LIVE NOW
Published : Jul 02, 2026, 07:21 AM ISTUpdated : Jul 02, 2026, 03:50 PM IST

State News Live: ರಾಮನಗರದಲ್ಲಿ SIR ಪ್ರಕ್ರಿಯೆಯಲ್ಲಿ ಭಾಗಿಯಾದ ಬಾಂಗ್ಲಾ ವಲಸಿಗರು? ಕೇಂದ್ರ ಸಚಿವ HD Kumaraswamy ವಿಡಿಯೋ ರಿಲೀಸ್!

ಸಾರಾಂಶ

ಬೆಂಗಳೂರು (ಜು.2): ಕಳೆದ 150 ವರ್ಷಗಳಲ್ಲಿ ಎಂದೂ ಕಂಡರಿಯದ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರುವ ಸಂಭವವಿದೆ. ಮಳೆಯ ತೀವ್ರ ಕೊರತೆಯಿಂದ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಕುಡಿಯುವ ನೀರು ಹಾಗೂ ಬೆಳೆನಷ್ಟದ ಸಮಸ್ಯೆ ಎದುರಿಸಲು ಸರ್ಕಾರ ಸಮಗ್ರ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು. ಬರಗಾಲ ಎದುರಿಸಲು ಮೋಡ ಬಿತ್ತನೆ ಕುರಿತು ಚಿಂತನೆ ಇಲ್ಲ ಎಂದೂ ಈ ವೇಳೆ ಸ್ಪಷ್ಟಪಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

03:50 PM (IST) Jul 02

ರಾಮನಗರದಲ್ಲಿ SIR ಪ್ರಕ್ರಿಯೆಯಲ್ಲಿ ಭಾಗಿಯಾದ ಬಾಂಗ್ಲಾ ವಲಸಿಗರು? ಕೇಂದ್ರ ಸಚಿವ HD Kumaraswamy ವಿಡಿಯೋ ರಿಲೀಸ್!

ರಾಜ್ಯದಲ್ಲಿ ನಡೆಯುತ್ತಿರುವ  SIR ಪ್ರಕ್ರಿಯೆಯಲ್ಲಿ, ರಾಮನಗರದಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾ ವಲಸಿಗರು ಸೇರಿದಂತೆ ಕಳ್ಳ ಮತದಾರರನ್ನು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ವಿಡಿಯೋ ಸಮೇತ ದೂರಿದ್ದು, ಕೇಂದ್ರ ಚುನಾವಣಾ ಆಯೋಗ ಮತ್ತು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Read Full Story

03:47 PM (IST) Jul 02

Golden Star Ganesh Birthday - ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ 2 ಭರ್ಜರಿ ಗಿಫ್ಟ್ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್!

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರ ಕಳೆದ ವರ್ಷದ ಹುಟ್ಟುಹಬ್ಬದಂದು ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಈ ವರ್ಷ ಅವರ ಹುಟ್ಟುಹಬ್ಬದಂದು ಗಣೇಶ್‌ ಕಡೆಯಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ಅದೇನು ಅಂತ ನೋಡಿ..

Read Full Story

03:24 PM (IST) Jul 02

Mother Promise ಎಂದು ಪ್ರಾರ್ಥನೆ ಗೀತೆ ಬರೆದ Daali Dhananjaya; ಸಿದ್ಧಗಂಗಾ ಮಠದಲ್ಲಿ ಶೂಟಿಂಗ್!

Daali Dhananjaya Movie: ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು, ಕಂಟೆಂಟ್‌ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ ‘ಮದರ್‌ ಪ್ರಾಮಿಸ್‌’. ಡಾಲಿ ಧನಂಜಯ ನಿರ್ಮಿಸಿ ನಟನೆ ಮಾಡಿರೋ ‘ಮದರ್‌ ಪ್ರಾಮಿಸ್‌’ ಸಿನಿಮಾ ಮತ್ತೊಂದು ಹಾಡು ಬಿಡುಗಡೆ ಆಗಿದೆ. 

 

Read Full Story

03:23 PM (IST) Jul 02

ಜನ ನಾಯಗನ್' ಚಿತ್ರದ ಕುರಿತು ಬಿಗ್‌ ಅಪ್ಡೇಟ್‌; ಹೈ ಕೋರ್ಟ್‌ ಹೇಳಿದ್ದಿಷ್ಟೇ!

