ಬೆಂಗಳೂರು: ರಾಜ್ಯದಲ್ಲಿನ ಮಳೆ ಕೊರತೆಯನ್ನು ಸಾಧ್ಯವಾದಷ್ಟು ನೀಗಿಸುವ ಪ್ರಯತ್ನದ ಭಾಗವಾಗಿ ಮುಂದಿನ ಎರಡು- ಮೂರು ದಿನಗಳಲ್ಲಿ ನಾಲ್ಕೂ ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮೋಡ ಬಿತ್ತನೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆ ಸಂಬಂಧ ಮೇಲ್ವಿಚಾರಣಾ ಸಮಿತಿ, ತಾಂತ್ರಿಕ ಸಮಿತಿ ಹಾಗೂ ಕಾರ್ಯಾಚರಣೆ ಮತ್ತು ಮೌಲ್ಯಮಾಪನ ಸಮಿತಿ ಎಂಬ ಮೂರು ಸಮಿತಿಗಳನ್ನು ರಚಿಸಲಾಗಿದೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣಾ ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ. ಅಂದಾಜು 27 ಕೋಟಿ ರು. ವೆಚ್ಚದಲ್ಲಿ 60 ದಿನಗಳ ಕಾಲ (ಸುಮಾರು 200 ಗಂಟೆ) ಮೋಡ ಬಿತ್ತನೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ಇರಲಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿ ಜಲ ಸಂಪನ್ಮೂಲ ಇಲಾಖೆಯ ಮೂಲಕವೇ ಮೋಡ ಬಿತ್ತನೆ ಮಾಡುತ್ತೇವೆ.
10:25 PM (IST) Aug 26
ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಕೇಂದ್ರದ ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪಕ್ಷಾತೀತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
08:18 PM (IST) Aug 26
Kannada Seriel Actor Karthik Jayaram ‘ಜೆಕೆ’ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, ‘ಅಶ್ವಿನಿ ನಕ್ಷತ್ರ’ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.
08:15 PM (IST) Aug 26
08:11 PM (IST) Aug 26
ಕರ್ನಾಟಕದಲ್ಲಿ ಬರಗಾಲದಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಇದರ ನಡುವೆ, ರಾಮನಗರದ ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದಲ್ಲಿ ಹೀರೇಕಾಯಿಯಂತೆ ಉದ್ದವಾದ ವಿಚಿತ್ರ ತೆಂಗಿನಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.
07:48 PM (IST) Aug 26
07:35 PM (IST) Aug 26
Snakes ತಮ್ಮ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಭಾವಿಸಿದಾಗ ಸಾಮಾನ್ಯವಾಗಿ ಆತ್ಮರಕ್ಷಣೆಗಾಗಿ ದಾಳಿ ಮಾಡುತ್ತವೆ. ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ, ತಮ್ಮನ್ನು ಕೊಂದ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತವೆ ಎಂಬ ನಂಬಿಕೆಗಳು ಜನರಲ್ಲಿ ಇದ್ದರೂ, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ.
07:25 PM (IST) Aug 26
ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಆತ್ಮ*ತ್ಯೆಗೂ ಮುನ್ನ ತನ್ನ ವೈಫಲ್ಯದ ಬಗ್ಗೆ ತಾಯಿಯ ಮುಂದೆ ಅತ್ತು ನೋವು ತೋಡಿಕೊಂಡಿದ್ದ ಆಘಾತಕಾರಿ ವಿಷಯ ಹೊರಬಂದಿದೆ. ಕಾಲೇಜು ಆಡಳಿತ ಮಂಡಳಿಯು ಹಾಸ್ಟೆಲ್ ನೀಡದೆ ಮತ್ತು ವೈದ್ಯಕೀಯ ವರದಿಗಳನ್ನು ಒಪ್ಪದೆ ಆತನಿಗೆ ಮಾನಸಿಕ ಕಿರುಕುಳ ನೀಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
07:05 PM (IST) Aug 26
06:46 PM (IST) Aug 26
ನಂಬಿಕಸ್ಥ ಮನೆಯಾಳೇ ಕಳ್ಳತನಕ್ಕೆ ಇಳಿದ ಕೇಸ್ ಇದಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಕಿಡಿಗೇಡಿಗಳ ಗ್ಯಾಂಗ್ ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿತ್ತು. ಇದೀಗ ಆ ಗ್ಯಾಂಗ್ ಅರೆಸ್ಟ್ ಆಗಿದೆ.
06:12 PM (IST) Aug 26
'ಕೆಜಿಎಫ್' ರಾಕಿ ಬಾಯ್ ಮತ್ತು 'ಟಾಕ್ಸಿಕ್' ಸಿನಿಮಾದಲ್ಲಿ ನಟ ಯಶ್ ಅವರ ಟ್ರೆಂಡ್ ಸೆಟ್ಟರ್ ಕೇಶವಿನ್ಯಾಸದ ಹಿಂದಿರುವ ಮಾಂತ್ರಿಕ ಕೈಗಳು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರದ್ದು. ಯಶ್ ಅವರ ಪಾತ್ರಗಳಿಗೆ ಐಕಾನಿಕ್ ನೋಟ ನೀಡುವುದರ ಜೊತೆಗೆ, ಅಲೆಕ್ಸ್ ತಮ್ಮ ಸಲೂನ್ ಉದ್ಯಮದ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಯಶಸ್ವಿ ಉದ್ಯಮಿಯೂ ಹೌದು.
05:53 PM (IST) Aug 26
Toxic Actress Rukmini Vasanth ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ರುಕ್ಮಿಣಿ ವಸಂತ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳಲ್ಲಿನ ಕುತೂಹಲಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
05:14 PM (IST) Aug 26
05:03 PM (IST) Aug 26
Kannada Comedy Actor Chikkanna ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳ 29 ಮತ್ತು 30ರಂದು ಮದುವೆ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ. ಚಿಕ್ಕಣ್ಣ-ಪಾವನಾ ಮದುವೆಯ ಸಂಪೂರ್ಣ ವಿವರಗಳು ಮತ್ತು ನಟ ಹೇಳಿದ ಕುತೂಹಲಕಾರಿ ಮಾತುಗಳು ಇಲ್ಲಿವೆ.
04:44 PM (IST) Aug 26
ಕುಕು ಕೊಹ್ಲಿ ಕೇವಲ ನಿರ್ದೇಶಕರಾಗಿರಲಿಲ್ಲ, ಅವರು ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾಗಿದ್ದರು. 'ಕೊಹ್ರಾಮ್', 'ಜುಲ್ಮಿ', 'ಯೇ ದಿಲ್ ಆಶಿಕಾನಾ' ನಂತಹ ಚಿತ್ರಗಳು ಇಂದಿಗೂ ಟಿವಿಯಲ್ಲಿ ಪ್ರಸಾರವಾದರೆ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ. ಅಜಯ್ ದೇವಗನ್ ಎಂಬ ಸೂಪರ್ ಸ್ಟಾರ್ ಕೊಟ್ಟ ಈ 'ಗುರು'ವಿನ ನೆನಪು ಚಿತ್ರರಂಗದಲ್ಲಿ ಸದಾ ಅಮರ.
04:39 PM (IST) Aug 26
ಹಾಸ್ಯನಟ ಚಿಕ್ಕಣ್ಣ, ಉದ್ಯಮಿ ಪಾವನಾ ಗೌಡ ಅವರನ್ನು ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿರುವುದರಿಂದ ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.
04:33 PM (IST) Aug 26
04:13 PM (IST) Aug 26
04:13 PM (IST) Aug 26
City Lights ಚಿತ್ರದ 4ನೇ ಹಾಡು ಬಿಡುಗಡೆಯಾಗಿದೆ. ವಿನಯ್ ರಾಜ್ಕುಮಾರ್ ಈ ಹಾಡನ್ನು ಮೊದಲು ತಮ್ಮ ತಾಯಿಗೆ ಕೇಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ‘ಸಿಟಿ ಲೈಟ್ಸ್’ನ ಈ ಪ್ರೇಮಗೀತೆಯಲ್ಲಿ ಅಂಥದ್ದೇನು ವಿಶೇಷ? ಸಿನಿಮಾ ಹಾಗೂ ಹಾಡಿನ ಸಂಪೂರ್ಣ ಕಥೆ ಇಲ್ಲಿದೆ.
04:11 PM (IST) Aug 26
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನಂತಹ ಸಾಂಕ್ರಾಮಿಕವಲ್ಲದ ರೋಗಗಳು ಆತಂಕಕಾರಿಯಾಗಿ ಹೆಚ್ಚಾಗಿವೆ.
04:05 PM (IST) Aug 26
02:58 PM (IST) Aug 26
ಇದು ಒಬ್ಬ ಕನ್ನಡದ ನಟನ ಗ್ಲೋಬಲ್ ರೆಕಾರ್ಡ್ ಆಗಿದೆ. ಯಶ್ ಅಭಿನಯದ ಟಾಕ್ಸಿಕ್, ಕನ್ನಡದ ಜೊತೆಗೆ ಇಂಗ್ಲೀಷ್ನಲ್ಲಿಯೂ ಏಕ ಕಾಲದಲ್ಲಿ ನಿರ್ಮಾಣ ಆಗಿರೋ ಸಿನಿಮಾ. ಈ ಚಿತ್ರವು ಇನ್ನುಳಿದ ಭಾಷೆಗೆ ಡಬ್ಬಿಂಗ್ ಆಗಿದೆ. ಯಶ್ ಇಂಗ್ಲೀಷ್ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಹೀಗಾಗಿ, ಈ ಮೂಲಕ ಹಾಲಿವುಡ್ಗೂ ಯಶ್ ಎಂಟ್ರಿ ಕೊಟ್ಟಂತಾಗಿದೆ.
02:34 PM (IST) Aug 26
ತಂದೆಯನ್ನು ಕ್ಯಾನ್ಸರ್ನಿಂದ ಕಳೆದುಕೊಂಡ ಬಳಿಕ ದುಬೈನಲ್ಲಿ ರಿಯಲ್ ಎಸ್ಟೇಟ್ ವೃತ್ತಿಯಲ್ಲಿದ್ದ ಇಶಾನ್ ಗ್ರೋವರ್ ತಮ್ಮ ಜೀವನದ ವೇಗವನ್ನೇ ಪ್ರಶ್ನಿಸಲು ಆರಂಭಿಸಿದರು. ಕೊನೆಗೆ ನಗರ ಜೀವನಕ್ಕೆ ವಿದಾಯ ಹೇಳಿ ಉತ್ತರಾಖಂಡದ ಕಾಸರ್ ದೇವಿಗೆ ತೆರಳಿದರು. ಅಲ್ಲಿ ‘ಥೋಡಾ ಸ್ಲೋ’ ಅಂಗಡಿ ಆರಂಭಿಸಿ, ನಿಧಾನ ಮತ್ತು ನೆಮ್ಮದಿಯ ಬದುಕಿನ ತತ್ವವನ್ನು ಅನುಸರಿಸುತ್ತಿದ್ದಾರೆ.
02:11 PM (IST) Aug 26
12:38 PM (IST) Aug 26
12:01 PM (IST) Aug 26
ಕಲಬುರಗಿ ಜಿಲ್ಲಾಧಿಕಾರಿಗೆ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಎಂಎಲ್ಸಿ ಎನ್. ರವಿಕುಮಾರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ವಿಚಾರಣೆಗೆ ಗೈರಾದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು
11:39 AM (IST) Aug 26
'ಟಾಕ್ಸಿಕ್' ಕೇವಲ ಯಶ್ ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಮೂಡಿಬಂದಿರುವ ಈ ಸಿನಿಮಾ 'ಪ್ಯಾನ್ ವರ್ಲ್ಡ್' ಎಂಬ ಬಿರುದಿಗೆ ಸಂಪೂರ್ಣ ಅರ್ಹವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ವಯಸ್ಕರನ್ನೂ ಕೂಡ ಇದು ಯಾವುದೋ ಒಂದು ರೀತಿಯಲ್ಲಿ ಇದು ಕಾಡಬಹುದು.
