Published : Sep 09, 2025, 06:12 AM ISTUpdated : Sep 09, 2025, 11:24 PM IST

Karnataka News Live: 2025ರಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಟಾಪ್ 5 ಸಿನಿಮಾಗಳ ಲಿಸ್ಟ್ ನೋಡಿ! ಕಮಾಲ್ ಮಾಡಿದ ಉಪ್ಪಿ!

ಸಾರಾಂಶ

ಮಂಡ್ಯ/ಮದ್ದೂರು: ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯ ಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಘಟನೆ ಖಂಡಿಸಿ ಬಿಜೆಪಿ-ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮೆರವಣಿಗೆ ಮೇಲೆ ಎರಡು ಬಾರಿ ಕಲ್ಲು ತೂರಾಟ, ಮಾರಕಾಸ್ತ್ರ ಝಳಪಿಸಿದ ಘಟನೆಗಳು ನಡೆದಿವೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರು ಸೇರಿ 6 ಮಂದಿ ಗಾಯಗೊಂಡಿದ್ದಾರೆ. ಘಟನೆ ಖಂಡಿಸಿ ಇಂದು ಹಿಂದೂಪರ ಸಂಘಟನೆಗಳು ಇಂದು ಮದ್ದೂರು ಬಂದ್‌ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಇದೇ ವೇಳೆ, ಬುಧವಾರ ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರ ನಿಯೋಗ ಇದರಲ್ಲಿ ಪಾಲ್ಗೊಳ್ಳಲಿದೆ.

11:24 PM (IST) Sep 09

2025ರಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಟಾಪ್ 5 ಸಿನಿಮಾಗಳ ಲಿಸ್ಟ್ ನೋಡಿ! ಕಮಾಲ್ ಮಾಡಿದ ಉಪ್ಪಿ!

2025ರಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 5 ತಮಿಳು ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದೆ. ಯಾವ್ಯಾವ ಸಿನಿಮಾಗಳು ಈ ಪಟ್ಟಿಯಲ್ಲಿವೆ ಅಂತ ನೋಡೋಣ.

Read Full Story

11:19 PM (IST) Sep 09

ನೇಪಾಳ ಪ್ರಧಾನಿ ರಾಜೀನಾಮೆ ಬಳಿಕ ಮಹತ್ವದ ಬೆಳವಣಿಗೆ, ಹಿಂದೂ ರಾಜ್ಯ ಮರುಸ್ಥಾಪಿಸಿ ರಾಜರ ಆಡಳಿತ?

ನೇಪಾಳದ ಪರಿಸ್ಥಿತಿ ಕೈಮೀರಿದೆ. ಪ್ರಧಾನಿ ರಾಜೀನಾಮೆ ನೀಡಿದ್ದರೆ, ಹಲವು ಮಾಜಿ ಪ್ರಧಾನಿಗಳು ಮೇಲೆ ದಾಳಿಯಾಗಿದೆ. ನೇಪಾಳ ಸೇನೆ ರಂಗ ಪ್ರವೇಶ ಮಾಡಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದೆ. ಇದರ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ನೇಪಾಳದಲ್ಲಿ ಮತ್ತೆ ರಾಜ ಆಡಳಿತ ಬರುತ್ತಾ?

Read Full Story

11:00 PM (IST) Sep 09

ಬ್ರಿಟೀಷರ ಕಾಲದಲ್ಲಿ ಸತ್ತ ಅಜ್ಜಿಯ ಸಮಾಧಿ ಹುಡುಕಿಕೊಂಡು ನಂದಿ ಬೆಟ್ಟಕ್ಕೆ ಇಂಗ್ಲೆಂಡಿಗ! ಸಾಥ್ ಕೊಟ್ಟ ನಳಿನಿ

ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಬ್ರಿಟಿಷ್ ಕಾಲದ ಸಾಹಿತಿ ಜಾನ್ ಗ್ಯಾರೆಟ್ ಪತ್ನಿ ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಇಂಗ್ಲೆಂಡಿನಿಂದ ಬಂದ ಅವರ ವಂಶಸ್ಥರು ಪತ್ತೆ ಮಾಡಿದ್ದಾರೆ. ದೇಶ, ಕುಟುಂಬ ಬಿಟ್ಟು ಭಾರತಕ್ಕೆ ಬಂದ ಪೊರ್ವಜರ  ಸಮಾಧಿ ನೋಡಿ ಭಾವುಕರಾಗಿದ್ದು, ಅವರಿಗೆ  ಗೌರವ ಸಲ್ಲಿಸಿದ್ದಾರೆ.

Read Full Story

10:37 PM (IST) Sep 09

ಕೈಗೆ ಸಿಕ್ಕ ನೇಪಾಳ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಥಳಿಸಿದ ಜೆನ್ ಜೆಡ್ ಪ್ರತಿಭಟನಾಕಾರರು

ನೇಪಾಳದಲ್ಲಿ ಜೆನ್ ಜೆಡ್ ಸಮುದಾಯದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಆಕ್ರೋಶವೆಲ್ಲಾ ಅಲ್ಲಿನ ರಾಜಕಾರಣಿಗಳತ್ತ ತಿರುಗಿದೆ. ಕೈಗೆ ಸಿಕ್ಕ ತಮ್ಮ ದೇಶದ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಪ್ರತಿಭಟನಾಕಾರರು ಥಳಿಸಿದ್ದಾರೆ.

Read Full Story

10:32 PM (IST) Sep 09

3 ದಿನ 3 ಪ್ರಧಾನಿಗಳು ಔಟ್! ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ನೇಪಾಳ ಪರಧಾನಿ ರಾಜೀನಾಮೆ ಸೇರಿದಂತೆ ಕಳೆದ ಮೂರೇ ದಿನದಲ್ಲಿ ಮೂವರು ಪ್ರಧಾನಿಗಳು ಸ್ಥಾನ ಕಳದೆುಕೊಂಡಿದ್ದಾರೆ. ಹ್ಯಾಟ್ರಿಕ್ ಪ್ರಧಾನಿಗಳ ರಾಜೀನಾಮೆ ಹಿಂದಿನ ಕಾರಣವೇನು?

Read Full Story

10:32 PM (IST) Sep 09

ಅಂಕೋಲಾ ಶಾಸಕ ಸತೀಶ್ ಸೈಲ್ ಬಂಧನ - ₹1.41 ಕೋಟಿ ನಗದು, 6.75 ಕೆ.ಜಿ. ಚಿನ್ನ ಜಪ್ತಿ!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಬಂಧನ ಮಾಡಲಾಗಿದೆ. 250 ಕೋಟಿ ರೂ. ಬೆಲೆಬಾಳುವ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ದಾಳಿ ನಡೆಸಿತ್ತು. ಈ ವೇಲೆ ಸತೀಶ್ ಸೈಲ್ ಮನೆಯಲ್ಲಿ 1.41 ಕೋಟಿ ರೂ. ನಗದು ಮತ್ತು 6.75 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.

Read Full Story

09:22 PM (IST) Sep 09

ಶಾಸಕ ವೀರೇಂದ್ರ ಪಪ್ಪಿ ₹100 ಕೋಟಿ ಅಕ್ರಮ ಸಂಪತ್ತು ಜಪ್ತಿ ಮಾಡಿದ ಇಡಿ; 21 ಕೆಜಿ ಬಂಗಾರ ವಶ!

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಇಡಿ ದಾಳಿ ಚಳ್ಳಕೆರೆಯಲ್ಲಿ ದಾಳಿ ನಡೆಸಿ ₹24 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಇದೀಗ, ಒಟ್ಟು ವಶಪಡಿಸಿಕೊಂಡ ಆಸ್ತಿ ₹100 ಕೋಟಿ ದಾಟಿದೆ. ವೀರೇಂದ್ರ ಇ.ಡಿ. ಕಸ್ಟಡಿಯಲ್ಲಿದ್ದಾರೆ.

Read Full Story

08:58 PM (IST) Sep 09

RSS ಕಟ್ಟಾಳು, ಬಿಜೆಪಿ ಕಟ್ಟಿಬೆಳಿಸಿದ ಸಿಪಿ ರಾಧಾಕೃಷ್ಣನ್ ಭಾರತದ 15ನೇ ಉಪ ರಾಷ್ಟ್ರಪತಿ

ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಭರ್ಜರಿ ಬಹುಮತಗಳೊಂದಿಗೆ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್ ಯಾರು? ಇವರ ರಾಜಕೀಯ ಜೀವನ, ಸಾಮಾಜಿಕ ಸೇವೆ ಕುರಿತು ರೋಚಕ ಮಾಹಿತಿ ಇಲ್ಲಿದೆ.

Read Full Story

08:28 PM (IST) Sep 09

ಕಾರ್ಮಿಕ ಕಾಯ್ದೆಗೆ ತಿದ್ದುಪಡಿ, ದಿನಕ್ಕೆ 12 ಗಂಟೆ ಕೆಲಸ!

ಮಹಾರಾಷ್ಟ್ರ ಸರ್ಕಾರ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದೆ. ವಾರದ ಕೆಲಸದ ಅವಧಿಯನ್ನು 60 ಗಂಟೆಗಳಿಗೆ ಹೆಚ್ಚಿಸಲಾಗಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
Read Full Story

08:06 PM (IST) Sep 09

ಗಂಡ, ಹೆಂಡತಿ ಮಕ್ಕಳು ಸೇರಿ ಕಾಲುವೆಗೆ ಹಾರಿದ ಒಂದೇ ಕುಟುಂಬದ 6 ಜನ; ಇಬ್ಬರು ಸೇಫ್, ನಾಲ್ವರು ಸಾವು

ಬೀದರ್‌ನಲ್ಲಿ ಸಾಲಬಾಧೆ ಹಾಗೂ ಆಸ್ತಿ ವಿವಾದದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ತಂದೆ ಮತ್ತು ಮೂರು ಮಕ್ಕಳು ಮೃತಪಟ್ಟರೆ, ತಾಯಿ ಮತ್ತು ಒಂದು ಮಗುವನ್ನು ರಕ್ಷಿಸಲಾಗಿದೆ. ಘಟನೆ ಭಾಲ್ಕಿ ತಾಲೂಕಿನ ಮರೂರಿನಲ್ಲಿ ನಡೆದಿದೆ. 

Read Full Story

07:54 PM (IST) Sep 09

ರಾಜ್ಯ ರಾಜಕಾರಣದಲ್ಲಿ ಬೆಚ್ಚಿಬೀಳಿಸೋ ಹಗರಣ; ಮಾಜಿ ಸಚಿವರ ಬಾಲಂಗೋಚಿಗಳಿಂದ ₹360 ಕೋಟಿ ಲೂಟಿ!

ಕೆಂಗೇರಿ ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ 360 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಹಗರಣ ಬೆಳಕಿಗೆ ಬಂದಿದೆ. ಶಾಸಕರ ಆಪ್ತರು ನಕಲಿ ದಾಖಲೆಗಳ ಮೂಲಕ ಭೂಮಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹೋರಾಟಗಾರರ ಅನುಮಾನಾಸ್ಪದ ಸಾವುಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
Read Full Story

07:35 PM (IST) Sep 09

ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಆಯ್ಕೆ, 532 ಮತಗಳ ಭರ್ಜರಿ ಗೆಲುವು

ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಸಂಜೆ 6 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದೆ.ಇದೀಗ ಫಲಿತಾಂಶ ಘೋಷಣೆಯಾಗಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು ಕಂಡಿದ್ದಾರೆ.

Read Full Story

07:27 PM (IST) Sep 09

ನೇಪಾಳ ಮಾಜಿ ಪ್ರಧಾನಿ ಪತ್ನಿಯನ್ನೇ ಜೀವಂತ ಸುಟ್ಟ ಪ್ರತಿಭಟನಕಾರರು; ವರದಿ

ನೇಪಾಳದ ಪ್ರತಿಭಟನೆ ಹಾಗೂ ಹಿಂಸಾಚಾರ ಕೈಮೀರಿದೆ. ಪ್ರತಿಭಟನಕಾರರು ಸಿಕ್ಕ ಸಿಕ್ಕ ಕಡೆ ಬೆಂಕಿ ಹಚುತ್ತಿದ್ದಾರೆ. ನೇಪಾಳ ಮಾಜಿ ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಮಾಜಿ ಪ್ರಧಾನಿ ಪತ್ನಿ ಜೀವಂತ ದಹನವಾದ ದಾರುಣ ಘಟನೆ ನಡೆದಿದೆ.

Read Full Story

07:03 PM (IST) Sep 09

ಬೆಂಗಳೂರಿನಲ್ಲಿ 3 ದಿನ ನೀರಿಲ್ಲ - ತುರ್ತು ಸಿದ್ಧತೆ ಮಾಡಿಕೊಳ್ಳಿ ಎಂದ ಜಲಮಂಡಳಿ!

ಬೆಂಗಳೂರಿನಲ್ಲಿ ಸೆಪ್ಟೆಂಬರ್ 15 ರಿಂದ 17ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಒಟ್ಟು 3 ದಿನಗಳ ಕಾಲ ಪಂಪಿಂಗ್ ಸ್ಟೇಷನ್‌ಗಳ ನಿರ್ವಹಣಾ ಕಾರ್ಯಗಳಿಂದಾಗಿ ಈ ಅವಧಿಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಡಲು ಬೆಂಗಳೂರು ಜಲಮಂಡಳಿ ಸೂಚಿಸಿದೆ.

Read Full Story

06:53 PM (IST) Sep 09

ಕಾಂಗ್ರೆಸ್ ಸರ್ಕಾರಕ್ಕೆ ಧಾರ್ಮಿಕ ರಾಜಕೀಯ ಸಂಕಷ್ಟ, ಹಿಂದೂ ವಿರೋಧಿ ಎಂಬ ಪಟ್ಟಕಟ್ಟಲು ಈ ಸರಣಿ ಘಟನೆಗಳೇ ಕಾರಣ!

ರಾಜ್ಯದಲ್ಲಿ ನಡೆದ ಉದಯಗಿರಿ ಗಲಭೆ, ನಾಗಮಂಗಲ ಕೋಮುಗಲಭೆ, ಮದ್ದೂರು ಗಣೇಶ ಮೆರವಣಿಗೆ ಗಲಾಟೆ ಸೇರಿದಂತೆ ಹಲವು ಘಟನೆಗಳು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂಬ ಆರೋಪಕ್ಕೆ ಗುರಿಮಾಡಿವೆ. ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿವೆ.   

Read Full Story

05:44 PM (IST) Sep 09

ಹಳದಿ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; 25ರ ಬದಲು 19 ನಿಮಿಷಕ್ಕೊಂದು ರೈಲು ಸಂಚಾರ!

ಬೆಂಗಳೂರು ಮೆಟ್ರೋದ ಹಳದಿ ಮಾರ್ಗದಲ್ಲಿ ಹೊಸ ರೈಲು ಸೇರ್ಪಡೆಯಾಗಿದ್ದು, ಸೆಪ್ಟೆಂಬರ್ 10 ರಿಂದ ರೈಲುಗಳ ಆವರ್ತನ 25 ನಿಮಿಷಗಳಿಂದ 19 ನಿಮಿಷಗಳಿಗೆ ಇಳಿಕೆಯಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೊದಲ ರೈಲು ಸಮಯವನ್ನು ಸಹ ಬದಲಾಯಿಸಲಾಗಿದೆ.
Read Full Story

05:26 PM (IST) Sep 09

ಪಾಕಿಸ್ತಾನದಲ್ಲಿ ವಾಯುಭಾರ ಕುಸಿತ ಪರಿಣಾಮ; ಕರ್ನಾಟಕದಲ್ಲಿ 7 ದಿನ ಭಾರೀ ಮಳೆ!

ಪಾಕಿಸ್ತಾನದ ವಾಯುಭಾರ ಕುಸಿತದ ಪರೋಕ್ಷ ಪರಿಣಾಮದಿಂದ ಕರ್ನಾಟಕದಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಮುಂದುವರೆಯಲಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆ ಮುಂದುವರೆಯಲಿದೆ.
Read Full Story

05:26 PM (IST) Sep 09

ಸದ್ದಿಲ್ಲದೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ ಬಚ್ಚನ್, ದಿಢೀರ್ ಬೆಳವಣಿಗೆ ಏನು?

ನಟಿ ಐಶ್ವರ್ಯ ರೈ ದಿಢೀರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಕೂಡ ಐಶ್ವರ್ಯ ರೈ ಅರ್ಜಿ ವಿಚಾರಣೆ ನಡೆಸಿದೆ. ಅಷ್ಟಕ್ಕೂ ಐಶ್ವರ್ಯ ರೈ ಕೋರ್ಟ್ ಮೆಟ್ಟಿಲು ಹತ್ತಿದ್ದು ಯಾಕೆ?

Read Full Story

05:19 PM (IST) Sep 09

ಕರ್ನಾಟಕದ ರಾಜಕೀಯದಿಂದ ಅಂತರ ಕಾಯ್ದುಕೊಂಡ ಹೈಕಮಾಂಡ್‌, ರಾಜ್ಯ ನಾಯಕರ ಭೇಟಿಗೆ ಅನುಮತಿ ನಿರಾಕರಣೆ

ಕರ್ನಾಟಕದಲ್ಲಿ ನಡೆಯುತ್ತಿರುವ ಪವರ್ ಪಾಲಿಟಿಕ್ಸ್ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ವಹಿಸಿದೆ. ಸಿಎಂ, ಡಿಸಿಎಂ ಸೇರಿದಂತೆ ಹಲವು ನಾಯಕರ ದೆಹಲಿ ಭೇಟಿಗೆ ತಡೆ ಹಾಕಲಾಗಿದೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಹೈಕಮಾಂಡ್ ಸದ್ಯಕ್ಕೆ ತೆರೆ ಎಳೆದಿದೆ.
Read Full Story

05:09 PM (IST) Sep 09

ಪುತ್ರನಿಗೆ ಸರ್ಜರಿ ಹಿನ್ನೆಲೆ ಜಾಮೀನುಕೋರಿ ವಿನಯ್‌ ಹೈಕೋರ್ಟ್‌ಗೆ, ಬೇಲ್‌ ಕೊಟ್ಟರೆ ಸಾಕ್ಷಿಗಳ ಮೇಲೆ ಪ್ರಭಾವ ಎಂದ ಸಿಬಿಐ

ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ, ಶಾಸಕ ವಿನಯ್ ಕುಲಕರ್ಣಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಗನ ಶಸ್ತ್ರಚಿಕಿತ್ಸೆಗೆಂದು ಮೂರು ದಿನಗಳ ಜಾಮೀನು ಕೋರಿದ್ದು, ಸಿಬಿಐ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಆಕ್ಷೇಪ ವ್ಯಕ್ತಪಡಿಸಿದೆ. ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.
Read Full Story

04:58 PM (IST) Sep 09

ಶಾಂತಿ ನೆಮ್ಮದಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ - ಹೆಚ್‌ಡಿಕೆ ಗರಂ

ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು ಮಾಡುತ್ತಿವೆ ಎಂದು ಅವರು ಆಪಾದಿಸಿದರು.

Read Full Story

04:48 PM (IST) Sep 09

ಮೈಸೂರು ಡಿಆರ್‌ಸಿ ಮಾಲ್‌ನಲ್ಲಿ ದುರಂತ; 4ನೇ ಮಹಡಿಯಿಂದ ಬಿದ್ದು ಸತ್ತವರ ಬಗ್ಗೆ ಪೊಲೀಸರು ಹೇಳಿದ್ದೇನು?

ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ನಡೆದ ಭೀಕರ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಎಲೆಕ್ಟ್ರಿಷಿಯನ್ ಒಬ್ಬರು ಕೆಲಸ ಮಾಡುವಾಗ ಆಯತಪ್ಪಿ ಬಿದ್ದರೆ, ಮತ್ತೊಬ್ಬರು ರಕ್ಷಣೆಗೆ ಧಾವಿಸಿ ಬಿದ್ದು ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

04:43 PM (IST) Sep 09

ರಾಧಾಕೃಷ್ಣರ ದೈವಿಕ ಪ್ರೇಮದಿಂದ ಪ್ರೇರಿತವಾಗಿ , ಭೀಮ ರಾಸ ಲೀಲಾ ಸಂಗ್ರಹವನ್ನು ಪರಿಚಯಿಸುತ್ತಿದೆ

ಶ್ರೀಕೃಷ್ಣ ಹಾಗೂ ರಾಧಾ ದೈವಿಕ ಪ್ರೇಮದಿಂದ ಪ್ರೇರಿತವಾಗಿರುವ ಅತ್ಯಮ್ಯೂಲ್ಯ ವಜ್ರ ಹಾಗೂ ಅಮೂಲ್ಯ ರತ್ನಗಳಿಂದ ತಯಾರಿಸಿರುವ ಭೀಮ ರಾಸ ಲೀಲಾ ಕಲೆಕ್ಷನ್ ಬಿಡುಗಡೆಯಾಗಿದೆ.

