LIVE NOW
Published : Aug 16, 2026, 07:28 AM ISTUpdated : Aug 16, 2026, 10:07 AM IST

India Latest News Live: Kali Dance Controversy - ಕಾಳಿ ವೇಷ ಧರಿಸಿ ಕೆಟ್ಟ ಡ್ಯಾನ್ಸ್ ಪ್ರದರ್ಶನ, ಆಕ್ರೋಶಕ್ಕೆ ಬೆದರಿ ಕ್ಷಮೆ ಕೇಳಿದ ಕೋಲ್ಕತ್ತಾ ಕಲಾತಂಡ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ‘ಅಪ್ಪುಗೆ ವಿದೇಶಾಂಗ ನೀತಿ’ಯನ್ನು ಟೀಕಿಸುತ್ತ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೆಸರನ್ನು ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, ‘ಎರಡೂ ದೇಶಗಳ ಸಂಬಂಧ ಗಟ್ಟಿಯಾಗಿದ್ದು ಪರಸ್ಪರ ಗೌರವ ಹೊಂದಿವೆ’ ಎಂದಿದೆ.

ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್‌, ‘ನಾವು ಇಟಲಿಯೊಂದಿಗೆ ಬಲವಾದ ಸಂಬಂಧ ಹೊಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇಟಲಿಯೊಂದಿಗಿನ ನಮ್ಮ ಸಂಬಂಧಗಳು ಎಲ್ಲ ರೀತಿಯಲ್ಲೂ ವಿಸ್ತರಿಸಿವೆ ಮತ್ತು ಬಲಗೊಂಡಿವೆ, ರಾಜತಾಂತ್ರಿಕ ಅಭ್ಯಾಸದ ಭಾಗವಾಗಿ, ನಾವು ನಮ್ಮ ಸಂಬಂಧಗಳನ್ನು ಬಲಪಡಿಸುವುದು ಮುಖ್ಯ. ಪರಸ್ಪರರ ಭಾವನೆಗಳನ್ನು ಗಮನಿಸುತ್ತೇವೆ ಮತ್ತು ಗೌರವಿಸುತ್ತೇವೆ’ ಎಂದರು.

10:07 AM (IST) Aug 16

Kali Dance Controversy - ಕಾಳಿ ವೇಷ ಧರಿಸಿ ಕೆಟ್ಟ ಡ್ಯಾನ್ಸ್ ಪ್ರದರ್ಶನ, ಆಕ್ರೋಶಕ್ಕೆ ಬೆದರಿ ಕ್ಷಮೆ ಕೇಳಿದ ಕೋಲ್ಕತ್ತಾ ಕಲಾತಂಡ

ಕೋಲ್ಕತ್ತಾದಲ್ಲಿ ಕಾಳಿ ದೇವಿಯ ವೇಷದಲ್ಲಿ ಮಾಡಿದ ನೃತ್ಯವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ನೃತ್ಯದ ವೇಷಭೂಷಣ ಮತ್ತು ಕೆಲವು ಸ್ಟೆಪ್ಸ್‌ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಕಾರ್ಯಕ್ರಮ ಆಯೋಜಿಸಿದ್ದ ಕಲಾತಂಡ ಕ್ಷಮೆ ಕೇಳಿದೆ.

Read Full Story

09:20 AM (IST) Aug 16

ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಹಾಗೂ ಟಿಎಂಸಿ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ಅವರು ರಾಂಪುರ್ಹತ್‌ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರವೊಂದು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

09:01 AM (IST) Aug 16

ಇದೇನೋ ಹೊಟ್ಟೆಯೋ? ಕಲ್ಲಿನ ಗುಡ್ಡೆನಾ? 4 ಸಾವಿರ ಸ್ಟೋನ್ ಹೊರ ತೆಗೆದ ವೈದ್ಯರು

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರ ಪಿತ್ತಕೋಶದಿಂದ ವೈದ್ಯರು 4000ಕ್ಕೂ ಹೆಚ್ಚು ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಲ್ಯಾಪರೊಸ್ಕೋಪಿಕ್ ವಿಧಾನದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Read Full Story

More Trending News