ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಮತ್ತು ಅವರು ಕೆಲವೇ ತಿಂಗಳು ಬದುಕುತ್ತಾರೆ ಎಂದು ವೈದ್ಯೆ ಹೇಳುವ ದೃಶ್ಯವು ವಿವಾದಕ್ಕೆ ಕಾರಣವಾಗಿದೆ. ಕ್ಯಾನ್ಸರ್‌ನಿಂದ ಗುಣಮುಖರಾದವರು ಅನೇಕರಿದ್ದು, ಇಂತಹ ಸೂಕ್ಷ್ಮ ವಿಷಯಗಳನ್ನು ಚಿತ್ರಿಸುವಾಗ ಜವಾಬ್ದಾರಿಯುತವಾಗಿರಬೇಕು ಎಂದು ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೀರಿಯಲ್​ಗಳು ಎಂದರೆ ಅದು ಕೇವಲ ಇಂದು ಸೀರಿಯಲ್​ ಆಗಿ ಉಳಿದಿಲ್ಲ. ಅದೆಷ್ಟೋ ವೀಕ್ಷಕರ ಅದರಲ್ಲಿಯೂ ಮಹಿಳೆಯರ ಜೀವನದ ಭಾಗವಾಗಿದೆ. ಸೀರಿಯಲ್​ಗಳಲ್ಲಿ ಬರುವುದು ಎಲ್ಲವೂ ಸುಳ್ಳು, ಎಲ್ಲವೂ ಕೇವಲ ಕಥೆಗಳು ಎಂದು ತಿಳಿಯದ ಮನಸ್ಸುಗಳು ಅದೆಷ್ಟೋ ಇಂದಿಗೂ ಇವೆ. ಏಕೆಂದರೆ ಬದುಕಿನ ಭಾಗವಾಗಿ ಹಲವು ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ನಾಟುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಕೇವಲ ಸೀರಿಯಲ್​ ಎಳೆಯುವುದಕ್ಕಾಗಿಯೋ ಅಥವಾ ಇನ್ನಾವುದೋ ಕಾರಣಕ್ಕೆ ಬರುವ ಕೆಲವೊಂದು ಸನ್ನಿವೇಶಗಳು ಅದೆಷ್ಟೋ ವೀಕ್ಷಕರ ಬದುಕನ್ನು ನರಕಕ್ಕೆ ದೂಕಬಹುದು ಇಲ್ಲವೇ ವರದಾನವೂ ಆಗಬಹುದು. ಆದರೆ ಅಂಥ ಸೂಕ್ಷ್ಮತೆಯನ್ನು ಸೀರಿಯಲ್​ ಬರೆಯುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಕ್ಯಾನ್ಸರ್​ ಅಥವಾ ಇನ್ನಾವುದೇ ರೋಗದ ಬಗ್ಗೆ ಹೇಳುವಾಗ, ಮುಂದೇ ಏನಾಗತ್ತೋ ಗೊತ್ತಿಲ್ಲ, ಆದರೆ ಆ ಕ್ಷಣದಲ್ಲಿ ಹೇಳುವ ಆಘಾತಕಾರಿ ಮಾತುಗಳು ಜನರ ಜೀವವನ್ನೇ ನರಕ ಮಾಡಬಹುದು. ಅದರಲ್ಲಿಯೂ ಅಲ್ಲಿರುವ ವೈದ್ಯರು ಬಣ್ಣ ಹಚ್ಚಿದ ನಕಲಿ ವೈದ್ಯರು ಮಾತ್ರ, ಇವರು ಸೀರಿಯಲ್​ ಪಾತ್ರಧಾರಿಗಳು ಎನ್ನುವ ಅರಿವು ಇಲ್ಲದ ಮನಸ್ಸುಗಳು ಇರುವಾಗ, ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಧೈರ್ಯ ತುಂಬುವ ಮಾತನಾಡಬೇಕೇ ವಿನಾ ಸಾವಿನ ಮಾತಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೃತಧಾರೆ ಸೀರಿಯಲ್​ (Amruthadhaare Serial) ಜನರು ವರ್ಷಗಳಿಂದ ಮೆಚ್ಚಿಕೊಂಡು ಬಂದಿದ್ದಾರೆ. ಅದರಲ್ಲಿರುವ ನವೀರಾದ ಪ್ರೇಮಕಥೆ, ವಿರಹ ವೇದನೆ, ಕೊನೆಗೆ ಭೂಮಿಕಾ-ಗೌತಮ್​ ಒಂದಾಗಿದ್ದು ಎಲ್ಲವೂ ರೋಚಕ ತಿರುವಿನ ಜೊತೆ ಸಾಗಿ ಜನರನ್ನು ಸೀರಿಯಲ್​ ನೋಡಲು ಇನ್ನಷ್ಟು ಹತ್ತಿರ ಮಾಡಿರುವುದು ಸುಳ್ಳಲ್ಲ. ಇದೀಗ ಸೀರಿಯಲ್​ ಎಳೆಯುವುದಕ್ಕಾಗಿ ಟ್ವಿಸ್ಟ್ ತರಲಾಗಿದೆ. ಅದೂ ಸರಿ. ಇಲ್ಲಿ ಭೂಮಿಕಾಗೆ ಬ್ರೆಸ್ಟ್​ ಕ್ಯಾನ್ಸರ್​ ಎಂದು ಹೇಳಲಾಗಿದೆ. ಅದೂ ಓಕೆ, ಸೀರಿಯಲ್​ ಕುತೂಹಲ ಬರಲಿ ಎನ್ನುವ ಕಾರಣಕ್ಕೆ ಈ ಟ್ವಿಸ್ಟ್​ ನೀಡಿರಬಹುದು ಅಥವಾ ಕ್ಯಾನ್ಸರ್​ ಅನ್ನು ಗೆದ್ದು ಭೂಮಿಕಾ ಎಲ್ಲರಿಗೂ ಮಾದರಿಯೂ ಆಗಬಹುದು. ಮುಂದಿನ ಮಾತು ಏನೇ ಇರಲಿ. ಆದರೆ ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ವೈದ್ಯೆ ಹೇಳಿದ ಮಾತು ಅದೆಷ್ಟೋ ಮನಸ್ಸುಗಳನ್ನು ಚೂರು ಚೂರು ಮಾಡಿದ್ದಂತೂ ನಿಜ. ಇಲ್ಲಿ ಬ್ರೆಸ್ಟ್​ ಕ್ಯಾನ್ಸರ್​ಗೆ ಸಾವೇ ಅಂತಿಮ ಎನ್ನುವ ರೀತಿಯಲ್ಲಿ ವೈದ್ಯೆ ಹೇಳಿದ್ದರಿಂದ ನೆಟ್ಟಿಗರು ಕಿಡಿಕಿಡಿಯಾಗಿದ್ದಾರೆ. ಅದರಲ್ಲಿಯೂ ಬ್ರೆಸ್ಟ್​ ಕ್ಯಾನ್ಸರ್​ ಬಂದಾಗ ಏನೇನಾಗುತ್ತದೆ ಎಂದು ವೈದ್ಯೆ ಹೇಳಿರುವುದು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.

