Published : Nov 26, 2025, 07:13 AM ISTUpdated : Nov 26, 2025, 11:34 PM IST

Karnataka News Live: ಅಧಿಕಾರ ಹಂಚಿಕೆ ವಿವಾದ, ಮಠಾಧೀಶರ ನಡುವೆ ಭುಗಿಲೆದ್ದ ಅಸಮಾಧಾನ, ಡಿಕೆಶಿ ಪರ ನಿರ್ಮಲಾನಂದ ಶ್ರೀಗಳ ಹೇಳಿಕೆಗೆ ಕಾಗಿನೆಲೆ ಶ್ರೀಗಳು ಆಕ್ಷೇಪ

ಸಾರಾಂಶ

ಕಲಬುರಗಿ ಜಿಲ್ಲೆ ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಖನಿಜ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ (51) ಸೇರಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಹಾಂತೇಶ ಅವರ ಸೋದರರಾದ ಶಂಕರ ಬೀಳಗಿ (55) ಹಾಗೂ ಈರಣ್ಣ ಬೀಳಗಿ (53) ಕೂಡಾ ಸಾವನ್ನಪ್ಪಿದ್ದಾರೆ.

ಕಲಬುರಗಿಯಲ್ಲಿ ನಡೆಯುತ್ತಿದ್ದಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹಾಂತೇಶ ಬೀಳಗಿ ಅವರು ತಮ್ಮ ಸಹೋದ ರರು ಹಾಗೂ ಬಂಧುಗಳ ಜೊತೆಗೆ ಇನ್ನೋವಾ ಕಾರಿನಲ್ಲಿ ರಾಮದುರ್ಗದಿಂದ ಕಲಬುರಗಿಗೆ ಬರುತ್ತಿದ್ದರು. ಚಾಲಕ ಸೇರಿ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ರಾಮದುರ್ಗ ದಿಂದ ವಿಜಯಪುರ ಮಾರ್ಗವಾಗಿ ಕಲಬು ರಗಿಗೆ ತೆರಳುತ್ತಿದ್ದವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಇವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ದುರಂತಕ್ಕೀಡಾಗಿದೆ. ಏಕಾಏಕಿ ರಸ್ತೆಯಲ್ಲಿ ಕಾರಿಗೆ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ, ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

11:34 PM (IST) Nov 26

ಅಧಿಕಾರ ಹಂಚಿಕೆ ವಿವಾದ, ಮಠಾಧೀಶರ ನಡುವೆ ಭುಗಿಲೆದ್ದ ಅಸಮಾಧಾನ, ಡಿಕೆಶಿ ಪರ ನಿರ್ಮಲಾನಂದ ಶ್ರೀಗಳ ಹೇಳಿಕೆಗೆ ಕಾಗಿನೆಲೆ ಶ್ರೀಗಳು ಆಕ್ಷೇಪ

Karnataka CM power sharing dispute: ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿವಾದದಲ್ಲಿ ಡಿಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶ್ರೀಗಳು ಬ್ಯಾಟಿಂಗ್ ಮಾಡಿದ್ದಕ್ಕೆ ಕಾಗಿನೆಲೆ ಶಾಖಾ ಮಠದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Read Full Story

11:00 PM (IST) Nov 26

ಪೊಲೀಸ್ ಆಕಾಂಕ್ಷಿಗಳಿಗೆ ಬಂಪರ್ ಸುದ್ದಿ ಕೊಟ್ಟ ಗೃಹ ಸಚಿವ, 600 ಪಿಎಸ್‌ಐ, ಒಟ್ಟು 15000 ಪೊಲೀಸ್ ಹುದ್ದೆ ಭರ್ತಿ ಯಾವಾಗ?

ಬೆಳಗಾವಿ ಚಳಿಗಾಲದ ಅಧಿವೇಶನದ ಭದ್ರತೆಗೆ 6,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಜೊತೆಗೆ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 15,000 ಪೇದೆ ಮತ್ತು 600 ಪಿಎಸ್‌ಐ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
Read Full Story

08:46 PM (IST) Nov 26

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ - ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ!

ಬುಧವಾರ ಭಾರತೀಯ ಮಾರುಕಟ್ಟೆಗಳು ಭರ್ಜರಿ ಆರಂಭ ಕಂಡಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡರೆ, ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕಗಳು ಭಾರೀ ಏರಿಕೆ ದಾಖಲಿಸಿವೆ. ವಿದೇಶಿ ಹೂಡಿಕೆದಾರರ ವಿಶ್ವಾಸ ಮತ್ತು ದುರ್ಬಲ ಡಾಲರ್ ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿವೆ.
Read Full Story

08:18 PM (IST) Nov 26

ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ? ತಜ್ಞರ ಎಚ್ಚರಿಕೆ

ಚಳಿಗಾಲದಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕುಗಳು (UTI) ಹೆಚ್ಚಾಗುತ್ತವೆ. ನೀರು ಕಡಿಮೆ ಕುಡಿಯುವುದು, ಜೀವನಶೈಲಿ ಬದಲಾವಣೆ ಮತ್ತು ರೋಗನಿರೋಧಕ ಶಕ್ತಿ ಕುಗ್ಗುವುದು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಲೇಖನವು ಇದರ ಲಕ್ಷಣಗಳು, ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸುತ್ತದೆ.
Read Full Story

08:04 PM (IST) Nov 26

ಅಮ್ಮನ ಮಡಿಲು ಸೇರದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ; ಅಪಘಾತದ ಕಾರಣ ಕುಟುಂಬಸ್ಥರಿಂದ ಅಗ್ನಿಸ್ಪರ್ಶ!

ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಅಮ್ಮನ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಸಮುದಾಯದ ಹಿರಿಯರ ಸೂಚನೆಯಂತೆ ಕೊನೆಗೆ ಅಗ್ನಿಸ್ಪರ್ಶದ ಮೂಲಕ ರಾಮದುರ್ಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Read Full Story

07:56 PM (IST) Nov 26

ಜ್ವಾಲಾಮುಖಿಯ ಮೇಲೆ ವಿಮಾನಗಳು ಹಾರಾಡುವುದಿಲ್ಲ ಏಕೆ?

ಬರೋಬ್ಬರಿ 12 ಸಾವಿರ ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಇಥಿಯೋಪಿಯಾದಲ್ಲಿ 'ಹೇಲಿ ಗುಬ್ಬಿ' ಹೆಸರಿನ ಜ್ವಾಲಾಮುಖಿ ಸ್ಫೋಟಿಸಿದೆ. ಹೀಗಾಗಿ ದೆಹಲಿಯಿಂದ ಹೊರಡಬೇಕಿದ್ದ ಏಳು ಅಂತರರಾಷ್ಟ್ರೀಯ ವಿಮಾನಗಳ ರದ್ದುಗೊಳಿಸಬೇಕಾಯಿತು. ಹಾಗಾದರೆ ಜ್ವಾಲಾಮುಖಿ ಸ್ಫೋಟಕ್ಕೂ ವಿಮಾನ ಹಾರಾಟ ಸ್ಥಗಿತಕ್ಕೂ ಏನ್ ಸಂಬಂಧ.

Read Full Story

07:42 PM (IST) Nov 26

ಡಿಕೆಶಿ ಶಿಸ್ತಿನ ಸಿಪಾಯಿ, ಉಳಿದ ಅವಧಿಗೆ ಸಿಎಂ ಆಗಬೇಕು - ನಿರ್ಮಲಾನಂದ ಶ್ರೀಗಳಿಂದ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್!

Karnataka Congress power sharing row: ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story

07:21 PM (IST) Nov 26

Amruthadhaare - ಕೆಡಿ ಜೈದೇವ್​ಗೆ ಚಮಕ್​ ಕೊಟ್ಟ ಆಕಾಶ್​- ಗೌತಮ್​ ಪುತ್ರ ಎಂದ್ರೆ ಸುಮ್ನೇನಾ?

ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕುತ್ತಿರುವ ಜೈದೇವ್‌ಗೆ ಆಕೆಯ ಮಕ್ಕಳಾದ ಆಕಾಶ್ ಮತ್ತು ಮಿಂಚು ಮಾಲ್‌ನಲ್ಲಿ ಸಿಕ್ಕಿದ್ದಾರೆ. ಜೈದೇವ್ ಮಲ್ಲಿಯ ಫೋಟೋ ತೋರಿಸಿ ವಿಚಾರಿಸಿದಾಗ, ಬುದ್ಧಿವಂತ ಆಕಾಶ್ ಅವನಿಗೆ ತಿರುಗೇಟು ನೀಡಿ ಸುಸ್ತು ಮಾಡುತ್ತಾನೆ.
Read Full Story

07:06 PM (IST) Nov 26

ಕೊಪ್ಪಳದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಹೆರಿಗೆ ಕೇಸ್ - ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಕ್ಕಳ ಹಕ್ಕು ಆಯೋಗ!

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಸತಿ ನಿಲಯವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು,. ವಾರ್ಡನ್ ಅಮಾನತು ಆರೋಪಿ ಬಂಧನ

Read Full Story

06:36 PM (IST) Nov 26

ಬಿಗ್ ಬಾಸ್ ಮನೆಯೊಳಗೆ ಹಳ್ಳಿಕಾರ್ ಎತ್ತು; ಆಮೇಲೆ ₹10 ಲಕ್ಷ ಕೊಡೋದಾಗಿ ವರ್ತೂರ್ ಸಂತೋಷ್ ಷರತ್ತು!

ಬಿಗ್‌ಬಾಸ್ ಸೀಸನ್ 12ರ ರನ್ನರ್ ಅಪ್‌ಗೆ ₹10 ಲಕ್ಷ ಬಹುಮಾನ ನೀಡುವುದಾಗಿ ವರ್ತೂರ್ ಸಂತೋಷ್ ಘೋಷಿಸಿದ್ದಾರೆ. ಆದರೆ, ತಮ್ಮ ಹಳ್ಳಿಕಾರ್ ಎತ್ತುಗಳನ್ನು ಬಿಗ್ ಬಾಸ್ ಮನೆಯೊಳಗೆ ಪ್ರದರ್ಶಿಸಲು ಅವಕಾಶ ನೀಡಿದರೆ ಮಾತ್ರ ಈ ಬಹುಮಾನ ನೀಡುವುದಾಗಿ ಅವರು ಷರತ್ತು ವಿಧಿಸಿದ್ದಾರೆ.

Read Full Story

06:30 PM (IST) Nov 26

ಸಿಎಂ ಆಗಲು ತುದಿಗಾಲಲ್ಲಿ ನಿಂತ ಡಿಕೆಶಿಗೆ ವಾಟ್ಸಾಪ್‌ನಿಂದಲೇ ಮಹತ್ವದ ಸಂದೇಶ ಕಳಿಸಿದ ರಾಹುಲ್‌ ಗಾಂಧಿ?

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಚರ್ಚೆಗಳು ತೀವ್ರಗೊಂಡಿವೆ. 2.5 ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದದ ಊಹಾಪೋಹಗಳ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. 

Read Full Story

06:21 PM (IST) Nov 26

ಲವ್​ ಬ್ರೇಕಪ್​ - Bigg Bossನಲ್ಲಿ ಟ್ಯಾಲೆಂಟ್​ ಷೋನಲ್ಲಿ ವಿ*ಷ ಕುಡಿದು ಬೆಚ್ಚಿಬೀಳಿಸಿದ ಸ್ಪಂದನಾ ಸೋಮಣ್ಣ!

ಬಿಗ್​ಬಾಸ್​ ಮನೆಗೆ ಮಾಜಿ ಸ್ಪರ್ಧಿಗಳ ಆಗಮನದಿಂದ ಮನರಂಜನೆ ಹೆಚ್ಚಾಗಿದೆ. ಈ ನಡುವೆ, ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರು ವಿಷ ಕುಡಿಯುವ ಸ್ಕಿಟ್‌ನಲ್ಲಿ ಅದ್ಭುತವಾಗಿ ನಟಿಸಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದರು. ಮೈಸೂರಿನ ಇಂಜಿನಿಯರಿಂಗ್ ಪದವೀಧರೆಯಾದ ಸ್ಪಂದನಾ, 'ಕರಿಮಣಿ' ಸೀರಿಯಲ್ ಮೂಲಕ ಮನೆಮಾತಾದವರು.
Read Full Story

06:11 PM (IST) Nov 26

ಪಾಕಿಸ್ತಾನ ಜೈಲಿನಲ್ಲಿ ಇಮ್ರಾನ್ ಖಾನ್ ಹ*ತ್ಯೆ? ಬಲೂಚ್ ಸಚಿವಾಲಯ ಸ್ಫೋಟಕ ಹೇಳಿಕೆ, ಅಸಿಮ್ ಮುನೀರ್, ಐಎಸ್‌ಐ ಕೊಲೆ ಸಂಚು ಆರೋಪ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಡಿಯಾಲಾ ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿವೆ. ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಕುಟುಂಬಸ್ಥರಿಗೆ, ಪಕ್ಷದ ನಾಯಕರಿಗೆ ಭೇಟಿಗೆ ಅನುಮತಿ ನೀಡದಿರುವುದು ಅನುಮಾನಕ್ಕೆ ಕಾರಣ

Read Full Story

05:54 PM (IST) Nov 26

Bengaluru - ನನ್ನ ದೇಹಕ್ಕೆ ಪತಿ ಪಾದರಸ ಇಂಜೆಕ್ಟ್‌ ಮಾಡಿದ್ದಾರೆ ಎಂದು ಎಫ್‌ಐಆರ್‌ ದಾಖಲಿಸಿದ ಮರುದಿನವೇ ಪತ್ನಿ ಸಾವು!

ಬೆಂಗಳೂರಿನ ಅತ್ತಿಬೆಲೆಯಲ್ಲಿ, ಪತಿಯೇ ಪಾದರಸದ ಇಂಜೆಕ್ಷನ್ ನೀಡಿದ ಪರಿಣಾಮ 9 ತಿಂಗಳ ಕಾಲ ಚಿಕಿತ್ಸೆ ಪಡೆದ ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿಗೂ ಮುನ್ನ, ಪತಿ ಹಾಗೂ ಮಾವನಿಂದ ನಡೆದ ದೌರ್ಜನ್ಯ ಮತ್ತು ವಿಷಪ್ರಾಶನದ ಬಗ್ಗೆ ಅವರು ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.
Read Full Story

05:50 PM (IST) Nov 26

ಮುರುಘಾಶ್ರೀ ನಿರಪರಾಧಿ ತೀರ್ಪು - ಇದು 'ನಮ್ಮ ವ್ಯವಸ್ಥೆಯ ಸೋಲು' ಎಂದ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ!

ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣದ ನಿರಪರಾಧಿ ತೀರ್ಪು  'ನಮ್ಮ ವ್ಯವಸ್ಥೆಯ ಸೋಲು' ಎಂದು ಮೈಸೂರಿನ ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನ್ಲಿ ಹೇಳಿದ್ದಾರೆ. ತನಿಖಾ ಹಂತದಲ್ಲಿನ ಲೋಪಗಳೇ ಇದಕ್ಕೆ ಕಾರಣ ಎಂದಿದ್ದಾರೆ. ಮಕ್ಕಳ ಪರ ಕಾನೂನು ಹೋರಾಟ ಮುಂದುವರಿಸುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

Read Full Story

05:48 PM (IST) Nov 26

ಒಂದು ದಿನಕ್ಕಾಗಿ ವರ್ಷದ ಸಾವು-ಬದುಕಿನ ಹೋರಾಟ - ಪತಿಯ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಮಾತು

'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೋತ ಪತಿ ಅರುಣ್ ವೆಂಕಟೇಶ್ ಕುರಿತು ಭಾವುಕ ವಿಡಿಯೋ ಹಂಚಿಕೊಂಡಿದ್ದಾರೆ. ಸ್ಪರ್ಧಿಗಳು ಪಡುವ ಕಷ್ಟ ಮತ್ತು ಸೋಲಿನ ನಿರಾಸೆಯನ್ನು ವಿವರಿಸಿದ ಅವರು, ಸೋಲನ್ನು ನಗುತ್ತಾ ಸ್ವಾಗತಿಸಿದರೆ ಗೆಲುವು ನಮ್ಮದಾಗುತ್ತದೆ ಎಂದಿದ್ದಾರೆ.

Read Full Story

05:35 PM (IST) Nov 26

ಕೊಪ್ಪಳ - ಯಲಬುರ್ಗಾ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ವಿಧಿವಶ

Yelburga former MLA Death: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ (79) ಅವರು ಅನಾರೋಗ್ಯದಿಂದಾಗಿ ತುಮಕೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1999 ರಿಂದ 2004 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದ ಅವರ ಅಂತ್ಯಕ್ರಿಯೆಯು ಸ್ವಗ್ರಾಮ ಹುಣಿಸ್ಯಾಳದಲ್ಲಿ ನಡೆಯಲಿದೆ.

Read Full Story

05:10 PM (IST) Nov 26

ತುಂಡುಡುಗೆ ರಾಣಿ Niveditha Gowda ಬಳಿ ಈ ಪುಸ್ತಕ? 2ನೇ ಮದ್ವೆಗೆ ತಯಾರಿನಾ? ಏನಿದೆ ಈ ಬುಕ್​ನಲ್ಲಿ ನೋಡಿ

ತುಂಡುಡುಗೆಯಿಂದಲೇ ಖ್ಯಾತರಾದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಇದೀಗ 'ಮೆನ್ ಆರ್ ಫ್ರಮ್ ಮಾರ್ಸ್, ವಿಮೆನ್ ಆರ್ ಫ್ರಮ್ ವೀನಸ್' ಎಂಬ ಪುಸ್ತಕದೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಬಂಧಗಳ ಕುರಿತಾದ ಈ ಪುಸ್ತಕವನ್ನು ಅವರು ಯಾಕೆ ಹಿಡಿದಿದ್ದಾರೆ ಎಂಬುದು ಅಭಿಮಾನಿಗಳಲ್ಲಿ  ಕುತೂಹಲ ಕೆರಳಿಸಿದೆ.

Read Full Story

05:08 PM (IST) Nov 26

ಡಿಕೆಶಿ 5 ವರ್ಷ ಸಿಎಂ ಆಗಲಿ, ಆದರೆ ಮೊದಲು ಪರಮೇಶ್ವರ್ 'ಹಳೆ ಕೂಲಿ' ಕ್ಲಿಯರ್ ಆಗಲಿ - ರಾಜಣ್ಣ ಹೊಸ ಬಾಂಬ್!

ಮಾಜಿ ಸಚಿವ ಕೆಎನ್‌ ರಾಜಣ್ಣ, ಮುಖ್ಯಮಂತ್ರಿ ಹುದ್ದೆಯ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ. ಡಿಕೆ ಶಿವಕುಮಾರ್‌ಗಿಂತ ಮೊದಲು ಜಿ ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಬೇಕು, ಅವರ 'ಹಳೇ ಕೂಲಿ' ಮೊದಲು ಕ್ಲಿಯರ್ ಆಗಲಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

Read Full Story

04:17 PM (IST) Nov 26

ತಾಯಿಗಾಗಿಯೇ ಐಎಎಸ್ ಅಧಿಕಾರಿಯಾದ ಮಗ - ತಾಯಿ ಸಮಾಧಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ!

ಕಾರು ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಜೀವನವು ನೋವಿನಿಂದ ಪ್ರೇರಿತವಾಗಿತ್ತು. ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ತಾಯಿಯ ಪಿಂಚಣಿ ನೋವಿನಿಂದ ಪ್ರೇರಿತರಾಗಿ 'ಪಿಂಚಣಿ ಅದಾಲತ್' ಜಾರಿಗೆ ತಂದಿದ್ದರು. ರಾಮದುರ್ಗದಲ್ಲಿ ಅವರ ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

Read Full Story

04:06 PM (IST) Nov 26

ಮದುಮಗಳ ಲುಕ್​ನಲ್ಲಿ ಕಂಗೊಳಿಸಿದ Bhargavi LLB - ನಟಿ ರಾಧಾ ಭಗವತಿ ಕ್ಯೂಟ್​ ಫೋಟೋಗಳು ಇಲ್ಲಿವೆ

‘ಅಮೃತಧಾರೆ’ಯ ಮಲ್ಲಿ ಹಾಗೂ ‘ಭಾರ್ಗವಿ ಎಲ್ಎಲ್​ಬಿ’ಯ ಭಾರ್ಗವಿಯಾಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಿರುತೆರೆ ಮಾತ್ರವಲ್ಲದೆ ಬೆಳ್ಳಿಪರದೆಗೂ ಕಾಲಿಟ್ಟಿದ್ದಾರೆ. ನಟನೆ, ಮಾಡೆಲಿಂಗ್ ಜೊತೆಗೆ ಹಿನ್ನೆಲೆ ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಕಲಾವಿದರ ಕುಟುಂಬದಿಂದ ಬಂದವರು

Read Full Story

03:19 PM (IST) Nov 26

1940 Women Gym Video - ವ್ಯಾಯಾಮವೂ ಬೇಡ, ಡಯೆಟ್‌ ಬೇಡ; ಆ ಮಶಿನ್ ಮೇಲೆ ಕೂತು, ಮಲಗಿ ಸಣ್ಣ ಆಗ್ತಿದ್ದ ಮಹಿಳೆಯರು!

1940 Women Gym Video: ಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ಅನೇಕರು ಜಿಮ್‌ ಮೊರೆ ಹೋಗೊದುಂಟು. ಸಾಮಾನ್ಯ ಜನರು ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಾರೆ. ಆದರೆ 1940 ರಲ್ಲಿ ಜಿಮ್‌ ಇರಲಿಲ್ಲ. "ಸ್ಲೆಂಡರೈಸಿಂಗ್ ಸಲೂನ್‌ಗಳು" (Slenderizing Salons) ಇದ್ದವು. 

Read Full Story

03:15 PM (IST) Nov 26

ಸಿಎಂ ರೇಸಲ್ಲಿ ಹೊಸ ಟ್ವಿಸ್ಟ್; ಡಿಕೆಶಿ-ಜಾರಕಿಹೊಳಿ ನಡುವೆ ನಡೆದಿದ್ದ ರಹಸ್ಯ ಮಾತುಕತೆಯೇನು?

ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಹಸ್ಯವಾಗಿ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಆದರೆ, ತಾವು ಸಿದ್ದರಾಮಯ್ಯನವರನ್ನು ಬಿಟ್ಟು ಬರುವುದಿಲ್ಲ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. 

Read Full Story

02:51 PM (IST) Nov 26

ಸ್ಮೃತಿ ಮಂದಾನ, ಸಮಂತಾ ಸಂಸಾರಕ್ಕೆ ಕಣ್ಣು ಬಿದ್ದು ಹಾಳಾಗಿದ್ದು ಹೇಗೆ? ದೃಷ್ಟಿ ಆಗುವ ಪ್ರಕ್ರಿಯೆ ಇದು!

