Published : Aug 28, 2025, 07:16 AM ISTUpdated : Aug 29, 2025, 12:15 AM IST

ಹೈಬ್ರಿಡ್ ಹಾಗೂ ಯೂರೋ–VI ವಾಹನಗಳಿಗೂ PUC ಕಡ್ಡಾಯವೇ? ಸರ್ಕಾರದ ನಿರ್ಧಾರ ಪ್ರಶ್ನಾರ್ಥಕ

ಸಾರಾಂಶ

ಮೈಸೂರು ದಸರಾ ಉದ್ಘಾಟನೆ, ಚಾಮುಂಡೇಶ್ವರಿ ದೇಗುಲ ಸುತ್ತ ನಡೆಯುತ್ತಿರುವ ರಾಜಕೀಯಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಹಿರಂಗ ಪತ್ರ ಬರೆದಿರುವ ಪ್ರಮೋದಾ ದೇವಿ ಒಡೆಯರ್, ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಾಲಯದ ಸುತ್ತ ರಾಜಕೀಯವು ನಡೆಯುತ್ತಿರುವುದು ತೀವ್ರ ಬೇಸರ ತರಿಸಿದೆ ಎಂದಿದ್ದಾರೆ. ಚಾಮುಂಡೇಶ್ವರಿ ದೇವಾಲಯ ಹಿಂದೂಗಳಿಗೆ ಸೇರಿಲ್ಲ ಎಂಬಂತಹ ಅಸಂವೇದನಾಶೀಲ ಹೇಳಿಕೆಗಳು ಅನಗತ್ಯ ಎಂದಿದ್ದಾರೆ. ಇತ್ತ ರಾಜ್ಯದಲ್ಲಿ ಭಾರಿ ಮಳೆಯಿಂದ ಕೆಲ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

Euro 6 vehicles

12:15 AM (IST) Aug 29

ಹೈಬ್ರಿಡ್ ಹಾಗೂ ಯೂರೋ–VI ವಾಹನಗಳಿಗೂ PUC ಕಡ್ಡಾಯವೇ? ಸರ್ಕಾರದ ನಿರ್ಧಾರ ಪ್ರಶ್ನಾರ್ಥಕ

ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ನಿರ್ಧಾರವು ಮಹತ್ವದ್ದೇ ಸರಿ. ಈ ನಿಟ್ಟಿನಲ್ಲಿ ಎಲ್ಲಾ ಹೊಸ ಮಾದರಿಯ ವಾಹನಗಳಲ್ಲಿ AdBlue SCR ವ್ಯವಸ್ಥೆ ಅಳವಡಿಕೆಯನ್ನು ತಯಾರಕರಿಗೆ ಕಡ್ಡಾಯಗೊಳಿಸಲಾಯಿತು.

Read Full Story

11:23 PM (IST) Aug 28

ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ದುರಂತ; ಮೊನ್ನೆ ಎಫ್‌ಸಿ ರಿನೀವಲ್, ನಿನ್ನೆ ಸಂಚಾರ, ಇಂದು 6 ಜನರ ಆಹುತಿ!

ಮಂಗಳೂರಿನ ತಲಪಾಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ಬಸ್ಸಿನ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಿಪೇರಿ ಮಾಡಿ ಎಫ್‌ಸಿ ಪಡೆದುಕೊಂಡು ಬಂದಾಕ್ಷಣ ನಿಗಮದ ತಪ್ಪಿಲ್ಲ ಎಂದು ಹೇಳುತ್ತಿದೆ.

Read Full Story

10:52 PM (IST) Aug 28

ರಾಜ್ಯದಲ್ಲಿ ಹಂದಿ ಜ್ವರ ಪತ್ತೆ; ಫಾರ್ಮ್‌ನಲ್ಲಿ ಬೆಳೆಸಿದ 57 ಹಂದಿಗಳನ್ನು ಕೊಲ್ಲಲು ಆದೇಶ!

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಫಾರ್ಮ್‌ನಲ್ಲಿ ಬೆಳೆಸುತ್ತಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, 50 ಹಂದಿಗಳು ಸಾವನ್ನಪ್ಪಿವೆ. ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read Full Story

10:17 PM (IST) Aug 28

ಬಾರ್‌ಗೆ ಹೋಗಿ ಮದ್ಯ ಖರೀದಿಸದೇ, ಮೂತ್ರ ಮಾಡಿಬಂದ ಗ್ರಾಹಕನಿಗೆ ₹1000 ದಂಡ ಹಾಕಿದ ಮ್ಯಾನೇಜರ್!

ಸಾಮಾನ್ಯ ವ್ಯಕ್ತಿಯೊಬ್ಬ ಬಾರ್‌ನಲ್ಲಿ ಮದ್ಯ ಖರೀದಿ ಮಾಡದೇ, ನೇರವಾಗಿ ಟಾಯ್ಲೆಟ್ ಬಳಸಿದ್ದಕ್ಕೆ ₹1000 ಬಿಲ್ ಪಾವತಿಸಬೇಕಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಾರ್‌ನ ಕ್ರಮ ಸರಿಯೇ ತಪ್ಪೇ ಎಂಬ ಬಗ್ಗೆ ನೆಟ್ಟಿಗರು ಭಾರೀ ಚರ್ಚೆ ನಡೆಸುತ್ತಿದ್ದಾರೆ.

Read Full Story

09:36 PM (IST) Aug 28

Mirai Movie - ತೇಜ್‌ ಸಜ್ಜಾ ನಟನೆಯ 'ಮಿರಾಯ್'‌ ಸಿನಿಮಾ ಟ್ರೇಲರ್‌ ರಿಲೀಸ್;‌ ಫ್ಯಾನ್ಸ್‌ಗೆ ವಿಶ್ಯುವಲ್‌ ಟ್ರೀಟ್

ಹನುಮಾನ್ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ತೇಜ ಸಜ್ಜಾ ಈಗ ಸೂಪರ್ ಯೋಧನಾಗಿ ಮತ್ತೆ ಎಂಟ್ರಿ‌ ಕೊಟ್ಟಿದ್ದಾರೆ. ಮಿರಾಯ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದಾರೆ. 

 

Read Full Story

09:32 PM (IST) Aug 28

ಭಾರೀ ಮಳೆ ಮುನ್ಸೂಚನೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ!

ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಆ.29 ರಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
Read Full Story

09:22 PM (IST) Aug 28

ನಾನೇನು ಕೋಟ್ಯಧಿಪತಿಯಲ್ಲ, ಚೆನ್ನಾಗಿ ಅಡುಗೆ ಮಾಡುವ ಸಿಂಪಲ್‌ ಹುಡುಗ ಎಂದ ಅನುಶ್ರಿ ಪತಿ ರೋಷನ್‌!

ಕನ್ನಡದ ಜನಪ್ರಿಯ ನಿರೂಪಕಿ ಆ್ಯಂಕರ್‌ ಅನುಶ್ರೀ, ಐಟಿ ಉದ್ಯೋಗಿ ರೋಷನ್‌ ರಾಮಮೂರ್ತಿ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ನೆನಪು ಮಾಡಿಕೊಂಡು ಕೆಲವು ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. 

Read Full Story

09:12 PM (IST) Aug 28

ಒಲಿಂಪಿಕ್ಸ್ ಪದಕ ಗೆದ್ದರೆ ₹5 ಕೋಟಿ, ರಾಷ್ಟ್ರೀಯ ಪದಕ ಗೆದ್ದರೆ ₹7 ಲಕ್ಷ ಬಹುಮಾನ; ಸಿಎಂ ಘೋಷಣೆ!

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಹೆಚ್ಚಳ. ಬಂಗಾರ ₹7 ಲಕ್ಷ, ಬೆಳ್ಳಿಗೆ ₹5 ಲಕ್ಷ, ಕಂಚು ₹2 ಲಕ್ಷ ಘೋಷಣೆ. ಇನ್ನು ಒಲಿಂಪಿಕ್ಸ್ ಬಂಗಾರ ವಿಜೇತರಿಗೆ ₹5 ಕೋಟಿ ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ರಾಜ್ಯದ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ.

Read Full Story

08:52 PM (IST) Aug 28

ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ - ಐವರ ವಿರುದ್ಧ ಪೋಕ್ಸೋ ಕೇಸ್ ದಾಖಲು, ನಾಲ್ವರು ಸಸ್ಪೆಂಡ್!

9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯಾದ ಘಟನೆ ಎಲ್ಲವನ್ನು ತಲೆ ಕೆಳಗೆ ಮಾಡಿಸಿದೆ. ವಿದ್ಯಾರ್ಥಿನಿ ತಮ್ಮ ಶಾಲೆ ಶೌಚಾಲಯದಲ್ಲಿ ಗಂಡು ಮಗುವಿಗೆ‌ ಜನ್ಮ ನೀಡಿದ್ದಾಳೆ.

Read Full Story

08:26 PM (IST) Aug 28

ಧರ್ಮಸ್ಥಳದ ವಿರುದ್ಧ ಮಾಡಿದ ಯೂಟೂಬ್, ಎಐ ನಿರ್ಮಿತ ವಿಡಿಯೋ ಡಿಲೀಟ್ ಮಾಡಿ; ಕೇಂದ್ರ ಸಚಿವರಿಗೆ ನಿಖಿಲ್ ಪತ್ರ!

ಧರ್ಮಸ್ಥಳ ದೇಗುಲ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಹರಡಿರುವ ಸುಳ್ಳು ವರದಿಗಳನ್ನು ತೆಗೆದುಹಾಕಲು ನಿಖಿಲ್ ಕುಮಾರಸ್ವಾಮಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಸಾಮೂಹಿಕ ಹತ್ಯೆ, ಅನನ್ಯಾ ಭಟ್ ಪ್ರಕರಣದಂತಹ ಸುಳ್ಳು ಸುದ್ದಿಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.

Read Full Story

08:21 PM (IST) Aug 28

ರಾಜ್ಯದ ಪ್ರತಿ ಮನೆಗೂ ಫ್ಯಾಮಿಲಿ ಕಾರ್ಡ್‌ ನೀಡುವ ನಿರ್ಧಾರ ಮಾಡಿದ ಆಂಧ್ರ ಪ್ರದೇಶ ಸರ್ಕಾರ!

ಇಂದು ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಕ್ಯಾಬಿನೆಟ್‌ ಈ ನಿರ್ಧಾರ ತೆಗೆದುಕೊಂಡಿದೆ.

 

Read Full Story

08:19 PM (IST) Aug 28

ಧರ್ಮಸ್ಥಳ ರಕ್ಷಣೆಗೆ ಯಾರು ಹಿಂದೇಟು ಹಾಕುವ ಪ್ರಶ್ನೆಯಿಲ್ಲ - ಸಚಿವ ದಿನೇಶ್ ಗುಂಡೂರಾವ್

ಧರ್ಮಸ್ಥಳ ರಕ್ಚಣೆ ವಿಚಾರದಲ್ಲಿ ನಾವು ಸದಾ ಬೆಂಬಲವಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Read Full Story

08:11 PM (IST) Aug 28

ರೋಷನ್ ಗೆ ಅನುಶ್ರೀನ ಪರಿಚಯಿಸಿದ್ದೇ ಶ್ರೀದೇವಿ ಭೈರಪ್ಪ, ವಿದೇಶದಿಂದ ಬಂದು ಹಾರೈಸಿದ್ರು!

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ರೋಷನ್ ರಾಮಮೂರ್ತಿ ಅವರೊಂದಿಗೆ ಅದ್ದೂರಿಯಾಗಿ ವಿವಾಹವಾದರು. ಶ್ರೀದೇವಿ ಬೈರಪ್ಪ ಅವರೇ ಈ ಜೋಡಿಯ ಪ್ರೀತಿಗೆ ಕೊಂಡಿಯಾಗಿದ್ದು ವಿಶೇಷ.
Read Full Story

07:36 PM (IST) Aug 28

ಕರ್ನಾಟಕಕ್ಕೆ ಸೈಕ್ಲೋನ್ ಕಂಟಕ, ಬೆಂಗಳೂರು ಸೇರಿ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಕರ್ನಾಟಕದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅರಬ್ಬೀ ಸಮುದ್ರದಲ್ಲಿ ತೂಫಾನ್‌ನಿಂದಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story

07:29 PM (IST) Aug 28

ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ಅಪಘಾತದಲ್ಲಿ ಮೇಜರ್ ಟ್ವಿಸ್ಟ್; ಈ ಬಸ್ಸಲ್ಲಿ ಡ್ರೈವರ್ರೇ ಇರಲಿಲ್ಲ!

ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಬಸ್ ಹಿಂದಕ್ಕೆ ಚಲಿಸುವಾಗ ಡ್ರೈವರ್‌ ಇರಲಿಲ್ಲ ಎಂಬುದು ತಿಳಿದುಬಂದಿದೆ. ಚಾಲಕನ ಅತಿಯಾದ ವೇಗ ಮತ್ತು ಇಳಿಜಾರಿನಲ್ಲಿ ಬಸ್ ನಿಲ್ಲಿಸಿ ಕೆಳಗೆ ಇಳಿದು ಹೋಗಿದ್ದೇ ಅಪಘಾತಕ್ಕೆ ಕಾರಣವಾಗಿದೆ.

Read Full Story

07:09 PM (IST) Aug 28

ಸಾಮಾನ್ಯ ರೈತನ ಮಗಳ ಅಸಾಮಾನ್ಯ ಸಾಧನೆ, ರಾಜ್ಯಕ್ಕೆ ಟಾಪರ್ ಆಗಿ ಕಲೆಕ್ಟರ್ ಆದ ಹೆಣ್ಣಮಗಳ ಕಥೆ!

ತಮಿಳುನಾಡಿನ ರೈತ ಕುಟುಂಬದಿಂದ ಬಂದ ಕಥಿರ್ ಸೆಲ್ವಿ, TNPSC ಗ್ರೂಪ್-1 ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಉಪ ಕಲೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಅವರ ಸಾಧನೆಯ ಹಿಂದಿನ ಪರಿಶ್ರಮ ಮತ್ತು ಪೋಷಕರ ಬೆಂಬಲದ ಕಥೆ ಇಲ್ಲಿದೆ.
Read Full Story

07:02 PM (IST) Aug 28

ಬೂಕರ್‌ ಬಂದಾಗ ಯತ್ನಾಳ್‌, ಪ್ರತಾಪ್‌ ಸಿಂಹ ಅಭಿನಂದಿಸಿಲ್ಲ ಎಂದ ಭಾನು ಮುಸ್ತಾಕ್‌, ದಾಖಲೆ ಸಹಿತ ತಿರುಗೇಟು ನೀಡಿದ ಮಾಜಿ ಸಂಸದ!

ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್‌ ಅವರ ದಸರಾ ಉದ್ಘಾಟನೆ ಆಹ್ವಾನ ವಿವಾದಕ್ಕೆ ಕಾರಣವಾಗಿದೆ. ಪ್ರತಾಪ್ ಸಿಂಹ ಅವರಿಗೆ ಅಭಿನಂದನೆ ಸಲ್ಲಿಸಿಲ್ಲ ಎಂಬ ಭಾನು ಅವರ ಹೇಳಿಕೆಗೆ ಪ್ರತಾಪ್ ಸಿಂಹ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಈ ವಾದ-ವಿವಾದಗಳು ದಸರಾವನ್ನು ವಿವಾದದ ಕೇಂದ್ರವನ್ನಾಗಿಸಿದೆ.
Read Full Story

07:02 PM (IST) Aug 28

ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ - ಬಿಜೆಪಿಗೆ ತಿರುಗೇಟು ಕೊಟ್ಟ ಸಚಿವ ಚಲುವರಾಯಸ್ವಾಮಿ

ಸಾಹಿತಿಗಳು ಸೇರಿ ಅನೇಕರು ದಸರಾ ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Read Full Story

06:22 PM (IST) Aug 28

ಮತ್ತೆ 6 ದಿನ ಪಪ್ಪಿ ಇಡಿ ವಶಕ್ಕೆ, ಜಡ್ಜ್‌ ಮುಂದೆ ಜಾರಿ ನಿರ್ದೇಶನಾಲಯದ ಮೇಲೆ ಆರೋಪಗಳ ಸುರಿಮಳೆಗೈದ ಶಾಸಕ!

ಶಾಸಕ ವೀರೇಂದ್ರ ಪಪ್ಪಿ ಇಡಿ ವಶದ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆದು 6 ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿದೆ. ಪಪ್ಪಿ ಇಡಿ ವಶದಲ್ಲಿ ಅಮಾನವೀಯತೆ ಆರೋಪ ಮಾಡಿದ್ದಾರೆ. ಇಡಿ ಹೆಚ್ಚಿನ ತನಿಖೆಗೆ ಸಮಯ ಕೋರಿದೆ.
Read Full Story

06:13 PM (IST) Aug 28

ಧರ್ಮಸ್ಥಳದಲ್ಲಿ ಮುಸ್ಲಿಂ ಹುಡುಗಿ ಸಂದರ್ಶನ - ವಿಡಿಯೋ ಡಿಲೀಟ್​ಗೆ ಒತ್ತಡ- ಶಾಕಿಂಗ್​ ವಿಷ್ಯ ಹೇಳಿದ ಯುಟ್ಯೂಬರ್​!

ಧರ್ಮಸ್ಥಳದ ಮುಸ್ಲಿಂ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಅದರ ವಿಡಿಯೋ ವೈರಲ್​ ಆದಾಗ, ನಡೆದ ಶಾಕಿಂಗ್​ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಯುಟ್ಯೂಬರ್​. ಅದೇನು ನೋಡಿ...

 

Read Full Story

05:59 PM (IST) Aug 28

ಇಲ್ಲಿ ಗಣೇಶನಿಲ್ಲ; ಆದ್ರೂ ಹಳದಿ ಸೀರೆಯಲ್ಲಿ ಗೌರಿ-ಗಣೇಶ ಹಬ್ಬದ ಶುಭ ಕೋರಿದ ಸೋನಲ್ ಮೊಂಥೆರೋ!

ಹಳದಿ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿದ ನಟಿ ಸೋನಲ್ ಮೊಂಥೆರೋ. ಆದರೆ ಫೋಟೋದಲ್ಲಿ ತಾಳಿ ಕಾಣದೇ ಇರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ ಗಂಡನೂ ಇಲ್ಲ, ಗಣೇಶನೂ ಇಲ್ಲ.

Read Full Story

05:54 PM (IST) Aug 28

ಟ್ರಂಪ್‌ ಟ್ಯಾರಿಫ್‌ ಬೆನ್ನಲ್ಲೇ ಭಾರತದ ಸ್ವದೇಶಿ ಅಭಿಯಾನ, LPU ಕ್ಯಾಂಪಸ್‌ನಲ್ಲಿ ಕೊಕಾ ಕೋಲಾ, ಪೆಪ್ಸಿಕೋ ಬ್ಯಾನ್‌!

ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್‌ಪಿಯು) ತನ್ನ ಕ್ಯಾಂಪಸ್‌ನಲ್ಲಿ ಅಮೆರಿಕ ಮೂಲದ ದೈತ್ಯ ಕಂಪನಿಗಳಾದ ಕೋಕಾ-ಕೋಲಾ ಮತ್ತು ಪೆಪ್ಸಿಕೋದ ಪಾನೀಯಗಳನ್ನು ನಿಷೇಧಿಸಿದೆ.

 

Read Full Story

05:47 PM (IST) Aug 28

ಡಿಕೆಶಿ ಸಿಎಂ ಆಗಲು ಪ್ಲಾನ್, ಸಿದ್ದರಾಮಯ್ಯ ಸುಮ್ಮನೆ ಕೂರಲ್ಲ - ಸಂಸದ ಜಗದೀಶ್ ಶೆಟ್ಟರ್

ಬಹಳಷ್ಟು ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ರಾಹುಲ್ ಗಾಂಧಿ, ಖರ್ಗೆ ಅವರು ಕಲ್ಸಿದ್ದಕ್ಕೆ ವಿರೋಧ ಮಾಡ್ತಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

Read Full Story

05:26 PM (IST) Aug 28

'ನಿನ್‌ ಲಿಮಿಟ್‌ ಅಲ್ಲಿ ನೀನಿರು..' ಶಾಸಕನಿಗೆ ಆವಾಜ್‌ ಹಾಕಿದ ಜಿಲ್ಲಾಧಿಕಾರಿ!

ಬಿಜೆಪಿ ಶಾಸಕ ಕುಶ್ವಾಹ ಮುಷ್ಟಿ ಬಿಗಿದುಕೊಂಡು ಹೊಡೆಯುವಂತೆ ಮುಂದೆ ಹೋಗಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಗನ್ನರ್ ಅವರನ್ನು ತಡೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

Read Full Story

05:22 PM (IST) Aug 28

ಯುದ್ಧದ ನೆರಳಲ್ಲಿ ಶಾಂತಿಯ ಬೆಳಕು - ಉಕ್ರೇನ್‌ನಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸೇವಾ ಕ್ರಾಂತಿ

ಆರ್ಟ್ ಆಫ್ ಲಿವಿಂಗ್‌ನ ಶಿಬಿರದ ನಂತರ, ನಮ್ಮ ಜೀವನವು ಬದಲಾಗಲು ಪ್ರಾರಂಭಿಸಿದೆ. ಗಂಭೀರವಾದ ದೈಹಿಕ ಗಾಯಗಳನ್ನು ಹೊಂದಿರುವವರು ಸಹ ಈಗ ತಮ್ಮ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.

Read Full Story

05:14 PM (IST) Aug 28

ಬೆಂಗಳೂರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಇನ್ಫೋಸಿಸ್ ಉದ್ಯೋಗಿ ಆತ್ಮಹ*ತ್ಯೆ; ಪತಿ ಪ್ರವೀಣ್ ಬಂಧನ

ಬೆಂಗಳೂರಿನಲ್ಲಿ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ ವರದಕ್ಷಿಣೆ ಕಿರುಕುಳದಿಂದ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪತಿ, ಅತ್ತೆ ಮತ್ತು ನಾದಿನಿಯ ವಿರುದ್ಧ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬಸ್ಥರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

Read Full Story

05:01 PM (IST) Aug 28

ಮಹಿಳೆಯ ಉಬ್ಬುಹಲ್ಲಿನ ಬಗ್ಗೆ ಹಾಸ್ಯ, ಪತಿ-ಸಹೋದರನ ಮೇಲೆ ಹಲ್ಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿಗಳು!

ಡಿಜೆ ಹಳ್ಳಿಯಲ್ಲಿ ಪತ್ನಿಯ ಉಬ್ಬುಹಲ್ಲಿನ ಬಗ್ಗೆ ಹಾಸ್ಯ ಮಾಡಿದ್ದಕ್ಕೆ ಪತಿಯ ಮೇಲೆ ಮೂವರು ಯುವಕರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಪತ್ನಿಯ ಸಹೋದರರು ಮಧ್ಯಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

04:53 PM (IST) Aug 28

ಆಟೋದಿಂದ ಇಳಿದ ನಂತರ ಜೇಬು ನೋಡಿದ್ರೆ ಖಾಲಿ ಖಾಲಿ - 30 ರೂ.ಗಾಗಿ ಬಾಲಕನಿಗೆ ಥಳಿಸಿದ ಆಟೋ ಚಾಲಕ

ಮುಂಬೈನಲ್ಲಿ ಆಟೋ ಚಾರ್ಜ್ ಕೊಡದ ಬಾಲಕನಿಗೆ ಆಟೋ ಚಾಲಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Read Full Story

04:27 PM (IST) Aug 28

ಜಯಾ ಬಚ್ಚನ್​ಗೆ ಅಂಟಿದೆ ಈ ಗುಣಪಡಿಸಲಾಗದ ಕಾಯಿಲೆ - ಕೊನೆಗೂ ರಿವೀಲ್​ ಮಾಡಿದ ಅಭಿಷೇಕ್​ ಬಚ್ಚನ್​!

ಸದಾ ಸಿಡುಕಿನಲ್ಲಿಯೇ ಇರುವ, ಯಾರನ್ನೇ ಕಂಡರೂ ಉರಿದು ಬೀಳುವ ನಟಿ, ಸಂಸದೆ ಜಯಾಬಚ್ಚನ್​ಗೆ ಅಂಟಿರುವ ರೋಗವೇನು? ಇದನ್ನು ರಿವೀಲ್​ ಮಾಡಿದ್ದಾರೆ ಅಭಿಷೇಕ್​ ಬಚ್ಚನ್​.

 

Read Full Story

04:27 PM (IST) Aug 28

ಇನ್ಸ್‌ಪೆಕ್ಟರ್ ಜೀಪಿಗೆ ₹500 ದಂಡ ಹಾಕಿದ ಪೊಲೀಸ್! ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದಕ್ಕೆ ಲಾಕ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ಹಿರಿಯ ಅಧಿಕಾರಿಯ ವಾಹನಕ್ಕೆ ಕಿರಿಯ ಅಧಿಕಾರಿ ದಂಡ ವಿಧಿಸಿದ ಘಟನೆ ನಡೆದಿದೆ. ಈ ಕ್ರಮಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Read Full Story

04:14 PM (IST) Aug 28

ಡಿಕೆಶಿ ಗುಲಾಮರ ಮಾತು ಕೇಳಿಕೊಂಡು ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ, ಬಿಜೆಪಿ ಶಾಸಕ ಖಂಡನೆ!

ಡಿಕೆ ಶಿವಕುಮಾರ್ ಅವರು RSS ಗೀತೆ ವಿಚಾರದಲ್ಲಿ ಕ್ಷಮೆ ಕೇಳಿರುವುದನ್ನು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಖಂಡಿಸಿದ್ದಾರೆ. ಡಿಕೆಶಿ ಒರಿಜಿನಲ್ ಆಗಿರಬೇಕು, ಕ್ಷಮೆ ಕೇಳಿದ್ದು ಅವರ ರಾಜಕೀಯ ಬದುಕಿನ ಕಪ್ಪುಚುಕ್ಕೆ ಎಂದಿದ್ದಾರೆ. ಸಿಎಂ ಸ್ಥಾನ ಉಳಿಸಿಕೊಳ್ಳುವ ಭಯದಿಂದಲೇ ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ.

Read Full Story

03:48 PM (IST) Aug 28

'ಭಾರತದ ಮೇಲೆ ಪರಮಾಣು ಬಾಂಬ್ ಹಾಕಿ..' ಅಮೆರಿಕ ಶಾಲೆಯ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಮಿನ್ನಿಯಾಪೋಲಿಸ್‌ನ ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಕೋರನ ಬಂದೂಕಿನ ಮೇಲೆ 'ನ್ಯೂಕ್ ಇಂಡಿಯಾ' ಎಂಬ ಬೆದರಿಕೆ ಬರೆಯಲಾಗಿತ್ತು.
Read Full Story

03:40 PM (IST) Aug 28

ತಲಪಾಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ - ಮಗು ಸೇರಿ ಐವರ ದಾರುಣ ಸಾವು

ತಲಪಾಡಿಯಲ್ಲಿ ಬ್ರೇಕ್ ವೈಫಲ್ಯದಿಂದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದೆ.
Read Full Story

03:34 PM (IST) Aug 28

ಬೀಯಾಸ್ ನದಿಯ ಪ್ರವಾಹಕ್ಕೆ ಅಂಜದೇ ನಿಂತ ಹನುಮಾನ್ ದೇಗುಲದ ಅರ್ಚಕ ವಿಡಿಯೋ ವೈರಲ್

ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹದ ನಡುವೆಯೂ ಹನುಮಾನ್ ದೇಗುಲದ ಅರ್ಚಕರು ಪ್ರವಾಹಕ್ಕೆ ಅಂಜದೇ ದೇವಸ್ಥಾನದ ಆವರಣದಲ್ಲೇ ಕೈ ಕಟ್ಟಿ ನಿಂತು ಪ್ರವಾಹದ ನೀರು ಉಕ್ಕೇರುವುದನ್ನು ನೋಡುತ್ತಿರುವ ವೀಡಿಯೋ ವೈರಲ್ ಆಗಿದೆ.

Read Full Story

03:27 PM (IST) Aug 28

ಸಂಭಲ್ ಸಮಿತಿ ವರದಿ, 45ರಷ್ಟಿದ್ದ ಹಿಂದೂ ಜನಸಂಖ್ಯೆ ಶೇ.15ಕ್ಕೆ ಇಳಿಕೆ, ಮುಸ್ಲಿಮರು ಶೇ.85ಕ್ಕೆ ಏರಿಕೆ

ಸಂಭಲ್ ಗಲಭೆ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ನಿವೃತ್ತ ನ್ಯಾಯಾಧೀಶರ ನೇತತ್ವದ ಸಮಿತಿ ವರದಿ ಸಲ್ಲಿಸಿದೆ. ಈ ವರದಿಯ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಹರಿಹರ ದೇವಾಲಯದ ಅವಶೇಷದಲ್ಲಿ ಮಸೀದಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲ ಜನಸಂಖ್ಯೆ ಬದಲಾವಣೆ ಹಲವರ ಆತಂಕಕ್ಕೆ ಕಾರಣವಾಗಿದೆ.

