MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಆ ನಟನಿಂದ ಬ್ರಹ್ಮಾನಂದಂ ಕೆರಿಯರ್ ಕ್ಲೋಸ್? ಎಲ್ಲ ಮುಗೀತು ಅಂದ್ಕೊಂಡಿದ್ದಾಗ ನಡೆದಿದ್ದೇನು?

ಆ ನಟನಿಂದ ಬ್ರಹ್ಮಾನಂದಂ ಕೆರಿಯರ್ ಕ್ಲೋಸ್? ಎಲ್ಲ ಮುಗೀತು ಅಂದ್ಕೊಂಡಿದ್ದಾಗ ನಡೆದಿದ್ದೇನು?

ಒಬ್ಬ ನಟನಿಂದಾಗಿ ಹಾಸ್ಯ ದಿಗ್ಗಜ ಬ್ರಹ್ಮಾನಂದಂ ಅವರ ಕೆರಿಯರ್​ ಬಹುತೇಕ ಮುಗಿದೇ ಹೋಗಿತ್ತು. ಆ ನಟನ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಬ್ರಹ್ಮಾನಂದಂ ಹೇಳಿದ ಮಾತುಗಳು ಈಗ ವೈರಲ್ ಆಗಿವೆ. ಯಾರದು ಆ ನಟ? ಈ ಫೋಟೋ ಸ್ಟೋರಿಯಲ್ಲಿದೆ ಮಾಹಿತಿ.

1 Min read
Author : Naveen Kodase
Published : Apr 19 2026, 09:46 AM IST
Share this Photo Gallery
  • FB
  • TW
  • Linkdin
  • Whatsapp
15
ಬ್ರಹ್ಮಾನಂದಂ ಬಾಲಿವುಡ್‌ನ ನಂಬರ್ 1 ಹಾಸ್ಯ ನಟ
Image Credit : Asianet News

ಬ್ರಹ್ಮಾನಂದಂ ಬಾಲಿವುಡ್‌ನ ನಂಬರ್ 1 ಹಾಸ್ಯ ನಟ

ಬಹಳ ಕಾಲ ಟಾಲಿವುಡ್‌ನಲ್ಲಿ ಬ್ರಹ್ಮಾನಂದಂ ನಂಬರ್ 1 ಹಾಸ್ಯನಟರಾಗಿ ಮಿಂಚಿದ್ರು. ಕೇವಲ ಬ್ರಹ್ಮಾನಂದಂ ಕಾಮಿಡಿಗೋಸ್ಕರವೇ ಗೆದ್ದ ಸಿನಿಮಾಗಳಿವೆ. ಬೆಳ್ಳಿತೆರೆ ಮೇಲೆ ಬ್ರಹ್ಮಾನಂದಂ ಕಾಣಿಸಿಕೊಂಡರೆ ಸಾಕು, ಸ್ಟಾರ್ ಹೀರೋಗಳಷ್ಟೇ ರೆಸ್ಪಾನ್ಸ್ ಸಿಗುತ್ತಿತ್ತು. ಸಂದರ್ಶನವೊಂದರಲ್ಲಿ ತ್ರಿವಿಕ್ರಮ್, 'ಒಂದೇ ಸೆಕೆಂಡ್‌ನಲ್ಲಿ ಬ್ರಹ್ಮಾನಂದಂ ನೂರಾರು ಹಾವಭಾವಗಳನ್ನು ತೋರಿಸಬಲ್ಲರು' ಎಂದು ಹೊಗಳಿದ್ದರು.
25
ಬ್ರಹ್ಮಾನಂದಂ ಕೆರಿಯರ್ ಕ್ಲೋಸ್ ಭೀತಿ?
Image Credit : youtube/@youwemedia

ಬ್ರಹ್ಮಾನಂದಂ ಕೆರಿಯರ್ ಕ್ಲೋಸ್ ಭೀತಿ?

