Published : Apr 19, 2026, 07:01 AM ISTUpdated : Apr 19, 2026, 10:43 PM IST

India News Live: ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ

ಸಾರಾಂಶ

ಟೆಹ್ರಾನ್: ಶುಕ್ರವಾರವಷ್ಟೇ ಹೋರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ತೆರವು ಮಾಡಿದ್ದ ಇರಾನ್, ಶನಿವಾರ ಪುನಃ ಅದನ್ನು ಬಂದ್ ಮಾಡಿದೆ. ಅದರ ಬೆನ್ನಲ್ಲೇ, 'ಭಾರತ ನಮ್ಮ ಮಿತ್ರ. ಅದರ ಹಡಗುಗಳ ಮೇಲೆ ನಾವು ಕ್ರಮ ಜರು ಗಿಸಲ್ಲ' ಎನ್ನುತ್ತಿದ್ದ ಇರಾನ್ ರಾಗ ಬದಲಿಸಿದೆ ಹಾಗೂ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ತಡೆದಿದೆ. ಈ ಪೈಕಿ ಒಂದು ಹಡಗಿನ ಮೇಲೆ ಗುಂಡಿನ ದಾಳಿ ಕೂಡಾ ನಡೆದಿದೆ. ಇದರ ನಡುವೆ ಭಾರತದ ಒಂದು ಹಡಗು ಮಾತ್ರ ಜಲಸಂಧಿ ದಾಟುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಬ್ರಿಟನ್ ಕೂಡಾ ತನ್ನ 2 ವಾಣಿಜ್ಯ ಹಡಗಿನ ಮೇಲೆ ಹೋರ್ಮುಜ್‌ನಲ್ಲಿ ಗುಂಡಿನ ದಾಳಿ ನಡೆದಿದ್ದಾಗಿ ಹೇಳಿಕೊಂಡಿದೆ. ಗುಂಡಿನ ದಾಳಿಯ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವದೆಹಲಿಯಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

PM Modi

10:43 PM (IST) Apr 19

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.

Read Full Story

08:36 PM (IST) Apr 19

ಆ ಸಾಂಗ್ ಹಾಡಿದ ಮೇಲೆ ಎಸ್‌ಪಿಬಿ ಮಾಡಿದ್ದೇನು? ಇಳಯರಾಜಾ ಮ್ಯಾಜಿಕ್‌ಗೆ ಮುತ್ತಿಟ್ಟ ಗಾನ ಗಂಧರ್ವ!

ಕೆಲವು ಹಾಡುಗಳು ಮನಸ್ಸನ್ನು ಮಾತ್ರವಲ್ಲ, ಕಾಲವನ್ನೂ ನಿಲ್ಲಿಸಿಬಿಡುತ್ತವೆ. 'ಪಚ್ಚಮಲ ಪೂವು, ನೀ ಉಚ್ಚಿಮಲ ತೇನು...' ಆ ಸಾಲಿಗೆ ಸೇರುವ ಹಾಡು. ಸಂಗೀತ, ಸಾಹಿತ್ಯ, ಧ್ವನಿ-ಈ ಮೂರೂ ಸೇರಿ ಒಂದು ಮ್ಯಾಜಿಕ್ ಸೃಷ್ಟಿಸಿವೆ.

Read Full Story

08:10 PM (IST) Apr 19

ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ

ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ, ನನಗೆ ವಾಪಸ್ ಬರಲು ಇಷ್ಟವಿರಲಿಲ್ಲ. ಯಾರ ಭೇಟಿಗೂ ಇಷ್ಟವಿರಲಿಲ್ಲ. ಹಾಡು ನಿಲ್ಲಿಸಿದ್ದೆ. ಯಾರಿಗೆ ನೋವು ಮಾಡಿದ್ದೇ ನಾನು? ಕೆಎಸ್ ಚಿತ್ರ ನೋವು ಎಂತವರ ಕಣ್ಣಾಲಿ ತೇವಗೊಳಿಸಲಿದೆ.

Read Full Story

08:05 PM (IST) Apr 19

'ತಾಯಿ ಕಿಳವಿ' ಚಿತ್ರಕ್ಕೆ ಶುಭ ಹಾರೈಸಿದ ಭಾರತಿರಾಜ - ನಿರ್ದೇಶಕರ ಸ್ಥಿತಿ ನೋಡಿ ಫ್ಯಾನ್ಸ್ ಕಣ್ಣೀರು!

