ಬೆಂಗಳೂರು (ಮೇ.2): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ದಿನಾಂಕವೇ ನಿಗದಿಯಾಗದೆ ಇರುವಾಗ ಮುಖ್ಯಮಂತ್ರಿ ಬದಲಾಗುತ್ತಾರೆ, ಬದಲಾಗಲ್ಲ ಎಂದು ನಾನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರವಷ್ಟೇ 'ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ' ಎಂದಿದ್ದ ಖರ್ಗೆಯವರು ಶುಕ್ರವಾರ ತಮ್ಮ ಹೇಳಿಕೆಗೆ ಸ್ಪಷ್ಟಿಕರಣ ನೀಡು ಡ್ತಾ, 'ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ' ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
10:35 PM (IST) May 02
Bhagyalakshmi Kannada Serial Episode Update: 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪಟ ಪಟ ಅಂತ ಮಾತನಾಡುತ್ತ, ಸದಾ ತಾಯಿಗೆ ಸಪೋರ್ಟ್ ಮಾಡುತ್ತ ತನ್ಮಯ್ ಪಾತ್ರ ಈಗಾಗಲೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಈ ಪಾತ್ರದಲ್ಲಿ ನಿಹಾರ್ ಗೌಡ ನಟಿಸುತ್ತಿದ್ದಾರೆ. ಇನ್ನೊಂದು ಅವಕಾಶ ಸಿಕ್ಕಿದೆ.
10:01 PM (IST) May 02
09:53 PM (IST) May 02
ಮದ್ಯಪಾನದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದ ನಡುವೆಯೂ ಪತ್ನಿ ಮದ್ಯ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕದ್ರಾದಲ್ಲಿ ಸಂಭವಿಸಿದೆ.
09:25 PM (IST) May 02
ರಾಜ್ಯದಲ್ಲಿ ಮೇ.15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ, ಸಚಿವ ಸಂಪುಟ ಬದಲಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸದಂತೆ ಸೂಚನೆಯಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.
09:15 PM (IST) May 02
08:19 PM (IST) May 02
ಕಾರ್ಮಿಕರ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅವರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
07:54 PM (IST) May 02
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹರಿಹರ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಲ್ಲದೆ, ಬಿ.ಎಸ್. ಯಡಿಯೂರಪ್ಪನವರ ಪುತ್ರ ವ್ಯಾಮೋಹವನ್ನು ಟೀಕಿಸಿದ್ದಾರೆ.
07:33 PM (IST) May 02
ಒಂದು ವರ್ಷದೊಳಗೆ ನೂತನ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಹೇರೂರು ರಸ್ತೆಯ ಮಾರ್ಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದರು.
07:06 PM (IST) May 02
06:11 PM (IST) May 02
Kantara Movie Actor Rishab Shetty News: ಕಾಂತಾರ ಸಿನಿಮಾವನ್ನು ನಿರ್ದೇಶಿಸಿ, ನಟಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟ ರಿಷಬ್ ಶೆಟ್ಟಿ ಈಗ ಮುಂದಿನ ಸಿನಿಮಾದ ಘೋಷಣೆ ಮಾಡಬೇಕಿದೆ. ಈ ಮಧ್ಯೆ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು?
05:56 PM (IST) May 02
05:55 PM (IST) May 02
05:45 PM (IST) May 02
Darling Krishna: ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾ ಮನಮುಟ್ಟುವ ಭಾವನಾತ್ಮಕ ಕಥೆಯಾಗಿದೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವನ್ನು ಕ್ರಿಸ್ಮಿ ಫಿಲಂಸ್ ಲಾಂಛನದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಿರ್ಮಾಣ ಮಾಡಿದ್ದಾರೆ.
05:41 PM (IST) May 02
ಬಂಡೀಪುರದಲ್ಲಿ ಈ ವರ್ಷ ಬೆಂಕಿ ಬೀಳುವ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ಜೊತೆಗೆ ವರುಣ ಕೂಡ ಸಾಥ್ ನೀಡಿದ್ದು, ಇದೀಗ ಬಂಡೀಪುರದಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.
