ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ ಅವರು ಸೇರಿ ಚರ್ಚೆ ಮಾಡಿಯೇ ಸಂಪುಟ ವಿಸ್ತರಣೆಗೆ ಹೊಸ ಸಚಿವರ ಪಟ್ಟಿಯ ತೀರ್ಮಾನ ಮಾಡಿದ್ದೇವೆ. ಈ ವಿಚಾರದಲ್ಲಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಉತ್ತರ ನೀಡಿದರು.
ಸಿದ್ದರಾಮಯ್ಯ ಯಾಕೆ ಅಸಮಾಧಾನಗೊಳ್ಳುತ್ತಾರೆ? ಅವರ ಹುಟ್ಟುಹಬ್ಬ ಇತ್ತು. ಅನೇಕ ಅತಿಥಿಗಳು, ಅಭಿಮಾನಿಗಳು ಶುಭಾಶಯ ಕೋರಲು ಬರುತ್ತಿರುತ್ತಾರೆ. ನಾನೂ ಶುಭ ಕೋರಿದ್ದೇನೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡಿ ಸಮಾಧಾನ ಮಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ 139 ಶಾಸಕರೂ ಒಂದೇ ತಂಡ. ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ. ನಾನೂ ಸೇರಿ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ. ನೀವುಗಳು ಹೊಸದಾಗಿ ಏನೋ ಹುಡುಕುತ್ತಿದ್ದೀರಿ ಎಂದರು.
ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ಖಂಡಿತವಾಗಿ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
09:50 AM (IST) Aug 04
09:36 AM (IST) Aug 04
09:14 AM (IST) Aug 04
09:03 AM (IST) Aug 04
09:02 AM (IST) Aug 04
ನಾನು ತಾಳ್ಮೆಯಿಂದ ಇದ್ದಿದ್ದಕ್ಕೆ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೇನೆ. ನಾವು ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ಶಾಸಕರು ತಾಳ್ಮೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
08:50 AM (IST) Aug 04
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಗರದ ಮೊದಲ 'ಫೈರ್ ಹೈಡ್ರೆಂಟ್' ವ್ಯವಸ್ಥೆಯುಳ್ಳ ಆರ್.ಟಿ.ಸ್ಟ್ರೀಟ್ ಮತ್ತು ಮೆಜೆಸ್ಟಿಕ್ ಟ್ಯಾಂಕ್ ಬಂಡ್ ವೈಟ್ ಟಾಪಿಂಗ್ ರಸ್ತೆಯನ್ನು ಉದ್ಘಾಟಿಸಿದರು.
08:33 AM (IST) Aug 04
08:22 AM (IST) Aug 04
07:57 AM (IST) Aug 04
07:44 AM (IST) Aug 04
07:27 AM (IST) Aug 04
ನೈಋತ್ಯ ರೈಲ್ವೆಯು ಜುಲೈ ತಿಂಗಳಲ್ಲಿ 4.69 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಯಿಂದ ಒಟ್ಟು ₹793.31 ಕೋಟಿ ಆದಾಯ ಗಳಿಸಿದೆ.
07:16 AM (IST) Aug 04
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಮಳೆಯಿಂದ ಸೋಮನಹಳ್ಳಿ ರಸ್ತೆ ಬಂದ್ ಆಗಿದ್ದು, ರಸ್ತೆ ಪಕ್ಕದ ನಿವಾಸಿಗಳು ಅಪಘಾತ, ಆರೋಗ್ಯ ಸಮಸ್ಯೆ ಹಾಗೂ ಪ್ರವಾಹದ ಭೀತಿಯಲ್ಲಿದ್ದಾರೆ.
07:05 AM (IST) Aug 04