ವಿಜಯ್ ನಟನೆಯ 'ಜನ ನಾಯಗನ್‌' ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ.  ಪೈರಸಿ ಮಾಡಿದ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದು, ತನಿಖೆ ಮುಂದುವರೆದಿದೆ. ಅಷ್ಟಕ್ಕೂ ಕೋರ್ಟ್‌ಹೇಳಿದ್ದೇನು ಗೊತ್ತಾ? 

Read Full Story

03:22 PM (IST) Jul 02

Sandalwood - ನಾನು ಯಶ್‌ಗೆ ಹೀರೋಯಿನ್ ಆಗಲ್ಲ - ಅಚ್ಚರಿ ಹೇಳಿಕೆ ನೀಡಿದ ಕನ್ನಡದ ನಟಿ

ತಾವು ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ನಟಿಸಲು ಇಷ್ಟಪಡುವುದಾಗಿ ಎಂದು ಕನ್ನಡದ ನಟಿಯೊಬ್ಬರು ಹೇಳಿದ್ದಾರೆ. ಅವರ ಈ ಅನಿರೀಕ್ಷಿತ ಉತ್ತರ ಪಕ್ಕದಲ್ಲಿದ್ದ ಸಹ-ನಟಿಯರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

Read Full Story

03:21 PM (IST) Jul 02

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ - ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ದೌಡು, ತೀವ್ರ ಆತಂಕ!

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ. ಇವು ಹುಸಿ ಬೆದರಿಕೆಗಳೆಂದು ಶಂಕಿಸಲಾಗಿದ್ದರೂ, ತನಿಖೆ ಮುಂದುವರೆದಿದೆ.
Read Full Story

03:01 PM (IST) Jul 02

ಒಂದು ಕಡೆ ನಟನೆ, ಮತ್ತೊಂದು ಕಡೆ ಜೊಮ್ಯಾಟೋ ಡೆಲಿವರಿ ಕೆಲಸ Amruthadhaare Serial ನಟ ಶಿರಸಿಯ ಶಶಿ ಹೆಗಡೆ!

Actor Shashi Hegde: ‘ರಾಜ ರಾಣಿ’ ಧಾರಾವಾಹಿ ನಟಿ ಲಾವಣ್ಯಾ ಭಾರದ್ವಾಜ್‌, ಶಶಿ ಹೆಗಡೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಸಂದರ್ಶನವೊಂದರಲ್ಲಿ ಜೊಮ್ಯಾಟೋ ಡೆಲಿವರಿ ಕೆಲಸ ಮಾಡೋದಾಗಿ ಹೇಳಿದ್ದಾರೆ.

 

Read Full Story

02:56 PM (IST) Jul 02

ಟಿವಿಎಸ್ ಮೋಟಾರ್ ಷೇರು ಅಬ್ಬರ - ಜೂನ್ ಮಾರಾಟದಲ್ಲಿ ಶೇ.47 ಪ್ರಗತಿ; ನಾರ್ಟನ್ ನಷ್ಟದ ನಡುವೆಯೂ ಹೂಡಿಕೆದಾರರ ವಿಶ್ವಾಸ

ಟಿವಿಎಸ್ ಮೋಟಾರ್ ಕಂಪನಿಯು ಜೂನ್ ತಿಂಗಳಲ್ಲಿ ಶೇ. 47ರಷ್ಟು ದಾಖಲೆಯ ಮಾರಾಟ ಬೆಳವಣಿಗೆಯನ್ನು ಸಾಧಿಸಿ, ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡಿದೆ. ಆದರೆ, ಇದೇ ಸಮಯದಲ್ಲಿ ತನ್ನ ಬ್ರಿಟಿಷ್ ಬ್ರಾಂಡ್ ನಾರ್ಟನ್‌ನಿಂದ ಸುಮಾರು ₹2,000 ಕೋಟಿ ನಷ್ಟ ಅನುಭವಿಸಿದ್ದು, ಈ ಮಿಶ್ರ ಫಲಿತಾಂಶವು ಕಂಪನಿಯ ಕಾರ್ಯತಂತ್ರದ ಮೇಲೆ ಬೆಳಕು ಚೆಲ್ಲಿದೆ.
Read Full Story

02:29 PM (IST) Jul 02

Ramayana Viral News - ರಾಮಾಯಣ ಚಿತ್ರದ ವಿಡಿಯೋ ಕ್ಲಿಪ್ ಲೀಕ್ ನ್ಯೂಸ್; ಅಸಲಿಯೋ ಅಥವಾ ಎಐ ಸೃಷ್ಟಿಯೋ?