05:29 PM (IST) May 02
05:25 PM (IST) May 02
Actress Meghana Raj Sarja: ನಟಿ ಮೇಘನಾ ಸರ್ಜಾಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇಂದು ಅವರು ಪತಿ ಚಿರಂಜೀವಿ ಸರ್ಜಾರನ್ನು ನೆನೆದು, ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾವುಕರಾಗಿ ಬರೆದುಕೊಂಡಿದ್ದಾರೆ.
05:24 PM (IST) May 02
04:47 PM (IST) May 02
ಒಂದು ಸಿನಿಮಾದಿಂದ ಸಿಗುವುದೇ ಅಂತಿಮ ಅನುಭವ ಅಲ್ಲ. ನನ್ನ ತಂದೆ ಪ್ರಭಾಕರ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ನಿರ್ಮಾಣ ಹಾಗೂ ನಿರ್ದೇಶನ ಕೂಡ ಮಾಡಿದವರು ಎಂದರು ವಿನೋದ್ ಪ್ರಭಾಕರ್.
04:44 PM (IST) May 02
04:32 PM (IST) May 02
ಚಿಕ್ಕಂದಿನಿಂದಲೂ ಭೂತ, ದೈವ ಹಾಗೂ ಆಚರಣೆಗಳನ್ನು ನೋಡುತ್ತಾ ಬೆಳೆದವಳು ನಾನು. ಹೀಗಾಗಿ ನನಗೆ ಅವುಗಳ ಮಹತ್ವ ಗೊತ್ತಿದೆ. ‘ಕಾಂತಾರ’ ಸಿನಿಮಾ ಭೂತ ಹಾಗೂ ದೈವಗಳ ಆರಾಧನೆಯನ್ನು ಇಡೇ ದೇಶಕ್ಕೆ ಪರಿಚಯಿಸಿತು.
04:19 PM (IST) May 02
ಹಿಮೋಫಿಲಿಯಾ ಸಮಸ್ಯೆ ಕೊಂಚ ಕಳವಳಕಾರಿಯಾಗಿರುವ ಸಮಸ್ಯೆ. ಅಲ್ಲದೇ, ಈ ಹಿಮೋಫಿಲಿಯಾ ರೋಗಪತ್ತೆ ತಡವಾದರೆ ಇನ್ನಷ್ಟು ಆತಂಕಕಾರಿಯಾಗಿದೆ. ಏಕೆಂದರೆ ಇದರ ಪರಿಣಾಮಗಳು ಜೀವನಪರ್ಯಂತ ಇರುತ್ತವೆ.
03:57 PM (IST) May 02
03:44 PM (IST) May 02
03:03 PM (IST) May 02
02:27 PM (IST) May 02
02:18 PM (IST) May 02
01:37 PM (IST) May 02
01:26 PM (IST) May 02
ಪಾಕಿಸ್ತಾನ ಏಪ್ರಿಲ್ 25ರಂದು ಚೀನಾದ ರಾಕೆಟ್ ಬಳಸಿ EO-3 ಸ್ಯಾಟಲೈಟ್ ಉಡಾವಣೆ ಮಾಡಿತು. ಇದು ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ SUPARCOಗೆ ಒಂದು ದೊಡ್ಡ ಹೆಜ್ಜೆ. ಆದರೆ, ಸ್ಯಾಟಲೈಟ್ ಕಳಿಸಿದ 'ಮೊದಲ ಫೋಟೋ' ಅಂತ ಹಂಚಿಕೊಂಡ ಚಿತ್ರ, ಉಡಾವಣೆಗೂ ತಿಂಗಳುಗಳ ಹಿಂದಿನದ್ದು ಎಂದು ಗೊತ್ತಾಗಿ ವಿವಾದ ಸೃಷ್ಟಿ.
