LIVE NOW
Published : Aug 29, 2026, 07:25 AM ISTUpdated : Aug 29, 2026, 10:59 AM IST

National News Live: ಸತತ ಐದನೇ ಸಲ ಡೈಮಂಡ್ ಲೀಗ್ ಫೈನಲ್ಸ್‌ ಅರ್ಹತೆ ಪಡೆದ ನೀರಜ್ ಚೋಪ್ರಾ..! ಚಿನ್ನದ ಹುಡುಗನಿಗೆ ಲಂಕಾ ಅಥ್ಲೀಟ್‌ನಿಂದ ಅಗ್ನಿ ಪರೀಕ್ಷೆ

ಸಾರಾಂಶ

ನವದೆಹಲಿ (ಆ.29): ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಹಿಮಾಲ ಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದ್ದು ಮತ್ತಷ್ಟು ಶವಗಳು ಪತ್ತೆಯಾಗಿವೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 580ಕ್ಕೆ ಏರಿಕೆಯಾಗಿದೆ. ಸುಮಾರು 1 ಸಾವಿರ ಮಂದಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:59 AM (IST) Aug 29

ಸತತ ಐದನೇ ಸಲ ಡೈಮಂಡ್ ಲೀಗ್ ಫೈನಲ್ಸ್‌ ಅರ್ಹತೆ ಪಡೆದ ನೀರಜ್ ಚೋಪ್ರಾ..! ಚಿನ್ನದ ಹುಡುಗನಿಗೆ ಲಂಕಾ ಅಥ್ಲೀಟ್‌ನಿಂದ ಅಗ್ನಿ ಪರೀಕ್ಷೆ

ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಸತತ 5ನೇ ಬಾರಿಗೆ ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಮತ್ತೊಂದೆಡೆ, ಶ್ರೀಲಂಕಾದ ರುಮೇಶ್ ಪತಿರಗೆ 92 ಮೀಟರ್‌ಗಿಂತ ಹೆಚ್ಚು ದೂರ ಎಸೆದು ಹೊಸ ಸಾಧನೆ ಮಾಡಿದ್ದು, ಫೈನಲ್ಸ್‌ನಲ್ಲಿ ಅಗ್ರಸ್ಥಾನಿಯಾಗಿ ಪ್ರವೇಶಿಸಿದ್ದಾರೆ.
Read Full Story

10:38 AM (IST) Aug 29

22 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ಮರುಪಾವತಿ ಡೀಲ್‌ ಬೆನ್ನಲ್ಲೇ ಸ್ವಿಜರ್ಲೆಂಡ್‌ಗೆ ಶಿಫ್ಟ್‌ ಆಗುವ ಸೂಚನೆ ನೀಡಿದ ಉದ್ಯಮಿ!

ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ NCLT ಕೇವಲ 6.5 ಕೋಟಿ ರೂ. ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದೆ. ಎಲ್ಲವನ್ನೂ ಕಳೆದುಕೊಂಡಿರುವುದಾಗಿ ಹೇಳಿರುವ ಚಂದ್ರ, ತಾವು ಸ್ವಿಜರ್ಲೆಂಡ್‌ನಲ್ಲಿ ಕೆಲಸ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.

Read Full Story

10:16 AM (IST) Aug 29

60 ಕಿ.ಮೀ ಕ್ಯಾಬ್ ಬುಕ್ಕಿಂಗ್‌ಗೆ 240 ಕಿ.ಮೀ ಚಾರ್ಜ್, ಇದು ಓಲಾ Scam; 5,662 ರೂ. ಬಿಲ್ ನೋಡಿ ಬೆಚ್ಚಿಬಿದ್ದ ಪ್ರಯಾಣಿಕ

ದೆಹಲಿಯಲ್ಲಿ 6 ಗಂಟೆಗಳ ಓಲಾ ಪ್ಯಾಕೇಜ್ ಬುಕ್ ಮಾಡಿದ ಪ್ರಯಾಣಿಕರ ಗುಂಪಿಗೆ ಆಘಾತ ಎದುರಾಗಿದೆ. ಕೇವಲ 60 ಕಿ.ಮೀ ಪ್ರಯಾಣಕ್ಕೆ 240 ಕಿ.ಮೀ ಹೆಚ್ಚುವರಿ ಶುಲ್ಕ ಸೇರಿಸಿ 5,662 ರೂ. ಬಿಲ್ ನೀಡಲಾಗಿದ್ದು, ಈ ವಂಚನೆಯ ಬಗ್ಗೆ ಗ್ರಾಹಕ ಸೇವಾ ವಿಭಾಗ ಸ್ಪಂದಿಸಿಲ್ಲ.

Read Full Story

10:16 AM (IST) Aug 29

ಐಸಿಸಿ ವಿಶ್ವ ಟೆಸ್ಟ್‌ ಫೈನಲ್‌ಗೇರಲು ಭಾರತ ಸೇರಿ 5 ಟೀಮ್ ಹೋರಾಟ; ಇನ್ನೂ ಟೀಂ ಇಂಡಿಯಾಗಿದೆಯಾ ಚಾನ್ಸ್?

2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್ ತೀವ್ರಗೊಂಡಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂಚೂಣಿಯಲ್ಲಿವೆ. ಭಾರತದ ಫೈನಲ್ ಕನಸು ಜೀವಂತವಾಗಿದ್ದರೂ, ಉಳಿದ 7 ಪಂದ್ಯಗಳ ಪೈಕಿ ಕನಿಷ್ಠ 6ರಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
Read Full Story

09:25 AM (IST) Aug 29

Hanuman Ansh - 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!

ಯಾವುದೇ ಹೈಪ್ ಇಲ್ಲದೆ ಬಿಡುಗಡೆಯಾದ, ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ 'ಹನುಮಾನ್ ಅಂಶ್' ಎಂಬ ಆಧ್ಯಾತ್ಮಿಕ ಸಿನಿಮಾವು ಪ್ರೇಕ್ಷಕರ ಮೌತ್ ಟಾಕ್‌ನಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಯಶಸ್ಸು ಸಾಧಿಸಿದೆ. ಕಡಿಮೆ ಸ್ಕ್ರೀನ್‌ಗಳಲ್ಲಿ ಆರಂಭವಾದ ಈ ಚಿತ್ರ ಇದೀಗ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
Read Full Story

08:38 AM (IST) Aug 29

ನೇಪಾಳ ಜಲಪ್ರಳಯ, ಇನ್ಫೋಸಿಸ್ ಅಧಿಕಾರಿ ಲಕ್ಷ್ ಗೋಪಿಸೆಟ್ಟಿ ನಾಪತ್ತೆ

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ತೆರಳಿದ್ದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ದೃಢಪಡಿಸಿದ್ದು, ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.

Read Full Story

08:17 AM (IST) Aug 29

ನೇಪಾಳ ಪ್ರವಾಹದ ನೀರಲ್ಲಿ ತೇಲಿ ಬಂದ ಶವದ ಒಡವೆ ಕಳವು ಮಾಡಿದ್ರು!

ನೇಪಾಳ ಪ್ರವಾಹದ ವೇಳೆ ನದಿಯಲ್ಲಿ ಕೊಚ್ಚಿ ಬಂದ ಮಹಿಳೆಯ ಶವದಿಂದ ಆಭರಣ ಕದ್ದ ಇಬ್ಬರನ್ನು ಬಂಧಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ಶವಾಗಾರಗಳು ಭರ್ತಿಯಾಗಿವೆ. ಪ್ರವಾಹದ ರಭಸಕ್ಕೆ ನೇಪಾಳದಿಂದ ಸುಮಾರು 7 ಶವಗಳು ಭಾರತದ ನದಿಗಳಲ್ಲಿ ತೇಲಿ ಬಂದಿವೆ.
Read Full Story

07:53 AM (IST) Aug 29

ಟಿಬೆಟ್‌ನಲ್ಲಿ ಒಡೆದ ಅಣೆಕಟ್ಟು - ಪುನಃ ನೇಪಾಳಕ್ಕೆ ಪ್ರವಾಹ ಭೀತಿ

ಟಿಬೆಟ್ ಬದಿಯ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿಯಿಂದ ನೇಪಾಳದಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದೆ.

Read Full Story

07:37 AM (IST) Aug 29

ನೇಪಾಳ ನೆರೆಗೆ 580 ಸಾವು - 320 ಭಾರತೀಯರು ನಾಪತ್ತೆ, 1000 ಜನರಿಗಾಗಿ ಹುಡುಕಾಟ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಮೃತರ ಸಂಖ್ಯೆ 580ಕ್ಕೆ ಏರಿದೆ. 320 ಭಾರತೀಯರು ಸೇರಿದಂತೆ ಸುಮಾರು 1 ಸಾವಿರ ಮಂದಿ ನಾಪತ್ತೆಯಾಗಿದ್ದು, ನದಿಗಳಲ್ಲಿ ತಾತ್ಕಾಲಿಕ ಕೆರೆಗಳು ಸೃಷ್ಟಿಯಾಗಿರುವುದರಿಂದ ಎರಡನೇ ಪ್ರವಾಹದ ಅಲೆಯ ಎಚ್ಚರಿಕೆ ನೀಡಲಾಗಿದೆ.
Read Full Story

More Trending News