Published : Aug 14, 2026, 07:45 AM ISTUpdated : Aug 14, 2026, 11:36 PM IST

National News Live: ನಾನು ಸನಾತನ ಧರ್ಮ ಪಾಲಿಸುವ ಹಿಂದೂ, ನನ್ನ ಹಿಂದೆ ಆಂಜನೇಯ ಇದ್ದಾನೆ - ಪುಷ್ಪ ನಟಿ ಹೇಳಿಕೆ ವೈರಲ್

ಸಾರಾಂಶ

ನವದೆಹಲಿ (ಆ.14): ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ. ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಪಟ್ಟುಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:36 PM (IST) Aug 14

ನಾನು ಸನಾತನ ಧರ್ಮ ಪಾಲಿಸುವ ಹಿಂದೂ, ನನ್ನ ಹಿಂದೆ ಆಂಜನೇಯ ಇದ್ದಾನೆ - ಪುಷ್ಪ ನಟಿ ಹೇಳಿಕೆ ವೈರಲ್

ಸನಾತನ ಧರ್ಮದ ಬಗ್ಗೆ ತಾನು ನೀಡಿದ್ದ ಹೇಳಿಕೆ ಕುರಿತು ನಟಿ ಅನಸೂಯಾ ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಾತುಗಳನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ, ಯಾವುದೇ ಧರ್ಮವನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

Read Full Story

10:53 PM (IST) Aug 14

Vishwanath and Sons Review - ಸೂರ್ಯ ಅಭಿನಯಕ್ಕೆ ಫಿದಾ, ಆದರೆ ಸಿನಿಮಾ ಎಲ್ಲೆಲ್ಲಿ ಎಡವಿದೆ?

ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಮೊದಲ ಬಾರಿಗೆ ನಟಿಸಿದ್ದಾರೆ. ಇಂದು ಬಿಡುಗಡೆಯಾದ ಈ ಸಿನಿಮಾ ಹೇಗಿದೆ? ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆಯೇ? ಇಲ್ಲಿದೆ ಸಂಪೂರ್ಣ ವಿಮರ್ಶೆ.

Read Full Story

10:48 PM (IST) Aug 14

ನಿವೃತ್ತಿ ನಂತರ ಕೊಹ್ಲಿ, ರೋಹಿತ್ ಏನ್ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಅಶ್ವಿನ್

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ನಂತರ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಕಾಡಿದೆ. ಅದಕ್ಕೆ ಆರ್‍‌.ಅಶ್ವಿನ್ ಉತ್ತರ ನೀಡಿದ್ದಾರೆ.

Read Full Story

10:11 PM (IST) Aug 14

ಪ್ರತಿ 2000 ಕಿಲೋ ಮೀಟರ್‍‌ಗೆ ಯಾಕೆ ಬೈಕ್ ಸರ್ವೀಸ್ ಮಾಡಿಸಬೇಕು? ಲೇಟ್ ಆದ್ರೆ ಏನಾಗುತ್ತೆ? ತಿಳಿದುಕೊಳ್ಳಿ..!

ಪ್ರತಿ 2000 ಕಿಲೋ ಮೀಟರ್‌ಗೆ ಬೈಕ್ ಸರ್ವೀಸ್ ಮಾಡಿಸುವುದು ಯಾಕೆ ಅಗತ್ಯ? ಲೇಟ್ ಆದರೆ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Read Full Story

10:03 PM (IST) Aug 14

ಬಂದೂಕು ಹಿಡಿದಿದ್ದ ಕೈಗಳಿವು, ಮುಖ್ಯವಾಹಿನಿಗೆ ಮರಳಿ ರ‍್ಯಾಂಪ್ ವಾಕ್ ಮಾಡಿ ಇತಿಹಾಸ ಬರೆದ 9 ಮಾಜಿ ನಕ್ಸಲ್ ಮಹಿಳೆಯರು!

ಒಂದು ಕಾಲದಲ್ಲಿ ಬಸ್ತಾರ್ ಕಾಡುಗಳಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದ ಒಂಬತ್ತು ಮಾಜಿ ನಕ್ಸಲೈಟ್ ಮಹಿಳೆಯರು, ಶರಣಾಗತಿಯ ನಂತರ ಹೊಸ ಜೀವನ ಆರಂಭಿಸಿದ್ದಾರೆ. ರಾಷ್ಟ್ರೀಯ ಕೈಮಗ್ಗ ದಿನದಂದು ರಾಯ್‌ಪುರದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಛತ್ತೀಸ್‌ಗಢದ ಕೈಮಗ್ಗ ಉಡುಪುಗಳನ್ನು ಧರಿಸಿ ರ‍್ಯಾಂಪ್ ವಾಕ್ ಮಾಡುವ ಮೂಲಕ ತಮ್ಮ ಪರಿವರ್ತನೆಯ ಯಶೋಗಾಥೆಯನ್ನು ಸಾರಿದರು.
Read Full Story

09:55 PM (IST) Aug 14

ಧೈರ್ಯ ಇದ್ದರೆ ಮಾತ್ರ ನೋಡಿ - ನೋಡಿದ ಮೇಲೂ ತಲೆಯಿಂದ ಹೊರಹೋಗಲ್ಲ ಈ ಹಾರರ್ ಸಿನಿಮಾ!

ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ, ಬಳಿಕ OTTಯಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಹಾರರ್, ಮಿಸ್ಟರಿ ಮತ್ತು ಫ್ಯಾಂಟಸಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಸಖತ್‌ ಇಂಟರೆಸ್ಟಿಂಗ್‌ ಆಗಿದೆ.

Read Full Story

09:15 PM (IST) Aug 14

ind vs sl 1st test - ಸರ್ಪರಾಜ್‌ಗೆ ಇಲ್ಲ ಸ್ಥಾನ, ಮೂವರು ಕನ್ನಡಿಗರಿಗೆ ಪ್ಲೇಯಿಂಗ್-11ನಲ್ಲಿ ಸ್ಥಾನ ಕೊಟ್ಟ ಚೋಪ್ರಾ

ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸಿರೀಸ್ ಆಡಲಿದೆ. ನಾಳೆಯಿಂದ ಮೊದಲ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಪ್ಲೇಯಿಂಗ್-11 ಮಾಜಿ ಕ್ರಿಕೆಟಿಕ ಆಕಾಶ್ ಚೋಪ್ರಾ ಪ್ರಕಟಿಸಿದ್ದಾರೆ.

Read Full Story

08:44 PM (IST) Aug 14

ಪುನೀತ್‌ ರಾಜ್‌ಕುಮಾರ್‌ ನಟಿಸಿ ಮಾಯವಾದ ಈ ಚೆಲುವೆ ಯಾರು? ಅಷ್ಟಕ್ಕೂ ಈಗ ಏನ್‌ ಮಾಡ್ತಿದ್ದಾರೆ?

ಈ ಫೋಟೋದಲ್ಲಿರುವ ಕ್ಯೂಟ್‌ ಹುಡುಗಿಯನ್ನು ನೋಡಿದರೆ, ಸಿನಿಮಾ ಪ್ರೇಕ್ಷಕರಿಗೆ ಒಮ್ಮೆಲೆ ನೆನಪಾಗದೇ ಇರಬಹುದು. ಆದರೆ ಈ ಚೆಲುವೆ ಸೌತ್‌ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಸಖತ್‌ ಸದ್ದು ಮಾಡಿದ್ದ ನಟಿ.

Read Full Story

08:16 PM (IST) Aug 14

30 ವರ್ಷಗಳ ಗೆಳೆತನ, DNA ಟೆಸ್ಟ್ ಬಳಿಕ ಅಚ್ಚರಿಯ ಸತ್ಯ - ಇವರು ಕೇವಲ ಸ್ನೇಹಿತೆಯರಲ್ಲ, ಸ್ವಂತ ಅಕ್ಕ-ತಂಗಿ!

ಭಾರತದ ಅನಾಥಾಶ್ರಮಗಳಿಂದ ದತ್ತು ಹೋಗಿ ನೆದರ್ಲ್ಯಾಂಡ್ಸ್‌ನಲ್ಲಿ ಬೆಳೆದ ಇಬ್ಬರು ಬಾಲ್ಯದ ಸ್ನೇಹಿತೆಯರು, 30 ವರ್ಷಗಳ ನಂತರ DNA ಪರೀಕ್ಷೆಯ ಮೂಲಕ ತಾವು ಸ್ವಂತ ಅಕ್ಕ-ತಂಗಿಯರು ಎಂಬ ಸತ್ಯವನ್ನು ಪತ್ತೆಹಚ್ಚಿದ್ದಾರೆ.

Read Full Story

08:14 PM (IST) Aug 14

ಕೋಣೆಯಲ್ಲಿ ರಾಕ್ಷಸನಿದ್ದಾನೆ ಎಂದು ಮಗು ಹೇಳಿದ್ರೂ ಕೇರ್​ ಮಾಡದ ಅಪ್ಪ-ಅಮ್ಮ - ಆಮೇಲೆ ಆಗಿದ್ದು ಮಹಾ ದುರಂತ

ತನ್ನ ಕೋಣೆಯಲ್ಲಿ ರಾಕ್ಷಸನಿದ್ದಾನೆಂದು ಮಗು ಹೇಳಿದಾಗ ಪೋಷಕರು ಅದನ್ನು ಭ್ರಮೆ ಎಂದು ನಿರ್ಲಕ್ಷಿಸಿದರು. ಆದರೆ, ಮಗುವಿನ ನಿರಂತರ ಭಯಕ್ಕೆ ಕಾರಣ ಹುಡುಕಿದಾಗ, ಕೋಣೆಯ ಗೋಡೆಯೊಳಗೆ ಬೃಹತ್ ಜೇನುಗೂಡು ಇರುವುದು ಪತ್ತೆಯಾಯಿತು. ಈ ಘಟನೆಯು ಮಕ್ಕಳ ಮಾತನ್ನು ಎಂದಿಗೂ ಕಡೆಗಣಿಸಬಾರದು ಎಂಬ ಪಾಠವನ್ನು ಸಾರುತ್ತದೆ.
Read Full Story

07:51 PM (IST) Aug 14

ಅವಮಾನಿಸಿದ್ದಕ್ಕೆ ಡ್ರೈವಿಂಗ್ ಕಲಿತು, ಜಮ್ಮು ಬೀದಿಗಳಲ್ಲಿ ಕಾರು ಓಡಿಸ್ತಿರೋ 72ರ ನಿವೃತ್ತ ಶಿಕ್ಷಕಿಯ ಸ್ಪೂರ್ತಿಯ ಕಥೆ!

ನಿವೃತ್ತ ಶಿಕ್ಷಕಿ ವಿದ್ಯಾ ಕೌರ್, ತಮ್ಮ 59ನೇ ವಯಸ್ಸಿನಲ್ಲಿ ಡ್ರೈವಿಂಗ್ ಸ್ಕೂಲ್‌ನಿಂದ ತಿರಸ್ಕರಿಸಲ್ಪಟ್ಟರೂ ಛಲ ಬಿಡಲಿಲ್ಲ. ಸ್ವಂತ ಕಾರು ಖರೀದಿಸಿ, ನೆರೆಹೊರೆಯವರ ಸಹಾಯದಿಂದ ಚಾಲನೆ ಕಲಿತು, ಇಂದು ತಮ್ಮ 72ನೇ ವಯಸ್ಸಿನಲ್ಲಿ ಜಮ್ಮುವಿನ ರಸ್ತೆಗಳಲ್ಲಿ ಆತ್ಮವಿಶ್ವಾಸದಿಂದ ಕಾರು ಚಲಾಯಿಸುತ್ತಿದ್ದಾರೆ. ಅವರ ಈ ಪಯಣವು ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.
Read Full Story

07:42 PM (IST) Aug 14

ಈ ಪುಟ್ಟ ಮಗು ಮಾಡಿದ ಕಿತಾಪತಿ ಅಷ್ಟಿಷ್ಟಲ್ಲ.. ವಿಮಾನ ಸಂಚಾರವೇ ರದ್ದಾಯ್ತು ನೋಡಿ..

ವಿಮಾನ ಪ್ರಯಾಣದ ವೇಳೆ ಸೀಟ್ ಬೆಲ್ಟ್ ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯ. ಆದರೆ ಪುಟ್ಟ ಮಗುವೊಂದು ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿದ ಒಂದೇ ಒಂದು ಕಾರಣಕ್ಕೆ ಇಡೀ ವಿಮಾನವೇ ರದ್ದಾದ (Cancel) ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

Read Full Story

07:34 PM (IST) Aug 14

ಇಬ್ಬರು ಮಕ್ಕಳ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಅಪ್ಪನಿಗೇ 25 ಲಕ್ಷ ರೂ. ದಂಡ ಹಾಕಿದ ಹೈಕೋರ್ಟ್​

ಸ್ವಯಂಪ್ರೇರಣೆಯಿಂದ ಇಸ್ಲಾಂಗೆ ಮತಾಂತರಗೊಂಡ ಇಬ್ಬರು ವಯಸ್ಕ ಸಹೋದರಿಯರನ್ನು ಅವರ ತಂದೆ ಅಕ್ರಮವಾಗಿ ಬಂಧಿಸಿದ್ದರು. ಈ ಪ್ರಕರಣದಲ್ಲಿ, ಅಲಹಾಬಾದ್ ಹೈಕೋರ್ಟ್, ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿದು, ಅವರ ತಂದೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
Read Full Story

07:31 PM (IST) Aug 14

ಜಾನ್ವಿ ಕಪೂರ್‌ ಮನೆ ನೋಡಿದ್ದೀರಾ? ಖಾಸಗಿ ಗಾರ್ಡನ್‌ನಿಂದ ಶ್ರೀದೇವಿ ಫೋಟೋಗಳವರೆಗೆ ಎಲ್ಲವೂ ಸ್ಪೆಷಲ್‌!

ಜಾನ್ವಿ ಕಪೂರ್‌ ಅವರ ಬಾಂದ್ರಾ ಮನೆ ಕೇವಲ ಒಂದು ಐಷಾರಾಮಿ ಕಟ್ಟಡವಲ್ಲ. ಸುಂದರ ಒಳಾಂಗಣ, ಖಾಸಗಿ ಗಾರ್ಡನ್‌ನಿಂದ ಹಿಡಿದು, ಅಮ್ಮ ಶ್ರೀದೇವಿಯ ನೆನಪುಗಳನ್ನು ಹೊತ್ತಿರುವ ಫೋಟೋಗಳವರೆಗೆ, ಮನೆಯ ಪ್ರತಿಯೊಂದು ಮೂಲೆಯೂ ಪ್ರೀತಿ ಮತ್ತು ನೆನಪುಗಳಿಂದ ತುಂಬಿದೆ.

Read Full Story

06:52 PM (IST) Aug 14

1 ಕೋಟಿ ಸಂಬಳದ ಉದ್ಯೋಗ ತಿರಸ್ಕರಿಸಿದ 25ರ ಯುವತಿ - Gen Zಗಳಿಗೆ ಬೇಕಾಗಿದ್ದು ಏನು? ಭಾರಿ ಚರ್ಚೆ

25 ವರ್ಷದ ಯುವತಿಯೊಬ್ಬಳು ವಿಷಕಾರಿ ಕೆಲಸದ ವಾತಾವರಣದಿಂದಾಗಿ 1 ಕೋಟಿ ರೂಪಾಯಿ ಮೌಲ್ಯದ ಉದ್ಯೋಗದ ಆಫರ್ ತಿರಸ್ಕರಿಸಿದ್ದಾಳೆ. ಈ ಘಟನೆಯು, ಇಂದಿನ ಯುವ ಪೀಳಿಗೆಯು ಹಣಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿಗೆ ಹೇಗೆ ಆದ್ಯತೆ ನೀಡುತ್ತಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

06:19 PM (IST) Aug 14

ವಿಮಾನ ರದ್ದಾಗಿದ್ದಕ್ಕೆ ಏರ್‌ಪೋರ್ಟ್‌ನಲ್ಲಿ ಮಹಿಳೆಯ ರೌದ್ರಾವತಾರ, ₹49,000 ಮೌಲ್ಯದ ಉಪಕರಣ ಧ್ವಂಸ!

ಭುವನೇಶ್ವರದಲ್ಲಿ ತಾಂತ್ರಿಕ ದೋಷದಿಂದ ಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಕೌಂಟರ್‌ನಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ವಿಮಾನಯಾನ ಸಂಸ್ಥೆಯು ಆಕೆಯನ್ನು 'ಅಶಿಸ್ತಿನ ಪ್ರಯಾಣಿಕಳು' ಎಂದು ಘೋಷಿಸಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರವು ಪೊಲೀಸ್ ದೂರು ದಾಖಲಿಸಿದೆ.
Read Full Story

05:59 PM (IST) Aug 14

ಕಳ್ಳರು ಸಿಗದೇ ಪೊಲೀಸರು ಕೈಚೆಲ್ಲಿದ್ರು, ಚಿನ್ನಾಭರಣ ಕದ್ದೋರೇ ವಾಪಸ್​ ತಂದಿಟ್ರು- ಸಿನಿಮಾ ಮೀರಿಸೋ ರಿಯಲ್​ ಸ್ಟೋರಿ

ಆಂಧ್ರಪ್ರದೇಶದ ಕಾಕಿನಾಡದಲ್ಲಿ, ಸುಮಾರು 6.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ನಗದು ಕದ್ದಿದ್ದ ಕಳ್ಳರು, 15 ದಿನಗಳ ನಂತರ ಪಶ್ಚಾತ್ತಾಪದಿಂದ ಅದನ್ನು ವಾಪಸ್ ತಂದಿಟ್ಟಿದ್ದಾರೆ. ಕದ್ದ ವಸ್ತುಗಳ ಜೊತೆಗೆ, ತಾವು ಮಾಡಿದ್ದು ತಪ್ಪು ಎಂದು ಅರಿವಾಗಿರುವುದಾಗಿ ಮತ್ತು ಖರ್ಚಾದ 22 ಸಾವಿರ ರೂಪಾಯಿ ಹೊರತುಪಡಿಸಿ ಉಳಿದದ್ದನ್ನು ಹಿಂದಿರುಗಿಸುತ್ತಿರುವುದಾಗಿ ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟಿದ್ದಾರೆ.

Read Full Story

05:36 PM (IST) Aug 14

Snakes - ಹಾವಿಗೆ ಕಚ್ಚುವುದು ಮಾತ್ರವಲ್ಲ, ಕಾಪಾಡೋದೂ ಗೊತ್ತು! ಜೀವ ತೆಗೆಯೋ ಈ ಜೀವಿಗಳು ಜೀವ ಉಳಿಸೋದು ಹೇಗೆ ಗೊತ್ತಾ?

ಹಾವುಗಳು ರೈತರ ಶತ್ರುಗಳಲ್ಲ, ಬದಲಿಗೆ ಮಿತ್ರರು. ಇಲಿ, ಕೀಟಗಳನ್ನು ತಿನ್ನುವ ಮೂಲಕ ಬೆಳೆ ನಷ್ಟವನ್ನು ತಡೆಯುತ್ತವೆ ಮತ್ತು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಮತೋಲನ ಕಾಪಾಡಲು ಸಹಾಯ ಮಾಡುತ್ತವೆ. ಹಾವುಗಳ ಮಹತ್ವದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ.
Read Full Story

05:24 PM (IST) Aug 14

ಕಿಂಗ್ ನಾಗಾರ್ಜುನ ಮೊಮ್ಮಗಳು ಯಾರು ಗೊತ್ತಾ? ಈ ಯುವತಿ ಸದ್ಯ ಏನು ಮಾಡುತ್ತಿದ್ದಾರೆ?

ಅಕ್ಕಿನೇನಿ ನಾಗಾರ್ಜುನ ಕುಟುಂಬದಲ್ಲಿ, ಅವರಿಗೆ ಮೊಮ್ಮಗಳು ಆಗುವ ಸಂಬಂಧಿಯೊಬ್ಬರಿದ್ದಾರೆ. ಅವರು ಪ್ರಸ್ತುತ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಒಂದು ದುರಂತವೂ ನಡೆದಿದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

Read Full Story

05:06 PM (IST) Aug 14

ಪ್ರಭಾಸ್‌ ಹೊಸ Instagram DP ನೋಡಿದ್ರಾ? ‘ಫೌಜಿ’ ಸೈನಿಕನ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಖುಷ್‌

Prabhas Instagram DP: ಸಿನಿಮಾ ತಾರೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಪ್ರೊಫೈಲ್‌ ಪಿಕ್ಚರ್‌ ಬದಲಿಸುವುದು ಸಾಮಾನ್ಯ ವಿಚಾರ. ಆದರೆ, ಪ್ರಭಾಸ್‌ ವಿಷಯದಲ್ಲಿ ಅದು ಕೂಡ ಒಂದು ದೊಡ್ಡ ಸುದ್ದಿಯಾಗಿಬಿಟ್ಟಿದೆ.

Read Full Story

04:58 PM (IST) Aug 14

CSKನೂ ಅಲ್ಲ, KKR ಕೂಡಾ ಅಲ್ಲ ಎರಡೂ ತಂಡ ಬಿಟ್ಟು ಹಾರ್ದಿಕ್ ಪಾಂಡ್ಯ ಈ ತಂಡ ಸೇರಬಹುದು! ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್

2027ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕೆಕೆಆರ್ ಮತ್ತು ಸಿಎಸ್‌ಕೆ ಹೆಸರುಗಳು ಕೇಳಿಬರುತ್ತಿರುವ ಮಧ್ಯೆ, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪಾಂಡ್ಯ ತಮ್ಮ ಹಳೆಯ ತಂಡವಾದ ಗುಜರಾತ್ ಟೈಟಾನ್ಸ್‌ಗೆ ಮರಳಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

Read Full Story

04:50 PM (IST) Aug 14

'ಬೌನ್ಸರ್ & ಬಾಡಿಗಾರ್ಡ್‌ಗಳಂತೆ ಇದ್ದೆವು'.. ಟಾಕ್ಸಿಕ್ ಶೂಟಿಂಗ್‌ ಬಗ್ಗೆ ಮಾತನ್ನಾಡುತ್ತ ಯಶ್ ಹೀಗೆ ಹೇಳಿದ್ದೇಕೆ?

ಕಿಯಾರಾ ಅಡ್ವಾಣಿ ಅವರ ಡೆಡಿಕೇಷನ್ ಮತ್ತು ಯಶ್ ಅವರ ಈ ಕಾಳಜಿಯ ಕಥೆಗಳು ಈಗ ಸಿನಿಮಾದ ಮೇಲಿನ ಕುತೂಹಲವನ್ನು ನೂರು ಪಟ್ಟು ಹೆಚ್ಚಿಸಿವೆ. ಸದ್ಯಕ್ಕಂತೂ ಕಿಯಾರಾ, ‘ಬಾಡಿಗಾರ್ಡ್’ ಗೀತೂ ಮೋಹನ್‌ದಾಸ್ ಕಥೆಗಳು, ರಾಕಿಂಗ್ ಸ್ಟಾರ್ ಅಸಲಿ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದು, ಎಲ್ಲವೂ ವೈರಲ್ ಆಗುತ್ತಿವೆ!

Read Full Story

02:19 PM (IST) Aug 14

ಕೇಂದ್ರ ಸಚಿವ ಜೆಪಿ ನಡ್ಡಾ ಆರೋಗ್ಯದಲ್ಲಿ ಏರುಪೇರು, ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು

ಕೇಂದ್ರ ಸಚಿವ ಜೆಪಿ ನಡ್ಡಾ ಉಸಿರಾಟ ಸಮಸ್ಯೆಯಿಂದ ಬಳಲಿದ್ದಾರೆ. ತಕ್ಷಣವೇ ಜೆಪಿ ನಡ್ಡಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜೆಪಿ ನಡ್ಡಾ ಕುರಿತು ಆಸ್ಪತ್ರೆ ವೈದ್ಯರು ಹೇಳಿದ್ದೇನು?

Read Full Story

01:59 PM (IST) Aug 14

ಸೂರ್ಯ ಏಕೆ ಕೊತ ಕೊತ ಬಿಸಿ, ಹೊರ ಪದರದ ರಹಸ್ಯ ಭೇದಿಸಿದ ಭಾರತದ ಆದಿತ್ಯ-L1, ವಿಜ್ಞಾನಿಗಳಿಂದ ಬೆಂಗಳೂರಿನಲ್ಲಿ ಸಂಶೋಧನೆ!

ಸೂರ್ಯನ ಮೇಲ್ಮೈಗಿಂತ ಅದರ ಹೊರಪದರವಾದ ಕರೋನಾ ಹೆಚ್ಚು ಬಿಸಿಯಾಗಿರುವುದೇಕೆ ಎಂಬ ದಶಕಗಳ ರಹಸ್ಯಕ್ಕೆ ಭಾರತದ 'ಆದಿತ್ಯ-ಎಲ್1' ನೌಕೆಯು ಪ್ರಮುಖ ಸುಳಿವು ನೀಡಿದೆ. ಸೌರ ಸ್ಫೋಟಗಳ ನಂತರ ಕಳೆದುಹೋದ ಶಕ್ತಿಯನ್ನು 'ಕಾಂತೀಯ ಮರುಸಂಪರ್ಕ' ಪ್ರಕ್ರಿಯೆಯು ಶೇ. 93ರಷ್ಟು ಮರುಪೂರಣ ಮಾಡುತ್ತದೆ ಎಂದು ಈ ಸಂಶೋಧನೆ ಸಾಬೀತುಪಡಿಸಿದೆ.
Read Full Story

01:32 PM (IST) Aug 14

ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ದೆಹಲಿ ಹೈಕೋರ್ಟ್‌ನಿಂದ ರಿಲೀಫ್‌ - ಆಕ್ಷೇಪಾರ್ಹ ವೀಡಿಯೋಗೆ ತಡೆಯಾಜ್ಞೆ

ಶಿರಡಿ ಸಾಯಿಬಾಬಾ ಮತ್ತು ಸಂಸ್ಥಾನ ಟ್ರಸ್ಟ್ ವಿರುದ್ಧದ ನಿಂದನಾತ್ಮಕ ಯೂಟ್ಯೂಬ್ ವೀಡಿಯೋಗಳ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಸಂಸ್ಥಾನ ಸಲ್ಲಿಸಿದ್ದ ಅರ್ಜಿಯ ಮೇರೆಗೆ, ಈ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ನ್ಯಾಯಾಲಯ ಸೂಚಿಸಿದೆ.

Read Full Story

01:29 PM (IST) Aug 14

NALSAR Row - 'ಇದರಲ್ಲಿ ಮೂಗು ತೂರಿಸಲು ಅವರು ಯಾರು?' ನಲ್ಸಾರ್ ವಿದ್ಯಾರ್ಥಿಗಳ ವಿಚಾರದಲ್ಲಿ BCIಗೆ ಸಿಜೆಐ ಸೂರ್ಯಕಾಂತ್ ಕ್ಲಾಸ್

ನಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಹೊರಡಿಸಿದ್ದ ಸುತ್ತೋಲೆಗೆ ಸಿಜೆಐ ಸೂರ್ಯಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಇದು ನನ್ನ ಹಾಗೂ ವಿದ್ಯಾರ್ಥಿಗಳ ನಡುವಿನ ಸಂವಾದ, ಇದರಲ್ಲಿ ಮೂಗು ತೂರಿಸಲು ಅವರು ಯಾರು?' ಎಂದು ಪ್ರಶ್ನಿಸಿದ್ದಾರೆ.

Read Full Story

01:15 PM (IST) Aug 14

Recharge Plan - ಕೇವಲ 1 ರೂಪಾಯಿಗೆ ಸಿಮ್, ಅನ್‌ಲಿಮಿಟೆಡ್ ಕಾಲ್ಸ್, ಮೊದಲ ರೀಚಾರ್ಜ್ ಕೂಡ ಫ್ರೀ! ಈ ಆಫರ್ ನೋಡಿ, ಜಿಯೋ, ಏರ್‌ಟೆಲ್ ಕಂಗಾಲು

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ BSNL ಹೊಸ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್ 2.0' ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ 24 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತ ಕರೆ, ಡೇಟಾ ಮತ್ತು ಎಸ್‌ಎಂಎಸ್‌ ಸೌಲಭ್ಯಗಳಿವೆ. ಜೊತೆಗೆ, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ₹2,399 ವಾರ್ಷಿಕ ಪ್ಲಾನ್ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ನೀಡಲಾಗುತ್ತಿದೆ.
Read Full Story

01:05 PM (IST) Aug 14

ದಳಪತಿ ವಿಜಯ್-ತ್ರಿಷಾ ಬ್ರೇಕಪ್ ಆಗಿ 2 ತಿಂಗಳಾಯ್ತಾ? ಬೇರ್ಪಟ್ಟ ಅಸಲಿ ಕಾರಣ ಇದು, ಬೇರೇನೂ ಅಲ್ಲ..!

ಈ ಇಬ್ಬರು ಸ್ಟಾರ್‌ಗಳ ನಡುವೆ ಎಲ್ಲವನ್ನೂ ಸರಿಪಡಿಸಲು ನಟಿ ಖುಷ್ಬೂ ಸುಂದರ್ ಬಹಳ ಪ್ರಯತ್ನ ಪಟ್ಟರಂತೆ. ತಮ್ಮ ಮಗಳ ಮದುವೆಗೆ ವಿಜಯ್ ಅವರಿಗೆ ಆಮಂತ್ರಣ ನೀಡಿದಾಗ, ಅಲ್ಲಿ ತ್ರಿಶಾ ಕೂಡ ಇರುತ್ತಾರೆ ಎಂಬ ಕಾರಣಕ್ಕೆ ವಿಜಯ್ ಕಾರ್ಯಕ್ರಮಕ್ಕೇ ಹೋಗಲಿಲ್ಲವಂತೆ. ಆದರೆ, ಬ್ರೇಕಪ್‌ಗೆ ಅಸಲಿ ಕಾರಣ ಅದಲ್ಲ, ಇದು.. ಈ ಸ್ಟೋರಿ ನೋಡಿ..

Read Full Story

10:46 AM (IST) Aug 14

ಶ್ರೀಲಂಕಾ ಕ್ಯಾಪ್ಟನ್‌ಗೆ ಕೋಚ್ ಆಗಿದ್ದ ವ್ಯಕ್ತಿಯ ದುರಂತ ಸಾವು! ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು?

ಕುಡಿಯುವ ನೀರಿನ ವಿಚಾರದಲ್ಲಿ ನಡೆದ ಜಗಳದಲ್ಲಿ ಮಧ್ಯಪ್ರವೇಶಿಸಿದ ಶ್ರೀಲಂಕಾದ 62 ವರ್ಷದ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೊ ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರನನ್ನು ಬಂಧಿಸಲಾಗಿದ್ದು, ಫೆರ್ನಾಂಡೊ ಅವರ ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
Read Full Story

09:59 AM (IST) Aug 14

‘ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕುಮಾರ್‌ ಕರ್ನಾಟಕ ತಂಡದ ನೂತನ ಕೋಚ್‌!

ಭಾರತದ ಮಾಜಿ ವೇಗಿ ಹಾಗೂ 'ದಾವಣಗೆರೆ ಎಕ್ಸ್‌ಪ್ರೆಸ್‌' ಖ್ಯಾತಿಯ ವಿನಯ್‌ ಕುಮಾರ್‌ ಕರ್ನಾಟಕ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಯೆರೇ ಗೌಡ್‌ ಅವರ ಸ್ಥಾನವನ್ನು ತುಂಬಲಿರುವ ವಿನಯ್‌, ಈ ಹಿಂದೆ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹಲವು ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಕೆಎಸ್‌ಸಿಎ ವಿವಿಧ ವಯೋಮಿತಿಯ ತಂಡಗಳಿಗೂ ನೂತನ ಕೋಚ್‌ಗಳನ್ನು ನೇಮಿಸಿದೆ.
Read Full Story

09:42 AM (IST) Aug 14

ಸಿಜೆಐ ಬಗ್ಗೆ ಆಕ್ಷೇಪಿಸಿದ ಲಾ ವಿವಿ ಪದವೀಧರರ ನೋಂದಣಿ ಇಲ್ಲ - ಬಿಸಿಐ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಹ್ವಾನವನ್ನು ವಿರೋಧಿಸಿ ಪ್ರತಿಭಟಿಸಿದ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ವಿವಿ ವಿದ್ಯಾರ್ಥಿಗಳ ಮೇಲೆ ಭಾರತದ ವಕೀಲರ ಪರಿಷತ್ತು ಕಠಿಣ ಕ್ರಮ ಕೈಗೊಂಡಿದೆ. 2026ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ನೋಂದಣಿಗೆ ತಡೆ ನೀಡಿದ್ದು, ವಿವಿಯಿಂದ ವರದಿ ಕೇಳಿದೆ.
Read Full Story

09:38 AM (IST) Aug 14

Sukanta Majumdar - ಪ್ರತಿಪಕ್ಷಗಳಿಗೆ ಉತ್ತರ ಬೇಕು, ಸಂಸತ್ತಿನಲ್ಲಿ ಚರ್ಚೆ ಬೇಡ ವಿರೋಧಿಗಳ ಅಸಲಿ ಆಟ ಬಯಲು ಮಾಡಿದ ಕೇಂದ್ರ ಸಚಿವ!

ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಚರ್ಚೆಗೆ ಸರ್ಕಾರ ಸಿದ್ಧವಿದ್ದು, ವಿಪಕ್ಷಗಳು ಭಾಗವಹಿಸಲಿ ಎಂದು ಸವಾಲು ಹಾಕಿದ್ದಾರೆ. ಆರ್‌ಜಿ ಕರ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮ ಪ್ರಶ್ನಿಸಿದ್ದಾರೆ.

Read Full Story

09:28 AM (IST) Aug 14

ಹಾಕಿ ವಿಶ್ವಕಪ್‌ 2026 - 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?

16ನೇ ಆವೃತ್ತಿಯ ಪುರುಷರ ಹಾಗೂ ಮಹಿಳಾ ಹಾಕಿ ವಿಶ್ವಕಪ್‌ಗೆ ನೆದರ್‌ಲೆಂಡ್ಸ್‌ ಹಾಗೂ ಬೆಲ್ಜಿಯಂ ಜಂಟಿ ಆತಿಥ್ಯದಲ್ಲಿ ಚಾಲನೆ ಸಿಗಲಿದೆ. 1975ರ ಬಳಿಕ ಮತ್ತೊಂದು ವಿಶ್ವಕಪ್‌ ಗೆಲ್ಲುವ ಕನಸಿನಲ್ಲಿರುವ ಭಾರತ ತಂಡ, ಪಾಕಿಸ್ತಾನ ಸೇರಿದಂತೆ ಬಲಿಷ್ಠ ತಂಡಗಳನ್ನು ಎದುರಿಸಲಿದೆ. ಟೂರ್ನಿಯ ಸಂಪೂರ್ಣ ಮಾಹಿತಿ ಮತ್ತು ಭಾರತ ತಂಡದ ವೇಳಾಪಟ್ಟಿ ಇಲ್ಲಿದೆ.
Read Full Story

08:47 AM (IST) Aug 14

ಚಂದ್ರಶೇಖರನ್‌ ರಾಜೀನಾಮೆ ಬೆನ್ನಲ್ಲೇ 'ಬಾಂಬೆ ಹೌಸ್' ಮುಂದಿನ ಸಾರಥಿ ಯಾರು? - ರೇಸ್‌ನಲ್ಲಿದ್ದಾರೆ ಟಾಟಾ ಸ್ಟೀಲ್ ಎಂಡಿ!

ಎನ್ ಚಂದ್ರಶೇಖರನ್ ಅವರ ರಾಜೀನಾಮೆ ಘೋಷಣೆಯ ನಂತರ ಟಾಟಾ ಸನ್ಸ್‌ನ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುತೂಹಲ ಕೆರಳಿಸಿದೆ. ಕಾನೂನು ತೊಡಕುಗಳು ಮತ್ತು ನಿಯಮಾವಳಿಗಳ ಅಡ್ಡಿಗಳ ನಡುವೆ, ಟಾಟಾ ಸ್ಟೀಲ್‌ನ ಎಂಡಿ ಟಿ.ವಿ. ನರೇಂದ್ರನ್ ಅವರು ಈ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
Read Full Story

08:11 AM (IST) Aug 14

ರಾಕೆಟ್‌ನಂತೆ ಚಲಿಸುತ್ತೆ ಚೀನಾದ ಹೊಸ ರೈಲು, ಗಂಟೆಗೆ 800 ಕಿ.ಮೀ ವೇಗ

ಚೀನಾದ ಮ್ಯಾಗ್ಲೇವ್‌ ಬುಲೆಟ್‌ ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗವನ್ನು ತಲುಪುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಈ ಕಾಂತೀಯ ತೇಲುವಿಕೆ ತಂತ್ರಜ್ಞಾನವನ್ನು ಸಾರ್ವಜನಿಕ ಸಾರಿಗೆಗೆ ಬಳಸಾಗೋದಿಲ್ಲ.

Read Full Story

08:00 AM (IST) Aug 14

ಚರ್ಚೆಯೇ ನಡೆಯದೆ ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯ, 175 ಕೋಟಿ ರೂಪಾಯಿ ನಷ್ಟ!

ವಿಪಕ್ಷಗಳ ತೀವ್ರ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಯೊಂದಿಗೆ ಮುಕ್ತಾಯಗೊಂಡಿದೆ. ಚರ್ಚೆಯಿಲ್ಲದೆ 12 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಅಧಿವೇಶನದ ಕೊನೆಯ ದಿನ ಉಭಯ ಸದನಗಳಲ್ಲಿ ಮೊದಲ ಬಾರಿಗೆ 'ವಂದೇ ಮಾತರಂ' ಗೀತೆಯನ್ನು ಪ್ರಸಾರ ಮಾಡಿ ಇತಿಹಾಸ ಬರೆಯಲಾಯಿತು.
Read Full Story

More Trending News