Smriti Mandhana Palash Muchhal Wedding: ಭಾರತೀಯ ಮಹಿಳಾ ಕ್ರಿಕೆಟರ್‌ ಸ್ಮೃತಿ ಮಂದಾನ, ಸಂಗೀತ ನಿರ್ದೇಶಕ ಪಲಾಶ್‌ ಮುಚ್ಚಲ್‌ ಜೊತೆ ಮದುವೆ ಆಗಲು ರೆಡಿಯಾಗಿದ್ದರು. ಮೈದಾನದಲ್ಲಿ ಪ್ರೇಮ ನಿವೇದನೆ ಆಗಿತ್ತು, ಹಳದಿ, ಸಂಗೀತ, ಮೆಹೆಂದಿ ನಡೆದರೂ ಕೂಡ ಮದುವೆ ಮಾತ್ರ ಆಗಲಿಲ್ಲ. ಯಾರ ಕಣ್ಣು ಬಿತ್ತೋ ಏನೋ

Read Full Story

02:30 PM (IST) Nov 26

BBK12 - ಗಿಲ್ಲಿಯನ್ನ ಟಾರ್ಗೆಟ್ ಮಾಡಬೇಕು ಅಂತಾನೇ ಬಿಗ್ ಬಾಸ್ ಮನೆಗೆ ಬಂದ್ರಾ ಮಾಜಿ ಸ್ಪರ್ಧಿಗಳು!

ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿಗಾಗಿ ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ, ಹಾಲಿ ಸ್ಪರ್ಧಿ ಗಿಲ್ಲಿ ನಟನ ಮಾತುಗಳಿಂದ ವಿವಾದ ಸೃಷ್ಟಿಯಾಗಿದ್ದು, ಅತಿಥಿಗಳು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

01:14 PM (IST) Nov 26

25 ರೂಪಾಯಿ ಪಿಂಚಣಿಗೆ 100 ರೂ. ಲಂಚ ಕೊಟ್ಟಿದ್ರು ಮಹಾಂತೇಶ್ ಬೀಳಗಿಯವರ ತಾಯಿ

ಕಾರ್ ಅಪಘಾತದಲ್ಲಿ ನಿಧನರಾದ ಜನಪ್ರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ತಮ್ಮ ತಾಯಿಗೆ ವಿಧವಾ ಪಿಂಚಣಿಗಾಗಿ ಆದ ಅನ್ಯಾಯದಿಂದ ಪ್ರೇರಿತರಾಗಿ ಅಧಿಕಾರಿಯಾದವರು. ಜಿಲ್ಲಾಧಿಕಾರಿಯಾಗಿ, ಅವರು 'ಪಿಂಚಣಿ ಅದಾಲತ್' ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರ ಮನೆ ಬಾಗಿಲಿಗೆ ಸೇವೆ ತಲುಪಿಸಿದ್ದರು.
Read Full Story

01:08 PM (IST) Nov 26

Mahantesh Bilagi Death - ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್

Mahantesh Bilagi Death: ಕಲಬುರಗಿಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಅಪಘಾತವಾಗಿದ್ದು, ಕಾರ್‌ನಲ್ಲಿದ್ದ ನಾಲ್ವರು ನಿಧನರಾಗಿದ್ದಾರೆ. ಅವರಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕೂಡ ಒಬ್ರು. ಇವರು ದಕ್ಷ ಅಧಿಕಾರಿಯಾಗಿದ್ದರು.

Read Full Story

01:04 PM (IST) Nov 26

ದೇವಾಲಯಕ್ಕೆ ಅಪಪ್ರಚಾರ ಹಿನ್ನೆಲೆ - ಈ ದೇವಸ್ಥಾನದಲ್ಲಿ ಮದುವೆ ನಿಷೇಧ- ಸರ್ಕಾರಕ್ಕೆ ಹೀಗೊಂದು ಪತ್ರ!

ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳಿಂದಾಗಿ ಬೆಂಗಳೂರಿನ ಹಲಸೂರು ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ. ದಂಪತಿ ನ್ಯಾಯಾಲಯಕ್ಕೆ ಹೋದಾಗ, ಮದುವೆ ಮಾಡಿಸಿದ ಅರ್ಚಕರನ್ನು ಸಾಕ್ಷಿಯಾಗಿ ಕರೆಯುತ್ತಿರುವುದರಿಂದ, ಅವರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Read Full Story

12:57 PM (IST) Nov 26

ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ರಜನಿಕಾಂತ್? ಮಲ್ಟಿಸ್ಟಾರರ್ ಮೂವಿಯನ್ನ ಇವರೇನಾ ಡೈರೆಕ್ಟ್ ಮಾಡೋದು!

ಮೆಗಾಸ್ಟಾರ್ ಚಿರಂಜೀವಿ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕೆಂದು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಈ ನಡುವೆ ಈ ಬ್ಲಾಕ್‌ಬಸ್ಟರ್ ಕಾಂಬೋದಲ್ಲಿ ಸಿನಿಮಾ ಬರಲಿದೆ ಎಂಬ ಸುದ್ದಿ ವೈರಲ್ ಆಗಿದೆ. ಇದರಲ್ಲಿ ನಿಜವೆಷ್ಟು?

Read Full Story

12:55 PM (IST) Nov 26

ಅವಿಶ್ವಾಸ ಮಂಡನೆ ಬಗ್ಗೆ ಬಸವರಾಜ ಹೊರಟ್ಟಿ ಅಸಮಾಧಾನ; ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಆದ್ಯತೆ!

ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆಗಿಂತ ಚರ್ಚೆಗೆ ಆದ್ಯತೆ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಶಾಸಕರಿಗೆ ಕರೆ ನೀಡಿದ್ದಾರೆ. ತಮ್ಮ ವಿರುದ್ಧದ ಅವಿಶ್ವಾಸ ಮಂಡನೆ ಪ್ರಸ್ತಾಪದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ತಮ್ಮ ಕಾರ್ಯವೈಖರಿ ಪ್ರಾಮಾಣಿಕವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

12:32 PM (IST) Nov 26

ರಾಜಮೌಳಿ-ಮಹೇಶ್ ಬಾಬು ‘ವಾರಣಾಸಿ’ ಸಿನಿಮಾದಲ್ಲಿ ದರ್ಶನ್? ಉತ್ತರಾಧಿಕಾರಿ ಬಂದಾಯ್ತು - ಏನಿದು ಹೊಸ ಸುದ್ದಿ!

ವಾರಣಾಸಿಯಲ್ಲಿ ರುದ್ರನಾಗಿ ಮಹೇಶ್ ಬಾಬು ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ರಾಜಮೌಳಿ ಒಂದು ಎಮೋಷನಲ್ ಫ್ಲ್ಯಾಶ್‌ಬ್ಯಾಕ್ ತೋರಿಸಲಿದ್ದಾರಂತೆ. ಅದರಲ್ಲಿ ಮಹೇಶ್ ಬಾಲ್ಯದ ರುದ್ರನ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿದ್ದಾರೆ ಗೊತ್ತಾ?

Read Full Story

12:31 PM (IST) Nov 26

ನಕಲಿ ನಂದಿನಿ ತುಪ್ಪ ಹಗರಣದ ಕಿಂಗ್‌ಪಿನ್ ಶಿವಕುಮಾರ್, ರಮ್ಯಾ ಬಂಧನ; ತಮಿಳುನಾಡು ಫ್ಯಾಕ್ಟರಿ ಪತ್ತೆ!

ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ನಂದಿನಿ ತುಪ್ಪ ತಯಾರಿಕೆ ಹಗರಣದ ಪ್ರಮುಖ ಸೂತ್ರಧಾರರಾದ ಮೈಸೂರು ಮೂಲದ ದಂಪತಿಯನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದ ಈ ದಂಪತಿ, ರಾಜ್ಯಾದ್ಯಂತ ನಕಲಿ ಉತ್ಪನ್ನಗಳನ್ನು ವಿತರಿಸುತ್ತಿದ್ದರು.

Read Full Story

12:31 PM (IST) Nov 26

ಗಿಲ್ಲಿಯಂತ ಕ್ರಿಮಿಯನ್ನು ಯಾರ್‌ ಮದುವೆ ಆಗ್ತಾರೆ, ಫಸ್ಟ್‌ನೈಟ್‌ನಲ್ಲೇ ವಿ*ಷ ಹಾಕಿ ಸಾ*ಯಿಸ್ತೀನಿ ಎಂದಿದ್ದ ನಟಿ!

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಒನ್‌ ಮ್ಯಾನ್‌ ಶೋ ಎನ್ನುವಂತೆ ಮಾತಿನಲ್ಲಿಯೇ ಎಲ್ಲರ ಮನಸ್ಸು ಗೆದ್ದಿರುವ ಗಿಲ್ಲಿ ನಟ ಅವರಿಗೆ ಮದುವೆ ಆಗೋದು ಕಷ್ಟ ಇದೆಯಂತೆ, ಹೀಗೆಂದು ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು ಮಾತನಾಡಿದ್ದಾರೆ.

