Published : Aug 04, 2026, 06:45 AM ISTUpdated : Aug 04, 2026, 11:32 PM IST

Karnataka News Live: 'ಹೀರೋಗಳನ್ನು ಈಗ ಸಾಕುವುದೇ ಕಷ್ಟ' - ಸಂಭಾವನೆ ಬಗ್ಗೆ ಈ ಕನ್ನಡದ ನಿರ್ಮಾಪಕರ ಖಡಕ್ ಮಾತು

ಸಾರಾಂಶ

ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ ಅವರು ಸೇರಿ ಚರ್ಚೆ ಮಾಡಿಯೇ ಸಂಪುಟ ವಿಸ್ತರಣೆಗೆ ಹೊಸ ಸಚಿವರ ಪಟ್ಟಿಯ ತೀರ್ಮಾನ ಮಾಡಿದ್ದೇವೆ. ಈ ವಿಚಾರದಲ್ಲಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಉತ್ತರ ನೀಡಿದರು.

ಸಿದ್ದರಾಮಯ್ಯ ಯಾಕೆ ಅಸಮಾಧಾನಗೊಳ್ಳುತ್ತಾರೆ? ಅವರ ಹುಟ್ಟುಹಬ್ಬ ಇತ್ತು. ಅನೇಕ ಅತಿಥಿಗಳು, ಅಭಿಮಾನಿಗಳು ಶುಭಾಶಯ ಕೋರಲು ಬರುತ್ತಿರುತ್ತಾರೆ. ನಾನೂ ಶುಭ ಕೋರಿದ್ದೇನೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡಿ ಸಮಾಧಾನ ಮಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಪಕ್ಷದ 139 ಶಾಸಕರೂ ಒಂದೇ ತಂಡ. ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ. ನಾನೂ ಸೇರಿ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ. ನೀವುಗಳು ಹೊಸದಾಗಿ ಏನೋ ಹುಡುಕುತ್ತಿದ್ದೀರಿ ಎಂದರು.

ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ಖಂಡಿತವಾಗಿ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

11:32 PM (IST) Aug 04

'ಹೀರೋಗಳನ್ನು ಈಗ ಸಾಕುವುದೇ ಕಷ್ಟ' - ಸಂಭಾವನೆ ಬಗ್ಗೆ ಈ ಕನ್ನಡದ ನಿರ್ಮಾಪಕರ ಖಡಕ್ ಮಾತು

NM Suresh: ಹೀರೋಗಳ ಸಂಭಾವನೆ ಕಡಿಮೆ ಮಾಡಿಕೊಳ್ಳಿ ಅಂತ ಕೇಳೋದು ತಪ್ಪು ಎಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮಾತಿಗೆ ನನ್ನ ವಿರೋಧ ಇದೆ ಎಂದರು ಎನ್‌.ಎಂ. ಸುರೇಶ್.

Read Full Story

11:03 PM (IST) Aug 04

Cricket - ರೆಹಾನೆ ಕಟ್ಟಿಟ್ಟ ಆ 'ಮಹಾ ದಾಖಲೆ' ಮುರಿಯೋದ್ಯಾರು? ವೈಭವ್ ಆರ್ಭಟದ ನಡುವೆಯೂ ರಹಾನೆಯೇ ನಂ.1!

ಟೆಸ್ಟ್ ಆಟಗಾರನೆಂದೇ ಖ್ಯಾತರಾದ ಅಜಿಂಕ್ಯ ರಹಾನೆ, ತಮ್ಮ ಟಿ20 ಚೊಚ್ಚಲ ಪಂದ್ಯದಲ್ಲೇ 61 ರನ್ ಬಾರಿಸಿ ಅಳಿಸಲಾಗದ ದಾಖಲೆ ನಿರ್ಮಿಸಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಸೇರಿದಂತೆ ಯಾವುದೇ ಭಾರತೀಯ ಆಟಗಾರನಿಂದಲೂ ಕಳೆದ 15 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ, ಇದು ರಹಾನೆ ಅವರ ಟಿ20 ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
Read Full Story

10:54 PM (IST) Aug 04

'ನಿಮ್ಮಿಂದಲೇ ಅವರಿಗೆ ತೊಂದರೆ ಆಗ್ತಿದೆ..' ಕರಗ ಉತ್ಸವದಲ್ಲಿ ದರ್ಶನ್‌ ಅಭಿಮಾನಿಗಳ ವಿರುದ್ಧ ಸಿಎಂ ಡಿಕೆ ಶಿವಕುಮಾರ್ ಗರಂ!

ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಡಿ ಬಾಸ್' ಎಂದು ಘೋಷಣೆ ಕೂಗಿದ ನಟ ದರ್ಶನ್‌ ಅಭಿಮಾನಿಗಳ ಮೇಲೆ ಗರಂ ಆದರು.

