MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Ind vs SL: ಶ್ರೀಲಂಕಾ ಸರಣಿಯಿಂದ ಔಟ್‌? ಕನ್ನಡಿಗನಿಗೆ ಸ್ಥಾನ! ಕೊನೆ ಕ್ಷಣದಲ್ಲಿ ಬಿಗ್‌ ಡ್ರಾಮಾ! ಆ ಸ್ಟಾರ್ ಯುವ ಆಟಗಾರನಿಗೆ ಆಗಿದ್ದೇನು?

Ind vs SL: ಶ್ರೀಲಂಕಾ ಸರಣಿಯಿಂದ ಔಟ್‌? ಕನ್ನಡಿಗನಿಗೆ ಸ್ಥಾನ! ಕೊನೆ ಕ್ಷಣದಲ್ಲಿ ಬಿಗ್‌ ಡ್ರಾಮಾ! ಆ ಸ್ಟಾರ್ ಯುವ ಆಟಗಾರನಿಗೆ ಆಗಿದ್ದೇನು?

ಆಗಸ್ಟ್ 15 ರಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗಾಗಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೊಲಂಬೊಗೆ ತೆರಳಿದೆ. ಆದರೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಯುವ ಆಟಗಾರ ತಂಡದೊಂದಿಗೆ ಪ್ರಯಾಣಿಸಿಲ್ಲ, ಇದು ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನ ಮೂಡಿಸಿದೆ. ಆ ಸ್ಥಾನ ಕನ್ನಡಿಗನ ದೊರೆಯಲಿದೆ.

2 Min read
Author : Bhimasi M Koleppanavar
Published : Aug 04 2026, 05:27 PM IST
Share this Photo Gallery
  • FB
  • TW
  • Linkdin
  • Whatsapp
15
ಆ.15ರಿಂದ ಸರಣಿ ಪ್ರಾರಂಭ!
Image Credit : X/BCCI

ಆ.15ರಿಂದ ಸರಣಿ ಪ್ರಾರಂಭ!

ಭಾರತ ಮತ್ತು ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದ್ದು, ಸರಣಿಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಬಿಗ್ ಡ್ರಾಮಾವೊಂದು ನಡೆದಿದೆ. ಸರಣಿಗೂ ಮುನ್ನ ಆಗಸ್ಟ್ 7 ರಿಂದ ನಡೆಯಲಿರುವ ಅಭ್ಯಾಸ ಪಂದ್ಯ ಹಾಗೂ ಪ್ರಮುಖ ಸರಣಿಯಲ್ಲಿ ಭಾಗವಹಿಸಲು ನಾಯಕ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಮಂಗಳವಾರ ಮುಂಬೈನಿಂದ ಕೊಲಂಬೊಗೆ ತೆರಳಿದೆ. ಆದರೆ, ಆಯ್ಕೆ ಮಂಡಳಿ ಪ್ರಕಟಿಸಿದ್ದ 15 ಸದಸ್ಯರ ಸ್ಕ್ವಾಡ್‌ನಲ್ಲಿದ್ದ ಯುವ ಬ್ಯಾಟರ್ ತಂಡದ ಜೊತೆ ಕೊಲಂಬೊಗೆ ಪ್ರಯಾಣಿಸದಿರುವುದು ಕ್ರೀಡಾ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶ್ರೀಲಂಕಾ ಪ್ರವಾಸ ಅತ್ಯಂತ ನಿರ್ಣಾಯಕ!
Image Credit : X/BCCI

ಶ್ರೀಲಂಕಾ ಪ್ರವಾಸ ಅತ್ಯಂತ ನಿರ್ಣಾಯಕ!

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಈ ಶ್ರೀಲಂಕಾ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತ ತಂಡ 5ನೇ ಸ್ಥಾನದಲ್ಲಿದ್ದು, ನೆರೆಯ ಬಾಂಗ್ಲಾದೇಶಕ್ಕಿಂತಲೂ ಹಿನ್ನಡೆಯಲ್ಲಿದೆ. ಹೀಗಾಗಿ ಪಾಯಿಂಟ್ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿಕೊಂಡು ಫೈನಲ್ ತಲುಪುವ ಆಶಯವನ್ನು ಜೀವಂತವಾಗಿಡಲು ಭಾರತಕ್ಕೆ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ಅನಿವಾರ್ಯವಾಗಿದೆ.

Related Articles

Related image1
Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
Related image2
Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?
35
15 ಆಟಗಾರರ ಪಟ್ಟಿಯನ್ನು ಪ್ರಕಟ; ಒಬ್ಬರು ಔಟ್!
Image Credit : X/BCCI

15 ಆಟಗಾರರ ಪಟ್ಟಿಯನ್ನು ಪ್ರಕಟ; ಒಬ್ಬರು ಔಟ್!

