MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Kalaburagi
  • Mahantesh Bilagi Death: ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್

Mahantesh Bilagi Death: ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್

Mahantesh Bilagi Death: ಕಲಬುರಗಿಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಅಪಘಾತವಾಗಿದ್ದು, ಕಾರ್‌ನಲ್ಲಿದ್ದ ನಾಲ್ವರು ನಿಧನರಾಗಿದ್ದಾರೆ. ಅವರಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕೂಡ ಒಬ್ರು. ಇವರು ದಕ್ಷ ಅಧಿಕಾರಿಯಾಗಿದ್ದರು.

1 Min read
Padmashree Bhat
Published : Nov 26 2025, 01:08 PM IST
Share this Photo Gallery
  • FB
  • TW
  • Linkdin
  • Whatsapp
15
ಕಾರ್‌ ಅಪಘಾತ ಹೇಗಾಯ್ತು?
Image Credit : Asianet News

ಕಾರ್‌ ಅಪಘಾತ ಹೇಗಾಯ್ತು?

ಡ್ರೈವರ್‌ ಅತಿವೇಗವಾಗಿ ಕಾರ್‌ ಓಡಿಸುತ್ತಿದ್ದರು. ಬೈಕ್‌ ಬಂದಿದ್ದು, ಅವರನ್ನು ತಪ್ಪಿಸಲು ಹೋಗಿ ಕಾರ್‌ ಮೂರು ನಾಲ್ಕು ಬಾರಿ ಪಲ್ಟಿ ಆಗಿದೆ. ಆಸ್ಪತ್ರೆಯಲ್ಲಿ ಮಹಾಂತೇಶ್‌ ಅವರು ನಿಧನರಾಗಿದ್ದಾರೆ. ಒಟ್ಟೂ ನಾಲ್ವರು ಈ ಅಪಘಾತದಲ್ಲಿ ನಿಧನರಾಗಿದ್ದಾರೆ.

ಬೀಳಗಿ ಕುಟುಂಬದಲ್ಲಿಯೇ ಮೂವರು ಇಹಲೋಕ ತ್ಯಜಿಸಿದ್ದು, ಸಾರ್ವಜನಿಕರು, ಐಎಎಸ್, ಐಪಿಎಸ್‌ ಅಧಿಕಾರಿಗಳು ಇವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ,

25
ಡ್ರೈವರ್‌ ವಿರುದ್ಧ ದೂರು ದಾಖಲು
Image Credit : Asianet News

ಡ್ರೈವರ್‌ ವಿರುದ್ಧ ದೂರು ದಾಖಲು

ಕಾರ್ ಚಾಲಕ ಆಂಥೋನಿ ರಾಜ್ ಅವರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ವಿರುದ್ಧ ದೂರು ದಾಖಲಾಗಿದೆ. ಬಸವರಾಜ್ ಕಮರಟಗಿ ಎನ್ನುವವರು ಜೇವರ್ಗಿ ಠಾಣೆಯಲ್ಲಿ ಡ್ರೈವರ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ಒಂದು ಮದುವೆ ಕಾರ್ಯಕ್ರಮಕ್ಕಾಗಿ ಮಹಾಂತೇಶ್‌ ಅವರು ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಂಜೆ 5.30ಕ್ಕೆ ಅಪಘಾತ ಆಗಿದೆ. ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿದೆ. 

Related Articles

Related image1
Now Playing
ಕರುನಾಡಿನಲ್ಲಿ ಗೃಹಜ್ಯೋತಿ ಯೋಜನೆ ಜಾರಿ: ಈ ಬಗ್ಗೆ ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗಿ ಹೇಳಿದ್ದೇನು ?
Related image2
Now Playing
ಸರಳ ವಾಸ್ತು ಗುರೂಜಿ ಭೀಕರ ಹತ್ಯೆ: ಬೆಚ್ಚಿಬೀಳಿಸುತ್ತೆ ಮಹಾಂತೇಶ್‌ ಶಿರೂರು ಹಿಸ್ಟ್ರಿ!
35
ಇನ್ನೂ ಯಾರು ಯಾರು ನಿಧನರಾದರು?
Image Credit : Asianet News

ಇನ್ನೂ ಯಾರು ಯಾರು ನಿಧನರಾದರು?

ಮಹಾಂತೇಶ್‌ ಬೀಳಗಿ ಅವರ ಚಿಕ್ಕಪ್ಪನ ಮಕ್ಕಳಾದ ಈರಣ್ಣ ಬೀಳಗಿ, ಶಂಕರ ಬೀಳಗಿ, ಸ್ನೇಹಿತ ಈರಣ್ಣ ಸರಸಂಗಿ ಅವರು ನಿಧನರಾಗಿದ್ದಾರೆ.

ವೀರಶೈವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಹೇಳಲಾಗಿದೆ. ಅಪಘಾತ ಆಗಿರೋದಿಕ್ಕೆ ಅಗ್ನಿ ಸ್ಪರ್ಶವನ್ನು ಮಾಡಲಾಗುವುದಂತೆ. ಅಂದಹಾಗೆ ಅಗ್ನಿಸ್ಪರ್ಶ ಆಗಬೇಕು ಎಂದು ಮಹಾಂತೇಶ್‌ ಅವರು ಬಯಸಿದ್ದರಂತೆ.

45
ನಾಮಕರಣ ಮಾಡಿಲ್ಲ
Image Credit : Asianet News

ನಾಮಕರಣ ಮಾಡಿಲ್ಲ

ಶಂಕರ್‌ ಅವರಿಗೆ ಒಂದು ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದರು. ಆ ಮಕ್ಕಳಿಗೆ ನಾಮಕರಣ ಮಾಡಿಲ್ಲ. ಮಕ್ಕಳು ಹುಟ್ಟಿದರು ಎಂಬ ಖುಷಿಯಲ್ಲಿ ಇಡೀ ಊರಿಗೆ 150kg ಪೇಡೆ ಹಚ್ಚಿದ್ದರು. ಆದರೆ ಈ ಖುಷಿ ಮಧ್ಯೆ ಈಗ ಸಾವಿನ ವಿಷಯ ಬರಸಿಡಿಲಿನ ಥರ ಬಂದು ಬಡಿದಿದೆ. 

55
ಸಂಬಂಧಿಕರ ಆಕ್ರಂದನ
Image Credit : our own

ಸಂಬಂಧಿಕರ ಆಕ್ರಂದನ

ಮಹಾಂತೇಶ್‌ ಅವರು ಹಣೆಗೆ ವಿಭೂತಿ ಹಚ್ಚಿಯೇ ಮನೆಯಿಂದ ಹೊರಗಡೆ ಬರುತ್ತಿದ್ದರು. ಈ ರೀತಿ ಕಾಣಸಿಗೋದು ಅಪರೂಪ.

ಬಡತನದಲ್ಲಿ ಬೆಳೆದ ಮಹಾಂತೇಶ್‌ ಅವರು ಡಿಪ್ರೆಶನ್‌ಗೆ ಜಾರಿ, ಅದನ್ನು ಗೆದ್ದು ಕೆಎಎಸ್‌ ಆಫೀಸರ್‌ ಆಗಿದ್ದರು, ಆಮೇಲೆ ಬಡ್ತಿ ಪಡೆದರು.

ಸಾಕಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಇಂದು ಕೂಡ ಜನರು ಅವರ ಸಹಾಯವನ್ನು ಸ್ಮರಿಸುತ್ತಾರೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಐಎಎಸ್
ಕಲಬುರಗಿ
ಕಾರುಗಳು
ಅಪಘಾತ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಮಹಾಂತೇಶ್ ಬೀಳಗಿ ಸಾವು; ಚಾಲಕ ಆಂಥೋನಿ ರಾಜ ವಿರುದ್ಧ FIR ದಾಖಲು
Recommended image2
ಶಾಸಕರ ಕುದುರೆ ವ್ಯಾಪಾರ ಆರಂಭಿಸಿದ್ದೇ ಬಿಜೆಪಿ ಕೊಡುಗೆ: ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು
Recommended image3
ಭೀಕರ ಅಪಘಾತ, ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು
Related Stories
Recommended image1
Now Playing
ಕರುನಾಡಿನಲ್ಲಿ ಗೃಹಜ್ಯೋತಿ ಯೋಜನೆ ಜಾರಿ: ಈ ಬಗ್ಗೆ ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗಿ ಹೇಳಿದ್ದೇನು ?
Recommended image2
Now Playing
ಸರಳ ವಾಸ್ತು ಗುರೂಜಿ ಭೀಕರ ಹತ್ಯೆ: ಬೆಚ್ಚಿಬೀಳಿಸುತ್ತೆ ಮಹಾಂತೇಶ್‌ ಶಿರೂರು ಹಿಸ್ಟ್ರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved