Published : Oct 14, 2025, 06:57 AM ISTUpdated : Oct 14, 2025, 11:35 PM IST

Karnataka News Live: ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ

ಸಾರಾಂಶ

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾ*ಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆ.ಆ‌ರ್.ನಗರದ ಸಂತ್ರಸ್ತೆಯ ಅಪಹರಣ ಆರೋಪದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಆರೋಪಿಗಳಾದ ಕೆ.ಎ.ರಾಜಗೋಪಾಲ್ ಮತ್ತು ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ 7ನೇ ಆರೋಪಿ ಕೆ.ಎ.ರಾಜಗೋಪಾಲ್ ಮತ್ತು 8ನೇ ಆರೋಪಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಸಂಬಂಧ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು ಸೋಮವಾರ ವಿಚಾರಣೆ ನಡೆಸಿ ಇಬ್ಬರು ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿಸಿದರು. ಇದೇ ರೀತಿಯ ಮನವಿ ಸಂಬಂಧ ಪ್ರಕರಣದ 3ನೇ ಆರೋಪಿ ಸುಜಯ್, 4ನೇ ಆರೋಪಿ ಎಚ್.ಎನ್.ಮಧು ಮತ್ತು 5ನೇ ಆರೋಪಿ ಎಚ್ .ಡಿ.ಮನುಗೌಡ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಅ.18ಕ್ಕೆ ಕಾಯ್ದಿರಿಸಿದರು.

Rishab Shetty Amitabh Bachchan

11:35 PM (IST) Oct 14

ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ

ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ರಿಷಬ್ ಶೆಟ್ಟಿ ಈ ಉಡುಗೊರೆ ನೀಡಿದ್ದಾರೆ. ಇದಕ್ಕೆ ಬಿಗ್ ಬಿ ಉತ್ತರದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

Read Full Story

10:50 PM (IST) Oct 14

ದಿವಂಗತ ನಟ ನವೀನ್‌ ಮಯೂರ್‌ ಕುಟುಂಬದಲ್ಲಿ ಮತ್ತೊಂದು ಅಕಾಲಿಕ ಸಾವು, ತಮ್ಮ ಶ್ರೇಯಸ್‌ ಕೂಡ ನಿಧನ!

Actor Naveen Mayurs Brother Shreyas Dies of Heart Attack ದಿವಂಗತ ನಟ ನವೀನ್ ಮಯೂರ್ ಅವರ ಸಹೋದರ, ಪತ್ರಕರ್ತ ಶ್ರೇಯಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಅವರ ತಂದೆ ರೈಲು ಅಪಘಾತದಲ್ಲಿ ಸಾವು ಕಂಡಿದ್ದರು.

Read Full Story

10:40 PM (IST) Oct 14

ಪ್ರಶಾಂತ್​ ಆಗಿದ್ದ ನಟ ರಿಷಬ್​ ಶೆಟ್ಟಿ ಆಗಿದ್ದು ಹೇಗೆ? 'R' ತಂದ ಅದೃಷ್ಟ- ಕಾಂತಾರಾ ಸ್ಟಾರ್​ ರೋಚಕ ಸ್ಟೋರಿ

ಕಾಂತಾರ ಚಿತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಜ್ಯೋತಿಷ ಮತ್ತು ಸಂಖ್ಯಾಶಾಸ್ತ್ರದ ಸಲಹೆಯ ಮೇರೆಗೆ ತಮ್ಮ ಹೆಸರನ್ನು ಬದಲಿಸಿಕೊಂಡ ನಂತರ ಅವರ ವೃತ್ತಿಜೀವನದಲ್ಲಿ ಅದೃಷ್ಟ ಕೈಹಿಡಿಯಿತು. 'R' ಅಕ್ಷರದಿಂದ ಆರಂಭವಾದ  ಹೆಸರು ಯಶಸ್ಸಿಗೆ ಕಾರಣವಾಯಿತು. 

Read Full Story

10:21 PM (IST) Oct 14

'ನನ್ನ ತಲೆಕೂದಲು ಎಲ್ಲಿ..?' ಟೈಮ್‌ ಮ್ಯಾಗಝೀನ್‌ ಪ್ರಕಟಿಸಿದ ಕವರ್‌ ಫೋಟೋಗೆ ಟ್ರಂಪ್‌ ಆಕ್ರೋಶ!