Read Full Story

04:34 PM (IST) Sep 09

ನಾನು ಮುಂದಿನ ಮುಖ್ಯಮಂತ್ರಿ ಆದ್ರೆ... ಮೂರು ಗ್ಯಾರೆಂಟಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್​- ಏನದು ನೋಡಿ...

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಮುಂದಿನ ಮುಖ್ಯಮಂತ್ರಿ ತಾವಾದರೆ ಮೂರು ಗ್ಯಾರೆಂಟಿ ನೀಡಿದ್ದಾರೆ. ಅವರು ಹೇಳಿದ್ದೇನು ಕೇಳಿ...

 

Read Full Story

04:11 PM (IST) Sep 09

ಮಗನ ಆಪರೇಷನ್; ಮಾಜಿ ಸಚಿವ ವಿನಯ್ ಕುಲಕರ್ಣಿಗೆ 2 ದಿನ ಮಧ್ಯಂತರ ಜಾಮೀನು

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಮಗನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ 2 ದಿನಗಳ ಮಧ್ಯಂತರ ಜಾಮೀನು ಮಂಜೂರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಜಾಮೀನು ನೀಡಿದೆ.
Read Full Story

03:52 PM (IST) Sep 09

ನೇಪಾಳದಲ್ಲಿ ತುರ್ತು ಪರಿಸ್ಥಿತಿ, ಪ್ರಧಾನಿ ಮನೆಗೆ ಬೆಂಕಿ, ಬಾಂಗ್ಲಾ ಬಳಿಕ ಮತ್ತೊಂದು ನೆರೆ ರಾಷ್ಟ್ರದ ದುಸ್ಥಿತಿ

ಜೆನ್‌ಜಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ನೇಪಾಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ, ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ. ಇತ್ತ ಪ್ರತಿಭಟನಕಾರರು ಪ್ರಧಾನಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶ ಬಳಿಕ ನೇಪಾಳದಲ್ಲೂ ಈ ಪರಿಸ್ಥಿತಿ ಯಾಕೆ?

Read Full Story

03:43 PM (IST) Sep 09

'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ ಬಾಲಕಿ- ಏನಿದು ಟ್ವಿಸ್ಟ್​?

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್ ಮದುವೆಯಾಗಿ, ಹಿತಾ ಅಪಘಾತದಲ್ಲಿ ಸಾವನ್ನಪ್ಪಿದಂತೆ ತೋರಿಸಲಾಗಿದೆ. ಹಿತಾಳ ಹುಟ್ಟಿನ ರಹಸ್ಯ ಬೇರೆಯದ್ದೇ ಇದ್ದು, ಅವಳು ಕೂಡ ಆತ್ಮವಾಗಿ ಬರುವ ಸೂಚನೆ ಇದೆ. ಏನಿದು ಟ್ವಿಸ್ಟ್​? 

Read Full Story

03:41 PM (IST) Sep 09

ಹುಲಿ ಹಿಡಿಯಲು ವಿಫಲವಾದ ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಬೋನಿಗೆ ಹಾಕಿದ ಕಾಡಂಚಿನ ಜನ!

ಚಾಮರಾಜನಗರದ ಬೊಮ್ಮಲಾಪುರದಲ್ಲಿ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಬೇಸತ್ತ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಕೂಡಿಹಾಕಿ ಪ್ರತಿಭಟನೆ ನಡೆಸಿದ್ದಾರೆ.

Read Full Story

03:13 PM (IST) Sep 09

ದರ್ಶನ್‌ ಗೆ ಗುಡ್‌ನ್ಯೂಸ್‌, ಜೈಲು ವರ್ಗಾವಣೆ ಅರ್ಜಿ ವಜಾ, ಸರ್ಕಾರಕ್ಕೆ ಹಿನ್ನಡೆ

ನಟ ದರ್ಶನ್ ಜೈಲು ವರ್ಗಾವಣೆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ, ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದರ್ಶನ್‌ಗೆ ಬಳ್ಳಾರಿ ಜೈಲಿಗೆ ವರ್ಗಾವಣೆ ಬೇಡವೆಂಬ ಆಸೆ ಈಡೇರಿದೆ.
Read Full Story

02:38 PM (IST) Sep 09

ಬೆಂಗಳೂರಿನಲ್ಲಿ ₹1.5 ಕೋಟಿ ಮೌಲ್ಯದ ಮಾದಕ ವಸ್ತು ವಶ, ರಾಮಮೂರ್ತಿ ನಗರದ ಈ ಲಾಡ್ಜ್ ನಲ್ಲಿ ಡ್ರಗ್ಸ್ ಪಾರ್ಟಿಗೆ ಮಾಮೂಲಿ ವ್ಯವಸ್ಥೆ!

