ನಟ ಅಜಿತ್ ಸಿನಿಮಾ ಹೀರೋ ಮಾತ್ರವೇ ಅಲ್ಲ, ತಮಿಳರ ಪಾಲಿಗೆ ಅವರು ರಿಯಲ್ ಲೈಫ್ ಹೀರೊ ಕೂಡ. ಯಾಕಂದ್ರೆ ಸಿಂಪ್ಲಿಸಿಟಿಗೆ ಅಜಿತ್ ಬ್ರ್ಯಾಂಡ್ ಅಂಬಾಸೀಡರ್. ಕಾರ್ ರೇಸಿಂಗ್, ಬೈಕ್ ಸವಾರಿ ಎಂದರೆ ಅಜಿತ್‌ಗೆ ಪ್ರಾಣ.. ಸಿಕ್ಕ ಸುದ್ದಿಯ ಪ್ರಕಾರ, ವಿಜಯ್ ವಿರುದ್ಧ ಯುದ್ಧ ಮಾಡ್ತಾರೆ ನಟ ತಲಾ ಅಜಿತ್.. 

ದಳಪತಿ ಎದುರು ಪಾಲಿಟಿಕ್ಸ್ ಯುದ್ಧಕ್ಕೆ ಬದ್ಧ ವೈರಿ ತಲಾ..?

ತಮಿಳುನಾಡು ರಾಜಕೀಯದಲ್ಲಿ ಭೂಕಂಪನ ಆಗಿದ್ದನ್ನ ನಾವೆಲ್ಲರೂ ನೋಡಿದ್ದೇವೆ. ನಿರೀಕ್ಷೆಯನ್ನು ಮೀರಿದಂತೆ ಎರಡೇ ವರ್ಷದಲ್ಲಿ ದಳಪತಿ ವಿಜಯ್ (Vijay Joseph) ನೂತನ ಪಕ್ಷವನ್ನು ಸ್ಥಾಪನೆ ಮಾಡಿದ್ದು ಮಾತ್ರವಲ್ಲ, ಅಧಿಕಾರವನ್ನು ಗಿಟ್ಟಿಸಿಕೊಂಡು ರಾಜನಂತೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಆದ್ರೆ ವಿಜಯ್​ ಸಿಎಂ ಆಗುತ್ತಿದ್ದಂತೆ ದಳಪತಿಯಾ ಸಿನಿಮಾ ರಂಗದ ಬದ್ಧ ವೈರಿ ತಲಾ ಅಜಿತ್ ಈಗ ಎದ್ದು ನಿಂತಿದ್ದಾರೆ.. ? ಅದು ಯಾಕೆ.? ತಮಿಳುನಾಡು ಸಿನಿಮಾ ರಂಗ ಮತ್ತು ರಾಜಕೀಯ ಜಗತ್ತಿನಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ..

ತಮಿಳುನಾಡು ರಾಜಕೀಯದಲ್ಲಿ ಜಯಲಲಿತಾ ಮಾನಸ ಪುತ್ರ; ದಳಪತಿಯ ಪೊಲಿಟಿಕ್ಸ್ ಯುದ್ಧಕ್ಕೆ ಬರ್ತಾರಾ ಬದ್ಧ ವೈರಿ ತಲಾ..?

ಯೆಸ್, ತಮಿಳುನಾಡು ಇಗ ದಳಪತಿ ವಿಜಯ್ ಮಯವಾಗಿದೆ. ವಿಜಯ್ ಅಧಿಕಾರಕ್ಕೆ ಬಂದಿದ್ದು, ಅಲ್ಲಿನ ಘಟಾನುಘಟಿಗೆಳಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಿರುವಾಗ ಸುನಾಮಿಯೊಂದು ತಮಿಳುನಾಡು ರಾಜಕೀಯವನ್ನು ಅಪ್ಪಳಿಸಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅದೇನಾದ್ರೂ ನಿಜವಾದ್ರೆ, ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಆ ಸುನಾಮಿ ಬೇರಾವ್ದು ಅಲ್ಲ.. ಅಮ್ಮ ಜಯಲಲಿತಾ ಮಾನಸ ಪುತ್ರ ಅಂತ ಕರೆಸಿಕೊಂಡಿದ್ದ ತಲಾ ಅಜಿತ್ (Thala Ajith)...

ದ್ರಾವಿಡರ ನಾಡು ರಾಜಕೀಯದಲ್ಲಿ ಹೊಸ ತಲೆ ಮಾರಿನ ಯುದ್ಧ..!

ಹೌದು, ನಟ ವಿಜಯ್​ಇನ್ನು 5 ವರ್ಷ ತಮಿಳುನಾಡನ್ನ ಆಳುತ್ತಾರೆ. ಆದ್ರೆ ಇದು ಅಲ್ಲಿನ ಅದೆಷ್ಟೋ ರಾಜಕಾರಣಿಗಳಿಗೆ ಹುಟ್ಟೆಗೆ ಬೆಂಕಿ ಹಂಚಿದಂತಾಗಿದೆ. ಅದರಲ್ಲೂ ಪುದುಚ್ಚಿ ತಲೈವಿ ಜಯಲಲಿತಾ ಕಟ್ಟಿದ್ದ ಬೃಹತ್ ಕೋಟೆ ಎಐಎಡಿಎಂಕೆ ಪಕ್ಷ ಹೀನಾಯ ಸೋಲು ಅಮ್ಮನ ಹೆಸರನ್ನೇ ಮಣ್ಣು ಮಾಡಿದಂತಾಗಿದೆ. ಆದ್ರೆ ಈಗ ಇದನ್ನ ಮತ್ತೆ ಕಟ್ಟಿ ಬೆಳೆಸಬೇಕಾಗಿದೆ. ಇದಕ್ಕೊಂದು ಪ್ಲಾನ್ ಮಾಡಿದೆ ಎಐಎಡಿಎಂಕೆ ಪಕ್ಷ.. ಅದುವೇ ತಲಾ ಅಜಿತ್​ಅನ್ನೋ ಅಸ್ತ್ರ..

ಮೂರನೇ ಸ್ಥಾನಕ್ಕೆ ನೂಕಲ್ಪಟ್ಟು ಮೂಲೆಗುಂಪಾಗಿರುವ ಎಐಎಡಿಎಮ್​​ಕೆ ಪಕ್ಷಕ್ಕೆ ಹೊಸ ನಾಯಕತ್ವ ಸಿಗಲಿದೆ. ಮಾತ್ರವಲ್ಲ, ಪಾರ್ಟಿ ಮತ್ತೆ ಫಿನಿಕ್ಸ್​​​​ನಂತೆ ಮೇಲೆಳಲಿದೆ. ತಮಿಳುನಾಡಿನಲ್ಲಿ ಡಿಎಮ್​​ಕೆ ಮೂಲೆಗುಂಪಾಗಿ . ಇದಕ್ಕೆ ಮೇಜರ್ ಸರ್ಜರಿ ಮಾಡೋಕೆ ಹೊರಟಿರೋ ಎಐಎಡಿಎಂಕೆ ಅಮ್ಮನ ಮಾನಸ ಪುತ್ರ ತಲಾ ಅಜಿತ್​ರನ್ನ ಕರೆ ತರೋ ಪ್ಲ್ಯಾನ್ ಮಾಡಿದೆ ಅಂತ ಸುದ್ದಿ ಹಬ್ಬಿದೆ.

ಸದ್ಯ ತಮಿಳುನಾಡಿನಲ್ಲಿ ತಮಿಳಿಗ ವೆಟ್ರಿ ಕಳಗಂ ಪಾರ್ಟಿಗೆ ಟಕ್ಕರ್​​​ ಕೊಡಬೇಕು ಅಂದ್ರೆ, ಅಲ್ಲಿ ಅಮ್ಮನಂತಹ ನಾಯಕತ್ವ ಬೇಕು. ವಿಜಯ್ ಜಯಲಲಿತಾ ಕಟ್ಟಿದ್ದ ಕೋಟೆಯ ದಂಡನಾಯಕರನ್ನೆಲ್ಲಾ ತನ್ನ ರಾಜ್ಯಭಾರದಲ್ಲಿ ಸೇರಿಸಿಕೊಂಡಿದ್ದಾರೆ. ಈಗ ಅಮ್ಮನ ನೆ ಕಾಲಿ ಕಾಲಿ ಆಗಿದೆ. ಹೀಗಾಗಿ ಎಮ್​​​ಜಿಆರ್​​ ಕಟ್ಟಿದ, ಜಯಲಲತಾ ಬೆಳೆಸಿದಿ ಎಐಎಡಿಎಮ್​​ಕೆ ಹೇಳ ಹೆಸರಿಲ್ಲದಂತೆ ಕಳೆದೋಗೋ ಸ್ಥಿತಿ ಇದೆ. ಆದ್ರೆ ಅಮ್ಮನ ಕಟ್ಟಾಭಿಮಾನಿಗಳು ಅಮ್ಮನ ನಂತ್ರದಲ್ಲಿ ನಾಯಕತ್ವ ಲೀಡ್​​​ ಮಾಡಬೇಕಿದ್ದ ನಾಯಕನನ್ನು ಆ ಸ್ಥಾನದಲ್ಲಿ ನೋಡುವುದಕ್ಕೆ ಜನ್ರು ಇಷ್ಟ ಪಡ್ತಿದ್ದಾರೆ. ಅದಕ್ಕೆ ಸೂಚಿಸುತ್ತಿರೋ ಹೆಸರು ಥಲೈವರ್​​​ ಅಜಿತ್​​..