Trump Fumes at Time Magazine's Worst Photo Cover Despite Good Article ಟೈಮ್ ನಿಯತಕಾಲಿಕೆಯು ತಮ್ಮ ಕೆಟ್ಟ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

10:20 PM (IST) Oct 14

ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್, 30*40 ನಿವೇಶನಗಳಿಗೆ ಓಸಿ ವಿನಾಯಿತಿ

ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್, 30*40 ನಿವೇಶನಗಳಿಗೆ ಓಸಿ ವಿನಾಯಿತಿ ನೀಡಲಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಕೆ ಅಧಿಕೃತ ಆದೇಶ ಹೊರಡಿಸಿದೆ. ಏನಿದು ನಿವೇಷನಗಳ ಒಸಿ? ಹೊಸ ಆದೇಶದಲ್ಲಿ ಏನಿದೆ?

Read Full Story

10:07 PM (IST) Oct 14

8.5 ಕೋಟಿ ರೂ. ಬೇಕಾದ್ರೆ ಬೇಗ ಒಪ್ಪಿಕೊಳ್ಳಿ! ನಿಮ್ಮ ಕನಸಿಗೆ ರೆಕ್ಕೆ ಬರೋ ಟೈಮಿದು- ಏನಿದು ಹೊಸ ಷೋ?

ಜೀ ಕನ್ನಡ ವಾಹಿನಿಯು 'ಶಾರ್ಕ್ ಟ್ಯಾಂಕ್' ಮಾದರಿಯ 'ಐಡಿಯಾಬಾಜ್' ಎಂಬ ಹೊಸ ಬ್ಯುಸಿನೆಸ್ ರಿಯಾಲಿಟಿ ಷೋ ಅನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ, ಉದ್ಯಮಿಗಳು ತಮ್ಮ ವ್ಯವಹಾರ ಕಲ್ಪನೆಗಳನ್ನು ಹೂಡಿಕೆದಾರರ ಮುಂದೆ ಮಂಡಿಸಿ, ತಮ್ಮ ಕನಸುಗಳಿಗೆ ಬಂಡವಾಳವನ್ನು ಪಡೆಯಲಿದ್ದಾರೆ.  

Read Full Story

09:45 PM (IST) Oct 14

ಅಮಿತಾಭ್‌ ಜೊತೆ ಅಧಿಕಪ್ರಸಂಗ ಮಾಡಿದ ಬಾಲಕನ ಸುದ್ದಿ ನಡುವೆಯೇ ಯದುವೀರ ದತ್ತ ಮಾತೀಗ ವೈರಲ್‌

ಕೌನ್‌ ಬನೇಗಾ ಕರೋರ್‌ಪತಿಯಲ್ಲಿ ಅಧಿಕಪ್ರಸಂಗತನ ತೋರಿದ ಬಾಲಕನ ವರ್ತನೆಗೆ ಪೋಷಕರೇ ಕಾರಣ ಎಂದು ಟೀಕೆ ವ್ಯಕ್ತವಾಗಿದೆ. ಇದೇ ವೇಳೆ, ಮಕ್ಕಳಿಗೆ ಕೇಳಿದ್ದನ್ನೆಲ್ಲಾ ಕೊಡಿಸಬಾರದು ಎಂಬ ಸಂಸದ ಯದುವೀರ ದತ್ತ ಒಡೆಯರ್‌ ಅವರ ಮಾತು ವೈರಲ್ ಆಗಿದ್ದು, ಉತ್ತಮ ಪಾಲನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

09:33 PM (IST) Oct 14

10 ಮಕ್ಕಳು, 3 ಹೆಂಡ್ತಿಯರ ಸಾಕಲು ಕಳ್ಳತನಕ್ಕೆ ಇಳಿದಿದ್ದ ಫೇಕ್‌ ಬಾಬಾ ದಾದಾಪೀರ್‌ ಬಂಧನ!

Fake Baba Dadapir Arrested for Gold Theft ಮನೆಯಲ್ಲಿನ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ನಂಬಿಸಿ ವಿಶೇಷ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ದಾದಾಪೀರ್ ಎಂಬ ನಕಲಿ ಬಾಬಾನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. 

Read Full Story

09:22 PM (IST) Oct 14

ಆಟೋ ಡ್ರೈವರ್ ನಂಬಿಹೋದ ಕಾಲೇಜು ಹುಡ್ಗೀರು; ಗ್ಯಾಂಗ್‌ರೇ*ಪ್ ತಪ್ಪಿಸಿ 4 ಜನರ ಬಂಧಿಸಿದ ಪೊಲೀಸರು!

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ, ಸಾಮೂಹಿಕ ಅತ್ಯಾಚಾ*ರ ಯತ್ನವನ್ನು ವಿಫಲಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

Read Full Story

09:21 PM (IST) Oct 14

ಇದು Bigg Boss ಅಲ್ಲ, ಪೋ*ರ್ನ್​ ಷೋ ಅನ್ಬೇಡಿ ಮತ್ತೆ! ಅಷ್ಟೆಲ್ಲಾ ಕ್ಯಾಮೆರಾ ಇದ್ರೂ ಕಂಟ್ರೋಲೇ ಆಗಿಲ್ಲ ನೋಡಿ

ಬಿಗ್​ಬಾಸ್​ ಶೋ ಸ್ಕ್ರಿಪ್ಟೆಡ್ ಎನ್ನುವ ಚರ್ಚೆಗಳ ನಡುವೆಯೇ, ಹಿಂದಿ ಬಿಗ್​ಬಾಸ್​ನಲ್ಲಿ ನಡೆದ ಲಿಪ್​ಲಾಕ್​ ಘಟನೆ ವಿವಾದ ಸೃಷ್ಟಿಸಿದೆ. ಟಿಆರ್​ಪಿಗಾಗಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಕನ್ನಡ ಬಿಗ್​ಬಾಸ್​ನಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂಬುದು ಸದ್ಯದ ಸಮಾಧಾನ.

Read Full Story

08:45 PM (IST) Oct 14

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ತಮಿಳುನಾಡು ಮೂಲದ ಅಪರಾಧಿಗೆ 30 ವರ್ಷಗಳ ಶಿಕ್ಷೆ ವಿಧಿಸಿದ ಬೆಳಗಾವಿ ಕೋರ್ಟ್

ಅಪ್ರಾಪ್ತೆ ಮೇಲೆ ಅತ್ಯಾ*ಚಾರ ಎಸಗಿದ ತಮಿಳುನಾಡು ಮೂಲದ ಆರೋಪಿಗೆ ಬೆಳಗಾವಿ ಪೋಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ, ಪತ್ನಿಯನ್ನು ಕೊಲೆಗೈದ ಪತಿಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ.

Read Full Story

08:30 PM (IST) Oct 14

ಕಾವೇರಿಯಲ್ಲಿ ನೀರಿನ ಹರಿವು ಏರಿಕೆ, ಹಾರಂಗಿ ಜಲಾಶಯದಿಂದ ಮುನ್ನಚ್ಚರಿಕೆಯಿಂದ ನೀರು ಬಿಟ್ಟು ತಪ್ಪಿದ ಪ್ರವಾಹ

ಕುಶಾಲನಗರ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಜಲಾಶಯ ನಾಲ್ಕು ಬಾರಿ ಭರ್ತಿಯಾಗಿದ್ದರೂ, ಅಧಿಕಾರಿಗಳ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಯಾವುದೇ ಪ್ರವಾಹದ ಅನಾಹುತ ಸಂಭವಿಸಿಲ್ಲ.
Read Full Story

08:12 PM (IST) Oct 14

ಧರ್ಮಸ್ಥಳ ವಿರುದ್ಧ ಮಾನಹಾನಿಕರ ವೀಡಿಯೋ ಡಿಲೀಟ್ ಮಾಡಲು ಕೋರ್ಟ್ ಆದೇಶ; ಯ್ಯೂಟೂಬರ್‌ಗಳಿಗೆ 3 ದಿನ ಗಡುವು!

ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳ ವಿರುದ್ಧ ಮಾನಹಾನಿಕರ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳಿಗೆ ಬೆಂಗಳೂರಿನ ನ್ಯಾಯಾಲಯವು ಕಠಿಣ ಆದೇಶ ನೀಡಿದೆ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅಡಿಯಲ್ಲಿ, ಆಕ್ಷೇಪಾರ್ಹ ವೀಡಿಯೋ 3 ದಿನದಲ್ಲಿ ಡಿಲೀಟ್ ಮಾಡಲು ಆದೇಶ.

Read Full Story

08:04 PM (IST) Oct 14

ಮೈಸೂರು ಬೃಹತ್ ಉದ್ಯೋಗ ಮೇಳ, 24000 ಕ್ಕೂ ಹೆಚ್ಚು ಯುವಕರ ನೋಂದಣಿ, 221 ಕಂಪನಿಗಳು ಭಾಗಿ, ಯಾವಾಗ? ಇಲ್ಲಿದೆ ವಿವರ

ಮೈಸೂರಿನಲ್ಲಿ ಅಕ್ಟೋಬರ್ 17 ರಂದು ಮೆಗಾ ವಿಭಾಗೀಯ ಮಟ್ಟದ ಉದ್ಯೋಗ ಮೇಳ ನಡೆಯಲಿದ್ದು, 221 ಕಂಪನಿಗಳು 45,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಈ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ,  ಪದವೀಧರರು ಸೇರಿದಂತೆ ಯುವನಿಧಿ ಫಲಾನುಭವಿಗಳೂ ಭಾಗವಹಿಸಬಹುದು.

Read Full Story

07:45 PM (IST) Oct 14

'ಬೆಂಗಳೂರು ಹಣೆಬರಹ ಬದಲಾಗೋದಿಲ್ಲ..' ಒಂದೇ ಒಂದು ಬಿಎಂಟಿಸಿ ಬಸ್‌ ಕೆಟ್ಟು ನಿಂತಿದ್ದಕ್ಕೆ ಇಡೀ ಔಟರ್‌ ರಿಂಗ್‌ ರೋಡ್‌ ಜಾಮ್‌!

Single BMTC Bus Paralyzes Bengaluru ORR Traffic for Hours ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ (ORR) ಒಂದೇ ಒಂದು ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಈ ಘಟನೆಯಿಂದಾಗಿ ಟೆಕ್ ಕಾರಿಡಾರ್‌ನಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು.

Read Full Story

07:44 PM (IST) Oct 14

ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ? ದರ ಕುಸಿತವಾಗುವ ಸನ್ನಿವೇಶ ಬಿಚ್ಚಿಟ್ಟ ಆರ್ಥಿಕ ತಜ್ಞ ವಿಜಯ್ ರಾಜೇಶ್!

ಚಿನ್ನದ ಬೆಲೆ ಏರಿಕೆಗೆ ಅಮೆರಿಕಾದ ಆರ್ಥಿಕ ಅಸ್ಥಿರತೆ ಮತ್ತು ಜಾಗತಿಕ ಯುದ್ಧದಂತಹ ಬೆಳವಣಿಗೆಗಳು ಕಾರಣವಾಗಿವೆ. ಆರ್ಥಿಕ ತಜ್ಞ ವಿಜಯ್ ರಾಜೇಶ್ ಅವರ ಪ್ರಕಾರ, ಜಾಗತಿಕ ಆರ್ಥಿಕತೆ ಸುಧಾರಿಸುವವರೆಗೆ ಚಿನ್ನದ ಬೆಲೆಯಲ್ಲಿ ದೊಡ್ಡ ಪ್ರಮಾಣದ ಕುಸಿತದ ಸಾಧ್ಯತೆ ಕಡಿಮೆ.
Read Full Story

06:57 PM (IST) Oct 14

ಫಸ್ಟ್‌ನೈಟ್ ಮರುದಿನವೇ ವಧು ಪರಾರಿ, ಮನೆಯಲ್ಲಿದ್ದ ಹಣ-ಚಿನ್ನಾಭರಣವೂ ರಾಬರಿ; 10 ಜನರಿಂದ ದೂರು!

ಮದುವೆ ಹೆಸರಿನಲ್ಲಿ ದೊಡ್ಡ ವಂಚನೆಯ ಜಾಲವೊಂದು ಬಯಲಾಗಿದೆ. ಫಸ್ಟ್‌ನೈಟ್ ದಿನ ಕುಟುಂಬಕ್ಕೆ ಮತ್ತಿನ ಔಷಧಿ ನೀಡಿ, ಮರುದಿನ ಬೆಳಗ್ಗೆ ವಧು ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಾಳೆ. ಈ ಗ್ಯಾಂಗ್‌ನಿಂದ 10ಕ್ಕೂ ಹೆಚ್ಚು ಯುವಕರು ವಂಚನೆಗೊಳಗಾಗಿದ್ದಾರೆ.

Read Full Story

06:49 PM (IST) Oct 14

ಕೇರಳ - ಡ್ರಗ್ ಮಾರಿ ಕಂಡವರ ಮಕ್ಕಳ ಬಾವಿಗೆ ತಳ್ಳುತ್ತಿದ್ದ ಮಹಿಳಾ ವಕೀಲೆ, ಪುತ್ರ ಅರೆಸ್ಟ್

lawyer's dark secret: ಡ್ರಗ್ ಮಾರುತ್ತಿದ್ದ ವೇಳೆ ಕೇರಳದಲ್ಲಿ ಮಹಿಳಾ ವಕೀಲೆ ಹಾಗೂ ಆಕೆಯ 18 ವರ್ಷದ ಟೀನೇಜ್ ಮಗ ಸಿಕ್ಕಿಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಪೊಲೀಸರು ಇದರ ಹಿಂದೆ ದೊಡ್ಡ ಜಾಲ ಇರುವುದನ್ನು ಪತ್ತೆ ಮಾಡಿದ್ದಾರೆ.