ಆದರೆ, ಅಂತಹ ಬ್ರಹ್ಮಾನಂದಂ ಕೂಡ ಒಂದು ಸಮಯದಲ್ಲಿ ತಮ್ಮ ಕೆರಿಯರ್ ಮುಗಿದೇ ಹೋಯ್ತು ಎಂದು ಹೆದರಿದ್ದರು. ಅದೂ ಕೂಡ ಇನ್ನೊಬ್ಬ ಹಾಸ್ಯನಟನಿಂದ. ಆತ ಬೇರಾರೂ ಅಲ್ಲ, ಸುನೀಲ್. ಬ್ರಹ್ಮಾನಂದಂ ಹವಾ ಇದ್ದ ದಿನಗಳಲ್ಲೇ ಸುನೀಲ್ ಹಾಸ್ಯನಟನಾಗಿ ಮಿಂಚಲು ಆರಂಭಿಸಿದರು. ಒಂದು ಹಂತದಲ್ಲಿ ಸುನೀಲ್ ಅವರ ಕಾಮಿಡಿ ಪಂಚ್‌ಗಳು ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಸೆಳೆದವು. ಇದರಿಂದ ಅವರಿಗೆ ಸ್ಟಾರ್ ಕಾಮಿಡಿಯನ್ ಪಟ್ಟ ಸಿಕ್ಕಿತು.

Related Articles

Related image1
ವಿವಾದಗಳಿಂದ ದೂರವಿರೋ ಬ್ರಹ್ಮಾನಂದಂ ಸದ್ಯ ಸುದ್ದಿಯಾಗಿರೋದ್ಯಾಕೆ? 'Game Changer' ಸೋಲಿನ ಬಗ್ಗೆ ಏನು ಹೇಳಿದ್ರು?
Related image2
ರಿಷಬ್ ಶೆಟ್ಟಿ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟ ತೆಲುಗು ಹೀರೋ ಯಾರು? ಟಾಲಿವುಡ್ ಮೇಲೆ ಕಾಂತಾರ ನಟನ ಕಣ್ಣು!
35
ಅನಿರೀಕ್ಷಿತವಾಗಿ ಹೀರೋ ಆಗಿ ಬಡ್ತಿ ಪಡೆದ ಸುನೀಲ್
Image Credit : Asianet News

ಅನಿರೀಕ್ಷಿತವಾಗಿ ಹೀರೋ ಆಗಿ ಬಡ್ತಿ ಪಡೆದ ಸುನೀಲ್

ಬ್ರಹ್ಮಾನಂದಂ ನಂತರ ಆ ಸ್ಥಾನ ಸುನೀಲ್ ಅವರದ್ದೇ ಎಂದು ಎಲ್ಲರೂ ಭಾವಿಸಿದ್ದರು. ಆಗಲೇ ಸುನೀಲ್ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡರು. ಅವರು ಹೀರೋ ಆಗಿ ಯು-ಟರ್ನ್ ಪಡೆದರು. ಹಾಸ್ಯ ಪಾತ್ರಗಳಿಗೆ ಗುಡ್‌ಬೈ ಹೇಳಿ ನಾಯಕನಾಗಿ ಸಿನಿಮಾ ಮಾಡಲು ಶುರು ಮಾಡಿದರು. ಕೆಲಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಎರಡು-ಮೂರು ಹಿಟ್ ಸಿನಿಮಾಗಳನ್ನೂ ಕೊಟ್ಟರು. ಇನ್ನು ಸುನೀಲ್ ಹೀರೋ ಆಗಿ ಸೆಟಲ್ ಆಗ್ತಾರೆ ಎನ್ನುವಾಗಲೇ, ಸರಣಿ ಸೋಲುಗಳು ಎದುರಾದವು.
45
ಹಾಸ್ಯನಟನಾಗಿ ಡಾಮೀನೇಟ್ ಮಾಡಿದ್ದ ಸುನೀಲ್‌
Image Credit : Facebook/@sunil

