LIVE NOW
Published : Jul 07, 2026, 07:06 AM ISTUpdated : Jul 07, 2026, 10:42 AM IST

India Latest News Live: ಫಲಿಸಿತು ರಾಹುಲ್ ದ್ರಾವಿಡ್ ಪ್ರಾರ್ಥನೆ; ಅಂಜನಾದ್ರಿ ಹನುಮನ ದರ್ಶನದ ಬೆನ್ನಲ್ಲೇ ಸ್ಪೋಟಕ ಅರ್ಧಶತಕ ಚಚ್ಚಿದ ಅನ್ವಯ್!

ಸಾರಾಂಶ

ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್‌ ವ್ಯಾಪ್ತಿಯೊಳಗೆ ಅಗ್ರೇಶ್ವರ ಮಹಾದೇವ ತೇಜೋ ಮಹಾಲಯ ದೇಗುಲವಿದೆ. ಹೀಗಾಗಿ ಅದನ್ನು ತೇಜೋ ಮಹಾಲಯ ದೇಗುಲ ಎಂದು ಘೋಷಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್‌, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ನೋಟಿಸ್‌ ಜಾರಿ ಮಾಡಿದೆ.

ತಾಜಮಹಲ್‌ ಅನ್ನು ದೇಗುಲ ಎಂದು ಘೋಷಿಸಬೇಕು ಎಂದು ಕೋರಿ ಹರಿಶಂಕರ್‌ ಜೈನ್‌ ಮತ್ತ ಇತರೆ ನಾಲ್ವರು ಜು.3ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರೋಹಿತ್‌ ರಂಜನ್‌ ಅಗರ್‌ವಾಲ್‌ ಅವರನ್ನು ಒಳಗೊಂಡ ಪೀಠ ಈ ನೋಟಿಸ್‌ ಜಾರಿ ಮಾಡಿದೆ.

ತಾಜ್‌ಮಹಲ್‌ ಅನ್ನು ದೇಗುಲವೆಂದು ಘೋಷಿಸಬೇಕು. ಈ ಕುರಿತು ಸಮೀಕ್ಷೆ ನಡೆಸಲು ಆಯೋಗ ರಚಿಸಬೇಕು ಎಂದು ಕೋರಿದ್ದ ಮನವಿಯನ್ನು ಆಗ್ರಾದ ಎರಡು ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಇದನ್ನು ಪ್ರಶ್ನಿಸಿ ಇದೀಗ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

10:43 AM (IST) Jul 07

ಫಲಿಸಿತು ರಾಹುಲ್ ದ್ರಾವಿಡ್ ಪ್ರಾರ್ಥನೆ; ಅಂಜನಾದ್ರಿ ಹನುಮನ ದರ್ಶನದ ಬೆನ್ನಲ್ಲೇ ಸ್ಪೋಟಕ ಅರ್ಧಶತಕ ಚಚ್ಚಿದ ಅನ್ವಯ್!

ಬೆಂಗಳೂರು: ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ತಮ್ಮ ಮಗನ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿ ಎನ್ನುವ ಸದುದ್ದೇಶದಿಂದ ಯಂತ್ರೋದ್ಧಾರಕ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕಿರಿಯ ಪುತ್ರ ಅನ್ವಯ್ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ.

 

Read Full Story

10:24 AM (IST) Jul 07

ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಭಾರಿ ಹೂಡಿಕೆ - ಬೆಳಗಿನ ಜಾವ 3 ಗಂಟೆಗೆ ಉದ್ಯಮಿಗೆ ಕರೆ ಮಾಡಿ 15 ಕೋಟಿ ರವಾನೆ!

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 'ಹೌಸ್ ಆಫ್ ಅಭಿನಂದನ್ ಲೋಧಾ' ಮೂಲಕ ಕೋಟ್ಯಂತರ ರೂಪಾಯಿಗಳ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ ಅಯೋಧ್ಯೆಯು ಜಾಗತಿಕ ಹೂಡಿಕೆ ತಾಣವಾಗಿ ಮಾರ್ಪಡುತ್ತಿದೆ.

Read Full Story

10:22 AM (IST) Jul 07

Gold Price - ಸತತ ನಾಲ್ಕನೇ ದಿನವೂ ಕುಸಿದ ಚಿನ್ನ - ಬಂಗಾರ ಖರೀದಿಗೆ ಇದುವೇ ಸುವರ್ಣವಕಾಶ

ಭಾರತದಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 15,000 ರೂ.ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ದರಗಳ ಮಾಹಿತಿ ಇಲ್ಲಿದೆ.
Read Full Story

09:58 AM (IST) Jul 07

ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಸಾವು ತೋರಿಸುತ್ತ ಉಸಿರು ನಿಲ್ಲಿಸಿದ ಪತಿ.. ಹೃದಯ ವಿದ್ರಾವಕ ಘಟನೆ

ಇದು ಪತಿ ಮತ್ತು ಪತ್ನಿ ನಡುವಿನ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ. ಭಯಾನಕ ವಿಚಾರ ಏನಂದ್ರೆ ಪತಿ,ಪತ್ನಿಗೆ ತನ್ನ ಸಾವನ್ನ ವಿಡಿಯೋ ಕಾಲ್ ಮೂಲಕ ತೋರಿಸುತ್ತ ರೈಲಿಗೆ ತಲೆಗೊಟ್ಟಿದ್ದಾರೆ. ಭಯಾನಕ ಸ್ಟೋರಿಯ ಮಾಹಿತಿ ಇಲ್ಲಿದೆ. 

Read Full Story

09:43 AM (IST) Jul 07

8100mAh ದೈತ್ಯ ಬ್ಯಾಟರಿಯ ವಿವೋ Y500 ಸ್ಮಾರ್ಟ್‌ಫೋನ್ ಬಿಡುಗಡೆ; ಕ್ಯಾಮೆರಾ, ಬೆಲೆ ಎಷ್ಟು?

ವಿವೋ ಕಂಪನಿಯು ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಹೊಂದಿರುವ ತನ್ನ ಹೊಸ Y500 4G ಸ್ಮಾರ್ಟ್‌ಫೋನ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಹೊಂದಿರುವ  ಪ್ರಮುಖ ಫೀಚರ್‌ಗಳ ಮಾಹಿತಿ ಇಲ್ಲಿದೆ

Read Full Story

More Trending News