Published : Aug 26, 2025, 07:20 AM ISTUpdated : Aug 26, 2025, 11:14 PM IST

ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಅಕ್ರಮ ರಫ್ತು - ಸರ್ಕಾರಿ ಗೋದಾಮಿನ ಸಹಾಯಕ ಚಂದ್ರಶೇಖರ್ ಅಮಾನತು

ಸಾರಾಂಶ

ಬೆಂಗಳೂರು (ಆ.26) ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಬೆಂಗಳೂರಿನ ಕೆಆರ್ ಮಾರ್ಕೆಟ್ ಫುಲ್ ರಶ್ ಆಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ. ಇದರಿಂದ ಸಂಚಾರ ದಟ್ಟಣೆಯೂ ಎದುರಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆಯೂ ತಲೆದೋರಿದೆ. ಕಳೆದ ಹಬ್ಬಕ್ಕೆ ಹೋಲಿಸಿದ್ರೆ ಈ ಬಾರಿ ಹೂ ಹಣ್ಣುಗಳ ದರ ದುಬಾರಿಯಾಗಿದೆ. ಇದು ಗ್ರಾಹಕರು ಹಾಗೂ ವ್ಯಾಪಾರಿಗಳಿಗೂ ತಲೆನೋವಾಗಿ ಪರಿಣಿಮಿಸಿದೆ. ಇತ್ತ ಬೆಂಗಳೂರಿನಲ್ಲಿ ಸರ್ಕಾರ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದೆ. ಖುದ್ದು ಡಿಕೆ ಶಿವಕುಮಾರ್ ತಡ ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾಮಾಗಾರಿ ಪರಿಶೀಲಿಲಿದ್ದಾರೆ. ರಾಜ್ಯ ರಾಜಕಾರಣ, ಜಿಲ್ಲೆಯ ಬೆಳವಣಿಗೆ ಸೇರಿದಂತೆ ಈ ದಿನದ ಕ್ಷಣ ಕ್ಷಣದ ಸುದ್ದಿ ಅಪ್‌ಡೇಟ್ ಇಲ್ಲಿದೆ.

 

11:14 PM (IST) Aug 26

ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಅಕ್ರಮ ರಫ್ತು - ಸರ್ಕಾರಿ ಗೋದಾಮಿನ ಸಹಾಯಕ ಚಂದ್ರಶೇಖರ್ ಅಮಾನತು

ಕೊಪ್ಪಳದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಗೋದಾಮಿನ ಕಿರಿಯ ಸಹಾಯಕರನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
Read Full Story

11:00 PM (IST) Aug 26

ನನಗೆ ಗಂಡ-ಪ್ರೇಮಿ ಇಬ್ಬರೂ ಬೇಕು; ಗಂಡನ ಜೊತೆ 15 ದಿನ, ಪ್ರಿಯಕರನ ಜೊತೆ 15 ದಿನ ಇರುತ್ತೇನೆಂದ ಮಹಿಳೆ!

ನವವಿವಾಹಿತ ಮಹಿಳೆಯೊಬ್ಬಳು ಗಂಡ ಮತ್ತು ಪ್ರೇಮಿ ಇಬ್ಬರ ಜೊತೆಗೂ 15 ದಿನಗಳಂತೆ ಕಾಲ ಕಳೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಪಂಚಾಯಿತಿಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರಿಯಕರನೊಂದಿಗೆ 10 ಬಾರಿ ಓಡಿ ಹೋಗಿದ್ದ ಈ ಮಹಿಳೆಯ ನಿರ್ಧಾರಕ್ಕೆ ಗಂಡ ಒಪ್ಪಿಗೆ ನೀಡಿದ್ದಾನೆ.

Read Full Story

09:44 PM (IST) Aug 26

61ನೇ ಬರ್ತ್ ಡೇಗೆ ತಾಯಿ ಜೊತೆ ಮದ್ಯ ಕುಡಿದ ಮಗ; ಅಮ್ಮನ ರಿಯಾಕ್ಷನ್ ಹೇಗಿತ್ತು ಅಂತ ನೋಡಿ

ಮಗನೊಬ್ಬ ತಾಯಿಯ 61ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಮೊದಲ ಬಾರಿಗೆ ತಾಯಿಯೊಂದಿಗೆ ಮದ್ಯಪಾನ ಮಾಡಿ ಸಂಭ್ರಮಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಂಡುಬರುವ ಪ್ರೀತಿ ಮತ್ತು ಬಾಂಧವ್ಯ ಎಲ್ಲರ ಮನಗೆದ್ದಿದೆ.
Read Full Story

09:04 PM (IST) Aug 26

ಚಾಮುಂಡಿ ದೇವಾಲಯ ಹಿಂದೆ, ಇಂದು ಹಾಗೂ ಮುಂದೆಯೂ ಹಿಂದೂಗಳದ್ದೇ; ಡಿಕೆಶಿಗೆ, ಯದುವೀರ್ ಒಡೆಯರ್ ತಿರುಗೇಟು!

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಹೇಳಿಕೆಗೆ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಈಗಲೂ ಮತ್ತು ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

Read Full Story

08:23 PM (IST) Aug 26

Davanagere - ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ - ಸ್ಥಳೀಯರಲ್ಲಿ ತೀವ್ರ ಕುತೂಹಲ

ನಾಟಿ ಕೋಳಿಯೊಂದು ನೀಲಿ ಮೊಟ್ಟೆಯನ್ನಿಟ್ಟಿದೆ. ನಿತ್ಯ ಬಿಳಿ ಮೊಟ್ಟೆ ಇಡುತ್ತಿದ್ದ ಕೋಳಿ ಇದ್ದಕ್ಕಿದ್ದಂತೆ ನೀಲಿ ಮೊಟ್ಟೆ ಇಟ್ಟಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. 

Read Full Story

08:13 PM (IST) Aug 26

RSS ಗೀತೆ ಮೂಲಕ ಭಾರತಾಂಬೆಗೆ ನಮಸ್ಕರಿಸದೇ, ಇಟಲಿ ಮೇಡಂಗೆ ನಮಸ್ಕರಿಸಬೇಕಾ - ಡಿಕೆಶಿ ಕ್ಷಮೆಗೆ, ಆರ್. ಅಶೋಕ್ ಬೇಸರ!

ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಗೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕೆಂಬ ಕಾಂಗ್ರೆಸ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತಾಯ್ನಾಡಿಗೆ ನಮಸ್ಕರಿಸುವುದು ತಪ್ಪೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಡಿಕೆಶಿ ಕ್ಷಮೆ ಕೇಳಲೊಪ್ಪದೇ ರಾಜೀನಾಮೆ ನೀಡಬೇಕಿತ್ತು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

Read Full Story

08:02 PM (IST) Aug 26

ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಮಾಹಿತಿ, 2024ರಿಂದ ಬಿಎಂಟಿಸಿಗೆ ಬಲಿಯಾಗಿದ್ದಾರೆ 80 ಜನ!

2024ರಿಂದ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಐದು ಮಾರಕ ಅಪಘಾತಗಳು ವರದಿಯಾಗಿವೆ. ಹೆಚ್ಚಿನ ಅಪಘಾತಗಳಿಗೆ ದ್ವಿಚಕ್ರ ವಾಹನ ಸವಾರರ ಅಜಾಗರೂಕತೆ ಕಾರಣ ಎಂದು ಬಿಎಂಟಿಸಿ ಹೇಳಿದೆ.
Read Full Story

07:51 PM (IST) Aug 26

ಆಸ್ತಿ ಗಾಗಿಯೇ ಸೃಷ್ಟಿಯಾದ ಪಾತ್ರ ಅನನ್ಯ ಭಟ್! ಉಡುಪಿ ಪರಿಕ ಅರಮನೆ ಹಕ್ಕು ಕೇಳುತ್ತಿರೋದ್ಯಾಕೆ ಸುಜಾತಾ ಭಟ್?

ಉಡುಪಿಯ ಪರಿಕಾ ಜಮೀನು ವಿವಾದದಲ್ಲಿ ಸುಜಾತಾ ಭಟ್ ಅವರ ಹಕ್ಕು ಪ್ರಶ್ನಾರ್ಹ ಎಂದು ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಹೇಳಿದ್ದಾರೆ. ಜಮೀನು ಧರ್ಮಸ್ಥಳ ಕ್ಷೇತ್ರಕ್ಕೆ ದಾನವಾಗಿದ್ದು, ಸುಜಾತಾ ಭಟ್ ಅವರ ತಂದೆಗೆ ಪರಿಹಾರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

Read Full Story

07:36 PM (IST) Aug 26

ಧರ್ಮಸ್ಥಳದಲ್ಲಿ ಎಷ್ಟೇ ಹುಡುಕಿದರೂ ಸಿಗದ ಮೂಳೆ ಪರಪ್ಪನ ಅಗ್ರಹಾರದ ರಸ್ತೆಯಲ್ಲೇ ಸಿಕ್ತು, ಆದ್ರೆ ಸುದ್ದಿಯಲ್ಲಿದೆ ಟ್ವಿಸ್ಟು!

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ತನಿಖೆಯ ನಂತರ, ವೈದ್ಯಕೀಯ ವಿದ್ಯಾರ್ಥಿನಿಯ ತಂದೆ ಅಧ್ಯಯನಕ್ಕೆ ಬಳಸಿದ ಮೂಳೆಗಳನ್ನು ಕಸದಲ್ಲಿ ಎಸೆದಿರುವುದು ಬೆಳಕಿಗೆ ಬಂದಿದೆ.
Read Full Story

07:26 PM (IST) Aug 26

ಕೋಟಿ ಕನ್ನಡಿಗರ ಪ್ರೀತಿ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ, ಯದುವೀರ್ ಅಂಥವರ ಸಂತತಿ ಹೆಚ್ಚಾಗಲಿ; ಬಾನು ಮುಷ್ತಾಕ್!

ದಸರಾ ಉದ್ಘಾಟನೆಗೆ ಆಯ್ಕೆಯಾದ ಬಗ್ಗೆ ಟೀಕಿಸಿದವರಿಗೆ ಸಾಹಿತಿ ಬಾನು ಮುಷ್ತಾಕ್ ತಿರುಗೇಟು ನೀಡಿದ್ದಾರೆ. ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ-ಅಭಿಮಾನವನ್ನು ಪಡೆದಿರುವ ನಾನು, ಒಂದಿಬ್ಬರ ಟೀಕೆಗಳಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಜನರೇ ಇಂಥವರಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು.

Read Full Story

07:20 PM (IST) Aug 26

MBBS ಸೀಟು ನಿರಾಕರಣೆ, ವಿದ್ಯಾರ್ಥಿನಿಗೆ 15 ಲಕ್ಷ ಪರಿಹಾರ ನೀಡುವಂತೆ ಸಿದ್ದಾರ್ಥ ಸಂಸ್ಥೆಗೆ ಹೈಕೋರ್ಟ್‌ ಸೂಚನೆ!

ಭರವಸೆ ಪತ್ರವನ್ನು ಕಟ್ಟುಕಥೆ ಎಂದು ಕಾಲೇಜಿನವರು ಹೇಳಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು, ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಲಾಗಿಲ್ಲ ಎಂದು ಹೇಳಿದರು.

 

Read Full Story

07:12 PM (IST) Aug 26

ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್‌ ಗೆ ಬಿದ್ದ ಸೆಕ್ಯೂರಿಟಿ ಗಾರ್ಡ್‌ನ ರಕ್ಷಿಸಿದ ಪ್ರಯಾಣಿಕ!

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟ್ರ್ಯಾಕ್‌ಗೆ ಬೀಳದಂತೆ ಪಕ್ಕಕ್ಕೆ ಸರಿಸಿ ಎಚ್ಚರಿಕೆ ನೀಡುವ ಭದ್ರತಾ ಸಿಬ್ಬಂದಿಯೇ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಂತಹ ಘಟನೆಯೊಂದು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

Read Full Story

06:32 PM (IST) Aug 26

ಮಂಗಳೂರು ಏರ್‌ಪೋರ್ಟ್‌ ವಿಸ್ತರಣೆಗೆ ಶೀಘ್ರವೇ 45 ಎಕರೆ ಭೂಮಿ ವಶ - ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ೪೫ ಎಕರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದ್ದು,  ಹೊಸ ಹೂಡಿಕೆಗಳನ್ನು ಆಕರ್ಷಿಸಲು 'ಬೊಲ್ಪು' ಮತ್ತು 'ಬ್ಯಾಕ್ ಟು ಊರು' ಯೋಜನೆಗಳನ್ನು ರೂಪಿಸಲಾಗಿದೆ.

Read Full Story

06:27 PM (IST) Aug 26

ಧರ್ಮಸ್ಥಳ ಎಸ್‌ಐಟಿ ತನಿಖೆ ವಿಚಾರದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹೆಸರಲ್ಲಿ ವೈರಲ್‌ ಆಗ್ತಿದೆ ಫೇಕ್‌ ಪೋಸ್ಟ್‌!

ಧರ್ಮಸ್ಥಳ ಪ್ರಕರಣದ ವರದಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹರ್ಷೇಂದ್ರ ಕುಮಾರ್ ಮೇಲೆ ಎಸ್ಐಟಿ ದಾಳಿ ಎಂಬ ಸುಳ್ಳು ಸುದ್ದಿ ವೈರಲ್ ಆಗಿದ್ದು, ಇದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯತ್ನ.
Read Full Story

06:11 PM (IST) Aug 26

ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು - ಕಾರಣ ಏನು?

ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ದೂರು ದಾಖಲಿಸಿದೆ.

Read Full Story

05:47 PM (IST) Aug 26

ತಿಮರೋಡಿ ಮನೆಗೆ ಜನ ಬರುತ್ತಿದ್ದ ವೇಳೆ ಕೋಣೆಯಲ್ಲಿಟ್ಟು ನನ್ನನ್ನು ಬೀಗ ಹಾಕುತ್ತಿದ್ರು - ಮಾಸ್ಕ್ ಮ್ಯಾನ್

ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ. ತಿಮರೋಡಿ ಮನೆಯಲ್ಲಿ ಆರು ಗಂಟೆಗಳ ಕಾಲ ಶೋಧ ನಡೆಸಿದ್ದು, ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಜಯಂತ್‌, 'ನಾವು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ' ಎಂದಿದ್ದಾರೆ.
Read Full Story

05:27 PM (IST) Aug 26

ಗುಂಡಿ ಮುಚ್ಚಲು 12 ಕೋಟಿ ಖರ್ಚು ಮಾಡಿದ ಬಿಬಿಎಂಪಿ, ಹಾಗಿದ್ರೂ Potholes ಸಂಖ್ಯೆಯಲ್ಲಿ ಶೇ. 63ರಷ್ಟು ಏರಿಕೆ!

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದ್ದು, ದುರಸ್ತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ತೇಪೆ ಹಾಕಿದ ಕೆಲವೇ ದಿನಗಳಲ್ಲಿ ಗುಂಡಿಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಪ್ರಯಾಣಿಕರು ದೂರಿದ್ದಾರೆ. 

Read Full Story

05:06 PM (IST) Aug 26

ಸಿಗಂದೂರು ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ - ಶರವಾತಿ ಹಿನ್ನೀರಿನಲ್ಲಿ ವಿಮಾನಗಳ ಲ್ಯಾಂಡಿಂಗ್

ಶಿವಮೊಗ್ಗ ಜಿಲ್ಲೆಯ ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರ್‌ಡ್ರೋಮ್ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 

Read Full Story

04:59 PM (IST) Aug 26

ಶಾಲಾ ಮಕ್ಕಳಿಗೆ ದಸರಾ ಸಂಭ್ರಮ - ಈ ಬಾರಿಯ ಸುಧೀರ್ಘ ರಜೆ ವೇಳಾಪಟ್ಟಿ ಇಲ್ಲಿದೆ ನೋಡಿ!

2025ರ ದಸರಾ ರಜೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 18 ದಿನಗಳು ಇರಲಿವೆ. ಅಕ್ಟೋಬರ್ 2 ರಂದು ಗಾಂಧಿ ಮತ್ತು ಶಾಸ್ತ್ರಿ ಜಯಂತಿಯ ಕಾರ್ಯಕ್ರಮಗಳಿಗೆ ಶಾಲೆಗೆ ಹಾಜರಾಗುವುದು ಕಡ್ಡಾಯ. ಈ ರಜೆ ಮಕ್ಕಳಿಗೆ ಹಬ್ಬದ ಸಂಭ್ರಮದ ಜೊತೆಗೆ ಓದಿನ ಕಡೆಗೂ ಗಮನ ಹರಿಸಲು ಉತ್ತಮ ಅವಕಾಶ.
Read Full Story

04:52 PM (IST) Aug 26

ಬೆಂಗಳೂರು ಪೊಲೀಸ್‌ ಟ್ರಾಫಿಕ್‌ ಫೈನ್‌ ಕಟ್ಟಲು ಹೋಗಿ ಎರಡೂವರೆ ಲಕ್ಷ ಕಳೆದುಕೊಂಡ ಇಂಜಿನಿಯರ್‌!

ಬೆಂಗಳೂರಿನಲ್ಲಿ ಟ್ರಾಫಿಕ್ ದಂಡ ಪಾವತಿಸಲು ಹೋದ ಇಂಜಿನಿಯರ್‌ಗೆ ₹2.6 ಲಕ್ಷ ರೂಪಾಯಿ ವಂಚನೆಯಾಗಿದೆ. ವಾಟ್ಸಾಪ್‌ನಲ್ಲಿ ಬಂದ apk ಫೈಲ್ ಕ್ಲಿಕ್ ಮಾಡಿದ್ದೇ ಇದಕ್ಕೆ ಕಾರಣ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

04:11 PM (IST) Aug 26

ಮುದ್ದೆಯಲ್ಲಿ ನಿದ್ದೆ ಮಾತ್ರೆ ಹಾಕಿ ಅತ್ತೆಯನ್ನ ಕೊಂದ ಸೊಸೆ! ಅಂತ್ಯಕ್ರಿಯೆ ನಡೆಸಿ 10 ದಿನದ ನಂತರ ಸಿಕ್ತು ಸುಳಿವು!

ಚಿಕ್ಕಮಗಳೂರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆಗೈದ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆ ಸಾಯಿಸಿ ಸಹಜ ಸಾವು ಎಂದು ಎಲ್ಲರನ್ನೂ ನಂಬಿಸಿ ಅಂತ್ಯಕ್ರಿಯೆಯನ್ನೂ ನಡೆಸಿದ್ದಾರೆ. ಆದರೆ, ಅತ್ತೆ ಸತ್ತು 10 ದಿನಗಳಾದ ಬಳಿಕ ಸೊಸೆಯ ಕೊಲೆಯ ಸಣ್ಣ ಸುಳಿವು ಸಿಕ್ಕಿದೆ.

Read Full Story

04:07 PM (IST) Aug 26

Wedding Anniversary - ಅದ್ಭುತ ಕಂಠಸಿರಿಯಿಂದ ಪತ್ನಿಯ ನೆನೆದ ವಿಜಯ ರಾಘವೇಂದ್ರ - ಫ್ಯಾನ್ಸ್​ ಕಂಬನಿ

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರು ಮದುವೆಯಾಗಿ ಇಂದಿಗೆ 18 ವರ್ಷಗಳಾಗಿವೆ. ಪತ್ನಿಯನ್ನು ಕಳೆದುಕೊಂಡ ಬಳಿಕ ಇದು 3ನೇ ವಾರ್ಷಿಕೋತ್ಸವ. ಪತ್ನಿಗಾಗಿ ಹಾಡು ಹಾಡಿದ್ದಾರೆ ನಟ. ವಿಡಿಯೋ ವೈರಲ್​ ಆಗಿದೆ.

 

Read Full Story

04:03 PM (IST) Aug 26

ಬೆಂಗಳೂರಿನಲ್ಲಿ ಜೀತಪದ್ಧತಿ ಜೀವಂತ, ಕುಟುಂಬಕ್ಕೆ 1 ಲಕ್ಷ ಕೊಟ್ಟು ಜೀತದಾಳುಗಳ ಖರೀದಿ

ಬೆಂಗಳೂರಿನಲ್ಲಿ ಜೀತ ಪದ್ಧತಿಯಲ್ಲಿ ದುಡಿಸಿಕೊಳ್ಳುತ್ತಿದ್ದ 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ತೆಲಂಗಾಣದಿಂದ ಕರೆತಂದ ಕಾರ್ಮಿಕರನ್ನು ಕಾಂಟ್ರಾಕ್ಟರ್ ಒಬ್ಬರು ಖರೀದಿಸಿ, ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದ್ದರು. ಈ ಘಟನೆ ಆಧುನಿಕ ನಗರದಲ್ಲಿ ಜೀತಪದ್ಧತಿಯ ಕರಾಳ ಮುಖವನ್ನು ಬಯಲಿಗೆಳೆದಿದೆ.
Read Full Story

03:54 PM (IST) Aug 26

ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ - ಡಿಕೆ ಶಿವಕುಮಾರ್‌

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್‌ ಆಹ್ವಾನ ವಿಚಾರದಲ್ಲಿ ಡಿಕೆ ಶಿವಕುಮಾರ್‌ 'ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ' ಎಂದು ಹೇಳಿದ್ದಾರೆ. ಧರ್ಮಸ್ಥಳದ ಘಟನೆಗಳ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧರ್ಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Read Full Story

03:25 PM (IST) Aug 26

ಹಾಸನಾಂಬೆ ಉತ್ಸವದ ವೇಳೆ ದರ್ಶನ ಪಾಸ್ ವ್ಯವಸ್ಥೆ ಸಂಪೂರ್ಣ ರದ್ದು?