Read Full Story

10:46 PM (IST) Aug 04

ಮೂರು ಹೊತ್ತು ಊಟ ಮಾಡಿದ್ರೂ ಪದೇ ಪದೇ ಹಸಿವಾಗುತ್ತಾ? ಈ 7 ಕಾರಣಗಳನ್ನು ತಿಳಿದುಕೊಳ್ಳಿ

ಹೊಟ್ಟೆ ತುಂಬಿದ ಹಾಗೆ ಫೀಲ್ ಆಗೋಕೆ ಪ್ರೋಟೀನ್ ತುಂಬಾ ಮುಖ್ಯ. ಬೆಳಗಿನ ತಿಂಡಿಯಲ್ಲಿ 20 ರಿಂದ 30 ಗ್ರಾಂ ಪ್ರೋಟೀನ್ ಇದ್ರೆ, ಹೊಟ್ಟೆ ಬೇಗ ತುಂಬುತ್ತೆ. ಮಧ್ಯಾಹ್ನದ ಹೊತ್ತಿಗೆ ಚಿಕ್ಕಪುಟ್ಟ ತಿಂಡಿ ತಿನ್ನೋದು ಕೂಡ ಕಮ್ಮಿಯಾಗುತ್ತೆ ಅಂತ ಸಂಶೋಧನೆಗಳು ಹೇಳುತ್ತವೆ.

Read Full Story

09:26 PM (IST) Aug 04

Bengaluru - ಆನ್‌ಲೈನ್ ಡೆಲಿವರಿ ಹೆಸರಲ್ಲಿ ದೋಖಾ; ಬಾಗಿಲಿಗೆ ಬಂದ ಪಾರ್ಸಲ್‌ನಲ್ಲಿ ಕಾದಿತ್ತು ಮಹಾಮೋಸ! ಸತ್ಯ ಬಯಲಿಗೆಳೆದ ಬೆಂಗಳೂರು ಯುವತಿ!

ಬೆಂಗಳೂರಿನ ಯುವತಿಯೊಬ್ಬರು ತಾನು ಆರ್ಡರ್ ಮಾಡದ 'ಕ್ಯಾಶ್-ಆನ್-ಡೆಲಿವರಿ' ಪಾರ್ಸೆಲ್‌ವೊಂದನ್ನು ಸ್ವೀಕರಿಸಲು ನಿರಾಕರಿಸಿ, ವಂಚನೆಯ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಆನ್‌ಲೈನ್ ಶಾಪಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.

Read Full Story

09:13 PM (IST) Aug 04

ಸೀರಿಯಲ್‌ನಲ್ಲಿ ಹೋಮ್ಲಿ ಲುಕ್, ಹೊರಗೆ ಗ್ಲಾಮರಸ್ ಅವತಾರ - ಜ್ಯೋತಿ ಪೂರ್ವಜ್ ಫೋಟೋಸ್ ವೈರಲ್

Jyothi Poorvaj: ಸಿನಿಮಾಗಳಿಗೆ ಇರುವಷ್ಟೇ ಕ್ರೇಜ್‌ ಸೀರಿಯಲ್‌ಗಳಿಗೂ ಇದೆ. ಕಿರುತೆರೆಯ ಧಾರಾವಾಹಿಗಳು ಕೂಡ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುತ್ತಿದ್ದು, ಅವುಗಳಲ್ಲಿ ನಟಿಸುವ ಕಲಾವಿದರಿಗೂ ಅಪಾರ ಜನಪ್ರಿಯತೆ ಸಿಗುತ್ತಿದೆ.

Read Full Story

08:46 PM (IST) Aug 04

ಹಿಟ್ ಕಾಂಬಿನೇಷನ್ ಮತ್ತೆ ಕಮ್‌ಬ್ಯಾಕ್ - ‘ಅಮೆರಿಕಾ ಅಮೆರಿಕಾ 2’ಗೆ ಮನೋಮೂರ್ತಿ ಸಂಗೀತ

ಕೆಲವು ನಿರ್ದೇಶಕ-ಸಂಗೀತ ನಿರ್ದೇಶಕರ ಕಾಂಬಿನೇಷನ್‌ಗಳು ಪ್ರೇಕ್ಷಕರ ಮನಸ್ಸಿನಲ್ಲಿ ಎಂದಿಗೂ ಅಚ್ಚಳಿಯದೆ ಉಳಿದಿವೆ. ಅಂತಹ ಅಪರೂಪದ ಜೋಡಿಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕೂಡ ಪ್ರಮುಖರು.

Read Full Story

08:38 PM (IST) Aug 04

ಮೊಬೈಲ್​ನಲ್ಲಿ ಈ ಸೆಟ್ಟಿಂಗ್ಸ್​ ಆಫ್​ ಮಾಡಿದ್ರೆ ಸೈಬರ್​ ದಾಳಿಯಿಂದ ನೀವು ಸೇಫ್​ - ಬೆಂಗಳೂರು ಪೊಲೀಸರ ಮಾಹಿತಿ

ಹೆಚ್ಚುತ್ತಿರುವ ಸೈಬರ್ ದಾಳಿಗಳಿಂದ ನಿಮ್ಮ ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳನ್ನು ರಕ್ಷಿಸಿಕೊಳ್ಳಲು ಬೆಂಗಳೂರು ಪೊಲೀಸರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಗೂಗಲ್ ಕ್ರೋಮ್‌ನಲ್ಲಿ ಪಾಸ್‌ವರ್ಡ್ ಮತ್ತು ಪಾವತಿ ವಿಧಾನಗಳನ್ನು ಸೇವ್ ಮಾಡುವ ಆಯ್ಕೆಗಳನ್ನು ಆಫ್ ಮಾಡುವ ಮೂಲಕ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
Read Full Story

08:37 PM (IST) Aug 04

Cars - ಖರೀದಿಸಿದ ಕಾರು ಇಷ್ಟವಾಗಿಲ್ವಾ? ಮೂರು ವರ್ಷದ ನಂತ್ರ ಹಿಂತಿರುಗಿಸಿ ಹಣ ಪಡೆಯಿರಿ! ಗ್ರಾಹಕರಿಗೆ ಬಿಗ್ ಆಫರ್‌ ಕೊಟ್ಟ ಕಂಪನಿ!

ಹುಂಡೈ ಇಂಡಿಯಾ ತನ್ನ ಕ್ರೆಟಾ ಇವಿ ಮೇಲೆ 'ಖಚಿತ ಮರುಖರೀದಿ' ಆಫರ್ ಘೋಷಿಸಿದೆ. ಈ ಯೋಜನೆಯಡಿ, ಗ್ರಾಹಕರು 3 ವರ್ಷಗಳ ಬಳಿಕ ಕಾರನ್ನು ಹಿಂತಿರುಗಿಸಿ, ಹಣವನ್ನು ಮರಳಿ ಪಡೆಯಬಹುದು, ಇದು ಇವಿ ಮರುಮಾರಾಟ ಮೌಲ್ಯದ ಚಿಂತೆಯನ್ನು ದೂರಮಾಡುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

08:22 PM (IST) Aug 04

ಕಳೆದ 30 ವರ್ಷಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗಿಲ್ಲ ಯಾವುದೇ ಸ್ಥಾನ

ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಆರ್.ವಿ. ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಅವರಂತಹ ಹಿರಿಯ ನಾಯಕರನ್ನು ಕೈಬಿಡಲಾಗಿದೆ.

Read Full Story

08:04 PM (IST) Aug 04

'ಬೇರೆ ಇಂಡಸ್ಟ್ರಿ ಗುರುತಿಸುವ ಮುನ್ನ ನಮ್ಮ ಪ್ರತಿಭೆಗಳನ್ನು ಬೆಳೆಸಿ' - ನಿರ್ಮಾಪಕರಿಗೆ ನೆನಪಿರಲಿ ಪ್ರೇಮ್ ಮನವಿ

Spark Kannada Movie: ನೆನಪಿರಲಿ ಪ್ರೇಮ್, ಯುವ ನಟ ನಿರಂಜನ್ ಸುಧೀಂದ್ರ ಅವರನ್ನು ಮನಸಾರೆ ಹೊಗಳುವುದರ ಜೊತೆಗೆ, ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಮಹತ್ವದ ಮನವಿಯೊಂದನ್ನೂ ಮಾಡಿದ್ದಾರೆ.

Read Full Story

08:01 PM (IST) Aug 04

'ಗೃಹಜ್ಯೋತಿ' ಲಾಭ ಪಡೆಯಲು ಇದು ಕಡ್ಡಾಯ - ಇಲ್ಲದಿದ್ರೆ ಯೋಜನೆ ಕ್ಯಾನ್ಸಲ್​- ಇಂಧನ ಇಲಾಖೆ ಎಚ್ಚರಿಕೆ

ಸರ್ಕಾರವು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಪುನರ್​ಪರಿಶೀಲಿಸುತ್ತಿದೆ. ಬೆಸ್ಕಾಂ ಸಿಬ್ಬಂದಿ ಸಮೀಕ್ಷೆಗೆ ಬಂದಾಗ ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದದಂತಹ ಅಗತ್ಯ ದಾಖಲೆಗಳನ್ನು ನೀಡದಿದ್ದರೆ, ಯೋಜನೆಯ ಉಚಿತ ವಿದ್ಯುತ್ ಲಾಭವನ್ನು ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Read Full Story

07:50 PM (IST) Aug 04

CJP - ಅಭಿಜೀತ್ ದೀಪ್ಕೆಗೆ ಕಾದಿದ್ಯಾ ಜೈಲು ಶಿಕ್ಷೆ? ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯ ವಿಡಿಯೋ ವೈರಲ್!

'ಜಿರಳೆ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಬಗ್ಗೆ ಜ್ಯೋತಿಷಿಯೊಬ್ಬರು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಸಂಖ್ಯಾಶಾಸ್ತ್ರದ ಆಧಾರದ ಮೇಲೆ, ಅಭಿಜೀತ್‌ಗೆ ಮುಂದಿನ ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Read Full Story

07:43 PM (IST) Aug 04

‘ದೃಶ್ಯಂ’ ಮೀರಿಸುವ ಸಸ್ಪೆನ್ಸ್ - OTTಯಲ್ಲಿ ನಂ.1 ಟ್ರೆಂಡಿಂಗ್‌ನಲ್ಲಿದೆ ಈ ಸಿನಿಮಾ, IMDb ರೇಟಿಂಗ್ ಎಷ್ಟು ಗೊತ್ತಾ?

