ಅಯೋಧ್ಯೆಯಲ್ಲಿ ರಾಮ ಮಂದಿರ ಹುಂಡಿ ಕಳವು ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲಿ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಅಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ‘ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.‘ಹುಂಡಿ ಇರುವ ಸ್ಥಳ, ಹಣ ಎಣಿಕೆ ಸ್ಥಳ ಸೇರಿದಂತೆ ದೇವಸ್ಥಾನದ ಎಲ್ಲ ಭಾಗಗಳಲ್ಲಿ ಸಿಸಿಟಿವಿ ಹಾಕಲಾಗುತ್ತದೆ. ದೇಗುಲದ ಚಟುವಟಿಕೆಗಳ ಮೇಲೆ ದಿನದ 24 ಗಂಟೆ ನಿಗಾ ಇಡಲಾಗುತ್ತದೆ ಎಂದರು.
ಮತ್ತೊಂದು ಕಡೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಬೆಳಗಾವಿ ಸಜ್ಜುಗೊಂಡಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಸಂಘದ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ.
ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿನಗರದಲ್ಲಿರುವ ಸಂಘದ ಕಚೇರಿ ಹಾಗೂ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ. ಪ್ರಮುಖ ಚರ್ಚೆಗಳು ಸಂತ ಮೀರಾ ಶಾಲೆಯಲ್ಲೇ ನಡೆಯಲಿದ್ದು, ಸಭಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
11:22 PM (IST) Jul 10
ವಂಚನೆ ಮತ್ತು ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ 140 ಮತ್ತು 1600 ಸರಣಿಯ ನಂಬರ್ಗಳ ಬಗ್ಗೆ ಹರಡಿರುವ ಗೊಂದಲಗಳಿಗೆ ಟ್ರಾಯ್ ಇದೀಗ ಅಧಿಕೃತ ಸ್ಪಷ್ಟನೆ ನೀಡಿದೆ.
11:05 PM (IST) Jul 10
ಅಯೋಗ್ಯ-2 ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ.
10:48 PM (IST) Jul 10
ಆಹಾರದ ವಿಷಯಕ್ಕೆ ಬಂದಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಆದ್ದರಿಂದ ಈ ಮಳೆಗಾಲದಲ್ಲಿ ಸೇವನೆ ಮಾಡಲು ಚಿಕನ್ ಬೆಸ್ಟಾ ಅಥವಾ ಮಟನ್ ಬೆಸ್ಟಾ? ಇಲ್ಲಿದೆ ಸಂಪೂರ್ಣ ವಿವರ.
09:20 PM (IST) Jul 10
Relationship Issues: ವಿಚ್ಛೇದನ (Divorce) ಅನ್ನೋದು ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಅಥವಾ ಕೋರ್ಟ್ ಆದೇಶದ ಮೂಲಕ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ಕಾನೂನು ಪ್ರಕ್ರಿಯೆ.
08:59 PM (IST) Jul 10
ಒಬ್ಬ ವ್ಯಕ್ತಿ ಚಿನ್ನದ ಗಟ್ಟಿ ಸಿಕ್ಕಂತೆ ಕನಸು ಕಂಡರು. ಆಶ್ಚರ್ಯಕರವಾಗಿ, 12 ದಿನಗಳ ನಂತರ ನಡೆದದ್ದು ಪವಾಡ. ಈ ಘಟನೆಯು ಅವರ ಕನಸನ್ನು ನನಸಾಗಿಸಿ, ಅವರ ಜೀವನವನ್ನೇ ಬದಲಾಯಿಸಿತು. ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
08:49 PM (IST) Jul 10
Ramayana Movie: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದಾರೆ.
08:33 PM (IST) Jul 10
ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.
08:24 PM (IST) Jul 10
ರಿಷಬ್ ಶೆಟ್ಟಿ ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಬೆಂಬಲ ಮತ್ತು ಮಾರ್ಗದರ್ಶನ ರಿಷಬ್ ಅವರ ಪಯಣಕ್ಕೆ ಮತ್ತಷ್ಟು ಶಕ್ತಿ ನೀಡಿದಂತಿದೆ. ಕಾಂತಾರ ಅಂಗಳಕ್ಕೆ ಕಿಚ್ಚ ಸುದೀಪ್ ಕೂಡ ಬರ್ತಾರಾ?
