ಹಾವೇರಿ: ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಅನ್ನೋ ಮಾತನ್ನು ನಾನು ಹೇಳಿದ್ದೇನೆ. ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅದೇ ಜಗತ್ತಿನ ದೊಡ್ಡ ಶಕ್ತಿ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಾವೇರಿಯಲ್ಲಿ ನೂತನ ವೈದ್ಯಕೀಯ ಕಾಲೇಜು ಉದ್ಗಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಡಿ.ಕೆ. ಶಿವಕುಮಾರ ಈ ರೀತಿ ಹೇಳಿದ್ದು ಗಮನ ಸೆಳೆಯಿತು ಹಾಗೂ ಚರ್ಚೆಗೆ ಗ್ರಾಸವಾಯಿತು.ಈ ಹಿಂದೆಯೂ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರ, ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂಬ ವಿಚಾರ ಬಹು ಚರ್ಚೆಯಲ್ಲಿರುವ ಸಂದರ್ಭದಲ್ಲೇ ಡಿಕೆಶಿ ಅವರ ಈ ಮಾತು ಗಮನ ಸೆಳೆಯಿತು.

11:12 PM (IST) Jan 08
11:00 PM (IST) Jan 08
10:53 PM (IST) Jan 08
ಆರಂಭದಲ್ಲಿ ಗಿಲ್ಲಿಯನ್ನು ಕಂಡರೆ ಆಗುವುದಿಲ್ಲ ಎನ್ನುತ್ತಿದ್ದ ರಘು, ಇದೀಗ ಅವರ ನಿಜವಾದ ಗುಣವನ್ನು ಅರಿತುಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಒಬ್ಬ ಒಳ್ಳೆಯ ಮನುಷ್ಯ, ಅವನ ಯೋಚನಾ ರೀತಿ ತನಗೆ ಇಷ್ಟವಾಗಿದೆ ಎಂದು ರಘು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ.
10:46 PM (IST) Jan 08
ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯೊಬ್ಬರಲ್ಲಿ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತೇನು? ಯಾರೀ ಯುವತಿಯರು? ಈ ಸುದ್ದಿಯ ಹಿಂದೆ ಏನಿದೆ? ಇಲ್ಲಿದೆ ಕುತೂಹಲ
10:00 PM (IST) Jan 08
ಬಳ್ಳಾರಿಯ ಕನಕ ದುರ್ಗಮ್ಮ ರೈಲ್ವೇ ಮೇಲ್ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಮೀರ್ ಎಕ್ಸ್ಪ್ರೆಸ್ ಡಿಕ್ಕಿಯ ರಭಸಕ್ಕೆ ದೇಹ ಛಿದ್ರಗೊಂಡಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ರೈಲ್ವೇ ಪೊಲೀಸರು ಪ್ರಕರಣ ದಾಖಲು
09:55 PM (IST) Jan 08
'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ಗೆ ಮನಸೋತ ಯುವತಿ ಸುಷ್ಮಾ, ಆತನಿಗೆ ಲವ್ ಲೆಟರ್ ನೀಡುವಂತೆ ಪತ್ನಿ ಭೂಮಿಕಾಳ ಬಳಿಯೇ ಕೇಳುತ್ತಾಳೆ. ಮತ್ತೊಂದೆಡೆ, ಸುನಿಲ್ ಕೂಡ ತನಗಿಂತ ಹಿರಿಯ ವಯಸ್ಸಿನ ಮಲ್ಲಿಯ ಪ್ರೀತಿಯಲ್ಲಿ ಬಿದ್ದಿದ್ದು, ವಯಸ್ಸಿನ ಅಂತರವಿರುವ ಪ್ರೇಮಕಥೆಯ ಹೊಸ ಟ್ರೆಂಡ್ ಅನ್ನು ತೋರಿಸುತ್ತಿದೆ.
09:18 PM (IST) Jan 08
ಕೇರಳ ಸರ್ಕಾರದ ಪ್ರಸ್ತಾಪಿತ ಮಲಯಾಳಿ ಭಾಷಾ ಮಸೂದೆ-2025ಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯು ಕಾಸರಗೋಡಿನ ಕನ್ನಡಿಗರ ಭಾಷಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
08:31 PM (IST) Jan 08
ಬಿಗ್ಬಾಸ್ನಿಂದ ಹೊರಬಂದ ನಂತರ ಜಾಹ್ನವಿ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಬಿಗ್ಬಾಸ್ನಲ್ಲಿ ರಕ್ಷಿತಾ ಶೆಟ್ಟಿಗೆ ಕಾಟ ಕೊಟ್ಟಿದ್ದರಿಂದ ಇಲ್ಲಿನ ಜನ ತನಗೆ ತೊಂದರೆ ಕೊಡಬಹುದೆಂಬ ಭಯದಲ್ಲಿದ್ದೆ ಎಂದು ಅವರು ಬಹಿರಂಗಪಡಿಸಿದರು.