ಹೌದು, ವಿಜಯ್​​​ಗೆ ಸರಿಸಮನಾದ ನಾಯಕನನ್ನು ತರೋದಕ್ಕೆ ಇಂತಹದೊಂದು ಪ್ಲಾನ್​​ ಮಾಡಲಾಗಿದೆ.. ಈ ಸಲದ ಚುನಾವಣೆ ಫಲಿತಾಂಶದಲ್ಲಿ ಸಿನಿಮಾ ಪ್ರೀತಿಯನ್ನು ನೋಡಿರುವ ರಾಜಕೀಯ ನಾಯಕರು, ತಮ್ಮ ಪಾರ್ಟಿಯಲ್ಲೂ ಅದನ್ನೇ ಅದನ್ನೇ ತರಬೇಕು ಅನ್ನೋ ಚಿಂತನೆಯಲ್ಲಿ ಈತ ತಲಾಗೆ ಗಾಳ ಹಾಕಲಾಗ್ತಿದೆ. ಅದಕ್ಕೆ ಕಾರಣವೂ ಇದೆ.. ಅದುವೇ ಅಜಿತ್​ ಜಯಲಲಿತಾಗೆ ಅಚ್ಚು ಮೆಚ್ಚು

ಅಂದು ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿದ್ದ ವಿಜಯ್.!

ಈ ಥಲಾ ಅಜಿತ್ ರಾಜಕೀಯಕ್ಕೆ ಎಂಟ್ರಿ ಕೊಡಬೇಕು ಅನ್ನೋದು ಜಯಲಲಿತಾ ಹಾಗು ಅಜಿತ್ ಇಬ್ಬರ ಅಭಿಮಾನಿಗಳ ಒತ್ತಾಸೆ. ಇದಕ್ಕೆ ಮುಖ್ಯ ಕಾರಣ ಥಲಾ ಅಜಿತ್​ಅಮ್ಮನ ಪ್ರೀತಿ ಪಾತ್ರರಲ್ಲಿ ಒಬ್ಬರಾಗಿದ್ರು ಅನ್ನೋದು.. ಅಲ್ದೆ, ಅಮ್ಮನ ನಂತ್ರದ ನಾಯಕ ಆತನೇ ಅನ್ನೋ ಮಾತುಗಳು ಕೂಡ ತಮಿಳುನಾಡಿನಲ್ಲಿ ಕೇಳಿ ಬಂದಿತ್ತು. ಆದ್ರೆ, ಅಜಿತ್​​ ಅದ್ಯಾವುದಕ್ಕೂ ಸೊಪ್ಪು ಹಾಕಿರಲಿಲ್ಲ. ತನ್ನ ಅಭಿಮಾನಿ ಸಂಘಗಳನ್ನು ವಿಸರ್ಜನೆ ಮಾಡಿಸಿದ್ರು ಅಜಿತ್..

ತಮಿಳುನಾಡಿನಲ್ಲಿ ಜಯಲಲಿತಾಗೆ ದೊಡ್ಡ ಫ್ಯಾನ್ಸ್​ಬೇಸ್ ಇತ್ತು. ಅಮ್ಮ ಅಂದ್ರೆ ಜೀವ ಕೊಡುವುದಕ್ಕೆ ತಯಾರಾಗಿರುವ ಅಭಿಮಾನಿ ಬಳಗವಿತ್ತು. ಇಂತಹದ್ದೇ ಅಭಿಮಾನಿ ಬಳಗವನ್ನು ಹೊಂದಿದ್ದ ಮತ್ತೊಬ್ಬ ನಾಯಕ ದಳಪತಿ ವಿಜಯ್.. ಅದಕ್ಕೆ ಈ ಸಲದ ಚುನಾವಣೆಯೇ ಸಾಕ್ಷಿ..

ದಳಪತಿ ವಿಜಯ್​​​ ರಂತೆ ತಮಿಳುನಾಡಿನಲ್ಲಿ ಮಾಸ್​​ ಫ್ಯಾನ್ಸ್ ಹೊಂದಿರೋ ಮತ್ತೊಬ್ಬ ನಾಯಕ ಥಲಾ ಅಜಿತ್​​.. ಇದ್ರ ಜೊತೆಗೆ ಅಮ್ಮನ ಬ್ರಾಂಡ್​​​ ಫಾಲೋಯರ್ಸ್​​ ಒಂದಾಗಿ ಬಿಟ್ರಂತೂ ಅದು ಸುನಾಮಿಯೇ. ಅದರಲ್ಲೂ ವಿಜಯ್​​​ ಫ್ಯಾನ್ಸ್​ ಹಾಗು ಅಜಿತ್ ಫ್ಯಾನ್ಸ್ ಎಂದೂ ಒಂದಾಗಿಲ್ಲ. ಇಬ್ಬರ ಫ್ಯಾನ್ಸ್​ ಕಿತ್ತಾಟದಲ್ಲೇ ಡಿವೈಡ್ ಆಗಿದ್ದಾರೆ. ಹೀಗಾಗಿ ಮುಂದಿನ ವಿಜಯ್ ಆಡಳಿತ ಮುಗಿದ ಮೇಲೆ ಮತ್ತೆ ಅಜಿತ್ ಏನಾದ್ರು ಅಮ್ಮ ಜಯಲಲಿತಾ ಕಟ್ಟಿದ್ದ ಪಕ್ಷ ಸೇರಿಕೊಂಡ್ರೆ ತಮಿಳುನಾಡು ರಾಜಕಾರಣ ಬೆಂಕಿ ಬಿರುಗಾಳಿ ಆಗಿರುತ್ತೆ..

ನಾಯಕತ್ವ ಅಮ್ಮನ ಮಾನಸ ಪುತ್ರನಿಗೆ.?

ಎಮ್ ಜಿ ಆರ್​​ ನಿಂದ ಹಿಡಿದು ಇವತ್ತಿನ ವಿಜಯ್​​ವರೆಗೂ ಸಿನಿಮಾರಂಗದಿಂದಲೇ ಬಂದು ರಾಜ್ಯವನ್ನಾಳಿದ್ದಾರೆ. AIADMK ಅದರಲ್ಲೂ ಎಐಎಡಿಎಂಕೆ ಆಳಿದವರೆಲ್ಲಾ ಸಿನಿಮಾ ಸೂಪರ್​ ಸ್ಟಾರ್ಸ್​. ಹೀಗಾಗಿ ಅವರಿಲ್ಲದೇ ಈ AIADMKಗೆ ಅಸ್ಥಿತ್ವವೇ ಇಲ್ಲ ಅನ್ನೋದು ಜಗತ್​ ಜಾಹೀರಾತಾಗಿದೆ. ಹೀಗಾಗಿ ಈಗ ವಿಜಯ್​​ಗೆ ಸರಿ ಸಮನಾಗಿ ನಿಲ್ಲೋ ನಾಯಕ ನಟ ಅಜಿತ್. ಆ ತಲಾಗಾಗೆ ಈಗ ತಲಾಶ್ ನಡೀತಾ ಇದೆ.

ನಟ ಅಜಿತ್​​ ಸಿನಿಮಾ ಹೀರೋ ಮಾತ್ರವೇ ಅಲ್ಲ, ತಮಿಳರ ಪಾಲಿಗೆ ಅವರು ರಿಯಲ್ ಲೈಫ್ ಹೀರೊ ಕೂಡ. ಯಾಕಂದ್ರೆ ಸಿಂಪ್ಲಿ ಸಿಟಿಗೆ ಅಜಿತ್ ಬ್ರ್ಯಾಂಡ್ ಅಂಬಾಸೀಡರ್. ಕಾರ್ ರೇಸಿಂಗ್ ಹಾಗೂ ಬೈಕ್ ಸವಾರಿ ಎಂದರೆ ಅಜಿತ್​​ಗೆ ತುಂಬಾನೇ ಇಷ್ಟ. ಇದು ಯುವ ಜನತೆಯ ಆಕರ್ಷಣೆಯೂ ಹೌದು. ಯಾವ್ದೇ ಫ್ಯಾನ್ಸ್ ಅಸೋಷಿಯೇಷನ್ ಇಲ್ಲದೇ ಇರೋ ದೊಡ್ಡ ಸ್ಟಾರ್ ಅಜಿತ್. ಹೀಗಾಗಿ 2023ರ ಹೊತ್ತಿಗೆ ಅಮ್ಮನ ಸ್ಥಾನ ಅಜೀತ್ ಕೂತರು ಆಶ್ಚರ್ಯವೇನಿಲ್ಲ.

ಸಿನಿಮಾ ಹಂಗಾಮ ವಿಡಿಯೋ ನೋಡಿ...