Published : Oct 07, 2025, 07:38 AM ISTUpdated : Oct 07, 2025, 11:57 PM IST

State News Live: 'ನಿಮಗೆ ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರಿಷ್ಟ?'- Kiran Raj ಉತ್ತರಕ್ಕೆ ಹುಬ್ಬೇರಿಸಿದ ಹೀರೋಯಿನ್ಸ್!

ಸಾರಾಂಶ

ಬೆಂಗಳೂರು (ಅ.7): ರಾಜ್ಯದಲ್ಲಿ ಜಾತಿ ಗಣತಿ ಪ್ರಕ್ರಿಯೆ ಆರಂಭಕ್ಕೂ ಮುನ್ನ ಧುತ್ತನೆ ಎದ್ದು ಕುಳಿತ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡಬೇಕು, ಕಳೆದ ಬಾರಿಯಂತೆ ಈ ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಗೆ ಎಲ್ಲವನ್ನೂ ಕಟ್ಟುವ ಆಟ ನಡೆಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ವೀರಶೈವರನ್ನು ಬಿಟ್ಟು ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೇಳುವುದಕ್ಕೆ ಅವರದ್ದೇ ಸಂಪುಟದ ಸಹೋದ್ಯೋಗಿ ಈಶ್ವರ ಖಂಡ್ರೆ ವಿರೋಧ ಸೂಚಿಸಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನಡೆಯ ಹೇಳಿಕೆ ಕೊಟ್ಟಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:57 PM (IST) Oct 07

'ನಿಮಗೆ ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರಿಷ್ಟ?'- Kiran Raj ಉತ್ತರಕ್ಕೆ ಹುಬ್ಬೇರಿಸಿದ ಹೀರೋಯಿನ್ಸ್!

ಕರ್ಣ ಧಾರಾವಾಹಿಯಲ್ಲಿ ಕರ್ಣನಾಗಿ ಕಿರಣ್‌ ರಾಜ್‌, ನಿಧಿಯಾಗಿ ಭವ್ಯಾ ಗೌಡ, ನಿತ್ಯಾ ಆಗಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ನಮ್ರತಾ ಗೌಡ, ಭವ್ಯಾ ಗೌಡ ನಡುವೆ ಯಾರು ಇಷ್ಟ ಎಂದು ಕಿರಣ್‌ ರಾಜ್‌ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಕಿರಣ್‌ ರಾಜ್‌ ನೀಡಿದ ಉತ್ತರ ಮಾತ್ರ..

 

Read Full Story

11:33 PM (IST) Oct 07

ಬಿಗ್‌ಬಾಸ್ ಕನ್ನಡ ಸೀಸನ್ 12 ಪುನಾರಂಭ ಯಾವಾಗ? ಬುಧವಾರದ ಸಂಚಿಕೆ ಪ್ರಸಾರವಾಗುತ್ತಾ?

Bigg Boss Re Start Date: ಬಿಗ್‌ಬಾಸ್ ಕನ್ನಡದ ಸೆಟ್‌ಗೆ ಬೀಗ ಜಡಿಯಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದ ಸಂಚಿಕೆ ಪ್ರಸಾರವಾಗಿದ್ದರೂ, ನ್ಯಾಯಾಲಯದ ಮುಂದಿನ ತೀರ್ಮಾನದವರೆಗೆ ಶೋನ ಭವಿಷ್ಯ ಅನಿಶ್ಚಿತವಾಗಿದೆ.

Read Full Story

11:32 PM (IST) Oct 07

Karna Serial - ಕರ್ಣನಿಗೆ 'ಬಯ್ಯಾ' ಎಂದ ನಿತ್ಯಾ; ಸಹೋದರನ ಜೊತೆ ಮದುವೆ ಆಗತ್ತಾ? ಸತ್ಯ ಏನು?

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ಕರ್ಣನ ಮದುವೆಯ ಪ್ರೋಮೋ ರಿಲೀಸ್‌ ಆಗಿದೆ. ಈಗ ಕರ್ಣನಿಗೆ ನಿತ್ಯಾ ಬಯ್ಯಾ ಎಂದು ಕರೆದಿದ್ದಾಳೆ. ಹಾಗಾದರೆ ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದು ಸುಳ್ಳಾ? ಕನಸಾ? ಸತ್ಯ ಏನು?

 

Read Full Story

10:51 PM (IST) Oct 07

ರಾಜ್ಯ, ರಾಷ್ಟ್ರ ರಾಜಕಾರಣದ ನೆಚ್ಚಿನ ಐಷಾರಾಮಿ ಕೇಂದ್ರಕ್ಕೆ ಸೇರಿದ 17 ಬಿಗ್‌ಬಾಸ್ ಸ್ಪರ್ಧಿಗಳು!

