Published : Sep 01, 2025, 06:56 AM ISTUpdated : Sep 01, 2025, 11:26 PM IST

Karnataka News Live: ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಹುಟ್ಟುಹಬ್ಬದ ಉಡುಗೊರೆ, 47ನೇ ಸಿನಿಮಾ ಮಾರ್ಕ್ ಟೀಸರ್ ಬಿಡುಗಡೆ

ಸಾರಾಂಶ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಬೆಂಗಳೂರು ಹೊರವ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆ.1ರಿಂದ ಟೋಲ್ ದರ ಏರಿಕೆಮಾಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ರು. ದರ ಏರಿಕೆಯಾಗಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್‌ಗಳಲ್ಲಿ ದರ ಎರಿಕೆಯಾಗಲಿದ್ದು, ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿಯ-75ರ ಟೋಲ್ ಮೂಲಕ ಸಂಚರಿಸುವ ಹಾಗೂ ವಾಹನ ಸವಾರರಿಗೆ ಬರೆ ಬಿದ್ದಿದೆ. ದೊಡ್ಡಕರೇನಹಳ್ಳಿ ಟೋಲ್ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಿದೆ. 2023ರ ದರ ಏರಿಕೆ ಸಂದರ್ಭದಲ್ಲಿ ಕಾರುಗಳಿಗೆ ಒಂದು ದಿಕ್ಕಿನ ಪ್ರಯಾಣಕ್ಕೆ ಸುಮಾರು 10-20 ರು. ಏರಿಕೆಯಾಗಿತ್ತು.

mark

11:26 PM (IST) Sep 01

ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಹುಟ್ಟುಹಬ್ಬದ ಉಡುಗೊರೆ, 47ನೇ ಸಿನಿಮಾ ಮಾರ್ಕ್ ಟೀಸರ್ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಹೆಸರು ಬಹಿರಂಗವಾಗಿದೆ. ಚಿತ್ರತಂಡ ಹೆಸರಿನ ಟೀಸರ್ ಬಿಡುಗಡೆ ಮಾಡಿದೆ. ಮ್ಯಾಕ್ಸ್ ಭಾಗ 2 ಎಂದೇ ಅಭಿಮಾನಿಗಳು ಚರ್ಚಿಸುತ್ತಿದ್ದ ಬೆನ್ನಲ್ಲೇ ಸಿನಿಮಾ ಹೆಸರು ಮಾರ್ಕ್ ಎಂದು ಬಹಿರಂಗಗೊಂಡಿದೆ.

 

Read Full Story

11:23 PM (IST) Sep 01

ಗಣೇಶ ವಿಸರ್ಜನೆ ವೇಳೆ ಕುಣಿಯುತ್ತಲೇ ಕುಸಿದುಬಿದ್ದು 3 ಜನರ ಸಾವು; ಹೃದಯಬಡಿತ ನಿಲ್ಲಿಸಿದ ಡಿಜೆ ಸೌಂಡ್!

ಗಣೇಶ ವಿಸರ್ಜನಾ ಸಂದರ್ಭದಲ್ಲಿ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ಮೂವರು ಹೃದಯಾಘಾತ ಸಂಭವಿಸಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ಈ ಘಟನೆಗಳು ನಡೆದಿವೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರ ವಿವರ ಇಲ್ಲಿದೆ ನೋಡಿ..

Read Full Story

10:48 PM (IST) Sep 01

ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌‌ನಲ್ಲಿ ಬೆಂಗಳೂರಿನ ರಿಷಿಕ್‌ ರೆಡ್ಡಿಗೆ 2ನೇ ಸ್ಥಾನ

ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಮುಂಬೈನ ಕಿಯಾನ್ ಶಾ ಗೆಲುವು ಸಾಧಿಸಿದ್ದರೆ,ಬೆಂಗಳೂರಿನ ರಿಷಿಕ್‌ ರೆಡ್ಡಿಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

Read Full Story

10:31 PM (IST) Sep 01

ಪೋಸ್ಟ್ ಅಫೀಸ್, ಐಟಿಆರ್, ಬೆಳ್ಳಿ ಸೇರಿ ಸೆಪ್ಟೆಂಬರ್ 1 ರಿಂದ ಯಾವೆಲ್ಲಾ ನಿಯಮ ಬದಲು?