01:17 PM (IST) May 02
ಉತ್ತರ ಕನ್ನಡದ ದಾಂಡೇಲಿಯಲ್ಲಿ, ಮಲೇಷ್ಯಾದಿಂದ ಹಿಂದಿರುಗಿದ್ದ ರಾಘವೇಂದ್ರ ವಾಡಕರ ಎಂಬ ಯುವಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಅತ್ತೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಈ ಘಟನೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
12:59 PM (IST) May 02
ವಿಧಿಯಾಟವೋ ಅಥವಾ ಅಜಾಗರೂಕತೆಯೋ ಒಟ್ಟಿನಲ್ಲಿ ಗ್ರಹಚಾರ ಕೆಟ್ಟು ಎಲ್ಲೋ ಹೊತ್ತಿಸಿದ ಕಿಡಿ ಇನ್ನೊಬ್ಬರ ಬದುಕನ್ನೇ ಸುಟ್ಟು ಭಸ್ಮ ಮಾಡಿರುವ ಘೋರ ದುರಂತವೊಂದು ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ನಡೆದಿದೆ.
12:54 PM (IST) May 02
12:39 PM (IST) May 02
11:26 AM (IST) May 02
10:59 AM (IST) May 02
10:51 AM (IST) May 02
10:34 AM (IST) May 02
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಆಂಧ್ರಪ್ರದೇಶದ ಹೋಟೆಲ್ಗಳು ಆಹಾರ ಪದಾರ್ಥಗಳ ಬೆಲೆಯನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿವೆ. ಇಂಧನವಲ್ಲದೆ, ಖಾದ್ಯ ತೈಲ ಮತ್ತು ತರಕಾರಿಗಳಂತಹ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಈ ನಿರ್ಧಾರಕ್ಕೆ ಕಾರಣವಾಗಿದೆ.
10:22 AM (IST) May 02
10:13 AM (IST) May 02
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಈಗ ತನ್ನ ಹಳೆಯ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ. ಜಯದೇವ್ ಎಲ್ಲ ಆಸ್ತಿಯನ್ನು ಕಳೆದುಕೊಳ್ಳುವ ಸಮಯ ತಂದುಕೊಂಡಿದ್ದನು. ಹೀಗಾಗಿ ಹರಾಜಿನಲ್ಲಿ ಗೌತಮ್ ಅದನ್ನೆಲ್ಲವನ್ನು ಮರಳಿ ಪಡೆದಿದ್ದಾನೆ.
10:05 AM (IST) May 02
ಧಾರವಾಡದಿಂದ ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಪ್ರಯಾಣಿಕರ ವಾಹನದ ಟೈರ್ ಬ್ಲಾಸ್ಟ್ ಆಗಿ ನಡುರಸ್ತೆಯಲ್ಲೇ ಪಲ್ಟಿಯಾಗಿದೆ. ಈ ದುರಂತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಏಳು ಜನ ಗಾಯಗೊಂಡಿದ್ದಾರೆ.
09:19 AM (IST) May 02
Actor Vijay Raghavendra On Wife Spandana: ನಟ ವಿಜಯ್ ರಾಘವೇಂದ್ರ ಅವರು ಫಸ್ಟ್ ಟೈಮ್ ತುಳು ಭಾಷೆಯಲ್ಲಿ ಅವರು ಸಂದರ್ಶನ ನೀಡಿದ್ದಾರೆ. ಇವರ ಪತ್ನಿ ಸ್ಪಂದನಾ ಮಂಗಳೂರಿನವರು. ಒಂದೇ ವರ್ಷದಲ್ಲಿ ತುಳು ಭಾಷೆ ಕಲಿತ ವಿಜಯ್ ರಾಘವೇಂದ್ರ ಈಗ ತುಳುವಿನಲ್ಲೇ ಪತ್ನಿ ಬಗ್ಗೆಯೇ ಸಂದರ್ಶನ ನೀಡಿದ್ದಾರೆ.