11:30 AM (IST) Aug 26
ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಬಿಐ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರು ಸರ್ಕಾರದ ಅಭಿಪ್ರಾಯ ಕೇಳಿರುವುದರಿಂದ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ. ಹೀಗಾಗಿ ನಾಗೇಂದ್ರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
11:00 AM (IST) Aug 26
10:58 AM (IST) Aug 26
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಒತ್ತಡ ಮತ್ತು ಇ.ಡಿ ತನಿಖೆಯ ನಡುವೆ, ನಾಗೇಂದ್ರ ಅವರು ಸ್ವತಃ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. ಆದರೆ, ಈ ವರದಿಗಳ ಬಗ್ಗೆ ಸಚಿವರು ನೀಡಿದ ಸ್ಪಷ್ಟನೆ ಏನು ತಿಳಿಯಿರಿ.
10:36 AM (IST) Aug 26
ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ತಾಯಿ ಮತ್ತು ಐವರು ಮಕ್ಕಳೂ ಸೇರಿದಂತೆ ಒಟ್ಟು ಆರು ಶವಗಳು ಪತ್ತೆಯಾಗಿವೆ. ಈ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.
10:33 AM (IST) Aug 26
09:49 AM (IST) Aug 26
ಸಚಿವ ಸಂಪುಟದಲ್ಲಿನ ಸಣ್ಣ ಬದಲಾವಣೆಗಳು ಮತ್ತು ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಈ ಭೇಟಿಯಲ್ಲಿ, ಖಾಲಿ ಇರುವ ಒಂದು ಮಹಿಳಾ ಕೋಟಾದ ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚೆ..
09:25 AM (IST) Aug 26
ರಾಜ್ಯದಲ್ಲಿ RSS ವಿರುದ್ಧ ಯಾವುದೇ ಗಲಭೆ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಪರಿಷತ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಸಂಘದ ಪಥ ಸಂಚಲನ ಅಥವಾ ಶಾಖೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದರು.
09:16 AM (IST) Aug 26
08:55 AM (IST) Aug 26
08:36 AM (IST) Aug 26
08:30 AM (IST) Aug 26
ಮಾರಲಭಾವಿ ಗ್ರಾಮದ ಶಿವಶರಣಪ್ಪಗೌಡ ಮಾಲಿ ಪಾಟೀಲ್ ಅವರ ಜೋಡೆತ್ತುಗಳು ಕೇವಲ 12 ಗಂಟೆಗಳಲ್ಲಿ 28 ಎಕರೆ ತೊಗರಿ ಬೆಳೆಯಲ್ಲಿ ಕುಂಟೆ ಹೊಡೆಯುವ ಮೂಲಕ ಟ್ರಾಕ್ಟರ್ಗಳನ್ನೂ ಮೀರಿಸುವ ಸಾಧನೆ ಮಾಡಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ರೈತನನ್ನು ಅಭಿನಂದಿಸಿ, ಎತ್ತುಗಳ ಮೆರವಣಿಗೆ ಮಾಡಿದ್ದಾರೆ.
07:42 AM (IST) Aug 26
ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ ಬೆನ್ನಲ್ಲೇ, ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ತಮ್ಮ ಬೆಂಗಳೂರಿನ ಮನೆ ಖಾಲಿ ಮಾಡಿ ನಾಪತ್ತೆ. ಇ.ಡಿ. ದಾಳಿಯ ನಂತರ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಕೂಡ ನಾಪತ್ತೆಯಾಗಿದ್ದಾರೆ.
07:20 AM (IST) Aug 26
06:54 AM (IST) Aug 26