ಅಂದಹಾಗೆ, 'ರಾಮಾಯಣ' ಚಿತ್ರವು ಈ ವರ್ಷದ (2026) ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ. ಮಹಾಕಾವ್ಯ ಆಧಾರಿತ ಈ ಸಿನಿಮಾ, ಈಗಿನಿಂದಲೇ ಇಡೀ ಭಾರತೀಯ ಚಿತ್ರರಂಗ ಹಾಗೂ ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ಚಿತ್ರತಂಡವು ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

Read Full Story

02:26 PM (IST) Jul 02

ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗದಲ್ಲಿ ನೂತನ ಬಸ್ ಸಂಚಾರ ಶಾಸಕರಿಂದ ಚಾಲನೆ

ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗದಲ್ಲಿ ನೂತನ ನಗರ ಸಾರಿಗೆ ಬಸ್‌ಗೆ ಚಾಲನೆ ನೀಡಿದರು. ಈ ಹೊಸ ಸೇವೆಯು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅನುಕೂಲ ಕಲ್ಪಿಸಲಿದೆ.
Read Full Story

02:14 PM (IST) Jul 02

'ಬಾರೋ ಮಳೆರಾಯ..' ತನ್ನ ಎತ್ತಿನ ಮೇಲೆ ಬರೆದು ಮಳೆಗಾಗಿ ಪ್ರಾರ್ಥಿಸಿದ ಹೊಸಪೇಟೆ ರೈತ!

Baaro Maleraya.: ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ ಕೃಷಿ ಚಟುವಟಿಕೆಗಳು ನಿಂತುಹೋಗಿವೆ. ರೈತರು ಆತಂಕಗೊಂಡಿದ್ದಾರೆ. ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹೊಸಪೇಟೆಯ ಮರಿಯಮ್ಮನಹಳ್ಳಿ ರೈತರು ಏನೆಲ್ಲ ಮಾಡುತ್ತಿದ್ದಾರೆ ನೋಡಿ.

Read Full Story

01:31 PM (IST) Jul 02

ಗದಗ - ಗೋಡಂಬಿ ಎಂದು ಔಡಲ ಕಾಯಿ ತಿಂದ 25ಕ್ಕೂ ಹೆಚ್ಚು ಶಾಲಾ ಮಕ್ಕಳು ತೀವ್ರ ಅಸ್ವಸ್ಥ!

ಗದಗ ತಾಲೂಕಿನ ಬೆಳಧಡಿ ತಾಂಡಾದಲ್ಲಿ, ಶಾಲಾ ಆಟದ ಸಮಯದಲ್ಲಿ ಗೋಡಂಬಿ ಬೀಜವೆಂದು ತಪ್ಪಾಗಿ ಭಾವಿಸಿ ವಿಷಕಾರಿ 'ಔಡಲ ಕಾಯಿ' ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿ, ತಲೆಸುತ್ತಿನಿಂದ ಬಳಲುತ್ತಿದ್ದ ಮಕ್ಕಳನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

01:30 PM (IST) Jul 02

Viabhav Sooryavanashi - ವೈಭವ್‌ಗಿಂತ ಜಾಸ್ತಿ‌ ಈ ಸ್ಟಾರ್ ಕ್ರಿಕೆಟರ್‌ಗೆ ಆಯ್ತಾ ಅನ್ಯಾಯ? ಉತ್ತರಿಸ್ತಾರಾ ಗಂಭೀರ್ ?

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಕೋಚ್ ಗೌತಮ್ ಗಂಭೀರ್ ಅವರು ಅನುಭವಿ ಆ ಆಟಗಾರನ ಬದಲು ಬೇರೆಯವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.  

