ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಮುಂದಿನ ಮುಖ್ಯಮಂತ್ರಿ ತಾವಾದರೆ ಮೂರು ಗ್ಯಾರೆಂಟಿ ನೀಡಿದ್ದಾರೆ. ಅವರು ಹೇಳಿದ್ದೇನು ಕೇಳಿ... 

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ (Pradeep Eshwar) ಆಯ್ಕೆಯಾದಾಗಿನಿಂದಲೂ ಸಕತ್​ ಸದ್ದು ಮಾಡುತ್ತಿರುವವರೇ. ಅವರು ಸದ್ದು ಮಾಡಿದಾಗಲೆಲ್ಲಾ ಟ್ರೋಲ್​ ಆಗಿದ್ದೇ ಹೆಚ್ಚು. ತಮ್ಮ ಮಾತಿನ ವೈಖರಿಯಿಂದ ಎಂಥವರನ್ನೂ ಮರಳು ಮಾಡುವ ತಾಕತ್ತು ಪ್ರದೀಪ್​​ ಅವರಿಗೆ ಇದೆ. ಜನರಿಗಾಗಿ ಏನೆಲ್ಲಾ ಮಾಡಬೇಕು, ಮಾಡುತ್ತೇನೆ ಎನ್ನುವ ದೊಡ್ಡ ಲಿಸ್ಟ್​ ಕೊಟ್ಟಿವರು ಅವರು. ಕೊನೆಗೆ ಇಡೀ ವ್ಯವಸ್ಥೆಯನ್ನೇ ಸರಿ ಮಾಡುತ್ತೇನೆ ಎಂದೆಲ್ಲಾ ಭಾಷಣ ಮಾಡುತ್ತಲೇ ಸದ್ಯ ಸೈಲೆಂಟ್​ ಆಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಆಗೀಗ ಕಾಣಿಸಿಕೊಂಡು, ಸ್ಟೇಟ್​ಮೆಂಟ್​ ಕೊಡುತ್ತಿರುವ ಪ್ರದೀಪ್​ ಈಶ್ವರ್​ ಅವರು, ಇದೀಗ ತಾವು ಮುಂದಿನ ಸಿಎಂ ಆದರೆ ಏನು ಮಾಡುತ್ತೇವೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಕೀರ್ತಿ ಎಂಟರ್​ಟೇನ್​ಮೆಂಟ್​ ಚಾನೆಲ್​ನಲ್ಲಿ ಅವರಿಗೆ ಸಿಎಂ (Next Chief Minister of Karnatana) ಆದ್ರೆ ಐದು ಭರವಸೆಗಳ ಬಗ್ಗೆ ಕೇಳಲಾಯಿತು. ಅದರಲ್ಲಿ ಅವರು ಮೂರು ಭರವಸೆಗಳ ಬಗ್ಗೆ ಮಾತನಾಡಿದ್ದಾರೆ. 

ಇದನ್ನೂ ಓದಿ: ಮೂರ್ತಿ ಪೂಜೆಯಲ್ಲಿ ಪಾಲ್ಗೊಳ್ಳೋದು ಶಿರ್ಕ್,​ ಇದು ಕಟ್ಟಾಜ್ಞೆ: ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮಾತು ಕೇಳಿ...

ಮೊದಲನೆಯದ್ದಾಗಿ SC-ST ಸಮುದಾಯಕ್ಕೆ ಮನೆ ಸರಿಯಾಗಿ ಇಲ್ಲ. ಸರ್ಕಾರದಿಂದ ಅವರಿಗೆ ಮನೆ ಕೊಡಬೇಕು. ನಾನು ತುಂಬಾ ಕಡೆ ನೋಡಿದ್ದೇನೆ. ಫೌಂಡೇಷನ್​ ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಅವರಿಗೆ ಡೀಸೆಂಟ್​ ಮನೆ ಕೊಡುತ್ತೇನೆ. ಸರ್ಕಾರನೇ ಕಟ್ಟಿಕೊಡುವ ರೀತಿ ಮಾಡುತ್ತೇನೆ ಎಂದಿದ್ದಾರೆ. ಎರಡನೆಯ ಭರವಸೆ ಎಲ್ಲರಿಗೂ ಫುಡ್​ ಸೆಕ್ಯೂರಿಟಿ ಎಂದಿದ್ದಾರೆ. ಎಲ್ಲರಿಗೂ ಆಹಾರ ಸಿಗುವ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಮೂರನೆಯ ಭರವಸೆ ಎಂದರೆ, ಖಾಸಗಿ ಆಸ್ಪತ್ರೆ ಸೇರಿದಂತೆ ಎಲ್ಲೆಡೆ ಉಚಿತ ವೈದ್ಯಕೀಯ ಸೌಲಭ್ಯ ಎಂದಿದ್ದಾರೆ ಪ್ರದೀಪ್​​ ಈಶ್ವರ್​. ಆರೋಗ್ಯ ಕ್ಷೇತ್ರವನ್ನು ಫ್ರೀ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿಯೂ ಚಾರ್ಜ್​ ಮಾಡಬಾರದು. ನಾನು ನನ್ನ ಕ್ಷೇತ್ರದಲ್ಲಿ 12 ನಿಮಿಷಕ್ಕೆ ಆ್ಯಂಬುಲೆನ್ಸ್​ ಕಳಿಸುವ ವ್ಯವಸ್ಥೆ ಮಾಡಿದ್ದೇನೆ. ಸರ್ಕಾರ 100-200 ಕೋಟಿ ಖರ್ಚು ಮಾಡಿದರೆ ಇವೆಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.

ಖಾಸಗಿ ಜೀವನದ ಬಗ್ಗೆ ಮಾತು

ಇದೇ ಸಂದರ್ಶನದಲ್ಲಿ ಪ್ರದೀಪ್​ ಅವರು ತಮ್ಮ ಜೀವನದ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಪ್ರೀತಿ, ಪ್ರೇಮ ಇತ್ಯಾದಿಗಳ ಬಗ್ಗೆಯೂ ತಮ್ಮ ಎಂದಿನ ವಾಕ್ಚಾತುರ್ಯವನ್ನು ಮೆರೆದಿದ್ದಾರೆ. ಈಗ ಕೀರ್ತಿ ಅವರು ಪ್ರದೀಪ್​ ಅವರಿಗೆ ಅವರ ಆಸ್ತಿಯ ಬಗ್ಗೆ ಕೇಳಿದ್ದಾರೆ. ಮೊಬೈಲ್​ ನಂಬರ್​ನಷ್ಟೇ ಆಸ್ತಿ ಇರಬೇಕು ಎಂದಿದ್ರಿ. ಈಗ ನಿಮ್ಮ ಆಸ್ತಿ ಅಷ್ಟೇ ಆಗಿದ್ಯಾ ಅಥ್ವಾ 8 ಡಿಜಿಟ್​ವರೆಗೂ ಬಂದಿದ್ಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರದೀಪ್​ ಅವರು, ಆಂ. ಊಂ... ಎನ್ನುತ್ತಲೇ ಅಷ್ಟೆಲ್ಲಾ ಬಂದಿಲ್ಲ. ಪಾಪ ಐಟಿಯವರು ನಮ್ಮ ಮನೆಯವರೆಗೂ ಬರಲು ರೆಡಿ ಇದ್ದಾರೆ ಎಂದು ತಮಾಷೆ ಮಾಡಿದ್ದಾರೆ. ನನ್ನ ಬ್ಯಾಂಕ್​ ಬ್ಯಾಲೆನ್ಸ್​ ಕಾನ್ಫಿಡೆನ್ಸ್​ ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ಮಾಜಿ ಪ್ರೇಯಸಿಯ ಬಗ್ಗೆಯೂ ಹೇಳಿದ್ದಾರೆ. ನನ್ನ ಲೈಫ್​ನಲ್ಲಿ ಮೂರು ಕಾಸ್ಲ್ಟಿಯಾಗಿರುವ ವಸ್ತುವಿದೆ. ಅದರಲ್ಲಿ ಒಂದು ನನ್ನ ಐ-ಫೋನ್​, ಇನ್ನೊಂದು BMW X7 ಕಾರು. ಮೂರನೆಯದ್ದು ಸ್ವಿಸ್​ ಬ್ಯಾಂಕ್​ ಮಾರಿದ್ರೂ ಖರೀದಿ ಮಾಡಲು ಆಗದ ನನ್ನ ಕನಸುಗಳು ಎಂದಿದ್ದಾರೆ. ಅದಕ್ಕೆ ಕೀರ್ತಿ ಇದೇ ಕಾರು ಯಾಕೆ ಎಂದು ಪ್ರಶ್ನಿಸಿದಾಗ, ಪ್ರದೀಪ್​ ಅವರು ಅಲ್ಲಿಯೂ ಹಾಸ್ಯಚಟಾಕಿ ಹಾರಿಸಿ ನನ್ನ ಎಕ್ಸ್​ನ ಮರೆಯಲು BMW X ತೆಗೆದುಕೊಂಡಿದ್ದೇನೆ ಎಂದು ಇಂಗ್ಲಿಷ್​ನಲ್ಲಿ ಹೇಳಿದ್ದಾರೆ. ಇನ್ನೇನು ಮಾಡೋಕೆ ಆಗತ್ತೆ? ಹಳೆಯದ್ದಕ್ಕೆ ಜೋತು ಬೀಳೋಕೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ.