Bigg Boss Kannada contestants moved: ಮಾಲಿನ್ಯ ಮಂಡಳಿಯ ನೋಟಿಸ್‌ನಿಂದಾಗಿ ಬಿಗ್‌ಬಾಸ್ ಸೆಟ್ ಇರುವ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ 17 ಸ್ಪರ್ಧಿಗಳನ್ನು ಬಿಡದಿಯ ಐತಿಹಾಸಿಕ ಹಾಗೂ ರಾಜಕೀಯವಾಗಿ ಸುದ್ದಿಯಾಗಿದ್ದ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.

Read Full Story

10:10 PM (IST) Oct 07

ನಾಲಿಗೆ ಮೇಲಿನ ಮಚ್ಚೆ! ಆಕೆ ಭವಿಷ್ಯದಂತೆ ಬಿಗ್‌ಬಾಸ್​ ಮಾಸ್​ ಎಲಿಮನೇಷನ್​!

ಬಿಗ್‌ಬಾಸ್​ ಸೀಸನ್​ 12ರ ಸ್ಪರ್ಧಿ: ಕಾಕತಾಳೀಯವಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಿಂದಾಗಿ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು, ಆಕೆಯ ನಾಲಿಗೆ ಮೇಲಿನ ಮಚ್ಚೆಯ ಮಾತು ಇದೀಗ ಚರ್ಚೆಯಲ್ಲಿದೆ.

Read Full Story

10:04 PM (IST) Oct 07

ನಾಲ್ಕು ತಿಂಗಳಿಂದ ಕೋಮಾದಲ್ಲಿದ್ದ ಕನ್ನಡತಿ ಇನ್ನಿಲ್ಲ; 3 ವರ್ಷದ ಮಗುವಿನ ತಾಯಿಗೆ ಅಪಘಾತ ಹೇಗಾಯ್ತು?

Apoorva K Bhat Death: ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹೋಗುತ್ತಿದ್ದ ಕಾರ್‌ಗೆ ಬಸ್‌ ಬಂದು ಗುದ್ದಿತ್ತು. ಹೀಗಾಗಿ ಅಪೂರ್ವ ಕೋಮಾ ಸೇರಿಕೊಂಡಿದ್ದರು. ಈ ಘಟನೆ ಬಗ್ಗೆ ಅಪೂರ್ವ ಪತಿ ಆಶೀಶ್‌ ಸರಡ್ಕ ಏನು ಹೇಳಿದ್ದರು? 

Read Full Story

09:26 PM (IST) Oct 07

3 ವರ್ಷದ ಮಗಳಿಗೋಸ್ಕರ ಪತ್ನಿಗಾಗಿ ಪ್ರಾರ್ಥಿಸಿದ್ದ ಕನ್ನಡಿಗ ಆಶೀಶ್ ಸರಡ್ಕ! ಅಪೂರ್ವ ಈಗ ನೆನಪು ಮಾತ್ರ!

Ashish Saradka Wife apoorva k bhat: 134 ದಿನಗಳ ಕಾಲ ಕೋಮಾದಲ್ಲಿದ್ದ ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ಇಹಲೋಕ ತ್ಯಜಿಸಿದ್ದಾರೆ. ಪತ್ನಿಯನ್ನು ಉಳಿಸಿಕೊಳ್ಳಲು ಒದ್ದಾಡಿದ್ದ ಅಪೂರ್ವ ಪತಿ ಆಶಿಶ್‌ ಸರಡ್ಕ ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

Read Full Story

09:17 PM (IST) Oct 07

BBK 12, Exclusive video - ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ದೃಶ್ಯ

Bigg Boss Kannada contestants evicted: ಬಿಗ್‌ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಕಳುಹಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ ಹಾಕಲಾಗಿದ್ದು, ಸ್ಪರ್ಧಿಗಳನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಎರಡು-ಮೂರು ದಿನಗಳಲ್ಲಿ ಶೋ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.

Read Full Story

09:15 PM (IST) Oct 07

'ಕೋಣ'ಕ್ಕಾಗಿ ನಾನ್​ವೆಜ್​ ಬಿಟ್ಟ Tanisha Kuppanda - ಚಾಮುಂಡಿ ಅಮ್ಮನ ಮುಂದೆ ಪ್ರತಿಜ್ಞೆ

ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು  ‘ಕೋಣ’ಕ್ಕಾಗಿ ನಾನ್​ವೆಜ್​ ತ್ಯಜಿಸಿದ್ದಾರೆ. ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ,  ಮಾಂಸಾಹಾರ ಸೇವಿಸುವುದಿಲ್ಲವೆಂದು ಹರಕೆ ಹೊತ್ತಿರುವುದಾಗಿ ಅವರು ತಿಳಿಸಿದ್ದಾರೆ. ಹಾಗಿದ್ದರೆ ಯಾವ ಕೋಣ ಇದು? ನಟಿ ಹೇಳಿದ್ದೇನು? 

Read Full Story

08:49 PM (IST) Oct 07

ಅತಿದೊಡ್ಡ ರಿಯಾಲಿಟಿ ಶೋಗೆ ಬೀಗ - ಬಿಗ್‌ಬಾಸ್ ಕಣ್ಣಿಗೆ ಮಣ್ಣೆರಚಿತಾ ಜಾಲಿವುಡ್ ಸ್ಟುಡಿಯೋ?