07:54 PM (IST) Jan 08
ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ನ ಗೇಟ್ ಕಟ್ ಆಗಿ ಮೂರು ದಿನಗಳಿಂದ ಸುಮಾರು 2 ಟಿಎಂಸಿ ಕೃಷ್ಣಾ ನದಿ ನೀರು ಪೋಲು. ತಾಂತ್ರಿಕ ದೋಷದಿಂದ ದುರಸ್ತಿ ಕಾರ್ಯ ವಿಳಂಬವಾಗಿದ್ದು, 120 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವದ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ
07:44 PM (IST) Jan 08
ರಾಜ್ಯ ಸರ್ಕಾರವು 2020 ಮತ್ತು 2021ನೇ ಸಾಲಿನ ಡಾ.ರಾಜ್ಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಡಾ. ಜಯಮಾಲಾ, ಸಾ.ರಾ. ಗೋವಿಂದ್, ಎಂ.ಎಸ್. ಸತ್ಯು, ಶಿವರುದ್ರಯ್ಯ, ಪ್ರಗತಿ ಅಶ್ವಥ್ ನಾರಾಯಣ್ ಹಾಗೂ ಎಂ.ಕೆ. ಸುಂದರ್ ರಾಜ್ ಅವರು ಭಾಜನರಾಗಿದ್ದಾರೆ.
07:31 PM (IST) Jan 08
ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನವೀಕರಣ ಕಾರ್ಯದಲ್ಲಿ ಮಹತ್ವದ ಪ್ರಗತಿಯಾಗಿದ್ದು, 18ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟು 33 ಹಳೆಯ ಗೇಟ್ಗಳನ್ನು ಬದಲಿಸುವ ಈ ಯೋಜನೆಯು ಜಲಾಶಯದ ಭದ್ರತೆ ಮತ್ತು ನೀರು ನಿರ್ವಹಣೆಯನ್ನು ಬಲಪಡಿಸುವ ಗುರಿ ಹೊಂದಿದೆ.
07:22 PM (IST) Jan 08
ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಶಾಸಕ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಗೃಹ ಸಚಿವ ಪರಮೇಶ್ವರ್ ಅಸಮರ್ಥರೆಂದು ಟೀಕಿಸಿದರು.
07:15 PM (IST) Jan 08
ಗಂಡನ ಸಾವಿನ ನಂತರ ಪಕ್ಕದ ಮನೆಯವನೊಂದಿಗೆ ಪ್ರೇಮದಲ್ಲಿ ಬಿದ್ದ 7 ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೇ ಕೊಂದಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇಡೀ ಊರನ್ನು ಈ ಘಟನೆ ಬೆಚ್ಚಿಬೀಳಿಸಿದ್ದೆ. 10 ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣದ ಡಿಟೇಲ್ ಸ್ಟೋರಿ
06:53 PM (IST) Jan 08
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಇದು ಪರಾಜಿತ ಅಭ್ಯರ್ಥಿ ನಾಗೇಂದ್ರ ಅವರೊಂದಿಗೆ ಮಾತಿನ ಚಕಮಕಿಗೆ ಕಾರಣವಾಗಿದೆ. ಆಕಾಂಕ್ಷಿ ಮತ್ತು ಅಭ್ಯರ್ಥಿ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.
06:45 PM (IST) Jan 08
06:36 PM (IST) Jan 08
06:05 PM (IST) Jan 08
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೇವರಾಜು ಅರಸು ಅವರಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರಸು ಅವರು ಭೂ ಸುಧಾರಣೆ ಮತ್ತು ಸಣ್ಣ ಸಮುದಾಯಗಳ ನಾಯಕರನ್ನು ಬೆಳೆಸಿದರೆ, ಸಿದ್ದರಾಮಯ್ಯನವರು ರಾಜ್ಯವನ್ನು ಸಾಲದ ಸುಳಿಗೆ ತಳ್ಳಿ, ಜನರಿಗೆ ಟೋಪಿ ಹಾಕುತ್ತಿದ್ದಾರೆ.