Read Full Story

12:30 PM (IST) Nov 26

ಮುಂದಿನ ವಾರ Bigg Bossನಿಂದ ಹೊರಕ್ಕೆ ಬರುವವರು ಯಾರು? ಈಗ್ಲೇ ಹೆಸರು ಹೇಳಿದ Risha Gowda

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಪ್ರವೇಶಿಸಿದ್ದ ರಿಷಾ ಗೌಡ ಇದೀಗ ಹೊರಬಂದಿದ್ದಾರೆ. ಮನೆಯಿಂದ ಹೊರಬಂದ ನಂತರ, ಮುಂದಿನ ವಾರ ಸ್ಪಂದನಾ ಎಲಿಮಿನೇಟ್ ಆಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದು, ತಮ್ಮ ವಿಭಿನ್ನ ಎಲಿಮಿನೇಷನ್​ ಬಗ್ಗೆಯೂ ಮಾತನಾಡಿದ್ದಾರೆ.
Read Full Story

12:21 PM (IST) Nov 26

ಮಹಾಂತೇಶ್ ಬೀಳಗಿ ಸಾವು; ಚಾಲಕ ಆಂಥೋನಿ ರಾಜ ವಿರುದ್ಧ FIR ದಾಖಲು

ಕಲಬುರಗಿಯಲ್ಲಿ ನಡೆದ ಭೀಕರ ಕಾರ್ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನರಾಗಿದ್ದಾರೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Read Full Story

11:59 AM (IST) Nov 26

ಪುಷ್ಪ ನಟಿಗೆ ದೊಡ್ಡ ಹೊಡೆತ ಕೊಟ್ಟ ಆ ಒಂದು ನಿರ್ಧಾರ.. ಟಾಪ್ ನಿರೂಪಕಿ ಈಗ ಒಂಟಿಯಾದರಾ?

ಒಂದು ಕಾಲದಲ್ಲಿ ಸ್ಟಾರ್ ನಿರೂಪಕಿಯಾಗಿದ್ದ ಅನಸೂಯ ಭಾರಧ್ವಜ್‌ ಈಗ ಸಿನಿಮಾ, ಶೋಗಳಿಲ್ಲದೆ ಖಾಲಿ ಇದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಒಂದೇ ಒಂದು ನಿರ್ಧಾರವೇ ಇದಕ್ಕೆ ಕಾರಣ ಎನ್ನಬಹುದು.

Read Full Story

11:47 AM (IST) Nov 26

ಇದೇನಿದು ಟ್ವಿಸ್ಟ್​? Amruthadhaare ಗೌತಮ್​-ಭೂಮಿಕಾ ಒಂದಾಗಿಬಿಟ್ರಾ? ಜಾಲಿಮೂಡ್​ನಲ್ಲಿ ಕ್ಯೂಟ್​ ಜೋಡಿ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ದೂರವಿದ್ದರೂ, ನಟರಾದ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರ ರೀಲ್ಸ್ ಒಂದು ಕುತೂಹಲ ಮೂಡಿಸಿದೆ. ಈ ಲೇಖನವು ಆ ರೀಲ್ಸ್‌ನ ಹಿಂದಿನ ಸತ್ಯವನ್ನು ಬಹಿರಂಗಪಡಿಸುವುದೆ.

Read Full Story

11:40 AM (IST) Nov 26

BBK 12 - ಸುದೀಪ್ ಲೆಕ್ಕಾಚಾರವೇ ತಪ್ಪು - ಕಾವ್ಯಾ ಮುಂದೆ ಗಿಲ್ಲಿ ನಟನ ಹೊಸ ಸತ್ಯ ಹೇಳಿದ ಧನುಷ್!

ಬಿಗ್‌ಬಾಸ್ ಮನೆಯಲ್ಲಿ, ಗಿಲ್ಲಿಯಿಂದ ರಘು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದೀಪ್ ಅವರ ಹೇಳಿಕೆಯನ್ನು ಧನುಷ್ ಪ್ರಶ್ನಿಸಿದ್ದಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ಅವರ ಮೌನದಿಂದಾಗಿ ಗಿಲ್ಲಿಗೆ ಕಂಟೆಂಟ್ ಸಿಗುತ್ತಿದ್ದು, ಅವರಿಂದಲೇ ಗಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಧನುಷ್ ಅಭಿಪ್ರಾಯಪಟ್ಟಿದ್ದಾರೆ.
Read Full Story

11:34 AM (IST) Nov 26

ಬಾಲಕಿಯರ ಹಾಸ್ಟೆಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 16 ವರ್ಷದ ವಿದ್ಯಾರ್ಥಿನಿ!

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಅಮಾನವೀಯ ಘಟನೆಯು ಸಿಬ್ಬಂದಿಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದು, ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ.

Read Full Story

11:20 AM (IST) Nov 26

ಎಚ್‌ಡಿಎಫ್‌ಸಿ ದರೋಡೆ ಕೇಸ್ - 9 ಆರೋಪಿಗಳ ಬಂಧನ, 7.1 ಕೋಟಿ ವಶ - ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಆರೋಪಿಗಳನ್ನು ಬಂಧಿಸಿ 7.1 ಕೋಟಿ (ಶೇ.98.6 ರಷ್ಟು ) ನಗದನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

More Trending News