Bigg Boss Kannada set sealed: ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಗ್‌ಬಾಸ್ ಸೆಟ್ ಇರುವ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ಜಿಲ್ಲಾಡಳಿತ ಬೀಗ ಹಾಕಿದೆ. ಮಾಲಿನ್ಯ ಮಂಡಳಿ ನೋಟಿಸ್ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Read Full Story

08:41 PM (IST) Oct 07

ವೈದ್ಯನ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ಬಲಿ - ಇಂಜೆಕ್ಷನ್ ಬಳಿಕ ಕೋಮಾಗೆ ಜಾರಿದ ಮಗು

Doctor's Negligence:ಕಪ ಹಾಗೂ ಶೀತದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವೈದ್ಯನೋರ್ವ ತಪ್ಪಾದ ಇಂಜೆಕ್ಷನ್ ನೀಡಿದ ಪರಿಣಾಮ 2 ವರ್ಷದ ಮಗು ಸಾವನ್ನಪ್ಪಿದೆ. ಮಧ್ಯಪ್ರದೇಶದ ಶೆಹೋರೆ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 

Read Full Story

07:56 PM (IST) Oct 07

ಬಿಗ್ ಬಾಸ್ ಮನೆಯಿಂದ ಹೊರಬಂದು 17 ಸ್ಪರ್ಧಿಗಳು ಹೋಗಿದ್ದೆಲ್ಲಿಗೆ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ದೃಶ್ಯಾವಳಿ!

ಕಾನೂನು ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಡದಿಯ ಜಾಲಿವುಡ್ ಸ್ಟೂಡಿಯೋಸ್‌ನಲ್ಲಿರುವ ಬಿಗ್ ಬಾಸ್ ಮನೆಯನ್ನು ರಾಜ್ಯ ಸರ್ಕಾರ ಕ್ಲೋಸ್ ಮಾಡಿಸಿದೆ. ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ಸ್ಟುಡಿಯೋಗೆ ಬೀಗ ಜಡಿದಿದ್ದು, ಎಲ್ಲಾ 17 ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿ, ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ

Read Full Story

07:41 PM (IST) Oct 07

ಬಿಗ್‌ಬಾಸ್ ಮನೆಗೆ ಬೀಗ - ಯಾರೂ ದೊಡ್ಡವರಲ್ಲ ಅಂದ್ರು ಈಶ್ವರ್ ಖಂಡ್ರೆ

Eshwar Khandre on Bigg Boss: ಪರಿಸರ ಕಾಯಿದೆ ಉಲ್ಲಂಘನೆ ಆರೋಪದ ಮೇಲೆ ಬಿಗ್ ಬಾಸ್ ಸೀಸನ್ 12 ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದೆ.

Read Full Story

07:31 PM (IST) Oct 07

134 ದಿನಗಳ ಹೋರಾಟ, ಪತಿಯ ಪ್ರಾರ್ಥನೆ, ಆ ಪುಟ್ಟ ಕಂದನ ಹಂಬಲ; ಕೊನೆಗೂ ಉಸಿರು ಚೆಲ್ಲಿದ ಕನ್ನಡತಿ!

Apoorva K Bhat Death: ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಅಪೂರ್ವ ಕೆ ಭಟ್‌ ಅವರು ನಿಧನರಾಗಿದ್ದಾರೆ. 134 ದಿನಗಳಿಂದ ನಡೆದ ಅಪಘಾತ ಇದಾಗಿತ್ತು. ಇಷ್ಟು ದಿನಗಳಿಂದ ಆಸ್ಪತ್ರೆ ಬೆಡ್‌ ಮೇಲೆ ಕಾಲ ಕಳೆದಿದ್ದ ಅಪೂರ್ವ ಕೊನೆಗೂ ಹೋರಾಡಿ ಸೋತರು.

 

Read Full Story

07:26 PM (IST) Oct 07

ಅಂಕಲ್ ಕುವೈತ್‌ಗೆ ಆಂಟಿ ರೆಸಾರ್ಟ್‌ಗೆ; ಅಕ್ರಮ ಸಂಬಂಧ-ಹಣಕ್ಕಾಗಿ ಪೀಡಿಸುವ ಹೆಂಡತಿಯಿಂದ ಬೇಸತ್ತ ಗಂಡ ಸಾಯಲು ಯತ್ನ!

