Published : Aug 25, 2025, 07:21 AM ISTUpdated : Aug 25, 2025, 11:49 PM IST

ಪರಿಶಿಷ್ಟ ಜಾತಿ ಒಳಮೀಸಲಾತಿ ಆದೇಶ ಪ್ರಕಟ; 101 ಜಾತಿಗಳಲ್ಲಿ ಎಡಗೈ, ಬಲಗೈ ಸೇರೋರಾರು? ಇಲ್ಲಿದೆ ಪಟ್ಟಿ!

ಸಾರಾಂಶ

ಧರ್ಮಸ್ಥಳ ವಿರುದ್ದ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಜೆಡಿಎಸ್ ನಾಯಕ ಸಾರಾ ಮಹೇಶ್ ನೇತೃತ್ವದಲ್ಲಿ ಮೈಸೂರಿನಿಂದ ಧರ್ಮಸ್ಥಳ ಯಾತ್ರೆ ಆರಂಭಗೊಂಡಿದೆ. 300 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜೆಡಿಎಸ್ ಯಾತ್ರೆಗೆ ಚಾಲನೆ ನೀಡಲಾಗಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ದ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ನಿಲ್ಲಬೇಕು ಎಂದು ಜೆಡಿಎಸ್ ನಾಯಕರು, ಕಾರ್ಯಕರ್ತರು ಯಾತ್ರೆ ಆರಂಭಿಸಿದ್ದಾರೆ. ಷಡ್ಯಂತ್ರ ಹಿಂದಿನ ಕಾಣದ ಕೈಗಳಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ಧರ್ಮಸ್ಥಳ ಪ್ರಕರಣ ಸಂಬಂಧ ಬಂಧಿತ ಮಾಸ್ಕ್ ಮ್ಯಾನ್ ವಿಚಾರಣೆ ಇಂದು ನಡೆಯಲಿದೆ. ಇತ್ತ ಯೂಟ್ಯೂಬರ್ ಸಮೀರ್ ಇಂದು ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ರಾಜ್ಯದ ಇಂದಿನ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

Karnataka Govt Order SC Sub Quota Distribution

11:49 PM (IST) Aug 25

ಪರಿಶಿಷ್ಟ ಜಾತಿ ಒಳಮೀಸಲಾತಿ ಆದೇಶ ಪ್ರಕಟ; 101 ಜಾತಿಗಳಲ್ಲಿ ಎಡಗೈ, ಬಲಗೈ ಸೇರೋರಾರು? ಇಲ್ಲಿದೆ ಪಟ್ಟಿ!

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಮರುವಿಂಗಡಿಸಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ವಯ 5 ಪ್ರವರ್ಗಗಳ ಬದಲಾಗಿ 3 ಪ್ರವರ್ಗಗಳಾಗಿ ವಿಂಗಡಿಸಿ, ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗಿದೆ. 101 ಜಾತಿಗಳ ಪೈಕಿ ಯಾರಿ ಯಾವ ವರ್ಗಕ್ಕೆ ಬರುತ್ತೀರಿ ಈ ಆದೇಶ ಪಟ್ಟಿ ನೋಡಿ..

Read Full Story

11:36 PM (IST) Aug 25

ದಕ್ಷಿಣ ಭಾರತದ ಗಣೇಶ ದೇವಸ್ಥಾನಗಳು - ಗಣೇಶ ಚತುರ್ಥಿಗೆ ಭೇಟಿ ನೀಡಲೇಬೇಕಾದ 5 ದೇವಸ್ಥಾನಗಳು

ದಕ್ಷಿಣ ಭಾರತದ ಅತ್ಯುತ್ತಮ ಗಣೇಶ ದೇವಸ್ಥಾನಗಳು: ಗಣೇಶ ಚತುರ್ಥಿ ಬಪ್ಪನಿಗೆ ತುಂಬಾ ವಿಶೇಷವಾದ ಹಬ್ಬ. ಈ ವಿಶೇಷ ಸಂದರ್ಭದಲ್ಲಿ ಗಣಪತಿ ಬಪ್ಪನ ದರ್ಶನ ಪಡೆಯಲು ಬಯಸುವವರು ದಕ್ಷಿಣ ಭಾರತದ ಕೆಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ನಿಮ್ಮ ಹರಕೆಗಳನ್ನು ಪೂರೈಸಿಕೊಳ್ಳಿ.

Read Full Story

11:27 PM (IST) Aug 25

ಬೆಂಗಳೂರು ಜನರೇ ಕಸ ಹಾಕುವ ಟೈಮ್ ಚೇಂಜ್; ಬೆಳಗ್ಗೆ 5.30ಕ್ಕೆ ಮನೆ ಮುಂದೆ ಬರಲಿದೆ ಬಿಬಿಎಂಪಿ ಆಟೋ ಟಿಪ್ಪರ್!

ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಹಾಜರಾತಿ ಸಮಯವನ್ನು ಬೆಳಿಗ್ಗೆ 5.30 ರಿಂದ 6.30 ರವರೆಗೆ ಪರಿಷ್ಕರಿಸಲಾಗಿದೆ. ನಿವಾಸಿಗಳು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗುವಂತೆ ಈ ಬದಲಾವಣೆ ಮಾಡಲಾಗಿದೆ.
Read Full Story

11:22 PM (IST) Aug 25

Mandya ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ

ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ ಬಸ್ ತಂಗುದಾಣವನ್ನು ನೆಲಸಮಗೊಳಿಸಲಾಗಿದೆ. ಕೇವಲ ಎರಡು ವರ್ಷದ ಹಳೆಯ ಬಸ್ ನಿಲ್ದಾಣವನ್ನು ಕೆಡವಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು.

Read Full Story

11:07 PM (IST) Aug 25

ಕಾಂಗ್ರೆಸ್ ಪಂಚ ಗ್ಯಾರಂಟಿಗಳಿಗೆ 97,499 ಕೋಟಿ ಖರ್ಚು ಮಾಡಿದ ಸರ್ಕಾರ; ಬಂಡವಾಳ ವೆಚ್ಚದ ಹೊರೆ ಅಲ್ಲಗಳೆದ ರೇವಣ್ಣ!

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ₹94,177 ಕೋಟಿ ಖರ್ಚು ಮಾಡಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಸಿಎಜಿ ವರದಿ ಯೋಜನೆಗಳ ಟೀಕೆ ಮಾಡಿಲ್ಲ, ಬದಲಾಗಿ ಖರ್ಚಿನ ಲೆಕ್ಕವನ್ನು ಮಾತ್ರ ನೀಡಿದೆ ಎಂದು ಅವರು ಹೇಳಿದ್ದಾರೆ.
Read Full Story

10:50 PM (IST) Aug 25

ಊಟಕ್ಕೆ ಬರ್ತಿನಿ ಅಮ್ಮಾ.... ಮನೆಗೆ ಬರೋವಷ್ಟರಲ್ಲಿ ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಕೊಲೆ

ಹಾವೇರಿಯಲ್ಲಿ ಚಿತ್ರದುರ್ಗ ಮೂಲದ ನೃತ್ಯ ಮಾಸ್ಟರ್ ಲಿಂಗೇಶ್ ಅವರ ಕೊಲೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ಫ್ಲೈಓವರ್ ಮೇಲೆ ಅವರ ಮೃತದೇಹ ಪತ್ತೆಯಾಗಿದೆ.

Read Full Story

10:32 PM (IST) Aug 25

2025ರ ಟಾಪ್-5 ಸಿನಿಮಾದಲ್ಲಿ 'ಸು ಪ್ರಂ ಸೋ'ಗಿದೆಯೇ ಸ್ಥಾನ? ₹15 ಕೋಟಿ ವೆಚ್ಚದ 'ಮಹಾವತಾರ ನರಸಿಂಹ' 300 ಕೋಟಿ ಗಳಿಕೆ!

ಮಹಾವತಾರ್ ನರಸಿಂಹ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಸಾಬೀತಾಗಿದೆ. 32 ದಿನಗಳಲ್ಲಿ ಚಿತ್ರವು ವಿಶ್ವಾದ್ಯಂತ 301 ಕೋಟಿ ರೂ.ಗಿಂತ ಹೆಚ್ಚು ಗಳಿಸಿದೆ. 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು 1450% ಕ್ಕಿಂತ ಹೆಚ್ಚು ಲಾಭ ಬಂದಿದೆ. ಸು ಫ್ರಂ ಸೋಗಿದೆಯೇ ಟಾಫ್-5 ಸ್ಥಾನ?

Read Full Story

09:13 PM (IST) Aug 25

ಆಸ್ತಿಗಾಗಿ ಕೆಸರು ಗದ್ದೆಯಲ್ಲಿ ಮಗಳನ್ನು ಬೀಳಿಸಿ ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ; ವಿಡಿಯೋ ವೈರಲ್

ಮಂಡ್ಯ ಜಿಲ್ಲೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲತಾಯಿಯೊಬ್ಬಳು ಮಲಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story

07:52 PM (IST) Aug 25

ಧರ್ಮಸ್ಥಳ ಕೇಸಿನ ಮಾಸ್ಕ್‌ಮ್ಯಾನ್ ಚಿನ್ನಯ್ಯ, ತಿಮರೋಡಿ ಮನೆಯಲ್ಲಿದ್ದದ್ದು ನಿಜ; ಜಯಂತ್.ಟಿ

ಧರ್ಮಸ್ಥಳ ಪ್ರಕರಣದಲ್ಲಿ ಜಯಂತ್.ಟಿ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ, ಸುಜಾತ ಭಟ್ ಪ್ರಕರಣವನ್ನು ಸುಳ್ಳು ಎಂದು ಕರೆದಿದ್ದಾರೆ ಮತ್ತು ಚಿನ್ನಯ್ಯನಿಗೆ ಆಶ್ರಯ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಸತ್ಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿ ಹೇಳಿ, ಬಂಧನಕ್ಕೆ ಸಿದ್ಧ ಎಂದಿದ್ದಾರೆ.

Read Full Story

07:38 PM (IST) Aug 25

ಹಿಂದಿನ ಹೇಳಿಕೆಗೆ ಬಾನು ಮುಷ್ತಾಕ್ ಸ್ಪಷ್ಟನೆ ಅಗತ್ಯವೆಂದ ಯದುವೀರ್ ಒಡೆಯರ್

ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆ ಆಯ್ಕೆ ಕುರಿತು ಯದುವೀರ್ ಒಡೆಯರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ಬಗ್ಗೆ ಗೌರವ ಸ್ಪಷ್ಟಪಡಿಸುವಂತೆ ಮುಷ್ತಾಕ್ ಅವರಿಗೆ ಒತ್ತಾಯಿಸಿದ್ದಾರೆ. 

Read Full Story

06:51 PM (IST) Aug 25

ನನ್ನ ತಮ್ಮ 'ಚಿನ್ನಯ್ಯ' ಚಿನ್ನದಂಥಾ ವ್ಯಕ್ತಿ! ಯಾರೋ ಷಡ್ಯಂತ್ರ ಮಾಡಿದ್ದಾರೆಂದ ಅಣ್ಣ ಆರ್ಮುಗಂ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ ಆರೋಪದಲ್ಲಿ ಬಂಧಿತನಾಗಿರುವ 'ಮಾಸ್ಕ್‌ಮ್ಯಾನ್' ಚಿನ್ನಯ್ಯನ ಸಹೋದರ ಆರ್ಮುಗಂ, ಚಿನ್ನಯ್ಯನ ಕೃತ್ಯದ ಹಿಂದೆ ಬೇರೆಯವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಚಿನ್ನಯ್ಯ ಒಳ್ಳೆಯ ಹುಡುಗ, ಇಂತಹ ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ.
Read Full Story

06:48 PM (IST) Aug 25

ಜಸ್ಟ್‌ 999 ರೂಪಾಯಿಗೆ ಸಿಗ್ತಿದೆ boAt ಇಯರ್‌ಬಡ್ಸ್‌!

boAt ಕಂಪನಿಯ ಜನಪ್ರಿಯ ಇಯರ್‌ಬಡ್ಸ್‌ಗಳು ಈಗ ಅಮೆಜಾನ್‌ನಲ್ಲಿ ಕೇವಲ ₹999ಕ್ಕೆ ಲಭ್ಯವಿದೆ. Airdopes 141, Airdopes Joy ಮತ್ತು Airdopes 311 Pro ಮಾದರಿಗಳಲ್ಲಿ 70% ಕ್ಕಿಂತ ಹೆಚ್ಚು ರಿಯಾಯಿತಿ ಲಭ್ಯವಿದೆ.
Read Full Story