Read Full Story

01:14 PM (IST) Jul 02

Amruthadhaare Serial - ಇನ್ಫೋಸಿಸ್‌ ನಾರಾಯಣ್‌ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್‌ ದಿವಾನ್

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌, ಭೂಮಿಕಾ ಕುರಿತಂತೆ ಕಥೆ ಸಾಗುತ್ತಿದೆ. ಈಗ ಇಬ್ಬರು ಮಕ್ಕಳ ಜೊತೆಗೆ ಈ ದಂಪತಿ ಖುಷಿಯಿಂದ ಜೀವನ ಮಾಡುತ್ತಿದೆ. ಆದರೆ ಮಕ್ಕಳು ಮಾಡಿದ ತರಲೆ ನಿಜಕ್ಕೂ ಭೂಮಿಕಾಗೆ ದೊಡ್ಡ ಸರ್ಪ್ರೈಸ್‌ ನೀಡಲಿದೆ.

 

Read Full Story

12:44 PM (IST) Jul 02

ಬೆಂಗಳೂರು ಕಲ್ಲು ಕ್ವಾರಿ ದುರಂತ - ಯಾದಗಿರಿಯ ಓರ್ವ ಸೇರಿ ಒಟ್ಟು 7 ಸಾವು, 10 ನಿಮಿಷ ತಡವಾಗಿದ್ರೆ ಎಲ್ಲರೂ ಉಳಿತಿದ್ರು ಆದ್ರೆ....!

ಬೆಂಗಳೂರಿನ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ನಡೆದ ಭೀಕರ ಬಂಡೆ ಕುಸಿತದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದಾರೆ. ನಿಯಮ ಉಲ್ಲಂಘಿಸಿ ಬಫರ್ ಜೋನ್ ಒತ್ತುವರಿ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
Read Full Story

12:36 PM (IST) Jul 02

Bhagyavantaru Serial - ಅಪ್ಪನ ಆಸೆಯಂತೆ ಶ್ರೀಮಂತ ಮನೆಗೆ ಸೊಸೆಯಾದ ಜನನಿ; ಅಲ್ಲೇ ಇರೋದು ಟ್ವಿಸ್ಟ್!

Bhagyavantaru Serial: ಸನ್‌ ಉದಯ ವಾಹಿನಿಯು ಹೊಸ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ಈಗ ‘ಭಾಗ್ಯವಂತರು’ ಎನ್ನುವ ಹೊಸ ಸೀರಿಯಲ್‌ ಪರಿಚಯಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

12:36 PM (IST) Jul 02

Golden Star Ganesh Birthday - ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ; ಈ 'ಬೃಂದಾವಿಹಾರಿ' ಕೈನಲ್ಲಿ ಇಷ್ಟೊಂದು ಸಿನಿಮಾಗಳಿವೆ!

2024ರಲ್ಲಿ ಬಿಡುಗಡೆಯಾದ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಸೂಪರ್ ಹಿಟ್ ಆಗುವ ಮೂಲಕ ನಟ ಗಣೇಶ್ ಮತ್ತೆ  ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ. ಸದ್ಯ ನಟ ಗಣೇಶ್ ಅವರು ಹಲವು ಸಿನಿಮಾಗಳಿಗೆ ಸಹಿ ಮಾಡಿದ್ದು, ಕೆಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದರೆ ಇನ್ನೂ ಕೆಲವು ಸಿನಿಮಾಗಳು ಪ್ರೊಡಕ್ಷನ್ ಹಂತದಲ್ಲಿವೆ.

Read Full Story

12:32 PM (IST) Jul 02

ಅತಿ ಹೆಚ್ಚು ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು ಯಾರು? ಎಷ್ಟು ದಿನ ನಡೆದಿತ್ತು ಗೊತ್ತಾ ಆ ಹೋರಾಟ?

ಈ ಲೇಖನವು ಇತಿಹಾಸದಲ್ಲಿ ನಡೆದ ಅತಿ ದೀರ್ಘ ಉಪವಾಸ ಸತ್ಯಾಗ್ರಹದ ಬಗ್ಗೆ ವಿವರಿಸುತ್ತದೆ. ಅಲ್ಲದೆ, ಭಗತ್ ಸಿಂಗ್ ಅವರಂತಹ ಇತರ ಸ್ವಾತಂತ್ರ್ಯ ಹೋರಾಟಗಾರರ ಉಪವಾಸ ಸತ್ಯಾಗ್ರಹಗಳನ್ನೂ ಉಲ್ಲೇಖಿಸಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.  

Read Full Story

11:42 AM (IST) Jul 02

ರಾಜ್ಯ ಸರ್ಕಾರದ 'ಕೇಸ್ ವಾಪಸಿ' ನಿರ್ಧಾರಕ್ಕೆ ಹೈಕೋರ್ಟ್ ತಡೆ!; ಲಾಡ್ಲೆ ಮಶಾಕ್‌ ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್‌ ರದ್ದು ತೀರ್ಮಾನಕ್ಕೆ ಬ್ರೇಕ್‌

ಆಳಂದ ಕೋಮು ಗಲಭೆ ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಕ್ರಮದಲ್ಲಿ ಮೇಲ್ನೋಟಕ್ಕೆ ದೋಷಗಳಿವೆ ಎಂದಿದೆ.

Read Full Story

11:25 AM (IST) Jul 02

ಕಾರಿನಲ್ಲಿ ಎಸಿ ಹಾಕುವ ಮುನ್ನ ಇದನೊಮ್ಮೆ ಗಮನಿಸಿ! ಆ 'ಸೈಲೆಂಟ್ ಕಿಲ್ಲರ್' ಅಸಲಿಯತ್ತು ಏನು ಗೊತ್ತಾ?

ಗಾಜಿಯಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನಿಲ್ಲಿಸಿದ ಕಾರಿನಲ್ಲಿ ಎಸಿ ಆನ್ ಮಾಡಿ ಮಲಗಿ ಸಾವನ್ನಪ್ಪಿದ್ದಾರೆ. ಆದೆರೆ ಆ ಸಾವಿನ ಹಿಂದೆ ಕಾರಿನ ಎಸಿಯೇ ಕಂಟಕವಾಯ್ತಾ? ಆದ್ದರಿಂದ ಎಸಿಹಾಕುವ ಮುನ್ನ ಈ ಸುದ್ದಿಯನ್ನು ಒಮ್ಮೆ ನೋಡಿ. 

Read Full Story

11:09 AM (IST) Jul 02

ಮುಖ್ಯಮಂತ್ರಿಗಳೇ, ಬಿಡದಿಗೊಂದು ನ್ಯಾಯ?, ಆಳಂದಗೊಂದು ನ್ಯಾಯ ಸರೀನಾ? ಸಿಎಂಗೆ ಆಳಂದ ರೈತರು ಬರೆದ ಪತ್ರದಲ್ಲೇನಿದೆ?

ಟೌನ್‌ಶಿಪ್ ಮಾಡಲು ಬಿಡದಿಯಲ್ಲಿ ರೈತರಿಗೆ ಎಕರೆಗೆ ₹2.07 ಕೋಟಿ ನೀಡುವಾಗ, ವಿಂಡ್ ಪವರ್ ಕಂಪನಿಗಳಿಗೆ ಜಮೀನು ನೀಡಿದ ಆಳಂದ ರೈತರಿಗೆ ಕೇವಲ ₹2-4 ಲಕ್ಷ ನೀಡುವುದು ತಾರತಮ್ಯ ಅಲ್ಲವೇ? ಮುಖ್ಯಮಂತ್ರಿಗಳೇ ಬಿಡದಿಗೊಂದು ನ್ಯಾಯ, ಆಳಂದ ರೈತರಿಗೊಂದು ನ್ಯಾಯವಾ? ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ.

Read Full Story

10:42 AM (IST) Jul 02

ಹೆಸರಘಟ್ಟದ ದಿಬ್ಬೂರಿನಲ್ಲಿ ಮೈಸೂರು Wadiyar ಕಾಲದ ಶಾಸನ ಪತ್ತೆ; ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಇಡೀ ಗ್ರಾಮ ದಾನ

ಬೆಂಗಳೂರು ಉತ್ತರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ, ಮೈಸೂರು ಅರಸ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದ (ಕ್ರಿ.ಶ. 1750) ಅಪೂರ್ವ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ನಿರ್ವಹಣೆಗಾಗಿ ಗ್ರಾಮವನ್ನು ದಾನವಾಗಿ ನೀಡಿದ್ದನ್ನು ದಾಖಲಿಸಿದೆ.