ತುಮಕೂರಿನಲ್ಲಿ ಪತ್ನಿಯ ಕಿರುಕುಳ, ಹಣಕ್ಕಾಗಿ ಪೀಡನೆ ಮತ್ತು ಎಐಎಂಐಎಂ ಮುಖಂಡನೊಂದಿಗಿನ ಆಕೆಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಫೇಸ್‌ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಸಹ ಪತ್ನಿಯ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story

07:25 PM (IST) Oct 07

ಮಗುವಿಗೆ ಎದೆಹಾಲು ನೀಡೋದನ್ನು ಯಾವಾಗ ನಿಲ್ಲಿಸಬೇಕು? ಅಮ್ಮ-ಮಗುವಿನ ಆರೋಗ್ಯಕ್ಕೆ ವೈದ್ಯೆ ಟಿಪ್ಸ್​

ಮಗುವಿಗೆ 6 ತಿಂಗಳು ಎದೆಹಾಲು ಅಗತ್ಯವಾಗಿದ್ದು, ಒಂದು ವರ್ಷ ಮುಂದುವರಿಸುವುದು ಮಿದುಳಿನ ಬೆಳವಣಿಗೆಗೆ ಸಹಕಾರಿ. ಒಂದೂವರೆ ವರ್ಷದ ನಂತರ ಕ್ರಮೇಣವಾಗಿ ಎದೆಹಾಲು ನೀಡುವುದನ್ನು ಕಡಿಮೆ ಮಾಡಿ ನಿಲ್ಲಿಸುವುದು ತಾಯಿ ಮತ್ತು ಮಗುವಿಗೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅವರು ಹೇಳಿದ ಟಿಪ್ಸ್​ ಇಲ್ಲಿದೆ… 

Read Full Story

07:22 PM (IST) Oct 07

ಗಗನಚುಕ್ಕಿ ಭರಚುಕ್ಕಿ ವೀಕ್ಷಣೆಗೆ ಬಂದ ಅನಿಲ್‌ ಕುಂಬ್ಳೆ, ಪತ್ನಿ ಜೊತೆಗೆ ದೇಗುಲ ದರ್ಶನ, ಅಭಿಮಾನಿಗಳ ಸಂಭ್ರಮ

ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಪತ್ನಿ ಸಮೇತ ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಮತ್ತು ಶಿವನಸಮುದ್ರದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಧಾರ್ಮಿಕ ಪ್ರವಾಸದ ವೇಳೆ ಅಭಿಮಾನಿಗಳು ಅವರನ್ನು ಕಂಡು ಸಂಭ್ರಮಿಸಿದರು.

Read Full Story

07:06 PM (IST) Oct 07

ವಾಸಂತಿ ಭಟ್ ಸಾವು, ಖಳನಟನ ಸಹೋದರನ ಸುತ್ತ ಅನುಮಾನದ ಹುತ್ತ! ಒಡಹುಟ್ಟಿದಾತನ ಹೇಳಿಕೆ ಇದು!

ಕೊಡಗಿನ ವಾಸಂತಿ ಭಟ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಾವಿನ ಹಿಂದೆ ಖಳನಾಯಕ ನಟನ ಸಹೋದರ ಪೀಟರ್ ರೈ ಕೈವಾಡವಿದೆ ಎಂದು ವಾಸಂತಿ ಸಹೋದರ ವಿಜಯ್ ಆರೋಪಿಸಿದ್ದಾರೆ. ವಾಸಂತಿ ಪತಿ ಶ್ರೀವತ್ಸನ ಸ್ನೇಹಿತನಾಗಿದ್ದ ಪೀಟರ್ ರೈಗೆ ಎಸ್‌ಐಟಿ ನೋಟಿಸ್ ನೀಡಿದ್ದು, ಆತನ ಮೇಲೆ ಅನುಮಾನ ವ್ಯಕ್ತವಾಗಿದೆ. 

Read Full Story

07:03 PM (IST) Oct 07

ಎರಡನೇ ಬಾರಿಗೆ ಕನ್ನಡ ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತ, ಈ ಮೊದಲು ಯಾವಾಗ?

ಎರಡನೇ ಬಾರಿಗೆ ಕನ್ನಡ ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತ, ಈ ಮೊದಲು ಯಾವಾಗ? 12ನೇ ಆವೃತ್ತಿ ಶೋ ಆರಂಭಗೊಂಡ ಒಂದೇ ವಾರಕ್ಕೆ ಸ್ಥಿಗತಗೊಂಡಿದೆ. ಈ ಬಾರಿ ನಿಯಮ ಉಲ್ಲಂಘನೆ ಪ್ರಕರಣ ಗಂಭೀರವಾಗಿದೆ. ಇದಕ್ಕೂ ಮೊದಲು ಬಿಗ್ ಬಾಸ್ ಸ್ಥಗಿತಗೊಂಡಿತ್ತು.

Read Full Story

06:54 PM (IST) Oct 07

2019ರ ಜೊಮ್ಯಾಟೋ ಬಿಲ್ ಫೋಟೋ ವೈರಲ್; 3-4 ಸಾವಿರ ಸೇವ್ ಆಗ್ತಿತ್ತು ಎಂದ ನೆಟ್ಟಿಗರು

Old Zomato bill comparison: ಆನ್‌ಲೈನ್ ಫುಡ್ ಆರ್ಡರ್‌ಗಳು ದುಬಾರಿಯಾಗಿವೆ. 7 ವರ್ಷಗಳ ಹಿಂದಿನ ಜೊಮ್ಯಾಟೋ ಬಿಲ್ ಒಂದನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಅಂದಿನ ಮತ್ತು ಇಂದಿನ ಆನ್‌ಲೈನ್ ಫುಡ್ ಆರ್ಡರ್ ದರಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ತೋರಿಸುತ್ತದೆ.