Read Full Story

06:46 PM (IST) Oct 14

ಬಿಜೆಪಿಗರ ಡಿಎನ್‌ಎಯಲ್ಲೇ ಆ ತತ್ವವಿದೆ, ನೀಲಿ ಚಿತ್ರದ ನಾಯಕನೂ, ಚೀಟಿ ರವಿಯೂ ಅಲ್ಲೇ ಇರೋದು - ರಮೇಶ್ ಬಾಬು ಗುಡುಗು

ಎಂಎಲ್‌ಸಿ ರಮೇಶ್ ಬಾಬು ಅವರು, ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ಪತ್ರಕ್ಕೆ ವೈಯಕ್ತಿಕ ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜಿಬಿಎ ಸಭೆಯ ವಿವಾದವನ್ನು ಅನಗತ್ಯವಾಗಿ ಬೆಳೆಸಲಾಗುತ್ತಿದೆ ಬಿಜೆಪಿ   ವಿವಾದಗಳನ್ನು ಮರೆತು ಮಾತನಾಡುತ್ತಿದೆ ಎಂದರು. 

Read Full Story

06:12 PM (IST) Oct 14

'ನೀವೇ ಯಾಕೆ ಗುಂಡಿ ಮುಚ್ಬಾರ್ದು..' ರಸ್ತೆಗುಂಡಿ ಬಗ್ಗೆ ಕಿರಣ್‌ ಮಜುಂದಾರ್‌ ಶಾ ಟ್ವೀಟ್‌ಗೆ ಎಂಬಿ ಪಾಟೀಲ್‌ ಕಿಡಿ!

MB Patil Slams Kiran Mazumdar-Shaw Over Infrastructure Criticism ಬೆಂಗಳೂರಿನ ಕಳಪೆ ಮೂಲಸೌಕರ್ಯದ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಅವರ ಟೀಕೆಗೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. 

 

Read Full Story

05:43 PM (IST) Oct 14

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕ, ಕನ್ನಡಿಗ ಮಾರಿಷಸ್ ನಲ್ಲಿ ಜಲಪಾತದಲ್ಲಿ ಮುಳುಗಿ ಸಾವು!

ಮಾರಿಷಸ್‌ನಲ್ಲಿ ಹಾಸ್ಪಿಟಾಲಿಟಿ ಮತ್ತು ಟೂರಿಸಮ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿದ್ಯಾರ್ಥಿ ನಂದನ್ ಎಸ್. ಭಟ್, ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಜಲಪಾತದಲ್ಲಿ ಕಾಲು ಜಾರಿ ಬಿದ್ದು ದುರಂತ ಸಾವಿಗೀಡಾಗಿದ್ದಾರೆ.  

Read Full Story

05:33 PM (IST) Oct 14

ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪರ್ವ - ಕಂಡಕ್ಟರ್, FDA/SDA ಸೇರಿ 320ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ!

ಕರ್ನಾಟಕ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಾಗಿ ಬಂಪರ್ ಉದ್ಯೋಗಾವಕಾಶವನ್ನು ಘೋಷಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ KKRTC, BDA, KSDL ಸೇರಿದಂತೆ ಐದು ಪ್ರಮುಖ ಸಂಸ್ಥೆಗಳಲ್ಲಿ 320ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ.

Read Full Story

04:53 PM (IST) Oct 14

ಹೆಂಡತಿ ಕೊಂದು ನಾಪತ್ತೆ ನಾಟಕವಾಡಿದ ಗಂಡ; ಮನೆ ಪಕ್ಕದಲ್ಲಿದ್ದ ಕೊಳವೆ ಬಾವಿಯಲ್ಲಿತ್ತು ಪತ್ನಿ ಶವ!

ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ, ಪತಿಯೇ ಪತ್ನಿಯನ್ನು ಕೊಂದು ಶವವನ್ನು ತೋಟದ ಕೊಳವೆ ಬಾವಿಯಲ್ಲಿ ಹೂತುಹಾಕಿದ್ದಾನೆ. ನಂತರ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿ ನಾಟಕವಾಡಿದ್ದು, ಒಂದೂವರೆ ತಿಂಗಳ ತನಿಖೆಯ ನಂತರ ಪೊಲೀಸರು ಆರೋಪಿ ಪತಿ ಹಾಗೂ ಆತನ ಪೋಷಕರನ್ನು ಬಂಧಿಸಿದ್ದಾರೆ.
Read Full Story

04:47 PM (IST) Oct 14

ಕೇಂದ್ರದ ನಿರ್ಧಾರದಿಂದ ಬೆಂಗಳೂರು ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ಗೆ ಭಾರೀ ಹಿನ್ನಡೆ!

Bengaluru STRR Hits Roadblock as Centre Halts Bharatmala Projects Amid CAG Audit ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿಯಿದ್ದ ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಗೆ ಭಾರೀ ಹಿನ್ನಡೆಯಾಗಿದೆ.

Read Full Story

04:08 PM (IST) Oct 14

ಬರೋಬ್ಬರಿ 15 ವರ್ಷ ಮಾಧ್ಯಮವನ್ನೇ ಬಹಿಷ್ಕರಿಸಿ, ಸಾಲದಲ್ಲಿ ಮುಳುಗಿದ್ರೂ ಎದೆಗುಂದದೆ ಗೆದ್ದು, 1630 ಕೋಟಿ ರೂ ಆಸ್ತಿಗೆ ಒಡೆಯನಾದ ನಟ

ಮಾಧ್ಯಮ ಬಹಿಷ್ಕಾರ ಮತ್ತು ದಿವಾಳಿತನದ ಅಂಚಿಗೆ ತಲುಪಿದ್ದ  ಸ್ಟಾರ್ ನಟ ತಮ್ಮ ವೃತ್ತಿಜೀವನದ ಕರಾಳ ಹಂತವನ್ನು ಎದುರಿಸಿದ್ದರು. ಆದರೆ ಮತ್ತೆ ಪುಟಿದೆದ್ದು ಅದ್ಭುತವಾಗಿ ಪುನರಾಗಮನ ಮಾಡಿ, ಸೋಲಿನಿಂದ ಗೆಲುವಿನತ್ತ ಸಾಗಿದ ಸ್ಪೂರ್ತಿದಾಯಕ ಕಥೆಯಿದು.

Read Full Story

04:06 PM (IST) Oct 14

ಫೋನ್ ಟ್ಯಾಪಿಂಗ್ ಕೇಸ್ - ಸರ್ಕಾರದ ತನಿಖಾ ಆದೇಶ ರದ್ದು, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌ಗೆ ಜಯ

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ರದ್ದುಗೊಳಿಸಿದೆ. ಈ ತೀರ್ಪಿನಿಂದಾಗಿ, ತಡೆಹಿಡಿಯಲಾಗಿದ್ದ ಅವರ ಬಡ್ತಿ ಮತ್ತು ಇತರ ಸೌಲಭ್ಯ ನೀಡಲು ಆದೇಶಿಸಿದೆ.

Read Full Story

03:39 PM (IST) Oct 14

ಪರಿವಾಳದ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಅಗ್ನಿಶಾಮಕ ಸಿಬ್ಬಂದಿ

Firefighter death: ಪರಿವಾಳದ ಜೀವ ಉಳಿಸಲು ಹೋಗಿ ಅಗ್ನಿ ಶಾಮಕ ಸಿಬ್ಬಂದಿಯೋರ್ವ ಪ್ರಾಣ ಬಿಟ್ಟಂತಹ ಮನಕಲುಕುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಇನ್ನೋರ್ವ ವ್ಯಕ್ತಿ ಕರೆಂಟ್ ಶಾಕ್ ತಗುಲಿ ಗಾಯಗೊಂಡಿದ್ದಾರೆ

Read Full Story

03:35 PM (IST) Oct 14

ನಮ್ಮ ಮೆಟ್ರೋದಲ್ಲಿ ಭಿಕ್ಷಾಟನೆ; ರೈತನನ್ನು ತಡೆದಿದ್ದ ಮೆಟ್ರೋ ಸಿಬ್ಬಂದಿ ಈಗೇನ್ ಕಣ್ಮುಚ್ಚಿ ಕುಳಿತಿದ್ದಾರಾ?

ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಭಿಕ್ಷಾಟನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಬಿಎಂಆರ್‌ಸಿಎಲ್‌ನ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

02:59 PM (IST) Oct 14

ಗ್ರಾಜುಯೇಷನ್‌ಡೇ ಇಷ್ಟೊಂದು ದುಬಾರಿ ನಾ - ಡಿಸ್ಟಿಂಕ್ಷನ್ ಗಳಿಸಿದ್ರೂ ವೆಚ್ಚ ಭರಿಸಲಾಗದೇ ಅತಿಥಿಯಂತೆ ಭಾಗಿಯಾದ ಯುವತಿ

ಗ್ರಾಜುಯೇಷನ್ ಡೇ ಇಷ್ಟೊಂದು ದುಬಾರಿನಾ, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಗ್ರಾಜುಯೇಷನ್ ಡೇನಲ್ಲಿ ಭಾಗವಹಿಸಲಾಗದೇ ವಿದ್ಯಾರ್ಥಿಯಾಗಿ ಹೋಗುವ ಬದಲು ಅತಿಥಿಯಂತೆ ಹೋಗಬೇಕಾಯ್ತು  ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದು ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Read Full Story

02:51 PM (IST) Oct 14

ಮಕ್ಕಳ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್!

ಜೀ ಕುಟುಂಬ ಪ್ರಶಸ್ತಿ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಂಸದ ಯದುವೀರ್ ಒಡೆಯರ್, ವೇದಿಕೆಯ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ಅವರು 'ಕರ್ಣ' ಧಾರಾವಾಹಿಯ ನಟ ಕಿರಣ್ ರಾಜ್ ಅವರಿಗೆ ಜನಪ್ರಿಯ ನಟ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
Read Full Story

02:11 PM (IST) Oct 14

ಬೆದರಿಕೆ ಕರೆಗಳಿಗೆ ಜಗ್ಗಲಾರೆ, ಹೋರಾಟ ನಿಲ್ಲಿಸಲಾರೆ - ಸಚಿವ ಪ್ರಿಯಾಂಕ್ ಖರ್ಗೆ ಗುಡುಗು!

ಸಚಿವ ಪ್ರಿಯಾಂಕ್ ಖರ್ಗೆ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಬರುತ್ತಿರುವ ಬೆದರಿಕೆ ಕರೆಗಳ ಕುರಿತು ಮಾತನಾಡಿದ್ದು, ಇಂತಹ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಮತ್ತು ತಮ್ಮ ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. 

Read Full Story

02:03 PM (IST) Oct 14

ಸೌಂದರ್ಯವಿದ್ದರೂ ಅದೃಷ್ಟವಿಲ್ಲದ ಕೃತಿ ಶೆಟ್ಟಿಗೆ ಕಾಲಿವುಡ್ ಕೈ ಹಿಡಿಯುವುದೇ? ತೆಲುಗಿನಿಂದ ತಮಿಳಿಗೆ ಹಾರಿದ ಬೇಬಮ್ಮ!

ತೆಲುಗಿನಲ್ಲಿ ಸಿನಿಮಾ ಅವಕಾಶಗಳು ಕಡಿಮೆಯಾದ ಕಾರಣ ನಟಿ ಕೃತಿ ಶೆಟ್ಟಿ ಈಗ ತಮಿಳು ಚಿತ್ರರಂಗದಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಕೈಯಲ್ಲಿರುವ ತಮಿಳು ಚಿತ್ರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

Read Full Story

01:44 PM (IST) Oct 14

ಫೇಕ್ ಕರೆಗಳನ್ನು ನೀವೇ ಮಾಡಿಸಿ ಕಪಟ ನಾಟಕ ಮಾಡಬೇಡಿ - ಪ್ರಿಯಾಂಕ್ ಆರೋಪಕ್ಕೆ ರೇಣುಕಾಚಾರ್ಯ ತಿರುಗೇಟು

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರ್ತಿಲ್ಲ. ಜೀವ ಬೆದರಿಕೆ ವಿಚಾರವನ್ನು ಸ್ವಯಂ ಸೃಷ್ಟಿ ಮಾಡಿಕೊಂಡಿದ್ದಾರೆ. ಫೇಕ್ ಕರೆಗಳನ್ನು ನೀವೇ ಮಾಡಿಸಿ ಕಪಟ ನಾಟಕ ಮಾಡಬೇಡಿ ಎಂದು ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.

Read Full Story

01:36 PM (IST) Oct 14

ನಗುವಿನ ರಾಜಕುಮಾರ 'ಅಪ್ಪು ಸ್ಫೂರ್ತಿ' ಇನ್ನು ಅಂಗೈಯಲ್ಲಿ - ಅಶ್ವನಿ ಸಿದ್ಧಪಡಿಸಿದ PRK ಆ್ಯಪ್ ರಹಸ್ಯವೇನು?

ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಮತ್ತು ಅವರ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲು 'PRK ಮೊಬೈಲ್ ಅಪ್ಲಿಕೇಶನ್' ಸಿದ್ಧಗೊಂಡಿದೆ. ಈ ಆ್ಯಪ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಭೇಟಿ ಮಾಡಿದರು.

Read Full Story

01:23 PM (IST) Oct 14

ಕಾಂತಾರ ಚಾಪ್ಟರ್ 1 ಮಾತ್ರವಲ್ಲ... 2025ರಲ್ಲಿ ಇಷ್ಟೊಂದು ಸಿನಿಮಾಗಳು 500 ಕೋಟಿಗೂ ಹೆಚ್ಚು ಬಾಚಿವೆಯೇ?

ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಜೊತೆಗೆ ಈ ವರ್ಷ ಬಿಡುಗಡೆಯಾದ ಬೇರೆ ಯಾವ ಸಿನಿಮಾಗಳು 500 ಕೋಟಿ ಗಳಿಸಿವೆ ಎಂಬುದನ್ನು ನೋಡೋಣ.

Read Full Story

01:21 PM (IST) Oct 14

ಇಶಿತ್ ಭಟ್, ವಿರಾಟ್ ಅಯ್ಯರ್ ಬೆನ್ನಲ್ಲೇ ಸಮೀರ್ ಆಚಾರ್ಯ ಹಳೆ ವಿಡಿಯೋ ವೈರಲ್

Viral Videos: ಕೆಬಿಸಿ ಶೋನಲ್ಲಿ ಬಾಲಕರ ಅತಿರೇಕದ ವರ್ತನೆ ಚರ್ಚೆಯಾಗುತ್ತಿದ್ದಂತೆ, ಕನ್ನಡ ಕೋಟ್ಯಧಿಪತಿಯ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧಾರ್ಮಿಕ ಪಂಡಿತರಾದ ಸಮೀರ್ ಆಚಾರ್ಯ ಸ್ಪರ್ಧಿಯಾಗಿದ್ದರು.

Read Full Story

01:19 PM (IST) Oct 14

ಡಿಜಿಟಲ್ ಅರೆಸ್ಟ್‌ಗಾಗಿಯೇ ನಕಲಿ ಬಿಪಿಒ ಸ್ಥಾಪನೆ - HSR ಲೇಔಟ್ ಪೊಲೀಸರ ದಾಳಿ - 16 ಉತ್ತರ ಭಾರತೀಯರ ಬಂಧನ

indians Cyber fraud on US citizens: ಸೈಬರ್ ವಂಚನೆ ಡಿಜಿಟಲ್ ಆರೆಸ್ಟ್ ಮೂಲಕ ಜನರನ್ನು ಮುಳುಗಿಸಿ ಬದುಕು ಸರ್ವನಾಶ ಮಾಡುವುದಕ್ಕೆ ಇಲ್ಲಿ ನಕಲಿ ಬಿಪಿಒವೊಂದನ್ನು ಸ್ಥಾಪಿಸಲಾಗಿದ್ದು, ಇದರ ಮೇಲೆ ದಾಳಿ ಮಾಡಿದ ಪೊಲೀಸರು 16 ಜನರನ್ನು ಬಂಧಿಸಿದ್ದಾರೆ.

Read Full Story

12:55 PM (IST) Oct 14

ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದ್ದು, ಹೈಕಮಾಂಡ್ ಕನ್ಸಿಡರ್ ಮಾಡ್ತಾರೆ - ಶಾಸಕ ಎಚ್‌.ಸಿ.ಬಾಲಕೃಷ್ಣ

ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ, ನನಗೂ ಸೀನಿಯರಿಟಿ ಇದೆ. ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನನ್ನನ್ನೂ ಕನ್ಸಿಡರ್ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು.

Read Full Story

12:26 PM (IST) Oct 14

ಶಾಸಕರ ಅಭಿಪ್ರಾಯ ಕೇಳಿ ಹೈಕಮಾಂಡ್‌ ನಿರ್ಧಾರ - ಸಚಿವ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಗಳು ಶಾಸಕರ ಅಭಿಪ್ರಾಯದ ಮೇಲೆಯೇ ಆಗುವಂಥದ್ದು, ಕೆಲವೊಮ್ಮೆ ಸಂಖ್ಯೆ ಹೆಚ್ಚು ಕಡಿಮೆ ಆಗಬಹುದು. ಪರಿಸ್ಥಿತಿ ತಿಳಿಯದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Read Full Story

11:29 AM (IST) Oct 14

ಬಿಜೆಪಿ ನಾಯಕರಿಂದ ‘ಐ ಲವ್‌ ಆರ್‌ಎಸ್‌ಎಸ್‌’ ಅಭಿಯಾನ - ಪ್ರಿಯಾಂಕ್ ಖರ್ಗೆಗೆ ಟಾಂಗ್‌

ಪ್ರಿಯಾಂಕ್‌ ಖರ್ಗೆಯವರು ಸರ್ಕಾರದ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸಿಎಂನವರಿಗೆ ಪತ್ರ ಬರೆದ ಬೆನ್ನಲ್ಲೇ ಬಿಜೆಪಿ ನಾಯಕರು ಬೀದಿಗಿಳಿದು, ‘ಐ ಲವ್‌ ಆರ್‌ಎಸ್‌ಎಸ್‌’ ಪೋಸ್ಟರ್‌ ಅಭಿಯಾನ ಶುರು ಮಾಡಿದ್ದಾರೆ.

Read Full Story

More Trending News