LIVE NOW
Published : Aug 14, 2026, 07:45 AM ISTUpdated : Aug 14, 2026, 10:46 AM IST

National News Live: ಶ್ರೀಲಂಕಾ ಕ್ಯಾಪ್ಟನ್‌ಗೆ ಕೋಚ್ ಆಗಿದ್ದ ವ್ಯಕ್ತಿಯ ದುರಂತ ಸಾವು! ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು?

ಸಾರಾಂಶ

ನವದೆಹಲಿ (ಆ.14): ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ. ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಪಟ್ಟುಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:46 AM (IST) Aug 14

ಶ್ರೀಲಂಕಾ ಕ್ಯಾಪ್ಟನ್‌ಗೆ ಕೋಚ್ ಆಗಿದ್ದ ವ್ಯಕ್ತಿಯ ದುರಂತ ಸಾವು! ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು?

ಕುಡಿಯುವ ನೀರಿನ ವಿಚಾರದಲ್ಲಿ ನಡೆದ ಜಗಳದಲ್ಲಿ ಮಧ್ಯಪ್ರವೇಶಿಸಿದ ಶ್ರೀಲಂಕಾದ 62 ವರ್ಷದ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೊ ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರನನ್ನು ಬಂಧಿಸಲಾಗಿದ್ದು, ಫೆರ್ನಾಂಡೊ ಅವರ ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
Read Full Story

09:59 AM (IST) Aug 14

‘ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕುಮಾರ್‌ ಕರ್ನಾಟಕ ತಂಡದ ನೂತನ ಕೋಚ್‌!

ಭಾರತದ ಮಾಜಿ ವೇಗಿ ಹಾಗೂ 'ದಾವಣಗೆರೆ ಎಕ್ಸ್‌ಪ್ರೆಸ್‌' ಖ್ಯಾತಿಯ ವಿನಯ್‌ ಕುಮಾರ್‌ ಕರ್ನಾಟಕ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಯೆರೇ ಗೌಡ್‌ ಅವರ ಸ್ಥಾನವನ್ನು ತುಂಬಲಿರುವ ವಿನಯ್‌, ಈ ಹಿಂದೆ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹಲವು ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಕೆಎಸ್‌ಸಿಎ ವಿವಿಧ ವಯೋಮಿತಿಯ ತಂಡಗಳಿಗೂ ನೂತನ ಕೋಚ್‌ಗಳನ್ನು ನೇಮಿಸಿದೆ.
Read Full Story

09:42 AM (IST) Aug 14

ಸಿಜೆಐ ಬಗ್ಗೆ ಆಕ್ಷೇಪಿಸಿದ ಲಾ ವಿವಿ ಪದವೀಧರರ ನೋಂದಣಿ ಇಲ್ಲ - ಬಿಸಿಐ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಹ್ವಾನವನ್ನು ವಿರೋಧಿಸಿ ಪ್ರತಿಭಟಿಸಿದ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ವಿವಿ ವಿದ್ಯಾರ್ಥಿಗಳ ಮೇಲೆ ಭಾರತದ ವಕೀಲರ ಪರಿಷತ್ತು ಕಠಿಣ ಕ್ರಮ ಕೈಗೊಂಡಿದೆ. 2026ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ನೋಂದಣಿಗೆ ತಡೆ ನೀಡಿದ್ದು, ವಿವಿಯಿಂದ ವರದಿ ಕೇಳಿದೆ.
Read Full Story

09:38 AM (IST) Aug 14

Sukanta Majumdar - ಪ್ರತಿಪಕ್ಷಗಳಿಗೆ ಉತ್ತರ ಬೇಕು, ಸಂಸತ್ತಿನಲ್ಲಿ ಚರ್ಚೆ ಬೇಡ ವಿರೋಧಿಗಳ ಅಸಲಿ ಆಟ ಬಯಲು ಮಾಡಿದ ಕೇಂದ್ರ ಸಚಿವ!

ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಚರ್ಚೆಗೆ ಸರ್ಕಾರ ಸಿದ್ಧವಿದ್ದು, ವಿಪಕ್ಷಗಳು ಭಾಗವಹಿಸಲಿ ಎಂದು ಸವಾಲು ಹಾಕಿದ್ದಾರೆ. ಆರ್‌ಜಿ ಕರ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮ ಪ್ರಶ್ನಿಸಿದ್ದಾರೆ.

Read Full Story

09:28 AM (IST) Aug 14

ಹಾಕಿ ವಿಶ್ವಕಪ್‌ 2026 - 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?

16ನೇ ಆವೃತ್ತಿಯ ಪುರುಷರ ಹಾಗೂ ಮಹಿಳಾ ಹಾಕಿ ವಿಶ್ವಕಪ್‌ಗೆ ನೆದರ್‌ಲೆಂಡ್ಸ್‌ ಹಾಗೂ ಬೆಲ್ಜಿಯಂ ಜಂಟಿ ಆತಿಥ್ಯದಲ್ಲಿ ಚಾಲನೆ ಸಿಗಲಿದೆ. 1975ರ ಬಳಿಕ ಮತ್ತೊಂದು ವಿಶ್ವಕಪ್‌ ಗೆಲ್ಲುವ ಕನಸಿನಲ್ಲಿರುವ ಭಾರತ ತಂಡ, ಪಾಕಿಸ್ತಾನ ಸೇರಿದಂತೆ ಬಲಿಷ್ಠ ತಂಡಗಳನ್ನು ಎದುರಿಸಲಿದೆ. ಟೂರ್ನಿಯ ಸಂಪೂರ್ಣ ಮಾಹಿತಿ ಮತ್ತು ಭಾರತ ತಂಡದ ವೇಳಾಪಟ್ಟಿ ಇಲ್ಲಿದೆ.
Read Full Story

08:47 AM (IST) Aug 14

ಚಂದ್ರಶೇಖರನ್‌ ರಾಜೀನಾಮೆ ಬೆನ್ನಲ್ಲೇ 'ಬಾಂಬೆ ಹೌಸ್' ಮುಂದಿನ ಸಾರಥಿ ಯಾರು? - ರೇಸ್‌ನಲ್ಲಿದ್ದಾರೆ ಟಾಟಾ ಸ್ಟೀಲ್ ಎಂಡಿ!

ಎನ್ ಚಂದ್ರಶೇಖರನ್ ಅವರ ರಾಜೀನಾಮೆ ಘೋಷಣೆಯ ನಂತರ ಟಾಟಾ ಸನ್ಸ್‌ನ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುತೂಹಲ ಕೆರಳಿಸಿದೆ. ಕಾನೂನು ತೊಡಕುಗಳು ಮತ್ತು ನಿಯಮಾವಳಿಗಳ ಅಡ್ಡಿಗಳ ನಡುವೆ, ಟಾಟಾ ಸ್ಟೀಲ್‌ನ ಎಂಡಿ ಟಿ.ವಿ. ನರೇಂದ್ರನ್ ಅವರು ಈ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
Read Full Story

08:11 AM (IST) Aug 14

ರಾಕೆಟ್‌ನಂತೆ ಚಲಿಸುತ್ತೆ ಚೀನಾದ ಹೊಸ ರೈಲು, ಗಂಟೆಗೆ 800 ಕಿ.ಮೀ ವೇಗ

ಚೀನಾದ ಮ್ಯಾಗ್ಲೇವ್‌ ಬುಲೆಟ್‌ ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗವನ್ನು ತಲುಪುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಈ ಕಾಂತೀಯ ತೇಲುವಿಕೆ ತಂತ್ರಜ್ಞಾನವನ್ನು ಸಾರ್ವಜನಿಕ ಸಾರಿಗೆಗೆ ಬಳಸಾಗೋದಿಲ್ಲ.

Read Full Story

08:00 AM (IST) Aug 14

ಚರ್ಚೆಯೇ ನಡೆಯದೆ ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯ, 175 ಕೋಟಿ ರೂಪಾಯಿ ನಷ್ಟ!

ವಿಪಕ್ಷಗಳ ತೀವ್ರ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಯೊಂದಿಗೆ ಮುಕ್ತಾಯಗೊಂಡಿದೆ. ಚರ್ಚೆಯಿಲ್ಲದೆ 12 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಅಧಿವೇಶನದ ಕೊನೆಯ ದಿನ ಉಭಯ ಸದನಗಳಲ್ಲಿ ಮೊದಲ ಬಾರಿಗೆ 'ವಂದೇ ಮಾತರಂ' ಗೀತೆಯನ್ನು ಪ್ರಸಾರ ಮಾಡಿ ಇತಿಹಾಸ ಬರೆಯಲಾಯಿತು.
Read Full Story

More Trending News