ಹಾಸ್ಯನಟನಾಗಿ ಡಾಮೀನೇಟ್ ಮಾಡಿದ್ದ ಸುನೀಲ್‌

ಇದರಿಂದಾಗಿ ಸುನೀಲ್ ಮತ್ತೆ ಹಾಸ್ಯ ಚಿತ್ರಗಳು ಮತ್ತು ಹಾಸ್ಯ ಪಾತ್ರಗಳನ್ನು ಮಾಡಲು ಆರಂಭಿಸಿದರು. ಈ ಬಗ್ಗೆ ಬ್ರಹ್ಮಾನಂದಂ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ಸುನೀಲ್ ಹಾಸ್ಯನಟನಾಗಿ ಸ್ವಲ್ಪ ಗ್ಯಾಪ್ ಕೊಟ್ಟರು. ಇಲ್ಲದಿದ್ದರೆ ನಾವೆಲ್ಲಾ ತಟ್ಟೆ-ಬಟ್ಟೆ ಕಟ್ಟಿಕೊಂಡು ಹೋಗಬೇಕಿತ್ತು' ಎಂದು ತಮಾಷೆಯಾಗಿ ಹೇಳಿದ್ದರು. ಸುನೀಲ್ ಹಾಸ್ಯನಟನಾಗಿ ಅಷ್ಟೊಂದು ಡಾಮಿನೇಟ್ ಮಾಡಿದ್ದರು ಎಂದು ಬ್ರಹ್ಮಾನಂದಂ ಪರೋಕ್ಷವಾಗಿ ಹೇಳಿದ್ದರು.
55
ಹೊಸ ನಟರಿಂದಾಗಿ ಬ್ರಹ್ಮಾನಂದಂ ಹವಾ ಕೊಂಚ ಕಡಿಮೆಯಾಗಿದೆ
Image Credit : Facebook/@sunil

ಹೊಸ ನಟರಿಂದಾಗಿ ಬ್ರಹ್ಮಾನಂದಂ ಹವಾ ಕೊಂಚ ಕಡಿಮೆಯಾಗಿದೆ

'ಸುನೀಲ್ ದನದ ಹಾಗೆ ದುಡಿಯುತ್ತಾರೆ, ಅದಕ್ಕಾಗಿಯೇ ನಟನಾಗಿ ಬೆಳೆದಿದ್ದಾರೆ' ಎಂದು ಬ್ರಹ್ಮಾನಂದಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೊಸ ಹಾಸ್ಯನಟರು ಬಂದಿದ್ದರಿಂದ, ಟಾಲಿವುಡ್‌ನಲ್ಲಿ ಸದ್ಯ ಬ್ರಹ್ಮಾನಂದಂ ಹವಾ ಕಡಿಮೆಯಾಗಿದೆ. ಹಾಸ್ಯನಟರಾದ ಸತ್ಯ, ವೆನ್ನೆಲ ಕಿಶೋರ್ ಅವರಂತಹ ಕಲಾವಿದರು ಈಗ ಮಿಂಚುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಮನರಂಜನಾ ಸುದ್ದಿ
ಟಾಲಿವುಡ್

Latest Videos
Recommended Stories
Recommended image1
ಮೊಣಕಾಲು ಸರ್ಜರಿ ಯಶಸ್ವಿ, ಮೊದಲಿಗಿಂತಲೂ ಹೆಚ್ಚು ಸ್ಟ್ರಾಂಗ್ ಆಗಿ ಬರುತ್ತೇನೆ: ವರುಣ್ ತೇಜ್‌!
Recommended image2
ಮದುವೆ ಬಗ್ಗೆ ಆಸಕ್ತಿ ಇಲ್ವಾ? ಬ್ಯಾಚುಲರ್ ಲೈಫ್ ಎಂಜಾಯ್ ಮಾಡ್ತಿದ್ದಾರಾ ನಟ ರಾಮ್ ಪೋತಿನೇನಿ?
Recommended image3
ನಂಬಿ ಬಂದ ನಟಿಗೆ ಸೆಟ್‌ನಲ್ಲೇ ಅವಮಾನ: ಚಿರಂಜೀವಿ ಚಿತ್ರದಲ್ಲಿ ರಾಧಿಕಾಗೆ ಆಗಿದ್ದೇನು?
Related Stories
Recommended image1
ವಿವಾದಗಳಿಂದ ದೂರವಿರೋ ಬ್ರಹ್ಮಾನಂದಂ ಸದ್ಯ ಸುದ್ದಿಯಾಗಿರೋದ್ಯಾಕೆ? 'Game Changer' ಸೋಲಿನ ಬಗ್ಗೆ ಏನು ಹೇಳಿದ್ರು?
Recommended image2
ರಿಷಬ್ ಶೆಟ್ಟಿ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟ ತೆಲುಗು ಹೀರೋ ಯಾರು? ಟಾಲಿವುಡ್ ಮೇಲೆ ಕಾಂತಾರ ನಟನ ಕಣ್ಣು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved