LIVE NOW
Published : May 02, 2026, 07:47 AM ISTUpdated : May 02, 2026, 09:19 AM IST

Karnataka News Live: ಆ ಮನೆ ಮಾರಾಯ್ತು, ಈಗ 2ನೇ ಮದುವೆ ಆಲೋಚನೆ ಇದ್ಯಾ?; ಇದ್ದದ್ದನ್ನು ಇದ್ದ ಹಾಗೆ ಹೇಳಿದ Vijay Raghavendra

ಸಾರಾಂಶ

ಬೆಂಗಳೂರು (ಮೇ.2): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ದಿನಾಂಕವೇ ನಿಗದಿಯಾಗದೆ ಇರುವಾಗ ಮುಖ್ಯಮಂತ್ರಿ ಬದಲಾಗುತ್ತಾರೆ, ಬದಲಾಗಲ್ಲ ಎಂದು ನಾನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರವಷ್ಟೇ 'ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ' ಎಂದಿದ್ದ ಖರ್ಗೆಯವರು ಶುಕ್ರವಾರ ತಮ್ಮ ಹೇಳಿಕೆಗೆ ಸ್ಪಷ್ಟಿಕರಣ ನೀಡು ಡ್ತಾ, 'ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ' ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

09:19 AM (IST) May 02

ಆ ಮನೆ ಮಾರಾಯ್ತು, ಈಗ 2ನೇ ಮದುವೆ ಆಲೋಚನೆ ಇದ್ಯಾ?; ಇದ್ದದ್ದನ್ನು ಇದ್ದ ಹಾಗೆ ಹೇಳಿದ Vijay Raghavendra

Actor Vijay Raghavendra On Wife Spandana: ನಟ ವಿಜಯ್‌ ರಾಘವೇಂದ್ರ ಅವರು ಫಸ್ಟ್‌ ಟೈಮ್‌ ತುಳು ಭಾಷೆಯಲ್ಲಿ ಅವರು ಸಂದರ್ಶನ ನೀಡಿದ್ದಾರೆ. ಇವರ ಪತ್ನಿ ಸ್ಪಂದನಾ ಮಂಗಳೂರಿನವರು. ಒಂದೇ ವರ್ಷದಲ್ಲಿ ತುಳು ಭಾಷೆ ಕಲಿತ ವಿಜಯ್‌ ರಾಘವೇಂದ್ರ ಈಗ ತುಳುವಿನಲ್ಲೇ ಪತ್ನಿ ಬಗ್ಗೆಯೇ ಸಂದರ್ಶನ ನೀಡಿದ್ದಾರೆ.

 

Read Full Story

09:04 AM (IST) May 02

ವರದಕ್ಷಿಣೆಗೆ ಬಲಿಯಾದ ಗೃಹಿಣಿ - ಹುಳಿಮಾವಿನಲ್ಲಿ ಮೂರು ತಿಂಗಳ ಮಗುವಿನ ತಾಯಿ ಆ*ತ್ಮಹ*ತ್ಯೆ!

ಬೆಂಗಳೂರಿನ ಹುಳಿಮಾವಿನಲ್ಲಿ ವಂದನಾ ಎಂಬ ಗೃಹಿಣಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದು, ಇದು ವರದಕ್ಷಿಣೆಗಾಗಿ ನಡೆದ ಕೊಲೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ. ಮೂರು ತಿಂಗಳ ಮಗುವಿನ ತಾಯಿಯ ಸಾವಿಗೆ ಸಂಬಂಧಿಸಿದಂತೆ ಪತಿ ವಿಕ್ರಂ ಶೇಷ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Read Full Story

08:58 AM (IST) May 02

BS Yadiyurappa - ಅವರ ಹೋರಾಟವೇ ಪ್ರತ್ಯೇಕ ಇತಿಹಾಸ; ಸಹೃದಯ ರಾಜಕಾರಣದ ಮೇರು ನಾಯಕ ಬಿಎಸ್‌ವೈ

ಡಾ. ಕೆ. ಸುಧಾಕರ್ ಅವರು, ರಾಜಕೀಯ ಭೀಷ್ಮ ಬಿ.ಎಸ್. ಯಡಿಯೂರಪ್ಪನವರನ್ನು ತಮ್ಮ ಗುರು ಮತ್ತು ಮಾರ್ಗದರ್ಶಕ ಎಂದು ಬಣ್ಣಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿನ ಯಡಿಯೂರಪ್ಪನವರ ನಾಯಕತ್ವ, ತಮ್ಮ ರಾಜಕೀಯ ಬೆಳವಣಿಗೆ ಹಾಗೂ ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ  ಕೊಡುಗೆಗಳನ್ನು ಸ್ಮರಿಸುತ್ತಾ ಗೌರವ ಸಲ್ಲಿಸಿದ್ದಾರೆ.

Read Full Story

08:46 AM (IST) May 02

Dhananjaya Baby - ತಂದೆ ಆಸೆ ಈಡೇರಿತು; ಸಿಂಹದ ಮರಿಯಂಥ ಮಗು ಪಡೆದ ಡಾಲಿ ಧನಂಜಯ; ಧನ್ಯತಾ ಈಗ ತಾಯಿ!

Actor Dhananjaya: ನಟ ಡಾಲಿ ಧನಂಜಯ ಅವರು ತಂದೆ ಆಗಿದ್ದಾರೆ, ಬೆಳ್ಳಂಬೆಳಿಗ್ಗೆ ಅವರು ಈ ಸಿಹಿ ಸುದ್ದಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಧನ್ಯತಾ ಈಗ ತಾಯ್ತನದ ಖುಷಿಯಲ್ಲಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

08:19 AM (IST) May 02

Bangalore emergency alert test - ನಾಳೆ ನಗರ ನಿವಾಸಿಗಳ ಮೊಬೈಲ್‌ಗೆ ಎಮೆರ್ಜೆನ್ಸಿ ಅಲರ್ಟ್ ಸಂದೇಶ, ಗಾಬರಿಯಾಗಬೇಡಿ! ಕಾರಣ ತಿಳಿಯಿರಿ

ನಾಳೆ ಬೆಂಗಳೂರಿನಲ್ಲಿ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಏಕಕಾಲಕ್ಕೆ 'TEST' ಎಂಬ ನಿಗೂಢ ಅಲರ್ಟ್ ಸಂದೇಶ ಬರಲಿದೆ. ಇದು ಯಾವುದೇ ಅಪಾಯದ ಮುನ್ಸೂಚನೆಯಲ್ಲ, ಬದಲಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭವಿಷ್ಯದ ತುರ್ತು ಸಂದರ್ಭಗಳಿಗಾಗಿ ನಡೆಸುತ್ತಿರುವ ಒಂದು ಪರೀಕ್ಷಾರ್ಥ ಸಂದೇಶವಾಗಿದೆ.
Read Full Story

07:49 AM (IST) May 02

ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಹೊಸ ಅತಿಥಿ: ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್!

ಡಿ.ಕೆ.ಶಿವಕುಮಾರ್ ಅವರು ಈಗ 'ತಾತ'ನಾಗಿ ಬಡ್ತಿ ಪಡೆದಿರುವುದು ಅವರ ಕುಟುಂಬಕ್ಕೆ ವಿಶೇಷ ಕ್ಷಣವಾಗಿದ್ದು, ಅಭಿಮಾನಿಗಳಿಂದಲೂ ಶುಭಾಶಯಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

 

Read Full Story

07:49 AM (IST) May 02

Confusion over Karnataka CM Post: ಸಿಎಂ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ ಎಂದ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳುವ ಮೂಲಕ ಹೊಸ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಬದಲಾವಣೆ ಇಲ್ಲ ಎಂದಿದ್ದ ಅವರು, ಇದೀಗ ಹೈಕಮಾಂಡ್ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 

Read Full Story

07:48 AM (IST) May 02

ಇಂದು ಶೃಂಗೇರಿ ಕ್ಷೇತ್ರದ ಅಂಚೆ ಮತಪತ್ರಗಳ ಮರು ಎಣಿಕೆ; ಚಿಕ್ಕಮಗಳೂರಿನಲ್ಲಿ ಬಿಗಿ ಭದ್ರತೆ. ನಿಷೇಧಾಜ್ಞೆ ಜಾರಿ

ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಪತ್ರಗಳ ಮರು ಎಣಿಕೆ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಎಣಿಕಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 

Read Full Story

More Trending News