ಹೋಮಿಯೋಪಥಿಯಲ್ಲಿದೆ ಔಷಧ

ಇಂದು ಬ್ರೆಸ್ಟ್​ ಕ್ಯಾನ್ಸರ್​ನಿಂದ ಎಷ್ಟೋ ಜನ ಬಳಲುತ್ತಿದ್ದಾರೆ. ಅಲೋಪಥಿಯಲ್ಲಿ ಗುಣಪಡಿಸಿಕೊಳ್ಳಲು ಆಗದೇ ಇದ್ದವರು ಹೋಮಿಯೋಪಥಿ ಔಷಧದಿಂದ ಎಲ್ಲಾ ರೀತಿಯ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದು ನಮ್ಮ ಕಣ್ಣಮುಂದೆ ಇದೆ. ಮತ್ತೆ ಕೆಲವು ಬ್ರೆಸ್ಟ್​ ಕ್ಯಾನ್ಸರ್​ ರೋಗಿಗಳು ಕಿಮೋಥೆರಪಿ ಬಳಿಕವೂ ಯೋಗ, ಧ್ಯಾನ, ಮುದ್ರೆಗಳಿಂದ, ಸೂಕ್ತ ಡಯೆಟ್​ ಪಾಲಿಸಿ ಗುಣಹೊಂದಿದ್ದಾರೆ. ಇದಾಗಲೇ ಅಂಥ ಕ್ಯಾನ್ಸರ್​ ಮುಕ್ತರಾದವರು ಹಲವಾರು ಕಡೆಗಳಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ, ಕ್ಯಾನ್ಸರ್​ಪೀಡಿತರಿಗೆ ಸಾವೇ ಅಂತಿಮವಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.

ಧಾರಾವಾಹಿಗಳೇ ಸರ್ವಸ್ವ ಎಂದುಕೊಂಡೋರ ಸ್ಥಿತಿ?

ಆದರೆ, ಇಂಥ ಭಾಷಣ ಕೇಳಲು ಹಲವರಿಗೆ ಟೈಮೇ ಇರುವುದಿಲ್ಲ. ಅವರು ಮನೆಯಲ್ಲಿ ಕುಳಿತು ಸೀರಿಯಲ್​ ನೋಡುತ್ತಿರುತ್ತಾರೆ. ಧಾರಾವಾಹಿಗಳಲ್ಲಿ ಬಂದಿರೋದೇ ಅವರಿಗೆ ವೇದವಾಕ್ಯವಾಗಿರುತ್ತದೆ. ಅಂಥವರನ್ನು ಗಮನದಲ್ಲಿ ಇಟ್ಟುಕೊಂಡು ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ತಿಳಿಸಬೇಕಾಗುತ್ತದೆ. ಇಲ್ಲಿ ವೈದ್ಯೆ ಭೂಮಿಕಾಗೆ ಹೆಚ್ಚೆಂದರೆ ಐದು ತಿಂಗಳು ಟೈಮ್ ಇದೆ ಎನ್ನುತ್ತಾರೆ. ಅಂದರೆ ಬ್ರೆಸ್ಟ್​ ಕ್ಯಾನ್ಸರ್​ ಬಂದಲ್ಲ ಇಂದಲ್ಲ, ನಾಳೆ ಸಾಯುವುದೇ ಎನ್ನುವ ಅರ್ಥದಲ್ಲಿ ಹೇಳಿದಂತಿದೆ. ಇದನ್ನು ಕೇಳಿದ ಕ್ಯಾನ್ಸರ್​ಪೀಡಿತರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆ ಬರುತ್ತದೆ ಎನ್ನುವ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು ಅಲ್ಲವೆ? ಅಲ್ಲಿ ವೈದ್ಯೆಯಾವಳು ಎಷ್ಟೋ ಮಂದಿ ಕ್ಯಾನ್ಸರ್​ ಗೆದ್ದಿದ್ದಾರೆ, ಇದರಲ್ಲಿ ಭಯಪಡುವ ಅಗತ್ಯವಿಲ್ಲ ಎನ್ನುವ ಡೈಲಾಗ್​ ಪ್ರೊಮೋದಲ್ಲಿ ಸೇರಿಸಿಬಿಟ್ಟಿದ್ದರೆ ಅಲ್ಲಿ ಅದೆಷ್ಟೋ ಮಂದಿಯ ಜೀವನದಲ್ಲಿ ಉತ್ಸಾಹ ಬರುತ್ತಿತ್ತು. ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಗಮನಹರಿಸಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.