ಸೆಪ್ಟೆಂಬರ್ ತಿಂಗಳಿನಿಂದ ಬ್ಯಾಂಕ್ ಸೇವೆಗಳು, ಸರ್ಕಾರಿ ಯೋಜನೆಗಳು, ತೆರಿಗೆ, ಅಂಚೆ ಸೇವೆಗಳಲ್ಲಿ ಹಲವು ಮುಖ್ಯ ಬದಲಾವಣೆಗಳು ಜಾರಿಗೆ ಬಂದಿವೆ. ಇವು ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.
Read Full Story

10:01 PM (IST) Sep 01

ನನ್ನ ರಾಜ್ಯಕ್ಕಾಗಿ ಶ್ರಮವಹಿಸಿ ದುಡಿಯುತ್ತೇನೆ, ತಂದೆಗೆ ನೀಡಿದ ಮಾತು ನೆನಪಿಸಿ ರಾಜೀವ್ ಚಂದ್ರಶೇಖರ್

ನಮ್ಮ ಊರನ್ನ ಸರಿಮಾಡಬೇಕು ರಾಜೀವ್, ಹೀಗಾಗಿ ನೀನು ಅಲ್ಲಿಗೆ ಹೋಗಬೇಕು. ಅದು ದೊಡ್ಡ ಜವಾಬ್ದಾರಿ. ನಮ್ಮ ಊರಲ್ಲಿ ಏನೂ ಆಗ್ತಿಲ್ಲ ಎಂದು ಅಪ್ಪ ಹೇಳಿದ್ದರು. ಅಪ್ಪನಿಗೆ ಕೊಟ್ಟ ಮಾತಿನಂತೆ ನನ್ನ ರಾಜ್ಯದಲ್ಲಿ ಅಭಿವೃದ್ಧಿ ಬದಲಾವಣೆ ತರುತ್ತೇನೆ ಎಂದು ಮಾಜಿ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Read Full Story

09:28 PM (IST) Sep 01

'ಬುರುಡೆ' ಉಲ್ಟಾ ಹೊಡೆಯುತ್ತಿದ್ದಂತೆ ಒಡನಾಡಿಯ ಸ್ಟಾನ್ಲಿಯಿಂದ ಸೌಜನ್ಯ ದಾಳ - ಸೂಲಿಬೆಲೆ

ಭಾರಿ ಪ್ಲಾನ್ ಮಾಡಿದ್ದ ಬುರುಡೆ ಪ್ರಕರಣ ಉಲ್ಟಾ ಆಗಿದೆ. ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಸೌಜನ್ಯ ಪ್ರಕರಣದಲ್ಲಿ ಹೊಸ ದಾಳ ಉರುಳಿಸಿದೆ.

Read Full Story

09:02 PM (IST) Sep 01

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ 'ಶಾಕುಂತಲೆ' ಕರೆದುಕೊಂಡು ಬಂದ ಸರ್ಕಾರ!

ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ತಮನ್ನಾ ಆಯ್ಕೆ ವಿವಾದದ ನಂತರ, ಕನ್ನಡ ನಟಿ ಐಶಾನಿ ಶೆಟ್ಟಿ ಅವರನ್ನು ಹೊಸ ರಾಯಭಾರಿಯನ್ನಾಗಿ ಆಯ್ಕೆ ಮಾಡಿದಂತಾಗಿದೆ. ಹಬ್ಬದ ಋತುವಿನಲ್ಲಿ ಉಡುಗೊರೆಗಳಿಗಾಗಿ ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ಐಶಾನಿ ಕಾಣಿಸಿಕೊಂಡಿದ್ದಾರೆ.

Read Full Story

08:47 PM (IST) Sep 01

24ರ ಯುವಕನ ಪ್ರಾಣಕ್ಕೆ ಕುತ್ತು ತಂದ ಗಣೇಶ ವಿಸರ್ಜನೆ ಡಿಜೆ ಸೌಂಡ್, ಡ್ಯಾನ್ಸ್ ಮಾಡುತ್ತಲೇ ಸಾವು

ಗಣೇಶ ವಿಸರ್ಜನೆ ವೇಳೆಯಲ್ಲಿ ಹಾಕಿದ್ದ ಡಿಜೆ ಸೌಂಡ್ ಹಾಗೂ ಡ್ಯಾನ್ಸ್‌ನಿಂದ 24ರ ಹರೆಯದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

Read Full Story

08:36 PM (IST) Sep 01

ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚು ಕಾಲ ಬದುಕೋದ್ಯಾಕೆ? ಇಲ್ಲಿವೆ ನೋಡಿ ಕಾರಣ!

ಜಗತ್ತಿನಾದ್ಯಂತ ನಡೆದಿರೋ ಸಂಶೋಧನೆಗಳ ಪ್ರಕಾರ ಹೆಣ್ಣುಮಕ್ಕಳ ಸರಾಸರಿ ಆಯಸ್ಸು ಗಂಡಸರಿಗಿಂತ ಜಾಸ್ತಿ ಅಂತ ಗೊತ್ತಾಗಿದೆ. ಗಂಡಸರು ದಷ್ಟಪುಷ್ಟವಾಗಿದ್ರೂ, ಬಲಿಷ್ಠರಾಗಿದ್ರೂ, ಆಯಸ್ಸಿನ ವಿಷಯದಲ್ಲಿ ಹೆಣ್ಣುಮಕ್ಕಳೇ ಮುಂದೆ. ಇದಕ್ಕೆ ಕಾರಣಗಳೇನು ಅಂತ ನೋಡೋಣ.

Read Full Story

08:09 PM (IST) Sep 01

6 ತಿಂಗಳ ಹಿಂದೆ ಉಳಿದುಕೊಂಡಿದ್ದ ಉಜಿರೆ ಹಳ್ಳಿಮನೆ ಹೊಟೆಲ್‌ನಲ್ಲಿ ಚಿನ್ನಯ್ಯನ ಮಹಜರು

ಉಜಿರೆಯ ಹಳ್ಳಿ ಮನೆ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದ ಚಿನ್ನಯ್ಯ. ಹೀಗಾಗಿ ಹೊಟೆಲ್‌ನಲ್ಲಿ ಎಸ್ಐಟಿ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಸಲಾಗಿದೆ. ಇದರೊಂದಿಗೆ ಹೊಟೆಲ್‌ನಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

Read Full Story

08:08 PM (IST) Sep 01

'ಯು ನೋ ಕನ್ನಡ' ಎಂದ ಸಿದ್ದರಾಮಯ್ಯಗೆ 'ನಂಗೆ ಎಲ್ಲ ಭಾಷೆಗಳೂ ಇಷ್ಟ, ಕನ್ನಡವೂ ಅರ್ಥವಾಗುತ್ತೆಂದ' ರಾಷ್ಟ್ರಪತಿ!

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ನಡುವೆ ನಡೆದ ಹಾಸ್ಯಮಯ ಭಾಷಾ ಜುಗಲ್‌ಬಂದಿ ನಡೆಯಿತು. ಸಿಎಂ ಅವರು ರಾಷ್ಟ್ರಪತಿಯವರಿಗೆ 'ಯು ನೋ ಕನ್ನಡ?' ಎಂದು ಪ್ರಶ್ನಿಸಿದರು. ರಾಷ್ಟ್ರಪತಿಯವರು 'ನನಗೆ ಎಲ್ಲ ಭಾಷೆಯೂ ಇಷ್ಟ, ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ' ಎಂದರು.

Read Full Story

07:33 PM (IST) Sep 01

SCO ಶೃಂಗಸಭೆಯಲ್ಲಿ 3 ರಾಷ್ಟ್ರಕ್ಕೆ ಮೋದಿ 3 ಸಿಗ್ನಲ್ - ಟ್ರಂಪ್‌ಗೆ ಸಂದೇಶ, ಚೀನಾ ನೆನಪಿಸಿ ಪಾಕ್‌ಗೆ ಎಚ್ಚರಿಕೆ

SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾಡಿದ ಒಂದು ಭಾಷಣದಲ್ಲಿ ಮೂರು ರಾಷ್ಟ್ರಕ್ಕೆ ಮೂರು ಸಿಗ್ನಲ್ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸಂದೇಶ ರವಾನಿಸಿದ್ದರೆ, ಚೀನಾಗೆ ಕೆಲ ಘಟನೆಗಳನ್ನು ನೆನಪು ಮಾಡಿಕೊಟ್ಟಿದ್ದಾರೆ. ಇತ್ತ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

Read Full Story

07:32 PM (IST) Sep 01

Director S S David - ಅನಾಥ ಶವವಾದ ಪೊಲೀಸ್‌ ಸ್ಟೋರಿ,ಅಗ್ನಿ ಐಪಿಎಸ್‌ ಕಥೆಗಾರ, ಮಣ್ಣು ಮಾಡಲು ಕೂಡ ಯಾರೂ ಇಲ್ಲ!

ಖ್ಯಾತ ನಟ ಸಾಯಿಕುಮಾರ್ ಅವರ ಸೂಪರ್ ಹಿಟ್ ಚಿತ್ರಗಳಾದ ಪೊಲೀಸ್ ಸ್ಟೋರಿ ಮತ್ತು ಅಗ್ನಿ ಐಪಿಎಸ್ ಚಿತ್ರಗಳಿಗೆ ಕಥೆ ಬರೆದ ನಿರ್ದೇಶಕ ಎಸ್.ಎಸ್. ಡೇವಿಡ್ ಇನ್ನಿಲ್ಲ. ಹೃದಯಾಘಾತದಿಂದ ನಿಧನರಾದ ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಬಾರದೆ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಇಡಲಾಗಿದೆ.
Read Full Story

07:26 PM (IST) Sep 01

BJP ನಾಯಕರ ಧರ್ಮಸ್ಥಳ ಚಲೋ - ಬುರುಡೆ ಗ್ಯಾಂಗ್ ಷಡ್ಯಂತ್ರ ತನಿಖೆ ಎನ್‌ಐಎಗೆ ಕೊಡಲಿ, ಸೌಜನ್ಯಗೂ ನ್ಯಾಯ ಸಿಗಲಿ!

ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ವಿರೋಧ ಮತ್ತು ಬುರುಡೆ ಗ್ಯಾಂಗ್ ಷಡ್ಯಂತ್ರದ ತನಿಖೆಯನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕರು 'ಧರ್ಮಸ್ಥಳ ಚಲೋ' ಸಮಾವೇಶದಲ್ಲಿ ಒಕ್ಕೂರಲ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ, ಸೌಜನ್ಯಾ ಕೇಸಿನ ತನಿಖೆಯನ್ನೂ ಸ್ವಾಗತ ಕೋರಿದರು.

Read Full Story

07:06 PM (IST) Sep 01

14 ವರ್ಷ ಬ್ಯಾಂಕಿಂಗ್ ಅನುಭವ ಕೆಲಸ ಇಲ್ಲದೆ ಬೆಂಗಳೂರು ಸಿಗ್ನಲ್‌ನಲ್ಲಿ ಭಿಕ್ಷುಕನಾದ! ಕ್ಯಾಬ್ ಡ್ರೈವರ್ ಆಗಲು ಸಲಹೆ ಕೊಟ್ಟ ನೆಟ್ಟಿಗರು

ಬೆಂಗಳೂರಿನ ಸಿಗ್ನಲ್‌ನಲ್ಲಿ 14 ವರ್ಷಗಳ ಬ್ಯಾಂಕಿಂಗ್ ಅನುಭವ ಹೊಂದಿರುವ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಮಾಜದ ವೈಫಲ್ಯವೇ ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೇ ಎಂಬ ಚರ್ಚೆಗೆ ಕಾರಣವಾಗಿದೆ.  

Read Full Story

06:53 PM (IST) Sep 01

ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಮಗು ತೆಗೆಸಿದ ಮಹಿಳೆ ಸಾವು!

ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ಶಶಿ ಎಸ್.ಎಲ್. ಅವರನ್ನು ಭ್ರೂಣ ಲಿಂಗ ಪತ್ತೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಭ್ರೂಣ ಲಿಂಗ ಪತ್ತೆ ನಂತರ ಭ್ರೂಣ ಹತ್ಯೆ ಮಾಡಿರುವುದು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ತೆಗೆಸಿದ್ದು, ಸರ್ಕಾರಿ ವೈದ್ಯೆ ಪಾತ್ರ ಬೆಳಕಿಗೆ ಬಂದಿದೆ.

Read Full Story

06:51 PM (IST) Sep 01

ಗೆಳೆಯನ ಜೊತೆಗಿದ್ದ ಪೊಲೀಸ್ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕಾನ್ಸ್‌ಸ್ಟೇಬಲ್ ಪತಿ, ವಿಡಿಯೋ

ಗೆಳೆಯನ ಜೊತೆ ಆಪ್ತ ಸಮಯ ಕಳೆಯುತ್ತಿದ್ದ ಪೊಲೀಸ್ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.

 

Read Full Story

06:09 PM (IST) Sep 01

ಕುದುರೆಮುಖ ಟೌನ್‌ಷಿಪ್‌ ಇನ್ನು ನೆನಪು ಮಾತ್ರ, ಭಾರೀ ನಿರ್ಧಾರ ಮಾಡಿದ KIOCL

ಕಾರ್ಯಗತಗೊಳಿಸುವ ಪ್ರಯತ್ನದಲ್ಲಿ, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್) ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಟೌನ್‌ಶಿಪ್‌ ಸೇರಿದಂತೆ 282 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ನಿರ್ಧಾರ ಮಾಡಿದೆ. 

Read Full Story

05:45 PM (IST) Sep 01

ಬಾಗೇಪಲ್ಲಿಯಲ್ಲಿ ಉಚಿತ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ; ಆರೋಗ್ಯ ಸೇವೆಯ ಹೊಸ ಅಧ್ಯಾಯ!

ಬಾಗೇಪಲ್ಲಿಯಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು ಸದ್ಗುರು ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು. ಇದು  ಮುದ್ದೇನಹಳ್ಳಿಯ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆ ವಿಸ್ತರಣೆ ಆಗಿದ್ದು, 2 ಲಕ್ಷ ಜನರಿಗೆ ಅನುಕೂಲವಾಗಲಿದೆ.

Read Full Story

05:44 PM (IST) Sep 01

ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಘನಘೋರ; ಹವಾಮಾನ ಇಲಾಖೆಯಿಂದ ಭೂಕುಸಿತ, ಪ್ರವಾಹ ಎಚ್ಚರಿಕೆ

ಸೆಪ್ಟೆಂಬರ್ ತಿಂಗಳಲ್ಲಿ ಅತೀ ಗರಿಷ್ಠ ಮಳೆ ದಾಖಲಾಗಲಿದೆ. ಭಾರಿ ಮಳೆ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅವಘಡಗಳ ಸಾಧ್ಯತೆ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

Read Full Story

05:41 PM (IST) Sep 01

ಮದುವೆಯ ಬೆನ್ನಲ್ಲಿ ಅಭಿಮಾನಿಗೆ ಭಾವುಕ ಕಾಂಮೆಂಟ್ಸ್‌ ಹಾಕಿದ್ಯಾಕೆ ಅನುಶ್ರೀ!

ಕಿರುತೆರೆ ನಿರೂಪಕಿ ಅನುಶ್ರೀ ಅವರ ಮದುವೆ ಸಂಭ್ರಮದ ನಡುವೆ ಅಭಿಮಾನಿಯೊಬ್ಬರ ವಿಶಿಷ್ಟ ಶುಭಾಶಯ ವೈರಲ್ ಆಗಿದೆ. ಅನುಶ್ರೀ ಅವರನ್ನು ಮದುವೆಯ ಫೋಟೋ ಪ್ರಿಂಟ್ ಮಾಡಿಸಿ ಶುಭ ಕೋರಿದ ಅಭಿಮಾನಿಯ ನಡೆಗೆ ಅನುಶ್ರೀ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ. 

Read Full Story

05:27 PM (IST) Sep 01

ಮನೆ ದೇವ್ರಾಣೆ ನಿನ್ನ ಹೆಂಡ್ತಿ ಹುಡುಕಿಕೊಡೋ ಜವಾಬ್ದಾರಿ ನಂದು; ಪೊಲೀಸ್ ಭರವಸೆಗೊಪ್ಪಿ ಟವರ್‌ ಇಳಿದ ಗಂಡ!

ಆನೇಕಲ್ ಬಳಿ ಪತ್ನಿ ಕಾಣೆಯಾದ ಬಗ್ಗೆ ಆತಂಕಗೊಂಡ ಪತಿ ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಮನವೊಲಿಕೆ ನಂತರ ಪತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
Read Full Story

05:23 PM (IST) Sep 01

14 ಗಂಟೆ ಕೆಲಸವನ್ನು ಸಮರ್ಥಿಸಿಕೊಂಡ ಭಾರತೀಯ ಮೂಲದ ಉದ್ಯಮಿ ದಕ್ಷ, ಜೇಬು ತುಂಬ ಸಂಬಳದ ಮಾಹಿತಿ ಹಂಚಿಕೊಂಡ್ರು!

ದಕ್ಷ ಗುಪ್ತಾ, ಗ್ರೆಪ್ಟೈಲ್ ಸಂಸ್ಥಾಪಕರು, ೧೪ ಗಂಟೆಗಳ ಕೆಲಸದ ದಿನವನ್ನು ಸಮರ್ಥಿಸಿಕೊಂಡಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ಸಿಗೆ ದೀರ್ಘ ಕೆಲಸದ ಸಮಯ ಅತ್ಯಗತ್ಯ ಎಂದು ಅವರು ನಂಬುತ್ತಾರೆ. ಹೆಚ್ಚಿನ ಸಂಬಳ ಮತ್ತು ಸೌಲಭ್ಯಗಳೊಂದಿಗೆ ಕಠಿಣ ಪರಿಶ್ರಮದ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಾರೆ.
Read Full Story

04:46 PM (IST) Sep 01

Bengaluru Metro Yellow Line - ಚೀನಾದಿಂದ ಎರಡು ಬೋಗಿಗಳನ್ನು ವಿಮಾನದಲ್ಲಿ ತರಿಸುವಂತೆ ತೇಜಸ್ವಿ ಸೂರ್ಯ ಆಗ್ರಹ!

ಹಳದಿ ಮಾರ್ಗದ ಮೆಟ್ರೋಗೆ ರೈಲುಗಳ ಪೂರೈಕೆಯನ್ನು ತ್ವರಿತಗೊಳಿಸುವ ಕುರಿತು ತಿತಾಘರ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸೆಪ್ಟೆಂಬರ್ 1 ರಂದು ಚರ್ಚೆ ನಡೆಸಿರುವುದಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.