05:46 PM (IST) Jan 08
ಹುಬ್ಬಳ್ಳಿಯ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದ ಬಳಿಕ, ಆರೋಪಿಗಳ ಕುಟುಂಬದ ಗಂಡಸರು ಜೈಲು ಪಾಲಾಗಿದ್ದಾರೆ. ಮನೆಯ ಮಹಿಳೆಯರು ಮತ್ತು ಮಕ್ಕಳು ಊರು ಬಿಟ್ಟಿದ್ದು, ಮನೆಯಲ್ಲಿದ್ದ ಜಾನುವಾರುಗಳು ಅನಾಥವಾಗಿವೆ ಹಾಗೂ ಮಕ್ಕಳ ವಿದ್ಯಾಭ್ಯಾಸವು ಅರ್ಧಕ್ಕೆ ನಿಂತಿದೆ.
05:39 PM (IST) Jan 08
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖಾ ವರದಿಗೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆ ಸಲ್ಲಿಸಿರುವ 'ಬಿ-ರಿಪೋರ್ಟ್' ಅನ್ನು ತಿರಸ್ಕರಿಸಬೇಕೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿದರು, ವಿಚಾರಣೆ ಜ.13ಕ್ಕೆ ಮುಂದೂಡಿಕೆ.
05:08 PM (IST) Jan 08
04:54 PM (IST) Jan 08
BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿಗಳಿಗೆ ಹೊರಗಡೆ ನಡೆಯುವ ಯಾವುದೇ ವಿಷಯವು ಗೊತ್ತಾಗೋದಿಲ್ಲ. ಆದರೂ ತನ್ನನ್ನು ಕೆಲವರು ಇಷ್ಟಪಡ್ತಾರೆ ಎಂದು ಗಿಲ್ಲಿಗೆ ಸುಳಿವು ಸಿಕ್ಕಿದೆ. ಆದರೆ ಈಗ ಅವರಿಗೆ ಈ ವಿಷಯವೊಂದು ಗೊತ್ತಾದರೆ ಸುಧಾರಿಸಿಕೊಳ್ಳೋಕೆ ಹದಿನೈದು ದಿನವಾದರೂ ಬೇಕು.
04:42 PM (IST) Jan 08
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ರಾಜ್ಯ ಸರ್ಕಾರ ಜಾಹೀರಾತು ನೀಡಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಸಂಪೂರ್ಣವಾಗಿ ಕಾನೂನುಬದ್ಧ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಆರ್ಎಸ್ಎಸ್ ನ 'ಆರ್ಗನೈಸರ್' ಪತ್ರಿಕೆಯ ಹಣಕಾಸಿನ ಮೂಲದ ಬಗ್ಗೆ ಉತ್ತರಿಸುವಂತೆ ಬಿಜೆಪಿಗೆ ಸವಾಲು ಹಾಕಿದರು.
04:41 PM (IST) Jan 08
04:36 PM (IST) Jan 08
Bigg Boss Kannada Season 12 Episode Update: ಇನ್ನೇನು ಒಂದು ವಾರಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಶುರುವಾಗುವುದು. ಯಾರು ವಿನ್ನರ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಯಾವ ಸ್ಪರ್ಧಿಗೆ ಯಾವ ವಿಷಯ ಮುಳುವಾಗುತ್ತದೆ? ಈ ಬಗ್ಗೆ ಮಾಹಿತಿ ಇದೆ.
04:08 PM (IST) Jan 08
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ಆರಂಭವಾಗಿದೆ. ಟಾಪ್ 6 ಸ್ಪರ್ಧಿಗಳು ಫಿನಾಲೆಗೆ ಬರುತ್ತಾರೆ. ಅವರಲ್ಲಿ ಯಾರಿಗೆ ಮೊದಲ ಟಿಕೆಟ್ ಸಿಗಲಿದೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರದು?
03:58 PM (IST) Jan 08
Row Erupts Over Karnataka Govt’s Massive Ad Spend on National Herald ದಾಖಲೆಗಳ ಪ್ರಕಾರ, ಸತತ ಎರಡು ಹಣಕಾಸು ವರ್ಷಗಳ ಕಾಲ ಕರ್ನಾಟಕದ ಜಾಹೀರಾತು ವೆಚ್ಚದ ಏಕೈಕ ಅತಿದೊಡ್ಡ ಫಲಾನುಭವಿಯಾಗಿ ನ್ಯಾಷನಲ್ ಹೆರಾಲ್ಡ್ ಹೊರಹೊಮ್ಮಿದೆ.
