Live| ಕೇಂದ್ರ ಬಜೆಟ್ 2020: ತೆರಿಗೆದಾರರಿಗೆ ಬಂಪರ್, ಭಾರೀ ರಿಯಾಯ್ತಿ ಘೋಷಣೆ!

India union budget 2020 live blog updates Kannada

 

ಬಹು ನಿರೀಕ್ಷಿತ ಮೋದಿ ಸರಕಾರ 2.0ರ 2ನೇ ಕೇಂದ್ರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಕಾಶ್ಮೀರಿ ಕವನದೊಂದಿಗೆ ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ, ಕೃಷಿ ವಲಯಕ್ಕೆ ಆದ್ಯತೆ ನೀಡುವುದರೊಂದಿಗೆ, ಬೀಳುತ್ತಿರುವ ಆರ್ಥಿಕತೆಗೆ ಚೈತನ್ನ ನೀಡಲು ಒತ್ತು ನೀಡುವಂತೆ ಕಾಣುತ್ತಿದೆ. ಬಜೆಟ್‌ನ ವಿಶ್ಲೇಷಣಾ ಸುದ್ದಿಗಳಿಗೆ ಲೈವ್ ಬ್ಲಾಗ್ ಫಾಲೋ ಮಾಡಿ...

6:46 PM IST

ಆಯವ್ಯಯ ಪರ ನಿರ್ಮಲಾ ಬ್ಯಾಟ್

6:38 PM IST

ನಿರ್ಮಲಾ ಬಜೆಟ್‌ನಲ್ಲಿ ತಂತ್ರಜ್ಞಾನಕ್ಕೆ ದಕ್ಕಿದ್ದು ಇಷ್ಟು

6:32 PM IST

ಜನಪ್ರಿಯವಲ್ಲದ ಜನಪರ ಬಜೆಟ್

6:03 PM IST

ಇದು ತೇಪೆ ಹಾಕಿದ ಬಜೆಟ್ ಎಂದು ಸಿದ್ದರಾಮಯ್ಯ

ನಿರ್ಮಲಾ ಮಂಡಿಸಿದ್ದು ಟಿಂಕರಿಂಗ್ ಬಜೆಟ್

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

5:46 PM IST

ಬಜೆಟ್‌ಗೆ ಎಚ್.ಡಿ.ರೇವಣ್ಣ ಹೇಳಿದ್ದಿಷ್ಟು

ಅಂಗನವಾಡಿ ಮೇಡಂ ಕೈಗ ಮೊಬೈಲ್ ಕೊಟ್ಟರೆ ದೇಶ ಉದ್ದಾರವಾಗುತ್ತಾ?

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

5:14 PM IST

ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್

ನಿರ್ಮಲಾ ಬಜೆಟ್ ಮಂಡಿಸಿದ ಬಳಿಕ ಕುಸಿಯಿತು ಶೇರುಪೇಟೆ

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

5:12 PM IST

ಇದೊಂದು ಅದ್ಭುತ ಬಜೆಟ್: ತೇಜಸ್ವಿ ಸೂರ್ಯ

ಬೆಂಗಳೂರು ಸೌತ್ ಸಂಸದ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದು ಹೇಗೆ?

ಇಲ್ಲಿ ಕ್ಲಿಕ್ಕಿಸಿ

4:31 PM IST

ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!

ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ಷಣಾರ್ಧದಲ್ಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಒದಗಿಸುವ ವಿನೂತನ ವ್ಯವಸ್ಥೆ ಜಾರಿಗೆ ತಂದಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

4:27 PM IST

ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!

ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು ಕೇಂದ್ರ ಬಜೆಟ್ ಮಮಡಿಸಿದ್ದಾರೆ. ಈ ವೇಳೆ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ್ದರೂ, ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಮಂಡನೆ ವೇಳೆ ನಿರ್ಮಲಾ ಆರೋಗ್ಯ ಹದಗೆಟ್ಟ ಪರಿಣಾಮ ಬಜೆಟ್ ನ ಕೊನೆಯ ಕೆಲ ಪುಟಗಳನ್ನು ಓದಲು ಆಗಲಿಲ್ಲ. 

ಮುಂದೇನಾಯ್ತು? ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

4:25 PM IST

ನೆಲಕಚ್ಚಿದ ಕೈಗಾರಿಕೆ: ಉತ್ತೇಜನಕ್ಕೆ ಮೋದಿ ತಂತ್ರಗಾರಿಕೆ!

ನೆಲಕಚ್ಚಿರುವ ಕೈಗಾರಿಕಾ ವಲಯವನ್ನು ಮೇಲೆತ್ತಲು ಈ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಪ್ರಮುಖವಾಗಿ ಮೂಲ ಸೌಕರ್ಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

3:08 PM IST

ನಿರ್ಮಲಾ ಶ್ಲಾಘಿಸಿದ ಯೋಗಿ!

ನಿರ್ಮಲಾ ಬಜೆಟ್ ಮಂಡಿಸಿದ ಬೆನ್ನಲ್ಲೇ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಣಕಾಸು ಸಚಿವೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಈ ಬಜೆಟ್ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಅಲ್ಲದೇ ಇದೊಂದು ಅಭಿವೃದ್ಧಿ ಹಾಗೂ ರೈತ ಪರ ಬಜೆಟ್ ಎಂದಿದ್ದಾರೆ.

3:05 PM IST

ಬ್ಯಾಂಕ್‌ ಠೇವಣಿ ವಿಮೆ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

3:01 PM IST

ನಿರ್ಮಲಾ ಬಜೆಟ್‌ಗೆ ರಾಹುಲ್ ಪ್ರತಿಕ್ರಿಯೆ

ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಯಿಸುತ್ತಾ 'ಇದು ಇತಿಹಾಸದಲ್ಲೇ ಅತಿ ಉದ್ದದ ಬಜೆಟ್ ಭಾಷಣವಾಗಿರಬಹುದು ಆದರೆ ಬಜೆಟ್‌ನ್ಲಲಿ ಏನೂ ಇಲ್ಲ, ಇದು ಸಂಪೂರ್ಣ ಟೊಳ್ಳು' ಎಂದಿದ್ದಾರೆ

2:55 PM IST

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ಮೋದಿ ಸರ್ಕಾರದ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಬಜೆಟ್ ಮಂಡಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಿದೆ. ತೆರಿಗೆದಾರರಿಗೂ ಸಿಹಿ ಸುದ್ದಿ ಕೊಟ್ಟಿರುವ ನಿರ್ಮಲಾ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಬಿಡಿ ಮುಟ್ಟಿಸಿದ್ದಾರೆ. ಹಾಗಾದ್ರೆ ಬಜೆಟ್ ಜಾರಿ ಬಳಿಕ ಯಾವುದೆಲ್ಲಾ ಅಗ್ಗವಾಗುತ್ತೆ? ಯಾವೆಲ್ಲಾ ವಸ್ತುಗಳು ದುಬಾರಿಯಾಗುತ್ತೆ? ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

2:54 PM IST

LIC ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್: ಏನಾಗಲಿದೆ ನಿಮ್ಮ ಇನ್ಸೂರೆನ್ಸ್ ಪಾಲಿಸಿ?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.

ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

2:02 PM IST

ಬಜೆಟ್ ಮಂಡನೆ ಮುಕ್ತಾಯ: ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಮಂಡನೆ ಬಳಿಕ ಈ ಕುರಿತಾದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ

2:00 PM IST

ಆಮದು ವೈದ್ಯೋಪಕರಣಗಳ ಮೇಲೆ ಸೆಸ್ , ಚಪ್ಪಲಿ, ಪೀಠೋಪಕರಣ ದುಬಾರಿ

ಆಮದು ವೈದ್ಯೋಪಕರಣಗಳ ಮೇಲೆ ಸೆಸ್ , ಚಪ್ಪಲಿ, ಪೀಠೋಪಕರಣ ದುಬಾರಿ

1:50 PM IST

ಸಹಕಾರಿ ಸಂಘಗಳ ಹೋರಾಟಕ್ಕೆ ಸಿಕ್ತು ದೊಡ್ಡ ಗೆಲುವು!

ಸಹಕಾರಿ ಸಂಘಗಳ ಹೋರಾಟಕ್ಕೆ ಸಿಕ್ತು ದೊಡ್ಡ ಗೆಲುವು, ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೇ.30ರಿಂದ 22ಕ್ಕೆ ಇಳಿಕೆ, ತೆರಿಗೆ ಇಳಿಕೆಗೆ 16 ವರ್ಷದಿಂದ ನಡೆದ  ಹೋರಾಟಕ್ಕೆ ಮನ್ನಣೆ
 

1:47 PM IST

ಪಾನ್ ಕಾರ್ಡ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ

ಪಾನ್ ಕಾರ್ಡ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ!, ಆಧಾರ್ ಸಂಖ್ಯೆಯ ಆಧಾರದ ಮೇಲೆ ಪ್ಯಾನ್ ಕಾರ್ಡ್ ಮಂಜೂರು

1:42 PM IST

ವಿವಾದದಿಂದ ವಿಶ್ವಾಸ ಸ್ಕೀಮ್!

ಬಾಕಿ ತೆರಿಗೆ ಕಟ್ಟಿದರೆ ದಂಡ, ಬಡ್ಡಿ ಮನ್ನಾಗೆ ಸ್ಕೀಮ್

ಯಾವುದೇ ವಿವಾದ ಇಲ್ಲ.. ಬರೀ ನಂಬಿಕೆ - ಸ್ಕೀಮ್

ಹಿಂದಿನ ಸಾಲಿನಲ್ಲಿ ಸಬ್ ಕಾ ವಿಶ್ವಾಸ್ ಹೆಸರಲ್ಲಿ ತೆರಿಗೆ\

ತೆರಿಗೆ ವಿವಾದ ಬಗೆಹರಿಸಲು ಹೊಸ ಸ್ಕೀಮ್ ಜಾರಿಗೆ

2020ರ ಮಾರ್ಚ್ ಒಳಗೆ ತೆರಿಗೆ ಬಾಕಿ ಕಟ್ಟಿದ್ರೆ ಸಾಕು

ತೆರಿಗೆ ಮೇಲೆ ಯಾವುದೇ ಬಡ್ಡಿ ವಿಧಿಸುವ ಪ್ರಶ್ನೆ ಇಲ್ಲ

ಯಾವುದೇ ದಂಡ, ಯಾವುದೇ ತೆರಿಗೆ ವಿಧಿಸುವುದಿಲ್ಲ

4.83 ಲಕ್ಷ ನೇರ ತೆರಿಗೆ ಕೇಸುಗಳ ಇತ್ಯರ್ಥಕ್ಕೆ ಸ್ಕೀಮ್
 

1:37 PM IST

ಡೆವಲಪರ್ಸ್ ಕಂಪನಿಗಳಿಗೆ ಒಂದು ವರ್ಷ ತೆರಿಗೆ ವಿನಾಯಿತಿ!

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್: ಡೆವಲಪರ್ಸ್ ಕಂಪನಿಗಳಿಗೆ ಒಂದು ವರ್ಷ ತೆರಿಗೆ ವಿನಾಯಿತಿ, ಡೆವಲಪರ್ಸ್ ಗಳಿಸುವ ಲಾಭಕ್ಕೆ ತೆರಿಗೆ ಪಾವತಿಗೆ ವಿನಾಯಿತಿ, ವಸತಿಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ವಿನಾಯ್ತಿ

1:36 PM IST

ಸ್ಟಾರ್ಟ್ ಅಪ್ ಕಂಪನಿಗಳಿಗೆ ಬಂಪರ್!

ಸ್ಟಾರ್ಟ್ ಅಪ್ ಕಂಪನಿಗಳಿಗೆ ಬಂಪರ್, 5 ವರ್ಷ ಸ್ಟಾರ್ಟ್ ಅಪ್ ಕಂಪನಿಗಳಿಗೆ ಯಾವುದೇ ತೆರಿಗೆ ಇಲ್ಲ, ಸ್ಟಾರ್ಟ್ ಅಪ್ ಕಂಪನಿಗಳ ಉತ್ತೇಜನಕ್ಕೆ ಕೇಂದ್ರದ ಕೊಡುಗೆ

1:35 PM IST

ಷೇರು ಮಾರುಕಟ್ಟೆ ತಲ್ಲಣ: 500 ಅಂಕ ಇಳಿಕೆ!

ಅತ್ತ ಬಜೆಟ್ ಮಂಡನೆ ಇತ್ತ ಷೇರು ಮಾರುಕಟ್ಟೆ ತಲ್ಲಣ, 582.87 ಅಂಕ ಇಳಿಕೆ

1:30 PM IST

ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ತೆರಿಗೆದಾರರಿಗೆ ಭಾರೀ ವಿನಾಯ್ತಿ ಘೋಷಿಸಿರುವ ಮೋದಿ ಸರ್ಕಾರ, ಹೊಸ ಟ್ಯಾಕ್ಸ್ ಸ್ಲ್ಯಾಬ್ ಪರಿಚಯಿಸಿದೆ.ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

1:29 PM IST

ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು

ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು, ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು ಘೋಷಣೆ
 

1:28 PM IST

ಮಹಿಳೆಯಿಂದ ಮಹಿಳೆಯರಿಗಾಗಿ: ಬಜೆಟ್ ನಮ್ಮದೇ ಮಕ್ಕಳ ಭವಿಷ್ಯಕ್ಕಾಗಿ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ.  ದೇಶದ ಮಹಿಳಾ ಸಮುದಾಯದತ್ತ ತಮ್ಮ ಚಿತ್ತ ಹರಿಸಿರುವ ನಿರ್ಮಲಾ ಸೀತಾರಾಮನ್, ಮಹಿಳಾ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.

ಸಂಪರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

1:19 PM IST

ವೈಯಕ್ತಿಕ ತೆರಿಗೆ ಡೀಟೇಲ್ಸ್!

ವೈಯಕ್ತಿಕ ತೆರಿಗೆ ಡೀಟೇಲ್ಸ್..

5 ಲಕ್ಷ ಆದಾಯದವರೆಗೂ ತೆರಿಗೆ ವಿನಾಯಿತಿ

5 ಲಕ್ಷದಿಂದ 7.5 ಲಕ್ಷದವರೆಗೆ - 10% ತೆರಿಗೆ

7.5ಲಕ್ಷದಿಂದ 10 ಲಕ್ಷದವರೆಗೆ - 15% ತೆರಿಗೆ

10 ಲಕ್ಷದಿಂದ 12.5 ಲಕ್ಷದವರೆಗೆ - 20% ತೆರಿಗೆ

12.5 ಲಕ್ಷದಿಂದ 15 ಲಕ್ಷದವರೆಗೆ - 25% ತೆರಿಗೆ

15 ಲಕ್ಷ ಮೇಲ್ಪಟ್ಟು ಆದಾಯ - 30% ತೆರಿಗೆ

1:17 PM IST

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು: ಪ್ರಯಾಣ ಇನ್ನು ಸುಲಭ ಗುರು!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರ ಅದರಲ್ಲೂ ರೈಲ್ವೇ ಇಲಾಖೆಯ ಅಭಿವೃದ್ಧಿಗೆ ನಿರ್ಮಲಾ ಭರಪೂರ ಯೋಜನೆಗಳನ್ನು ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

1:11 PM IST

ವೈಯಕ್ತಿಕ ತೆರಿಗೆಯಲ್ಲಿ ಭಾರಿ ಇಳಿಕೆ!

ವೈಯಕ್ತಿಕ ತೆರಿಗೆಯಲ್ಲಿ ಭಾರಿ ಇಳಿಕೆ: 5ರಿಂದ 7.5 ಲಕ್ಷ ಆದಾಯಕ್ಕೆ ಶೇಕಡ 10ರಷ್ಟು ತೆರಿಗೆ, ಶೇಕಡ 20ರಷ್ಟು ತೆರಿಗೆ ಬದಲು ಶೇಕಡ 10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷ ಆದಾಯಕ್ಕೆ ಶೇಕಡ 15 ತೆರಿಗೆ, 10 ಲಕ್ಷದಿಂದ 12.5 ಲಕ್ಷ ಆದಾಯಕ್ಕೆ ಶೇ.20ರಷ್ಟು ತೆರಿಗೆ, 12.5 ಲಕ್ಷದಿಂದ 15 ಲಕ್ಷ ಆದಾಯಕ್ಕೆ, 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ, 2.5 ಲಕ್ಷ ಆದಾಯದವರಿಗೆ ಯಾವುದೇ ತೆರಿಗೆ ಇರಲ್ಲ, 2.5 ಲಕ್ಷದಿಂದ 5 ಲಕ್ಷದವರೆಗೆ ಶೇಕಡ 5ರಷ್ಟು ತೆರಿಗೆ

1:09 PM IST

ಖರ್ಚೆಷ್ಟು? ಆದಾಯ ಎಷ್ಟು?

ಖರ್ಚೆಷ್ಟು? ಆದಾಯ ಎಷ್ಟು?: 2020-2021 - ಖರ್ಚು 30.42 ಲಕ್ಷ ಕೋಟಿ ರೂಪಾಯಿ, 2019-2021 - ಆದಾಯ 22.46 ಲಕ್ಷ ಕೋಟಿ ರೂಪಾಯಿ

1:07 PM IST

ವಿತ್ತೀಯ ಕೊರತೆ ಟಾರ್ಗೆಟ್ 3.5%

ವಿತ್ತೀಯ ಕೊರತೆ ಟಾರ್ಗೆಟ್ 3.5%: ಇತ್ತೀಚೆಗೆ ಹೂಡಿಕೆಹೆಚ್ಚಳಕ್ಕೆ ಆರ್ಥಿಕ ಸುಧಾರಣೆ ಮಾಡಿದ್ದೇವೆ, 2019-20ರ ಸಾಲಿನಲ್ಲಿ ವಿತ್ತೀಯ ಕೊರತೆ ಶೇಕಡ 3.8 ಇತ್ತು, 2020-21ರಲ್ಲಿ ವಿತ್ತೀಯ ಕೊರತೆ 3.5ಕ್ಕೆ ಇಳಿಕೆ ಬಗ್ಗೆ ನಿರೀಕ್ಷೆ

1:06 PM IST

GDP ಅಂದಾಜು ಬೆಳವಣಿಗೆ ಶೇ.10ರಷ್ಟು ನಿರೀಕ್ಷೆ

ಸರ್ಕಾರದ ಖರ್ಚು  30.42 ಲಕ್ಷ ಕೋಟಿ ರೂ., ಅಂದಾಜು ತೆರಿಗೆ ಸಂಗ್ರಹ 22.46 ಲಕ್ಷ ಕೋಟಿ ರೂ. ಗುರಿ, ಈ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆ ಶೇ.3.8, GDP ಅಂದಾಜು ಬೆಳವಣಿಗೆ ಶೇ.10ರಷ್ಟು ನಿರೀಕ್ಷೆ

1:03 PM IST

ಮೂಲಸೌಕರ್ಯ ಅಭಿವೃದ್ಧಿಗೆ 22 ಸಾವಿರ ಕೋಟಿ ರೂಪಾಯಿ

ಮೂಲಸೌಕರ್ಯ ಅಭಿವೃದ್ಧಿಗೆ 22 ಸಾವಿರ ಕೋಟಿ ರೂಪಾಯಿ, ಕೈಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೂಲಸೌಕರ್ಯಗ್ಗೆ ಆದ್ಯತೆ

1:01 PM IST

ಉದ್ಯೋಗ ಹೆಚ್ಚಳದಿಂದ 5 ಲಕ್ಷ ಕಂಪನಿಗಳಿಗೆ ಸಹಾಯ

ಉದ್ಯೋಗ ಹೆಚ್ಚಳದಿಂದ 5 ಲಕ್ಷ ಕಂಪನಿಗಳಿಗೆ ಸಹಾಯ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಸಾಲ ಸೌಲಭ್ಯ, IDBI ಬ್ಯಾಂಕ್ ಸಂಪೂರ್ಣ ಖಾಸಗೀಕರಣ, ಕಾರ್ಪೋರೇಟ್ ಬಾಂಡ್ಗಳಲ್ಲಿ ಹೂಡಿಕೆ ಶೇ.9 ರಿಂದ ಶೇ.15ಕ್ಕೆ ಏರಿಕೆ, ಅನಿವಾಸಿ ಭಾರತೀಯರಿಗೆ ಬಂಡವಾಳ ಹೂಡಲು ವಿಶೇಷ ಯೋಜನೆ

12:57 AM IST

LICಯಲ್ಲಿ ಸರ್ಕಾರಿ ಷೇರು ಮಾರಾಟಕ್ಕೆ ನಿರ್ಧಾರ!

ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ, GST ಬಾಕಿ 2 ಕಂತುಗಳಲ್ಲಿ ರಾಜ್ಯಕ್ಕೆ ವರ್ಗಾವಣೆ, ನಗದು ಕೊರತೆ ನೀಗಿಸಲು ಕ್ರಮ

12:56 PM IST

ಠೇವಣಿ ವಿಮೆ ಮೊತ್ತ 5 ಲಕ್ಷ ರೂ.ಗೆ ಏರಿಕೆ

ಠೇವಣಿ ವಿಮೆ ಮೊತ್ತ 5 ಲಕ್ಷ ರೂ.ಗೆ ಏರಿಕೆ: ಠೇವಣಿದಾರರ ಹಣ ಬ್ಯಾಂಕ್ಗಳಲ್ಲಿ ಸುರಕ್ಷತೆಗೆ ಕ್ರಮ, ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 3.50 ಲಕ್ಷ ಕೋಟಿ ಬಂಡವಾಳ. ಠೇವಣಿ ವಿಮೆ ಮೊತ್ತ 1 ರಿಂದ 5 ಲಕ್ಷ ರೂ.ಗೆ ಏರಿಕೆ. ಬ್ಯಾಂಕ್ಗಳಲ್ಲಿ  ಡೆಪಾಸಿಟ್ ಇಟ್ಟವರು ಭಯಪಡಬೇಕಾಗಿಲ್ಲ. ಖಾಸಗಿ ಬ್ಯಾಂಕ್ಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು

12:53 PM IST

ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರದ ಬಳಿಕ ಶಿಕ್ಷಣ ಕ್ಷೇತ್ರದತ್ತ ನಿರ್ಮಲಾ ಸೀತಾರಾಮನ್ ಗಮನ ಕೇಂದ್ರೀಕರಿಸಿದ್ದಾರೆ.ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:52 PM IST

2022ರಲ್ಲಿ ಭಾರತದಲ್ಲಿ G-20 ಶೃಂಗ ಸಮ್ಮೇಳನ

2022ರಲ್ಲಿ ಭಾರತದಲ್ಲಿ G-20 ಶೃಂಗ ಸಮ್ಮೇಳನ, G-20 ಶೃಂಗ ಸಮ್ಮೇಳನಕ್ಕೆ 100 ಕೋಟಿ ರೂ..
 

12:50 PM IST

ಕರ್ತವ್ಯ ನಿಷ್ಠೆ: ಅಪ್ಪ ಮೃತಪಟ್ಟರೂ ಬಜೆಟ್ ತಯಾರಿಸಿದ ಅಧಿಕಾರಿಗೆ ಸಲಾಂ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ತಮ್ಮ 2ನೇ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. 2020ರ ಮೊದಲ ಬಜೆಟ್ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು ಬಜೆಟ್ ತಯಾರಿಕೆಯ ವೇಳೆಯೇ ದುರಂತವೊಂದು ಸಂಭವಿಸಿದ್ದರು, ಅದನ್ನು ಲೆಕ್ಕಿಸದೇ ಬಜೆಟ್  ಕಾರ್ಯದಲ್ಲಿ ಭಾಗಿಯಾದ ಅಧಿಕಾರಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:48 AM IST

ಲಡಾಕ್ ಅಭಿವೃದ್ಧಿಗೆ 5,958 ಕೋಟಿ ರೂಪಾಯಿ

ಲಡಾಖ್ ಪ್ರಾಂತ್ಯಕ್ಕೆ 5,958 ಕೋಟಿ ರೂ. ಅನುದಾನ: ಜಮ್ಮು-ಕಾಶ್ಮೀರಕ್ಕೆ 30,757 ಕೋಟಿ ರೂ. ವಿಶೇಷ ಅನುದಾನ ಘೋಷಣೆ, ಜಮ್ಮು-ಕಾಶ್ಮೀರಕ್ಕೆ 30,757 ಕೋಟಿ ರೂ. ವಿಶೇಷ ಅನುದಾನ ಘೋಷಣೆ

12:46 PM IST

ನಾನ್ ಗೆಜೆಟೆಡ್ ಅಧಿಕಾರಿಗಳ ನೇಮಕ ಸುಧಾರಣೆ

ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆ, ನಾನ್ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗೆ ಸಂಸ್ಥೆ, ನಾನ್ ಗೆಜೆಟೆಡ್ ಅಧಿಕಾರಿಗಳ ನೇಮಕ ಸುಧಾರಣೆ
 

12:45 PM IST

ತೆರಿಗೆ ವಿಚಾರದಲ್ಲಿ ಶೋಷಣೆ ಪ್ರಶ್ನೆಯೇ ಇಲ್ಲ

ಟ್ಯಾಕ್ಸ್ ಪೇಯರ್ ಚಾರ್ಟರ್: ತೆರಿಗೆದಾರರಿಗೆ ಕಿರುಕುಳ ನೀಡಲು ಇಚ್ಛೆ ಇಲ್ಲ, ತೆರಿಗೆ ವಿಚಾರದಲ್ಲಿ ಶೋಷಣೆ ಪ್ರಶ್ನೆಯೇ ಇಲ್ಲ, ತೆರಿಗೆದಾರರನ್ನು ನಮ್ಮ ಸರ್ಕಾರ ಶೋಷಿಸಲ್ಲ

12:44 PM IST

ಭ್ರಷ್ಟಾಚಾರ ರಹಿತ ಆಡಳಿತಕ್ಕೆ ನಮ್ಮ ಆದ್ಯತೆ

ನಮ್ಮ ಸರ್ಕಾರದ ಗುರಿ: ಸ್ವಚ್ಛತೆಗೆ ನಮ್ಮ ಸರ್ಕಾರದ ಮೊದಲ ಆದ್ಯತೆ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ನಮ್ಮ ಆದ್ಯತೆ, ಯುವಜನರ ಆಕಾಂಕ್ಷೆ ಪೂರೈಕೆ ಪ್ರಾಧಾನ್ಯತೆ, ಅಭಿವೃದ್ಧಿ ಪರ ನೀತಿ ಜಾರಿಗೆ ನಮ್ಮ ಆದ್ಯತೆ, ಜನರ ಮೇಲೆ ನಂಬಿಕೆ, ವಿಶ್ವಾಸ ನಮ್ಮ ಮಂತ್ರ

12:39 PM IST

ಕ್ಷಯ ರೋಗ ಸೋಲತ್ತೆ, ಇಂಡಿಯಾ ಗೆಲ್ಲುತ್ತೆ: ಕೊಟ್ರೆ ಇಂತಾ ಅನುದಾನ ಕೊಡಬೇಕಲ್ವಾ ಮತ್ತೆ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಬಳಿಕ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿರುವ ವಿತ್ತ ಸಚಿವೆ, ಆರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:38 PM IST

ದೇಶದಲ್ಲಿ ಭದ್ರತೆ, ಸುರಕ್ಷತೆ, ಪ್ರೇಮ, ಸಂಪತ್ತು ಎಂಬ ಐದು ಅಂಶಗಳಿರಬೇಕು

ದೇಶದಲ್ಲಿ ಭದ್ರತೆ, ಸುರಕ್ಷತೆ, ಪ್ರೇಮ, ಸಂಪತ್ತು ಎಂಬ ಐದು ಅಂಶಗಳಿರಬೇಕು, ಒಳ್ಳೆಯ ದೇಶ ಹೇಗಿರಬೇಕೆಂದು ತಿರುವಳ್ಳುವರ್ ಬರೆದಿದ್ದ ಕವಿತೆ. ತಮಿಳು ಕವಿಯ ತಿರುವಳ್ಳುವರ್ ಕವನ ವಾಚಿಸಿದ ನಿರ್ಮಲಾ

12:35 PM IST

ಆಯುಷ್ಮಾನ್ ಭಾರತ್ ಯೋಜನೆ ಅಡಿ ಎಲ್ಲರ ಆರೋಗ್ಯ ಕಾಳಜಿ

ಹೆಲ್ತ್ ಫಾರ್ ಆಲ್: ಆಯುಷ್ಮಾನ್ ಭಾರತ್ ಯೋಜನೆ ಅಡಿ ಎಲ್ಲರ ಆರೋಗ್ಯ ಕಾಳಜಿ, ದೇಶದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವುದೇ ಗುರಿ, ರಾಷ್ಟ್ರೀಯ ಭದ್ರತೆ ನಮ್ಮ ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆ


 

12:34 PM IST

ಕ್ಲೀನ್ ಏರ್ ಸ್ಕೀಮ್ ಗೆ 4400 ಕೋಟಿ

ಕ್ಲೀನ್ ಏರ್ ಸ್ಕೀಮ್ ಗೆ 4400 ಕೋಟಿ: 10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಸ್ವಚ್ಛ ಗಾಳಿ ವಾತಾವರಣ, ಇದೇ ಉದ್ದೇಶಕ್ಕಾಗಿ 4,400 ಕೋಟಿ ರೂಪಾಯಿ ಕೇಂದ್ರದ ಹಣ, ವಾಯು ಮಾಲಿನ್ಯ ನಿಯಂತ್ರಿಸಿ ಸ್ವಚ್ಛ ಗಾಳಿ ನಗರ ಮಾಡಲು ಗುರಿ

12:31 AM IST

ಪರಿಶಿಷ್ಟ ಜಾತಿ ಅಭಿವೃದ್ಧಿಗೆ 85,000 ಕೋಟಿ ರೂಪಾಯಿ

ಪರಿಶಿಷ್ಟ ಜಾತಿ ಅಭಿವೃದ್ಧಿಗೆ 85,000 ಕೋಟಿ ರೂಪಾಯಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 53,700 ಕೋಟಿ ರೂಪಾಯಿ, ದಿವ್ಯಾಂಗರ ಅಭಿವೃದ್ಧಿಗಾಗಿ 59 ಸಾವಿರ ಕೋಟಿ ರೂಪಾಯಿ

12:28 AM IST

ಪ್ರವಾಸೋದ್ಯಮ ಕ್ಷೇತ್ರಕ್ಕೆ 2,500 ಕೋಟಿ ರೂಪಾಯಿ

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರ: ದೇಶದ 5 ಪುರಾತತ್ವ ತಾಣಗಳ ಅಭಿವೃದ್ಧಿಗೆ ಯೋಜನೆ, ರಾಂಚಿಯಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆಗೆ ಸ್ಕೀಮ್. ಸಂಸ್ಕೃತಿ ಕ್ಷೇತ್ರಕ್ಕೆ 3,154 ಕೋಟಿ ರೂ, ಪ್ರವಾಸೋದ್ಯಮ ಕ್ಷೇತ್ರಕ್ಕೆ 2,500 ಕೋಟಿ ರೂಪಾಯಿ 

12:24 AM IST

ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ವಿಫಲ

ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ವಿಫಲ ಎಂದು ಘೋಷಣೆ. ನಿರ್ಮಲಾ ಹೇಳಿಕೆಗೆ ಪ್ರತಿಪಕ್ಷಗಳ ಆಕ್ಷೇಪ,ಗದ್ದಲ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಯಶಸ್ವಿ

12:20 AM IST

ಅಂಗನವಾಡಿಗಳಿಗೂ ಡಿಜಿಟಲ್  ಸೌಲಭ್ಯ

ಖಾಸಗಿ ಡಾಟಾ ಸೆಂಟರ್ ಪಾರ್ಕ್ ನಿರ್ಮಾಣ, ನೇರ ನಗದು ಯೋಜನೆ ವಿಸ್ತರಣೆ, ರಾಷ್ಟ್ರೀಯ ಅನಿಲ ಗ್ರಿಡ್ 27 ಸಾವಿರ ಕಿಮೀ ವಿಸ್ತರಣೆ. ಭಾರತ್ ನೆಟ್ ಯೋಜನೆಗೆ  6 ಸಾವಿರ ಕೋಟಿ ಅನುದಾನ, ಅಂಗನವಾಡಿಗಳಿಗೂ ಡಿಜಿಟಲ್  ಸೌಲಭ್ಯ. ಅಂಗನವಾಡಿಗಳು ಹೈಟೆಕ್, 1 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಇಂಟರ್ನೆಟ್ ಸೌಲಭ್ಯ. 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್. 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್. 10 ಕೋಟಿ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಪೂರೈಕೆ

12:12 AM IST

ವಿದ್ಯುತ್ ಇಲಾಖೆಗೆ 22,000 ಕೋಟಿ ರೂ ಅನುದಾನ

ಮನೆ ಮನೆಗೂ ವಿದ್ಯುತ್ ಪೂರೈಕೆ: ಮನೆ ಮನೆಗೆ ವಿದ್ಯುತ್ ಪೂರೈಸುವುದು ಕೇಂದ್ರದ ಗುರಿ, ಪ್ರೀ ಪೇಯ್ಡ್ ಮೀಟರ್ಸ್ ಅಂದ್ರೆ ಸ್ಮಾರ್ಟ್ ಮೀಟರ್ಸ್, ವಿದ್ಯುತ್ ಇಲಾಖೆಗೆ 22,000 ಕೋಟಿ ರೂ ಅನುದಾನ, ವಿದ್ಯುತ್ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರ, 3 ವರ್ಷಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ, ವಿದ್ಯುತ್ ಬಳಕೆದಾರರಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, ಇಂಧನ ವಲಯಕ್ಕೆ 22 ಸಾವಿರ ಕೋಟಿ ರೂ. ಅನುದಾನ, ವಿದ್ಯುತ್ ಬಳಕೆದಾರರಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, 2024ರೊಳಗೆ 100ಕ್ಕೂ ಹೆಚ್ಚು ಹೊಸ ಏರ್ಪೋರ್ಟ್ ನಿರ್ಮಾಣ, ಸಾರಿಗೆ ವಲಯಕ್ಕೆ 1.7 ಲಕ್ಷ  ಕೋಟಿ ಅನುದಾನ ಘೋಷಣೆ

12:11 AM IST

ಬೆಂಗಳೂರು ಸಬ್ ಅರ್ಬನ್ ರೈಲಿಗೆ 18600 ಕೋಟಿ ರೂ..!

ರೈಲು ಯೋಜನೆಗಳು: ತೇಜಸ್ ಮಾದರಿ ರೈಲುಗಳ ಹೆಚ್ಚಳಕ್ಕೆ ಯೋಜನೆ, ಪ್ರವಾಸಿ ತಾಣಗಳನ್ನು ತಲುಪುವ ತೇಜಸ್ ರೈಲು

ಬೆಂಗಳೂರು ಸಬ್ ಅರ್ಬನ್ ರೈಲು: ಬೆಂಗಳೂರು ಸಬ್ ಅರ್ಬನ್ ರೈಲಿಗೆ 18600 ಕೋಟಿ ರೂ..!, ಮೆಟ್ರೋ ಮಾದರಿಯಲ್ಲಿಯೇ ಸಬ್ ಅರ್ಬನ್ ರೈಲು ಸ್ಕೀಮ್

ಸಾರಿಗೆ ಕ್ಷೇತ್ರಕ್ಕೆ 1.7 ಲಕ್ಷ ಕೋಟಿ ರೂಪಾಯಿ ಮೀಸಲು

2 ಸಾವಿರ ಕಿಮೀ ಕೋಸ್ಟಲ್  ಕಾರಿಡಾರ್ ನಿರ್ಮಾಣಕ್ಕೆ ಕ್ರಮ, 9 ಸಾವಿರ ಕಿಮೀ  ಎಕನಾಮಿಕ್ ಕಾರಿಡಾರ್ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು,ಸರಕು ಸಾಗಣೆ ನೀತಿ ಜಾರಿ

ದೆಹಲಿ- ಮುಂಬೈ ಎಕ್ಸ್ಪ್ರೆಸ್ ವೇ 2023ರೊಳಗೆ ಪೂರ್ಣ, ರೈಲ್ವೆ ನಿಲ್ದಾಣಗಳಲ್ಲಿ  550 ವೈಫೈ ವ್ಯವಸ್ಥೆ, ಚೆನ್ನೈ- ಬೆಂಗಳೂರು ಎಕ್ಸ್ಪ್ರೆಸ್ ವೇ ಘೋಷಣೆ

ಮುಂಬೈ- ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು, ದೇಶಾದ್ಯಂತ 120 ಹೊಸ ರೈಲುಗಳ ಘೋಷಣೆ, 27 ಸಾವಿರ ಕಿಮೀ.ವರೆಗೆ ರೈಲ್ವೆ ಹಳಿಗಳ ವಿದ್ಯುದೀಕರಣ

12:08 PM IST

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು!

ಈ ಸಾಲಿನಲ್ಲೇ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಕಾಮಗಾರಿ, ಮೂಲಸೌಕರ್ಯ ಉತ್ತೇಜನಕ್ಕೆ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ, 2023ರೊಳಗೆ ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪೂರ್ಣ

12:07 PM IST

ಜವಳಿ ಉದ್ಯಮಕ್ಕೆ 1,480 ಕೋಟಿ ರೂಪಾಯಿ ಅನುದಾನ

ಜವಳಿ ಉದ್ಯಮಕ್ಕೆ 1,480 ಕೋಟಿ ರೂಪಾಯಿ ಅನುದಾನ, ನ್ಯಾಷನಲ್ ಟೆಕ್ ಟೆಕ್ಸ್ ಟೈಲ್ ಮಿಷನ್ ಗಾಗಿ ಹಣ ಫಿಕ್ಸ್..!, ದೇಶದಲ್ಲಿ ಜವಳಿ ಉದ್ಯಮಿ ಆಧುನೀಕರಣಕ್ಕಾಗಿ ಯೋಜನೆ

12:06 PM IST

ನಿರ್ವಿಕ್ ಹೆಸರಲ್ಲಿ ವಿಮಾ ಸ್ಕೀಮ್

ರಫ್ತು ಮಾಡುವ ಕೈಗಾರಿಕೋದ್ಯಮಿಗಳಿಗೆ ವಿಮಾ ಯೋಜನೆ, ನಿರ್ವಿಕ್ ಹೆಸರಿನಲ್ಲಿ ಕೈಗಾರಿಕೆಗಳಿಗಾಗಿ ನಿರ್ವಿಕ್ ಯೋಜನೆ, ದೇಶದ ಕೈಗಾರಿಕೋದ್ಯಮಿಗಳ ರಫ್ತು ಉತ್ತೇಜನಕ್ಕಾಗಿ ನೆರವು, ದೇಶದ ಪ್ರತಿ ಜಿಲ್ಲೆಗಳಿಂದಲೂ ರಫ್ತು ಉತ್ತೇಜನಕ್ಕೆ PM ಗುರಿ

12:05 PM IST

ಕೈಗಾರಿಕಾಭಿವೃದ್ಧಿಗೆ 27,300 ಕೋಟಿ

ಕೈಗಾರಿಕಾಭಿವೃದ್ಧಿಗೆ 27,300 ಕೋಟಿ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ 27,300 ಕೋಟಿ ರೂ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆ ಅಭಿವೃದ್ಧಿಗೆ ನೆರವು

12:03 PM IST

ರಫ್ತುದಾರರಿಗೆ ಹೊಸ ವಿಮಾ ಯೋಜನೆ ಘೋಷಣೆ!

ಕೈಗಾರಿಕಾ ಕ್ಷೇತ್ರಕ್ಕೆ 27 ಸಾವಿರ ಕೋಟಿ ರೂ. ಅನುದಾನ, ರಫ್ತು ಉತ್ತೇಜನಕ್ಕೆ ಈ ವರ್ಷದಿಂದ ತೆರಿಗೆ ಕಡಿತ, ರಫ್ತುದಾರರಿಗೆ ಹೊಸ ವಿಮಾ ಯೋಜನೆ  ಘೋಷಣೆ

ಕೈಗಾರಿಕಾ ಕ್ಷೇತ್ರಕ್ಕೆ 27 ಸಾವಿರ ಕೋಟಿ ರೂ. ಅನುದಾನ, 5 ವರ್ಷದಲ್ಲಿ 100 ಲಕ್ಷ  ಕೋಟಿ ಹೂಡಿಕೆಗೆ ಕ್ರಮ, ರಾಷ್ಟ್ರೀಯ ಮೂಲಸೌಲಭ್ಯ ಯೋಜನೆಗೆ 100 ಲಕ್ಷ ಕೋಟಿ ಹೂಡಿಕೆ

 

 

11:59 AM IST

ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಗೆ ಒತ್ತು

ಸ್ಮಾರ್ಟ್ ಅಪ್ಗಳಿಗೆ 5 ಸ್ಮಾರ್ಟ್ ಸಿಟಿ ನಿರ್ಮಾಣ. ಸ್ಟಾರ್ಟ್ಅಪ್ ಗಳಿಗೆ ಹೆಚ್ಚಿನ ಉತ್ತೇಜನಕ್ಕೆ ಪ್ರತ್ಯೇಕ ಘಟಕ. ಸ್ಟಾರ್ಟ್ಅಪ್ ಗಳಿಗೆ ಹೆಚ್ಚಿನ ಉತ್ತೇಜನ

ರಾಷ್ಟ್ರೀಯ ಜವಳಿ ಮಿಷನ್ ಗೆ 1480 ಕೋಟಿ ರೂ. ಅನುದಾನ. ಕೈಗಾರಿಕೆಗಳಿಗೆ ಭೂಮಿ ಕೊಡುವ ಕೈಗಾರಿಕಾ ಘಟಕಗಳ ಸ್ಥಾಪನೆ. ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಗೆ ಒತ್ತು

11:58 AM IST

ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಬಜೆಟ್ ಆರಂಭದಲ್ಲೇ ಕೃಷಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಿರುವ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 16 ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

11:57 AM IST

ಕೌಶಲ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನುದಾನ

ಸರಸ್ವತಿ ಸಿಂಧು ನಾಗರಿಕತೆ ಬಗ್ಗೆ ಪ್ರಸ್ತಾಪ. ಕೌಶಲ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನುದಾನ. ಶಿಕ್ಷಣ ಕ್ಷೇತ್ರಕ್ಕೆ 99 ಸಾವಿರ ಕೋಟಿ ರೂ. ಮೀಸಲು

ನಿರ್ಮಲಾ ಹೇಳಿಕೆಗೆ ಪ್ರತಿಪಕ್ಷಗಳ ಆಕ್ಷೇಪ. ಸರಸ್ವತಿ ಸಿಂಧು ನಾಗರಿಕತೆ ಬಗ್ಗೆ ಪ್ರಸ್ತಾಪ. ನಾವು ಸಿಂಧು ನಾಗರಿಕತೆಯಿಂದ ಮುಂದುವರೆದವರು

11:56 AM IST

ಸ್ಟಡಿ ಇನ್ ಇಂಡಿಯಾ- ಭಾರತದಲ್ಲೇ ಶಿಕ್ಷಣ ಯೋಜನೆ ಘೋಷಣೆ

ಸಮಾಜದ ಎಲ್ಲ ವರ್ಗದ ನಿರೀಕ್ಷೆಗಳನ್ನು ಈ ಬಜೆಟ್ ಈಡೇರಿಸಲಿದೆ. 5 ವರ್ಷದಲ್ಲಿ ಕೇಂದ್ರ ಸರ್ಕಾರದ ಆಡಳಿತ ಸುಧಾರಣೆ ಕಂಡಿದೆ. ಈ ಬಜೆಟ್ ಯುವಕರಿಗೆ  ಉದ್ಯೋಗದ ಭರವಸೆ ನೀಡಲಿದೆ

ಸ್ಟಡಿ ಇನ್ ಇಂಡಿಯಾ- ಭಾರತದಲ್ಲೇ ಶಿಕ್ಷಣ ಯೋಜನೆ ಘೋಷಣೆ. ರಾಷ್ಟ್ರೀಯ ಪೊಲೀಸ್ ವಿವಿ ಅಪರಾಧ ಶಾಸ್ತ್ರ ವಿವಿ ಸ್ಥಾಪನೆ. ಪದವಿಗೂ ಆನ್ಲೈನ್ ಶಿಕ್ಷಣ ವ್ಯವಸ್ಥೆ 

ವೈದ್ಯರ ಕೊರತೆ ನೀಗಿಸಲು ಪರಿಣಾಮಕಾರಿ ಕ್ರಮ. ರಿಯಾಯಿತಿ ದರದಲ್ಲಿ  ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ಮೆಡಿಕಲ್ ಕಾಲೇಜು ಸ್ಥಾಪನೆ. ಜಿಲ್ಲಾಆಸ್ಪತ್ರೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಪ್ರೋತ್ಸಾಹ

11:53 AM IST

ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿ ಘೋಷಣೆ

* ಹೊಸ ಶಿಕ್ಷಣ ನೀತಿಗೆ 2 ಲಕ್ಷ ಸಲಹೆಗಳು ಬಂದಿವೆ. ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿ ಘೋಷಣೆ. ಜಲಜೀವನ ಯೋಜನೆಗೆ 3.60 ಲಕ್ಷ ಕೋಟಿ ರೂ. ಅನುದಾನ

* ನಗರ, ಸ್ಥಳೀಯ ಸಂಸ್ಥೆಗಳಲ್ಲಿ 1 ವರ್ಷ ತರಬೇತಿ. 2021ರೊಳಗೆ 150 ವಿವಿಗಳಲ್ಲಿ ಹೊಸ ಕೋರ್ಸ್ಗಳ ಆರಂಭ. ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ

* ಸಮಾಜದ ಎಲ್ಲ ವರ್ಗದ ನಿರೀಕ್ಷೆಗಳನ್ನು ಈ ಬಜೆಟ್ ಈಡೇರಿಸಲಿದೆ. ಪದವಿಗೂ ಆನ್ಲೈನ್ ಶಿಕ್ಷಣ. ಯುವ ಎಂಜಿನಿಯರ್ಗಳಿಗೆ 1 ವರ್ಷ ಇಂಟರ್ನ್ಶಿಪ್ 

11:49 AM IST

ಎಲ್ಲ ಜಿಲ್ಲೆಗಳಿಗೂ  ಜನೌಷಧ ಕೇಂದ್ರ ವಿಸ್ತರಣೆ!

ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂ. ಅನುದಾನ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಅನುದಾನ. ಎಲ್ಲ ಜಿಲ್ಲೆಗಳಿಗೂ  ಜನೌಷಧ ಕೇಂದ್ರ ವಿಸ್ತರಣೆ

11:47 AM IST

ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

12 ಕಾಯಿಲೆಗಳಿಗೆ ಇಂದ್ರಧನುಷ್ ಯೋಜನೆ ವಿಸ್ತರಣೆ. 12 ಕಾಯಿಲೆಗಳಿಗೆ ಇಂದ್ರಧನುಷ್ ಯೋಜನೆ ವಿಸ್ತರಣೆ. ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ. ಮೊದಲ ಹಂತದಲ್ಲಿ 112 ಜಿಲ್ಲೆಗಳಲ್ಲಿ ಆಸ್ಪತ್ರೆ ನಿರ್ಮಾಣ. ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ

20 ಸಾವಿರ ಆಸ್ಪತ್ರೆಗಳ ಜತೆ ಆಯುಷ್ಮಾನ್ ಭಾರತ್ ಸಹಭಾಗಿತ್ವ. ಆಯುಷ್ಮಾನ್ ಯೋಜನೆಗೆ ಸಹಭಾಗಿತ್ವ ಇಲ್ಲದ ಜಿಲ್ಲೆಗಳಿಗೆ ಪ್ರಾಮುಖ್ಯತೆ. ಕ್ಷಯ ರೋಗ ಸೋತರೆ ದೇಶ ಗೆಲ್ಲುತ್ತದೆ

11:44 AM IST

ಗ್ರಾಮೀಣ ಮೀನುಗಾರರಿಗೆ ಸಾಗರ ಮಿತ್ರ ಯೋಜನೆ ಘೋಷಣೆ

*ಗ್ರಾಮೀಣ ಯುವಕರ ಮೀನುಗಾರಿಕೆಗೆ ಒತ್ತು, 500 ಸಹಕಾರ ಸಂಘಗಳ ಸ್ಥಾಪನೆ. ಹೈನುಗಾರಿಕೆಗೂ ನರೇಗಾ ಯೋಜನೆ ವಿಸ್ತರಣೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ವಿಸ್ತರಣೆ

*ಈ ಬಜೆಟ್ ಯುವಕರಿಗೆ  ಉದ್ಯೋಗದ ಭರವಸೆ ನೀಡಲಿದೆ. ಈ ಬಜೆಟ್ ಎಲ್ಲ ವರ್ಗಕ್ಕೂ ಭರವಸೆ ನೀಡುವ ಬಜೆಟ್ ಆಗಲಿದೆ. ಯುವಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ

*ಕೃಷಿ ನೀರಾವರಿ ಯೋಜನೆಗಳಿಗೆ 1 ಲಕ್ಷ 60 ಸಾವಿರ ಕೋಟಿ ಅನುದಾನ. ಸಾಗರ ಮಿತ್ರ ಯೋಜನೆಯಡಿ 500 ಸಹಕಾರ ಸಂಘಗಳ ಸ್ಥಾಪನೆ. ಗ್ರಾಮೀಣ ಮೀನುಗಾರರಿಗೆ ಸಾಗರ ಮಿತ್ರ ಯೋಜನೆ ಘೋಷಣೆ

11:40 AM IST

ರೈತರಿಗೆ 15 ಲಕ್ಷ ಕೋಟಿ ಕೃಷಿ ಸಾಲ!

5300.8 ಮೆಟ್ರಿಕ್ ಟನ್ನಿಂದ 108 ಮಿಲಿಯನ್ ಮೆಟ್ರಿಕ್ ಟನ್ಗೆ ಹಾಲು ಉತ್ಪಾದನೆ ಹೆಚ್ಚಳ, ಬ್ಯಾಂಕೇತರ ಸಂಸ್ಥೆಗಳ ಮೂಲಕ ರೈತರಿಗೆ, ಕೃಷಿ ಸಾಲ ರೈತರಿಗೆ 15 ಲಕ್ಷ ಕೋಟಿ ಕೃಷಿ ಸಾಲ

11:39 AM IST

ಹೂ, ಹಣ್ಣು, ತರಕಾರಿ ಸಾಗಾಣಿಕೆಗೆ ವಿಶೇಷ ವಿಮಾನ!

ರೈತರಿಗಾಗಿ ‘ಕೃಷಿ ಉಡಾನ್’ಯೋಜನೆ, ಹೂ, ಹಣ್ಣು, ತರಕಾರಿ ಸಾಗಾಣಿಕೆಗೆ ವಿಶೇಷ ವಿಮಾನ, ಕೃಷಿಗಾಗಿ ವಿಶೇಷ ವಿಮಾನ

ರೈತರಿಗಾಗಿ ‘ಕೃಷಿ ಉಡಾನ್’ಯೋಜನೆ,  ತೋಟಗಾರಿಕೆಗಾಗಿ ಕುಸಮ ಯೋಜನೆ ವಿಸ್ತರಣೆ, ನಾಗರಿಕ ವಿಮಾನ ರೀತಿಯಲ್ಲೇ ಕೃಷಿ ಉತ್ಪನ್ನ ಸಾಗಾಣಿಕೆಗೆ ವಿಮಾನ ಸಂಚಾರ

11:37 AM IST

ಸಬ್ ಕಾ ಸಾಥ್, ಸಾಮಾಜಿಕ ಕಳಕಳಿ ನಮ್ಮ ಮೊದಲ ಆದ್ಯತೆ

ಸಬ್ ಕಾ ಸಾಥ್, ಸಾಮಾಜಿಕ ಕಳಕಳಿ ನಮ್ಮ ಮೊದಲ ಆದ್ಯತೆ. ಮೊದಲನೇ ಅಂಶ- ನಿರೀಕ್ಷೆಯ ಭಾರತ. ಪ್ರಮುಖ ಮೂರು ಅಂಶಗಳಿಗೆ ಈ ಬಜೆಟ್ ಆದ್ಯತೆ ನೀಡಲಿದೆ

Image

11:36 AM IST

ಜನರ ಖರೀದಿಗೆ ಶಕ್ತಿ ಗಣನೀಯವಾಗಿ ಏರಿಕೆಯಾಗಿದೆ

ರೋಬೋಟಿಕ್ಸ್, ಕೃತಕ  ಬುದ್ಧಿಮತ್ತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜನರ ಖರೀದಿಗೆ ಶಕ್ತಿ ಗಣನೀಯವಾಗಿ ಏರಿಕೆಯಾಗಿದೆ. 2006-2016ರ ನಡುವೆ 27 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ

11:36 AM IST

ಕೇಂದ್ರ ಸರ್ಕಾರದ ಸಾಲಭಾರ ಕಡಿಮೆಯಾಗಿದೆ

ಎಫ್ಡಿಐನಿಂದ 284 ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. ಹಿಂದುಳಿದ ವರ್ಗಗಳಿಗೆ ಸಾಲಸೌಲಭ್ಯ ದಕ್ಕುತ್ತಿದೆ. ಕೇಂದ್ರ ಸರ್ಕಾರದ ಸಾಲಭಾರ ಕಡಿಮೆಯಾಗಿದೆ

11:34 AM IST

ಕೃಷಿ ಉಡಾಣ್ ಯೋಜನೆ ಮೂಲಕ ಧಾನ್ಯ ಸರಬರಾಜಿಗೆ ಮುಂದಾದ ಕೇಂದ್ರ

ಖಾಸಗಿ ಸಹಭಾಗಿತ್ವದಲ್ಲಿ ಕಿಸಾನ್ ರೈಲು ಯೋಜನೆಗೆ ಚಾಲನೆ, ಕೃಷಿ ಉಡಾಣ್ ಯೋಜನೆ ಮೂಲಕ ಧಾನ್ಯ ಸರಬರಾಜಿಗೆ ಮುಂದಾದ ಕೇಂದ್ರ, ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಯೋಜನೆಯ ವಿಸ್ತೀರ್ಣ

11:33 AM IST

ತಮಿಳು ಕವಿಯತ್ರಿ ಅವ್ವೈಯಾರ್ ಕವನ ವಾಚಿಸಿದ ನಿರ್ಮಲಾ

ರಸಗೊಬ್ಬರ ಬಳಕೆ ಕಡಿಮೆಗೊಳಿಸಲು ಕ್ರಮ, ಭೂಮಿಯನ್ನು ಉತ್ತಿ,ಬಿತ್ತಿ  ಬೆಳೆಯಿರಿ, ಭೂಮಿ ಮೇಲೆ ದೌರ್ಜನ್ಯ ಬೇಡ, ತಮಿಳು ಕವಿಯತ್ರಿ ಅವ್ವೈಯಾರ್ ಕವನ ವಾಚಿಸಿದ ನಿರ್ಮಲಾ

3 ಸಾವಿರ ವರ್ಷದ ಹಿಂದೆ ಕವಿಯತ್ರಿ ಅವ್ವೈಯಾರ್ ರಚಿಸಿದ್ದ ಕವನ, ಶೈತ್ಯಾಗಾರ ನಿರ್ಮಾಣಕ್ಕೆ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ತಾಲೂಕು ಮಟ್ಟದಲ್ಲಿ ಅತ್ಯಾಧುನಿಕ ಶೈತ್ಯಾಗಾರ ಉಗ್ರಾಣ ನಿರ್ಮಾಣ

Image

11:30 AM IST

ಬಂಜರು ಭೂಮಿಯಲ್ಲಿ ಸೋಲಾರ್ ಯೂನಿಟ್ ಸ್ಥಾಪಿಸಲು ಒತ್ತು

ಕೃಷಿ ಯೋಗ್ಯವಲ್ಲದ ಜಮೀನು ಹೊಂದಿರುವ ರೈತರಿಗೆ ಸೋಲಾರ್ ಯುನಿಟ್ ಸ್ಥಾಪಿಸಲು ಸಹಾಯ, ಕೃಷಿ ನೀರಾವರಿ, ಗುತ್ತಿಗೆ ಕೃಷಿಗೆ ವಿಶೇಷ ಆದ್ಯತೆ, ಸೋಲಾರ್ ಪಂಪ್ಸೆಟ್ ಅಳವಡಿಸಲು 20 ಲಕ್ಷ ರೈತರಿಗೆ ಸಹಾಯ

ರಸಗೊಬ್ಬರ ಬಳಕೆ ಕಡಿಮೆಗೊಳಿಸಲು ಕ್ರಮ, ಬಂಜರು ಭೂಮಿಯಲ್ಲಿ ಸೋಲಾರ್ ಯೂನಿಟ್ ಸ್ಥಾಪಿಸಲು ಒತ್ತು, ಅನ್ನದಾತ ವಿದ್ಯುತ್ ದಾತನೂ ಆಗುತ್ತಾನೆ

11:29 AM IST

ರೈತರಿಗಾಗಿ 16 ಅಂಶಗಳ ಕಾರ್ಯ ಯೋಜನೆ ಪ್ರಕಟಿಸಿದ ನಿರ್ಮಲಾ

ಗ್ರಾಮ ಸಡಕ್ ಯೋಜನೆ ಮೂಲಕ ಹಳ್ಳಿಗಳ ಸಂಪರ್ಕ, 6.11 ಕೋಟಿ ರೈತರಿಗೆ ವಿಮಾ ಯೋಜನೆ ಜಾರಿ, ರೈತರಿಗಾಗಿ 16 ಅಂಶಗಳ ಕಾರ್ಯ ಯೋಜನೆ ಪ್ರಕಟಿಸಿದ ನಿರ್ಮಲಾ

ನೀರಿನ ಕೊರತೆ 100 ಜಿಲ್ಲೆಗಳಿಗೆ ವಿಶೇಷ ಯೋಜನೆ, 6.11 ಕೋಟಿ ರೈತರಿಗೆ ವಿಮಾ ಯೋಜನೆ ಜಾರಿ, ಕೃಷಿ ಕ್ಷೇತ್ರದ ಅಭಿವೃದ್ಧಿ16 ಅಂಶಗಳ ಕಾರ್ಯ ಯೋಜನೆ ಪ್ರಕಟಿಸಿದ ನಿರ್ಮಲಾ

11:26 AM IST

ರೈತರ ಆದಾಯ 2022ರೊಳಗೆ ದ್ವಿಗುಣಗೊಳಿಸಲು ಸರ್ಕಾರ ಕಟಿಬದ್ಧ

ರೈತರಿಗಾಗಿ ಪ್ರಧಾನಿ ಕಿಸಾನ್ ಯೋಜನೆ ಜಾರಿಯಾಗಿದೆ. ರೈತರಿಗಾಗಿ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿ, ರೈತರ ಆದಾಯ 2022ರೊಳಗೆ ದ್ವಿಗುಣಗೊಳಿಸಲು ಸರ್ಕಾರ ಕಟಿಬದ್ಧ

11:24 AM IST

ರೈತರಿಗಾಗಿ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿ

ರೈತರಿಗಾಗಿ ಪ್ರಧಾನಿ ಕಿಸಾನ್ ಯೋಜನೆ ಜಾರಿಯಾಗಿದೆ. ರೈತರಿಗಾಗಿ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿ. ರೈತರ ಆದಾಯ 2022ರೊಳಗೆ ದ್ವಿಗುಣಗೊಳಿಸಲು ಸರ್ಕಾರ ಕಟಿಬದ್ಧ.

11:23 AM IST

ಕಾಶ್ಮೀರಿ ಭಾಷೆಯಲ್ಲಿ ಬಜೆಟ್ ಆರಂಭಿಸಿದ ನಿರ್ಮಲಾ!

ನಮ್ಮ ದೇಶ ದಾಲ್ ಸರೋವರದಲ್ಲಿ ಅರಳುತ್ತಿರುವ ಕಮಲ. ನಮ್ಮ ದೇಶ ನಳನಳಿಸುತ್ತಿರುವ ಹೂವಿನ ತೋಟ, ಕಾಶ್ಮೀರಿ ಶಾಯಿರಿ  ವಾಚಿಸಿದ ನಿರ್ಮಲಾ ಸೀತಾರಾಮನ್

ನಮ್ಮ ದೇಶ ಇಡೀ ಪ್ರಪಂಚಕ್ಕೆ ಪ್ರೀತಿ ಪಾತ್ರ, ಕಾಶ್ಮೀರಿ ಶಾಯರಿ  ವಾಚಿಸಿದ ನಿರ್ಮಲಾ ಸೀತಾರಾಮನ್, ಕಾಶ್ಮೀರಿ ಕವಿ ದೀನಾನಾಥ್ ಕೌಲ್ ಬರೆದ ಶಾಯರಿ ಓದಿದ ನಿರ್ಮಲಾ

ನಮ್ಮ ದೇಶ ಇಡೀ ಪ್ರಪಂಚಕ್ಕೆ ಪ್ರೀತಿ ಪಾತ್ರ, ನಮ್ಮ ದೇಶ ಯುವಕರ ದೇಹದಲ್ಲಿನ ಬಿಸಿ ರಕ್ತ. ಕಾಶ್ಮೀರಿ ಶಾಯರಿ  ವಾಚಿಸಿದ ನಿರ್ಮಲಾ ಸೀತಾರಾಮನ್

11:18 AM IST

ಪ್ರತಿ ಕುಟುಂಬಕ್ಕೆ ತಿಂಗಳಿಗೆ  4 ಸಾವಿರ ರೂ.ಉಳಿತಾಯ

ನಮ್ಮದು 5ನೇ ಅತಿದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ದೇಶ. 40 ಕೋಟಿ ಜನರು ಈ ವರ್ಷ GST ಪಾವತಿಸಿದ್ದಾರೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ  4 ಸಾವಿರ ರೂ.ಉಳಿತಾಯವಾಗುತ್ತಿದೆ

11:17 AM IST

GST ಜಾರಿಯಿಂದ ಗ್ರಾಹಕರಿಗೆ 1 ಲಕ್ಷ ಕೋಟಿ ರೂ.ಲಾಭ!

ಡಿಜಿಟಿಲ್ ಹಣ ವರ್ಗಾವಣೆಯಿಂದಾಗಿ ಜನರಿಗೆ ನೇರವಾಗಿ ಯೋಜನೆ ತಲುಪುತ್ತಿದೆ. ಸರ್ಕಾರ ನೀಡುವ 1 ರೂ.ಯಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತಿತ್ತು. ಸರ್ಕಾರದ ಯೋಜನೆಗಳು ಜನರಿಗೆ ನೇರವಾಗಿ ತಲುಪುತ್ತಿದೆ

ಆಯುಷ್ಮಾನ್ಭವ್, ಸ್ವಚ್ಚ ಭಾರತ್, ಜನ್ಧನ್ ಯೋಜನೆ ಪರಿಣಾಮಕಾರಿ ಜಾರಿ,  ಬ್ಯಾಂಕಿಂಗ್ ವಲಯಕ್ಕೆ ಅವಶ್ಯಕವಾದ ಹಣವನ್ನು ಕೇಂದ್ರ ಒದಗಿಸಿದೆ, GST ಜಾರಿಯಿಂದ ಗ್ರಾಹಕರಿಗೆ 1 ಲಕ್ಷ ಕೋಟಿ ರೂ.ಲಾಭ

11:16 AM IST

16 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆ

16 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ| ತೆರಿಗೆ ಪ್ರಕರಣಗಳಲ್ಲಿ ಶೇ.10ರಷ್ಟು ವಂಚನೆ ಕೇಸ್ ಇಳಿಕೆ| ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಬದಲಾವಣೆಯಿಂದ ಶೆ.20 ಇಂಧನ ಉಳಿತಾಯ

11:12 AM IST

ಸಾರಿಗೆ ಮತ್ತು ಸಂಪರ್ಕ  ವ್ಯವಸ್ಥೆಯಲ್ಲಿ ಬದಲಾವಣೆ

ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಬದಲಾವಣೆಯಿಂದ ಶೆ.20 ಇಂಧನ ಉಳಿತಾಯ. 5 ವರ್ಷದಲ್ಲಿ ಬ್ಯಾಂಕಿಂಗ್ ವಲಯವನ್ನು ಸ್ವಚ್ಛಗೊಳಿಸಲಾಗಿದೆ. ಸಂಕುಚಿತ ರಾಜಕೀಯ ಮೀರಿ ದೇಶ ಬೆಳವಣಿಗೆ ಕಂಡಿದೆ.

11:10 AM IST

ಎಲ್ಲ ವರ್ಗಕ್ಕೂ ಭರವಸೆ ನೀಡುವ ಬಜೆಟ್ ಎಂದ ವಿತ್ತ ಸಚಿವೆ

ಜಿಎಸ್‌ಟಿ ಜಾರಿ ಮೋದಿ ಸರ್ಕಾರದ ಐತಿಹಸಿಕ ನಿರ್ಧಾರ, ರಾಜಕೀಯ ಸ್ಥಿರತರಗಾಗಿ ಮೋದಿ ಸರ್ಕಾರಕ್ಕೆ ಜನಾದೇಶ ಸಿಕ್ಕಿದೆ. ಐದು ವರ್ಷದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

11:07 AM IST

ಸದೃಢ ಆರ್ಥಿಕತೆಯ ಹರಿಕಾರ ಜೇಟ್ಲಿಗೆ ಶ್ರದ್ಧಾಂಜಲಿ!

ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿಗೆ ಬಜೆಟ್ ಮಂಡನೆಗೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. GST ಜಾರಿಗೆ ಅರುಣ್ ಜೇಟ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. GST ಜಾರಿ ಕೇಂದ್ರ ಸರ್ಕಾರದ ಐತಿಹಾಸಿಕ ಕ್ರಮ ಕೈಗೊಂಡಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

11:05 AM IST

2ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ!

ಮೋದಿ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ, ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು, ಕೇಂದ್ರ ಬಜೆಟ್ 2020 ಪ್ರಸ್ತುತಪಡಿಸಲಾರಂಭಿಸಿದ್ದಾರೆ.

11:03 AM IST

ಕೇಂದ್ರ ಬಜೆಟ್ 2020: ಸಂಸತ್ತಿನತ್ತ ಸಂಸದರು

ಬಜೆಟ್ ಮಂಡನೆ ಹಿನ್ದನೆಲೆ ಸಂಸದರು ಸಂಸತ್ತಿನತ್ತ ಆಗಮಿಸಿದ್ದಾರೆ.

10:57 AM IST

ಬಜೆಟ್ 2020ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಬಜೆಟ್ 2020ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ಬಜೆಟ್‌ 2020ಕ್ಕೆ ಅನುಮೋದನೆ ನೀಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದೆ.

10:44 AM IST

ಗೃಹ ಮಂತ್ರಿ ಅಮಿತ್ ಶಾ ಸಂಸತ್ತಿಗೆ ಆಗಮನ

ಸಂಸತ್ತಿಗೆ ಆಗಮಿಸಿದ ಶಾ..

10:42 AM IST

ಮಗಳು ಸೇರಿ ನಿರ್ಮಲಾ ಕುಟುಂಬ ಸಂಸತ್ತಿಗೆ ಆಗಮನ..

2ನೇ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕುಟುಂಬ ಸಂಸತ್ತಿಗೆ ಆಗಮನ.

 

 

10:36 AM IST

'ಗೋಲಿ ಮಾರೋ' ಠಾಕೂರ್ ಸಾಹೇಬರು: ಮನೆಯಲ್ಲಿ ಪೂಜೆ ಮಾಡಿ ಬಂದರು!

11 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ದೇಶದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಶೀಘ್ರದಲ್ಲೇ ಪುಟಿದೇಳಲಿದೆ. ಏ.1ರಿಂದ ಆರಂಭವಾಗಲಿರುವ ಮುಂದಿನ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.6ರಿಂದ ಶೇ.6.5ರವರೆಗೂ ಏರಿಕೆಯಾಗಲಿದೆ ಎಂದು 2019-2020ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಭವಿಷ್ಯ ನುಡಿದಿದೆ. ಜಿಡಿಪಿ ಶೇ.5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಜನರಲ್ಲಿ ಭರವಸೆ ತುಂಬುವ ಮಾತುಗಳನ್ನು ಆಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

10:27 AM IST

ಬಜೆಟ್ ಮಂಡನೆ: ಸಂಸತ್ತಿಗೆ ಆಗಮಿಸಿದ ಪ್ರಧಾನಿ ಮೋದಿ

ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಲಿದ್ದು, ಪ್ರಧಾನಿ ಮೋದಿ ಸಂಸತ್ತಿಗೆ ಆಗಮಿಸಿದ್ದಾರೆ.

 

 

10:24 AM IST

ಸಂಸತ್ತು ಆವರಣಕ್ಕೆ ತಲುಪಿದ ಬಜೆಟ್ ಪ್ರತಿಗಳು

ಕೇಂದ್ರ ಬಜೆಟ್ 2020ರ ಬಜೆಟ್ ಪ್ರತಿಗಳು ಸಂಸತ್ತಿಗೆ ತಲುಪಿವೆ.

10:20 AM IST

ಆದಾಯ ತೆರಿಗೆ ವಿನಾಯ್ತಿ ಏರಿಕೆ?

ಕೇಂದ್ರ ಸರ್ಕಾರ ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಕೆಲ ಷರತ್ತಿಗೆ ಒಳಪಟ್ಟು 5 ಲಕ್ಷ ರು.ವರೆಗೆ ಹೆಚ್ಚಳ ಮಾಡಿದೆ. ಈ ಬಾರಿ ಆದಾಯ ತೆರಿಗೆ ವಿನಾಯ್ತಿಯ ಸ್ಲಾ್ಯಬ್‌ ಅನ್ನು ಇನ್ನಷ್ಟುಏರಿಸುವ ನಿರೀಕ್ಷೆಯನ್ನು ಮಧ್ಯಮ ವರ್ಗದವರು ಹೊಂದಿದ್ದಾರೆ. ಆದಾಯ ತೆರಿಗೆ ವಿನಾಯ್ತಿ ಮಿತಿ ಈಗಿರುವ 5 ಲಕ್ಷ ರು.ನಿಂದ 7 ಲಕ್ಷ ರು.ಗೆ ಏರಿಕೆಯಾದರೆ ಜನಸಾಮಾನ್ಯ ತೆರಿಗೆ ಪಾವತಿದಾರರಿಗೆ ಸಾಕಷ್ಟುಉಳಿತಾಯವಾಗಲಿದೆ. ಈಗಿರುವ ತೆರಿಗೆ ಸ್ಲಾಬ್ ಬದಲಿಸಿ, 7 ಲಕ್ಷ ರು.ಗಳಿಂದ 10 ಲಕ್ಷ ರು.ತನಕದ ಆದಾಯಕ್ಕೆ ಶೇ.10 ಹಾಗೂ 10 ಲಕ್ಷ ರು.ಗಳಿಂದ 20 ಲಕ್ಷ ರು. ಆದಾಯಕ್ಕೆ ಶೇ.20ರಷ್ಟುತೆರಿಗೆ ವಿಧಿಸುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. 20 ಲಕ್ಷ ರು.ಗಳಿಂದ 10 ಕೋಟಿ ರು.ವರೆಗೆ ಶೇ.30 ಮತ್ತು 10 ಕೋಟಿ ರು.ಗೂ ಹೆಚ್ಚಿನ ಆದಾಯಕ್ಕೆ ಶೇ.35 ತೆರಿಗೆ ವಿಧಿಸುವ ಸಾಧ್ಯತೆ ಇದೆ.

10:17 AM IST

ಸಂಸತ್ತಿನತ್ತ ಜಿತೇಂದ್ರ ಸಿಂಗ್, ಜಾವ್ಡೇಕರ್!

ಬಹುನಿರೀಕ್ಷಿತ ಕೇಂದ್ರ ಬಜೆಟ್ 2020 ಮಂಡನೆಯಾಗಲಿದ್ದು, ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಹೀಗಿರುವಾಗ ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಪ್ರಕಾಶ್ ಜಾವ್ಡೇಕರ್ ಸಂಸತ್ತಿಗೆ ಬಂದಿದ್ದಾರೆ.

10:12 AM IST

ಉದ್ಯೋಗ, ಸುಲಭ ಶೈಕ್ಷಣಿಕ ಸಾಲ: ಯುವಜನರ ನಿರೀಕ್ಷೆ ಪೂರೈಸ್ತಾರಾ ನಿರ್ಮಲಾ?

ಸದ್ಯ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಬಾರೀ ಏರಿಕೆಯಾಗುತ್ತಿದೆ. ಆರ್ಥಿಕ ಹಿಂಜರಿಕೆಯಿಂದಾಗಿ ನೌಕರರನ್ನು ಕೆಲಸದಿಂದ ತೆಗೆಯುವುದು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯುವ ಜನರ ಮೊದಲ ಬೇಡಿಕೆ ಉದ್ಯೋಗ. ಇನ್ನು ಶೈಕ್ಷಣಿಕ ಸಾಲದ ನಿಯಮಗಳ ಪುನರ್‌ ಪರಿಶೀಲನೆ ಹಾಗೂ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಕೂಡ ಯುವಜನರು ನಿರೀಕ್ಷಿಸುತ್ತಿದ್ದಾರೆ. ಹಾಗೆಯೇ ಗ್ರಾಹಕ ಉತ್ಪನ್ನಗಳ ಮೇಲಿನ ಜಿಎಸ್ಟಿವಿನಾಯ್ತಿ, ವೈಯಕ್ತಿಕ ನೈರ್ಮಲ್ಯ ಕಾಪಾಡುವ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ, ಪೆಟ್ರೋಲ್‌- ಡೀಸೆಲ್‌ ದರ ಕಡಿತ ಮತ್ತು ಸುಲಭ ಸಾರಿಗೆ ವ್ಯವಸ್ಥೆ ಭಾರತದ ಭವಿಷ್ಯದ ಪ್ರಜೆಗಳ ನಿರೀಕ್ಷೆಗಳು.

10:10 AM IST

ನಿರ್ಮಲಾ ಬಜೆಟ್, ಮಹಿಳೆಯರ ನಿರೀಕ್ಷೆಗಳೇನು?

ಕಳೆದ ವರ್ಷದ ಬಜೆಟ್‌ನಲ್ಲಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯಾ ನಿಧಿಗೆ 891 ಕೋಟಿ ರು. ಮೀಸಲಿಡಲಾಗಿತ್ತು. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಗೆ ಬಜೆಟ್‌ನಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಪ್ರಮುಖ ನಿರೀಕ್ಷೆಗಳಲ್ಲಿ ಒಂದು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ, ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶ, ದೆಹಲಿಯಲ್ಲಿ ಜಾರಿಯಲ್ಲಿರುವ ಮಹಿಳೆಯರಿಗಾಗಿಯೇ ಕ್ಯಾಬ್‌ ವ್ಯವಸ್ಥೆ, ಪಿಂಕ್‌ ಆಟೋ ಮತ್ತು ಪಿಂಕ್‌ ಬಸ್‌ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿ ಮಾಡಬಹುದೆಂಬ ನಿರೀಕ್ಷೆ ಇದೆ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವ ಮಹಿಳೆಯರ ರಕ್ಷಣೆಗೂ ಸರ್ಕಾರ ಭದ್ರತೆಗೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

10:09 AM IST

ಕೇಂದ್ರ ಬಜೆಟ್ 2020: ರೈತರ ನಿರೀಕ್ಷೆಗಳೇನು?

ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಬದುಕನ್ನು ಮೇಲೆತ್ತಲು ಸರ್ಕಾರ ಇದುವರೆಗೆ ಕೈಗೊಂಡ ಯಾವ ಕ್ರಮಗಳೂ ನಿರೀಕ್ಷಿತ ಫಲ ನೀಡಿಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಎನ್ನಬಹುದಾದಂತಹ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಪ್ರಮುಖ ಯೋಜನೆಗಳಿರಲಿವೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ 2022ಕ್ಕೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಮೂರು ವರ್ಷದ ಹಿಂದೆ ಹೇಳಿದ್ದರು. ಅದನ್ನು ಸಾಕಾರಗೊಳಿಸಲು ವಿವಿಧ ಕಾರ್ಯಕ್ರಮಗಳು, ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ, ವ್ಯವಸಾಯ ವಲಯದ ಸಮಗ್ರ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ಕೃಷಿಕರ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ವ್ಯವಸ್ಥೆಯನ್ನು ರೈತರು ಈ ಬಜೆಟ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ.

10:07 AM IST

ಕೇಂದ್ರ ಬಜೆಟ್ 2020 ತಯಾರಾಗಿದ್ದು ಹೀಗೆ!

ಪ್ರತಿ ವರ್ಷವೂ ಸರ್ಕಾರ ತನ್ನ ಆಯವ್ಯಯದ ಲೆಕ್ಕಾಚಾರವನ್ನು ದೇಶದ ಜನರ ಮುಂದಿಡುತ್ತದೆ. ಹಾಗೆಯೇ ಮುಂದಿನ ವರ್ಷದ ಯೋಜನೆಗಳಿಗೆ ರೂಪುರೇಷೆಗಳನ್ನೂ ಹಾಕಿಕೊಂಡು ಅದನ್ನೂ ಜನರ ಮುಂದಿಡುತ್ತದೆ. ಹೀಗೆ ಒಂದು ದಿನ ಲೋಕಸಭೆಯಲ್ಲಿ ಮಂಡನೆಯಾಗುವ ಬಜೆಟ್‌ ಒಂದೆರಡು ದಿನದಲ್ಲಿ ತಯಾರಾಗುವುದಿಲ್ಲ. ಅದಕ್ಕೆ ಹಲವಾರು ತಿಂಗಳ ತಯಾರಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ ಸಿದ್ಧತೆ ಹೇಗಿರುತ್ತದೆ, ಬಜೆಟ್‌ ಪ್ರತಿ ಸಿದ್ಧಪಡಿಸುವುದಕ್ಕೂ ಮುನ್ನ ಏನೆಲ್ಲಾ ಕೆಲಸಗಳು ನಡೆಯುತ್ತವೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

10:05 AM IST

‘ಆರ್ಥಿಕ ಕ್ಯಾನ್ಸರ್ ಗೆ ಕೀಮೋಥೆರಪಿ ಬೇಡ, ರೋಗ ನಿರೋಧಕ ಶಕ್ತಿ ಬೇಕು’

ಬಜೆಟ್ ಮಂಡನೆ ಸಂಬಂಧ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್‌ ಷಾ ಟ್ವೀಟ್ ಮಾಡಿದ್ದು, 'ಆರ್ಥಿಕ ಕ್ಯಾನ್ಸರ್ ಗೆ ಕೀಮೋಥೆರಪಿ ಬೇಡ, ರೋಗ ನಿರೋಧಕ ಶಕ್ತಿ ಬೇಕು.ರೋಗಲಕ್ಷಣಗಳಿಗಲ್ಲ.. ಅವುಗಳ ನೈಜ ಕಾರಣಕ್ಕೆ ಚಿಕಿತ್ಸೆ ಬೇಕು.2020 ಬಜೆಟ್ ಈ ನಿರೀಕ್ಷೆ ಈಡೇರಿಸುತ್ತೆ ಎಂಬ ಭರವಸೆ ಇದೆ. ಸಂಪತ್ತು ಕ್ರೋಡೀಕರಣ ಆರ್ಥಿಕ ರಕ್ಷಣೆಯ ಪ್ರಮುಖ ಭಾಗ. ನಿರ್ಮಲಾ ಸೀತಾರಾಮನ್ ಬಜೆಟ್ ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ

10:00 AM IST

ಸಂಸತ್ತಿಗೆ ತಲುಪಿದ ರಾಜೀವ್ ಗೌಬಾ

ಬಜೆಟ್ ಮಂಡನೆಗೂ ಮುನ್ನ ಸಂಸತ್ತಿನತ್ತ ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ

Image

6:03 PM IST:

ನಿರ್ಮಲಾ ಮಂಡಿಸಿದ್ದು ಟಿಂಕರಿಂಗ್ ಬಜೆಟ್

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

5:46 PM IST:

ಅಂಗನವಾಡಿ ಮೇಡಂ ಕೈಗ ಮೊಬೈಲ್ ಕೊಟ್ಟರೆ ದೇಶ ಉದ್ದಾರವಾಗುತ್ತಾ?

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

5:14 PM IST:

ನಿರ್ಮಲಾ ಬಜೆಟ್ ಮಂಡಿಸಿದ ಬಳಿಕ ಕುಸಿಯಿತು ಶೇರುಪೇಟೆ

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

5:12 PM IST:

ಬೆಂಗಳೂರು ಸೌತ್ ಸಂಸದ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದು ಹೇಗೆ?

ಇಲ್ಲಿ ಕ್ಲಿಕ್ಕಿಸಿ

4:31 PM IST:

ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ಷಣಾರ್ಧದಲ್ಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಒದಗಿಸುವ ವಿನೂತನ ವ್ಯವಸ್ಥೆ ಜಾರಿಗೆ ತಂದಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

4:27 PM IST:

ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು ಕೇಂದ್ರ ಬಜೆಟ್ ಮಮಡಿಸಿದ್ದಾರೆ. ಈ ವೇಳೆ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ್ದರೂ, ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಮಂಡನೆ ವೇಳೆ ನಿರ್ಮಲಾ ಆರೋಗ್ಯ ಹದಗೆಟ್ಟ ಪರಿಣಾಮ ಬಜೆಟ್ ನ ಕೊನೆಯ ಕೆಲ ಪುಟಗಳನ್ನು ಓದಲು ಆಗಲಿಲ್ಲ. 

ಮುಂದೇನಾಯ್ತು? ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

4:25 PM IST:

ನೆಲಕಚ್ಚಿರುವ ಕೈಗಾರಿಕಾ ವಲಯವನ್ನು ಮೇಲೆತ್ತಲು ಈ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಪ್ರಮುಖವಾಗಿ ಮೂಲ ಸೌಕರ್ಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

3:08 PM IST:

ನಿರ್ಮಲಾ ಬಜೆಟ್ ಮಂಡಿಸಿದ ಬೆನ್ನಲ್ಲೇ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಣಕಾಸು ಸಚಿವೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಈ ಬಜೆಟ್ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಅಲ್ಲದೇ ಇದೊಂದು ಅಭಿವೃದ್ಧಿ ಹಾಗೂ ರೈತ ಪರ ಬಜೆಟ್ ಎಂದಿದ್ದಾರೆ.

3:05 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

3:01 PM IST:

ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಯಿಸುತ್ತಾ 'ಇದು ಇತಿಹಾಸದಲ್ಲೇ ಅತಿ ಉದ್ದದ ಬಜೆಟ್ ಭಾಷಣವಾಗಿರಬಹುದು ಆದರೆ ಬಜೆಟ್‌ನ್ಲಲಿ ಏನೂ ಇಲ್ಲ, ಇದು ಸಂಪೂರ್ಣ ಟೊಳ್ಳು' ಎಂದಿದ್ದಾರೆ

2:55 PM IST:

ಮೋದಿ ಸರ್ಕಾರದ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಬಜೆಟ್ ಮಂಡಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಿದೆ. ತೆರಿಗೆದಾರರಿಗೂ ಸಿಹಿ ಸುದ್ದಿ ಕೊಟ್ಟಿರುವ ನಿರ್ಮಲಾ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಬಿಡಿ ಮುಟ್ಟಿಸಿದ್ದಾರೆ. ಹಾಗಾದ್ರೆ ಬಜೆಟ್ ಜಾರಿ ಬಳಿಕ ಯಾವುದೆಲ್ಲಾ ಅಗ್ಗವಾಗುತ್ತೆ? ಯಾವೆಲ್ಲಾ ವಸ್ತುಗಳು ದುಬಾರಿಯಾಗುತ್ತೆ? ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

2:54 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.

ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

2:02 PM IST:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಮಂಡನೆ ಬಳಿಕ ಈ ಕುರಿತಾದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ

2:00 PM IST:

ಆಮದು ವೈದ್ಯೋಪಕರಣಗಳ ಮೇಲೆ ಸೆಸ್ , ಚಪ್ಪಲಿ, ಪೀಠೋಪಕರಣ ದುಬಾರಿ

1:49 PM IST:

ಸಹಕಾರಿ ಸಂಘಗಳ ಹೋರಾಟಕ್ಕೆ ಸಿಕ್ತು ದೊಡ್ಡ ಗೆಲುವು, ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೇ.30ರಿಂದ 22ಕ್ಕೆ ಇಳಿಕೆ, ತೆರಿಗೆ ಇಳಿಕೆಗೆ 16 ವರ್ಷದಿಂದ ನಡೆದ  ಹೋರಾಟಕ್ಕೆ ಮನ್ನಣೆ
 

1:51 PM IST:

ಪಾನ್ ಕಾರ್ಡ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ!, ಆಧಾರ್ ಸಂಖ್ಯೆಯ ಆಧಾರದ ಮೇಲೆ ಪ್ಯಾನ್ ಕಾರ್ಡ್ ಮಂಜೂರು

1:42 PM IST:

ಬಾಕಿ ತೆರಿಗೆ ಕಟ್ಟಿದರೆ ದಂಡ, ಬಡ್ಡಿ ಮನ್ನಾಗೆ ಸ್ಕೀಮ್

ಯಾವುದೇ ವಿವಾದ ಇಲ್ಲ.. ಬರೀ ನಂಬಿಕೆ - ಸ್ಕೀಮ್

ಹಿಂದಿನ ಸಾಲಿನಲ್ಲಿ ಸಬ್ ಕಾ ವಿಶ್ವಾಸ್ ಹೆಸರಲ್ಲಿ ತೆರಿಗೆ\

ತೆರಿಗೆ ವಿವಾದ ಬಗೆಹರಿಸಲು ಹೊಸ ಸ್ಕೀಮ್ ಜಾರಿಗೆ

2020ರ ಮಾರ್ಚ್ ಒಳಗೆ ತೆರಿಗೆ ಬಾಕಿ ಕಟ್ಟಿದ್ರೆ ಸಾಕು

ತೆರಿಗೆ ಮೇಲೆ ಯಾವುದೇ ಬಡ್ಡಿ ವಿಧಿಸುವ ಪ್ರಶ್ನೆ ಇಲ್ಲ

ಯಾವುದೇ ದಂಡ, ಯಾವುದೇ ತೆರಿಗೆ ವಿಧಿಸುವುದಿಲ್ಲ

4.83 ಲಕ್ಷ ನೇರ ತೆರಿಗೆ ಕೇಸುಗಳ ಇತ್ಯರ್ಥಕ್ಕೆ ಸ್ಕೀಮ್
 

1:37 PM IST:

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್: ಡೆವಲಪರ್ಸ್ ಕಂಪನಿಗಳಿಗೆ ಒಂದು ವರ್ಷ ತೆರಿಗೆ ವಿನಾಯಿತಿ, ಡೆವಲಪರ್ಸ್ ಗಳಿಸುವ ಲಾಭಕ್ಕೆ ತೆರಿಗೆ ಪಾವತಿಗೆ ವಿನಾಯಿತಿ, ವಸತಿಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ವಿನಾಯ್ತಿ

1:36 PM IST:

ಸ್ಟಾರ್ಟ್ ಅಪ್ ಕಂಪನಿಗಳಿಗೆ ಬಂಪರ್, 5 ವರ್ಷ ಸ್ಟಾರ್ಟ್ ಅಪ್ ಕಂಪನಿಗಳಿಗೆ ಯಾವುದೇ ತೆರಿಗೆ ಇಲ್ಲ, ಸ್ಟಾರ್ಟ್ ಅಪ್ ಕಂಪನಿಗಳ ಉತ್ತೇಜನಕ್ಕೆ ಕೇಂದ್ರದ ಕೊಡುಗೆ

1:35 PM IST:

ಅತ್ತ ಬಜೆಟ್ ಮಂಡನೆ ಇತ್ತ ಷೇರು ಮಾರುಕಟ್ಟೆ ತಲ್ಲಣ, 582.87 ಅಂಕ ಇಳಿಕೆ

1:30 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ತೆರಿಗೆದಾರರಿಗೆ ಭಾರೀ ವಿನಾಯ್ತಿ ಘೋಷಿಸಿರುವ ಮೋದಿ ಸರ್ಕಾರ, ಹೊಸ ಟ್ಯಾಕ್ಸ್ ಸ್ಲ್ಯಾಬ್ ಪರಿಚಯಿಸಿದೆ.ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

1:29 PM IST:

ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು, ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು ಘೋಷಣೆ
 

1:28 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ.  ದೇಶದ ಮಹಿಳಾ ಸಮುದಾಯದತ್ತ ತಮ್ಮ ಚಿತ್ತ ಹರಿಸಿರುವ ನಿರ್ಮಲಾ ಸೀತಾರಾಮನ್, ಮಹಿಳಾ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.

ಸಂಪರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

1:23 PM IST:

ವೈಯಕ್ತಿಕ ತೆರಿಗೆ ಡೀಟೇಲ್ಸ್..

5 ಲಕ್ಷ ಆದಾಯದವರೆಗೂ ತೆರಿಗೆ ವಿನಾಯಿತಿ

5 ಲಕ್ಷದಿಂದ 7.5 ಲಕ್ಷದವರೆಗೆ - 10% ತೆರಿಗೆ

7.5ಲಕ್ಷದಿಂದ 10 ಲಕ್ಷದವರೆಗೆ - 15% ತೆರಿಗೆ

10 ಲಕ್ಷದಿಂದ 12.5 ಲಕ್ಷದವರೆಗೆ - 20% ತೆರಿಗೆ

12.5 ಲಕ್ಷದಿಂದ 15 ಲಕ್ಷದವರೆಗೆ - 25% ತೆರಿಗೆ

15 ಲಕ್ಷ ಮೇಲ್ಪಟ್ಟು ಆದಾಯ - 30% ತೆರಿಗೆ

1:17 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರ ಅದರಲ್ಲೂ ರೈಲ್ವೇ ಇಲಾಖೆಯ ಅಭಿವೃದ್ಧಿಗೆ ನಿರ್ಮಲಾ ಭರಪೂರ ಯೋಜನೆಗಳನ್ನು ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

1:14 PM IST:

ವೈಯಕ್ತಿಕ ತೆರಿಗೆಯಲ್ಲಿ ಭಾರಿ ಇಳಿಕೆ: 5ರಿಂದ 7.5 ಲಕ್ಷ ಆದಾಯಕ್ಕೆ ಶೇಕಡ 10ರಷ್ಟು ತೆರಿಗೆ, ಶೇಕಡ 20ರಷ್ಟು ತೆರಿಗೆ ಬದಲು ಶೇಕಡ 10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷ ಆದಾಯಕ್ಕೆ ಶೇಕಡ 15 ತೆರಿಗೆ, 10 ಲಕ್ಷದಿಂದ 12.5 ಲಕ್ಷ ಆದಾಯಕ್ಕೆ ಶೇ.20ರಷ್ಟು ತೆರಿಗೆ, 12.5 ಲಕ್ಷದಿಂದ 15 ಲಕ್ಷ ಆದಾಯಕ್ಕೆ, 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ, 2.5 ಲಕ್ಷ ಆದಾಯದವರಿಗೆ ಯಾವುದೇ ತೆರಿಗೆ ಇರಲ್ಲ, 2.5 ಲಕ್ಷದಿಂದ 5 ಲಕ್ಷದವರೆಗೆ ಶೇಕಡ 5ರಷ್ಟು ತೆರಿಗೆ

1:09 PM IST:

ಖರ್ಚೆಷ್ಟು? ಆದಾಯ ಎಷ್ಟು?: 2020-2021 - ಖರ್ಚು 30.42 ಲಕ್ಷ ಕೋಟಿ ರೂಪಾಯಿ, 2019-2021 - ಆದಾಯ 22.46 ಲಕ್ಷ ಕೋಟಿ ರೂಪಾಯಿ

1:07 PM IST:

ವಿತ್ತೀಯ ಕೊರತೆ ಟಾರ್ಗೆಟ್ 3.5%: ಇತ್ತೀಚೆಗೆ ಹೂಡಿಕೆಹೆಚ್ಚಳಕ್ಕೆ ಆರ್ಥಿಕ ಸುಧಾರಣೆ ಮಾಡಿದ್ದೇವೆ, 2019-20ರ ಸಾಲಿನಲ್ಲಿ ವಿತ್ತೀಯ ಕೊರತೆ ಶೇಕಡ 3.8 ಇತ್ತು, 2020-21ರಲ್ಲಿ ವಿತ್ತೀಯ ಕೊರತೆ 3.5ಕ್ಕೆ ಇಳಿಕೆ ಬಗ್ಗೆ ನಿರೀಕ್ಷೆ

1:06 PM IST:

ಸರ್ಕಾರದ ಖರ್ಚು  30.42 ಲಕ್ಷ ಕೋಟಿ ರೂ., ಅಂದಾಜು ತೆರಿಗೆ ಸಂಗ್ರಹ 22.46 ಲಕ್ಷ ಕೋಟಿ ರೂ. ಗುರಿ, ಈ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆ ಶೇ.3.8, GDP ಅಂದಾಜು ಬೆಳವಣಿಗೆ ಶೇ.10ರಷ್ಟು ನಿರೀಕ್ಷೆ

1:03 PM IST:

ಮೂಲಸೌಕರ್ಯ ಅಭಿವೃದ್ಧಿಗೆ 22 ಸಾವಿರ ಕೋಟಿ ರೂಪಾಯಿ, ಕೈಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೂಲಸೌಕರ್ಯಗ್ಗೆ ಆದ್ಯತೆ

1:01 PM IST:

ಉದ್ಯೋಗ ಹೆಚ್ಚಳದಿಂದ 5 ಲಕ್ಷ ಕಂಪನಿಗಳಿಗೆ ಸಹಾಯ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಸಾಲ ಸೌಲಭ್ಯ, IDBI ಬ್ಯಾಂಕ್ ಸಂಪೂರ್ಣ ಖಾಸಗೀಕರಣ, ಕಾರ್ಪೋರೇಟ್ ಬಾಂಡ್ಗಳಲ್ಲಿ ಹೂಡಿಕೆ ಶೇ.9 ರಿಂದ ಶೇ.15ಕ್ಕೆ ಏರಿಕೆ, ಅನಿವಾಸಿ ಭಾರತೀಯರಿಗೆ ಬಂಡವಾಳ ಹೂಡಲು ವಿಶೇಷ ಯೋಜನೆ

1:01 PM IST:

ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ, GST ಬಾಕಿ 2 ಕಂತುಗಳಲ್ಲಿ ರಾಜ್ಯಕ್ಕೆ ವರ್ಗಾವಣೆ, ನಗದು ಕೊರತೆ ನೀಗಿಸಲು ಕ್ರಮ

12:56 PM IST:

ಠೇವಣಿ ವಿಮೆ ಮೊತ್ತ 5 ಲಕ್ಷ ರೂ.ಗೆ ಏರಿಕೆ: ಠೇವಣಿದಾರರ ಹಣ ಬ್ಯಾಂಕ್ಗಳಲ್ಲಿ ಸುರಕ್ಷತೆಗೆ ಕ್ರಮ, ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 3.50 ಲಕ್ಷ ಕೋಟಿ ಬಂಡವಾಳ. ಠೇವಣಿ ವಿಮೆ ಮೊತ್ತ 1 ರಿಂದ 5 ಲಕ್ಷ ರೂ.ಗೆ ಏರಿಕೆ. ಬ್ಯಾಂಕ್ಗಳಲ್ಲಿ  ಡೆಪಾಸಿಟ್ ಇಟ್ಟವರು ಭಯಪಡಬೇಕಾಗಿಲ್ಲ. ಖಾಸಗಿ ಬ್ಯಾಂಕ್ಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು

12:53 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರದ ಬಳಿಕ ಶಿಕ್ಷಣ ಕ್ಷೇತ್ರದತ್ತ ನಿರ್ಮಲಾ ಸೀತಾರಾಮನ್ ಗಮನ ಕೇಂದ್ರೀಕರಿಸಿದ್ದಾರೆ.ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:52 PM IST:

2022ರಲ್ಲಿ ಭಾರತದಲ್ಲಿ G-20 ಶೃಂಗ ಸಮ್ಮೇಳನ, G-20 ಶೃಂಗ ಸಮ್ಮೇಳನಕ್ಕೆ 100 ಕೋಟಿ ರೂ..
 

12:50 PM IST:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ತಮ್ಮ 2ನೇ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. 2020ರ ಮೊದಲ ಬಜೆಟ್ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು ಬಜೆಟ್ ತಯಾರಿಕೆಯ ವೇಳೆಯೇ ದುರಂತವೊಂದು ಸಂಭವಿಸಿದ್ದರು, ಅದನ್ನು ಲೆಕ್ಕಿಸದೇ ಬಜೆಟ್  ಕಾರ್ಯದಲ್ಲಿ ಭಾಗಿಯಾದ ಅಧಿಕಾರಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:54 PM IST:

ಲಡಾಖ್ ಪ್ರಾಂತ್ಯಕ್ಕೆ 5,958 ಕೋಟಿ ರೂ. ಅನುದಾನ: ಜಮ್ಮು-ಕಾಶ್ಮೀರಕ್ಕೆ 30,757 ಕೋಟಿ ರೂ. ವಿಶೇಷ ಅನುದಾನ ಘೋಷಣೆ, ಜಮ್ಮು-ಕಾಶ್ಮೀರಕ್ಕೆ 30,757 ಕೋಟಿ ರೂ. ವಿಶೇಷ ಅನುದಾನ ಘೋಷಣೆ

12:46 PM IST:

ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆ, ನಾನ್ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗೆ ಸಂಸ್ಥೆ, ನಾನ್ ಗೆಜೆಟೆಡ್ ಅಧಿಕಾರಿಗಳ ನೇಮಕ ಸುಧಾರಣೆ
 

12:45 PM IST:

ಟ್ಯಾಕ್ಸ್ ಪೇಯರ್ ಚಾರ್ಟರ್: ತೆರಿಗೆದಾರರಿಗೆ ಕಿರುಕುಳ ನೀಡಲು ಇಚ್ಛೆ ಇಲ್ಲ, ತೆರಿಗೆ ವಿಚಾರದಲ್ಲಿ ಶೋಷಣೆ ಪ್ರಶ್ನೆಯೇ ಇಲ್ಲ, ತೆರಿಗೆದಾರರನ್ನು ನಮ್ಮ ಸರ್ಕಾರ ಶೋಷಿಸಲ್ಲ

12:44 PM IST:

ನಮ್ಮ ಸರ್ಕಾರದ ಗುರಿ: ಸ್ವಚ್ಛತೆಗೆ ನಮ್ಮ ಸರ್ಕಾರದ ಮೊದಲ ಆದ್ಯತೆ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ನಮ್ಮ ಆದ್ಯತೆ, ಯುವಜನರ ಆಕಾಂಕ್ಷೆ ಪೂರೈಕೆ ಪ್ರಾಧಾನ್ಯತೆ, ಅಭಿವೃದ್ಧಿ ಪರ ನೀತಿ ಜಾರಿಗೆ ನಮ್ಮ ಆದ್ಯತೆ, ಜನರ ಮೇಲೆ ನಂಬಿಕೆ, ವಿಶ್ವಾಸ ನಮ್ಮ ಮಂತ್ರ

12:39 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಬಳಿಕ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿರುವ ವಿತ್ತ ಸಚಿವೆ, ಆರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:38 PM IST:

ದೇಶದಲ್ಲಿ ಭದ್ರತೆ, ಸುರಕ್ಷತೆ, ಪ್ರೇಮ, ಸಂಪತ್ತು ಎಂಬ ಐದು ಅಂಶಗಳಿರಬೇಕು, ಒಳ್ಳೆಯ ದೇಶ ಹೇಗಿರಬೇಕೆಂದು ತಿರುವಳ್ಳುವರ್ ಬರೆದಿದ್ದ ಕವಿತೆ. ತಮಿಳು ಕವಿಯ ತಿರುವಳ್ಳುವರ್ ಕವನ ವಾಚಿಸಿದ ನಿರ್ಮಲಾ

12:35 PM IST:

ಹೆಲ್ತ್ ಫಾರ್ ಆಲ್: ಆಯುಷ್ಮಾನ್ ಭಾರತ್ ಯೋಜನೆ ಅಡಿ ಎಲ್ಲರ ಆರೋಗ್ಯ ಕಾಳಜಿ, ದೇಶದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವುದೇ ಗುರಿ, ರಾಷ್ಟ್ರೀಯ ಭದ್ರತೆ ನಮ್ಮ ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆ


 

12:34 PM IST:

ಕ್ಲೀನ್ ಏರ್ ಸ್ಕೀಮ್ ಗೆ 4400 ಕೋಟಿ: 10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಸ್ವಚ್ಛ ಗಾಳಿ ವಾತಾವರಣ, ಇದೇ ಉದ್ದೇಶಕ್ಕಾಗಿ 4,400 ಕೋಟಿ ರೂಪಾಯಿ ಕೇಂದ್ರದ ಹಣ, ವಾಯು ಮಾಲಿನ್ಯ ನಿಯಂತ್ರಿಸಿ ಸ್ವಚ್ಛ ಗಾಳಿ ನಗರ ಮಾಡಲು ಗುರಿ

12:33 PM IST:

ಪರಿಶಿಷ್ಟ ಜಾತಿ ಅಭಿವೃದ್ಧಿಗೆ 85,000 ಕೋಟಿ ರೂಪಾಯಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 53,700 ಕೋಟಿ ರೂಪಾಯಿ, ದಿವ್ಯಾಂಗರ ಅಭಿವೃದ್ಧಿಗಾಗಿ 59 ಸಾವಿರ ಕೋಟಿ ರೂಪಾಯಿ

12:28 PM IST:

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರ: ದೇಶದ 5 ಪುರಾತತ್ವ ತಾಣಗಳ ಅಭಿವೃದ್ಧಿಗೆ ಯೋಜನೆ, ರಾಂಚಿಯಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆಗೆ ಸ್ಕೀಮ್. ಸಂಸ್ಕೃತಿ ಕ್ಷೇತ್ರಕ್ಕೆ 3,154 ಕೋಟಿ ರೂ, ಪ್ರವಾಸೋದ್ಯಮ ಕ್ಷೇತ್ರಕ್ಕೆ 2,500 ಕೋಟಿ ರೂಪಾಯಿ 

12:29 PM IST:

ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ವಿಫಲ ಎಂದು ಘೋಷಣೆ. ನಿರ್ಮಲಾ ಹೇಳಿಕೆಗೆ ಪ್ರತಿಪಕ್ಷಗಳ ಆಕ್ಷೇಪ,ಗದ್ದಲ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಯಶಸ್ವಿ

12:23 PM IST:

ಖಾಸಗಿ ಡಾಟಾ ಸೆಂಟರ್ ಪಾರ್ಕ್ ನಿರ್ಮಾಣ, ನೇರ ನಗದು ಯೋಜನೆ ವಿಸ್ತರಣೆ, ರಾಷ್ಟ್ರೀಯ ಅನಿಲ ಗ್ರಿಡ್ 27 ಸಾವಿರ ಕಿಮೀ ವಿಸ್ತರಣೆ. ಭಾರತ್ ನೆಟ್ ಯೋಜನೆಗೆ  6 ಸಾವಿರ ಕೋಟಿ ಅನುದಾನ, ಅಂಗನವಾಡಿಗಳಿಗೂ ಡಿಜಿಟಲ್  ಸೌಲಭ್ಯ. ಅಂಗನವಾಡಿಗಳು ಹೈಟೆಕ್, 1 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಇಂಟರ್ನೆಟ್ ಸೌಲಭ್ಯ. 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್. 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್. 10 ಕೋಟಿ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಪೂರೈಕೆ

12:16 PM IST:

ಮನೆ ಮನೆಗೂ ವಿದ್ಯುತ್ ಪೂರೈಕೆ: ಮನೆ ಮನೆಗೆ ವಿದ್ಯುತ್ ಪೂರೈಸುವುದು ಕೇಂದ್ರದ ಗುರಿ, ಪ್ರೀ ಪೇಯ್ಡ್ ಮೀಟರ್ಸ್ ಅಂದ್ರೆ ಸ್ಮಾರ್ಟ್ ಮೀಟರ್ಸ್, ವಿದ್ಯುತ್ ಇಲಾಖೆಗೆ 22,000 ಕೋಟಿ ರೂ ಅನುದಾನ, ವಿದ್ಯುತ್ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರ, 3 ವರ್ಷಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ, ವಿದ್ಯುತ್ ಬಳಕೆದಾರರಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, ಇಂಧನ ವಲಯಕ್ಕೆ 22 ಸಾವಿರ ಕೋಟಿ ರೂ. ಅನುದಾನ, ವಿದ್ಯುತ್ ಬಳಕೆದಾರರಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, 2024ರೊಳಗೆ 100ಕ್ಕೂ ಹೆಚ್ಚು ಹೊಸ ಏರ್ಪೋರ್ಟ್ ನಿರ್ಮಾಣ, ಸಾರಿಗೆ ವಲಯಕ್ಕೆ 1.7 ಲಕ್ಷ  ಕೋಟಿ ಅನುದಾನ ಘೋಷಣೆ

12:15 PM IST:

ರೈಲು ಯೋಜನೆಗಳು: ತೇಜಸ್ ಮಾದರಿ ರೈಲುಗಳ ಹೆಚ್ಚಳಕ್ಕೆ ಯೋಜನೆ, ಪ್ರವಾಸಿ ತಾಣಗಳನ್ನು ತಲುಪುವ ತೇಜಸ್ ರೈಲು

ಬೆಂಗಳೂರು ಸಬ್ ಅರ್ಬನ್ ರೈಲು: ಬೆಂಗಳೂರು ಸಬ್ ಅರ್ಬನ್ ರೈಲಿಗೆ 18600 ಕೋಟಿ ರೂ..!, ಮೆಟ್ರೋ ಮಾದರಿಯಲ್ಲಿಯೇ ಸಬ್ ಅರ್ಬನ್ ರೈಲು ಸ್ಕೀಮ್

ಸಾರಿಗೆ ಕ್ಷೇತ್ರಕ್ಕೆ 1.7 ಲಕ್ಷ ಕೋಟಿ ರೂಪಾಯಿ ಮೀಸಲು

2 ಸಾವಿರ ಕಿಮೀ ಕೋಸ್ಟಲ್  ಕಾರಿಡಾರ್ ನಿರ್ಮಾಣಕ್ಕೆ ಕ್ರಮ, 9 ಸಾವಿರ ಕಿಮೀ  ಎಕನಾಮಿಕ್ ಕಾರಿಡಾರ್ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು,ಸರಕು ಸಾಗಣೆ ನೀತಿ ಜಾರಿ

ದೆಹಲಿ- ಮುಂಬೈ ಎಕ್ಸ್ಪ್ರೆಸ್ ವೇ 2023ರೊಳಗೆ ಪೂರ್ಣ, ರೈಲ್ವೆ ನಿಲ್ದಾಣಗಳಲ್ಲಿ  550 ವೈಫೈ ವ್ಯವಸ್ಥೆ, ಚೆನ್ನೈ- ಬೆಂಗಳೂರು ಎಕ್ಸ್ಪ್ರೆಸ್ ವೇ ಘೋಷಣೆ

ಮುಂಬೈ- ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು, ದೇಶಾದ್ಯಂತ 120 ಹೊಸ ರೈಲುಗಳ ಘೋಷಣೆ, 27 ಸಾವಿರ ಕಿಮೀ.ವರೆಗೆ ರೈಲ್ವೆ ಹಳಿಗಳ ವಿದ್ಯುದೀಕರಣ

12:08 PM IST:

ಈ ಸಾಲಿನಲ್ಲೇ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಕಾಮಗಾರಿ, ಮೂಲಸೌಕರ್ಯ ಉತ್ತೇಜನಕ್ಕೆ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ, 2023ರೊಳಗೆ ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪೂರ್ಣ

12:06 PM IST:

ಜವಳಿ ಉದ್ಯಮಕ್ಕೆ 1,480 ಕೋಟಿ ರೂಪಾಯಿ ಅನುದಾನ, ನ್ಯಾಷನಲ್ ಟೆಕ್ ಟೆಕ್ಸ್ ಟೈಲ್ ಮಿಷನ್ ಗಾಗಿ ಹಣ ಫಿಕ್ಸ್..!, ದೇಶದಲ್ಲಿ ಜವಳಿ ಉದ್ಯಮಿ ಆಧುನೀಕರಣಕ್ಕಾಗಿ ಯೋಜನೆ

12:06 PM IST:

ರಫ್ತು ಮಾಡುವ ಕೈಗಾರಿಕೋದ್ಯಮಿಗಳಿಗೆ ವಿಮಾ ಯೋಜನೆ, ನಿರ್ವಿಕ್ ಹೆಸರಿನಲ್ಲಿ ಕೈಗಾರಿಕೆಗಳಿಗಾಗಿ ನಿರ್ವಿಕ್ ಯೋಜನೆ, ದೇಶದ ಕೈಗಾರಿಕೋದ್ಯಮಿಗಳ ರಫ್ತು ಉತ್ತೇಜನಕ್ಕಾಗಿ ನೆರವು, ದೇಶದ ಪ್ರತಿ ಜಿಲ್ಲೆಗಳಿಂದಲೂ ರಫ್ತು ಉತ್ತೇಜನಕ್ಕೆ PM ಗುರಿ

12:05 PM IST:

ಕೈಗಾರಿಕಾಭಿವೃದ್ಧಿಗೆ 27,300 ಕೋಟಿ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ 27,300 ಕೋಟಿ ರೂ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆ ಅಭಿವೃದ್ಧಿಗೆ ನೆರವು

12:03 PM IST:

ಕೈಗಾರಿಕಾ ಕ್ಷೇತ್ರಕ್ಕೆ 27 ಸಾವಿರ ಕೋಟಿ ರೂ. ಅನುದಾನ, ರಫ್ತು ಉತ್ತೇಜನಕ್ಕೆ ಈ ವರ್ಷದಿಂದ ತೆರಿಗೆ ಕಡಿತ, ರಫ್ತುದಾರರಿಗೆ ಹೊಸ ವಿಮಾ ಯೋಜನೆ  ಘೋಷಣೆ

ಕೈಗಾರಿಕಾ ಕ್ಷೇತ್ರಕ್ಕೆ 27 ಸಾವಿರ ಕೋಟಿ ರೂ. ಅನುದಾನ, 5 ವರ್ಷದಲ್ಲಿ 100 ಲಕ್ಷ  ಕೋಟಿ ಹೂಡಿಕೆಗೆ ಕ್ರಮ, ರಾಷ್ಟ್ರೀಯ ಮೂಲಸೌಲಭ್ಯ ಯೋಜನೆಗೆ 100 ಲಕ್ಷ ಕೋಟಿ ಹೂಡಿಕೆ

 

 

12:01 PM IST:

ಸ್ಮಾರ್ಟ್ ಅಪ್ಗಳಿಗೆ 5 ಸ್ಮಾರ್ಟ್ ಸಿಟಿ ನಿರ್ಮಾಣ. ಸ್ಟಾರ್ಟ್ಅಪ್ ಗಳಿಗೆ ಹೆಚ್ಚಿನ ಉತ್ತೇಜನಕ್ಕೆ ಪ್ರತ್ಯೇಕ ಘಟಕ. ಸ್ಟಾರ್ಟ್ಅಪ್ ಗಳಿಗೆ ಹೆಚ್ಚಿನ ಉತ್ತೇಜನ

ರಾಷ್ಟ್ರೀಯ ಜವಳಿ ಮಿಷನ್ ಗೆ 1480 ಕೋಟಿ ರೂ. ಅನುದಾನ. ಕೈಗಾರಿಕೆಗಳಿಗೆ ಭೂಮಿ ಕೊಡುವ ಕೈಗಾರಿಕಾ ಘಟಕಗಳ ಸ್ಥಾಪನೆ. ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಗೆ ಒತ್ತು

12:39 PM IST:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಬಜೆಟ್ ಆರಂಭದಲ್ಲೇ ಕೃಷಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಿರುವ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 16 ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

11:57 AM IST:

ಸರಸ್ವತಿ ಸಿಂಧು ನಾಗರಿಕತೆ ಬಗ್ಗೆ ಪ್ರಸ್ತಾಪ. ಕೌಶಲ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನುದಾನ. ಶಿಕ್ಷಣ ಕ್ಷೇತ್ರಕ್ಕೆ 99 ಸಾವಿರ ಕೋಟಿ ರೂ. ಮೀಸಲು

ನಿರ್ಮಲಾ ಹೇಳಿಕೆಗೆ ಪ್ರತಿಪಕ್ಷಗಳ ಆಕ್ಷೇಪ. ಸರಸ್ವತಿ ಸಿಂಧು ನಾಗರಿಕತೆ ಬಗ್ಗೆ ಪ್ರಸ್ತಾಪ. ನಾವು ಸಿಂಧು ನಾಗರಿಕತೆಯಿಂದ ಮುಂದುವರೆದವರು

11:56 AM IST:

ಸಮಾಜದ ಎಲ್ಲ ವರ್ಗದ ನಿರೀಕ್ಷೆಗಳನ್ನು ಈ ಬಜೆಟ್ ಈಡೇರಿಸಲಿದೆ. 5 ವರ್ಷದಲ್ಲಿ ಕೇಂದ್ರ ಸರ್ಕಾರದ ಆಡಳಿತ ಸುಧಾರಣೆ ಕಂಡಿದೆ. ಈ ಬಜೆಟ್ ಯುವಕರಿಗೆ  ಉದ್ಯೋಗದ ಭರವಸೆ ನೀಡಲಿದೆ

ಸ್ಟಡಿ ಇನ್ ಇಂಡಿಯಾ- ಭಾರತದಲ್ಲೇ ಶಿಕ್ಷಣ ಯೋಜನೆ ಘೋಷಣೆ. ರಾಷ್ಟ್ರೀಯ ಪೊಲೀಸ್ ವಿವಿ ಅಪರಾಧ ಶಾಸ್ತ್ರ ವಿವಿ ಸ್ಥಾಪನೆ. ಪದವಿಗೂ ಆನ್ಲೈನ್ ಶಿಕ್ಷಣ ವ್ಯವಸ್ಥೆ 

ವೈದ್ಯರ ಕೊರತೆ ನೀಗಿಸಲು ಪರಿಣಾಮಕಾರಿ ಕ್ರಮ. ರಿಯಾಯಿತಿ ದರದಲ್ಲಿ  ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ಮೆಡಿಕಲ್ ಕಾಲೇಜು ಸ್ಥಾಪನೆ. ಜಿಲ್ಲಾಆಸ್ಪತ್ರೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಪ್ರೋತ್ಸಾಹ

11:53 AM IST:

* ಹೊಸ ಶಿಕ್ಷಣ ನೀತಿಗೆ 2 ಲಕ್ಷ ಸಲಹೆಗಳು ಬಂದಿವೆ. ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿ ಘೋಷಣೆ. ಜಲಜೀವನ ಯೋಜನೆಗೆ 3.60 ಲಕ್ಷ ಕೋಟಿ ರೂ. ಅನುದಾನ

* ನಗರ, ಸ್ಥಳೀಯ ಸಂಸ್ಥೆಗಳಲ್ಲಿ 1 ವರ್ಷ ತರಬೇತಿ. 2021ರೊಳಗೆ 150 ವಿವಿಗಳಲ್ಲಿ ಹೊಸ ಕೋರ್ಸ್ಗಳ ಆರಂಭ. ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ

* ಸಮಾಜದ ಎಲ್ಲ ವರ್ಗದ ನಿರೀಕ್ಷೆಗಳನ್ನು ಈ ಬಜೆಟ್ ಈಡೇರಿಸಲಿದೆ. ಪದವಿಗೂ ಆನ್ಲೈನ್ ಶಿಕ್ಷಣ. ಯುವ ಎಂಜಿನಿಯರ್ಗಳಿಗೆ 1 ವರ್ಷ ಇಂಟರ್ನ್ಶಿಪ್ 

11:49 AM IST:

ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂ. ಅನುದಾನ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಅನುದಾನ. ಎಲ್ಲ ಜಿಲ್ಲೆಗಳಿಗೂ  ಜನೌಷಧ ಕೇಂದ್ರ ವಿಸ್ತರಣೆ

11:47 AM IST:

12 ಕಾಯಿಲೆಗಳಿಗೆ ಇಂದ್ರಧನುಷ್ ಯೋಜನೆ ವಿಸ್ತರಣೆ. 12 ಕಾಯಿಲೆಗಳಿಗೆ ಇಂದ್ರಧನುಷ್ ಯೋಜನೆ ವಿಸ್ತರಣೆ. ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ. ಮೊದಲ ಹಂತದಲ್ಲಿ 112 ಜಿಲ್ಲೆಗಳಲ್ಲಿ ಆಸ್ಪತ್ರೆ ನಿರ್ಮಾಣ. ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ

20 ಸಾವಿರ ಆಸ್ಪತ್ರೆಗಳ ಜತೆ ಆಯುಷ್ಮಾನ್ ಭಾರತ್ ಸಹಭಾಗಿತ್ವ. ಆಯುಷ್ಮಾನ್ ಯೋಜನೆಗೆ ಸಹಭಾಗಿತ್ವ ಇಲ್ಲದ ಜಿಲ್ಲೆಗಳಿಗೆ ಪ್ರಾಮುಖ್ಯತೆ. ಕ್ಷಯ ರೋಗ ಸೋತರೆ ದೇಶ ಗೆಲ್ಲುತ್ತದೆ

11:44 AM IST:

*ಗ್ರಾಮೀಣ ಯುವಕರ ಮೀನುಗಾರಿಕೆಗೆ ಒತ್ತು, 500 ಸಹಕಾರ ಸಂಘಗಳ ಸ್ಥಾಪನೆ. ಹೈನುಗಾರಿಕೆಗೂ ನರೇಗಾ ಯೋಜನೆ ವಿಸ್ತರಣೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ವಿಸ್ತರಣೆ

*ಈ ಬಜೆಟ್ ಯುವಕರಿಗೆ  ಉದ್ಯೋಗದ ಭರವಸೆ ನೀಡಲಿದೆ. ಈ ಬಜೆಟ್ ಎಲ್ಲ ವರ್ಗಕ್ಕೂ ಭರವಸೆ ನೀಡುವ ಬಜೆಟ್ ಆಗಲಿದೆ. ಯುವಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ

*ಕೃಷಿ ನೀರಾವರಿ ಯೋಜನೆಗಳಿಗೆ 1 ಲಕ್ಷ 60 ಸಾವಿರ ಕೋಟಿ ಅನುದಾನ. ಸಾಗರ ಮಿತ್ರ ಯೋಜನೆಯಡಿ 500 ಸಹಕಾರ ಸಂಘಗಳ ಸ್ಥಾಪನೆ. ಗ್ರಾಮೀಣ ಮೀನುಗಾರರಿಗೆ ಸಾಗರ ಮಿತ್ರ ಯೋಜನೆ ಘೋಷಣೆ

11:40 AM IST:

5300.8 ಮೆಟ್ರಿಕ್ ಟನ್ನಿಂದ 108 ಮಿಲಿಯನ್ ಮೆಟ್ರಿಕ್ ಟನ್ಗೆ ಹಾಲು ಉತ್ಪಾದನೆ ಹೆಚ್ಚಳ, ಬ್ಯಾಂಕೇತರ ಸಂಸ್ಥೆಗಳ ಮೂಲಕ ರೈತರಿಗೆ, ಕೃಷಿ ಸಾಲ ರೈತರಿಗೆ 15 ಲಕ್ಷ ಕೋಟಿ ಕೃಷಿ ಸಾಲ

11:38 AM IST:

ರೈತರಿಗಾಗಿ ‘ಕೃಷಿ ಉಡಾನ್’ಯೋಜನೆ, ಹೂ, ಹಣ್ಣು, ತರಕಾರಿ ಸಾಗಾಣಿಕೆಗೆ ವಿಶೇಷ ವಿಮಾನ, ಕೃಷಿಗಾಗಿ ವಿಶೇಷ ವಿಮಾನ

ರೈತರಿಗಾಗಿ ‘ಕೃಷಿ ಉಡಾನ್’ಯೋಜನೆ,  ತೋಟಗಾರಿಕೆಗಾಗಿ ಕುಸಮ ಯೋಜನೆ ವಿಸ್ತರಣೆ, ನಾಗರಿಕ ವಿಮಾನ ರೀತಿಯಲ್ಲೇ ಕೃಷಿ ಉತ್ಪನ್ನ ಸಾಗಾಣಿಕೆಗೆ ವಿಮಾನ ಸಂಚಾರ

11:37 AM IST:

ಸಬ್ ಕಾ ಸಾಥ್, ಸಾಮಾಜಿಕ ಕಳಕಳಿ ನಮ್ಮ ಮೊದಲ ಆದ್ಯತೆ. ಮೊದಲನೇ ಅಂಶ- ನಿರೀಕ್ಷೆಯ ಭಾರತ. ಪ್ರಮುಖ ಮೂರು ಅಂಶಗಳಿಗೆ ಈ ಬಜೆಟ್ ಆದ್ಯತೆ ನೀಡಲಿದೆ

Image

11:36 AM IST:

ರೋಬೋಟಿಕ್ಸ್, ಕೃತಕ  ಬುದ್ಧಿಮತ್ತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜನರ ಖರೀದಿಗೆ ಶಕ್ತಿ ಗಣನೀಯವಾಗಿ ಏರಿಕೆಯಾಗಿದೆ. 2006-2016ರ ನಡುವೆ 27 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ

11:36 AM IST:

ಎಫ್ಡಿಐನಿಂದ 284 ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. ಹಿಂದುಳಿದ ವರ್ಗಗಳಿಗೆ ಸಾಲಸೌಲಭ್ಯ ದಕ್ಕುತ್ತಿದೆ. ಕೇಂದ್ರ ಸರ್ಕಾರದ ಸಾಲಭಾರ ಕಡಿಮೆಯಾಗಿದೆ

11:34 AM IST:

ಖಾಸಗಿ ಸಹಭಾಗಿತ್ವದಲ್ಲಿ ಕಿಸಾನ್ ರೈಲು ಯೋಜನೆಗೆ ಚಾಲನೆ, ಕೃಷಿ ಉಡಾಣ್ ಯೋಜನೆ ಮೂಲಕ ಧಾನ್ಯ ಸರಬರಾಜಿಗೆ ಮುಂದಾದ ಕೇಂದ್ರ, ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಯೋಜನೆಯ ವಿಸ್ತೀರ್ಣ

11:34 AM IST:

ರಸಗೊಬ್ಬರ ಬಳಕೆ ಕಡಿಮೆಗೊಳಿಸಲು ಕ್ರಮ, ಭೂಮಿಯನ್ನು ಉತ್ತಿ,ಬಿತ್ತಿ  ಬೆಳೆಯಿರಿ, ಭೂಮಿ ಮೇಲೆ ದೌರ್ಜನ್ಯ ಬೇಡ, ತಮಿಳು ಕವಿಯತ್ರಿ ಅವ್ವೈಯಾರ್ ಕವನ ವಾಚಿಸಿದ ನಿರ್ಮಲಾ

3 ಸಾವಿರ ವರ್ಷದ ಹಿಂದೆ ಕವಿಯತ್ರಿ ಅವ್ವೈಯಾರ್ ರಚಿಸಿದ್ದ ಕವನ, ಶೈತ್ಯಾಗಾರ ನಿರ್ಮಾಣಕ್ಕೆ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ತಾಲೂಕು ಮಟ್ಟದಲ್ಲಿ ಅತ್ಯಾಧುನಿಕ ಶೈತ್ಯಾಗಾರ ಉಗ್ರಾಣ ನಿರ್ಮಾಣ

Image

11:30 AM IST:

ಕೃಷಿ ಯೋಗ್ಯವಲ್ಲದ ಜಮೀನು ಹೊಂದಿರುವ ರೈತರಿಗೆ ಸೋಲಾರ್ ಯುನಿಟ್ ಸ್ಥಾಪಿಸಲು ಸಹಾಯ, ಕೃಷಿ ನೀರಾವರಿ, ಗುತ್ತಿಗೆ ಕೃಷಿಗೆ ವಿಶೇಷ ಆದ್ಯತೆ, ಸೋಲಾರ್ ಪಂಪ್ಸೆಟ್ ಅಳವಡಿಸಲು 20 ಲಕ್ಷ ರೈತರಿಗೆ ಸಹಾಯ

ರಸಗೊಬ್ಬರ ಬಳಕೆ ಕಡಿಮೆಗೊಳಿಸಲು ಕ್ರಮ, ಬಂಜರು ಭೂಮಿಯಲ್ಲಿ ಸೋಲಾರ್ ಯೂನಿಟ್ ಸ್ಥಾಪಿಸಲು ಒತ್ತು, ಅನ್ನದಾತ ವಿದ್ಯುತ್ ದಾತನೂ ಆಗುತ್ತಾನೆ

11:29 AM IST:

ಗ್ರಾಮ ಸಡಕ್ ಯೋಜನೆ ಮೂಲಕ ಹಳ್ಳಿಗಳ ಸಂಪರ್ಕ, 6.11 ಕೋಟಿ ರೈತರಿಗೆ ವಿಮಾ ಯೋಜನೆ ಜಾರಿ, ರೈತರಿಗಾಗಿ 16 ಅಂಶಗಳ ಕಾರ್ಯ ಯೋಜನೆ ಪ್ರಕಟಿಸಿದ ನಿರ್ಮಲಾ

ನೀರಿನ ಕೊರತೆ 100 ಜಿಲ್ಲೆಗಳಿಗೆ ವಿಶೇಷ ಯೋಜನೆ, 6.11 ಕೋಟಿ ರೈತರಿಗೆ ವಿಮಾ ಯೋಜನೆ ಜಾರಿ, ಕೃಷಿ ಕ್ಷೇತ್ರದ ಅಭಿವೃದ್ಧಿ16 ಅಂಶಗಳ ಕಾರ್ಯ ಯೋಜನೆ ಪ್ರಕಟಿಸಿದ ನಿರ್ಮಲಾ

11:26 AM IST:

ರೈತರಿಗಾಗಿ ಪ್ರಧಾನಿ ಕಿಸಾನ್ ಯೋಜನೆ ಜಾರಿಯಾಗಿದೆ. ರೈತರಿಗಾಗಿ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿ, ರೈತರ ಆದಾಯ 2022ರೊಳಗೆ ದ್ವಿಗುಣಗೊಳಿಸಲು ಸರ್ಕಾರ ಕಟಿಬದ್ಧ

11:24 AM IST:

ರೈತರಿಗಾಗಿ ಪ್ರಧಾನಿ ಕಿಸಾನ್ ಯೋಜನೆ ಜಾರಿಯಾಗಿದೆ. ರೈತರಿಗಾಗಿ ಫಸಲ್ ಭೀಮಾ ಯೋಜನೆ ಪರಿಣಾಮಕಾರಿ ಜಾರಿ. ರೈತರ ಆದಾಯ 2022ರೊಳಗೆ ದ್ವಿಗುಣಗೊಳಿಸಲು ಸರ್ಕಾರ ಕಟಿಬದ್ಧ.

11:24 AM IST:

ನಮ್ಮ ದೇಶ ದಾಲ್ ಸರೋವರದಲ್ಲಿ ಅರಳುತ್ತಿರುವ ಕಮಲ. ನಮ್ಮ ದೇಶ ನಳನಳಿಸುತ್ತಿರುವ ಹೂವಿನ ತೋಟ, ಕಾಶ್ಮೀರಿ ಶಾಯಿರಿ  ವಾಚಿಸಿದ ನಿರ್ಮಲಾ ಸೀತಾರಾಮನ್

ನಮ್ಮ ದೇಶ ಇಡೀ ಪ್ರಪಂಚಕ್ಕೆ ಪ್ರೀತಿ ಪಾತ್ರ, ಕಾಶ್ಮೀರಿ ಶಾಯರಿ  ವಾಚಿಸಿದ ನಿರ್ಮಲಾ ಸೀತಾರಾಮನ್, ಕಾಶ್ಮೀರಿ ಕವಿ ದೀನಾನಾಥ್ ಕೌಲ್ ಬರೆದ ಶಾಯರಿ ಓದಿದ ನಿರ್ಮಲಾ

ನಮ್ಮ ದೇಶ ಇಡೀ ಪ್ರಪಂಚಕ್ಕೆ ಪ್ರೀತಿ ಪಾತ್ರ, ನಮ್ಮ ದೇಶ ಯುವಕರ ದೇಹದಲ್ಲಿನ ಬಿಸಿ ರಕ್ತ. ಕಾಶ್ಮೀರಿ ಶಾಯರಿ  ವಾಚಿಸಿದ ನಿರ್ಮಲಾ ಸೀತಾರಾಮನ್

11:18 AM IST:

ನಮ್ಮದು 5ನೇ ಅತಿದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ದೇಶ. 40 ಕೋಟಿ ಜನರು ಈ ವರ್ಷ GST ಪಾವತಿಸಿದ್ದಾರೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ  4 ಸಾವಿರ ರೂ.ಉಳಿತಾಯವಾಗುತ್ತಿದೆ

11:16 AM IST:

ಡಿಜಿಟಿಲ್ ಹಣ ವರ್ಗಾವಣೆಯಿಂದಾಗಿ ಜನರಿಗೆ ನೇರವಾಗಿ ಯೋಜನೆ ತಲುಪುತ್ತಿದೆ. ಸರ್ಕಾರ ನೀಡುವ 1 ರೂ.ಯಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತಿತ್ತು. ಸರ್ಕಾರದ ಯೋಜನೆಗಳು ಜನರಿಗೆ ನೇರವಾಗಿ ತಲುಪುತ್ತಿದೆ

ಆಯುಷ್ಮಾನ್ಭವ್, ಸ್ವಚ್ಚ ಭಾರತ್, ಜನ್ಧನ್ ಯೋಜನೆ ಪರಿಣಾಮಕಾರಿ ಜಾರಿ,  ಬ್ಯಾಂಕಿಂಗ್ ವಲಯಕ್ಕೆ ಅವಶ್ಯಕವಾದ ಹಣವನ್ನು ಕೇಂದ್ರ ಒದಗಿಸಿದೆ, GST ಜಾರಿಯಿಂದ ಗ್ರಾಹಕರಿಗೆ 1 ಲಕ್ಷ ಕೋಟಿ ರೂ.ಲಾಭ

11:16 AM IST:

16 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ| ತೆರಿಗೆ ಪ್ರಕರಣಗಳಲ್ಲಿ ಶೇ.10ರಷ್ಟು ವಂಚನೆ ಕೇಸ್ ಇಳಿಕೆ| ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಬದಲಾವಣೆಯಿಂದ ಶೆ.20 ಇಂಧನ ಉಳಿತಾಯ

11:12 AM IST:

ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಬದಲಾವಣೆಯಿಂದ ಶೆ.20 ಇಂಧನ ಉಳಿತಾಯ. 5 ವರ್ಷದಲ್ಲಿ ಬ್ಯಾಂಕಿಂಗ್ ವಲಯವನ್ನು ಸ್ವಚ್ಛಗೊಳಿಸಲಾಗಿದೆ. ಸಂಕುಚಿತ ರಾಜಕೀಯ ಮೀರಿ ದೇಶ ಬೆಳವಣಿಗೆ ಕಂಡಿದೆ.

11:10 AM IST:

ಜಿಎಸ್‌ಟಿ ಜಾರಿ ಮೋದಿ ಸರ್ಕಾರದ ಐತಿಹಸಿಕ ನಿರ್ಧಾರ, ರಾಜಕೀಯ ಸ್ಥಿರತರಗಾಗಿ ಮೋದಿ ಸರ್ಕಾರಕ್ಕೆ ಜನಾದೇಶ ಸಿಕ್ಕಿದೆ. ಐದು ವರ್ಷದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

11:14 AM IST:

ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿಗೆ ಬಜೆಟ್ ಮಂಡನೆಗೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. GST ಜಾರಿಗೆ ಅರುಣ್ ಜೇಟ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. GST ಜಾರಿ ಕೇಂದ್ರ ಸರ್ಕಾರದ ಐತಿಹಾಸಿಕ ಕ್ರಮ ಕೈಗೊಂಡಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

11:13 AM IST:

ಮೋದಿ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ, ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು, ಕೇಂದ್ರ ಬಜೆಟ್ 2020 ಪ್ರಸ್ತುತಪಡಿಸಲಾರಂಭಿಸಿದ್ದಾರೆ.

11:03 AM IST:

ಬಜೆಟ್ ಮಂಡನೆ ಹಿನ್ದನೆಲೆ ಸಂಸದರು ಸಂಸತ್ತಿನತ್ತ ಆಗಮಿಸಿದ್ದಾರೆ.

10:57 AM IST:

ಬಜೆಟ್ 2020ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ಬಜೆಟ್‌ 2020ಕ್ಕೆ ಅನುಮೋದನೆ ನೀಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದೆ.

10:44 AM IST:

ಸಂಸತ್ತಿಗೆ ಆಗಮಿಸಿದ ಶಾ..

10:42 AM IST:

2ನೇ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕುಟುಂಬ ಸಂಸತ್ತಿಗೆ ಆಗಮನ.

 

 

10:36 AM IST:

11 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ದೇಶದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಶೀಘ್ರದಲ್ಲೇ ಪುಟಿದೇಳಲಿದೆ. ಏ.1ರಿಂದ ಆರಂಭವಾಗಲಿರುವ ಮುಂದಿನ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.6ರಿಂದ ಶೇ.6.5ರವರೆಗೂ ಏರಿಕೆಯಾಗಲಿದೆ ಎಂದು 2019-2020ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಭವಿಷ್ಯ ನುಡಿದಿದೆ. ಜಿಡಿಪಿ ಶೇ.5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಜನರಲ್ಲಿ ಭರವಸೆ ತುಂಬುವ ಮಾತುಗಳನ್ನು ಆಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

10:27 AM IST:

ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಲಿದ್ದು, ಪ್ರಧಾನಿ ಮೋದಿ ಸಂಸತ್ತಿಗೆ ಆಗಮಿಸಿದ್ದಾರೆ.

 

 

10:24 AM IST:

ಕೇಂದ್ರ ಬಜೆಟ್ 2020ರ ಬಜೆಟ್ ಪ್ರತಿಗಳು ಸಂಸತ್ತಿಗೆ ತಲುಪಿವೆ.

10:19 AM IST:

ಕೇಂದ್ರ ಸರ್ಕಾರ ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಕೆಲ ಷರತ್ತಿಗೆ ಒಳಪಟ್ಟು 5 ಲಕ್ಷ ರು.ವರೆಗೆ ಹೆಚ್ಚಳ ಮಾಡಿದೆ. ಈ ಬಾರಿ ಆದಾಯ ತೆರಿಗೆ ವಿನಾಯ್ತಿಯ ಸ್ಲಾ್ಯಬ್‌ ಅನ್ನು ಇನ್ನಷ್ಟುಏರಿಸುವ ನಿರೀಕ್ಷೆಯನ್ನು ಮಧ್ಯಮ ವರ್ಗದವರು ಹೊಂದಿದ್ದಾರೆ. ಆದಾಯ ತೆರಿಗೆ ವಿನಾಯ್ತಿ ಮಿತಿ ಈಗಿರುವ 5 ಲಕ್ಷ ರು.ನಿಂದ 7 ಲಕ್ಷ ರು.ಗೆ ಏರಿಕೆಯಾದರೆ ಜನಸಾಮಾನ್ಯ ತೆರಿಗೆ ಪಾವತಿದಾರರಿಗೆ ಸಾಕಷ್ಟುಉಳಿತಾಯವಾಗಲಿದೆ. ಈಗಿರುವ ತೆರಿಗೆ ಸ್ಲಾಬ್ ಬದಲಿಸಿ, 7 ಲಕ್ಷ ರು.ಗಳಿಂದ 10 ಲಕ್ಷ ರು.ತನಕದ ಆದಾಯಕ್ಕೆ ಶೇ.10 ಹಾಗೂ 10 ಲಕ್ಷ ರು.ಗಳಿಂದ 20 ಲಕ್ಷ ರು. ಆದಾಯಕ್ಕೆ ಶೇ.20ರಷ್ಟುತೆರಿಗೆ ವಿಧಿಸುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. 20 ಲಕ್ಷ ರು.ಗಳಿಂದ 10 ಕೋಟಿ ರು.ವರೆಗೆ ಶೇ.30 ಮತ್ತು 10 ಕೋಟಿ ರು.ಗೂ ಹೆಚ್ಚಿನ ಆದಾಯಕ್ಕೆ ಶೇ.35 ತೆರಿಗೆ ವಿಧಿಸುವ ಸಾಧ್ಯತೆ ಇದೆ.

10:19 AM IST:

ಬಹುನಿರೀಕ್ಷಿತ ಕೇಂದ್ರ ಬಜೆಟ್ 2020 ಮಂಡನೆಯಾಗಲಿದ್ದು, ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಹೀಗಿರುವಾಗ ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಪ್ರಕಾಶ್ ಜಾವ್ಡೇಕರ್ ಸಂಸತ್ತಿಗೆ ಬಂದಿದ್ದಾರೆ.

10:12 AM IST:

ಸದ್ಯ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಬಾರೀ ಏರಿಕೆಯಾಗುತ್ತಿದೆ. ಆರ್ಥಿಕ ಹಿಂಜರಿಕೆಯಿಂದಾಗಿ ನೌಕರರನ್ನು ಕೆಲಸದಿಂದ ತೆಗೆಯುವುದು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯುವ ಜನರ ಮೊದಲ ಬೇಡಿಕೆ ಉದ್ಯೋಗ. ಇನ್ನು ಶೈಕ್ಷಣಿಕ ಸಾಲದ ನಿಯಮಗಳ ಪುನರ್‌ ಪರಿಶೀಲನೆ ಹಾಗೂ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಕೂಡ ಯುವಜನರು ನಿರೀಕ್ಷಿಸುತ್ತಿದ್ದಾರೆ. ಹಾಗೆಯೇ ಗ್ರಾಹಕ ಉತ್ಪನ್ನಗಳ ಮೇಲಿನ ಜಿಎಸ್ಟಿವಿನಾಯ್ತಿ, ವೈಯಕ್ತಿಕ ನೈರ್ಮಲ್ಯ ಕಾಪಾಡುವ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ, ಪೆಟ್ರೋಲ್‌- ಡೀಸೆಲ್‌ ದರ ಕಡಿತ ಮತ್ತು ಸುಲಭ ಸಾರಿಗೆ ವ್ಯವಸ್ಥೆ ಭಾರತದ ಭವಿಷ್ಯದ ಪ್ರಜೆಗಳ ನಿರೀಕ್ಷೆಗಳು.

10:10 AM IST:

ಕಳೆದ ವರ್ಷದ ಬಜೆಟ್‌ನಲ್ಲಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯಾ ನಿಧಿಗೆ 891 ಕೋಟಿ ರು. ಮೀಸಲಿಡಲಾಗಿತ್ತು. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಗೆ ಬಜೆಟ್‌ನಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಪ್ರಮುಖ ನಿರೀಕ್ಷೆಗಳಲ್ಲಿ ಒಂದು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ, ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶ, ದೆಹಲಿಯಲ್ಲಿ ಜಾರಿಯಲ್ಲಿರುವ ಮಹಿಳೆಯರಿಗಾಗಿಯೇ ಕ್ಯಾಬ್‌ ವ್ಯವಸ್ಥೆ, ಪಿಂಕ್‌ ಆಟೋ ಮತ್ತು ಪಿಂಕ್‌ ಬಸ್‌ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿ ಮಾಡಬಹುದೆಂಬ ನಿರೀಕ್ಷೆ ಇದೆ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವ ಮಹಿಳೆಯರ ರಕ್ಷಣೆಗೂ ಸರ್ಕಾರ ಭದ್ರತೆಗೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

10:09 AM IST:

ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಬದುಕನ್ನು ಮೇಲೆತ್ತಲು ಸರ್ಕಾರ ಇದುವರೆಗೆ ಕೈಗೊಂಡ ಯಾವ ಕ್ರಮಗಳೂ ನಿರೀಕ್ಷಿತ ಫಲ ನೀಡಿಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಎನ್ನಬಹುದಾದಂತಹ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಪ್ರಮುಖ ಯೋಜನೆಗಳಿರಲಿವೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ 2022ಕ್ಕೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಮೂರು ವರ್ಷದ ಹಿಂದೆ ಹೇಳಿದ್ದರು. ಅದನ್ನು ಸಾಕಾರಗೊಳಿಸಲು ವಿವಿಧ ಕಾರ್ಯಕ್ರಮಗಳು, ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ, ವ್ಯವಸಾಯ ವಲಯದ ಸಮಗ್ರ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ಕೃಷಿಕರ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ವ್ಯವಸ್ಥೆಯನ್ನು ರೈತರು ಈ ಬಜೆಟ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ.

10:07 AM IST:

ಪ್ರತಿ ವರ್ಷವೂ ಸರ್ಕಾರ ತನ್ನ ಆಯವ್ಯಯದ ಲೆಕ್ಕಾಚಾರವನ್ನು ದೇಶದ ಜನರ ಮುಂದಿಡುತ್ತದೆ. ಹಾಗೆಯೇ ಮುಂದಿನ ವರ್ಷದ ಯೋಜನೆಗಳಿಗೆ ರೂಪುರೇಷೆಗಳನ್ನೂ ಹಾಕಿಕೊಂಡು ಅದನ್ನೂ ಜನರ ಮುಂದಿಡುತ್ತದೆ. ಹೀಗೆ ಒಂದು ದಿನ ಲೋಕಸಭೆಯಲ್ಲಿ ಮಂಡನೆಯಾಗುವ ಬಜೆಟ್‌ ಒಂದೆರಡು ದಿನದಲ್ಲಿ ತಯಾರಾಗುವುದಿಲ್ಲ. ಅದಕ್ಕೆ ಹಲವಾರು ತಿಂಗಳ ತಯಾರಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ ಸಿದ್ಧತೆ ಹೇಗಿರುತ್ತದೆ, ಬಜೆಟ್‌ ಪ್ರತಿ ಸಿದ್ಧಪಡಿಸುವುದಕ್ಕೂ ಮುನ್ನ ಏನೆಲ್ಲಾ ಕೆಲಸಗಳು ನಡೆಯುತ್ತವೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

10:05 AM IST:

ಬಜೆಟ್ ಮಂಡನೆ ಸಂಬಂಧ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್‌ ಷಾ ಟ್ವೀಟ್ ಮಾಡಿದ್ದು, 'ಆರ್ಥಿಕ ಕ್ಯಾನ್ಸರ್ ಗೆ ಕೀಮೋಥೆರಪಿ ಬೇಡ, ರೋಗ ನಿರೋಧಕ ಶಕ್ತಿ ಬೇಕು.ರೋಗಲಕ್ಷಣಗಳಿಗಲ್ಲ.. ಅವುಗಳ ನೈಜ ಕಾರಣಕ್ಕೆ ಚಿಕಿತ್ಸೆ ಬೇಕು.2020 ಬಜೆಟ್ ಈ ನಿರೀಕ್ಷೆ ಈಡೇರಿಸುತ್ತೆ ಎಂಬ ಭರವಸೆ ಇದೆ. ಸಂಪತ್ತು ಕ್ರೋಡೀಕರಣ ಆರ್ಥಿಕ ರಕ್ಷಣೆಯ ಪ್ರಮುಖ ಭಾಗ. ನಿರ್ಮಲಾ ಸೀತಾರಾಮನ್ ಬಜೆಟ್ ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ

10:00 AM IST:

ಬಜೆಟ್ ಮಂಡನೆಗೂ ಮುನ್ನ ಸಂಸತ್ತಿನತ್ತ ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ

Image

9:55 AM IST:

ಬಜೆಟ್‌ ಮಂಡನೆಗೂ ಮುನ್ನ ಬಜೆಟ್ ಪ್ರತಿಯೊಂದಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ತಂಡದೊಂದಿಗೆ ಸಂಸತ್ತಿಗೆ ಬಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಬಜೆಟ್ ಪ್ರತಿಯನ್ನು 'ಬಹೀ ಖಾತಾ' ದಲ್ಲಿ ತಂದಿದ್ದಾರೆ.

Image

9:52 AM IST:

ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿಗಳನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್, ಬಜೆಟ್ ಮಂಡನೆಗೆ ರಾಮನಾಥ್‌ ಕೋವಿಂದ್‌ರವರ ಅನುಮತಿ ಪಡೆದಿದ್ದಾರೆ.

9:51 AM IST:

11 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ದೇಶದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಶೀಘ್ರದಲ್ಲೇ ಪುಟಿದೇಳಲಿದೆ. ಏ.1ರಿಂದ ಆರಂಭವಾಗಲಿರುವ ಮುಂದಿನ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.6ರಿಂದ ಶೇ.6.5ರವರೆಗೂ ಏರಿಕೆಯಾಗಲಿದೆ ಎಂದು 2019-2020ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಭವಿಷ್ಯ ನುಡಿದಿದೆ. ಜಿಡಿಪಿ ಶೇ.5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಜನರಲ್ಲಿ ಭರವಸೆ ತುಂಬುವ ಮಾತುಗಳನ್ನು ಆಡಿದೆ.

ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

9:44 AM IST:

ಬಜೆಟ್ ಗೂ ಮೊದಲೇ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದು ಸೂಟ್ ಬೂಟ್ ಸರ್ಕಾರ ಎಂದಿದ್ದಾರೆ. ಕಾರ್ಪೊರೇಟ್ ಟ್ಯಾಕ್ಸ್ ಕಡಿತ ಮಾಡ್ತೀರಿ.. ಜನಸಾಮಾನ್ಯರ ಗತಿಯೇನು ಎಂದು ಪ್ರಶ್ಬಿಸಿದ್ದಾರೆ.
 

9:43 AM IST:

ಬಜೆಟ್‌ಗೂ ಮೊದಲೇ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ನಿಫ್ಟಿ 60 ಅಂಕಗಳ ಕುಸಿತ, ಸೆನ್ಸೆಕ್ಸ್ 160 ಪಾಯಿಂಟ್ಸ್ ಕುಸಿತವಾಗಿದೆ.

9:38 AM IST:

ಕೇಂದ್ರ ಬಜೆಟ್‌ ಮಂಡನೆಗೆ ಇನ್ನೊಂದೇ ದಿನ ಬಾಕಿ ಇದೆ. ಕೇಂದ್ರ ಆಯವ್ಯಯ ಎಂದರೆ ಇಡೀ ದೇಶದ ಅಭಿವೃದ್ಧಿಯ ಮಾರ್ಗಸೂಚಿ. ಇಲ್ಲಿನ ಪ್ರತಿಯೊಂದು ಹೆಜ್ಜೆಯೂ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಚಹರೆ ಬದಲಿಸಿದ ಪ್ರಮುಖ ಬಜೆಟ್‌ಗಳ ಕಿರು ಪರಿಚಯ ಇಲ್ಲಿ ಕ್ಲಿಕ್ ಮಾಡಿ

9:37 AM IST:

ಈ ಬಾರಿಯ ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಇದೇ ಫೆ.1ರಂದು ಮಂಡನೆಯಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸುತ್ತಿರುವ 8ನೇ ಬಜೆಟ್‌ (2019ರ ಮಧ್ಯಂತರ ಬಜೆಟ್‌ ಸೇರಿದಂತೆ) ಹಾಗೂ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿರುವ 2ನೇ ಬಜೆಟ್‌. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಈ ಹಿಂದಿನ ಬಜೆಟ್‌ ಹೇಗಿದ್ದವು, ಅವುಗಳ ಆದ್ಯತೆ ಏನಾಗಿತ್ತು ಎಂಬ ಕಿರು ಹಿನ್ನೋಟ ಇಲ್ಲಿದೆ.

9:36 AM IST:

ಆರ್ಥಿಕತೆ ಹಿಂಜರಿಕೆಯಲ್ಲಿರುವುದರಿಂದ ದೇಶದ ಎಲ್ಲಾ ಕ್ಷೇತ್ರಗಳೂ ಹಿಂಜರಿಕೆ ಅನುಭವಿಸುತ್ತಿವೆ. ಈ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ ಸವಾಲಿನ ಬಜೆಟ್‌ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಬಜೆಟ್‌ನಿಂದ ಯಾರು ಏನೇನು ನಿರೀಕ್ಷೆ ಹೊಂದಿದ್ದಾರೆ ಎಂಬ ಚಿತ್ರಣ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