 

Read Full Story

04:38 PM (IST) Sep 01

ಹೊಡೀತಾರೆ, ದುಡ್​​ ಕಿತ್ಕೋತಾರೆ.. ಮೇಲೆ ಹೋದ್ರೂ ಕಾಟ, ಕೆಳಗೂ ಕಾಟ - ಸಂಜೆಯ ದಂಧೆಗೆ ಪುರುಷರು ಹೈರಾಣು

ಬೆಂಗಳೂರಿನ ಮೆಜೆಸ್ಟಿಕ್ ಬಸ್​ಸ್ಟ್ಯಾಂಡ್​ ಫ್ಲೈ ಓವರ್​, ಅಂಡರ್​ಪಾಸ್ ಸೇರಿದಂತೆ ಆಸುಪಾಸು ಸಂಜೆಯಾಗುತ್ತಿದ್ದಂತೆಯೇ ಚಿತ್ರಣವೇ ಬದಲಾಗಿ ಹೋಗುತ್ತದೆ. ಇಲ್ಲಿ ಮಹಿಳೆಯರು ನಡೆಸುವ ದಂಧೆಗೆ ಪುರುಷರು ಹೈರಾಣಿ ಹೋಗಿದ್ದಾರೆ.

 

Read Full Story

04:34 PM (IST) Sep 01

ಬೆಂಗಳೂರು ಲೇಡಿಸ್ ಪಿಜಿಗೆ ನುಗ್ಗಿ ಮಲಗಿದ್ದ ಯುವತಿಯ ಕೈ-ಕಾಲು ಸವರಿದ ಕಳ್ಳ!

ಬೆಂಗಳೂರಿನ ಲೇಡೀಸ್ ಪಿಜಿಗೆ ನುಗ್ಗಿದ ಅನಾಮಿಕ ಯುವಕನೊಬ್ಬ ಒಬ್ಬಂಟಿಯಾಗಿ ಮಲಗಿದ್ದ ಯುವತಿ ಕೈ-ಕಾಲು ಹಾಗೂ ಮೈ-ಕೈ ಮುಟ್ಟಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಿರುಕುಳ ವಿರೋಧಿಸಿದ ಯುವತಿಯಿಂದ ಹಣ ಕಿತ್ತುಕೊಂಡು ಹೋದ ಕಳ್ಳತನ ಪ್ರಕರಣ ನಡೆದಿದೆ. ಈ ಘಟನೆಯ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story

04:25 PM (IST) Sep 01

ಬಸ್‌-ಲಾರಿ ನಡುವೆ ಭೀಕರ ಅಪಘಾತ, ಇಬ್ಬರೂ ಡ್ರೈವರ್‌ಗಳ ಕಾಲು ಕಟ್‌!

ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಲಾರಿ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಚಾಲಕರ ಕಾಲುಗಳು ಕಟ್ ಆಗಿವೆ. ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Read Full Story

04:14 PM (IST) Sep 01

ಪೆಟ್ರೋಲ್ ಬಂಕ್‌ನಿದ ಇಂಧನ ತುಂಬಿಸಿದ ಬಳಿಕ ಕೆಟ್ಟು ನಿಂತ 30ಕ್ಕೂ ಹೆಚ್ಚು ಕಾರು, ದೂರು ದಾಖಲು

ಈ ಪೆಟ್ರೋಲ್ ಬಂಕ್‌ನಿಂದ ಇಂಧನ ತುಂಬಿಸಿಕೊಂಡವರ ವಾಹನಗಳು ಕೆಟ್ಟು ನಿಂತ ಘಟನೆ ನಡೆದಿದೆ. ಐಷಾರಾಮಿ ಕಾರು, ಬೈಕ್‌ಗಗಳು ಕೆಟ್ಟು ನಿಂತಿದೆ. ಭಾರೀ ಪ್ರತಿಭಟನೆ, ಆಕ್ರೋಶದ ಬೆನ್ನಲ್ಲೇ ಇದೀಗ ಪೆಟ್ರೋಲ್ ಬಂಕ್ ವಿರುದ್ಧ ದೂರು ದಾಖಲಾಗಿದೆ.

 

Read Full Story

04:06 PM (IST) Sep 01

ವಿಷ್ಣುವರ್ಧನ್‌ ಸ್ಮಾರಕದ ಬಗ್ಗೆ ನಾಳೆ ಸರಿಯಾದ ಚಿತ್ರಣ ಸಿಗುತ್ತೆ ಎಂದ ಕಿಚ್ಚ ಸುದೀಪ್‌!

ತಮ್ಮ 52ನೇ ಹುಟ್ಟುಹಬ್ಬದಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಕಿಚ್ಚ ಸುದೀಪ್, ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಸುಳಿವು ನೀಡಿದ್ದಾರೆ. ಸ್ಮಾರಕದ ನೀಲನಕ್ಷೆ ಸಿದ್ಧವಾಗಿದ್ದು, ಸ್ಥಳದ ಕುರಿತಾದ ಕಾನೂನು ಹೋರಾಟ ನಡೆಯುತ್ತಿದ್ದರೂ, ತಾವು ಕೆಲಸ ಮುಂದುವರೆಸುತ್ತಿರುವುದಾಗಿ ತಿಳಿಸಿದ್ದಾರೆ. 

Read Full Story

03:44 PM (IST) Sep 01

ಬೀದಿ ನಾಯಿಗಳಿಗೆ ಊಟ ಹಾಕಿದ್ದು ತಪ್ಪೆಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ಹಲ್ಲೆ!

ಚೂಡಸಂದ್ರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ನೆರೆಹೊರೆಯವರ ಗುಂಪೊಂದು ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.
Read Full Story

03:32 PM (IST) Sep 01

ದರ್ಶನ್‌ ಫಾರ್ಮ್‌ ಹೌಸಲ್ಲಿ ಕುದುರೆ ಓಡ್ಸೋಕೆ ಹೋಗಿ ಬಿದ್ದಿದ್ದೆ, ಅಂದಿನಿಂದ ಕುದುರೇನೇ ಹತ್ತಿಲ್ಲ!

52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್, ಮಾಧ್ಯಮಗಳೊಂದಿಗೆ ಹಲವು ವಿಚಾರ ಹಂಚಿಕೊಂಡಿದ್ದಾರೆ. ದರ್ಶನ್ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುವಾಗ ಬಿದ್ದ ಅನುಭವವನ್ನು ವಿವರಿಸಿದ್ದಾರೆ.

Read Full Story

03:16 PM (IST) Sep 01

ಪುಟಿನ್ ಜೊತೆಗೆ ಲಿಮೋಸಿನ್ ಕಾರಿನಲ್ಲಿ ಮೋದಿ ಪಯಣ, 6200 ಕೆಜಿ ತೂಕದ ಈ ಕಾರಿನಲ್ಲಿ ಗರಿಷ್ಠ ಭದ್ರತೆ

SCO ಶೃಂಗಸಭೆಗೆ ಪಾಲ್ಗೊಳ್ಳಲು ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಮ್ಮ ಲಿಮೋಸಿನ್ ಲಕ್ಷುರಿ ಕಾರಿನಲ್ಲಿ ಆಗಮಿಸಿದ್ದಾರೆ. ಈ ವೇಳೆ ಇದೇ ಕಾರಿನಲ್ಲಿ ಪ್ರಧಾನಿ ಮೋದಿಯೂ ಪ್ರಯಾಣ ಮಾಡಿದ್ದಾರೆ. ಪುಟಿನ್ ಬಳಸುವ ಲಿಮೋಸಿನ್ ಕಾರಿನ ವಿಶೇಷತೆ ಏನು?

 

Read Full Story

02:45 PM (IST) Sep 01

ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಬಿದ್ದ, ಪ್ರಶ್ನೆ ಮಾಡಿದ್ದಕ್ಕೆ ವರದಕ್ಷಿಣೆ ಕಿರುಕುಳ ಕೊಟ್ಟ!

ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾಹವಾದ ದಂಪತಿಗೆ ಒಂದು ಮಗು ಇದೆ. ಪತಿಯ ಕಿರುಕುಳದಿಂದ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದಾರೆ.

Read Full Story

02:45 PM (IST) Sep 01

ಭಾರತದ ಅತಿ ದೊಡ್ಡ ಭೂಮಾಲೀಕ ಯಾರು? ಯಾರ ಬಳಿಯಲ್ಲಿ ಎಷ್ಟು ಜಮೀನು ಇದೆ?

ಭಾರತದಲ್ಲಿ ಅತಿ ಹೆಚ್ಚು ಭೂಮಿ ಯಾರ ಬಳಿಯಲ್ಲಿದೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಇಂದು ಭೂಮಿ ಅಂದ್ರೆ ಸಂಪತ್ತು, ಅಧಿಕಾರ ಮತ್ತು ಸ್ಥಾನಮಾನದ ಸಂಕೇತವಾಗಿ ಬದಲಾಗಿದೆ.

