Published : Aug 16, 2026, 07:28 AM ISTUpdated : Aug 16, 2026, 11:15 PM IST

India Latest News Live: ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ‘ಅಪ್ಪುಗೆ ವಿದೇಶಾಂಗ ನೀತಿ’ಯನ್ನು ಟೀಕಿಸುತ್ತ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೆಸರನ್ನು ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, ‘ಎರಡೂ ದೇಶಗಳ ಸಂಬಂಧ ಗಟ್ಟಿಯಾಗಿದ್ದು ಪರಸ್ಪರ ಗೌರವ ಹೊಂದಿವೆ’ ಎಂದಿದೆ.

ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್‌, ‘ನಾವು ಇಟಲಿಯೊಂದಿಗೆ ಬಲವಾದ ಸಂಬಂಧ ಹೊಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇಟಲಿಯೊಂದಿಗಿನ ನಮ್ಮ ಸಂಬಂಧಗಳು ಎಲ್ಲ ರೀತಿಯಲ್ಲೂ ವಿಸ್ತರಿಸಿವೆ ಮತ್ತು ಬಲಗೊಂಡಿವೆ, ರಾಜತಾಂತ್ರಿಕ ಅಭ್ಯಾಸದ ಭಾಗವಾಗಿ, ನಾವು ನಮ್ಮ ಸಂಬಂಧಗಳನ್ನು ಬಲಪಡಿಸುವುದು ಮುಖ್ಯ. ಪರಸ್ಪರರ ಭಾವನೆಗಳನ್ನು ಗಮನಿಸುತ್ತೇವೆ ಮತ್ತು ಗೌರವಿಸುತ್ತೇವೆ’ ಎಂದರು.

11:15 PM (IST) Aug 16

ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ

ಶ್ರೀಲಂಕಾ ವಿರುದ್ಧ ಅಜೇಯ 131 ರನ್ ಸಿಡಿಸಿದ ನಂತರ ದೇವದತ್ ಪಡಿಕ್ಕಲ್ ತೀವ್ರ ಭಾವುಕರಾದರು. ರಾಷ್ಟ್ರೀಯ ತಂಡದಿಂದ ದೂರವಿದ್ದ ಕಳೆದ ಒಂದೂವರೆ ವರ್ಷಗಳಲ್ಲಿ ಪಟ್ಟ ಕಠಿಣ ಪರಿಶ್ರಮ ಮತ್ತು ಅನುಭವಿಸಿದ ಮಾನಸಿಕ ಸಂಘರ್ಷದ ಫಲವೇ ಈ ಶತಕ ಎಂದು ಅವರು ತಿಳಿಸಿದರು.

Read Full Story

10:46 PM (IST) Aug 16

ಫ್ಲೈಟ್ ಟಿಕೆಟ್ ಇಲ್ಲ, ಪಾಸ್‌ಪೋರ್ಟ್ ಬೇಕಿಲ್ಲ - ಆದರೂ ವಿಶ್ವ ಸುತ್ತಿಸಿಬಿಡುತ್ತವೆ ಈ 5 ಸಿನಿಮಾಗಳು!

ಫ್ಲೈಟ್ ಹತ್ತದೆಯೇ ಭಾರತ, ಆಸ್ಟ್ರೇಲಿಯಾ, ಜಪಾನ್, ಅಮೆಜಾನ್ ಕಾಡು ಮತ್ತು ಪೆಸಿಫಿಕ್ ದ್ವೀಪಗಳಂತಹ ವಿಭಿನ್ನ ಜಗತ್ತಿಗೆ ನಮ್ಮನ್ನು ಕರೆದೊಯ್ಯುವ 5 ಅದ್ಭುತ ಸಿನಿಮಾಗಳ ಲಿಸ್ಟ್ ಇಲ್ಲಿದೆ!

Read Full Story

10:36 PM (IST) Aug 16

ಯುಜಿಸಿ NET ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪು, 3 ಪರೀಕ್ಷೆ ರದ್ದುಗೊಳಿಸಿ ರೀ ಎಕ್ಸಾಂಗೆ ದಿನಾಂಕ ಘೋಷಣೆ

ಯುಜಿಸಿ NET 2026ರ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಪತ್ತೆಯಾಗಿದೆ. ಪರಿಣಾಮ ಮೂರು ವಿಷಯಗಳ ಪರೀಕ್ಷೆ ರದ್ದುಗೊಳಿಸಲಾಗಿದೆ. ಇಷ್ಟೇ ಅಲ್ಲ ಮರು ಪರೀಕ್ಷೆಗೆ ದಿನಾಂಕವನ್ನು ಎನ್‌ಟಿಎ ಘೋಷಿಸಿದೆ.

Read Full Story

10:21 PM (IST) Aug 16

ಮಹಾತ್ಮನಿಗೆ ಐಸಿಸಿ ವಿಶೇಷ ಗೌರವ.. 2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ..!

2027ರ ಏಕದಿನ ವಿಶ್ವಕಪ್ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದೇ ಆರಂಭವಾಗಲಿದ್ದು, ಮಹಾತ್ಮ ಗಾಂಧೀಜಿಯವರಿಗೆ ಐಸಿಸಿ ವಿಶೇಷ ಗೌರವ ಸಲ್ಲಿಸುತ್ತಿದೆ. 14 ತಂಡಗಳ ಈ ಮಹಾಸಮರ ನವೆಂಬರ್ 21 ರಂದು ಮುಕ್ತಾಯಗೊಳ್ಳಲಿದೆ.

Read Full Story

10:09 PM (IST) Aug 16

ಐಐಟಿ ಕನಸು ಭಂಗವಾಯ್ತೆಂದು ಗೂಗಲ್ ಬೆನ್ನೇರಿದ ಭಾರತೀಯ ಯುವಕ, ಸೋಲೊಪ್ಪದೇ ಗೆದ್ದ ಕಂಟೆಂಟ್ ಕ್ರಿಯೇಟರ್ ಸ್ಪೂರ್ತಿಯ ಕಥೆ!

ಐಐಟಿ ಸೇರಿ ಗೂಗಲ್‌ನಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಯುವಕನೊಬ್ಬ, ಆ ಅವಕಾಶ ತಪ್ಪಿದರೂ ಧೃತಿಗೆಡಲಿಲ್ಲ. ಬದಲಾಗಿ, ಕಂಟೆಂಟ್ ಕ್ರಿಯೇಟರ್ ಆಗಿ ತನ್ನದೇ ಹಾದಿ ಕಂಡುಕೊಂಡು, ಅಂತಿಮವಾಗಿ ಗೂಗಲ್‌ನಿಂದಲೇ ವಿಶೇಷ ಆಹ್ವಾನ ಪಡೆದು ತನ್ನ ಕನಸನ್ನು ಅನಿರೀಕ್ಷಿತವಾಗಿ ನನಸಾಗಿಸಿಕೊಂಡ ಸ್ಪೂರ್ತಿದಾಯಕ ಕಥೆಯಿದು.
Read Full Story

09:49 PM (IST) Aug 16

ಪ್ರಭಾಸ್ ಖಾನ್ಸಾರ್‌ಗೆ ಮತ್ತೆ ವಾಪಸ್ ಆದ ಪ್ರಶಾಂತ್ ನೀಲ್ - ‘ಸಲಾರ್ 2’ನಲ್ಲಿ ಏನಿರಲಿದೆ?

ಪ್ರಭಾಸ್ ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿರುವ ‘ಸಲಾರ್ 2’ ಸಿನಿಮಾಗೆ ಇದೀಗ ಭರ್ಜರಿ ಅಪ್‌ಡೇಟ್ ಸಿಕ್ಕಿದೆ. ಜೂ.ಎನ್‌ಟಿಆರ್ ಅವರ ಭುಜದ ಗಾಯದಿಂದಾಗಿ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್‌ ಮುಂದೂಡಿಕೆಯಾಗಿದೆ.

Read Full Story

09:39 PM (IST) Aug 16

ಬಿಟ್‌ಕಾಯಿನ್ ದಿನಗಳು ಮುಗಿದೋಯ್ತಾ? ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಡುತ್ತಿದೆ ಈ ಹೊಸ ವಲಯ!

ಕಳೆದ ಐದು ವರ್ಷಗಳಲ್ಲಿ ಬಿಟ್‌ಕಾಯಿನ್ ಹೂಡಿಕೆಯು ಎಐ ಷೇರುಗಳಿಗೆ ಹೋಲಿಸಿದರೆ ಕಡಿಮೆ ಆದಾಯ ನೀಡಿದೆ. ಸೀಮಿತ ಪೂರೈಕೆ ಮತ್ತು ಸಾಂಸ್ಥಿಕ ಹೂಡಿಕೆಯಂತಹ ಸಕಾರಾತ್ಮಕ ಅಂಶಗಳಿದ್ದರೂ, ಎಐ ವಲಯದ ತೀವ್ರ ಬೆಳವಣಿಗೆಯು ಬಿಟ್‌ಕಾಯಿನ್‌ನ ಭವಿಷ್ಯದ ಲಾಭದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.
Read Full Story

08:59 PM (IST) Aug 16

IND vs SL 1st Test Day 2 Highlights - ಮಳೆಯ ನಡುವೆಯೂ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ.. ಪಡಿಕ್ಕಲ್ ಇತಿಹಾಸ

ಮಳೆ ಪೀಡಿತ ಎರಡನೇ ದಿನದಾಟದಲ್ಲಿ ದೇವದತ್ ಪಡಿಕ್ಕಲ್ (167) ಮತ್ತು ಕೆಎಲ್ ರಾಹುಲ್ (82) ಅವರ ಬ್ಯಾಟಿಂಗ್ ನೆರವಿನಿಂದ ಭಾರತ 460/9 ರನ್ ಗಳಿಸಿದೆ. ಲಂಕಾ ಪರ ಪ್ರಭಾತ್ ಜಯಸೂರ್ಯ 4 ವಿಕೆಟ್ ಪಡೆದರೂ, ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

Read Full Story

08:55 PM (IST) Aug 16

1473 ರ ಕಾಲದ ವಿಶ್ವಪ್ರಸಿದ್ಧ ಚಿತ್ರಕಾರ ಆಂಟೊನೆಲ್ಲೊ ಅಪರೂಪದ 4 ವರ್ಣಚಿತ್ರ ಕಲಾಕೃತಿಗಳು ಕಳವು!

ಇಟಲಿಯ ಮೆಸ್ಸಿನಾ ಪ್ರಾದೇಶಿಕ ವಸ್ತುಸಂಗ್ರಹಾಲಯದಿಂದ ಖ್ಯಾತ ವರ್ಣಚಿತ್ರಕಾರ ಆಂಟೊನೆಲ್ಲೊ ಡ ಮೆಸ್ಸಿನಾ ಅವರ ನಾಲ್ಕು ಅಪರೂಪದ ಕಲಾಕೃತಿಗಳು ಕಳುವಾಗಿವೆ. ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಕಳ್ಳರು 'ಸ್ಯಾನ್ ಗ್ರೆಗೋರಿಯೊ ಪಾಲಿಪ್ಟಿಚ್' ಮತ್ತು 'ಪಿಯೆಟಾ' ದಂತಹ ಅಮೂಲ್ಯ ಕೃತಿಗಳನ್ನು ದೋಚಿದ್ದಾರೆ. ಈ ಘಟನೆಯು ಕಲಾ ಜಗತ್ತಿಗೆ ದೊಡ್ಡ ನಷ್ಟವೆಂದು ಪರಿಗಣಿಸಲಾಗಿದೆ.
Read Full Story

08:38 PM (IST) Aug 16

ಅಮ್ಮನ ಸೀರೆಯಲ್ಲಿ ಮಿಂಚಿದ ತ್ರಿಷಾ.. ‘ಇದು ತುಂಬಾ ಸ್ಪೆಷಲ್’ ಎಂದ ಬ್ಯೂಟಿ ಕ್ವೀನ್ - ಫೋಟೋಸ್ ವೈರಲ್

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್..

Read Full Story

08:17 PM (IST) Aug 16

ಐಸ್‌ಲ್ಯಾಂಡ್ ಕರಾವಳಿಯಲ್ಲಿ  ನಾಸಾ ಸಾಹಸ - 50000 ಅಡಿ ಎತ್ತರ, ವಿಮಾನದಲ್ಲಿ ಸೂರ್ಯಗ್ರಹಣ ವೀಕ್ಷಿಸಿ ಯಶಸ್ವಿ ದಾಖಲೆ!

ಐಸ್‌ಲ್ಯಾಂಡ್ ಕರಾವಳಿಯಲ್ಲಿ, ನಾಸಾದ WB-57 ಸಂಶೋಧನಾ ವಿಮಾನವು ಮೋಡಗಳ ಮೇಲೆ 50,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿ ಸಂಪೂರ್ಣ ಸೂರ್ಯಗ್ರಹಣವನ್ನು ಯಶಸ್ವಿಯಾಗಿ ವೀಕ್ಷಿಸಿದೆ. ಈ ಕಾರ್ಯಾಚರಣೆಯಲ್ಲಿ, ಚಂದ್ರನ ನೆರಳನ್ನು ಹಿಂಬಾಲಿಸಿ ಸೌರ ಕರೋನದ ಅಪರೂಪದ ಚಿತ್ರಗಳನ್ನು ಮತ್ತು ದತ್ತಾಂಶವನ್ನು ಸಂಗ್ರಹಿಸಲಾಗಿದ್ದು, ಇದು ಬಾಹ್ಯಾಕಾಶ ಹವಾಮಾನದ ಅಧ್ಯಯನಕ್ಕೆ ನಿರ್ಣಾಯಕವಾಗಿದೆ.
Read Full Story

06:51 PM (IST) Aug 16

ಮೊಬೈಲ್ ರಂಗಕ್ಕೆ ಆಂಬರ್ ಎಂಟರ್‌ಪ್ರೈಸಸ್ ಭರ್ಜರಿ ಎಂಟ್ರಿ, 2027 ರಿಂದ ಭಾರತದಲ್ಲೇ Oppo, OnePlus, Realme ಉತ್ಪಾದನೆ

ಭಾರತದ ಆಂಬರ್ ಎಂಟರ್‌ಪ್ರೈಸಸ್, ಚೀನಾದ ಪ್ರಸಿದ್ಧ ಬ್ರ್ಯಾಂಡ್‌ಗಳಾದ ಒಪ್ಪೋ, ಒನ್‌ಪ್ಲಸ್ ಮತ್ತು ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲೇ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ. 2028ರಿಂದ ವಾಣಿಜ್ಯ ಉತ್ಪಾದನೆ ಆರಂಭವಾಗಲಿದ್ದು, ತೆರಿಗೆ ತನಿಖೆಗಳ ನಂತರ ಚೀನೀ ಬ್ರ್ಯಾಂಡ್‌ಗಳು ತಮ್ಮ ಉತ್ಪಾದನಾ ಜವಾಬ್ದಾರಿಯನ್ನು ಭಾರತೀಯ ಕಂಪನಿಗಳಿಗೆ ಹಸ್ತಾಂತರಿಸುತ್ತಿವೆ.
Read Full Story

06:50 PM (IST) Aug 16

ISRO ಹೊಸ ಹೆಜ್ಜೆ, ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದತ್ತ.. NASA ಹಾದಿಯಲ್ಲಿ ಭಾರತ..!

ಇಸ್ರೋ ತನ್ನ ನೂತನ ಕುಲಶೇಖರಪಟ್ನಂ ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಮೂಲಕ ಬಾಹ್ಯಾಕಾಶ ವಾಣಿಜ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿದೆ. ನಾಸಾ ಮತ್ತು ಸ್ಪೇಸ್‌ಎಕ್ಸ್ ಮಾದರಿಯಂತೆ, ಈ ಕ್ರಮವು ಸಣ್ಣ ಉಪಗ್ರಹಗಳ ಉಡಾವಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಿ ಇಸ್ರೋಗೆ ಹೆಚ್ಚಿನ ಸಂಶೋಧನೆಗೆ ಅವಕಾಶ ಕಲ್ಪಿಸಲಿದೆ.

Read Full Story

06:31 PM (IST) Aug 16

ʻರಾಮಾಯಣʼ ಚಿತ್ರದ ಬಜೆಟ್‌ 4 ಸಾವಿರ ಕೋಟಿ ನಿಜವೇ? ಯಶ್‌ ಕಡೆಯಿಂದಲೇ ಸಿಕ್ಕಿದೆ ಫುಲ್‌ ಕ್ಲಾರಿಟಿ!

ರಾಮಾಯಣ ದೃಶ್ಯಕಾವ್ಯದ ಮೊದಲ ಭಾಗ 2026ರ ನವೆಂಬರ್ 8ರಂದು ಭಾರತದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಒಟ್ಟಿನಲ್ಲಿ, ಅಂದು ಕೋಲಾರದ ಬಸ್ ಡ್ರೈವರ್ ಮಗನಾಗಿ ಬಂದ ಹುಡುಗ, ಇಂದು 4,000 ಕೋಟಿ ರೂಪಾಯಿಯ ಜಾಗತಿಕ ಸಿನಿಮಾವನ್ನು ಮುನ್ನಡೆಸುತ್ತಿದ್ದಾರೆ.

Read Full Story

06:26 PM (IST) Aug 16

IND vs SL 1st test - ಮಳೆಯಿಂದ ಗಾಲೆ ಟೆಸ್ಟ್ ರದ್ದಾದರೆ ಗೆಲ್ಲೋದು ಯಾರು?

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಸ್ಥಿತಿಯಲ್ಲಿದ್ದರೂ ವರುಣನ ಅಬ್ಬರ ಭಾರತದ ಗೆಲುವಿನ ಆಸೆಗೆ ತಣ್ಣೀರು ಎರಚುವ ಮುನ್ಸೂಚನೆ ನೀಡಿದೆ. ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದು, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಭಾರತದ ಕನಸಿಗೆ ಪೆಟ್ಟು ನೀಡುವ ಸಾಧ್ಯತೆಯಿದೆ.