08:19 PM (IST) Jul 10
ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯೊಂದರ ವೇಳೆ, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರೊಬ್ಬರು ನ್ಯಾಯಪೀಠಕ್ಕೆ ಆದೇಶ ನೀಡಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
07:54 PM (IST) Jul 10
ಭಾರಿ ಮಳೆಯಲ್ಲಿ ನೆನೆಯುತ್ತಾ ಬಂದು ಆಹಾರ ತಲುಪಿಸಿದ ಜೊಮ್ಯಾಟೊ ರೈಡರ್ಗೆ ಗ್ರಾಹಕನೊಬ್ಬ ಬಿಸಿ ಚಹಾ ನೀಡಿ ಆತಿಥ್ಯ ನೀಡಿದ ಘಟನೆ ವೈರಲ್ ಆಗಿದೆ. "ಕೆಲಸ ಮಾಡದಿದ್ದರೆ ಮನೆಯವರ ಬೈಗುಳ ಕೇಳಬೇಕು" ಎಂದು ರೈಡರ್ ಹೇಳಿದ ಮಾತು ಇಂಟರ್ನೆಟ್ನಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಗಿಗ್ ಉದ್ಯೋಗಿಗಳು ಎದುರಿಸುವ ಕಠಿಣ ಸಾಮಾಜಿಕ ಮತ್ತು ಮಾನಸಿಕ ಒತ್ತಡವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ.
07:46 PM (IST) Jul 10
Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
07:34 PM (IST) Jul 10
'ಸಪ್ತ ಸಾಗರದಾಚೆ ಎಲ್ಲೊ' ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದ ನಿರ್ದೇಶಕ ಹೇಮಂತ್ ರಾವ್ ಸದ್ಯ ಶಿವರಾಜ್ಕುಮಾರ್ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
07:25 PM (IST) Jul 10
ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.
07:16 PM (IST) Jul 10
ಅಮರನಾಥ ಯಾತ್ರೆಯ ಕಠಿಣ ಹಾದಿಯಲ್ಲಿ ದಣಿದ ಯಾತ್ರಾರ್ಥಿಯೊಬ್ಬರಿಗೆ ಭಾರತೀಯ ಸೈನಿಕರೊಬ್ಬರು ಧೈರ್ಯ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಯೋಧನ ಮಾತು ಹೃದಯ ಮುಟ್ಟುವಂತಿದೆ. ಅಷ್ಟಕ್ಕೂ ಯೋಧ ಮಾಡಿದ್ದೇನು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
07:14 PM (IST) Jul 10
ಆಮೀರ್ ಖಾನ್ ಈ ಬಾರಿ ಕೈಹಾಕಿರುವುದು ಸಣ್ಣಪುಟ್ಟ ಕಥೆಗಲ್ಲ. 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ನಡೆದ ರೋಚಕ ರಕ್ಷಣಾ ಕಾರ್ಯಾಚರಣೆಯನ್ನೇ ಬೆಳ್ಳಿತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ.
06:23 PM (IST) Jul 10
06:11 PM (IST) Jul 10
ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಸತತ ಸೋಲು ಕಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಆದರೂ ಇಂಗ್ಲೆಂಡ್ಗೆ ಭಾರತದ ಭಾರಮೊತ್ತ ಸುಲಭದ ತುತ್ತಾಯಿತು. ಈ ಹಿನ್ನೆಯಲ್ಲಿ ಶ್ರೇಯಸ್ ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನಗೊಂಡಿದ್ದಾರೆ.
05:48 PM (IST) Jul 10
05:43 PM (IST) Jul 10
ಪ್ರಜ್ವಲ್ ದೇವರಾಜ್ (Prajwal Devaraj) ಮುಖ್ಯ ಭೂಮಿಕೆಯ 'ಕರಾವಳಿ' (Karavali) ಚಿತ್ರದ ವಿವಾದ ದಿನದಿನಕ್ಕೂ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಲೇ ಇದೆ. ಇದೀಗ ಕರಾವಳಿ ಚಿತ್ರೆದ ನಿರ್ದೇಶಕರಾಗಿರುವ ಗುರುದತ್ ಗಾಣಿಗ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮುಂದೇನು?
05:36 PM (IST) Jul 10
ನಟಿ ಹರ್ಷಿಕಾ ಪೂಣಚ್ಚ ಇದೀಗ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 70ರ ದಶಕದ ವಿಂಟೇಜ್ ಸ್ಟೈಲ್ನಲ್ಲಿ ಡಾ.ರಾಜ್ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಹೊಸ ಲುಕ್ನಲ್ಲಿ ಮಿಂಚಿದ್ದಾರೆ.
05:31 PM (IST) Jul 10
ಸುಕನ್ಯಾ ಸಮೃದ್ಧಿ ಯೋಜನೆಯು 'ಬೇಟಿ ಬಚಾವೋ, ಬೇಟಿ ಪಡಾವೋ' ಅಭಿಯಾನದ ಭಾಗವಾಗಿ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ ಎಷ್ಟು ಹಣ ಹೂಡಿಕೆ ಮಾಡಿದರೆ, 50 ಲಕ್ಷ ದೊರೆಯುತ್ತದೆ? ಇಲ್ಲಿದೆ ಸಂಪೂರ್ಣ ವಿವರ.
05:21 PM (IST) Jul 10
05:08 PM (IST) Jul 10
‘ಕನ್ನಡ ಚಿತ್ರರಂಗದಲ್ಲಿ ಯಾರ ಬಗ್ಗೆ ಯಾರಿಗೂ ಭರವಸೆ ಇಲ್ಲ. ಆದರೆ ಎಷ್ಟೇ ಕಷ್ಟ ಆದರೂ ರೈತರು ಬಿತ್ತಿ ಉಳುವುದನ್ನು ಬಿಡುವುದಿಲ್ಲ. ಹಾಗೇ ನಾವೂ ಸಿನಿಮಾ ಮಾಡುತ್ತಿದ್ದೇವೆ’.ಇದು ಜಟ್ಟ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್ ಮಾತು.
04:58 PM (IST) Jul 10
ಇಂದು ಚಿನ್ನದ ಬೆಲೆಯಲ್ಲಿ ಬದಲಾವಣೆಯಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀಯ ಬೇಡಿಕೆಗಳು ಇದರ ಮೇಲೆ ಪರಿಣಾಮ ಬೀರಿವೆ. ಅಲ್ಲದೇ 10 ಗ್ರಾಂ ಉಂಗುರ ತಯಾರಿಸಲು ತಗಲುವ ಒಟ್ಟು ವೆಚ್ಚವನ್ನು ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.
04:51 PM (IST) Jul 10
Ayogya 2: ಅದು ಅಯೋಗ್ಯ 2 ಹಾಡು ಬಿಡುಗಡೆಯ ಪ್ರೆಸ್ಮೀಟ್. ಗಣ್ಯರಿಂದ ಹಾಡು ಬಿಡುಗಡೆಯಾಯ್ತು. ಹಾಡು ಬರೆದವರು ಬಹದ್ದೂರ್ ಚೇತನ್. ಹಾಡು ಕೇಳಿದ ನಂತರ ಅದರಲ್ಲಿನ ಲೋಪದ ಬಗ್ಗೆ ಮಾತು ಬಂತು.
04:35 PM (IST) Jul 10
ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್ ಲಿಟರೇಚರ್ ಆಂಡ್ ಪರ್ಫಾರ್ಮೆನ್ಸ್ ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್ ಇದು ಎಂದು ಸಂದರ್ಶನದಲ್ಲಿ ಇಶಾ ಲಂಕೇಶ್ ಹೇಳಿದರು.
04:20 PM (IST) Jul 10
ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ, ಪೂರ್ಣಚಂದ್ರ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಸಿನಿಮಾ ಇಂದು ಬಿಡುಗಡೆ. ಈ ನಿಮಿತ್ತ ಅಂತರಂಗದ ಮಾತು ಆಡಿದ ನಟ. ತಮ್ಮನ್ನು ತಾವು ಮರುಶೋಧಿಸಿಕೊಳ್ಳುವ ಯತ್ನವೇ ‘ಮದರ್ ಪ್ರಾಮಿಸ್’ ಎಂದ ಡಾಲಿ.
04:09 PM (IST) Jul 10
LPG ಗ್ಯಾಸ್ ಬಳಕೆದಾರರಿಗೆ ಹೊಸ ನಿಯಮಗಳು ಜಾರಿಗೆ ಬಂದಿದೆ. ಅಲ್ಲದೆ, ಹೊಸ ಮನೆಗೆ ಅಥವಾ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವಾಗ ಎಲ್ಪಿಜಿ ಸಂಪರ್ಕವನ್ನು ಹೇಗೆ ವರ್ಗಾಯಿಸಬೇಕು ಎಂಬುದರ ಕುರಿತು ಇಲ್ಲಿದೆ ಇನ್ಸೈಡ್ ಸ್ಟೋರಿ!
03:52 PM (IST) Jul 10
Jodi No 1 Show Season 3 Winner Name: ಸೆಲೆಬ್ರಿಟಿಗಳ ಜೋಡಿಗಳು ಸ್ಪರ್ಧೆ ಮಾಡಿದ್ದ ‘ಜೋಡಿ ನಂ 1’ ಸೀಸನ್ 3 ರಿಯಾಲಿಟಿ ಶೋ ಈಗ ಫೈನಲ್ ಹಂತಕ್ಕೆ ಬಂದಿದೆ, ಇದರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹಾಗಾದರೆ ಈ ಬಾರಿ ಯಾರು ಗೆಲ್ಲುತ್ತಾರೆ?
03:43 PM (IST) Jul 10
ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
03:25 PM (IST) Jul 10
"ದಿನಾ ನನ್ನಿಂದ ಬೈಗುಳ ತಿನ್ನಬೇಕು ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ ನಿರೀಕ್ಷಿಸಬಾರದು" ಎಂದು ಅಮೆರಿಕದ ಸ್ಟಾರ್ಟ್ಅಪ್ ಸಿಇಒ ಒಬ್ಬರು ಭಾರತೀಯ ಇಂಜಿನಿಯರ್ಗೆ ನೀಡಿದ ವಿಷಕಾರಿ ಉದ್ಯೋಗದ ಆಫರ್ ರೆಡ್ಡಿಟ್ನಲ್ಲಿ ವೈರಲ್ ಆಗಿದೆ. ಉದ್ಯೋಗದ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡಲು ಮುಂದಾದ ಸಿಇಒ ಧೋರಣೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕೆಲಸವನ್ನು ಒಪ್ಪದಂತೆ ಇಂಜಿನಿಯರ್ಗೆ ಸಲಹೆ ನೀಡಿದ್ದಾರೆ.
03:22 PM (IST) Jul 10
ಪ್ರೀತಿ ಪ್ರೇಮದ ನೆಪದಲ್ಲಿ ಹೊರ ರಾಜ್ಯದ ಯುವತಿಯನ್ನು ನಂಬಿಸಿ ಅತ್ಯಾ೧ಚಾರ ನಡೆಸಿದಲ್ಲದೆ ನಂತರ ಅಬಾರ್ಷನ್ ಕೂಡ ಮಾಡಿಸಿ ವಂಚಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ
02:41 PM (IST) Jul 10
02:09 PM (IST) Jul 10
ಸದ್ಯ ತಬಾಹಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಸುನಾಮಿ ಹಾಗೂ ಸುಂಟರಗಾಳಿ ಎಬ್ಬಿಸಿದೆ. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ ಕಂಡು ಅಕ್ಷರಶಃ ಯೂಟ್ಯೂಬ್ನ ಹೈಜಾಕ್ ಮಾಡಿದ್ದು, ಸರಸ, ಸಮರ ಹಾಗೂ ಸಲ್ಲಾಪದ ಮೂಲಕ ಆಡಿಯನ್ಸ್ನ ಕಣ್ಮನ ಸೆಳೆದಿದೆ.
01:51 PM (IST) Jul 10
CM DK Shivakumar City round's Photos: ಬೆಳಗಾವಿಯಿಂದ ಆಗಮಿಸುತ್ತಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್ಪಾತ್ ತೆರವು ಕಾರ್ಯಾಚರಣೆ ಹಿನ್ನೆಲೆ ಖುದ್ದಾಗಿ ಸಿಟಿ ರೌಂಡ್ ನಡೆಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಿದರು.
01:46 PM (IST) Jul 10
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊಡ್ಡ ತಿಮಿಂಗಲವನ್ನೇ ಬೇಟೆ ಆಡಿದ್ದಾರೆ. ಅಧಿಕಾರಿ ಒಬ್ಬರ ಮನೆಯ ಗೋಡೆಯೊಳಗೆ ಹಣದ ಖಜಾನೆಯೇ ಪತ್ತೆಯಾಗಿದ್ದು, ದಾಳಿ ನಡೆಸಿದ್ದ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಏನೆಲ್ಲ ಸಿಕ್ಕಿದೆ ಅನ್ನೋ ಮಾಹಿತಿ ಇಲ್ಲಿದೆ.
01:20 PM (IST) Jul 10
01:04 PM (IST) Jul 10
ಹೊಲದಲ್ಲಿ ರಾಶಿ ರಾಶಿ ಅಣಬೆಗಳು ಕಂಡ ಮಾಲೀಕರು ಖುಷಿಯಿಂದ ಅವುಗಳನ್ನ ಮನೆಗೆ ತಂದು ಸಂಬಾರ್ ಮಾಡಿದ್ದರು. ಅದನ್ನು ಸೇವಿಸಿದ್ದ 9 ಮಂದಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಅಷ್ಟಕ್ಕೂ ಅಸಲಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ..
01:02 PM (IST) Jul 10
12:36 PM (IST) Jul 10
Ananda Nilaya kannada serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ‘ಆನಂದ ನಿಲಯʼ ಎನ್ನುವ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯಲ್ಲಿ ದಿವ್ಯಾ ಶ್ರೀಧರ್, ಚಿತ್ಕಳಾ ಬಿರಾದಾರ್ ಕೂಡ ನಟಿಸುತ್ತಿದ್ದಾರೆ. ಈಗ ಈ ಸೀರಿಯಲ್ ಪ್ರೋಮೋ ರಿಲೀಸ್ ಆಗಿದೆ.