ಮೋದಿ ತಂತ್ರಕ್ಕೆ ತುಂಬುತ್ತಾ ದೇಶದ ತಿಜೋರಿ? ಇಂಗ್ಲೆಂಡ್‌ಗೆ ಬೃಹತ್ ಗುರಿ; ಫೆ.15ರ ಟಾಪ್ 10 ಸುದ್ದಿ!

By Suvarna NewsFirst Published Feb 15, 2021, 4:53 PM IST
Highlights

ದೇಶದ ತಿಜೋರಿ ತುಂಬಲು ಪ್ರಧಾನಿ ನರೇಂದ್ರ ಮೋದಿ ಹೊಸ ನಿರ್ಧಾರ ಕೈಗೊಂಡಿದ್ದಾರೆ. ಇತ್ತ 2 ವರ್ಷಗಳ ಬಳಿಕ ಪುಲ್ವಾಮಾ ದಾಳಿ ಕೋರ ಉಗ್ರ ಅಜರ್ ವಿರುದ್ಧ ರೆಡ್ ನೊಟೀಸ್ ಹೊರಡಿಸಲಾಗಿದೆ. ಇದೀಗ ಶ್ರೀಲಂಕಾ ಹಾಗೂ ನೇಪಾಳದಲ್ಲೂ ಖಾತೆ ತೆರೆಯಲು ಬಿಜೆಪಿ ಸಜ್ಜಾಗಿದೆ.  ಇಂಗ್ಲೆಂಡ್‌ಗೆ ಬೃಹತ್ ಗುರಿ ನೀಡಿದ ಇಂಡಿಯಾ, ಪೆಟ್ರೋಲ್ ದರ ಸೇರಿದಂತೆ ಫೆ.15ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಉಗ್ರ ಅಜರ್‌ ವಿರುದ್ಧ ರೆಡ್‌ ನೋಟಿಸ್‌: ಪುಲ್ವಾಮಾ ದಾಳಿ ನಡೆದ 2 ವರ್ಷದ ಬಳಿಕ ಕ್ರಮ!...

ಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ, ಜೈಷ್‌ ಎ ಮಹಮ್ಮದ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಮತ್ತು ಆತನ ಮೂವರು ಸಹಚರರ ವಿರುದ್ಧ ಇಂಟರ್‌ಪೋಲ್‌ ರೆಡ್‌ ನೋಟಿಸ್‌ ಜಾರಿ ಮಾಡಿದೆ. 

ಭಾರತ ಬಳಿಕ ನೇಪಾಳ ಲಂಕಾದಲ್ಲೂ ಬಿಜೆಪಿ ಸರ್ಕಾರ: ಶಾ ಪ್ಲಾನ್‌!...

ಭಾರತದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಬಳಿಕ ನೆರೆಯ ನೇಪಾಳ ಮತ್ತು ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರ ಸ್ಥಾಪಿಸಲು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯೋಜನೆ ರೂಪಿಸಿದ್ದಾರೆ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಹೇಳಿದ್ದಾರೆ.

100ರೂ. ಗಡಿಗೆ ಪೆಟ್ರೋಲ್‌, 90 ರೂ ದಾಟಿದ ಡೀಸೆಲ್‌! ...

ಸತತ 6ನೇ ದಿನವಾದ ಭಾನುವಾರ ಕೂಡಾ ತೈಲ ಕಂಪನಿಗಳು ಪೆಟ್ರೋಲ್‌ ಬೆಲೆಯನ್ನು ಲೀ.ಗೆ 29 ಪೈಸೆ ಮತ್ತು ಡೀಸೆಲ್‌ ಬೆಲೆಯನ್ನು 32 ಪೈಸೆಯಷ್ಟುಏರಿಸಿವೆ. ಇದರೊಂದಿಗೆ ದೇಶದಲ್ಲಿ ಪೆಟ್ರೋಲ್‌ ದರ 100ರ ಗಡಿಗೆ ಬಂದಿದ್ದರೆ, ಡೀಸೆಲ್‌ 90ರ ಗಡಿ ದಾಟುವ ಮೂಲಕ ಗ್ರಾಹಕರ ಜೀವನವನ್ನು ಮತ್ತಷ್ಟುದುಬಾರಿಯಾಗಿಸಿದೆ.

ಚಂದನ್-ನಿವೇದಿತಾ ಗೌಡ ವ್ಯಾಲೆಂಟೈನ್ಸ್ ಡೇಗೆ ಕೇಕ್‌ ಮೇಲೆ ಬರೆಸಿದ ಹೆಸರೇನು ಗೊತ್ತಾ?...

ಸರಳವಾಗಿತ್ತು ನಿವೇದಿತಾ- ಚಂದನ್ ಪ್ರೇಮಿಗಳ ದಿನಾಚರಣೆ. ನೆಟ್ಟಿಗರು ಗಮನ ಸೆಳೆದದ್ದು ಕೇಕ್‌ ಮೇಲಿನ ಹೆಸರು....

ದೇಶದ ತಿಜೋರಿ ತುಂಬಲು ಮೋದಿ ನಡೆಸುತ್ತಿರುವ ಕುಬೇರ ತಂತ್ರ!...

ದೇಶಕ್ಕೆ ಎದುರಾಗಿರುವ ದೊಡ್ಡ ಸವಾಲು ಗೆಲ್ಲಲು ಮೋದಿ ಇಟ್ಟಾಯ್ತು ತ್ರಿವಿಕ್ರಮ ಹೆಜ್ಜೆ. ಜಗತ್ತನ್ನೇ ತಿರುಗಿ ನೋಡುವಂತೆ ಮಾಡುತ್ತಾ ಮೋದಿ ಕೈಗೊಂಡ ಅದೊಂದು ನಿರ್ಧಾರ? 

ಶೇ.95ರಷ್ಟು ಜನರು 'BMW' ತಪ್ಪಾಗಿ ಉಚ್ಚಾರಣೆ; ಸಮೀಕ್ಷೆಯಿಂದ ಬಹಿರಂಗ!...

BMW ಕಾರು ಯಾರಿಗೆ ತಾನೇ ಗೊತ್ತಿಲ್ಲ. ಐಷಾರಾಮಿ, ದುಬಾರಿ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರು. ಗರಿಷ್ಠ ಸುರಕ್ಷತೆ, ಹತ್ತು ಹಲವು ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳಿವೆ. ಆದರೆ ಜರ್ಮನಿಯ ಈ ಬಿಎಂಡಬ್ಲ್ಯೂ ಕಾರನ್ನು ಶೇಕಡಾ 95 ರಷ್ಟು ಮಂದಿ ತಪ್ಪಾಗಿ ಉಚ್ಚಾರಣೆ ಮಾಡುತ್ತಾರೆ. ಹಾಗಾದರೆ ಸರಿಯಾದ ಉಚ್ಚಾರಣೆ ಏನು? 

ಚೆನ್ನೈ ಟೆಸ್ಟ್‌: ಅಶ್ವಿನ್ ಆಕರ್ಷಕ ಶತಕ; ಇಂಗ್ಲೆಂಡ್‌ ಗೆಲ್ಲಲು 482 ರನ್‌ ಗುರಿ...

ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 286 ರನ್‌ಗಳಿಗೆ ಆಲೌಟ್‌ ಆಗಿದ್ದು, ಜೋ ರೂಟ್‌ ಪಡೆಗೆ ಗೆಲ್ಲಲು 482 ರನ್‌ಗಳ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಿಜೆಪಿ ಸರ್ಕಾರ ಶೀಘ್ರ ಪತನ - ಉರುಳುವ ದಿನಗಳು ದೂರವಿಲ್ಲ : ಎಚ್ಚರಿಸಿದ ಮುಖಂಡ...

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಶೀಘ್ರ ಪತನವಾಗಲಿದೆ.  ಉರುಳುವ ದಿನಗಳು ದೂರವಿಲ್ಲ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ. 

ಬಟನೇ ಇಲ್ಲದ ಕತ್ರೀನಾ ಕೈಫೇ ಸೇಫ್ಟಿ ಪಿನ್‌ ಸ್ವೆಟರ್ ಬೆಲೆ 25 ಸಾವಿರವಂತೆ!...

ಸೇಪ್ಟಿಪಿನ್ ಸಿಕ್ಕಿಸಿದ ಸ್ವೆಟರ್ ಹಾಕ್ಕೊಂಡು ಕತ್ರಿನಾ ಸಖತ್ ಟ್ರೋಲ್ ಆಗ್ತಿದ್ದಾರೆ. ಈ ಸ್ಪೆಷಲ್ ಸ್ವೆಟರ್ ಗೆ ೨೫ ಸಾವಿರ ರುಪಾಯಿ ಬೇರೆ ಕೊಟ್ಟಿದ್ದಾರಂತೆ!

click me!