Read Full Story

03:18 PM (IST) Aug 28

'ಮುಸ್ಲಿಂರ ಧಾರ್ಮಿಕ ಕಾರ್ಯಕ್ರಮಗಳನ್ನ ಹಿಂದೂಗಳಿಂದ ಉದ್ಘಾಟಿಸಲಿ..'; ಕಾಂಗ್ರೆಸ್‌ ಸರ್ಕಾರಕ್ಕೆ ಶಾಸಕ ಸಮೃದ್ಧಿ ಮಂಜುನಾಥ ಸವಾಲು!

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರದಲ್ಲಿ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಟೀಕಿಸಿದ ಅವರು, ಹಿಂದೂ ದೇವಾಲಯಗಳನ್ನು ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
Read Full Story

02:46 PM (IST) Aug 28

ಮಕ್ಕಳು ಅಡುಗೆ ಸ್ಪರ್ಧೆಯಲ್ಲಿ ಫಸ್ಟ್ ಬರಲು, ಈ 5 ಬೆಂಕಿಯಿಲ್ಲದ ಆಹಾರ ಭಕ್ಷ್ಯಗಳನ್ನು ಟ್ರೈ ಮಾಡಲು ಹೇಳಿ!

ಮಕ್ಕಳಿಗೆ ಫೈರ್ ಇಲ್ಲದ ಅಡುಗೆ ಪಾಕವಿಧಾನಗಳು: ನಿಮ್ಮ ಮಕ್ಕಳು ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬರಬೇಕೆಂದು ಬಯಸಿದರೆ, ಈ 5 ಫೈರ್ ಇಲ್ಲದ ಖಾದ್ಯಗಳನ್ನು ಅವರಿಗೆ ಪ್ರಯತ್ನಿಸಲು ಕೊಡಿ.

 

Read Full Story

02:34 PM (IST) Aug 28

ವಿಜಯಪುರದಲ್ಲಿ ಶಿವಾನಂದ ಪಾಟೀಲ್ ಸುದ್ದಿಗೋಷ್ಠಿ; ತಮ್ಮದೇ ಸರ್ಕಾರದ ವಿರುದ್ಧ ಸಚಿವ ಅಸಮಾಧಾನ!

ವಿಜಯಪುರದಲ್ಲಿ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಶಿವಾನಂದ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರ ತಮಗೆ ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Read Full Story

02:33 PM (IST) Aug 28

Anchor Anushree - 'ರೋಶನ್‌ ಐಟಿ ಉದ್ಯೋಗಿ, ನಮ್ಮಿಬ್ಬರದ್ದು ಲವ್‌ ಮ್ಯಾರೇಜ್‌'-ಎಲ್ಲ ಸೀಕ್ರೇಟ್‌ ಹೇಳಿದ ಅನುಶ್ರೀ

ನನ್ನ ಮದುವೆ ತಡವಾಗಿದೆ ಎಂದು ಹೇಳುತ್ತ, ಹುಡುಗ ಯಾರು? ಸಿಕ್ಕಿದ್ದೆಲ್ಲಿ? ಲವ್‌ ಹೇಗೆ ಶುರುವಾಯ್ತು ಎಂದು ಅನುಶ್ರೀ ಅವರು ಹೇಳಿದ್ದಾರೆ. 

Read Full Story

02:08 PM (IST) Aug 28

ಧರ್ಮಸ್ಥಳ, ಚಾಮುಂಡಿ ಬೆಟ್ಟ ವಿವಾದ, ಡಿಕೆ ಶಿವಕುಮಾರ ಹೇಳಿಕೆಗೆ ವಿ ಸೋಮಣ್ಣ ತಿರುಗೇಟು

ಧರ್ಮಸ್ಥಳ ಮತ್ತು ಚಾಮುಂಡಿ ಬೆಟ್ಟದ ಕುರಿತು ಡಿಕೆ ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಹೇಳಿಕೆಯನ್ನು ಅಕ್ಷಮ್ಯ ಅಪರಾಧ ಎಂದು ಕರೆದ ಸೋಮಣ್ಣ, ಧಾರ್ಮಿಕ ವಿಚಾರಗಳನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ್ದಾರೆ.
Read Full Story

More Trending News