03:42 PM (IST) Jan 08
Bollywood Actor Aamir Khan: ಕೆಲ ನಟ-ನಟಿಯರ ಬದುಕು ಸಾರ್ವಜನಿಕವಾಗಿ ಚರ್ಚೆ ಆಗುವುದು. ಅಂತೆಯೇ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಅವರ ಸಹೋದರ ಫೈಸಲ್ ಖಾನ್ ನಡುವಿನ ಸಂಬಂಧ ಸರಿಯಾಗಿಲ್ಲ. ಹಾಗಾದರೆ ಏನಾಯ್ತು?
03:36 PM (IST) Jan 08
ಬೆಂಗಳೂರು ಗ್ರಾಮಾಂತರದಲ್ಲಿ ರೌಡಿ ಶೀಟರ್ ಕಾರ್ತಿಕ್ನನ್ನು ಪ್ರತಿಸ್ಪರ್ಧಿ ಗಂಗಾ ಗ್ಯಾಂಗ್ ಅಪಹರಿಸಿ, ಹೊಸೂರಿಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆಯ ವೇಳೆ ಆತನ ಬೆರಳುಗಳನ್ನು ಕತ್ತರಿಸಿ, ಗಂಭೀರವಾಗಿ ಗಾಯಗೊಂಡ ಆತನನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದೆ.
03:14 PM (IST) Jan 08
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಮೊದಲು ಸ್ನೇಹದಿಂದ ಇದ್ದ ಗಿಲ್ಲಿ ನಟ, ಕಾವ್ಯ ಶೈವ ನಡುವೆ ಮನಸ್ತಾಪ ಶುರುವಾಗಿದೆ. ಗಿಲ್ಲಿಯನ್ನು ಕಾವ್ಯ ನಾಮಿನೇಟ್ ಮಾಡಿದರೂ ಕೂಡ, ಗಿಲ್ಲಿ ಮಾತ್ರ ಕಾವ್ಯ ಅವರನ್ನು ಬೆಂಬಲ ಮಾಡುತ್ತ ಬಂದರು. ಆದರೆ ಈಗ ಆಟ ಶುರುವಾಗಿದೆ.
03:04 PM (IST) Jan 08
ಬಿಗ್ಬಾಸ್ ಮನೆಯಲ್ಲಿ ಟಾಪ್ 6 ಸ್ಪರ್ಧೆ ತೀವ್ರಗೊಂಡಿದ್ದು, ಮಿಡ್ವೀಕ್ ಎಲಿಮಿಷೇನ್ ನಡೆದಿದೆ ಎನ್ನಲಾಗಿದೆ. ಈ ಅನಿರೀಕ್ಷಿತ ಎಲಿಮಿಷನ್ನಲ್ಲಿ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
02:18 PM (IST) Jan 08
ಯಶ್ ಅಭಿನಯದ 'ಟಾಕ್ಸಿಕ್' ಟೀಸರ್ನಲ್ಲಿನ 'ಡ್ಯಾನ್ಸಿಂಗ್ ಕಾರ್' ದೃಶ್ಯವು, ಆಮಿರ್ ಖಾನ್ ಅವರ ಸಿನಿಮಾದ ಇದೇ ರೀತಿಯ ದೃಶ್ಯವನ್ನು ನೆನಪಿಸುತ್ತದೆ. ಹಾಸ್ಯಮಯವಾಗಿದ್ದ ಈ ದೃಶ್ಯ, 'ಟಾಕ್ಸಿಕ್'ನಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣವಾಗುವ ಮೂಲಕ ತದ್ವಿರುದ್ಧವಾದ ಅನುಭವ ನೀಡುತ್ತದೆ.
01:47 PM (IST) Jan 08
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ 2028ರ ಚುನಾವಣಾ ಟಿಕೆಟ್ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಇದು ನಾಗೇಂದ್ರರ ಅಸಮಾಧಾನಕ್ಕೆ ಕಾರಣವಾಗಿದೆ.
01:20 PM (IST) Jan 08
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಂದಾದರೆ, ಅಶ್ವಿನಿ ಗೌಡ ಇನ್ನೊಂದು ಕಡೆ ಆಗಿದ್ದಾರೆ. ನಾಮಿನೇಶನ್ ವಿಚಾರ ಬರಲಿ, ಬೇರೆ ವಿಷಯಗಳೇ ಇರಲಿ ಅಶ್ವಿನಿ ಗೌಡ ಅವರನ್ನು ಉಳಿದ ಸ್ಪರ್ಧಿಗಳು ವಿರೋಧ ಮಾಡೋದುಂಟು. ಈಗ ಅಶ್ವಿನಿ ಅವರು ಹಿಡಿದ ಹಠ ಸಾಧಿಸಿದ್ದಾರೆ. ಏನದು?
12:32 PM (IST) Jan 08
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ನೋಡುಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಟೀಸರ್ನಲ್ಲಿ ಯಶ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಗ್ಲಾಮರ್ ನಟಿ ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
12:28 PM (IST) Jan 08
12:18 PM (IST) Jan 08
ಸತೀಶ್ ಕ್ಯಾಡಬಮ್ಸ್ಗೆ ಗಿಲ್ಲಿ ನಟನನ್ನು ಕಂಡರೆ ಆಗೋದೇ ಇಲ್ಲ. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸಂದರ್ಶನದಲ್ಲಿ, ಪಾರ್ಟಿಗಳಲ್ಲಿ ಸೇರಿದಂತೆ ಎಲ್ಲ ಕಡೆ ಗಿಲ್ಲಿಯನ್ನು ಹೀಯಾಳಿಸುತ್ತಿದ್ದಾರೆ. ವೀಕ್ಷಕರ ಪ್ರಕಾರ ಕಟ್ಟುಕಥೆ ಹೇಳುವ ಸತೀಶ್ ಕ್ಯಾಡಬಮ್ಸ್ ಗಿಲ್ಲಿ ವಿರುದ್ಧ ಸವಾಲು ಹಾಕಿದ್ದಾರೆ.
12:11 PM (IST) Jan 08
ಟಾಕ್ಸಿಕ್ ಟೀಸರ್ನ ಒಂದು ಸೀನ್ಗೆ ಬೆಚ್ಚಿ ಬಿದ್ದ ಹಾಲಿವುಡ್, ರಾಯನಾಗಿ ಯಶ್ ಹೊಸ ಮೈಲಿಗಲ್ಲು ಸೃಷ್ಟಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳ ಕುತೂಹಲ ಡಬಲ್ ಆಗಿದೆ. ಆದರೆ ಅತ್ತ ಹಾಲಿವುಡ್ ಒಂದು ಕ್ಷಣ ದಂಗಾಗಿದೆ. ಕಾರಣ ಅದು ಒಂದು ಸೀನ್.
12:03 PM (IST) Jan 08
ಪಾಕಿಸ್ತಾನ ಹಾಗೂ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಷರಿಯಾ ಸಂಸ್ಕೃತಿ ಹೇರಲು ಮುಂದಾಗಿದ್ದಾಗ ಬಾಂಗ್ಲಾ ಪ್ರಜೆಗಳು ಪ್ರಬಲವಾಗಿ ವಿರೋಧಿಸಿದ್ದರು. ಅಂತಹ ಸಂಕಷ್ಟದ ಸ್ಥಿತಿಯಲ್ಲಿ ಬಾಂಗ್ಲಾದೇಶವನ್ನು ಪಾಕ್ನಿಂದ ವಿಮೋಚನೆಗೊಳಿಸಿದ್ದು ಭಾರತ. ಆದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದೆ.
11:48 AM (IST) Jan 08
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ, ಯುವಕನೊಬ್ಬನ ನಿರಂತರ ಪ್ರೀತಿಯ ಕಿರುಕುಳಕ್ಕೆ ಮನನೊಂದು 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಯುವಕನಿಗೆ ಎಚ್ಚರಿಕೆ ನೀಡಿದರೂ ಕಿರುಕುಳ ಮುಂದುವರೆದಿದ್ದರಿಂದ ಮನನೊಂದು ಯುವತಿ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾಳೆ.
11:44 AM (IST) Jan 08
Rocking Star Yash ನಟನೆಯ ಟಾಕ್ಸಿಕ್ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಜನ್ಮದಿನದಂದು ಯಶ್ ಅವರು ರಾಯ ಆಗಿ ಕಾಣಿಸಿಕೊಂಡ ಲುಕ್ ಅನೇಕರಿಗೆ ಇಷ್ಟ ಆಗಿದೆ. ಯುಟ್ಯೂಬ್ನಲ್ಲಿ ರಿಲೀಸ್ ಆದ ಒಂದು ಗಂಟೆಗೆ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಹಾಗಾದರೆ ಈ ಸಿನಿಮಾದ ಟೀಸರ್ ನೋಡಿದವರು ಏನು ಹೇಳಿದರು?