Read Full Story

05:39 PM (IST) Aug 16

ಅತಿಲೋಕ ಸುಂದರಿ ಶ್ರೀದೇವಿ ದೇಹಕ್ಕೆ ಏಕೆ ಎಂಬಾಮಿಂಗ್ ಮಾಡಲಾಗಿತ್ತು? ಈ ಪ್ರಕ್ರಿಯೆ ಬಗ್ಗೆ ನಿಮಗೆ ಗೊತ್ತೇ?

ನಟಿ ಶ್ರೀದೇವಿ ದುಬೈನಲ್ಲಿ ಅಕಾಲಿಕವಾಗಿ ನಿಧನರಾದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅವರ ಪಾರ್ಥಿವ ದೇಹವನ್ನು ದುಬೈನಿಂದ ಭಾರತಕ್ಕೆ ತರಲು ಹಲವು ಕಾನೂನು ಮತ್ತು ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಳಿಸಬೇಕಾಗಿತ್ತು.

Read Full Story

05:11 PM (IST) Aug 16

'ಯಶ್ ಜೊತೆ ಫ್ರೆಂಡ್‌ಶಿಪ್ ಮಾಡ್ಬೇಡಿ, ಅವ್ರು ಕ್ಲಾಶ್ ಮಾಡ್ತಾರೆ' ಅಂದಿದ್ರಾ ರಣವೀರ್ ಸಿಂಗ್? ಇದಕ್ಕೆ ಯಶ್ ಹೇಳಿದ್ದೇನು? ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ!!

'ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಜೊತೆ ನಿಮ್ಮ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗುತ್ತಿದೆ ಅಂದಾಗ ಹಲವರು ಭಯಭೀತರಾಗಿದ್ದರು' ಎಂಬ ಮಾತಿಗೆ ಯಶ್ ಮಾರ್ಮಿಕ ಉತ್ತರ ನೀಡಿದ್ದಾರೆ. ರಜತ್ ಶರ್ಮಾ ಪ್ರಶ್ನೆ ಹಾಗೂ ಯಶ್ ಉತ್ತರದ ಮಧ್ಯೆ ಅಲ್ಲೊಂದು ಟ್ವಿಸ್ಟ್ ಇದೆ. ಹಾಗಿದ್ದರೆ ಅದೇನು ನೋಡಿ..

Read Full Story

04:54 PM (IST) Aug 16

ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಕಾಂಗ್ರೆಸ್ ನಾಯಕ ಹಾಗೂ ಪುತ್ರನ ಮೇಲೆ ಗುಂಡಿನ ದಾಳಿ, ಸ್ಥಳದಲ್ಲೇ ಸಾವು

ಕಾರಿನಲ್ಲಿ ಪುತ್ರನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ದುರ್ಷರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸುತ್ತಿನ ದಾಳಿಯಲ್ಲಿ ಕಾಂಗ್ರೆಸ್ ನಾಯಕ ಹಾಗೂ 24ರ ಹರೆಯದ ಪುತ್ರ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

Read Full Story

04:40 PM (IST) Aug 16

Tirumala Ticket Booking - ತಿರುಮಲ ದರ್ಶನ ಟಿಕೆಟ್ ಬಿಡುಗಡೆಯಲ್ಲಿ ಪ್ರಮುಖ ಬದಲಾವಣೆ; ಭಕ್ತರಿಗೆ ಬಿಗ್ ಅಲರ್ಟ್!

ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ನವೆಂಬರ್ ತಿಂಗಳ ದರ್ಶನ, ಸೇವೆ ಮತ್ತು ವಸತಿ ಕೋಟಾ ಟಿಕೆಟ್‌ಗಳ ಆನ್‌ಲೈನ್ ಬಿಡುಗಡೆ ದಿನಾಂಕಗಳನ್ನು ಪ್ರಕಟಿಸಿದೆ. ಅರ್ಜಿತ ಸೇವೆ, ವಿಶೇಷ ದರ್ಶನ, ಮತ್ತು ವಸತಿ ಬುಕಿಂಗ್‌ಗಾಗಿ ನಿಗದಿತ ದಿನಾಂಕಗಳಂದು ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
Read Full Story

03:23 PM (IST) Aug 16

Actor Trisha Krishnan - ರಾಜಕೀಯವಾಗಿ ತ್ರಿಶಾರನ್ನು ಆಕ್ಟೀವ್ ಮಾಡಿದ್ರಾ? ತಮಿಳುನಾಡು ಸಿಎಂ ವಿಜಯ್‌ಗೆ ಹೊಸ ತಲೆನೋವು ಶುರುವಾಯ್ತು!

ಟಿವಿಕೆ ನಾಯಕ ವಿಜಯ್ ಅವರ ರಾಜಕೀಯಕ್ಕೆ ನಟಿ ತ್ರಿಶಾ ಅವರ ಸಾಮಿಪ್ಯವು ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ತ್ರಿಶಾಗೆ ನೀಡಿದ ಪ್ರಾಮುಖ್ಯತೆಯನ್ನು ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಈ ಅಸ್ಪಷ್ಟತೆಯು ವಿಜಯ್ ಅವರ ರಾಜಕೀಯ ಇಮೇಜ್‌ಗೆ ಹಾನಿ ಮಾಡುವ ಸಾಧ್ಯತೆಯಿದೆ.

Read Full Story

03:00 PM (IST) Aug 16

ಎಲ್‌ಪಿಜಿ ಬಿಕ್ಕಟ್ಟು - ದೇಶದ ಟಾಪ್ ಸಂಸ್ಥೆಗಳಿಗೆ ಗರಿಷ್ಠ ಉತ್ಪಾದನಾ ಗುರಿ ನೀಡಿದ ಕೇಂದ್ರ! ರಿಲಯನ್ಸ್‌ಗೆ ಖಡಕ್ ಆದೇಶ!

ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗುವ ಅಡುಗೆ ಅನಿಲ (LPG) ಪೂರೈಕೆ ವ್ಯತ್ಯಯವನ್ನು ಎದುರಿಸಲು, ಕೇಂದ್ರ ಸರ್ಕಾರವು ಮೊದಲ ಬಾರಿಗೆ ದೇಶೀಯ ಸಂಸ್ಕರಣಾಗಾರಗಳಿಗೆ ಕಡ್ಡಾಯ ಉತ್ಪಾದನಾ ಗುರಿಗಳನ್ನು ನಿಗದಿಪಡಿಸಿದೆ. ಈ ಐತಿಹಾಸಿಕ ನಿರ್ಧಾರವು ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸುವ ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story

02:34 PM (IST) Aug 16

USB ಕೇಬಲ್ ಮೇಲಿನ ತ್ರಿಶೂಲ ಚಿಹ್ನೆಯ ರಹಸ್ಯವೇನು? ವಿದ್ಯಾವಂತರಿಗೂ ಇದು ಗೊತ್ತಿಲ್ಲ!

ಯುಎಸ್‌ಬಿ ಕೇಬಲ್ ಮೇಲಿರುವ ತ್ರಿಶೂಲದಂತಹ ಚಿಹ್ನೆಯನ್ನು ಹೊಂದಿರುತ್ತದೆ. ಹಾಗೆಯೇ ಈ ಕೇಬಲ್‌ಗಳು ವಿವಿಧ ಬಣ್ಣಗಳಲ್ಲಿಯೂ ಲಭ್ಯವಿರುತ್ತದೆ. ಈ ಚಿಹ್ನೆಯ ಜೊತೆಗೆ ಇರುವ 'SS' ಅಕ್ಷರಗಳು, ಸಂಖ್ಯೆಗಳನ್ನು ಕಾಣಬಹುದು.

Read Full Story

01:02 PM (IST) Aug 16

ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ಅಚ್ಚರಿಯ ಶೋಧ - ಬ್ರಹ್ಮಾಂಡದ ನಿಗೂಢ ಬ್ಲ್ಯಾಕ್ ಹೋಲ್ ಮೇಲೆ ಬೆಳಕು ಚೆಲ್ಲಿದ ವಿಜ್ಞಾನಿಗಳು!

ಜೇಮ್ಸ್ ವೆಬ್ ದೂರದರ್ಶಕವು 'ಕಪ್ಪು ಕುಳಿ ನಕ್ಷತ್ರ' ಎನ್ನಬಹುದಾದ ವಿಲಕ್ಷಣ ವಸ್ತುವನ್ನು ಪತ್ತೆಹಚ್ಚಿದೆ. ಬೃಹತ್ ನಕ್ಷತ್ರದಂತೆ ಕಾಣುವ ಈ ವಸ್ತುವು, ತನ್ನೊಳಗೆ ಕಪ್ಪು ಕುಳಿಯನ್ನು ಹೊಂದಿದ್ದು, ಇದು ಬ್ರಹ್ಮಾಂಡದ ಆರಂಭಿಕ 'ಕೆಂಪು ಚುಕ್ಕೆಗಳ' ರಹಸ್ಯವನ್ನು ಭೇದಿಸಬಹುದು.
Read Full Story

12:47 PM (IST) Aug 16

ಗಂಡ-ಹೆಂಡ್ತಿ ಒಬ್ಬರಿಗೊಬ್ರು ಮುಟ್ಟುವಂತಿಲ್ಲ, ಜೋರಾಗಿ ನಗುವಂತಿಲ್ಲ; ವಿಶೇಷ ಆಚರಣೆಯ ಗ್ರಾಮ

ಗ್ರಾಮದಲ್ಲಿ ಶ್ರಾವಣ ಮಾಸದ ಐದು ದಿನಗಳ ಕಾಲ ವಿಶಿಷ್ಟ ಆಚರಣೆಯೊಂದನ್ನು ಪಾಲಿಸಲಾಗುತ್ತದೆ. ಈ ಸಮಯದಲ್ಲಿ ಮಹಿಳೆಯರು ತಮ್ಮ ಪತಿಯನ್ನು ಭೇಟಿಯಾಗುವುದಿಲ್ಲ ಮತ್ತು ಮನೆಯಿಂದ ಹೊರಬರುವುದಿಲ್ಲ.

Read Full Story

12:24 PM (IST) Aug 16

Spain Cricket Team - ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ - ಆಸ್ಟ್ರೇಲಿಯಾದ ಆಲ್-ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಸ್ಪೇನ್!

ಫುಟ್‌ಬಾಲ್‌ಗೆ ಹೆಸರುವಾಸಿಯಾದ ಸ್ಪೇನ್, ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದೆ. ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಫಿನ್ಲೆಂಡ್ ತಂಡವನ್ನು ಸೋಲಿಸುವ ಮೂಲಕ, ಸತತ 21ನೇ ಗೆಲುವು ದಾಖಲಿಸಿ ಆಸ್ಟ್ರೇಲಿಯಾದ 23 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದಿದೆ.

Read Full Story

12:19 PM (IST) Aug 16

ಆ ನಟನ ಸಿನಿಮಾ ನೋಡುವುದನ್ನೇ ನಿಲ್ಲಿಸಿದ್ದೆ, ಅವರ ಮುಖ ನೋಡಲೂ ಇಷ್ಟಪಡುತ್ತಿರಲಿಲ್ಲ - ಯಶ್ ಹೇಳಿದ್ದು ಯಾರಿಗೆ?

ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಸಖತ್ ವೈರಲ್ ಆಗಿದೆ. ನೆಟ್ಟಿಗರು ಆ 'ಒರಟು ನಟ' ಯಾರು ಇರಬಹುದು? ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಯಶ್ ಮಾತ್ರ ಎಲ್ಲಿಯೂ ಆ ನಟನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಸಿಕ್ಕ ಮಾಹಿತಿಯಲ್ಲಿ ಅವರು ಯಾರು ಅಂತ ನಿಮಗೇನಾದ್ರೂ ಗೊತ್ತಾಗುತ್ತಾ ನೋಡಿ..!

Read Full Story

12:06 PM (IST) Aug 16

ಜೇಫ್ರಿ ಎಪ್ಸ್ಟೀನ್ ಆಡಂಬರದ Pರ್ನ್‌ನಿಂದ AI ಸಾಮ್ರಾಜ್ಯ, ಆಂಥ್ರೊಪಿಕ್ ಸಿಇಒ ಪತ್ನಿ ಕ್ಯಾಮಿ ಕ್ಲಾರ್ಕ್ ರೋಚಕ ಪಯಣ!

ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಅವರ ಪತ್ನಿ ಕ್ಯಾಮಿ ಕ್ಲಾರ್ಕ್, ವಿವಾದಾತ್ಮಕ ಆರಂಭದಿಂದ ಸಿಲಿಕಾನ್ ವ್ಯಾಲಿಯ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಜೇಫ್ರಿ ಎಪ್ಸ್ಟೀನ್ ಜೊತೆಗಿನ ಸಂಪರ್ಕದಿಂದ ಹಿಡಿದು, ಇಂದು ಜಾಗತಿಕ AI ತಂತ್ರಜ್ಞಾನ ಮತ್ತು ರಾಜಕೀಯದ ಮೇಲೆ ತೆರೆಮರೆಯಲ್ಲಿ ಪ್ರಭಾವ ಬೀರುವವರೆಗಿನ ಅವರ ಅಸಾಮಾನ್ಯ ಪಯಣವನ್ನು ಈ ಲೇಖನ ವಿವರಿಸುತ್ತದೆ.
Read Full Story

11:09 AM (IST) Aug 16

ರಶ್ಮಿಕಾ ಮಂದಣ್ಣ 'ಶೋ-ಆಫ್' ಕಾಮೆಂಟ್‌ಗೆ ಯಶ್ ಖಡಕ್ ಉತ್ತರ; ಆದ್ರೆ ಟಾಂಗ್ ಕೊಟ್ಟಿದ್ದು ಯಾರಿಗೆ ನೋಡಿ!

'ಆಪ್ ಕೀ ಅದಾಲತ್'ನಲ್ಲಿ ರಾಕಿಂಗ್ ಸ್ಟಾರ್ ಕೇವಲ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ, ಬದಲಾಗಿ ಟೀಕೆ ಮಾಡುವವರಿಗೆ ತಮ್ಮ ಸಭ್ಯತೆಯ ಮೂಲಕವೇ ಸೈಲೆಂಟಾಗಿ 'ಟಕ್ಕರ್' ನೀಡಿದರು. ರಶ್ಮಿಕಾ ಹಳೆಯ ಹೇಳಿಕೆ ಕೆದಕಿದ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇನು? ನೋಡಿ..

Read Full Story

11:08 AM (IST) Aug 16

IND vs SL, 1st Test - 30 ಟೆಸ್ಟ್, 30 ವೆನ್ಯೂ! ಸಚಿನ್ ಕ್ಲಬ್‌ಗೆ ಯಶಸ್ವಿ ಜೈಸ್ವಾಲ್ ಎಂಟ್ರಿ - ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಟೀಂ ಇಂಡಿಯಾ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೇವಲ 30 ಟೆಸ್ಟ್ ಪಂದ್ಯಗಳನ್ನು ಆಡಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.

Read Full Story

10:45 AM (IST) Aug 16

Vande mataram ಅಸಹನೆ ವಿವಾದದ ನಡುವೆ ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ! ಮಿತ್ರ ಭಾರತಕ್ಕೆ UAE ವಿಶೇಷ ಶುಭಾಶಯ | ವಿಡಿಯೋ

ಭಾರತದ 80ನೇ ಸ್ವಾತಂತ್ರ್ಯ ದಿನವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ, ದುಬೈನ ಬುರ್ಜ್ ಖಲೀಫಾ ಕಟ್ಟಡವು ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿಂದ ಝಗಮಗಿಸಿತು. ಇದು ಭಾರತ ಮತ್ತು ಯುಎಇ ನಡುವಿನ ಬಲವಾದ ಸ್ನೇಹ ಸಂಬಂಧವನ್ನು ಜಗತ್ತಿಗೆ ಸಾರಿತು.
Read Full Story

10:07 AM (IST) Aug 16

Kali Dance Controversy - ಕಾಳಿ ವೇಷ ಧರಿಸಿ ಕೆಟ್ಟ ಡ್ಯಾನ್ಸ್ ಪ್ರದರ್ಶನ, ಆಕ್ರೋಶಕ್ಕೆ ಬೆದರಿ ಕ್ಷಮೆ ಕೇಳಿದ ಕೋಲ್ಕತ್ತಾ ಕಲಾತಂಡ

ಕೋಲ್ಕತ್ತಾದಲ್ಲಿ ಕಾಳಿ ದೇವಿಯ ವೇಷದಲ್ಲಿ ಮಾಡಿದ ನೃತ್ಯವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ನೃತ್ಯದ ವೇಷಭೂಷಣ ಮತ್ತು ಕೆಲವು ಸ್ಟೆಪ್ಸ್‌ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಕಾರ್ಯಕ್ರಮ ಆಯೋಜಿಸಿದ್ದ ಕಲಾತಂಡ ಕ್ಷಮೆ ಕೇಳಿದೆ.

Read Full Story

09:20 AM (IST) Aug 16

ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಹಾಗೂ ಟಿಎಂಸಿ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ಅವರು ರಾಂಪುರ್ಹತ್‌ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರವೊಂದು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

09:01 AM (IST) Aug 16

ಇದೇನೋ ಹೊಟ್ಟೆಯೋ? ಕಲ್ಲಿನ ಗುಡ್ಡೆನಾ? 4 ಸಾವಿರ ಸ್ಟೋನ್ ಹೊರ ತೆಗೆದ ವೈದ್ಯರು

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರ ಪಿತ್ತಕೋಶದಿಂದ ವೈದ್ಯರು 4000ಕ್ಕೂ ಹೆಚ್ಚು ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಲ್ಯಾಪರೊಸ್ಕೋಪಿಕ್ ವಿಧಾನದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Read Full Story

More Trending News