06:41 PM (IST) Aug 25

ನಮ್ಮ ಮೆಟ್ರೋ ದರ ಏರಿಕೆ ದೆಹಲಿ ಮೆಟ್ರೋ ದರ ಜೊತೆ ಹೋಲಿಕೆ ಮಾಡಿ BMRCL ಗೆ ತೇಜಸ್ವಿ ಸೂರ್ಯ ಟಾಂಗ್

ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ದೆಹಲಿ ಮೆಟ್ರೋ ದರ ಏರಿಕೆಗೆ ಹೋಲಿಸಿ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಬಿಎಂಆರ್‌ಸಿಎಲ್ ದರ ಏರಿಕೆ ಅಸಮಂಜಸ ಹಾಗೂ ಸಾರ್ವಜನಿಕರಿಗೆ ಹೊರೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಶುಲ್ಕ ನಿಗದಿ ಸಮಿತಿ ವರದಿ ಪ್ರಕಟಿಸದಿರುವುದನ್ನು ಪ್ರಶ್ನಿಸಿದ್ದಾರೆ.
Read Full Story

05:48 PM (IST) Aug 25

ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಬಾಗಿನ ಸ್ವೀಕರಿಸಿ, ಕುಂಕುಮ ಇಟ್ಟ ಬಾನು ಮುಷ್ತಾಕ್; ಇಲ್ಲಿದೆ ಫಸ್ಟ್ ರಿಯಾಕ್ಷನ್!

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಮೈಸೂರು ದಸರಾ 2025 ಉದ್ಘಾಟನೆಗೆ ಆಹ್ವಾನ ನೀಡಲಾಗಿದ್ದು, ನಟಿ ಶಶಿಕಲಾ ಅವರು ಬಾನು ಮುಷ್ತಾಕ್ ಅವರಿಗೆ ಬಾಗಿನ ನೀಡಿ ಗೌರವಿಸಿದ್ದಾರೆ. ಈ ಆಯ್ಕೆಯನ್ನು ಕೆಲವರು ವಿರೋಧಿಸಿದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ.
Read Full Story

05:23 PM (IST) Aug 25

ತುಂಗಭದ್ರಾ ಡ್ಯಾಂನ ಕ್ರಸ್ಟ್‌ಗೇಟ್‌ಗಳ ರಿಪೇರಿ ಆರಂಭ - ಊರ ಜನರಿಗೆ ಹೋದ ಜೀವ ಬಂದಂಗಾಯ್ತು!

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅಳವಡಿಕೆ ಆರಂಭವಾಗಲಿದೆ. ಈ ನಡುವೆ, ಜಲಾಶಯದ ಸ್ಥಿತಿಗತಿ ಪರಿಶೀಲಿಸಲು ಬಿಜೆಪಿ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Read Full Story

05:23 PM (IST) Aug 25

ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿದ ಯದುವೀರ್ ಒಡೆಯರ್; ಬಿಜೆಪಿಗೆ ತೀವ್ರ ಮುಖಭಂಗ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದನ್ನು ಯದುವೀರ್ ಒಡೆಯರ್ ಸ್ವಾಗತಿಸಿದ್ದಾರೆ.

Read Full Story

05:07 PM (IST) Aug 25

'ಅಮ್ಮನಿಲ್ಲದ ಮೊದಲ ವರ್ಷ..' ಬರ್ತ್‌ಡೇ ಕುರಿತು ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್‌ ನೀಡಿದ ಕಿಚ್ಚ ಸುದೀಪ್‌!

ಕಿಚ್ಚ ಸುದೀಪ್ ಅವರು ಈ ವರ್ಷ ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಲಿದ್ದಾರೆ. ಸೆಪ್ಟೆಂಬರ್ 2 ರಂದು 52ನೇ ವರ್ಷಕ್ಕೆ ಕಾಲಿಡಲಿರುವ ಅವರು, ಸೆಪ್ಟೆಂಬರ್ 1 ರ ರಾತ್ರಿಯೇ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Read Full Story

04:53 PM (IST) Aug 25

ಕೊಡಗಿನ ದೀಪಾ ಬಾಸ್ತಿ ಕೂಡ ಬೂಕರ್‌ ಗೆದ್ದಿದ್ದಾರೆ, ಅವರನ್ನ ಯಾಕೆ ದಸರಾ ಉದ್ಘಾಟನೆಗೆ ಆಹ್ವಾನಿಸಿಲ್ಲ - ವಿಜಯೇಂದ್ರ ಪ್ರಶ್ನೆ!