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಬೃಹತ್ ದಾಳಿಯಲ್ಲಿ ಇಬ್ಬರು ವಿದೇಶಿ ಪೆಡ್ಲರ್‌ಗಳು ಸೇರಿದಂತೆ ಹಲವು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ, ₹1.5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಡ್ಜ್‌ವೊಂದರಲ್ಲಿ ಪಾರ್ಟಿಗೆ ವ್ಯವಸ್ಥೆ ಮಾಡಲಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

Read Full Story

02:33 PM (IST) Sep 09

ಬಾನು ಮುಷ್ತಾಕ್​ ಅದ್ಭುತ ಲೇಖಕಿ... Dasara ಉದ್ಘಾಟನೆ ವಿವಾದದ ಬಗ್ಗೆ ನಟ ಅವಿನಾಶ್​ ಹೇಳಿದ್ದೇನು?

ದಸರಾ ಉತ್ಸವದ ಉದ್ಘಾಟನೆಗೆ ಸಂಬಂಧಿಸಿದಂತೆ ಇದಾಗಲೇ ವಾದ-ವಿವಾದ-ಪ್ರತಿವಾದಗಳು ಜೋರಾಗಿಯೇ ನಡೆಯುತ್ತಿದೆ. ಇದರ ವಿಚಾರ ಹೈಕೋರ್ಟ್​ಗೂ ಹೋಗಿದೆ. ಇದರ ನಡುವೆಯೇ ನಟ ಅವಿನಾಶ್​ ಹೇಳಿದ್ದೇನು?

 

Read Full Story

12:36 PM (IST) Sep 09

ಜೀವಾವಧಿ ಶಿಕ್ಷೆ ಕೈದಿ ಆಸ್ಪತ್ರೆಯಿಂದ ಪರಾರಿ, ಕ್ಯಾನ್ಸರ್ ಚಿಕಿತ್ಸೆಗಾಗಿ ಕಿದ್ವಾಯಿಯಲ್ಲಿದ್ದ ವಿಜಯಪುರದ ಯುವಕ!

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೀವಾವಧಿ ಶಿಕ್ಷೆಗೊಳಗಾದ ಕೈದಿ ಚೇತನ್ ಕಲ್ಯಾಣಿ ಪರಾರಿಯಾಗಿದ್ದಾನೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆತ, ಜೈಲು ಸಿಬ್ಬಂದಿಯ ನಿರ್ಲಕ್ಷ್ಯದ ಲಾಭ ಪಡೆದು ಪರಾರಿಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

12:31 PM (IST) Sep 09

ಮೈಅವತಾರ್ ಕರಿಯರ್ ಕಾನ್ಫರೆನ್ಸ್ 2025 - ‘ವೈ ವೀ ವರ್ಕ್’ ಅಧ್ಯಯನ ಅನಾವರಣ

ಭಾರತೀಯರಿಗೆ ಉದ್ಯೋಗವು ಕೇವಲ ಸಂಬಳಕ್ಕಾಗಿ ಅಲ್ಲ, ಗುರುತಿಸುವಿಕೆ, ಭದ್ರತೆ ಮತ್ತು ಸೇರಿದವರ ಭಾವನೆಗಾಗಿಯೂ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ. 

Read Full Story

12:18 PM (IST) Sep 09

ಪುನೀತ್ ಕೆರೆಹಳ್ಳಿ, ಗೋಪಿಗೌಡಗೆ ಹೊಡೆಯೋಕೆ ಹೋಗ್ತಿದ್ದೀವಿ ಎಂದಿದ್ದ ಸಿರಾಜ್ ವಿರುದ್ಧ ಎಫ್‌ಐಆರ್

ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಸಿರಾಜ್ ಅಲಿಬೇಗ್ ವಿರುದ್ಧ ಎಫ್‌ಐಆರ್ ದಾಖಲು. ಮದ್ದೂರು ಕಲ್ಲು ತೂರಾಟ ಪ್ರಕರಣದಲ್ಲಿ ಪ್ರತಿಭಟನಾಕಾರರ ವಿರುದ್ಧವೂ ಪ್ರಕರಣ ದಾಖಲು.
Read Full Story

12:05 PM (IST) Sep 09

ಕನ್ನಡರಾಮಯ್ಯ, ಕನ್ನಡ ಮೇಷ್ಟು ಸಿದ್ದರಾಮಯ್ಯ ಅವ್ರೇ, ಕನ್ನಡ ಬಾವುಟ, ಭುವನೇಶ್ವರಿಗೆ ಗೌರವಿಸದ ಬಾನು ಮುಷ್ತಾಕ್‌ಗೆ ಕರೆದು ಬುದ್ದಿ ಹೇಳಿದ್ರಾ? ಕ್ಷಮೆ ಕೇಳಿಸಿದ್ರಾ?

ಸಿಎಂ ಸಿದ್ದರಾಮಯ್ಯನವರಿಗೆ ನಿಸಾರ್ ಅಹ್ಮದ್ ಅವರ ಸಾಹಿತ್ಯದ ಕನಿಷ್ಠ ಜ್ಞಾನವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

11:41 AM (IST) Sep 09

'ನನಗೆ ಸ್ವಲ್ಪ ವಿಷ ಕೊಡಿ'-ಜೈಲಿನ ನಿಯಮಗಳಿಗೆ ಬೇಸತ್ತ Darshan Thoogudeepa

Actor Darshan Thoogudeepa: ನಟ ದರ್ಶನ್‌ ತೂಗುದೀಪ ಅವರು ಜೈಲಿನಲ್ಲಿದ್ದು, “ನನಗೆ ಸ್ವಲ್ಪ ವಿಷ ಕೊಡಿ” ಎಂದು ಹೇಳಿದ್ದಾರಂತೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆಯಾಗಿ ವರ್ಷವಾಗಿದೆ.

 

Read Full Story

11:11 AM (IST) Sep 09

ಟಿಇಟಿ ಕಡ್ಡಾಯ ಮಾಡಿದರೆ 1.68 ಲಕ್ಷ ಶಿಕ್ಷಕರಿಗ ಸಂಕಷ್ಟ, ವಿನಾಯಿತಿ ನೀಡಲು ಸರ್ಕಾರಕ್ಕೆ ಶಿಕ್ಷಕರ ಸಂಘ ಆಗ್ರಹ

ಸುಪ್ರೀಂ ಕೋರ್ಟ್ ತೀರ್ಪಿನಿಂದ 1.68 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಇಟಿ ಅರ್ಹತೆಯನ್ನು ಪೂರ್ವಾನ್ವಯಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ. 

Read Full Story

10:56 AM (IST) Sep 09

ಈದ್ ಮಿಲಾದ್ ವೇಳೆ ಪಾಕಿಸ್ತಾನ ಪರ ಘೋಷಣೆ; ಮತಾಂಧರ ಸೊಕ್ಕಿಗೆ ಕಾಂಗ್ರೆಸ್ ಸರ್ಕಾರದ ಒಲೈಕೆ ಕಾರಣ - ಕೆಎಸ್ ಈಶ್ವರಪ್ಪ ಕಿಡಿ

ಭದ್ರಾವತಿಯ ಈದ್ ಮಿಲಾದ್‌ನಲ್ಲಿ ಕೆಲ ಮುಸ್ಲಿಂ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

09:24 AM (IST) Sep 09

'ಪಾಕಿಸ್ತಾನ್ ಜಿಂದಾಬಾದ್..!' ಭದ್ರಾವತಿಯಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಘೋಷಣೆ!

ಭದ್ರಾವತಿಯ ಈದ್ ಮಿಲಾದ್ ಮೆರವಣಿಗೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
Read Full Story

08:26 AM (IST) Sep 09

ಒತ್ತಡಕ್ಕೆ ಮಣಿದ್ರೆ ನಾವು ಕೈಕಟ್ಟಿ ಕೂರಲ್ಲ - ನಿಖಿಲ್

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪೊಲೀಸರೇ ಇವತ್ತು ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಅವರು ಘಟನೆಯ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

Read Full Story

More Trending News