Asianet Suvarna News Asianet Suvarna News

ವಂಶ ವೃದ್ಧಿಗೆ ಮನೆ ಮುಂದಿರಲಿ ಅಶೋಕ ಮರ!

ಮನೆಯಲ್ಲಿ ಹಲವಾರು ಕಾರಣಗಳಿಂದ ವಾಸ್ತು ದೋಷ ಕಾಣಿಸಿಕೊಳ್ಳುತ್ತದೆ. ನೀವು ಅವುಗಳನ್ನು ತಿಳಿದುಕೊಂಡು ಪರಿಹಾರ ಕಂಡುಕೊಂಡರೆ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 

11 Simple vaastu tips you must know
Author
Bangalore, First Published Jul 13, 2019, 3:42 PM IST

ಮನೆಯಲ್ಲಿ ವಾಸ್ತು ದೋಷ ಇರುವುದರಿಂದ ಮನೆಯ ಸದಸ್ಯರಿಗೆ ಹಲವು ಸಮಸ್ಯೆಗಳು ಕಾಡುತ್ತವೆ. ಮನೆಯಲ್ಲಿ ಉಂಟಾಗುವ ಸಾಮಾನ್ಯ ವಾಸ್ತು ದೋಷಗಳು ಯಾವುವು ? ಅವುಗಳನ್ನು ಪರಿಹಾರ ಮಾಡುವುದು ಹೇಗೆ?
 
-ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಿದರೆ, ಗೃಹ ಪ್ರವೇಶ ಮಾಡುವಾಗ ವಾಸ್ತು ಪೂಜೆ ಮಾಡಿಸಿ. 

- ವಾಸ್ತು ದೋಷ ದೂರ ಮಾಡಲು ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯಿರಿ. ಇದು ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. 

ಹರಿಯೋ ಜಲಪಾತದ ಫೋಟೋ, ಶೋ ಪೀಸ್ ಮನೆಯಲ್ಲಿದ್ದರೆ.....

- ಮನೆಯ ಮುಖ್ಯ ದ್ವಾರದ ಎರಡು ಭಾಗಗಳಲ್ಲಿ ಅಶೋಕ ಮರ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಜೊತೆಗೆ ವಂಶ ವೃದ್ಧಿಯಾಗುತ್ತದೆ. 

- ಮನೆಯ ಪ್ರವೇಶ ದ್ವಾರದ ಮೇಲೆ ಕುದುರೆ ಲಾಳ ಹಾಕುವುದರಿಂದಲೂ ವಾಸ್ತು ದೋಷ ನಿವಾರಣೆಯಾಗುತ್ತದೆ. 

- ತುಳಸಿ ಗಿಡ ಇರುವ ಮನೆಯಲ್ಲಿ ಸಾಮಾನ್ಯವಾಗಿ ವಾಸ್ತು ದೋಷ ಬಾಧಿಸುವುದಿಲ್ಲ. 

- ಪೂಜೆ ಸಮಯದಲ್ಲಿ ಶಂಖ ಊದುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

- ಈಶಾನ್ಯ ಭಾಗದಲ್ಲಿ ಯಾವತ್ತೂ ಭಾರವಾದ ವಸ್ತು ಅಥವಾ ಬೇಡದ ವಸ್ತುಗಳನ್ನಿಡಬೇಡಿ. ಇದರಿಂದ ಧನಹಾನಿಯಾಗುತ್ತದೆ. 

ಓದಲ್ಲಿ ಮುಂದಿರಬೇಕಾ? ಕರಿಯರ್ ಯಶಸ್ಸಿಗೆ ವಾಸ್ತು ಟಿಪ್ಸ್...

- ಉತ್ತರ ದಿಕ್ಕಿನಲ್ಲಿ ಯಾವತ್ತೂ ಸ್ಟೋರ್ ರೂಮ್ ಮಾಡಬೇಡಿ. 

- ಮನೆಯಲ್ಲಿ ಒಣಗಿದ ಹೂವನ್ನು ಇಡಲೇ ಬೇಡಿ. ಇದು ನಿಮ್ಮ ಭಾಗ್ಯ ಸಹ ಒಣಗಿ ಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ. 

- ಪೂರ್ವಜರ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ತಪ್ಪಿಯೂ ಪೂರ್ವ ದಿಕ್ಕು ಅಥವಾ ದೇವರ ಕೋಣೆಯಲ್ಲಿ ಇಡಬಾರದು. 

- ಮನೆಯಲ್ಲಿ ನವಿಲು ಗರಿ ಅಥವಾ ಗಂಗಾಜಲ ಇದ್ದರೆ ಉತ್ತಮ. 

Follow Us:
Download App:
  • android
  • ios