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ಸರ್ಕಾರ ಅವರ ಸಾಧನೆಯನ್ನು ಗುರುತಿಸಿ ಆಹ್ವಾನ ನೀಡಲಾಗಿದೆ ಎಂದಿದೆ.
Read Full Story

04:52 PM (IST) Aug 25

ಈ ವರ್ಷವೇ ಸಿದ್ದರಾಮಯ್ಯ ರಾಜೀನಾಮೆ ಕೊಡೋದಂತು ಸತ್ಯ, ಖರ್ಗೆ ಸಿಎಂ ಆಗ್ತಾರಾ, ಡಿಕೆಶಿ ಆಗ್ತಾರಾ ಕಾದು ನೋಡಬೇಕು!

ಡಿಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿ, ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಸದ್ಗುರುಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಇದು ಹಿಂದೂ ಧರ್ಮದ ಮೇಲಿನ ನಿಜವಾದ ನಂಬಿಕೆಯೇ ಅಥವಾ ರಾಜಕೀಯ ತಂತ್ರಗಾರಿಕೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.  ಎಂದು ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

Read Full Story

04:36 PM (IST) Aug 25

ಎನ್‌ಸಿಸಿ ಸೆಲೆಕ್ಷನ್ ವೇಳೆ ರನ್ನಿಂಗ್ ಓಡುತ್ತಲೇ ಕುಸಿದುಬಿದ್ದು ಮೃತಪಟ್ಟ ವಿದ್ಯಾರ್ಥಿ!

ಧಾರವಾಡದ ಐಐಟಿಯಲ್ಲಿ ಎನ್‌ಸಿಸಿ ಆಯ್ಕೆ ರನ್ನಿಂಗ್‌ರೇಸ್ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಎಂಬ ಎಂ.ಟೆಕ್ ವಿದ್ಯಾರ್ಥಿ ಓಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Read Full Story

04:35 PM (IST) Aug 25

ಮದ್ವೆಯಾಗಿದ್ರೂ ಅಕ್ರಮ ಸಂಬಂಧ; ಬಾಯಿಗೆ ಸ್ಪೋಟಕ ತುರುಕಿ ಕೊಂದ ಪ್ರೇಮಿ

ಕಲ್ಯಾಡ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಯುವತಿ ದರ್ಶಿತಾಳನ್ನು ಬಾಯಲ್ಲಿ ಸ್ಫೋಟಕ ತುರುಕಿ ಕೊಲೆ ಮಾಡಲಾಗಿದೆ. ಮಾವನನ್ನು ಸೊಸೆ ಕೊಲೆ ಮಾಡಿರುವ ಘಟನೆಯೂ ವರದಿಯಾಗಿದೆ.

Read Full Story

04:19 PM (IST) Aug 25

ಬಾನು ಮುಸ್ತಾಕ್ ಚಾಮುಂಡಿ ದೇವಿನ ಒಪ್ಪಿದ್ರೆ ದಸರಾ ಉದ್ಘಾಟನೆ ಮಾಡ್ಲಿ - ಬಿಜೆಪಿ ಶಾಸಕ ಸುರೇಶ್ ಗೌಡ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದನ್ನು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಖಂಡಿಸಿದ್ದಾರೆ. ನಾಸ್ತಿಕರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಸರ್ಕಾರ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story

03:55 PM (IST) Aug 25

ಈ ಫೋಟೋ ಇಲ್ಲಿ ಹಾಕಿದ್ಯಾರು? ಕಿಪಿ ಕೀರ್ತಿ ಅಭಿಮಾನಿಗಳ ಆಕ್ರೋಶ

ನಿರ್ಮಾಣ ಹಂತದ ಕಟ್ಟಡಕ್ಕೆ ಕಿಪಿ ಕೀರ್ತಿಯ ಫೋಟೋ ಅಳವಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅವಮಾನ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story

03:52 PM (IST) Aug 25

ಮೈಸೂರು ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ಪ್ರವಾಸಿಗರಿಗೆ 2 ದಿನ ಪ್ರವೇಶ ನಿಷೇಧ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1 ರಂದು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೈಸೂರು ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿಯೂ ಭಾಗವಹಿಸಲಿದ್ದಾರೆ.