ಶ್ರೀಲಂಕಾ ಪ್ರವಾಸಕ್ಕಾಗಿ ಆಯ್ಕೆ ಸಮಿತಿಯು 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದಾಗಲೇ ಸಾಯಿ ಸುದರ್ಶನ್ ಮತ್ತು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಲಭ್ಯತೆಯು ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತ್ತು. ವೇಗಿ ಜಸ್ಪ್ರೀತ್ ಬುಮ್ರಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ, ಅವರ ಸ್ಥಾನದಲ್ಲಿ ಆಕಿಬ್ ನಬಿಗೆ ಅವಕಾಶ ನೀಡಲಾಯಿತು. ಆದರೆ, ಎನ್‌ಸಿಎನಲ್ಲಿರುವ ಸಾಯಿ ಸುದರ್ಶನ್ ಅವರ ಫಿಟ್‌ನೆಸ್ ಕುರಿತು ಬಿಸಿಸಿಐ ವೈದ್ಯಕೀಯ ತಂಡದಿಂದ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಇದರಿಂದಾಗಿ ಅವರು ತಂಡದೊಂದಿಗೆ ಪ್ರಯಾಣಿಸದೆ ಭಾರತದಲ್ಲೇ ಉಳಿಯುವಂತಾಗಿದ್ದು, ಸರಣಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಬಗ್ಗೆ ದೊಡ್ಡ ಮಟ್ಟದ ಸಸ್ಪೆನ್ಸ್ ನಿರ್ಮಾಣವಾಗಿದೆ.

45
ಭವಿಷ್ಯದ ಭರವಸೆಗೆ!
Image Credit : X/BCCI

ಭವಿಷ್ಯದ ಭರವಸೆಗೆ!

ತಾಂತ್ರಿಕವಾಗಿ ಅತ್ಯಂತ ಶಿಸ್ತಿನ ಆಟಗಾರನೆನಿಸಿಕೊಂಡಿರುವ ಸಾಯಿ ಸುದರ್ಶನ್, ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಭವಿಷ್ಯದ ಪ್ರಮುಖ ಭರವಸೆಯಾಗಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 7 ಪಂದ್ಯಗಳನ್ನಾಡಿದ್ದು, 12 ಇನ್ನಿಂಗ್ಸ್‌ಗಳಲ್ಲಿ 31.91 ಸರಾಸರಿಯಲ್ಲಿ 3 ಅರ್ಧಶತಕಗಳು ಸೇರಿದಂತೆ 383 ರನ್ ಗಳಿಸಿದ್ದಾರೆ. ಇದರಲ್ಲಿ 87 ರನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ಪಡೆ ಹೀಗಿದೆ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್ ಮತ್ತು ಆಕಿಬ್ ನಬಿ.

55
ಪಡಿಕ್ಕಲ್‌ಗೆ ಸ್ಥಾನ!
Image Credit : stockPhoto

ಪಡಿಕ್ಕಲ್‌ಗೆ ಸ್ಥಾನ!

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ 19 ರವರೆಗೆ ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ 27 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ. ಕೊನೆ ಕ್ಷಣದಲ್ಲಿ ಸಾಯಿ ಸುದರ್ಶನ್ ಅಲಭ್ಯರಾದರೆ ಅವರ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಅಥವಾ ಧ್ರುವ ಜುರೆಲ್ ಅವರಿಗೆ ಪ್ಲೇಯಿಂಗ್-11 ನಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಕ್ರಿಕೆಟ್
ಕ್ರೀಡೆಗಳು
ಟೀಮ್ ಇಂಡಿಯಾ
ಶ್ರೀಲಂಕಾ
Latest Videos
Recommended Stories
Recommended image1
ಕೊಹ್ಲಿ-ಗಂಭೀರ್ ಐಪಿಎಲ್ ಕಿರಿಕ್! 13 ವರ್ಷಗಳ ನಂತರ ಶಾಕಿಂಗ್ ಸತ್ಯ ಬಿಚ್ಚಿಟ್ಟ ಅಂಪೈರ್!
Recommended image2
Ind Vs Pak: ಭಾರತ-ಪಾಕಿಸ್ತಾನ್ ಹೈ-ವೋಲ್ಟೇಜ್ ಕದನ ಫಿಕ್ಸ್! ಈ ದೇಶದಲ್ಲಿ ನಡೆಯಲಿದೆ ಬದ್ಧವೈರಿಗಳ ಕಾಳಗ!
Recommended image3
ರೋ-ಕೊ, ರಾಹುಲ್, ಭುವಿ ಸೇರಿ 2027ರ ವಿಶ್ವಕಪ್ ಗೆಲ್ಲುವ ತಂಡದ ಆಯ್ಕೆಗೆ ರವಿಶಾಸ್ತ್ರಿ ಚೀಫ್ ಸೆಲೆಕ್ಟರ್ ಆಗಬೇಕು-ಚೋಪ್ರ!
Related Stories
Recommended image1
Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
Recommended image2
Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved