MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಅಮಿತಾಭ್​ಗಾಗಿ ಉರುಳುಸೇವೆ ಮಾಡಿದ್ದ ಡಾ.ರಾಜ್​: ಆ ದಿನಗಳ ನೆನೆದ ಜಯಂತ್​ ಕಾಯ್ಕಿಣಿ

ಅಮಿತಾಭ್​ಗಾಗಿ ಉರುಳುಸೇವೆ ಮಾಡಿದ್ದ ಡಾ.ರಾಜ್​: ಆ ದಿನಗಳ ನೆನೆದ ಜಯಂತ್​ ಕಾಯ್ಕಿಣಿ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ 'ಕೂಲಿ' ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಾಗ, ಡಾ. ರಾಜ್‌ಕುಮಾರ್ ಅವರು ನಂಜನಗೂಡಿಗೆ ತೆರಳಿ ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದರು. ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಸ್ವತಃ ಅಮಿತಾಭ್ ಬಚ್ಚನ್ ಅವರೇ ಈ ಘಟನೆಯನ್ನು ನೆನಪಿಸಿಕೊಂಡಿದ್ದರು.

2 Min read
Author : Suchethana D
Published : Apr 19 2026, 01:50 PM IST
Share this Photo Gallery
  • FB
  • TW
  • Linkdin
  • Whatsapp
16
ಡಾ.ರಾಜ್​ ಮಾನವೀಯ ಗುಣ
Image Credit : Social Media

ಡಾ.ರಾಜ್​ ಮಾನವೀಯ ಗುಣ

ಬಣ್ಣದ ಲೋಕದಲ್ಲಿ ಒಬ್ಬ ನಟನಿಗಾಗಿ ಇನ್ನೊಬ್ಬ ನಟ ಮನ ಮಿಡಿಯುವುದು, ಒಬ್ಬನ ಶ್ರೇಯಸ್ಸಿಗೆ ಇನ್ನೊಬ್ಬ ಆಶಿಸುವುದು, ಹಾರೈಕೆ ಮಾಡುವುದು ಬಲು ಅಪರೂಪ. ಏಕೆಂದರೆ ವಿವಿಧ ಕ್ಷೇತ್ರಗಳಂತೆಯೇ ಇಲ್ಲಿಯೂ ಭಾರಿ ಪೈಪೋಟಿ, ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಇದಕ್ಕಿಂತ ಸ್ವಲ್ಪ ಭಿನ್ನವಾಗಿದ್ದವರು ಕರುನಾಡ ಕಣ್ಮಣಿ ಎನ್ನಿಸಿದ್ದ ಡಾ.ರಾಜ್​ಕುಮಾರ್​. ಬಾಲಿವುಡ್​ ಬಿಗ್​-ಬಿ ಎಂದೇ ಫೇಮಸ್​ ಆಗಿರೋ ಅಮಿತಾಭ್​ ಬಚ್ಚನ್​ ಮತ್ತು ಡಾ.ರಾಜ್​ ಅವರಿಗೆ ನಿಕಟ ಸಂಬಂಧವಿತ್ತು. ಒಮ್ಮೆ ಡಾ. ರಾಜ್​ಕುಮಾರ್​ ಅವರು ಅಮಿತಾಭ್​ ಅವರಿಗಾಗಿ ಉರುಳು ಸೇವೆ ಮಾಡಿದ್ದರಂತೆ.

26
ಜಯಂತ್​ ಕಾಯ್ಕಿಣಿ ನೆನೆದ ಘಟನೆ
Image Credit : our own

ಜಯಂತ್​ ಕಾಯ್ಕಿಣಿ ನೆನೆದ ಘಟನೆ

ಈ ವಿಷಯವನ್ನು ಕವಿ, ಕತೆಗಾರ, ಸಾಹಿತಿ ಜಯಂತ್​ ಕಾಯ್ಕಿಣಿ ಅವರು ಇದೀಗ ವಿವರಿಸಿದ್ದಾರೆ. radio azimpremji univಗೆ ನೀಡಿರುವ ಸಂದರ್ಶನದಲ್ಲಿ ಕಾಯ್ಕಿಣಿ ಅವರು ಈ ವಿಷಯವನ್ನು ತೆರೆದಿಟ್ಟಿದ್ದಾರೆ. 1983ರಲ್ಲಿ ತೆರೆ ಕಂಡ ಅಮಿತಾಭ್​ ನಟನೆಯ ಕೂಲಿ ಚಿತ್ರ ಸಕತ್​ ಸೌಂಡ್​ ಮಾಡಿರುವುದು ಸಿನಿಪ್ರಿಯರಿಗೆ ತಿಳಿದೇ ಇದೆ. ಇದಕ್ಕೆ ಕಾರಣ, ವಿಲನ್​ ಚೂರಿ ಹಾಕುವ ದೃಶ್ಯ ಮಾಡುವಾಗ, ಅಕಸ್ಮಾತ್ತಾಗಿ ಆ ರಿಯಲ್​ ಚಾಕು ಅಮಿತಾಭ್​ ಅವರ ಹೊಟ್ಟೆಯನ್ನು ಹೊಕ್ಕು ಭಾರಿ ದುರಂತ ಸಂಭವಿಸಿತ್ತು.

Related Articles

Related image1
Exclusive Interview: ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ
Related image2
Amruthadhaare ಗೌತಮ್​ ಹುಟ್ಟುಹಬ್ಬ: ವಯಸ್ಸೆಷ್ಟು? ತಂಗಿಯಾದವಳೇ ಪತ್ನಿಯಾದ ನಟನ ರೋಚಕ ಸ್ಟೋರಿ ಇಲ್ಲಿದೆ
36
ಅಮಿತಾಭ್​ಗೆ ಅಪಘಾತ
Image Credit : Social Media

ಅಮಿತಾಭ್​ಗೆ ಅಪಘಾತ

ಅಮಿತಾಭ್​ ಅವರು ಆಗ ಸಾವು- ನೋವಿನ ನಡುವೆ ಇದ್ದರು. ಎಲ್ಲರೂ ಅವರ ಒಳಿತಿಗಾಗಿ, ಅವರು ಹುಷಾರಾಗಿ ಬರಲಿ ಎಂದು ಹಾರೈಸುತ್ತಿದ್ದರು. ಆ ಸಂದರ್ಭದಲ್ಲಿ ಅಪಾರ ದೈವ ಭಕ್ತರಾಗಿದ್ದ ಡಾ.ರಾಜ್​ ಅವರು, ನಂಜನಗೂಡಿಗೆ ಹೋಗಿ ಅಮಿತಾಭ್​ ಬಚ್ಚನ್ ಅವರ ಚೇತರಿಕೆಗಾಗಿ ಏಳು ಉರುಳು ಸೇವೆ ಮಾಡಿರುವ ಬಗ್ಗೆ ಕಾಯ್ಕಿಣಿ ಹೇಳಿದ್ದಾರೆ. ಅಂಥ ತುಂಬಾ ಮಾನವೀಯ ನೆಲೆಯ ಮನುಷ್ಯ ಆಗಿದ್ದರು ಎಂದು ಹೇಳಿದ್ದಾರೆ.

46
ಕೌನ್​ ಬನೇಗಾ ಕರೋರ್​ಪತಿಯಲ್ಲಿ
Image Credit : Social Media

ಕೌನ್​ ಬನೇಗಾ ಕರೋರ್​ಪತಿಯಲ್ಲಿ

ಈ ಹಿಂದೆ ಕೌನ್​ ಬನೇಗಾ ಕರೋರ್​ಪತಿಯ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಅವರು ಹೋಗಿದ್ದಾಗ, ಈ ಘಟನೆಯನ್ನು ಖುದ್ದು ಅಮಿತಾಭ್​ ಅವರೇ ನೆನಪಿಸಿಕೊಂಡಿದ್ದರು. ​ ಕೂಲಿ ಚಿತ್ರದ ಘಟನೆಯ ಬಳಿಕ ವೈದ್ಯರು ಕೂಡ 'ಕ್ಲಿನಿಕಲಿ ಡೆಡ್' ಎಂದು ಘೋಷಿಸಿಬಿಟ್ಟಿದ್ದರು. ಬಳಿಕ ನಿರಂತರ ಚಿಕಿತ್ಸೆಯಿಂದಾಗಿ ನಾನು ಬದುಕುಳಿದಿದ್ದೆ ಎಂದಿದ್ದರು ನಟ.

56
ಡಾ.ರಾಜ್​ರನ್ನು ನೆನೆದಿದ್ದ ಬಿಗ್​ ಬಿ
Image Credit : Social Media

ಡಾ.ರಾಜ್​ರನ್ನು ನೆನೆದಿದ್ದ ಬಿಗ್​ ಬಿ

ಸಂದರ್ಭದಲ್ಲಿ ಕನ್ನಡದ ದಿಗ್ಗಜ ನಟ ಡಾ. ರಾಜ್‌ಕುಮಾರ್ ಅವರು ನನಗಾಗಿ, ನನ್ನ ಜೀವ ಉಳಿಯಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಅವರು ದೇವಸ್ಥಾನವೊಂದಕ್ಕೆ ಹೋಗಿ, ಅಲ್ಲಿ ಒದ್ದೆ ಬಟ್ಟೆ ಧರಿಸಿ, ದೇವರಲ್ಲಿ ನನ್ನ ಜೀವ ಉಳಿಯಲೆಂದು 'ಉರುಳು ಸೇವೆ'ಯನ್ನು ತಮಗಾಗಿ ರಾಜ್‌ಕುಮಾರ್ ಅವರು ಮಾಡಿದ್ದರು ಎಂದು ಅಮಿತಾಭ್ ಹೇಳಿದ್ದರು.

66
ತುಂಬಾ ಸಿಂಪಲ್​ ಮನುಷ್ಯ
Image Credit : Social Media

ತುಂಬಾ ಸಿಂಪಲ್​ ಮನುಷ್ಯ

ಸರಳ ಉಡುಪು ಧರಿಸಿ, ಸರಳವಾಗಿ ವಾಸಿಸುತ್ತಿದ್ದರು. ಅವರ ಮಾತುಗಳಲ್ಲಿ ಅಂತಹ ಆತ್ಮೀಯತೆ ಇತ್ತು. ಅಷ್ಟು ದೊಡ್ಡ ನಟರಾಗಿದ್ದರೂ, ತುಂಬಾ ಸಿಂಪಲ್ ಆಗಿರುತ್ತಿದ್ದರು. ಡಾ. ರಾಜ್‌ಕುಮಾರ್ ಅವರು ನಿಧನರಾಗುವವರೆಗೂ ಅವರೊಂದಿಗೆ ಬಾಂಧವ್ಯ ಇತ್ತು. ಅವರ ಮಕ್ಕಳೂ ಈಗ ದೊಡ್ಡ ನಟರಾಗಿದ್ದಾರೆ. ಅವರೊಂದಿಗೂ ನನಗೆ ಉತ್ತಮ ಸಂಬಂಧವಿದೆ. ರಾಜ್‌ಕುಮಾರ್ ಅವರಂತಹ ಮಹಾನ್ ವ್ಯಕ್ತಿಯ ಆಶೀರ್ವಾದ ಪಡೆದದ್ದು ನನ್ನ ಪುಣ್ಯ'' ಎಂದು ಹೇಳಿದ್ದರು ಅಮಿತಾಭ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮಿತಾಭ್ ಬಚ್ಚನ್
ಸ್ಯಾಂಡಲ್ವುಡ್ ಫಿಲ್ಮ್
ಬಾಲಿವುಡ್
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
ಬೇಗ ದೊಡ್ಡವಳಾಗಲು ಇಂಜೆಕ್ಷನ್ ತೆಗೆದುಕೊಂಡಿದ್ರಾ ನಟಿ ಹನ್ಸಿಕಾ ಮೊಟ್ವಾನಿ; ಸತ್ಯ ಕೊನೆಗೂ ಹೊರಬಂತು!
Recommended image2
Thalapathy Vijay: ಸ್ಫೋಟಕ ವಿಷಯ ಬಯಲು ಮಾಡಲು ಮುಹೂರ್ತ ಇಟ್ಟ ದಳಪತಿ ವಿಜಯ್‌ ಪತ್ನಿ ಸಂಗೀತಾ!
Recommended image3
Rahul Roy: ಇವ್ರಾ ಆಶಿಕಿ ಹೀರೋ? ಗುರುತು ಸಿಗದಷ್ಟು ಬದಲಾದ ನಟ, ವಿಡಿಯೋ ವೈರಲ್
Related Stories
Recommended image1
Exclusive Interview: ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ
Recommended image2
Amruthadhaare ಗೌತಮ್​ ಹುಟ್ಟುಹಬ್ಬ: ವಯಸ್ಸೆಷ್ಟು? ತಂಗಿಯಾದವಳೇ ಪತ್ನಿಯಾದ ನಟನ ರೋಚಕ ಸ್ಟೋರಿ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved