Published : Aug 29, 2026, 07:25 AM ISTUpdated : Aug 29, 2026, 10:46 PM IST

National News Live: ಸಾಕ್ಷಿಯೋ? ಅಪರಾಧಿಯೋ? ‘I Nobody’ ಕಥೆಯ ಈ ಪ್ರಶ್ನೆ ನಿಮ್ಮನ್ನು ಕೊನೆಯವರೆಗೂ ಕಾಡುತ್ತೆ!

ಸಾರಾಂಶ

ನವದೆಹಲಿ (ಆ.29): ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಹಿಮಾಲ ಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದ್ದು ಮತ್ತಷ್ಟು ಶವಗಳು ಪತ್ತೆಯಾಗಿವೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 580ಕ್ಕೆ ಏರಿಕೆಯಾಗಿದೆ. ಸುಮಾರು 1 ಸಾವಿರ ಮಂದಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:46 PM (IST) Aug 29

ಸಾಕ್ಷಿಯೋ? ಅಪರಾಧಿಯೋ? ‘I Nobody’ ಕಥೆಯ ಈ ಪ್ರಶ್ನೆ ನಿಮ್ಮನ್ನು ಕೊನೆಯವರೆಗೂ ಕಾಡುತ್ತೆ!

ಸಾಮಾನ್ಯ ಸರ್ಕಾರಿ ನೌಕರನೊಬ್ಬ ಅಚಾನಕ್ಕಾಗಿ ಬ್ಯಾಂಕ್ ದರೋಡೆ ಕೇಸ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಪೊಲೀಸ್, ಮೀಡಿಯಾ, ಸಮಾಜದ ಅನುಮಾನ ಹೀಗೆ ಎಲ್ಲ ಕಡೆಯಿಂದ ಒತ್ತಡ ಬಂದಾಗ, ತನ್ನ ಕುಟುಂಬವನ್ನು ಉಳಿಸಲು ಆತ ಏನು ಮಾಡುತ್ತಾನೆ ಎನ್ನುವುದೇ ಈ ವಿಭಿನ್ನ ಥ್ರಿಲ್ಲರ್ ಕಥೆಯ ತಿರುಳು.

Read Full Story

10:32 PM (IST) Aug 29

ಮಧ್ಯರಾತ್ರಿಯಿಂದ ಇನ್​ಸ್ಟಾ, ಫೇಸ್​ಬುಕ್​ ಸ್ಟಾಪ್​! ಹಗಲಲ್ಲೂ ಟೈಮ್​ ಲಿಮಿಟ್​ - ಯಾವಾಗಿಂದ ಜಾರಿ- ಏನಿದು ರೂಲ್ಸ್​

ಸಾಮಾಜಿಕ ಮಾಧ್ಯಮ ವ್ಯಸನದ ಆರೋಪಗಳ ಹಿನ್ನೆಲೆಯಲ್ಲಿ, ಮೆಟಾ ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹದಿಹರೆಯದವರಿಗಾಗಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹೊಸ ನಿಯಮಗಳ ಅಡಿಯಲ್ಲಿ, 18 ವರ್ಷದೊಳಗಿನ ಬಳಕೆದಾರರಿಗೆ ಪ್ರತಿದಿನ ಎರಡು ಗಂಟೆಗಳ ಬಳಕೆಯ ಮಿತಿ ಮತ್ತು ರಾತ್ರಿ ವೇಳೆ ಸ್ವಯಂಚಾಲಿತ ಪ್ರವೇಶ ನಿರ್ಬಂಧವನ್ನು ವಿಧಿಸಲಾಗುತ್ತದೆ. ಈ ಬದಲಾವಣೆಗಳು ಮುಂಬರುವ ತಿಂಗಳುಗಳಲ್ಲಿ ಜಾರಿಗೆ ಬರಲಿವೆ.
Read Full Story

10:20 PM (IST) Aug 29

6, 6, 6, 6, 6, 6.. CSK ಆಟಗಾರನ ರೌದ್ರಾವತಾರ! 234ರ ಸ್ಟ್ರೈಕ್‌ರೇಟ್‌ನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಟಾರ್‌

ಸಿಎಸ್‌ಕೆ ಆಟಗಾರ ಡೆವಾಲ್ಡ್ ಬ್ರೆವಿಸ್ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಅಜೇಯ 75 ರನ್ ಚಚ್ಚುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. 234ರ ಸ್ಟ್ರೈಕ್ ರೇಟ್‌ನಲ್ಲಿ ಆಡಿ 6 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದ ಬ್ರೆವಿಸ್, ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾವನ್ನು ತ್ರಿಕೋನ ಸರಣಿಯಲ್ಲಿ ಜೀವಂತವಾಗಿರಿಸಿದ್ದಾರೆ.

Read Full Story

09:16 PM (IST) Aug 29

ಟಾಕ್ಸಿಕ್ 'Vicious Fight' ಸೀಕ್ರೆಟ್ ಔಟ್ - ಯಶ್ ಕ್ರಿಯೇಟಿವಿಟಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಫಿದಾ

'ಟಾಕ್ಸಿಕ್' ಸಿನಿಮಾದ 'ವಿಷಯಸ್ ಫೈಟ್' ಅನ್ನೋ ಸರ್ಕಸ್ ಆ್ಯಕ್ಷನ್ ಸೀನ್‌ನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಹಾಲಿವುಡ್ ಸ್ಟಂಟ್ ಕೋಆರ್ಡಿನೇಟರ್ ಜೆಜೆ ಪೆರ್ರಿ, ನಟ ಯಶ್ ಅವರ ಫಿಟ್ನೆಸ್ ಹಾಗೂ ಕ್ರಿಯೇಟಿವ್ ಇನ್‌ಪುಟ್‌ಗಳನ್ನು ಹಾಡಿ ಹೊಗಳಿದ್ದಾರೆ.

Read Full Story

09:16 PM (IST) Aug 29

ವಿಚಿತ್ರ ಕಳ್ಳತನ! ಮನೆ ಕಳ್ಳತನಕ್ಕೆ ಬಂದ ಕಳ್ಳರು ಈ ನಾಯಿಗೆ ಏನು ಮಾಡಿದ್ದಾರೆ ನೋಡಿ..

ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕಳ್ಳತನ ಮಾಡುವಾಗ ಸಾಕುನಾಯಿ ಬೊಗಳಬಾರದು ಎಂಬ ಕಾರಣಕ್ಕೆ ಕಳ್ಳರು ಅದರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ನಡೆಸಿದ್ದಾರೆ. ಮಧ್ಯರಾತ್ರಿ ಸುರಿದ ಭಾರಿ ಮಳೆಯ ಲಾಭ ಪಡೆದು ಮನೆಯ ಬೀಗ ಮುರಿದ ಖದೀಮರು ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 40,000 ರೂ. ನಗದು ದೋಚಿ ಪರಾರಿಯಾಗಿದ್ದಾರೆ.

Read Full Story

07:28 PM (IST) Aug 29

ಏಷ್ಯನ್ ಗೇಮ್ಸ್‌ಗೂ ಮುನ್ನ ಭಾರತಕ್ಕೆ ಬಿಗ್ ಶಾಕ್; ನೀರಜ್ ಚೋಪ್ರಾ ಟೂರ್ನಿಯಿಂದ ಔಟ್!

ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಪಾದದ ಗಾಯದ ಕಾರಣದಿಂದಾಗಿ ಈ ಸೀಸನ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ನಿರ್ಧಾರದಿಂದಾಗಿ, ಅವರು ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾಗವಹಿಸುವುದಿಲ್ಲ. ತರಬೇತಿ ವೇಳೆ ಗಾಯಗೊಂಡಿರುವ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story

06:59 PM (IST) Aug 29

Income Tax - ಆಗಸ್ಟ್ 31ರ ಗಡುವು ನಿಮಗೂ ಅನ್ವಯಿಸುತ್ತಾ? ಯಾರಿಗೆಲ್ಲಾ ಕಡ್ಡಾಯ?

ವ್ಯಾಪಾರ ಅಥವಾ ವೃತ್ತಿ ಆದಾಯವಿದ್ದು, ಟ್ಯಾಕ್ಸ್ ಆಡಿಟ್ ಅಗತ್ಯವಿಲ್ಲದವರಿಗೆ ಐಟಿಆರ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಈ ಗಡುವು ತಪ್ಪಿದರೆ ದಂಡ ಸಹಿತ 'ಬಿಲೇಟೆಡ್ ರಿಟರ್ನ್' ಸಲ್ಲಿಸಬಹುದು, ಆದರೆ ಆಡಿಟ್ ಅಗತ್ಯವಿರುವವರಿಗೆ ಅಕ್ಟೋಬರ್ 31ರವರೆಗೆ ಸಮಯಾವಕಾಶವಿದೆ.
Read Full Story

06:32 PM (IST) Aug 29

22 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ರೂ. ಇತ್ಯರ್ಥ ವಿವಾದ - ಅಂಬಾನಿ ವಿರುದ್ಧ ಸುಭಾಷ್‌ ಚಂದ್ರ ಗರಂ, ನನ್ನ ಬಳಿ ಈಗೇನೂ ಇಲ್ಲ!

ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಡಾ. ಸುಭಾಷ್ ಚಂದ್ರ ಅವರು, ಮುಖೇಶ್ ಅಂಬಾನಿ ಮಾಲೀಕತ್ವದ 'ನೆಟ್‌ವರ್ಕ್ 18' ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲಿರುವುದು ವೈಯಕ್ತಿಕ ಸಾಲವಲ್ಲ, ಬದಲಿಗೆ ಕಂಪನಿ ಸಾಲಗಳಿಗೆ ನೀಡಿದ ವೈಯಕ್ತಿಕ ಗ್ಯಾರಂಟಿ ಎಂದು ಸ್ಪಷ್ಟಪಡಿಸಿರುವ ಅವರು, ಈ ದುರುದ್ದೇಶಪೂರಿತ ಪ್ರಚಾರವನ್ನು ನಿಲ್ಲಿಸುವಂತೆ ಅಂಬಾನಿಯವರಿಗೆ ಮನವಿ ಮಾಡಿದ್ದಾರೆ.
Read Full Story

05:57 PM (IST) Aug 29

Kidney Stone - ಕಿಡ್ನಿಯಲ್ಲಿ ಕಲ್ಲು ಉಂಟಾದರೆ ಹೇಗೆ ಗೊತ್ತಾಗುತ್ತೆ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ!

ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಆಹಾರ ಪದ್ದತಿಯಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಾಗುವುದನ್ನು ಕೇಳುತ್ತಲೇ ಬರುತ್ತಿದ್ದೇವೆ. ಅಷ್ಟಕ್ಕೂ ಕಿಡ್ನಿಯಲ್ಲಿ ಕಲ್ಲಾಗುವುದು ಅಂದರೆ ಏನು? ಅದರ ಲಕ್ಷಣಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

Read Full Story

05:55 PM (IST) Aug 29

ನಟಿ ಮೀನಾಕ್ಷಿ ಚೌಧರಿಗೆ ಸಿಕ್ಕಾಪಟ್ಟೆ ಇಷ್ಟವಾದ ಆ ಹೀರೋ ಯಾರು? ಹೆಸರು ಕೇಳಿ ಅಭಿಮಾನಿಗಳೇ ಶಾಕ್

ಟಾಲಿವುಡ್ ನಟಿ ಮೀನಾಕ್ಷಿ ಚೌಧರಿ ಸಿಂಬು ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ವೈರಲ್ ಆಗಿದೆ. ಸಿನಿಮಾ ಇಂಡಸ್ಟ್ರಿಯ ಯಾವ ಹೀರೋ ಜೊತೆ ‘ಮೂವಿ ಡೇಟ್’ಗೆ ಹೋಗಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೀನಾಕ್ಷಿ, ತಾನು ಸಿಂಬು ಜೊತೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

Read Full Story

05:37 PM (IST) Aug 29

1978ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ರಂಗಾ-ಬಿಲ್ಲಾ ಕೇಸ್ - ಈಗ OTTಯಲ್ಲಿ ಸೃಷ್ಟಿಸುತ್ತಿದೆ ಭಯ

OTT ಪ್ಲಾಟ್‌ಫಾರ್ಮ್‌ಗಳು ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳಿಗೆ ದೊಡ್ಡ ವೇದಿಕೆಯಾಗಿವೆ. ಪ್ರತಿವಾರ ಹತ್ತಾರು ಸಿನಿಮಾಗಳು, ಸಿರೀಸ್‌ಗಳು ಬಿಡುಗಡೆಯಾದರೂ ಕೆಲವೇ ಕೆಲವು ಕಂಟೆಂಟ್‌ಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ.

Read Full Story

05:36 PM (IST) Aug 29

'ಅಪ್ಪ, ಅಮ್ಮನ ಒಬ್ಬಂಟಿಯಾಗಿ ಬಿಡಬೇಡ..' ಬೆಳಗ್ಗೆ ರಾಖಿ ಕಟ್ಟಿಸಿಕೊಂಡು ಸಂಜೆ ಅಕ್ಕನಿಗೆ ಶಾಕಿಂಗ್‌ ಗಿಫ್ಟ್‌ ಕೊಟ್ಟ ತಮ್ಮ

ಬೆಳಗ್ಗೆ ಅಕ್ಕನ ಮನೆಗೆ ಹೋಗಿ ಖುಷಿ ಖುಷಿಯಾಗಿ ರಾಖಿ ಕಟ್ಟಿಸಿಕೊಂಡು ಬಂದಿದ್ದ. ಸಂಜೆ ವೇಳೆಗೆ ಅದೇ ಅಕ್ಕನಿಗೆ ಶಾಕಿಂಗ್‌ ಮೆಸೇಜ್‌ ಒಂದು ಬಂದಿತ್ತು. ಮಮತೆಯ ತೊಟ್ಟಿಲಾಗಿದ್ದ ಅಕ್ಕನಿಗೆ ರಕ್ಷಾ ಬಂಧನ್‌ ದಿನವೇ ತಮ್ಮ ಮರೆಯಲಾಗದ ನೆನಪನ್ನು ಕೊಟ್ಟು ಹೋಗಿದ್ದಾನೆ.

Read Full Story

05:34 PM (IST) Aug 29

Planetary Transit - ಸೆಪ್ಟೆಂಬರ್‌ನಲ್ಲಿ 4 ಗ್ರಹಗಳ ಮಹಾಸಂಚಾರ - ಈ 8 ರಾಶಿಗಳಿಗೆ ಶುಭ ದಿನಗಳು ಆರಂಭ!

ಸೆಪ್ಟೆಂಬರ್ ತಿಂಗಳಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸಲಿವೆ. ಈ ಮಹಾ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಆ ರಾಶಿಗಳು ಯಾವುವು ಅಂತ ನೋಡೋಣ.

Read Full Story

05:18 PM (IST) Aug 29

ಶೀಘ್ರವೇ ಆಗಸಕ್ಕೆ ಚಿಮ್ಮಲಿದೆ ಇಸ್ರೋದ GSLV-F17 ರಾಕೆಟ್, ಬಾಹ್ಯಾಕಾಶದಲ್ಲಿದ್ದು ಭಾರತ ಕಾಯಲಿದೆ EOS-5!

ಹಿಂದಿನ ವೈಫಲ್ಯಗಳಿಂದ ಪಾಠ ಕಲಿತಿರುವ ಇಸ್ರೋ, GSLV-F17 ರಾಕೆಟ್ ಮೂಲಕ 'EOS-5' ಭೂ-ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಈ ಉಪಗ್ರಹವು ಭೂಮಿಯಿಂದ 36,000 ಕಿ.ಮೀ ಎತ್ತರದಲ್ಲಿ ನೆಲೆನಿಂತು, ನೈಸರ್ಗಿಕ ವಿಕೋಪಗಳ ಮೇಲೆ ನಿರಂತರ ನಿಗಾ ವಹಿಸಲಿದೆ. ಈ ಉಡಾವಣೆಯು 'ಗಗನಯಾನ್' ಸೇರಿದಂತೆ ಇಸ್ರೋದ ಭವಿಷ್ಯದ ಯೋಜನೆಗಳಿಗೆ ನಿರ್ಣಾಯಕವಾಗಿದೆ.
Read Full Story

05:05 PM (IST) Aug 29

'ಮನುಷ್ಯರಲ್ಲಿ 2 ರೀತಿ, ಹಣ ಇರೋರು' - ನಾಗಾರ್ಜುನ 100ನೇ ಸಿನಿಮಾ ಟೈಟಲ್ ಗ್ಲಿಂಪ್ಸ್ ರೋಮಾಂಚನಕಾರಿ

ಕಿಂಗ್ ನಾಗಾರ್ಜುನ ಅವರ ಬಹುನಿರೀಕ್ಷಿತ 100ನೇ ಸಿನಿಮಾ 'ಕಿಂಗ್ 100'ನ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಕಾರ್ತಿಕ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ ಅವರು ಬಡತನದಿಂದ ಸಾವಿರಾರು ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಉದ್ಯಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Read Full Story

04:33 PM (IST) Aug 29

ಪ್ರವಾಹದಲ್ಲಿ ಕೊಚ್ಚಿಬಂದ ಬ್ಯಾಂಕ್‌ ಲಾಕರ್..‌ ಅದೃಷ್ಟ ಖುಲಾಯಿಸಿತು ಎಂದು 57 ಲಕ್ಷ ರೂಪಾಯಿ ದೋಚಿದರು

ನೇಪಾಳದ ರಸುವಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ನಗದು ತುಂಬಿದ ಭದ್ರತಾ ಪೆಟ್ಟಿಗೆಯೊಂದು ನೆರೆಯ ಧಾಡಿಂಗ್ ಜಿಲ್ಲೆಯ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿದೆ. ಈ ಪೆಟ್ಟಿಗೆಯನ್ನು ಕಂಡ ಸ್ಥಳೀಯರು ಒಡೆದು ಹಣ ದೋಚಿದ್ದು, ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 29 ಜನರನ್ನು ಬಂಧಿಸಿ ಸುಮಾರು 57 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

Read Full Story

04:27 PM (IST) Aug 29

2027ರಲ್ಲಿ ದೇಶೀಯ ಹೋಟೆಲ್ ಉದ್ಯಮಕ್ಕೆ ಭಾರಿ ಸುಗ್ಗಿ ಕಾಲ, ಲೀಲಾ, ತಾಜ್, ಐಟಿಸಿ ಆದಾಯದಲ್ಲಿ ಭಾರಿ ಜಿಗಿತ!

ಫಿಲಿಪ್ ಕ್ಯಾಪಿಟಲ್ ವರದಿಯ ಪ್ರಕಾರ, ದೇಶೀಯ ಪ್ರವಾಸೋದ್ಯಮ ಮತ್ತು ಕಾರ್ಪೊರೇಟ್ ಕ್ಷೇತ್ರದ ಚೇತರಿಕೆಯಿಂದಾಗಿ 2027ರ ವೇಳೆಗೆ ಭಾರತೀಯ ಹೋಟೆಲ್ ಉದ್ಯಮವು ಭಾರಿ ಪ್ರಗತಿ ಸಾಧಿಸಲಿದೆ. ಜಾಗತಿಕ ಸವಾಲುಗಳ ನಡುವೆಯೂ, ವಿಹಾರ ತಾಣಗಳಲ್ಲಿನ ಬೇಡಿಕೆ ಹೆಚ್ಚಳ ಮತ್ತು ಸೀಮಿತ ಹೊಸ ಹೋಟೆಲ್ ಪೂರೈಕೆಯಿಂದಾಗಿ ಉದ್ಯಮವು ಮೊದಲ ತ್ರೈಮಾಸಿಕದಲ್ಲಿ ಉತ್ತಮ ಆದಾಯ ಗಳಿಸಿದೆ.
Read Full Story

04:19 PM (IST) Aug 29

'ಬಿಗ್ ಬಾಸ್' ಶೋನ ನಿಜವಾದ ಓನರ್ ಇವರೇ ನೋಡಿ.. ಪ್ರತೀ ಸೀಸನ್‌ಗೆ ಗಳಿಸುವ ಹಣ ಎಷ್ಟು ಗೊತ್ತಾ?

ಭಾರತದಲ್ಲಿ 2006ರಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಶುರುವಾದಾಗ ಅರ್ಷದ್ ವಾರ್ಸಿ ನಿರೂಪಣೆ ಮಾಡಿದ್ದರು. ಆಮೇಲೆ ಶಿಲ್ಪಾ ಶೆಟ್ಟಿ, ಮಹಾ ನಾಯಕ ಅಮಿತಾಭ್ ಬಚ್ಚನ್ ಕೂಡ ಬಂದು ಹೋದರು. ಆದರೆ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಕನ್ನಡದಲ್ಲಿ ಕಿಚ್ಚ ಸುದೀಪ್ ಈ ಶೋಗೆ ಬ್ರಾಂಡ್ ವ್ಯಾಲ್ಯೂ ತಂದುಕೊಟ್ಟರು. ಈ ಸೀಕ್ರೆಟ್ ನೋಡಿ..

Read Full Story

04:08 PM (IST) Aug 29

ಪ್ರತಿ 10 ನಿಮಿಷಕ್ಕೊಂದು ಭಯಾನಕ ತಿರುವು; OTTಯಲ್ಲಿರೋ ನಿಗೂಢ ಮಲಯಾಳಂ ಹಾರರ್ ಸಿನಿಮಾ

2021ರಲ್ಲಿ ಬಿಡುಗಡೆಯಾದ ಮಲಯಾಳಂನ ಒಂದು ನಿಗೂಢ ಹಾರರ್ ಸಿನಿಮಾವಾಗಿದೆ. ಆರೋಪಿಯೊಬ್ಬನನ್ನು ಬಂಧಿಸಲು ಕಾಡಿನ ಗ್ರಾಮಕ್ಕೆ ಮಾರುವೇಷದಲ್ಲಿ ಬರುವ ಪೊಲೀಸರು, ಅಲ್ಲಿನ ವಿಚಿತ್ರ ಘಟನೆಗಳಿಂದ ಭಯಭೀತರಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ರೋಚಕ ಸಿನಿಮಾ ಸೋನಿ ಲಿವ್ ಓಟಿಟಿಯಲ್ಲಿ ಲಭ್ಯವಿದೆ.

Read Full Story

03:55 PM (IST) Aug 29

Mamata Banerjee - ಕೋರ್ಟ್ ಆದೇಶ ಉಲ್ಲಂಘಿಸಿ ರ‍್ಯಾಲಿ; ಮಮತಾ ಬ್ಯಾನರ್ಜಿ ವಿರುದ್ಧ FIR!

ಕೋಲ್ಕತ್ತಾದಲ್ಲಿ ಹೈಕೋರ್ಟ್ ಆದೇಶವನ್ನು ಮೀರಿ ಬೃಹತ್ ರ‍್ಯಾಲಿ ನಡೆಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಯೋಜಕರ ವಿರುದ್ಧ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read Full Story

03:30 PM (IST) Aug 29

ಟಾಟಾ ಗ್ರೂಪ್‌ನಲ್ಲಿ ಬಿಗ್ ಸಂಚಲನ, ತನ್ನ ಪಾಲಿನ ಷೇರು ಪಡೆದುಕೊಂಡು ಹೊರಬರಲು ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ನಿರ್ಧಾರ!

ಭಾರಿ ಸಾಲದ ಹೊರೆಯಿಂದ ಬಳಲುತ್ತಿರುವ ಶಾಪೂರ್ಜಿ ಪಲ್ಲೊಂಜಿ (SP) ಗ್ರೂಪ್, ಟಾಟಾ ಸನ್ಸ್‌ನಲ್ಲಿರುವ ತನ್ನ ಶೇ. 18.4 ರಷ್ಟು ಪಾಲನ್ನು ಹಿಂಪಡೆಯಲು ಮಾತುಕತೆ ನಡೆಸುತ್ತಿದೆ. ಷೇರು ವಿನಿಮಯ, ನೇರ ಮರುಖರೀದಿ, ಅಥವಾ ಜಾಗತಿಕ ಹೂಡಿಕೆದಾರರಿಗೆ ಮಾರಾಟ ಮಾಡುವಂತಹ ಮೂರು ಪ್ರಮುಖ ಮಾರ್ಗಗಳನ್ನು ಎರಡೂ ಕಡೆಯವರು ಪರಿಶೀಲಿಸುತ್ತಿದ್ದಾರೆ.
Read Full Story

03:30 PM (IST) Aug 29

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಯಾರು? ಗವಾಸ್ಕರ್, ಧೋನಿ, ಕೊಹ್ಲಿ ಇವರ್ಯಾರು ಅಲ್ಲವೆಂದ ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಯಾರೆಂಬ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಕೊಹ್ಲಿ, ಧೋನಿ, ಸೆಹ್ವಾಗ್ ಅವರಂತಹ ದಿಗ್ಗಜರನ್ನು ಹೋಲಿಕೆ ಮಾಡಿದ ಅವರು, ಅಂತಿಮವಾಗಿ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೇ ಶ್ರೇಷ್ಠ ಎಂದು ತಮ್ಮ ಆಯ್ಕೆಯನ್ನು ಪ್ರಕಟಿಸಿದ್ದಾರೆ.
Read Full Story

03:27 PM (IST) Aug 29

El Nino ಎಫೆಕ್ಟ್ - ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ; ಭಾರತದ ಹಣದುಬ್ಬರದ ಬಗ್ಗೆ ಯೂನಿಯನ್ ಬ್ಯಾಂಕ್ ಶಾಕಿಂಗ್ ವರದಿ!

ಸೆಪ್ಟೆಂಬರ್ ತಿಂಗಳ ಮಳೆಯು ಭಾರತದ ಹಣದುಬ್ಬರದ ಭವಿಷ್ಯವನ್ನು ನಿರ್ಧರಿಸಲಿದ್ದು, ಮಳೆ ಕೊರತೆ ಮತ್ತು ಎಲ್ ನಿನೋ ಪರಿಸ್ಥಿತಿಗಳು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯೂನಿಯನ್ ಬ್ಯಾಂಕ್ ವರದಿಯ ಪ್ರಕಾರ, ದುರ್ಬಲ ಮುಂಗಾರು ಕೃಷಿ ಇಳುವರಿಯನ್ನು ಕಡಿಮೆ ಮಾಡಿ, 2027ನೇ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರವನ್ನು ಶೇ. 5.5ಕ್ಕಿಂತ ಹೆಚ್ಚಿಸಬಹುದು.
Read Full Story

02:57 PM (IST) Aug 29

ಖರ್ಗೆ ಭಾಷಣದ ವೇದಿಕೆ ಶುದ್ಧೀಕರಣ ವಿವಾದ - ಬಿಜೆಪಿ, ಆರೆಸ್ಸೆಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭಾಷಣದ ವೇದಿಕೆ 'ಶುದ್ಧೀಕರಣ' ಮಾಡಿದ ಘಟನೆ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಅಸ್ಪೃಶ್ಯತೆಯ ಇನ್ನೊಂದು ರೂಪ, ದೇಶದಲ್ಲಿ ಸಂವಿಧಾನ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತದ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ ಎಂದರು.

Read Full Story

02:25 PM (IST) Aug 29

ಬಾಕ್ಸ್‌ ಆಫಿಸ್‌ನಲ್ಲಿ ಧೂಳೆಬ್ಬಿಸಿದ ರವಿ ತೇಜ ನಟನೆ ಸಿನಿಮಾ OTTಯಲ್ಲಿ ರಿಲೀಸ್ ಯಾವಾಗ?

ಶಿವ ನಿರ್ದೇಶನದ, ರವಿ ತೇಜ ನಟನೆಯ 'ಇರುಮುಡಿ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ₹135 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯುಳ್ಳ ಈ ಸಿನಿಮಾ OTTಯಲ್ಲಿ ಯಾವಾಗ ಬರಲಿದೆ ಗೊತ್ತಾ?

Read Full Story

01:42 PM (IST) Aug 29

ಭಾರತದ ಇತಿಹಾಸದಲ್ಲೇ ಅತಿದೊಡ್ಡ IPO! $4 ಬಿಲಿಯನ್ ಷೇರು ಬಿಡುಗಡೆಗೆ ಜಿಯೋಗೆ 'ಸೆಬಿ' ಅಂತಿಮ ಅನುಮೋದನೆ!

ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಪ್ಲಾಟ್‌ಫಾರ್ಮ್ಸ್, ₹37,700 ಕೋಟಿ ಮೌಲ್ಯದ ಐಪಿಒಗೆ ಸೆಬಿಯಿಂದ ಅಂತಿಮ ಅನುಮೋದನೆ ಪಡೆದಿದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಸಾರ್ವಜನಿಕ ಷೇರು ಕೊಡುಗೆಯಾಗಲಿದ್ದು, ಹ್ಯುಂಡೈ ದಾಖಲೆಯನ್ನು ಮುರಿಯಲಿದೆ. ಈ ಮೂಲಕ ಸಂಗ್ರಹವಾಗುವ ಹಣವನ್ನು ಕಂಪನಿಯ ಸಾಲ ತೀರಿಸಲು ಮತ್ತು ವಿಸ್ತರಣೆಗೆ ಬಳಸಲಾಗುತ್ತದೆ.
Read Full Story

01:22 PM (IST) Aug 29

ಸಣ್ಣ ವಿಚಾರ, ದೊಡ್ಡ ಅಪಾಯ.. ಫೋನ್ ಚಾರ್ಜಿಂಗ್‌ ತೆಗೆಯುವಾಗ ಮಾಡೋ ಮಿಸ್ಟೇಕ್ಸ್..‌

ಮೊಬೈಲ್ ಚಾರ್ಜಿಂಗ್‌ನಿಂದ ತೆಗೆಯುವಾಗ ವೈರ್ ಹಿಡಿದು ಎಳೆಯುವುದರಿಂದ ಚಾರ್ಜಿಂಗ್ ಕೇಬಲ್, ಅಡಾಪ್ಟರ್ ಮತ್ತು ಫೋನ್‌ನ ಪೋರ್ಟ್ ಬೇಗನೆ ಹಾಳಾಗಬಹುದು. ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಮತ್ತು ಬಿಸಿಯಾಗದಂತೆ ತಡೆಯಲು ಯಾವಾಗಲೂ ಕನೆಕ್ಟರ್‌ನ ಪ್ಲಾಸ್ಟಿಕ್ ಅಥವಾ ಮೆಟಲ್ ಭಾಗವನ್ನು ಹಿಡಿದು ಹೊರತೆಗೆಯಬೇಕು.

Read Full Story

12:14 PM (IST) Aug 29

ಒಂಟಾರಿಯೊ ಈಗ ಲೇಕ್ ಅಮೆರಿಕ! ಟ್ರಂಪ್ ಹುಚ್ಚಾಟಕ್ಕೆ ಜಾಲತಾಣಗಳಲ್ಲಿ 'ಡೊನಾಲ್ಡ್ ಡಕ್' ಮೀಮ್ಸ್ ಹಾವಳಿ, ಕೆನಡಾ ಆಕ್ರೋಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೆನಡಾ ಜೊತೆಗಿನ ವ್ಯಾಪಾರ ಸಮರದ ನಡುವೆ 'ಒಂಟಾರಿಯೊ ಸರೋವರ'ವನ್ನು 'ಲೇಕ್ ಅಮೆರಿಕ' ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರವು ರಾಜಕೀಯ ವಿರೋಧಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಟ್ರೋಲ್‌ಗಳಿಗೆ வழிಮಾಡಿಕೊಟ್ಟಿದೆ.
Read Full Story

11:44 AM (IST) Aug 29

3 ವರ್ಷದ ಮಗುವನ್ನು ಸೇತುವೆ ಮೇಲೆಯೇ ಬಿಟ್ಟು ನದಿಗೆ ಜಿಗಿದ ದಂಪತಿ, 'ಅಮ್ಮಾ..ಅಪ್ಪಾ' ಅಂತಾ ಕಣ್ಣೀರಿಟ್ಟ ಪುಟ್ಟ ಕಂದ!

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ, ಸಾಲದ ಬಾಧೆಯಿಂದ ಬೇಸತ್ತ ದಂಪತಿಯು ತಮ್ಮ ಮೂರು ವರ್ಷದ ಮಗುವನ್ನು ಸೇತುವೆಯ ಮೇಲೆ ಬಿಟ್ಟು ಗೋದಾವರಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ರಕ್ಷಿಸಿ, ದಂಪತಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Read Full Story

11:41 AM (IST) Aug 29

2027ರ ಚುನಾವಣೆಗೆ AIMIM ಪಕ್ಷದಿಂದ ಬ್ರಾಹ್ಮಣ ಅಭ್ಯರ್ಥಿ! ಓವೈಸಿಯ ಈ ನಿರ್ಧಾರಕ್ಕೆ ದೇಶದ ರಾಜಕೀಯದಲ್ಲೇ ಸಂಚಲನ!

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಪಕ್ಷವು ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ತಂತ್ರದ ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.

Read Full Story

11:23 AM (IST) Aug 29

ಕೊಲಂಬೋ ಟೆಸ್ಟ್‌ ವಿರಾಟ್ ಕೊಹ್ಲಿ ಆಡಿದ್ರೆ ಫಲಿತಾಂಶ ಬೇರೆಯದ್ದೇ ಆಗಿರ್ತಿತ್ತು ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಡ್ರಾಗೊಂಡ ಬಳಿಕ, ಮಾಜಿ ಆಟಗಾರ ಮೊಹಮ್ಮದ್ ಕೈಫ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ತಂಡದಲ್ಲಿದ್ದಿದ್ದರೆ, ಅವರ ಹುರುಪು ಮತ್ತು ಆಕ್ರಮಣಕಾರಿ ಮನೋಭಾವದಿಂದ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ಕೈಫ್ ಹೇಳಿದ್ದಾರೆ. ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡದ ಎನರ್ಜಿ ಲೆವೆಲ್ ಕಡಿಮೆಯಾಗಿತ್ತು ಎಂಬುದನ್ನು ಅವರು ಬೊಟ್ಟು ಮಾಡಿದ್ದಾರೆ.
Read Full Story

10:59 AM (IST) Aug 29

ಸತತ ಐದನೇ ಸಲ ಡೈಮಂಡ್ ಲೀಗ್ ಫೈನಲ್ಸ್‌ ಅರ್ಹತೆ ಪಡೆದ ನೀರಜ್ ಚೋಪ್ರಾ..! ಚಿನ್ನದ ಹುಡುಗನಿಗೆ ಲಂಕಾ ಅಥ್ಲೀಟ್‌ನಿಂದ ಅಗ್ನಿ ಪರೀಕ್ಷೆ

ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಸತತ 5ನೇ ಬಾರಿಗೆ ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಮತ್ತೊಂದೆಡೆ, ಶ್ರೀಲಂಕಾದ ರುಮೇಶ್ ಪತಿರಗೆ 92 ಮೀಟರ್‌ಗಿಂತ ಹೆಚ್ಚು ದೂರ ಎಸೆದು ಹೊಸ ಸಾಧನೆ ಮಾಡಿದ್ದು, ಫೈನಲ್ಸ್‌ನಲ್ಲಿ ಅಗ್ರಸ್ಥಾನಿಯಾಗಿ ಪ್ರವೇಶಿಸಿದ್ದಾರೆ.
Read Full Story

10:38 AM (IST) Aug 29

22 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ಮರುಪಾವತಿ ಡೀಲ್‌ ಬೆನ್ನಲ್ಲೇ ಸ್ವಿಜರ್ಲೆಂಡ್‌ಗೆ ಶಿಫ್ಟ್‌ ಆಗುವ ಸೂಚನೆ ನೀಡಿದ ಉದ್ಯಮಿ!

ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ NCLT ಕೇವಲ 6.5 ಕೋಟಿ ರೂ. ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದೆ. ಎಲ್ಲವನ್ನೂ ಕಳೆದುಕೊಂಡಿರುವುದಾಗಿ ಹೇಳಿರುವ ಚಂದ್ರ, ತಾವು ಸ್ವಿಜರ್ಲೆಂಡ್‌ನಲ್ಲಿ ಕೆಲಸ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.

Read Full Story

10:16 AM (IST) Aug 29

60 ಕಿ.ಮೀ ಕ್ಯಾಬ್ ಬುಕ್ಕಿಂಗ್‌ಗೆ 240 ಕಿ.ಮೀ ಚಾರ್ಜ್, ಇದು ಓಲಾ Scam; 5,662 ರೂ. ಬಿಲ್ ನೋಡಿ ಬೆಚ್ಚಿಬಿದ್ದ ಪ್ರಯಾಣಿಕ

ದೆಹಲಿಯಲ್ಲಿ 6 ಗಂಟೆಗಳ ಓಲಾ ಪ್ಯಾಕೇಜ್ ಬುಕ್ ಮಾಡಿದ ಪ್ರಯಾಣಿಕರ ಗುಂಪಿಗೆ ಆಘಾತ ಎದುರಾಗಿದೆ. ಕೇವಲ 60 ಕಿ.ಮೀ ಪ್ರಯಾಣಕ್ಕೆ 240 ಕಿ.ಮೀ ಹೆಚ್ಚುವರಿ ಶುಲ್ಕ ಸೇರಿಸಿ 5,662 ರೂ. ಬಿಲ್ ನೀಡಲಾಗಿದ್ದು, ಈ ವಂಚನೆಯ ಬಗ್ಗೆ ಗ್ರಾಹಕ ಸೇವಾ ವಿಭಾಗ ಸ್ಪಂದಿಸಿಲ್ಲ.

Read Full Story

10:16 AM (IST) Aug 29

ಐಸಿಸಿ ವಿಶ್ವ ಟೆಸ್ಟ್‌ ಫೈನಲ್‌ಗೇರಲು ಭಾರತ ಸೇರಿ 5 ಟೀಮ್ ಹೋರಾಟ; ಇನ್ನೂ ಟೀಂ ಇಂಡಿಯಾಗಿದೆಯಾ ಚಾನ್ಸ್?

2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್ ತೀವ್ರಗೊಂಡಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂಚೂಣಿಯಲ್ಲಿವೆ. ಭಾರತದ ಫೈನಲ್ ಕನಸು ಜೀವಂತವಾಗಿದ್ದರೂ, ಉಳಿದ 7 ಪಂದ್ಯಗಳ ಪೈಕಿ ಕನಿಷ್ಠ 6ರಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
Read Full Story

09:25 AM (IST) Aug 29

Hanuman Ansh - 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!

ಯಾವುದೇ ಹೈಪ್ ಇಲ್ಲದೆ ಬಿಡುಗಡೆಯಾದ, ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ 'ಹನುಮಾನ್ ಅಂಶ್' ಎಂಬ ಆಧ್ಯಾತ್ಮಿಕ ಸಿನಿಮಾವು ಪ್ರೇಕ್ಷಕರ ಮೌತ್ ಟಾಕ್‌ನಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಯಶಸ್ಸು ಸಾಧಿಸಿದೆ. ಕಡಿಮೆ ಸ್ಕ್ರೀನ್‌ಗಳಲ್ಲಿ ಆರಂಭವಾದ ಈ ಚಿತ್ರ ಇದೀಗ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
Read Full Story

08:38 AM (IST) Aug 29

ನೇಪಾಳ ಜಲಪ್ರಳಯ, ಇನ್ಫೋಸಿಸ್ ಅಧಿಕಾರಿ ಲಕ್ಷ್ ಗೋಪಿಸೆಟ್ಟಿ ನಾಪತ್ತೆ

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ತೆರಳಿದ್ದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ದೃಢಪಡಿಸಿದ್ದು, ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.

Read Full Story

08:17 AM (IST) Aug 29

ನೇಪಾಳ ಪ್ರವಾಹದ ನೀರಲ್ಲಿ ತೇಲಿ ಬಂದ ಶವದ ಒಡವೆ ಕಳವು ಮಾಡಿದ್ರು!

ನೇಪಾಳ ಪ್ರವಾಹದ ವೇಳೆ ನದಿಯಲ್ಲಿ ಕೊಚ್ಚಿ ಬಂದ ಮಹಿಳೆಯ ಶವದಿಂದ ಆಭರಣ ಕದ್ದ ಇಬ್ಬರನ್ನು ಬಂಧಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ಶವಾಗಾರಗಳು ಭರ್ತಿಯಾಗಿವೆ. ಪ್ರವಾಹದ ರಭಸಕ್ಕೆ ನೇಪಾಳದಿಂದ ಸುಮಾರು 7 ಶವಗಳು ಭಾರತದ ನದಿಗಳಲ್ಲಿ ತೇಲಿ ಬಂದಿವೆ.
Read Full Story

07:53 AM (IST) Aug 29

ಟಿಬೆಟ್‌ನಲ್ಲಿ ಒಡೆದ ಅಣೆಕಟ್ಟು - ಪುನಃ ನೇಪಾಳಕ್ಕೆ ಪ್ರವಾಹ ಭೀತಿ

ಟಿಬೆಟ್ ಬದಿಯ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿಯಿಂದ ನೇಪಾಳದಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದೆ.

Read Full Story

07:37 AM (IST) Aug 29

ನೇಪಾಳ ನೆರೆಗೆ 580 ಸಾವು - 320 ಭಾರತೀಯರು ನಾಪತ್ತೆ, 1000 ಜನರಿಗಾಗಿ ಹುಡುಕಾಟ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಮೃತರ ಸಂಖ್ಯೆ 580ಕ್ಕೆ ಏರಿದೆ. 320 ಭಾರತೀಯರು ಸೇರಿದಂತೆ ಸುಮಾರು 1 ಸಾವಿರ ಮಂದಿ ನಾಪತ್ತೆಯಾಗಿದ್ದು, ನದಿಗಳಲ್ಲಿ ತಾತ್ಕಾಲಿಕ ಕೆರೆಗಳು ಸೃಷ್ಟಿಯಾಗಿರುವುದರಿಂದ ಎರಡನೇ ಪ್ರವಾಹದ ಅಲೆಯ ಎಚ್ಚರಿಕೆ ನೀಡಲಾಗಿದೆ.
Read Full Story

More Trending News