Read Full Story

03:50 PM (IST) Aug 25

ಇಡಿ ದಾಳಿ ನಡುವೆ ಮನೆ ಗೋಡೆ ಹಾರಿ ಎಸ್ಕೇಪ್ ಆಗಲು ಯತ್ನಿಸಿದ ಶಾಸಕ ಅರೆಸ್ಟ್, ವಿಡಿಯೋ

ಅಕ್ರಮಗಳ ತನಿಖೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು ಏಕಾಏಕಿ ಶಾಸಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಡಿ ದಾಳಿಯಾಗುತ್ತಿದ್ದಂತೆ ಶಾಸಕ ಮನೆಯ ಗೋಡೆ ಹತ್ತಿ ಕೆಳಕ್ಕೆ ಜಿಗಿದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಓಡಿ ಹೋಗಲು ಪ್ರಯತ್ನಿಸಿದ ಶಾಸಕನನ್ನು ಅರೆಸ್ಟ್ ಮಾಡಲಾಗಿದೆ.

Read Full Story

03:32 PM (IST) Aug 25

ಭಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ - 'ಭುವನೇಶ್ವರಿ ಒಪ್ಪದವರು ಚಾಮುಂಡಿ ಒಪ್ಪುತ್ತಾರಾ?' ಎಂದ ಶೋಭಾ ಕರಂದ್ಲಾಜೆ

ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ಧ್ವಜ ಮತ್ತು ಭುವನೇಶ್ವರಿ ಪರಿಕಲ್ಪನೆಯನ್ನು ಒಪ್ಪದ ಭಾನು, ಚಾಮುಂಡೇಶ್ವರಿಯನ್ನು ಹೇಗೆ ಒಪ್ಪುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

Read Full Story

03:08 PM (IST) Aug 25

ನಟ ದಿನೇಶ್‌ ಮಂಗಳೂರಿಗೆ ಏನಾಗಿತ್ತು, ಸರ್ಜನ್‌ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಶ್ವೇಶ್ವರ ರಾವ್‌ ಹೇಳಿದ್ದಿಷ್ಟು..

ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಮಂಗಳೂರು (66) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಟುಂಬದವರ ನಿರ್ಧಾರದಂತೆ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗಿದೆ.
Read Full Story

02:48 PM (IST) Aug 25

ಜಾತ್ಯಾತೀತರಲ್ಲವೇ, ಹಣೆಗೆ ಕುಂಕುಮ, ತಲೆಗೆ ಹೂವು ಮುಡಿದು ಭಾನು ಮುಷ್ತಾಕ್‌ ದಸರಾ ಉದ್ಘಾಟಿಸಲಿ - ಮುನಿರತ್ನ ಸವಾಲು

ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರ ದಸರಾ ಉದ್ಘಾಟನೆ ಆಯ್ಕೆಗೆ ವಿರೋಧ ವ್ಯಕ್ತವಾಗಿದೆ. ಶಾಸಕ ಮುನಿರತ್ನ, ಭಾನು ಮುಷ್ತಾಕ್ ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸಿ ಉದ್ಘಾಟನೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. 

Read Full Story

02:40 PM (IST) Aug 25

ಕಾಂಗ್ರೆಸ್‌ಗೆ ಶಾಕ್, ಮಹಿಳಾ ದೌರ್ಜನ್ಯ ಪ್ರಕರಣದಿಂದ ಶಾಸಕ ರಾಹುಲ್ ಎಂ ಪಕ್ಷದಿಂದ ಅಮಾನತು

ಮಹಿಳೆಗೆ ಕಿರುಕುಳ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲ ವಿಧಾನಸಭಾ ಅಧಿವೇಶನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ.

Read Full Story

01:47 PM (IST) Aug 25

ಧರ್ಮಸ್ಥಳ ಪ್ರಕರಣ - ಅನನ್ಯ ಭಟ್ ಇರುವುದೇ ಸುಳ್ಳು, ಇದು ಮತಾಂತರದ ಗ್ಯಾಂಗ್ - ಆರ್.ಅಶೋಕ್ ವಾಗ್ದಾಳಿ

ಈಗ ಅನನ್ಯ ಭಟ್ ಇರುವುದೇ ಸುಳ್ಳು ಆಗಿದೆ. ಮಾಸ್ಕ್ ಮ್ಯಾನ್‌ಗೆ ಮಾಸ್ಕ್ ಹಾಕಿಸಿರುವುದೇ ಸರ್ಕಾರ. ಅವನಿಗೆ ಬೆಂಬಲ ಕೊಟ್ಟಿರುವುದೇ ಸಿದ್ದರಾಮಯ್ಯ ಸರ್ಕಾರ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Read Full Story