Read Full Story

06:45 PM (IST) Oct 07

Amruthadhaare Serial - ಆ ಸಿನಿಮಾದ ಕ್ಲೈಮ್ಯಾಕ್ಸ್‌ ಥರ ಅಮೃತಧಾರೆಯಲ್ಲೂ ಆಗಲಿದ್ಯಾ? ಸುಳಿವು ಸಿಗ್ತು!

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಅಧರ್ಮದ ಹಾದಿ ಹಿಡಿದಿದ್ದ ಜಯದೇವ್‌, ಶಕುಂತಲಾಗೆ ಈಗ ಸರಿಯಾದ ಶಿಕ್ಷೆ ಆಗುತ್ತಿದೆ. ಈ ಧಾರಾವಾಹಿಯು ಮುಂಬರುವ ಎಪಿಸೋಡ್‌ಗಳು ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ ಥರ ಆಗಬಹುದಾ ಎಂಬ ಡೌಟ್‌ ಶುರುವಾಗಿದೆ.

 

Read Full Story

06:35 PM (IST) Oct 07

ಜಾತಿ ಜನಗಣತಿ ಸಮೀಕ್ಷೆ ವೇಳೆ ಮತ್ತೊಂದು ಮಹಾ ಯಡವಟ್ಟು ಬಯಲು, ಆಧಾರ್ ಕಾರ್ಡ್ ನೀಡಿದ್ದ ವೈದ್ಯನಿಗೆ ಶಾಕ್!

ದಾವಣಗೆರೆಯಲ್ಲಿ ನಡೆಯುತ್ತಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ತಾಂತ್ರಿಕ ದೋಷವೊಂದು ಬೆಳಕಿಗೆ ಬಂದಿದೆ. ವೈದ್ಯರೊಬ್ಬರ ಆಧಾರ್ ಸಂಖ್ಯೆ ನಮೂದಿಸಿದಾಗ, ಅವರ ಕುಟುಂಬದ ಪಟ್ಟಿಯಲ್ಲಿ ಅನ್ಯಕೋಮಿನ ವ್ಯಕ್ತಿಗಳ ಹೆಸರುಗಳು ಕಾಣಿಸಿಕೊಂಡು ಗೊಂದಲ ಸೃಷ್ಟಿಸಿತು.  

Read Full Story

06:25 PM (IST) Oct 07

Bigg Bossಗೆ ಸಂಜನಾ ಬುರ್ಲಿ? ಅಪ್ಪ-ಅಮ್ಮಂಗೆ ಹೇಳ್ದೆ ಮದ್ವೆಯಾಗಿದ್ಯಾಕೆ? ಲೈವ್​ನಲ್ಲಿ ಬಂದು ನಟಿ ಹೇಳಿದ್ದೇನು?

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ಇದೀಗ 'ಶ್ರೀಗಂಧದ ಗುಡಿ' ಎಂಬ ಹೊಸ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.  ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡು, ಸೀರಿಯಲ್‌ನ ಕಥೆ ಮತ್ತು ಬಿಗ್ ಬಾಸ್ ಪ್ರವೇಶದ ಬಗ್ಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Read Full Story

06:14 PM (IST) Oct 07

ಬಿಗ್ ಬಾಸ್ ಮನೆಗೆ ಬೀಗ ಜಡಿದ ಸರ್ಕಾರ; ಸೀಸನ್ 12ರ ಸ್ಪರ್ಧಿಗಳು 7 ಗಂಟೆಯೊಳಗೆ ಹೊರ ಹೋಗಲು ಸೂಚನೆ!

ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಡದಿಯಲ್ಲಿರುವ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೂಟಿಂಗ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಸಂಜೆಯೊಳಗೆ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲು ಸೂಚನೆ ನೀಡಲಾಗಿದೆ.

Read Full Story

06:11 PM (IST) Oct 07

Amruthadhaare Serial - ಅಧರ್ಮಿಗಳಿಗೆ ಉಳಿಗಾಲವಿಲ್ಲ; ಶಕುಂತಲಾ, ಜೈಗೆ ಹೀಗ್‌ ಆಗ್ಬೇಕು, ಭೇಷ್‌ ಗೌತಮ್!

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ಹಾಗೂ ಶಕುಂತಲಾಗೆ ಲಡ್ಡು ಬಂದರೂ ಬಾಯಿಗಿಡೋಕೆ ಆಗ್ತಿಲ್ಲ. ಈ ರೀತಿ ಪರಿಸ್ಥಿತಿ ಬಂದಿದೆ. ಗೌತಮ್‌ಗೆ ಮೋಸ ಮಾಡಿದ ಇವರಿಗೆ ಹೀಗೆ ಆಗಬೇಕು ಅಂತ ವೀಕ್ಷಕರು ಕೂಡ ಬಯಸುತ್ತಿದ್ದಾರೆ.

 

Read Full Story

05:30 PM (IST) Oct 07

ಸುನಿಲ್ ಶೆಟ್ಟಿಯಿಂದ 500 ಕೋಟಿ ಸಂಪಾದಿಸೋದನ್ನು ಕಲಿತ ಗಗನ ಚಿನ್ನಪ್ಪ; ಇದಕ್ಕೆ ಶಿಲ್ಪಾ ಶೆಟ್ಟಿ ಸಾಕ್ಷಿ

Suniel Shetty Rich Story: 'ಸೀತಾ ರಾಮ' ಖ್ಯಾತಿಯ ನಟ ಗಗನ್ ಚಿನ್ನಪ್ಪ, 'ದಢಕನ್' ಚಿತ್ರದ ಪ್ರಸಿದ್ಧ ಡೈಲಾಗ್ ಕೇಳಿ ಅಚ್ಚರಿಗೊಂಡಿದ್ದಾರೆ. 50 ರೂ.ನಿಂದ 500 ಕೋಟಿ ಸಂಪಾದಿಸಿದ ಸುನಿಲ್ ಶೆಟ್ಟಿ ಪಾತ್ರದ ಕಥೆಗೆ ಅವರು ತಮಾಷೆಯಾಗಿ ಪ್ರತಿಕ್ರಿಯಿಸಿದ ವಿಡಿಯೋ ವೈರಲ್ ಆಗಿದೆ.

Read Full Story

05:26 PM (IST) Oct 07

Naa Ninna Bidalaare - ಹಿತಾಳನ್ನು ಹಾರಿಸಿಕೊಂಡು ಹೋದ ರಕ್ಕಸ ಹದ್ದು- ಕಾಪಾಡ್ತಾಳಾ ದುರ್ಗಾ?

ಶಕ್ತಿಗಾಗಿ ಹಿತಾಳನ್ನು ಬಲಿ ಕೊಡಲು ಮಾಳವಿಕಾ ಯೋಜಿಸುತ್ತಾಳೆ. ಮಾಂತ್ರಿಕ ಕಳುಹಿಸಿದ ರಕ್ಕಸ ಹದ್ದು ಹಿತಾಳನ್ನು ಹೊತ್ತೊಯ್ದಾಗ, ದುರ್ಗಾ ದೇವಿಯ ಅವತಾರ ತಾಳಿ ತ್ರಿಶೂಲದಿಂದ ಅದನ್ನು ಸಂಹರಿಸಿ ಮಗುವನ್ನು ಕಾಪಾಡುತ್ತಾಳೆ. ಈ ಘಟನೆಯಿಂದ ದುರ್ಗಾಳ ದೈವಿಕ ಶಕ್ತಿ ಎಲ್ಲರ ಮುಂದೆ ಅನಾವರಣಗೊಳ್ಳುತ್ತದೆ.
Read Full Story

04:52 PM (IST) Oct 07

ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷವಿದೆಯೆಂದು ವಾಪಸ್‌ ಕಳಿಸಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಜಾತಿಗಣತಿ ಪ್ರಶ್ನಾವಳಿಯಲ್ಲಿ ದೋಷಗಳಿವೆ ಎಂದು ಗಣತಿದಾರರನ್ನು ವಾಪಸ್ ಕಳುಹಿಸಿದ್ದಾರೆ. ಈ ಘಟನೆಯು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಹಿಂದುಳಿದ ವರ್ಗಗಳ ಆಯೋಗವು ಇದನ್ನು ಅಸಹಕಾರ ಎಂದು ಕರೆದಿದೆ. 

Read Full Story

04:50 PM (IST) Oct 07

ದಸರಾ ರಜೆ ವಿಸ್ತರಣೆ ಸರ್ಕಾರಿ ಶಾಲೆಗಳಿಗೆ ಮಾತ್ರ; ನಾಳೆಯಿಂದ ಖಾಸಗಿ ಶಾಲೆಗಳು ಯಥಾಸ್ಥಿತಿ ಪ್ರಾರಂಭ!

ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕಾರಣದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆ ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ. ಆದರೆ, ಖಾಸಗಿ ಶಾಲಾ ಸಿಬ್ಬಂದಿ ಈ ಸಮೀಕ್ಷೆಯಲ್ಲಿ ಭಾಗಿಯಾಗದ ಕಾರಣ, ರಾಜ್ಯಾದ್ಯಂತ ಖಾಸಗಿ ಶಾಲೆಗಳು ಅಕ್ಟೋಬರ್ 8 ರಿಂದ ಎಂದಿನಂತೆ ಪುನರಾರಂಭಗೊಳ್ಳಲಿವೆ.