Read Full Story

10:28 AM (IST) Jul 02

‘ಪಾಕ್‌ ಜತೆ ರಹಸ್ಯ ಸಭೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರ್‍ಯಾರು? ಬಿಜೆಪಿಯ ರಾಮ್‌ ಮಾಧವ್‌ಗೆ ಹರಿಪ್ರಸಾದ್‌ ಪ್ರಶ್ನೆ

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಬಿಜೆಪಿ ಮುಖಂಡ ರಾಮ್ ಮಾಧವ್ ಅವರು ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಸಂವಿಧಾನಿ ಹುದ್ದೆಯಲ್ಲಿರದಿದ್ದರೂ ವಿದೇಶದಲ್ಲಿ ರಹಸ್ಯ ಸಭೆ ನಡೆಸಲು ಅಧಿಕಾರ ಕೊಟ್ಟವರ್ಯಾರು ಎಂದು ಕಿಡಿ.

Read Full Story

10:00 AM (IST) Jul 02

ಗೃಹಜ್ಯೋತಿ ಸ್ಕೀಂಗೆ ಜಾತಿ, ಪಾನ್‌ ಕಾರ್ಡ್‌ ಕೇಳೋದ್ರಲ್ಲಿ ತಪ್ಪೇನಿದೆ? - ಸಚಿವ ಜಾರ್ಜ್‌

ಗೃಹಜ್ಯೋತಿ ಯೋಜನೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆ ಕೆಲವರಿಂದ ದುರುಪಯೋಗ ಆಗುತ್ತಿದೆ ಹೀಗಾಗಿ ಪರಿಶೀಲನೆ ನಡೆಯುತ್ತಿದೆ. ಜಾತಿ ಪ್ರಮಾಣಪತ್ರ ಪಾನ್ ಕಾರ್ಡ್ ಕೇಳಿದ್ರೆ ತಪ್ಪೇನಿಲ್ಲ ಎಂದು ಸಚಿವ ಕೆಜೆ ಚಾರ್ಜ್ ಸಮರ್ಥಿಸಿಕೊಂಡರು.

Read Full Story

09:39 AM (IST) Jul 02

Darling Krishna Movie - 'ಲವ್‌ಬರ್ಡ್ಸ್‌' ಬಳಿಕ ಪಿಸಿ ಶೇಖರ್‌ ಜೊತೆ ಡಾರ್ಲಿಂಗ್‌ ಕೃಷ್ಣ ಹೊಸ ಸಿನಿಮಾ

Darling Krishna Movie: ನಟ ಡಾರ್ಲಿಂಗ್‌ ಕೃಷ್ಣ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಅವರು ನಿರ್ದೇಶಕ ಪಿಸಿ ಶೇಖರ್‌ ಜೊತೆ ಕೈಜೋಡಿಸಿದ್ದಾರೆ. “ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ರಾಘವೇಂದ್ರ ಅಭಿನಯದ "ಮಹಾನ್" ಸಿನಿಮಾ ನಿರ್ಮಾಪಕ ಪ್ರಕಾಶ್ ಬೂದೂರು, ಈಗ ಹೊಸ ಸಿನಿಮಾವನ್ನು ಆರಂಭಿಸಿದ್ದಾರೆ.

Read Full Story

09:36 AM (IST) Jul 02

ಯಶವಂತಪುರದಲ್ಲಿ ಕಲ್ಲು ಕ್ವಾರಿ ಬಂಡೆ ಸ್ಫೋಟ - 7 ಮಂದಿ ಅಮಾಯಕರು ಬಲಿ, ಹಲವರು ಗಂಭೀರ ಅಂದು ಚಿರತೆ ಇಂದು ಮನುಷ್ಯರು!

ಬೆಂಗಳೂರಿನ ಹೊರವಲಯದ ಚಿಕ್ಕನಹಳ್ಳಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಸ್ಫೋಟದಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಈ ಹಿಂದೆ ಇದೇ ಸ್ಥಳದಲ್ಲಿ ಚಿರತೆ ಸಾವನ್ನಪ್ಪಿದಾಗಲೂ ಅಧಿಕಾರಿಗಳು ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

09:20 AM (IST) Jul 02

America America 2 Movie - ಪೃಥ್ವಿ ಅಂಬಾರ್‌, ನಿರೂಪ್‌ ಭಂಡಾರಿ, ಶಾನ್ವಿ ಶ್ರೀವಾತ್ಸವ ಜೊತೆ 'ಅಮೆರಿಕ ಅಮೆರಿಕ 2'

America America 2 Movie: 90 ರ ದಶಕದಲ್ಲಿ ಭರ್ಜರಿ ಯಶಸ್ಸು ಕಂಡ ಚಿತ್ರ ‘ಅಮೇರಿಕಾ ಅಮೇರಿಕಾ’‌ ಸಿನಿಮಾಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಕರು. ಈಗ ಅದೇ ಶೀರ್ಷಿಕೆಯಲ್ಲಿ ‘ಅಮೇರಿಕಾ ಅಮೇರಿಕಾ 2’ ಎಂಬ ಚಿತ್ರ ನಿರ್ಮಾಣವಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರೇ ಇದನ್ನೂ ನಿರ್ದೇಶಿಸಿದ್ದಾರೆ. 

 

Read Full Story

08:05 AM (IST) Jul 02

4850 ಕೋಟಿ ರಾಜಧನ ವಸೂಲಿಗೆ ಮುಂದಾದ ಸರ್ಕಾರ, ರಾಜ್ಯದಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್ ಸರಬರಾಜು ಬಂದ್‌?

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಡ್ರೋನ್ ಸಮೀಕ್ಷೆ ಆಧರಿಸಿ ವಿಧಿಸಿರುವ ₹4850 ಕೋಟಿ ರಾಜಧನ ದಂಡದ ವಿರುದ್ಧ ಕಲ್ಲು ಗಣಿ ಮತ್ತು ಸ್ಟೋನ್ ಕ್ರಶರ್ ಮಾಲೀಕರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಸಮೀಕ್ಷೆ ಅವೈಜ್ಞಾನಿಕ ಎಂದು ಆರೋಪಿಸಿರುವ ಮಾಲೀಕರ ಒಕ್ಕೂಟ, ಬಂದ್‌ಗೆ ಕರೆ ನೀಡಲು ತೀರ್ಮಾನಿಸಿದೆ.

Read Full Story

07:53 AM (IST) Jul 02

ಯುವತಿ ಸ್ನಾನದ ದೃಶ್ಯ ರೆಕಾರ್ಡ್‌ ಆರೋಪ - ಕಾನೂನು ಪ್ರಕ್ರಿಯೆ ವಿರುದ್ಧ ಮಧ್ಯಂತರ ತಡೆ

ಪಕ್ಕದ ಮನೆಯ ಯುವತಿ ಸ್ನಾನ ಮಾಡುವಾಗ ರಹಸ್ಯವಾಗಿ ವಿಡಿಯೋ ಮಾಡಿದ ಆರೋಪ ಎದುರಿಸುತ್ತಿರುವ ಯುವಕನಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆರೋಪಿಯ ಮೊಬೈಲ್‌ನಲ್ಲಿ ಒಂದೇ ಒಂದು ಫೋಟೋ ಅಥವಾ ವಿಡಿಯೋ ಕಂಡುಬಂದರೂ ಅರ್ಜಿ ವಜಾಗೊಳಿಸುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ.

Read Full Story

07:53 AM (IST) Jul 02

'ದೇವ್ರು ನಿಮ್ಗೆ ಒಳ್ಳೇದು ಮಾಡೋಲ್ಲ..' - ಬೊಲೆರೋದಲ್ಲಿ ಬಂದು ದೇವರಿಗೆ ಬಿಟ್ಟಿದ್ದ ಗೂಳಿ ಕದ್ದೊಯ್ದ ಖದೀಮರು!

ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ್ದ 'ಕರಿಬಸವ' ಎಂಬ ಪವಿತ್ರ ಗೂಳಿಯನ್ನು ದುಷ್ಕರ್ಮಿಗಳು ಬೊಲೆರೋ ವಾಹನದಲ್ಲಿ ಕದ್ದೊಯ್ದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗೂಳಿ ರಕ್ಷಿಸುವಂತೆ ಆಗ್ರಹಿಸಿದ್ದಾರೆ.