ಸಿನಿಮಾ ಪ್ರೇಕ್ಷಕರು ವಿಭಿನ್ನ ಕಥಾಹಂದರದ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಇತ್ತೀಚೆಗೆ ಸೇರಿದ ಚಿತ್ರ 'ತಾಯಿ ಕಿಳವಿ'. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಚಿತ್ರವು ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತದೆ.

Read Full Story

07:33 PM (IST) Apr 19

ಮಗಳು ಸುಹಾನಾ ಹೊಟ್ಟೆ ಕಾಣದಂತೆ ಕಾಪಾಡಿದ ಶಾರುಖ್ ಖಾನ್​​ - ಎಂಥ ಸಂಸ್ಕಾರಿ ಅಪ್ಪ ಎಂದು ಹಾಡಿ ಹೊಗಳಿದ ಫ್ಯಾನ್ಸ್​

ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಗಸ್ತ್ಯ ನಂದಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಮಗಳ ಹೊಟ್ಟೆ ಕಾಣದಂತೆ ಶಾರುಖ್ ಬಟ್ಟೆ ಸರಿಪಡಿಸಿದ ವಿಡಿಯೋ ವೈರಲ್ ಆಗಿದ್ದು, ಇದು ಅಭಿಮಾನಿಗಳ ಮೆಚ್ಚುಗೆ ಹಾಗೂ ಟ್ರೋಲಿಗರ ಕುಹಕಕ್ಕೆ ಕಾರಣವಾಗಿದೆ.

Read Full Story

07:00 PM (IST) Apr 19

ಕೊಹ್ಲಿ ಬ್ಯಾಟಿಂಗ್‌ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ

ಕೊಹ್ಲಿ ಬ್ಯಾಟಿಂಗ್‌ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಕೆಲ ಅಭಿಮಾನಿಗಳು ಡೆಲ್ಲಿ ವಿರುದ್ದ ಆರ್‌ಸಿಬಿ ಸೋಲಿಗೆ ಕೊಹ್ಲಿ ಕಳಪೆ ಬ್ಯಾಟಿಂಗ್ ಕಾರಣ ಎಂದಿದ್ದಾರೆ.

 

Read Full Story

06:18 PM (IST) Apr 19

ನ್ಯಾಯ ಕೋರಿ ಬೀದಿಗಿಳಿದ ಮುಸ್ಲಿಂ ವಿದ್ಯಾರ್ಥಿನಿಯರು- ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ- ಕಾಶ್ಮೀರದಲ್ಲಿ ಘಟನೆ

ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿಕ್ಷಕನೊಬ್ಬನ ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಹೋರಾಟ ತೀವ್ರಗೊಂಡ ಬಳಿಕ, ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
Read Full Story

06:02 PM (IST) Apr 19

Tamannaah Bhatia - ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ತಮನ್ನಾ - ಸಾಂಪ್ರದಾಯಿಕ ಉಡುಗೆಯಲ್ಲಿ ಮಿಲ್ಕಿ ಬ್ಯೂಟಿ!

ನಟಿ ತಮನ್ನಾ ಭಾಟಿಯಾ ಭಾನುವಾರ ಬೆಳಗ್ಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ತಮನ್ನಾ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಬೇಡಿದರು.

Read Full Story

05:44 PM (IST) Apr 19

‘ನರಸಿಂಹ’ ನಂತರ ‘ಪರಶುರಾಮ್’ - ಹೊಂಬಾಳೆ ಫಿಲ್ಮ್ಸ್‌ನಿಂದ ಮಹಾವತಾರ ಯೂನಿವರ್ಸ್ ವಿಸ್ತರಣೆ

ಭಾನುವಾರ ಹೊಂಬಾಳೆ ಫಿಲ್ಮ್ಸ್, ಏಳು ಭಾಗಗಳಲ್ಲಿ ನಿರ್ಮಾಣವಾಗಲಿರುವ ತನ್ನ ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಚಿತ್ರ 'ಮಹಾವತಾರ ಪರಶುರಾಮ್' ಅನ್ನು ಘೋಷಿಸಿದೆ. ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

Read Full Story

05:41 PM (IST) Apr 19

ಸೂರ್ಯಕುಮಾರ್ ಯಾದವ್ ಔಟ್, ಶ್ರೇಯಸ್ ಅಯ್ಯರ್ ಇನ್! ಪಂಜಾಬ್ ಹೀರೋಗೆ ಕ್ಯಾಪ್ಟನ್ ಪಟ್ಟ?

ಟೀಂ ಇಂಡಿಯಾದ ಟಿ20 ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್‌ಗೆ ವಹಿಸಿಕೊಡಲು ಬಿಸಿಸಿಐ ಚಿಂತನೆ ನಡೆಸಿದೆ. ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕಳವಳಕಾರಿಯಾಗಿರುವುದರಿಂದ, ಈ ಪ್ರಮುಖ ಬದಲಾವಣೆಗೆ ಬಿಸಿಸಿಐ ಸಿದ್ಧವಾಗಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.

Read Full Story

05:19 PM (IST) Apr 19

ಮೆಚ್ಚುಗೆ ಸಿಕ್ಕರೂ ಕಲೆಕ್ಷನ್ ಇಲ್ಲ - ಆರ್ಯ 'ಮಿಸ್ಟರ್ ಎಕ್ಸ್' ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ನಿರಾಶೆ

ಸೂಪರ್ ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ನಿರಾಶಾದಾಯಕವಾಗಿದೆ. ಚಿತ್ರದ ಕಲೆಕ್ಷನ್ ವರದಿ ಇಲ್ಲಿದೆ.

Read Full Story

05:07 PM (IST) Apr 19

ಬಿಗ್ ಬಾಸ್ ಮನೆಯಲ್ಲಿ 17 ಜನಕ್ಕೆ ಒಂದೇ ಟಾಯ್ಲೆಟ್, ಊಟದಲ್ಲಿ ಜಿರಳೆ - ನಟಿ ಸೊನಾಲಿ ರಾವತ್ ಸ್ಫೋಟಕ ಆರೋಪ

ನಟಿ ಸೊನಾಲಿ ರಾವತ್, 'ಬಿಗ್ ಬಾಸ್ ಮರಾಠಿ' ಶೋ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶೋನಲ್ಲಿ ಹೊರಗೆ ಕಾಣುವ ಗ್ಲಾಮರ್ ಹಿಂದೆ, ಸ್ಪರ್ಧಿಗಳ ಶೋಷಣೆಯ ಕರಾಳ ಸತ್ಯ ಅಡಗಿದೆ ಎಂದು ಅವರು ಹೇಳಿದ್ದಾರೆ.

Read Full Story

04:54 PM (IST) Apr 19

ಕೊಲೆಸ್ಟ್ರಾಲ್ ಹೆಚ್ಚಾದ್ರೆ ದೇಹ ನೀಡೋ ಈ 6 ಸೂಚನೆಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಿಕೊಳ್ತಿದೆ. ಕೊಲೆಸ್ಟ್ರಾಲ್ ಹೆಚ್ಚಾಗೋದು ಅನೇಕ ರೋಗಗಳಿಗೆ ಕಾರಣವಾಗುತ್ತೆ. ಅಧಿಕ ಕೊಲೆಸ್ಟ್ರಾಲ್ ಅಂದ್ರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರೋದು.
Read Full Story

04:39 PM (IST) Apr 19

ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ

ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಾಗಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ.

Read Full Story

04:35 PM (IST) Apr 19

'ದೃಶ್ಯಂ 3'ಗೆ ಕಥೆ ಕಳಿಸೋರ ಸ್ಕ್ರಿಪ್ಟ್ ಓದದೇ ಡಿಲೀಟ್ ಮಾಡ್ತೀನಿ - ನಿರ್ದೇಶಕ ಜೀತು ಜೋಸೆಫ್ ಹೀಗಂದಿದ್ದೇಕೆ?

ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಈ ಚಿತ್ರವನ್ನು ಏಪ್ರಿಲ್ 2 ರಂದು ವಿಶ್ವಾದ್ಯಂತ ರಿಲೀಸ್ ಮಾಡಲು ಮೊದಲು ನಿರ್ಧರಿಸಲಾಗಿತ್ತು.

Read Full Story

04:13 PM (IST) Apr 19

ಸಾಯಿ ಪಲ್ಲವಿ ದೇವರ ಮಗುನಾ? ಅವರಮ್ಮ ಹೇಳಿದ ಸತ್ಯ ಕೇಳಿದ್ರೆ ಶಾಕ್ ಆಗೋದ್ ಗ್ಯಾರಂಟಿ!

ನಟಿ ಸಾಯಿ ಪಲ್ಲವಿ ಅವರದೊಮದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ತಾಯಿ ಹೇಳಿದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಅಗುತ್ತಿದೆ.

 

Read Full Story

04:09 PM (IST) Apr 19

'ಆ ನಿರ್ಧಾರ ನೋಡಿ ಶಾಕ್ ಆಯ್ತು'; ಸಿಎಸ್‌ಕೆ ಸೋಲಿನ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಮೇಲೆ ಕಿಡಿಕಾರಿದ ಅಶ್ವಿನ್‌!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಆರ್. ಅಶ್ವಿನ್ ಅವರು ಸಿಎಸ್‌ಕೆ ಮ್ಯಾನೇಜ್ಮೆಂಟ್‌ನ ತಂತ್ರಗಾರಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಯುವ ಆಟಗಾರ ಆಯುಷ್ ಮ್ಹಾತ್ರೆಯವರ ಗಾಯವನ್ನು ನಿರ್ವಹಿಸಿದ ರೀತಿ ಮತ್ತು ಬ್ಯಾಟಿಂಗ್ ಕ್ರಮಾಂಕದಲ್ಲಿನ ತಪ್ಪುಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

03:58 PM (IST) Apr 19

ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಯಾರು?

ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಯಾರು?, 61ನೇ ಆವೃತ್ತಿ ಫೆಮಿನಾ ಮಿಸ್ ಇಂಡಿಯಾಗೆ ಹೊಸ ಬ್ಯೂಟಿ ಕ್ವೀನ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಿರೀಟ ಗೆದ್ದ ಹೊಸ ಸುಂದರಿ ಯಾರು?

 

Read Full Story

03:16 PM (IST) Apr 19

ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ

ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ, ವನ್ಯಜೀವಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಸಾಯುವ ಪ್ರಮಾಣ ತಗ್ಗಿಸಲು ಈ ಹೆದ್ದಾರಿ ನಿರ್ಮಾಣ ಮಾಡಿದ NHAI ಬಹೇತಕ ಯಶಸ್ವಿಯಾಗಿದೆ.

Read Full Story

02:38 PM (IST) Apr 19

ಜಪ್ತಿ ಮಾಡಿದ್ದ ಟ್ರಕ್ ರಿಲೀಸ್‌ಗೆ 55 ಲಕ್ಷಕ್ಕೆ ಬೇಡಿಕೆ - 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ

ಜಪ್ತಿಯಾದ ವಾಹನ ಬಿಡುಗಡೆಗೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಕೇಂದ್ರ ಜಿಎಸ್‌ಟಿ ಅಧಿಕಾರಿಗಳನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಮೊದಲ ಕಂತಿನ 10 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

Read Full Story

02:29 PM (IST) Apr 19

6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ

2006ರಲ್ಲಿ ಬಿಡುಗಡೆಯಾದ ಚಿತ್ರದ 6 ನಿಮಿಷದ ದೃಶ್ಯಕ್ಕಾಗಿ 90 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ, ಚಿತ್ರಕ್ಕೆ ಹೊಂದಿಕೆಯಾಗದ ಕಾರಣ ಈ ದುಬಾರಿ ದೃಶ್ಯವನ್ನು ಸಿನಿಮಾದಿಂದ ಅಂತಿಮವಾಗಿ ತೆಗೆದುಹಾಕಲಾಯಿತು, ಇದು ಹಾಲಿವುಡ್‌ನ ಅತ್ಯಂತ ದುಬಾರಿ ಡಿಲೀಟೆಡ್ ದೃಶ್ಯವೆನಿಸಿದೆ.

Read Full Story

02:08 PM (IST) Apr 19

ನಿಂಬೆ ಹಣ್ಣಿಗೆ ಉದುರಿದ ವಿಕೆಟ್! ಚೆನ್ನೈ ಎದುರು ವಾಮಾಚಾರ ಮಾಡಿ ಪಂದ್ಯ ಗೆದ್ದಿತಾ ಸನ್‌ರೈಸರ್ಸ್ ಹೈದರಾಬಾದ್? ವಿಡಿಯೋ ವೈರಲ್

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ, ಅಭಿಮಾನಿಯೊಬ್ಬ ನಿಂಬೆಹಣ್ಣು ಹಿಡಿದು ಮಂತ್ರ ಪಠಿಸಿದಂತೆ ಕಾಣಿಸಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಶಿವಂ ದುಬೆ ವಿಕೆಟ್ ಕಳೆದುಕೊಂಡಿದ್ದು, ಈ ಘಟನೆಯು ವಾಮಾಚಾರದ ಚರ್ಚೆಗೆ ಕಾರಣವಾಗಿದೆ ಮತ್ತು ಈ ಕುರಿತು ಸಿಎಸ್‌ಕೆ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ.
Read Full Story

01:50 PM (IST) Apr 19

ಅಮಿತಾಭ್​ಗಾಗಿ ಉರುಳುಸೇವೆ ಮಾಡಿದ್ದ ಡಾ.ರಾಜ್​ - ಆ ದಿನಗಳ ನೆನೆದ ಜಯಂತ್​ ಕಾಯ್ಕಿಣಿ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ 'ಕೂಲಿ' ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಾಗ, ಡಾ. ರಾಜ್‌ಕುಮಾರ್ ಅವರು ನಂಜನಗೂಡಿಗೆ ತೆರಳಿ ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದರು. ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಸ್ವತಃ ಅಮಿತಾಭ್ ಬಚ್ಚನ್ ಅವರೇ ಈ ಘಟನೆಯನ್ನು ನೆನಪಿಸಿಕೊಂಡಿದ್ದರು.

Read Full Story

01:34 PM (IST) Apr 19

ಬೇಗ ದೊಡ್ಡವಳಾಗಲು ಇಂಜೆಕ್ಷನ್ ತೆಗೆದುಕೊಂಡಿದ್ರಾ ನಟಿ ಹನ್ಸಿಕಾ ಮೊಟ್ವಾನಿ; ಸತ್ಯ ಕೊನೆಗೂ ಹೊರಬಂತು!

ಬಾಲಿವುಡ್- ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಆಪಲ್ ಬ್ಯೂಟಿ' ಎಂದೇ ಖ್ಯಾತರಾಗಿರುವ ನಟಿ ಹನ್ಸಿಕಾ ಮೊಟ್ವಾನಿ. ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಾಗಿನಿಂದಲೂ ಅವರನ್ನು ಒಂದು ವಿವಾದ ಮಾತ್ರ ಬೆನ್ನ ಬಿಡದೆ ಕಾಡುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

Read Full Story

01:23 PM (IST) Apr 19

Akshaya Tritiya - ಚಿನ್ನ ಕೊಳ್ಳೋಕೆ ಆಗ್ತಿಲ್ವಾ? ಅಕ್ಷಯ ತೃತೀಯದಂದು ₹10ಕ್ಕೆ ಈ ವಸ್ತು ತನ್ನಿ, ಸಂಪತ್ತು ವೃದ್ಧಿಯಾಗುತ್ತೆ!

ಅಕ್ಷಯ ತೃತೀಯದಂದು ಚಿನ್ನದ ಬೆಲೆ ಗಗನಕ್ಕೇರಿದೆ ಎಂದು ಚಿಂತೆ ಬೇಡ. ಕೇವಲ 10 ರೂಪಾಯಿಯಲ್ಲಿ ನಿಮ್ಮ ಮನೆಗೆ ಅದೃಷ್ಟ ತರುವ, ಸಂಪತ್ತನ್ನು ವೃದ್ಧಿಸುವ ಆ ವಸ್ತು ಯಾವುದು ಗೊತ್ತಾ?
Read Full Story

01:06 PM (IST) Apr 19

ಟ್ರಂಪ್ ಜತೆ ವಾಗ್ವಾದ ಇಷ್ಟವಿಲ್ಲ ಎಂದ ಪೋಪ್

ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ವಾಗ್ವಾದಕ್ಕೆ ತಮಗೆ ಆಸಕ್ತಿಯಿಲ್ಲ ಎಂದು ಪೋಪ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲಾಗಿದ್ದು, ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ವಿನಾಯಿತಿ ವಿಸ್ತರಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಭಾರೀ ಏರಿಕೆ ಕಂಡಿದೆ.
Read Full Story

12:56 PM (IST) Apr 19

Modi in Bengal - ಟಿಎಂಸಿಯ 'ಮಹಾ ಜಂಗಲ್ ರಾಜ್'ಗೆ ಮಹಿಳೆಯರೇ ಸವಾಲು - ಮಮತಾ, ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು

ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿ ಪ್ರಧಾನಿ ಮೋದಿ ಅವರು ಟಿಎಂಸಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಈ ಪಕ್ಷಗಳು 'ಷಡ್ಯಂತ್ರ' ಮಾಡಿವೆ ಎಂದು ಆರೋಪಿಸಿದ 

Read Full Story

12:18 PM (IST) Apr 19

ಮುಂಬೈನಲ್ಲಿ ನಟಿ ಟಬು ಐಷಾರಾಮಿ ಮನೆ ಖರೀದಿ - ಹೊಸ ಫ್ಲಾಟ್‌ಗೆ 'ಅಂಧಾಧುನ್' ಸುಂದರಿ ಓನರ್!

'ಮಕ್ಬೂಲ್', 'ಹೈದರ್' ಮತ್ತು 'ಅಂಧಾಧುನ್' ಅಂತಹ ಸಿನಿಮಾಗಳ ಮೂಲಕ ತಮ್ಮ ನಟನಾ ಚಾತುರ್ಯವನ್ನು ಸಾಬೀತುಪಡಿಸಿರುವ ಇವರು, ಇಂದಿಗೂ ಯುವ ನಟಿಯರಿಗೆ ಸವಾಲು ಹಾಕುವಂತೆ ಬೆಳೆಯುತ್ತಿದ್ದಾರೆ. ಸದ್ಯ ಅವರು ಪ್ರಿಯದರ್ಶನ್ ನಿರ್ದೇಶನದ ಬಹುನಿರೀಕ್ಷಿತ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Read Full Story

12:15 PM (IST) Apr 19

ಒಂದೇ ಗಂಟೆಯಲ್ಲಿ 7 ಸುಳ್ಳು - ಟ್ರಂಪ್ ವಿರುದ್ದ ಇಸ್ರೇಲ್ ಇರಾನ್ ಎರಡೂ ದೇಶಗಳ ಆಕ್ರೋಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್-ಲೆಬನಾನ್ ಕದನ ವಿರಾಮದ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿ ಮಿತ್ರರಾಷ್ಟ್ರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಮತ್ತೊಂದೆಡೆ, ಹೋರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಇರಾನ್ ಆಕ್ರೋಶ ವ್ಯಕ್ತಪಡಿಸಿದೆ.

Read Full Story

11:34 AM (IST) Apr 19

ಡೆಲ್ಲಿ ಎದುರು ಆರ್‌ಸಿಬಿ ಸೋತಿದ್ದು ಹೇಗೆ? ಬೆಂಗಳೂರು ತಂಡದ ಸೋಲಿಗೆ ಈ ನಾಲ್ವರೇ ಕಾರಣ! ನೀವೇನಂತೀರಾ?

ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದೆ. ಜಿತೇಶ್ ಶರ್ಮಾ ಅವರ ಮಂದಗತಿಯ ಬ್ಯಾಟಿಂಗ್, ಪ್ರಮುಖ ಬೌಲರ್‌ಗಳ ವೈಫಲ್ಯ ಹಾಗೂ ಎದುರಾಳಿ ತಂಡದ ಆಟಗಾರರ ಉತ್ತಮ ಪ್ರದರ್ಶನ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳಾಗಿವೆ.
Read Full Story

11:20 AM (IST) Apr 19

2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ರಣ್ವೀರ್ - ಮಗಳು ದುವಾ ಕೈಯಲ್ಲಿ ಗುಡ್‌ನ್ಯೂಸ್ ತಿಳಿಸಿದ ದೀಪ್ವೀರ್‌

ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮೊದಲ ಮಗುವಿನ ಕೈಯಲ್ಲಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯ ಹರಿದು ಬರುತ್ತಿವೆ.

Read Full Story

11:05 AM (IST) Apr 19

ಸಿಕ್ಕಿಂ ಟೆಮಿ ಚಹಾ ಪುಡಿ ದಾಖಲೆಯ ಬೆಲೆಗೆ ಸೇಲ್ - 1 ಕೇಜಿಗೆ ಬರೋಬ್ಬರಿ 27,000 ರೂ.ಗೆ ಸೇಲ್

ಸಿಕ್ಕಿಂನ ಟೆಮಿ ಚಹಾ ಪುಡಿ ದಾಖಲೆಯ ₹27,000ಕ್ಕೆ ಮಾರಾಟವಾಗಿದೆ. ಬಿಜೆಪಿ ಹಿರಿಯ ನಾಯಕ ಬಲ್ಬೀರ್ ಪುಂಜ್ ನಿಧನರಾಗಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳು ಮತ್ತೆ ಯತ್ನಿಸುತ್ತಿವೆ. ದೇಶದಲ್ಲಿ ಎಲ್‌ಪಿಜಿ ಬೇಡಿಕೆ ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Read Full Story

10:25 AM (IST) Apr 19

ವಿದೇಶಿ ದೇಣಿಗೆಗೆ ಕಡಿವಾಣಕ್ಕೆ ಫಾದರ್ ಕಿಡಿ - ದೇಗುಲದ ಚಿನ್ನ ಸಮಾಜ ಸೇವೆಗೆ ಬಳಸಲಿ ಎಂದ ಫಾದರ್ ಪೌಲ್

ಕೇಂದ್ರದ ಎಫ್‌ಸಿಆರ್‌ಎ ತಿದ್ದುಪಡಿ ವಿಧೇಯಕದ ಹಿನ್ನೆಲೆಯಲ್ಲಿ, ದೇವಸ್ಥಾನಗಳಲ್ಲಿರುವ ಚಿನ್ನವನ್ನು ಜನರ ಸೇವೆಗೆ ಬಳಸಬೇಕು ಎಂದು ಕೇರಳದ ಫಾದರ್ ಪೌಲ್ ಥಲೈಕಾಡ್ ಹೇಳಿದ್ದಾರೆ. ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುವಂತೆ ದೇಗುಲದ ಸಂಪತ್ತನ್ನೂ ಬಳಸಬೇಕು ಎಂಬ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.

Read Full Story

10:23 AM (IST) Apr 19

Pakistan Payments - ಪಾಕಿಸ್ತಾನದಲ್ಲಿ ಗೂಗಲ್ ಪೇ ಇದೆಯಾ? ಅಲ್ಲಿನ ಜನ ಡಿಜಿಟಲ್ ಪೇಮೆಂಟ್ ಮಾಡ್ತಾರಾ?

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳು ನಮ್ಮ ದಿನನಿತ್ಯದ ಬದುಕಿನ ಭಾಗವಾಗಿವೆ. ಆದರೆ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಅಲ್ಲೂ ಡಿಜಿಟಲ್ ಪೇಮೆಂಟ್‌ಗಳಿವೆ, ಆದರೆ ಅಲ್ಲಿನ ವ್ಯವಸ್ಥೆ ಭಾರತಕ್ಕಿಂತ ಬೇರೆಯಾಗಿದೆ.
Read Full Story

10:09 AM (IST) Apr 19

ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಕನ್ನಡಿಗ ಸೋಮಶೇಖರ್ ನೇಮಕ

ಕೋಲಾರ ಮೂಲದ ಡಾ. ಕೆ.ಎಸ್. ಸೋಮಶೇಖರ್ ಅವರು ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಸಂಸದೀಯ ಸೇವೆಯಲ್ಲಿರುವ ಇವರು, ಭಾಷಾಂತರಕಾರರಾಗಿ ವೃತ್ತಿ ಆರಂಭಿಸಿ ಇದೀಗ ಉನ್ನತ ಹುದ್ದೆಗೇರಿದ್ದಾರೆ.
Read Full Story

09:54 AM (IST) Apr 19

ಟಾಯ್ ಕಾರ್ ಟೆರರ್ ಗ್ಯಾಂಗ್ ದೆಹಲಿ ಪೊಲೀಸರ ಬಲೆಗೆ - ಆಟಿಕೆ ಕಾರಿಗೆ IED ಜೋಡಿಸುತ್ತಿದ್ದಾಗಲೇ 4 ಶಂಕಿತ ಉಗ್ರರು ಅರೆಸ್ಟ್

ದೆಹಲಿ ಪೊಲೀಸರು ನಾಲ್ವರು ಮೂಲಭೂತವಾದಿಗಳನ್ನು ಬಂಧಿಸುವ ಮೂಲಕ ಭಾರೀ ಉಗ್ರ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ. ಆರೋಪಿಗಳು ರಿಮೋಟ್ ಕಂಟ್ರೋಲ್ಡ್ ಆಟಿಕೆ ಕಾರು ಬಳಸಿ ಸ್ಫೋಟ ನಡೆಸಲು ಯೋಜಿಸಿದ್ದರು ಮತ್ತು ದೇಶದಲ್ಲಿ ಖಲೀಫತ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. 

Read Full Story

09:47 AM (IST) Apr 19

ನಾತು ಕಾಲಂ | ಸೋಲು ಗೊತ್ತಿದ್ದೂ ಮೋದಿ ಮಹಿಳಾ ಬಿಲ್‌ ತಂದಿದ್ದು ಏಕೆ? - ನಮೋ- ಅಮಿತ್‌ ಶಾ ಜೋಡಿಯ ಲೆಕ್ಕ ತಪ್ಪಿದ್ದು ಎಲ್ಲಿ?

ಬಹುಮತವಿಲ್ಲದಿದ್ದರೂ, ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿತು. ಆದರೆ, ರಾಜಕೀಯ ಲೆಕ್ಕಾಚಾರಗಳು ವಿಫಲವಾದ ಕಾರಣ ಈ ಪ್ರಯತ್ನ ಸೋತಿದ್ದು, ಇದು ದಕ್ಷಿಣದ ರಾಜ್ಯಗಳು ಮತ್ತು ವಿಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ.
Read Full Story

09:46 AM (IST) Apr 19

ಆ ನಟನಿಂದ ಬ್ರಹ್ಮಾನಂದಂ ಕೆರಿಯರ್ ಕ್ಲೋಸ್? ಎಲ್ಲ ಮುಗೀತು ಅಂದ್ಕೊಂಡಿದ್ದಾಗ ನಡೆದಿದ್ದೇನು?

ಒಬ್ಬ ನಟನಿಂದಾಗಿ ಹಾಸ್ಯ ದಿಗ್ಗಜ ಬ್ರಹ್ಮಾನಂದಂ ಅವರ ಕೆರಿಯರ್​ ಬಹುತೇಕ ಮುಗಿದೇ ಹೋಗಿತ್ತು. ಆ ನಟನ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಬ್ರಹ್ಮಾನಂದಂ ಹೇಳಿದ ಮಾತುಗಳು ಈಗ ವೈರಲ್ ಆಗಿವೆ. ಯಾರದು ಆ ನಟ? ಈ ಫೋಟೋ ಸ್ಟೋರಿಯಲ್ಲಿದೆ ಮಾಹಿತಿ.
Read Full Story

08:29 AM (IST) Apr 19

IPL 2026 - ನಿನ್ನೆ ನಡೆದ ಆರ್‌ಸಿಬಿ - ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಬ್ಯಾಟಿಂಗ್‌ನಲ್ಲಿ ಕೊನೆಯ ಓವರ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಆರ್‌ಸಿಬಿ, ಬೌಲಿಂಗ್‌ನಲ್ಲಿ 15 ರನ್ ರಕ್ಷಿಸಿಕೊಳ್ಳಲಾಗದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲೊಪ್ಪಿಕೊಂಡಿತು. ಕೆ.ಎಲ್. ರಾಹುಲ್ ಮತ್ತು ಸ್ಟಬ್ಸ್ ಅವರ ಅರ್ಧಶತಕಗಳ ನೆರವಿನಿಂದ ಡೆಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿ, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಯ ಗೆಲುವಿನ ಓಟಕ್ಕೆ ತಡೆಯೊಡ್ಡಿತು.
Read Full Story

More Trending News