Balan The Boy: ನಾವು ಮಾತನಾಡುತ್ತಿರುವ ಸಿನಿಮಾ ‘ಬಾಲನ್ ದಿ ಬಾಯ್’. ಹೆಸರೇ ಹೇಳುವಂತೆ, ಇದು ಬಾಲನ್ ಎಂಬ ಬಾಲಕನ ಸುತ್ತ ಸುತ್ತುವ ಕಥೆ. ಬಾಲನ್ ತನ್ನ ತಾಯಿಯೊಂದಿಗೆ ಒಂದು ಆಶ್ರಮದಲ್ಲಿ ಬೆಳೆಯುತ್ತಾನೆ.

Read Full Story

07:32 PM (IST) Aug 04

'ಬಾಸ್' ಚಿತ್ರದ ಬಿಡುಗಡೆಗೆ ನಟ ದರ್ಶನ್ ಸ್ವತಃ ಒಪ್ಪಿಗೆ.. 'ಜೈಲು' ಕೋಣೆಯಿಂದಲೇ ಹೇಳಿದ್ದೇನು ಗೊತ್ತಾ?

ವಿಜಯಲಕ್ಷ್ಮಿ ಅವರೂ ಸಹ ಸಹ ಫೋನ್‌ನಲ್ಲಿ ಮಾತನಾಡಿ ‘ಚಿತ್ರ ಬಿಡುಗಡೆ ಮಾಡಿ, ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ' ಎಂದಿದ್ದಾರೆ ಚಿತ್ರದ ನಾಯಕ-ನಿರ್ಮಾಪಕ ತನುಷ್ ಶಿವಣ್ಣ.

Read Full Story

07:19 PM (IST) Aug 04

ಜಿಂದಾಲ್‌ನಿಂದ ಕರ್ನಾಟಕಕ್ಕೆ ಬಿಗ್ ಗಿಫ್ಟ್; ₹1.20 ಲಕ್ಷ ಕೋಟಿ ಹೂಡಿಕೆ, ಸಾವಿರಾರು ಉದ್ಯೋಗ ಸೃಷ್ಟಿ!

ಉಕ್ಕು ತಯಾರಿಕೆ ಮತ್ತು ಇತರ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್‌ ಸಮೂಹವು ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 1.20 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

Read Full Story

07:18 PM (IST) Aug 04

'ಸುರಕ್ಷತೆಯಲ್ಲಿ ಬೆಂಗಳೂರಿಗಿಂತ ಮುಂಬೈ ನನಗೆ ಸೇಫ್‌ ಅನ್ಸುತ್ತೆ..' ಹೀಗ್ಯಾಕಂದ್ರು ರಾಕಿಂಗ್‌ ಸ್ಟಾರ್‌ ಯಶ್‌ ಹೀರೋಯಿನ್‌

ನಟಿ ಶಾನ್ವಿ ಶ್ರೀವಾತ್ಸವ, ಬೆಂಗಳೂರನ್ನು ತನ್ನ ಕರ್ಮಭೂಮಿ ಎಂದು ಕರೆದರೂ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮುಂಬೈ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂದರ್ಶನವೊಂದರಲ್ಲಿ, ಅವರು ಬೆಂಗಳೂರಿನಲ್ಲಿ ಮಧ್ಯರಾತ್ರಿ ಓಡಾಡಲು ಮುಂಬೈನಷ್ಟು ಧೈರ್ಯ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

Read Full Story

06:55 PM (IST) Aug 04

'ಸ್ಪೈಡರ್-ಮ್ಯಾನ್' ಚಿತ್ರದ ನಟಿ ಮೇರಿ ರಿವೆರಾ ನಿಧನ; 'ಬ್ರ್ಯಾಂಡ್ ನ್ಯೂ ಡೇ' ಸಂಭ್ರಮದ ನಡುವೆ ಶೋಕ!

ಮೇರಿ ರಿವೆರಾ ಅವರ ವೃತ್ತಿಪರತೆ ಮತ್ತು ಮಾನವೀಯ ಗುಣಗಳು ಹೊಸ ತಲೆಮಾರಿನ ಕಲಾವಿದರಿಗೆ ಮಾದರಿ. ಹಾಲಿವುಡ್‌ನ ಗದ್ದಲದ ನಡುವೆಯೂ ತಮ್ಮದೇ ಆದ ಶಾಂತ ಮತ್ತು ಗಂಭೀರ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದ ಅವರು, ದೈಹಿಕವಾಗಿ ಮರೆಯಾದರೂ ನಟಿಸಿದ ದೃಶ್ಯಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.

Read Full Story

06:36 PM (IST) Aug 04

IMDb ಪಟ್ಟಿಯಲ್ಲಿ ಯಾರು ನಂ.1? ಕಿಯಾರಾ, ಯಶ್‌ಗೆ ಎಷ್ಟನೇ ಸ್ಥಾನ ಗೊತ್ತಾ?

IMDb Popular Indian Celebrities: IMDb ಬಿಡುಗಡೆ ಮಾಡಿರುವ ಈ ವಾರದ ‘Popular Indian Celebrities’ ಪಟ್ಟಿಯಲ್ಲಿ ಹಲವು ಜನಪ್ರಿಯ ನಟ-ನಟಿಯರು ಹಾಗೂ ನಿರ್ದೇಶಕರು ಸ್ಥಾನ ಪಡೆದಿದ್ದಾರೆ.

Read Full Story

06:29 PM (IST) Aug 04

Vijayapura - ನೋ ಲೆಫ್ಟ್‌ ಆರ್‌ ರೈಟ್‌, ಐ ವಾಂಟ್‌ ಜಸ್ಟೀಸ್‌ ಓನ್ಲಿ! ಅಲ್ಲಿ ಅತ್ತಿದ್ದು ಒಬ್ಬ ಪೊಲೀಸ್‌ ಅಭ್ಯರ್ಥಿಯಲ್ಲ, ಲಕ್ಷಾಂತರ ಬಡ ಕುಟುಂಬಗಳ ಭರವಸೆ!

ವಿಜಯಪುರದ ತಿಕೋಟಾದಲ್ಲಿ, ಪರೀಕ್ಷೆಯಲ್ಲಿನ ಲೋಪಗಳ ವಿರುದ್ಧ ಪೊಲೀಸ್ ಅಭ್ಯರ್ಥಿಯೊಬ್ಬ ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ನಾಲ್ಕು ವರ್ಷಗಳ ಕಠಿಣ ಪರಿಶ್ರಮವು ವ್ಯವಸ್ಥೆಯ ನಿರ್ಲಕ್ಷ್ಯದಿಂದ ವ್ಯರ್ಥವಾದಾಗ, ಆ ಯುವಕನ ಆರ್ತನಾದವು ಲಕ್ಷಾಂತರ ನಿರುದ್ಯೋಗಿ ಯುವಕರ ಧ್ವನಿಯಾಯಿತು.

Read Full Story

06:11 PM (IST) Aug 04

ಶ್ರೀನಾಥ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ - ಎಐಸಿಸಿ ವೀಕ್ಷಕ ವಿವೇಕ್ ಬನಸಾಲ್‌ಗೆ ಕಾಂಗ್ರೆಸ್ ಕಾರ್ಯಕರ್ತರ ಮನವಿ

Gangavathi Congress: ನಗರದ ಮಾಜಿ ಸಂಸದ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಎಚ್.ಜಿ.ರಾಮುಲು ನಿವಾಸಕ್ಕೆ ಎಐಸಿಸಿ ವೀಕ್ಷಕರಾಗಿರುವ ವಿವೇಕ್ ಬನಸಾಲ ಅವರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.

Read Full Story

05:38 PM (IST) Aug 04

ಹಾವಿನ ದೇಹದ ಬಗ್ಗೆ ನಿಮಗೆ ಗೊತ್ತಿರದ ಸತ್ಯ - ಹೊಸ ಸಂಶೋಧನೆಯಲ್ಲಿ ಅಚ್ಚರಿ ಮಾಹಿತಿ ಬಯಲು

Snake Neck Length: ಹಾವು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಉದ್ದನೆಯ ದೇಹ, ಒಂದು ತಲೆ ಹಾಗೂ ಬಾಲ. ಹೊರನೋಟಕ್ಕೆ ಹಾವಿನ ದೇಹ ಸರಳವಾದ ಉದ್ದನೆಯ ಕೊಳವೆಯಂತೆ ಕಾಣಬಹುದು. ಆದರೆ, ಹಾವಿನ ದೇಹದ..

Read Full Story

05:27 PM (IST) Aug 04

Ind vs SL - ಶ್ರೀಲಂಕಾ ಸರಣಿಯಿಂದ ಔಟ್‌? ಕನ್ನಡಿಗನಿಗೆ ಸ್ಥಾನ! ಕೊನೆ ಕ್ಷಣದಲ್ಲಿ ಬಿಗ್‌ ಡ್ರಾಮಾ! ಆ ಸ್ಟಾರ್ ಯುವ ಆಟಗಾರನಿಗೆ ಆಗಿದ್ದೇನು?

ಆಗಸ್ಟ್ 15 ರಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗಾಗಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೊಲಂಬೊಗೆ ತೆರಳಿದೆ. ಆದರೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಯುವ ಆಟಗಾರ ತಂಡದೊಂದಿಗೆ ಪ್ರಯಾಣಿಸಿಲ್ಲ, ಇದು ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನ ಮೂಡಿಸಿದೆ. ಆ ಸ್ಥಾನ ಕನ್ನಡಿಗನ ದೊರೆಯಲಿದೆ.

Read Full Story

05:26 PM (IST) Aug 04

GBA ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಲೂಟಿ ಆರೋಪ.. ಬೆಚ್ಚಿ ಬೀಳಿಸುತ್ತೆ ಅಂಕಿ-ಅಂಶ..!

ಬೆಂಗಳೂರಿನ ಶಾಂತಿನಗರ ಪಾಲಿಕೆ ಕಚೇರಿಯಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಖರೀದಿ ಹೆಸರಿನಲ್ಲಿ ಸುಮಾರು 8.91 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಏನಿದು ಆರೋಪ? ಸ್ಟೋರಿ ಓದಿ..

Read Full Story

04:43 PM (IST) Aug 04

ಕಿಚ್ಚ ಸುದೀಪ್ ಅವರ ಈ ಲುಕ್ ನೋಡಿದ್ರೆ ನೀವು ನಂಬೋದೇ ಇಲ್ಲ - 30 ವರ್ಷ ಹಿಂದಿನ ಫೋಟೋ ವೈರಲ್!

Kichcha Sudeep: ಇಂದು ಕನ್ನಡ ಚಿತ್ರರಂಗದಲ್ಲಿ ‘ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್, ಈ ಸ್ಥಾನವನ್ನು ಸುಲಭವಾಗಿ ಪಡೆದುಕೊಂಡವರಲ್ಲ. ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೂ ಅಲ್ಲ.

Read Full Story

04:13 PM (IST) Aug 04

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತಿಗೆ ಒಪ್ಪಿ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ - ಏನಿದು ಇಂಟರೆಸ್ಟಿಂಗ್ ಕಥೆ!

ತಮ್ಮನ್ನು ನಿರ್ಮಾಣ ಕ್ಷೇತ್ರಕ್ಕೆ ಕರೆತಂದಿದ್ದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರೇ ಎಂದು ಜಯಣ್ಣ ಮತ್ತು ಭೋಗೇಂದ್ರ ಇದೀಗ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Read Full Story

04:05 PM (IST) Aug 04

ನನಸಾಗುತ್ತಿದೆ ಶಂಕರ್‌ನಾಗ್‌ ಕನಸು, ನಾಲ್ಕು ವರ್ಷದ ಕಾಯುವಿಕೆಯ ಬಳಿಕ ನಂದಿ ಬೆಟ್ಟ ರೋಪ್‌ವೇ ಪ್ರಾಜೆಕ್ಟ್‌ ಕಾಮಗಾರಿ ಶುರು

ನಟ ಶಂಕರ್‌ನಾಗ್‌ ಅವರ ಕನಸಿನ ಕೂಸಾದ ನಂದಿ ಬೆಟ್ಟದ ರೋಪ್‌ವೇ ಯೋಜನೆಗೆ ಚಾಲನೆ ಸಿಕ್ಕಿದ್ದು, ಕೆಳಭಾಗದಲ್ಲಿ ಟರ್ಮಿನಲ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಆದರೆ, ಬೆಟ್ಟದ ಮೇಲ್ಭಾಗದಲ್ಲಿ ಕಾಮಗಾರಿ ಆರಂಭಿಸಲು ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದ್ದು, ಯೋಜನೆ ವಿಳಂಬವಾಗುತ್ತಿದೆ.
Read Full Story

03:46 PM (IST) Aug 04

ಸರ್ವೈವಲ್ ಥ್ರಿಲ್ಲರ್ 'ಅನಿರೀಕ್ಷಿತ ಅತಿಥಿಗಳು' ತೆರೆಗೆ ಬರಲು ಸಜ್ಜು; ಸೆನ್ಸಾರ್ ಅಡೆತಡೆ ದಾಟಿದ್ದು ಹೇಗೆ?

ಸೆನ್ಸಾರ್ ಹಂತವನ್ನು ಯಶಸ್ವಿಯಾಗಿ ಮುಗಿಸಿರುವ 'ಅನಿರೀಕ್ಷಿತ ಅತಿಥಿಗಳು' ಇದೀಗ ತನ್ನ ಬಿಡುಗಡೆಯತ್ತ ಸಂಪೂರ್ಣ ಗಮನ ಹರಿಸಿದೆ. ಸರ್ವೈವಲ್ ಥ್ರಿಲ್ಲರ್, ಪ್ರೇಮಕಥೆ ಮತ್ತು ತೀವ್ರ ಭಾವನೆಗಳ ಸಂಯೋಜನೆಯಾಗಿರುವ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ.

Read Full Story

03:45 PM (IST) Aug 04

ಮೊಹಮ್ಮದ್ ಶಮಿ ಕೆರಿಯರ್ ಕ್ಲೋಸ್.. ಅಗರ್ಕರ್ ಕೊಟ್ಟ ಪರೋಕ್ಷ ಸಂದೇಶದ ಹಿಂದಿದೆ ದೊಡ್ಡ ರಹಸ್ಯ

ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಶ್ರೀಲಂಕಾ ಸರಣಿಯಿಂದ ಕೈಬಿಡಲಾಗಿದೆ. ಅವರ ಬದಲಿಗೆ ಯುವ ವೇಗಿ ಆಕಿಬ್ ನಬಿಗೆ ಅವಕಾಶ ನೀಡಲಾಗಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಶಮಿಯನ್ನು ಕಡೆಗಣಿಸುತ್ತಿರುವುದು ಅವರ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿನ ಅಂತ್ಯದ ಸೂಚನೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
Read Full Story

03:19 PM (IST) Aug 04

ಆಗಸ್ಟ್ 7ಕ್ಕೆ ಗೋಲ್ಡನ್ ಮೂವೀಸ್‌ ನಿರ್ಮಾಣದ ಕನ್ನಡ-ತುಳು ಸಿನಿಮಾ 'ಪಿಚ್ಚರ್' ಸಿನಿಮಾ ಬಿಡುಗಡೆ

ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡಿರುವ 'ಪಿಚ್ಚರ್' (Picture) ಸಿನಿಮಾ ಇದೇ ಆ.7ರಂದು ತೆರೆ ಕಾಣಲಿದೆ. ಹಲವು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಗೋಲ್ಡನ್ ಮೂವೀಸ್ ಇದೀಗ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಾಣ ಮಾಡಿದೆ.

Read Full Story

02:26 PM (IST) Aug 04

ಕೆಲಸಕ್ಕಿಂತ ಜಾತಿಯೇ ದೊಡ್ಡದಾಯ್ತಾ? ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ ಪ್ರಶ್ನೆ

ಪತಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರು ಬಾರಿ ಶಾಸಕರಾಗಿ, ಪಕ್ಷಕ್ಕೆ ನಿಷ್ಠರಾಗಿದ್ದರೂ, ಕೆಲಸಕ್ಕಿಂತ ಜಾತಿಗೇ ಮನ್ನಣೆ ನೀಡಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ದಿನೇಶ್ ಗುಂಡೂರಾವ್ ಕೂಡ ತಮಗೆ ಯಾವುದೇ ಕಾರಣ ನೀಡದೆ ಸಂಪುಟದಿಂದ ಹೊರಗಿಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
Read Full Story

01:39 PM (IST) Aug 04

ಬಿಜೆಪಿ ಹಿಂದೂ ಸಂಘಟನೆಗಳ ಆರೋಪ ನಿಜವಾಯ್ತು! ಕಾಫಿನಾಡಲ್ಲಿ ಕಾರ್ಮಿಕರ ಸೋಗಿನಲ್ಲಿದ್ದ ಐವರು ಅಕ್ರಮ ಬಾಂಗ್ಲಾದೇಶಿಯರ ಬಂಧನ!

ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ, ಚಿಕ್ಕಮಗಳೂರಿನ ಮೂಡಿಗೇರೆ ತಾಲೂಕಿನ ಕಾಫಿ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ, ಮಲೆನಾಡಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಹಿಂದೂ ಸಂಘಟನೆಗಳ ಆರೋಪಗಳಿಗೆ ಪುಷ್ಟಿ ನೀಡಿದೆ.

Read Full Story

01:19 PM (IST) Aug 04

ಬರೋಬ್ಬರಿ 97 ನದಿಗಳು ಹರಿಯುವ ಏಕೈಕ ಜಿಲ್ಲೆ..! ಎಲ್ಲೋ ಅಲ್ಲ ನಮ್ಮ ದೇಶದಲ್ಲೇ ಇದೆ..!

ಭಾರತದಲ್ಲಿ ನದಿಗಳಿಗೆ ಪೂಜನೀಯ ಸ್ಥಾನವಿದೆ. ಸಾಮಾನ್ಯವಾಗಿ ಒಂದು ಜಿಲ್ಲೆಯಲ್ಲಿ ಎರಡು ಅಥವಾ ಮೂರು ನದಿಗಳು ಹರಿಯುವುದನ್ನು ನಾವು ನೋಡಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಒಂದು ಜಿಲ್ಲೆಯಲ್ಲೇ ಬರೋಬ್ಬರಿ 97 ನದಿಗಳು ಹರಿಯುತ್ತವೆ ಎಂದರೆ ನೀವು ನಂಬುತ್ತೀರಾ? ಹೌದು, ಇದು ಸುಳ್ಳಲ್ಲ, ಪ್ರಕೃತಿಯ ಈ ಅದ್ಭುತ ಲೋಕದ ಬಗ್ಗೆ ತಿಳಿಯಲು ಮುಂದೆ ಓದಿ.

Read Full Story

12:52 PM (IST) Aug 04

ನಯನಾ ಮೋಟಮ್ಮಗೂ ಬೇಸರ.. ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕಿ..!

ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ಅರ್ಹತೆ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು, ಆದರೆ ಅವಕಾಶ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.
Read Full Story

11:50 AM (IST) Aug 04

ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ..! ಉಲ್ಟಾ ಹೊಡೆದ ಶಾಸಕ ಬೇಳೂರು ಗೋಪಾಲಕೃಷ್ಣ

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಾಜೀನಾಮೆ ಘೋಷಿಸಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಡಿಕೆ ಶಿವಕುಮಾರ್ ಅವರ ಮಾತಿಗೆ ಬೆಲೆಕೊಟ್ಟು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Read Full Story

11:46 AM (IST) Aug 04

ಪಕ್ಷ, ಭವಿಷ್ಯ ಮುಖ್ಯ ಅಂದುಕೊಂಡವರು ಇರಲಿ, ರಾಜೀನಾಮೆ ನೀಡಿದರೆ 5 ನಿಮಿಷದಲ್ಲೇ ಅಂಗೀಕಾರ - ಸಿಎಂ ಖಡಕ್ ವಾರ್ನಿಂಗ್!

ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿರುವ ಶಾಸಕರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜೀನಾಮೆ ತಂದರೆ ಐದೇ ನಿಮಿಷದಲ್ಲಿ ಅಂಗೀಕರಿಸುವುದಾಗಿ ಹೇಳಿದ್ದು, ತಾಳ್ಮೆಯಿಂದಿರಲು ತಮ್ಮ ಹಾಗೂ ಹಿರಿಯ ನಾಯಕರ ಉದಾಹರಣೆ ನೀಡಿದ್ದಾರೆ. ಅಲ್ಲದೆ, ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ತಕ್ಷಣ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ.
Read Full Story

11:45 AM (IST) Aug 04

ರಾತ್ರಿ ಮಲಗಿದ್ದಾಗಲೇ ಚಿರನಿದ್ರೆಗೆ ಜಾರಿದ ಪ್ರಖ್ಯಾತ ಕ್ರೀಡಾಪಟು.. ಜಸ್ಟ್ 34 ವಯಸ್ಸಿಗೆ ಬಲಿ ಪಡೆದ ಹೃದಯಾಘಾತ!

ಬ್ರೆಜಿಲಿಯನ್ ಫ್ಲೈವೇಟ್ ಸ್ಟಾರ್ ಅಲ್ಲಾನ್ ನಾಸಿಮೆಂಟೊ ಅವರ ಅಕಾಲಿಕ ನಿಧನದಿಂದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಲೋಕ ಸ್ತಬ್ಧವಾಗಿದೆ. ಕೇವಲ 34 ವಯಸ್ಸಿನಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ.

Read Full Story

11:02 AM (IST) Aug 04

ಪಕ್ಷ ಕಟ್ಟಲು ನಾವೇ ಬೇಕು, ಅವಕಾಶ ನೀಡುವಾಗ ತಾರತಮ್ಯ, ಸುರ್ಜೇವಾಲ ಮುಂದೆ ಯಶವಂತರಾಯಗೌಡ ಪಾಟೀಲ್ ನೇರ ನುಡಿ!

ಪಕ್ಷದಲ್ಲಿನ ಸ್ಥಾನಮಾನದ ಅಸಮಾಧಾನದ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಮನವೊಲಿಸಲು ಯತ್ನಿಸಿದರು. ಆದರೆ, ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಪಾಟೀಲ್, ತಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರವೇ ಮುಂದಿನ ನಿರ್ಧಾರವೆಂದು ಸ್ಪಷ್ಟಪಡಿಸಿದ್ದಾರೆ.
Read Full Story

10:16 AM (IST) Aug 04

ಸಂಪುಟದಲ್ಲಿ ಮಧು ಬಂಗಾರಪ್ಪಗೆ ಮತ್ತೆ ಲಾಟರಿ..! ಮಧುಗೆ ಮತ್ತೆ ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?

ಹಿರಿಯ ಶಾಸಕರಾದ ಬಿ.ಕೆ. ಸಂಗಮೇಶ್ ಮತ್ತು ಬೇಳೂರು ಗೋಪಾಲಕೃಷ್ಣ ಅವರ ತೀವ್ರ ಪೈಪೋಟಿಯ ನಡುವೆಯೂ ಮಧು ಬಂಗಾರಪ್ಪ ಮತ್ತೊಮ್ಮೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಲೇಖನವು ಅವರ ಆಕಸ್ಮಿಕ ರಾಜಕೀಯ ಪ್ರವೇಶ, ಸವಾಲುಗಳನ್ನು ಮೆಟ್ಟಿನಿಂತ ರೀತಿ ಮತ್ತು ಸಚಿವ ಸ್ಥಾನ ಸಿಗದಿದ್ದಕ್ಕೆ ಇತರ ನಾಯಕರ ಅಸಮಾಧಾನವನ್ನು ವಿವರಿಸುತ್ತದೆ.
Read Full Story

09:50 AM (IST) Aug 04

ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದಿದ್ದ ಒಂದೂವರೆ ಎಕರೆ ಬೆಳ್ಳುಳ್ಳಿ ಕದ್ದ ಕಳ್ಳರು; ರೈತ ಕಣ್ಣೀರು

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ರೈತರೊಬ್ಬರು ಬೆಳೆದಿದ್ದ ಕಟಾವಿಗೆ ಸಿದ್ಧವಾಗಿದ್ದ ಬೆಳ್ಳುಳ್ಳಿ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯಿಂದಾಗಿ ರೈತ ಸಿದ್ದರಾಜು ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಕಳ್ಳರನ್ನು ಪತ್ತೆ ಹಚ್ಚುವಂತೆ ಇತರ ರೈತರು ಆಗ್ರಹಿಸಿದ್ದಾರೆ.
Read Full Story

More Trending News