Read Full Story

07:23 AM (IST) Jul 02

Bidadi Township row: ಬಿಡದಿ ಟೌನ್‌ಶಿಪ್‌ಗೂ ಎಚ್‌ಡಿಕೆಗೂ ಸಂಬಂಧ ಇಲ್ಲ, ಚರ್ಚೆ ಬೇಕಿಲ್ಲ - ಸಿಎಂ ಡಿಕೆಶಿ

ಬಿಡದಿ ಟೌನ್‌ಶಿಪ್ ಯೋಜನೆಗೂ ಹೆಚ್‌ಡಿ ಕುಮಾರಸ್ವಾಮಿಗೂ ಯಾವುದೇ ಸಂಬಂಧ ಇಲ್ಲ. ಅವರು ಕ್ಷೇತ್ರ ಬಿಟ್ಟಿದ್ದಾರೆ ಅವರೊಂದಿಗೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಕರೆದಾಗ ಅವರು ಬರಲಿಲ್ಲ. ಈಗ ಅವರು ಕರೆದಾಗ ನಾನು ಹೋಗುವುದು ಸರೀನಾ ಎಂದು ಸಿಎಂ ಟಾಂಗ್..

 

Read Full Story

07:22 AM (IST) Jul 02

Karnataka HC: ಎಫ್‌ಐಆರ್‌ ಸಲ್ಲಿಕೆಯಿಂದ ನಿರೀಕ್ಷಣಾ ಬೇಲ್‌ ರದ್ದಾಗಲ್ಲ - ಹೈಕೋರ್ಟ್ ಮಹತ್ವದ ತೀರ್ಪು, ಏನಿದು ಪ್ರಕರಣ?

ಪ್ರಕರಣವೊಂದರ ಸಂಬಂಧ ಆರೋಪಿಗಳಿಗೆ ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ಮಂಜೂರಾದ ನಂತರ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಮತ್ತು ಕೋರ್ಟ್ ಸಮನ್ಸ್ ಜಾರಿ ಮಾಡಿದೆ ಎಂಬ ಕಾರಣಕ್ಕೆ ‌ರದ್ದಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

 

Read Full Story

07:22 AM (IST) Jul 02

ಮಕ್ಕಳು ಹಠ ಮಾಡಿದರೆಂದು ವಾಷಿಂಗ್ ಮಷಿನ್‌ನಲ್ಲಿ ಹಾಕಿ ಹಿಂಸೆ!

ಬೆಂಗಳೂರಿನ ಐಟಿ ಕಂಪನಿಯೊಂದರ ಡೇ ಕೇರ್ ಕೇಂದ್ರದಲ್ಲಿ, ಸಿಬ್ಬಂದಿ ಮಕ್ಕಳ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಿದ್ದಾರೆ. ಮಕ್ಕಳು ಅತ್ತಾಗ ವಾಷಿಂಗ್ ಮಷಿನ್‌ಗೆ ಹಾಕುವುದು, ಶೌಚಾಲಯದಲ್ಲಿ ಕೂಡಿ ಹಾಕುವ ಕ್ರೂರ ಕೃತ್ಯವೆಸಗಿದ್ದಾರೆ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲು.

 

Read Full Story

07:21 AM (IST) Jul 02

Drought: ಮಳೆ ಕೊರತೆಯಿಂದ ರಾಜ್ಯದಲ್ಲೀಗ 150 ವರ್ಷದಲ್ಲೇ ಭೀಕರ ಬರಗಾಲ! ಡಿಸಿಎಂ ಪರಮೇಶ್ವರ ಬಿಚ್ಚಿಟ್ಟ ಶಾಕಿಂಗ್ ಮಾಹಿತಿ

ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಕಳೆದ 150 ವರ್ಷಗಳಲ್ಲಿ ಕಂಡರಿಯದ ಭೀಕರ ಬರ ಎದುರಾಗುವ ಆತಂಕವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಸಭೆ ತುರ್ತು ಕಾಮಗಾರಿಗಳಿಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿ ಬಿಡುಗಡೆ ಮಾಡಿದೆ.

 

Read Full Story

More Trending News