Read Full Story

04:21 PM (IST) Oct 07

ಬಿಗ್ ಬಾಸ್ ಮನೇಲಿ ಕಾಕ್ರೋಚ್ ಸುಧಿಗೆ ಕರಾವಳಿ ಭಾಷೆಯಲ್ಲಿ ಗೇಲಿ ಮಾಡಿದ ತುಳುನಾಡ ಬಾಲೆ ರಕ್ಷಿತಾ ಶೆಟ್ಟಿ!

ಬಿಗ್ ಬಾಸ್ ಸೀಸನ್ 12 ರಲ್ಲಿ, ಕಾಕ್ರೋಚ್ ಸುಧಿಗೆ ಅಸುರರ ರಾಜನ ವಿಶೇಷ ಅಧಿಕಾರ ಸಿಕ್ಕಿದೆ. ಅಸುರನಂತೆ ಸಿದ್ಧವಾಗುತ್ತಿದ್ದ ಸುಧಿಗೆ ಇಂದು ಡ್ಯಾನ್ಸ್ ಉಂಟಾ ಎಂದು ಕರಾವಳಿ ಸ್ಟೈಲ್‌ನಲ್ಲಿ ಗೇಲಿ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸುಧಿ ರಕ್ಷಿತಾ ಶೆಟ್ಟಿಗೆ ಊಟ ಕೊಡದಂತೆ ಸಹಾಯಕರಿಗೆ ಆದೇಶಿಸಿದ್ದಾರೆ.

Read Full Story

04:13 PM (IST) Oct 07

2 ವರ್ಷದ ಕಂದನನ್ನು ನೆಂಟರ ಮನೆಯಲ್ಲಿ ಬಿಟ್ಟು ಬಂದು ಸಾವಿಗೆ ಶರಣಾದ ದಂಪತಿ

2 ವರ್ಷದ ಪುಟ್ಟ ಕಂದನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದ ಪೋಷಕರು ನಂತರ ವಿಷ ಸೇವಿಸಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ. 35 ವರ್ಷದ ಅಜಿತ್ ಹಾಗೂ ಅವರ ಪತ್ನಿ 27 ವರ್ಷದ ಶ್ವೇತಾ ಮೃತಪಟ್ಟವರು. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

Read Full Story

04:07 PM (IST) Oct 07

ಆರೋಗ್ಯದಲ್ಲಿ ಏರುಪೇರು - ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್‌ಡಿ ದೇವೇಗೌಡರಿಗೆ ಚಿಕಿತ್ಸೆ

HD Devegowda Admitted Hospital ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇವೇಗೌಡರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

Read Full Story

04:02 PM (IST) Oct 07

ವಿಧಾನಸೌಧದಲ್ಲಿ ಮುಜುಗರದ ಸನ್ನಿವೇಶ - ಪವರ್‌ ಶೇರಿಂಗ್‌ ಚರ್ಚೆಗಳ ನಡುವೆ ಸಿಎಂ ಕಾರು ಹತ್ತಲು ಹೋದ ಡಿಕೆಶಿ!

DCM DK Shivakumar Tries to Board CM Siddaramaiah's Car at Vidhana Soudha ವಿಧಾನಸೌಧದಲ್ಲಿ ಸಭೆ ಮುಗಿಸಿ ಹೊರಬಂದ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರನ್ನು ತಮ್ಮದೆಂದು ಭಾವಿಸಿ ಏರಲು ಮುಂದಾದರು.

Read Full Story

03:53 PM (IST) Oct 07

ದೆಹಲಿ ಸಿಎಂ ಭೇಟಿಯಾದ ಕಾಂತಾರ ಟೀಂ, ಸಿನೆಮಾದ ಮಹಿಳಾ ಟೀಂ ಜೊತೆ ಪ್ರತ್ಯೇಕ ಫೋಟೋ ತೆಗೆಸಿಕೊಂಡ ಮುಖ್ಯಮಂತ್ರಿ

'ಕಾಂತಾರ: ಅಧ್ಯಾಯ 1' ಚಿತ್ರತಂಡವು ನಟ-ನಿರ್ದೇಶಕ ರಿಷಭ್ ಶೆಟ್ಟಿ ನೇತೃತ್ವದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಭೇಟಿಯಾಯಿತು. ಈ ಸಂದರ್ಭದಲ್ಲಿ, ಚಿತ್ರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಮುಖ್ಯಮಂತ್ರಿ ಶ್ಲಾಘಿಸಿದರು.  

Read Full Story

03:53 PM (IST) Oct 07

ಜಾತಿ ಸಮೀಕ್ಷೆ ವೇಳೆ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ₹20 ಲಕ್ಷ ಪರಿಹಾರ; ಸಿಎಂ ಸಿದ್ದರಾಮಯ್ಯ ಘೋಷಣೆ!

ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಕರಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಸಮೀಕ್ಷೆ ವೇಳೆ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ₹20 ಲಕ್ಷ ಪರಿಹಾರ, ಗೌರವಧನವನ್ನು ₹20 ಸಾವಿರಕ್ಕೆ ಹೆಚ್ಚಳ ಮಾಡಿದೆ.