01:19 PM (IST) Aug 25

10 ಗುಂಡಿ ತೆಗೆದ ಬಳಿಕ ಧರ್ಮಸ್ಥಳ ಬಗ್ಗೆ ಬಿಜೆಪಿಗರ ಮಾತು - ಸಚಿವ ಎಂ.ಬಿ. ಪಾಟೀಲ್‌

ಬಿಜೆಪಿಯವರು 10 ಗುಂಡಿ ತೆಗೆದ ಮೇಲೆ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾಕೆ ಮಾತನಾಡಲಿಲ್ಲ? ಈಗ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ಕಿಡಿಕಾರಿದರು.

Read Full Story

01:18 PM (IST) Aug 25

ಎಐ ರೀಲ್‌ ಸ್ಟಾರ್‌ ಸಮೀರ್‌ ಎಂಡಿ ಯೂಟ್ಯೂಬ್‌ ಆದಾಯದ ಮೂಲದತ್ತ ಪೊಲೀಸರ ತನಿಖೆ!

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಎಸಗಿದ ಆರೋಪದ ಮೇಲೆ ಸಮೀರ್‌ ಎಂಡಿ ವಿಚಾರಣೆಗೆ ಒಳಗಾಗಿದ್ದಾರೆ. ಪೊಲೀಸರು ಅವರ ಯೂಟ್ಯೂಬ್‌ ಆದಾಯದ ಮೂಲದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಹಣಕಾಸಿನ ಲಾಭಕ್ಕಾಗಿ ಸುಳ್ಳು ವಿಷಯ ಹಂಚಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ.
Read Full Story

01:11 PM (IST) Aug 25

ತಾಯಿ ಚಾಮಂಡಿ ನಂಬ್ತಾರೋ, ಬಿಡ್ತಾರೋ ಅವ್ರಿಗೆ ಬಿಟ್ಟಿದ್ದು, ದಸರಾ ವಿವಾದಕ್ಕೆ ಪರಮೇಶ್ವರ್ ಉತ್ತರ

ಲೇಖಕಿ ಭಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವ ಕಾಂಗ್ರೆಸ್ ನಿರ್ಧಾರ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ತಾಯಿ ಚಾಮಂಡಿಯನ್ನು ನಂಬುತ್ತಾರೋ, ಬಿಡುತ್ತಾರೋ ಅವರಿಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

Read Full Story

12:59 PM (IST) Aug 25

ಕರ್ನಾಟಕದ ಹೆಮ್ಮ ನಂದಿನಿ ಹಾಲಿನ ಜಾಗತಿಕ ಪಯಣ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿ ಹಲವು ದೇಶಗಳಲ್ಲಿ ಲಭ್ಯ!

ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ಈಗ ದೇಶದ ಗಡಿ ದಾಟಿ ವಿದೇಶಗಳಿಗೂ ರಫ್ತಾಗಲು ಸಜ್ಜಾಗಿದೆ. ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಶೀಘ್ರದಲ್ಲೇ  ಲಭ್ಯವಾಗಲಿದೆ. ಹೆಚ್ಚುತ್ತಿರುವ ಬೇಡಿಕೆ ಹಾಗೂ ಉತ್ಪಾದನಾ ಸಾಮರ್ಥ್ಯದೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಿದ್ಧವಾಗಿದೆ.

Read Full Story

12:48 PM (IST) Aug 25

ಕನ್ನಡ 'ಭುವನೇಶ್ವರಿ' ಒಪ್ಪದವರಿಗೆ ಚಾಮುಂಡಿಯ ದಸರಾ ಉದ್ಘಾಟನೆ ಏಕೆ? ಪ್ರಶ್ನೆ ಮಾಡಿದ ಚಕ್ರವರ್ತಿ ಸೂಲಿಬೆಲೆ!

ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಭಾನು ಅವರ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. 

Read Full Story

12:26 PM (IST) Aug 25

ಪಿಎಂ-ಸಿಎಂ ಪದಚ್ಯುತಿ ಬಿಲ್‌ನಿಂದ ನನಗೆ ವಿನಾಯಿತಿ ಬೇಡ, ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಮೋದಿ

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಪಕ್ಷಗಳು ಇದು ವಿರೋಧಿಗಳ ಹಣಿಯುವ ತಂತ್ರ ಎಂದು ಆರೋಪಿಸಿದೆ. ಆದರೆ ಈ ಮಸೂದೆ ಕುರಿತು ಪ್ರಧಾನಿ ಮೋದಿ ತೆಗೆದುಕೊಂಡ ದೃಢ ನಿರ್ಧಾರ ಕುರಿತು ಸಚಿವ ಕಿರಣ್ ರಿಜಿಜು ಬಹಿರಂಗಪಡಿಸಿದ್ದಾರೆ.

Read Full Story

12:23 PM (IST) Aug 25

ಧರ್ಮಸ್ಥಳ ಬುರುಡೆ ರಹಸ್ಯ - ಅಣ್ಣನ ಮುಂದೆ ಸತ್ಯ ಬಾಯ್ಬಿಟ್ಟ ದೂರುದಾರ, ತಮಿಳುನಾಡಿಗೂ ವಿಸ್ತರಿಸಿದ ತನಿಖೆ

ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ದೂರುದಾರ ತಪ್ಪೊಪ್ಪಿಕೊಂಡಿದ್ದಾನೆ. ಎಸ್‌ಐಟಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿರುವ ದೂರುದಾರ, ತನಿಖೆಗೆ ಸಹಕರಿಸುತ್ತಿದ್ದಾನೆ. ಮಂಡ್ಯ ಮತ್ತು ತಮಿಳುನಾಡಿಗೂ ವಿಸ್ತರಿಸಿರುವ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುವುದಿದೆ.

Read Full Story

11:33 AM (IST) Aug 25

ವರದಿಗಾರರ ಡೈರಿ - ಮೇಲ್ಮನೆಗೆ ಬಂದು ಹೋಯ್ತು ‘ನಿಗೂಢ’ ನಾನ್‌ಸ್ಟಾಪ್‌ ರೈಲು!

ಸಭಾಪತಿ ಯಾರಿಗೆ ಅವಕಾಶ ಕೊಡಬೇಕೆಂದು ಯೋಚಿಸುತ್ತಿರುವಾಗಲೇ ನಾಗರಾಜ ಯಾದವ್‌, ತಾವು ಹೇಳಬೇಕೆಂದಿದ್ದ ವಿಚಾರವನ್ನು ಒಂದೇ ಉಸಿರಿಗೆ ಫುಲ್‌ಸ್ಟಾಪ್‌, ಕೊಮಾ ಇಲ್ಲದಂತೆ ಹೇಳಿ ಮುಗಿಸಿ ಬಿಟ್ಟರು.

Read Full Story

11:16 AM (IST) Aug 25

ಗಣೇಶ ಹಬ್ಬಕ್ಕೆ ಬಿಬಿಎಂಪಿ ಸಜ್ಜು ವಿಶೇಷ ವ್ಯವಸ್ಥೆ, ಕಠಿಣ ನಿಯಮ, ಎಲ್ಲೆಲ್ಲ ವಿಸರ್ಜನೆ ಮಾಡಬಹುದು?

ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ತಯಾರಿ ಜೋರಾಗಿದೆ. ಬಿಬಿಎಂಪಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಸಾರಿಗೆ ಇಲಾಖೆ ಖಾಸಗಿ ಬಸ್‌ಗಳ ದರ ಏರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
Read Full Story

11:16 AM (IST) Aug 25

ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಚಿನ್ನಯ್ಯ; ತಿಮರೋಡಿ, ಮಟ್ಟೆಣ್ಣನವರ್, ಜಯಂತ್‌ಗೆ ನೋಟಿಸ್ ಸಾಧ್ಯತೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ದೂರುದಾರ ಚಿನ್ನಯ್ಯ ಅರೆಸ್ಟ್ ಆಗಿ ವಿಚಾರಣೆ ಎದುರಿಸುತ್ತಿದ್ದಾನೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಇದೀಗ ಎಸ್ಐಟಿ ಅಧಿಕಾರಿಗಳು ತಿಮರೋಡಿ, ಮಟ್ಟೆಣ್ಣನವರ್, ಜಯಂತ್‌ ಗ್ಯಾಂಗ್‌ಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

Read Full Story

More Trending News