎಂದರೆ ಅಮಿತಾಭ್​ ಅವರು ಆಗ  ಗುಜರಾತಿನ ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಕಪ್​ ವೀಕ್ಷಿಸಿದ್ದರು. ಇದರಲ್ಲಿ  ಭಾರತ ಪರಾಭವಗೊಂಡಿತು. ಉಳಿದ 10 ಪಂದ್ಯಗಳನ್ನು ಗೆದ್ದರೂ ಫೈನಲ್​ನಲ್ಲಿ ಸೋತುದದ್ದಾಗಿ ಭಾರತ ಪ್ರೇಮಿಗಳು ದುಃಖ ಪಟ್ಟರು. 2003ರಲ್ಲಿ ಈ ಎರಡೂ ದೇಶಗಳು ಫೈನಲ್​ ಆಡಿದಾಗ ಅದರಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದ್ದರಿಂದ ಭಾರತಕ್ಕೆ ಇದು ಚಾಲೆಂಜಿಂಗ್​ ಆಟವಾಗಿತ್ತು. ಆದರೆ ಗೆಲುವು ಸಾಧಿಸದೇ ದೇಶ ಪ್ರೇಮಿಗಳು ನೋವು ಅನುಭವಿಸುವಂತಾಯಿತು.  ಆಗ ಅಮಿತಾಭ್​ ವಿರುದ್ಧವೂ ಕೆಲವು ಕ್ರಿಕೆಟ್​ ಪ್ರೇಮಿಗಳ ಅಪಸ್ವರವೂ ಕೇಳಿಬಂದಿತ್ತು. ತಮಾಷೆಗೆ ಟ್ವೀಟ್​ ಮಾಡಿದ್ದ ಅಮಿತಾಭ್​ ಸಂಕಷ್ಟಕ್ಕೆ ಸಿಲುಕಿದ್ದರು. ಆದ್ದರಿಂದ ಮತ್ತೆ ಅದು ಪುನರಾವರ್ತನೆಯಾಗಬಾರದು ಎನ್ನುವ ಕಾರಣಕ್ಕೆ ಈ ಸಲದ ವಿಶ್ವಕಪ್​ ಅನ್ನು ಅವರು ವೀಕ್ಷಣೆ ಮಾಡಿಲ್ಲವಂತೆ. ಭಾರತ ಗೆದ್ದಿದೆ!

ಮೇಘನಾ ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್​ ಮನದಾಳದ ಮಾತು
 

Latest Videos
Follow Us:
Download App:
  • android
  • ios