2024ರ ಹಾಸನಾಂಬೆ ದರ್ಶನದ ವೇಳೆ ಪಾಸ್ ವ್ಯವಸ್ಥೆಯಿಂದ ಉಂಟಾದ ಅನಾನುಕೂಲತೆಗಳ ಹಿನ್ನೆಲೆಯಲ್ಲಿ, ಈ ವರ್ಷ ದರ್ಶನ ಪಾಸ್ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ ಹಾಸನದಲ್ಲಿ ಸಭೆ ನಡೆಯಿತು. 

Read Full Story

03:20 PM (IST) Aug 26

ಕೇವಲ 6.29 ಲಕ್ಷ ರೂಗೆ ಹೊಚ್ಚ ಹೊಸ ರೆನಾಲ್ಟ್ ಕೈಗರ್ SUV ಕಾರು ಬಿಡುಗಡೆ

ರೆನಾಲ್ಟ್ ಇಂಡಿಯಾ ಇದೀಗ ಕೈಗರ್ ಕಾರನ್ನು ಹೊಸ ವಿನ್ಯಾಸ, ಸುಧಾರಿತ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಕೇವಲ 6.29 ಲಕ್ಷ ರೂಪಾಯಿ ಬೆಲೆಯಲ್ಲಿ ಕಾರು ಲಭ್ಯವಿದೆ.

Read Full Story

02:56 PM (IST) Aug 26

ಬಾನು ಮುಷ್ತಾಕ್ ಕನ್ನಡಿಗರು ಅಲ್ಲವೇ? ಕರವೇ ಪ್ರವೀಣ್ ಶೆಟ್ಟಿ ಪ್ರತಿಕ್ರಿಯೆ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Read Full Story

02:50 PM (IST) Aug 26

'ನಾನು ಅವನಲ್ಲ...ಅವಳು' ಸಿನಿಮಾದ ಟ್ಯೂನ್‌ ಕದ್ದು 'ಇದ್ರೆ ನೆಮ್ದಿಯಾಗಿರ್ಬೇಕ್‌' ಹಾಡು ಮಾಡಿದ್ರಾ?

ದರ್ಶನ್‌ ಅಭಿನಯದ 'ಡೆವಿಲ್‌' ಸಿನಿಮಾದ ಮೊದಲ ಹಾಡು 'ಇದ್ರೆ ನೆಮ್ದಿಯಾಗಿರ್ಬೇಕ್‌..' ಬಿಡುಗಡೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರೆ ಈ ಹಾಡು ಸಂಚಾರಿ ವಿಜಯ್‌ ನಟಿಸಿದ್ದ 'ನಾನು ಅವನಲ್ಲ.. ಅವಳು' ಸಿನಿಮಾದ ಹಾಡಿನ ಟ್ಯೂನ್‌ಗೆ ಹೋಲುತ್ತದೆ ಎಂಬ ಆರೋಪ ಕೇಳಿಬಂದಿದೆ. 

Read Full Story

02:13 PM (IST) Aug 26

ಹತ್ತು ರೂಪಾಯಿಯ ಪಾರ್ಲೆ ಜಿ ಬಿಸ್ಕತ್ತು ಪ್ಯಾಕೆಟ್ ಬೆಲೆ 370 ರೂಪಾಯಿ! ಟ್ರಂಪ್ ಸುಂಕದಿಂದ ಸಂಕಷ್ಟದಲ್ಲಿ ಭಾರತೀಯರು!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳು ಅಮೆರಿಕದಲ್ಲಿರುವ ಭಾರತೀಯರನ್ನು ತೀವ್ರವಾಗಿ ತೊಂದರೆಗೊಳಿಸುತ್ತಿವೆ. ಭಾರತದಿಂದ ಬರುವ ಪ್ರತಿಯೊಂದು ಉತ್ಪನ್ನದ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವಿಷಯವನ್ನು ಓರ್ವ ಪ್ರವಾಸಿ ಭಾರತೀಯರು ವಿಡಿಯೋದಲ್ಲಿ ತಿಳಿಸಿದ್ದಾರೆ.

 

Read Full Story

02:00 PM (IST) Aug 26

ಭರ್ಜರಿ ಗಿಫ್ಟ್ ಕೊಟ್ಟ ಎಲಾನ್ ಮಸ್ಕ್, ಗ್ರಾಕ್ ಇಮ್ಯಾಜಿನ್ ಎಐ ಟೂಲ್ ಎಲ್ಲರಿಗೂ ಉಚಿತ

ಎಲಾನ್ ಮಸ್ಕ್ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.  ತಮ್ಮ ಗ್ರಾಕ್ ಇಮ್ಯಾಜಿನ್ AI ಟೂಲ್ ಇದೀಗ  ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಮೊದಲು ಪೇಯ್ಡ್ ಸಬ್‌ಸ್ಕ್ರೈಬರ್‌ಗೆ ಮಾತ್ರವಿಲ್ಲ ಈ ಎಐ ಟೂಲ್ ಎಲ್ಲರಿಗೂ ಇದೀಗ ಉಚಿತವಾಗಿದೆ. 

Read Full Story

01:45 PM (IST) Aug 26

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಸ್ವತಂತ್ರ ತನಿಖೆ, ಸರ್ಕಾರದ ಹಸ್ತಕ್ಷೇಪವಿಲ್ಲ - ಗೃಹಸಚಿವರ ಸ್ಪಷನೆ

ಧರ್ಮಸ್ಥಳ ಪ್ರಕರಣದ ತನಿಖೆಯ ಪ್ರಗತಿಯನ್ನು ಡಿಜಿಪಿ ಸಲೀಂ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ವಿವರಿಸಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಎಸ್ಐಟಿಗೆ ಸತ್ಯಾಸತ್ಯತೆ ಹೊರಗೆಡಹಲು ಜವಾಬ್ದಾರಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.  

Read Full Story

01:41 PM (IST) Aug 26

'ಭಾರತ ಯಾವುದಕ್ಕೂ ಹೆದರುವುದಿಲ್ಲ..' ನಾಳೆಯಿಂದಲೇ ಜಾರಿಯಾಗಲಿರುವ ಅಮೆರಿಕದ 50% ಸುಂಕ ಬೆದರಿಕೆಗೆ ಪ್ರಧಾನಿ ಮೋದಿ ದಿಟ್ಟ ಪ್ರತಿಕ್ರಿಯೆ

ಅಮೆರಿಕ ಭಾರತೀಯ ವಸ್ತುಗಳ ಮೇಲೆ 50% ತೆರಿಗೆ ಹಾಕಲು ಯೋಜಿಸಿದೆ. ಇದು ಭಾರತದ ರಫ್ತು ವಲಯಕ್ಕೆ ದೊಡ್ಡ ಹೊಡೆತ. ಈ ತೆರಿಗೆ ಕೃಷಿ ಉತ್ಪನ್ನಗಳು, ಜವಳಿ, ಔಷಧಿಗಳಂತಹ ಪ್ರಮುಖ ರಫ್ತುಗಳ ಮೇಲೆ ಪರಿಣಾಮ ಬೀರುತ್ತದೆ.
Read Full Story

01:31 PM (IST) Aug 26

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ವಿಧಾನಸಭೆಯಲ್ಲಿ ಆರೆಸ್ಸೆಸ್‌ ಗೀತೆ ಹಾಡಿದ್ದು ತಪ್ಪು ಎಂದ ಬಿಕೆ ಹರಿಪ್ರಸಾದ್‌!

ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿದ ಡಿಕೆಶಿ ವಿರುದ್ಧ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೆ ಹೇಳಬಾರದಿತ್ತು ಎಂದು ಹೇಳಿದ್ದಾರೆ. ಡಿಕೆಶಿ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಎಂದಿದ್ದಾರೆ.
Read Full Story

01:09 PM (IST) Aug 26

ಸ್ಟಂಟ್ ಮಾಡಿದ ಸ್ಪೈಡರ್‌ ಮ್ಯಾನ್‌ಗೆ ಬಾರಿ ದಂಡ - ಬೈಕ್‌ನ ಪೆಟ್ರೋಲ್‌ ಟ್ಯಾಂಕ್ ಮೇಲೆ ಯುವತಿ ಕೂರಿಸಿ ರೋಮ್ಯಾನ್ಸ್

ಇತ್ತೀಚೆಗೆ ಯುವ ಸಮುದಾಯ ಫೇಮಸ್‌ ಆಗುವುದಕ್ಕೋಸ್ಕರ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ ವೈರಲ್ ಆದ ದಂಡ ವಿಧಿಸಲ್ಪಟ್ಟ ವಿಡಿಯೋಗಳು ಇಲ್ಲಿವೆ ನೋಡಿ.

Read Full Story

01:01 PM (IST) Aug 26

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕ್ಷಮೆ ಹೇಳಲು ಕಾರಣವಾದ ಆರೆಸ್ಸೆಸ್‌ ಗೀತೆ 'ನಮಸ್ತೆ ಸದಾ ವತ್ಸಲೆ..' ಹಾಡಿನ ಅರ್ಥವೇನು?

ವಿಧಾನಸಭೆಯಲ್ಲಿ ಆರೆಸ್ಸೆಸ್ ಗೀತೆ ಹಾಡಿ ಡಿಕೆ ಶಿವಕುಮಾರ್ ವಿವಾದಕ್ಕೆ ಸಿಲುಕಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಕ್ಷಮೆ ಯಾಚಿಸಿದ್ದಾರೆ. ಈ ಗೀತೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
Read Full Story

12:58 PM (IST) Aug 26

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ..' ಸಿಡಿಎಸ್ ಅನಿಲ್ ಚೌಹಾಣ್ ಸಂದೇಶ, ಚೀನಾ-ಪಾಕ್‌ಗೆ ಖಡಕ್ ಎಚ್ಚರಿಕೆ ಏನು?

ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಚೀನಾ ಮತ್ತು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಂತಿಗಾಗಿ ಶಕ್ತಿ ಅಗತ್ಯ ಎಂದು ಹೇಳಿದ ಅವರು, ಭಾರತದ ಹೊಸ ರಕ್ಷಣಾ ವ್ಯವಸ್ಥೆ 'ಸುದರ್ಶನ ಚಕ್ರ' 2035ರ ವೇಳೆಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
Read Full Story

12:55 PM (IST) Aug 26

ನಾನು ‌ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ಧ, RSS ಹಾಡಿನ ವಿವಾದಕ್ಕೆ ತೆರೆ ಎಳೆದ ಡಿಕೆಶಿ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಇತ್ತೀಚಿನ ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆರ್‌ಎಸ್‌ಎಸ್ ಗೀತೆ ಪ್ರಸ್ತಾಪ ವಿವಾದಕ್ಕೆ ಕ್ಷಮೆ ಕೇಳಲು ಸಿದ್ಧ ಎಂದಿದ್ದಾರೆ. ತಮ್ಮ ರಾಜಕೀಯ ಹೋರಾಟ, ಸಿದ್ಧಾಂತಗಳ ಅಧ್ಯಯನ ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆಯೂ ವಿವರಿಸಿದರು.
Read Full Story

12:49 PM (IST) Aug 26

ಎತ್ತ ಸಾಗುತ್ತಿದೆ ಕರ್ನಾಟಕ? 10 ತಿಂಗಳಲ್ಲಿ 26 ಸಾವಿರ ಅಪ್ರಾಪ್ತ ಗರ್ಭಿಣಿಯರು! ಕಾರಣವೇನು?

ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಸಂಖ್ಯೆ ಕಳೆದ ಹತ್ತು ತಿಂಗಳಿನಲ್ಲಿ 26 ಸಾವಿರ ದಾಖಲಾಗಿದೆ. ಈ ಹಿಂದಿನ ಅಂಕಿ ಅಂಶಗಳು ಕೂಡ ಬೆಚ್ಚಿ ಬೀಳಿಸುತ್ತಿವೆ. ಇದಕ್ಕೆ ಕಾರಣವೇನು?

 

Read Full Story

12:20 PM (IST) Aug 26

ಬಾಂಗ್ಲಾದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾ*ರ ಪ್ರಕರಣ 7 ತಿಂಗಳಲ್ಲಿ ಶೇ.75ಕ್ಕೆ ಏರಿಕೆ

ಬಾಂಗ್ಲಾದೇಶದಲ್ಲಿ ಕೇವಲ 7 ತಿಂಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾ*ರ ಪ್ರಕರಣ ಶೇಕಡಾ 75ರಷ್ಟು ಏರಿಕೆ ಕಂಡಿದೆ. ಬಾಂಗ್ಲಾದಲ್ಲಿನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.

Read Full Story

12:08 PM (IST) Aug 26

ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಹೊಡೆತ ಕೊಟ್ಟ ಹೂವಿನ ಬೆಲೆ, ಖರೀದಿಸಲು ಗ್ರಾಹಕರ ಹಿಂದೇಟು

ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಮಳೆಯಿಂದಾಗಿ ಪೂರೈಕೆ ಕುಂಠಿತಗೊಂಡು, ದರಗಳು ದುಪ್ಪಟ್ಟಾಗಿವೆ. ಇದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳು ತತ್ತರಿಸಿದ್ದಾರೆ.
Read Full Story

More Trending News