ಬಿಗ್​ಬಾಸ್​ನಿಂದ (Bigg Boss) ಫೇಮಸ್​

ಅಷ್ಟಕ್ಕೂ ಪ್ರದೀಪ್​ ಅವರು, ಇನ್ನಷ್ಟು ಫೇಮಸ್​​ ಆಗಿದ್ದು, ಬಿಗ್​ಬಾಸ್​​ಗೆ ಹೋಗಿದ್ದರಿಂದ. ಹೋದ ದಿನದಿಂದಲೇ ಸಕತ್​ ಟ್ರೋಲ್​ಗೆ ಒಳಗಾಗಿದ್ದ ಪ್ರದೀಪ್​ ಅವರು ಹೋದ ಒಂದೇ ದಿನಕ್ಕೆ ಮರಳಿದ್ದರು. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಅವರು ಬಿಗ್​ಬಾಸ್ ಮನೆಯೊಳಕ್ಕೆ ಒಂದು ದಿನ ಲೇಟಾಗಿ ಎಂಟ್ರಿ ಕೊಟ್ಟಿದ್ದರು. ಅವರನ್ನು ನೋಡಿ ಉಳಿದ ಸ್ಪರ್ಧಿಗಳಿಗೂ ಅಚ್ಚರಿಯಾಗಿತ್ತು, ಅದೇ ರೀತಿ ಪ್ರೇಕ್ಷಕರೂ ಸಕತ್​ ಅಚ್ಚರಿ ಪಟ್ಟುಕೊಂಡಿದ್ದರು. ಆದರೆ ಅವರು ಹೋದದ್ದು ಅತಿಥಿಯಾಗಿ. ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋದ ಒಂದೇ ದಿನದಲ್ಲಿ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಟೀಕೆಗಳು ಶುರುವಾಗಿದ್ದವು. ಇವರ ಅಮಾನತಿಗೆ ವಿಪಕ್ಷ ಆಗ್ರಹಿಸಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ನೂರಾರು ರೀತಿಯ ಮೀಮ್ಸ್​ಗಳು ಹರಿದಾಡುತ್ತಿದ್ದವು. ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ತಮ್ಮ ಕ್ಷೇತ್ರವನ್ನು ಉದ್ಧಾರ ಮಾಡಲು, ಬಿಗ್​ಬಾಸ್​ ಮನೆಗೆ ಹೋಗಿ ಸೇರಿಕೊಳ್ಳಲು ಅಲ್ಲ ಅಂದೆಲ್ಲಾ ಟೀಕೆಗಳು ಕೇಳಿಬಂದಿದ್ದವು, ಖುದ್ದು ಕಾಂಗ್ರೆಸ್ಸಿಗರೂ ಕೆಲವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಕೊನೆಗೆ ಅವರು ಹೊರಕ್ಕೆ ಬಂದಿದ್ದರು. ತಾವು ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿದ್ದ ಕಾರಣ ಕೊಟ್ಟು ಮತ್ತಷ್ಟು ಟ್ರೋಲ್​ಗೆ ಒಳಗಾಗಿದ್ದರು. ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿರುವುದಾಗಿ ಹೇಳಿದ್ದರು. ಬಿಗ್ ಬಾಸ್​ನಿಂದ ಬಂದ ಹಣವನ್ನ ಅಪ್ಪ‌ಅಮ್ಮನಿಲ್ಲದ ಮಕ್ಕಳಿಗೆ ನೀಡಲು‌ ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ವಿಮಾನದಲ್ಲಿ ಮೊಳಗಿತು ಕನ್ನಡ: ಭಾಷೆ ಕಲಿತು ಮಾತನಾಡಿದ ಪೈಲೆಟ್! ವಿಡಿಯೋ ವೈರಲ್

View post on Instagram