Read Full Story

03:14 PM (IST) Oct 07

BBK 12 - ಹಗ್ಗ ಸಡಿಲಿಸಿ ಬಿಗಿಯಾಗಿ ಹಿಡಿದ ರಕ್ಷಿತಾ ಶೆಟ್ಟಿಗೆ ಮನೆ ಮಂದಿಯಿಂದ ಚಪ್ಪಾಳೆ

Janvi statement on Rakshitha: ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ತನ್ನನ್ನು ಅಂಡರ್‌ಎಸ್ಟಿಮೇಟ್ ಮಾಡಿ ನೀಡಿದ್ದ ಹಳೆಯ ಹೇಳಿಕೆಗಾಗಿ ರಕ್ಷಿತಾ ಶೆಟ್ಟಿ, ಜಾನ್ವಿಯನ್ನು ಪ್ರಶ್ನಿಸಿದ್ದಾರೆ. ರಕ್ಷಿತಾ ಅವರ ಖಡಕ್ ಉತ್ತರಕ್ಕೆ ಮನೆಯ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.

Read Full Story

03:12 PM (IST) Oct 07

ದಸರಾ ರಜೆ 10 ವಿಸ್ತರಣೆ ಮಾಡಿದ ಸರ್ಕಾರ - ಅ.18ರವರೆಗೆ ಸರ್ಕಾರಿ ಶಾಲೆ ಶಿಕ್ಷಕರಿಗೆ ಸಮೀಕ್ಷೆ ಹೊರೆ

ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆಯನ್ನು ಅ.18 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಸಮೀಕ್ಷೆಯಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

Read Full Story

02:31 PM (IST) Oct 07

ಆಂಕರ್ ಜಾಹ್ನವಿ ಇನ್ ಡೇಂಜರ್ ಜೋನ್; ಬಿಗ್ ಬಾಸ್ ಮನೆಯಿಂದ ಹೊರಹಾಕಲು ರಕ್ಷಿತಾ ಶೆಟ್ಟಿ ಸೇರಿ ಹಲವರು ಒಗ್ಗಟ್ಟು!

ಬಿಗ್ ಬಾಸ್ ಮನೆಯಲ್ಲಿ ಅರಸಿಯಾಗಿ ದಬ್ಬಾಳಿಕೆ ಮಾಡುತ್ತಿದ್ದ ನಿರೂಪಕಿ ಜಾಹ್ನವಿಗೆ ಇದೀಗ ಸಂಕಷ್ಟ ಎದುರಾಗಿದೆ. ಧ್ರುವಂತ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಸೇರಿದಂತೆ ಹಲವು ಸ್ಪರ್ಧಿಗಳು ಆಕೆಯನ್ನು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದಾರೆ. ಈ ಕಾರಣದಿಂದ ಜಾಹ್ನವಿ ಡೇಂಜರ್ ಜೋನ್‌ಗೆ ತಲುಪಿದ್ದಾರೆ.

Read Full Story

02:31 PM (IST) Oct 07

ಮೋದಿಯವರು ಕೆರಳುವುದಕ್ಕೆ ಸುದೀರ್ಘ 9 ಗಂಟೆಗಳ ಅವಧಿ ಬೇಕಾಯ್ತು - ಪ್ರಿಯಾಂಕ್ ಖರ್ಗೆ

Priyank Kharge on BR Gavai incident: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲಿನ ಶೂ ಎಸೆತ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ವಿಳಂಬ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ.

Read Full Story

02:26 PM (IST) Oct 07

ನಾನೇನೆಂದು ತೋರಿಸ್ತೇನೆ, ಈ ಡ್ರೆಸ್​ ಅಷ್ಟೇ ನೋಡ್ಬೇಡಿ ಎನ್ನುತ್ತಲೇ ಲೈವ್​ಗೆ ಬಂದ Bigg Boss ಜಾಹ್ನವಿ ಹೇಳಿದ್ದೇನು?

ಬಿಗ್‌ಬಾಸ್‌ ಸ್ಪರ್ಧಿ, ನಿರೂಪಕಿ ಜಾಹ್ನವಿ ಅವರು ತಮ್ಮ ಡಿವೋರ್ಸ್ ವಿಚಾರವಾಗಿ ಮನೆಯೊಳಗೆ ಮತ್ತು ಹೊರಗೆ ಸದ್ದು ಮಾಡುತ್ತಿದ್ದಾರೆ. ಇದರ ನಡುವೆಯೇ, ಅವರು ದೊಡ್ಮನೆಗೆ ಹೋಗುವ ಮುನ್ನ ತಮ್ಮ ಆಟದ ಲೆಕ್ಕಾಚಾರ, 'ನನ್ನ ಜೀವನ, ನನ್ನ ನಿಯಮ' ಎಂಬ ನಿಲುವಿನ ಬಗ್ಗೆ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ.
Read Full Story

More Trending News