Read Full Story

02:31 PM (IST) Sep 01

ಬೆಂಗಳೂರು ಟ್ರಾಫಿಕ್‌ಗೆ ಸೆಡ್ಡು ಹೊಡೆದ SRWA; ಹಣ, ಇಂಧನ ಎಲ್ಲವೂ ಉಳಿತಾಯ

ಸರ್ಜಾಪುರದ SRWA ನಿವಾಸಿಗಳು 'ಪಿಂಗ್, ಸಿಂಕ್ ಆಂಡ್ ರೈಡ್' ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಒಂದೇ ಮಾರ್ಗದಲ್ಲಿ ಹೋಗುವವರು ಒಟ್ಟಿಗೆ ಪ್ರಯಾಣಿಸುವ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡುತ್ತಿದ್ದಾರೆ. ಇದರಿಂದ ಹಣ, ಇಂಧನ ಉಳಿತಾಯವಾಗುತ್ತಿದೆ.
Read Full Story

02:19 PM (IST) Sep 01

ಎಸ್ಟೀಮ್‌ ಮಾಲ್‌ ಎದುರು ಸ್ಟಾಪ್‌, ಬಸ್‌ ಜೊತೆ ಪ್ರಯಾಣಿಕರನ್ನೂ ಸೀಜ್‌ ಮಾಡಿದ ಟ್ರಾಫಿಕ್‌ ಪೊಲೀಸ್‌!

ಸ್ಟಾಪ್‌ ಇಲ್ಲದ ಕಡೆ ಬಸ್‌ ನಿಲ್ಲಿಸಿದ್ದಕ್ಕಾಗಿ ಬಸ್‌ ಹಾಗೂ ಪ್ರಯಾಣಿಕರನ್ನು ಸಂಜಯ್‌ ನಗರ ಟ್ರಾಫಿಕ್‌ ಪೊಲೀಸರು ಸೀಜ್‌ ಮಾಡಿದ್ದಾರೆ. ಪ್ರಯಾಣಿಕರನ್ನು 30 ನಿಮಿಷ ಟ್ರಾಫಿಕ್‌ನಲ್ಲಿ ಸುತ್ತಾಡಿಸಿ, ಪರ್ಯಾಯ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಬಿಟ್ಟಿದ್ದಾರೆ. 

Read Full Story

01:38 PM (IST) Sep 01

ಮೆಟ್ರೋಗೆ ಹೆಸರಿಡುವ ವಿವಾದಕ್ಕೆ ಧ್ವನಿ ಎತ್ತಿದ ಶ್ರೀಮಂತೆ ಕಿರಣ್ ಮಜುಂದಾರ್ - ಡಿಕೆಶಿ ನಿರ್ಧಾರಕ್ಕೆ ಕವಿತಾ ರೆಡ್ಡಿ ಅಸಮಾಧಾನ

ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಕಾರ್ಪೊರೇಟ್ ಕಂಪನಿಗಳ ಹೆಸರಿಡುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಿರಣ್ ಮಜುಂದಾರ್ ಶಾ ನಡುವೆ ವಾಕ್ಸಮರ ನಡೆಯುತ್ತಿದೆ.
Read Full Story

01:37 PM (IST) Sep 01

ದೇಶದಲ್ಲಿ TikTok ಮತ್ತೆ ಬರುತ್ತಾ? ಪಿಎಂ ಮೋದಿ ಚೀನಾ ಬೇಟಿ ಬೆನ್ನಲ್ಲೇ ಕಂಪನಿ ಉದ್ಯೋಗಾವಕಾಶ ಘೋಷಣೆ!

ಬೈಟೆಡ್ಯಾನ್ಸ್ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಘೋಷಿಸಿದ್ದು, ಟಿಕ್‌ಟಾಕ್ ಮರಳುವಿಕೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಸರ್ಕಾರ ಈ ಸುದ್ದಿಯನ್ನು ನಿರಾಕರಿಸಿದೆ.
Read Full Story

01:06 PM (IST) Sep 01

ಬೀಳಿನ ಪುಡಾಯಿಗೆ ಜೀವ ತುಂಬುವ ಎಳ್ಳಾರೆ ಸಹೋದರರು!

ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಮೂವರು ಸಹೋದರರು ಬೀಳಿನ ಪುಡಾಯಿಗಳನ್ನು ನಿರ್ಮಿಸುವ ಮೂಲಕ ತುಳುನಾಡಿನ ಜನಪದ ಪರಂಪರೆಯನ್ನು ಉಳಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಮಳೆಗಾಲದಲ್ಲಿ ಈ ಪುಡಾಯಿಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ, ಈ ಕಲೆ ಕ್ರಮೇಣ ಮಾಯವಾಗುತ್ತಿದೆ.
Read Full Story

12:44 PM (IST) Sep 01

ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಎಂಎಲ್‌ಸಿಗೆ ನಾಮನಿರ್ದೇಶನ; ಸಚಿವ ಸಂಪುಟ ಸೇರ್ಪಡೆ ಸಾಧ್ಯತೆ!

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ತೆಲಂಗಾಣ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಾಮನಿರ್ದೇಶನವು ಸಚಿವ ಸ್ಥಾನಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Read Full Story

More Trending News