ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ‘ನಿಮಗೆ ಧೈರ್ಯವಿದ್ದರೆ ನೇರವಾಗಿ ಹೋರಾಡಿ’ ಎಂದು ಸವಾಲು ಹಾಕಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಜನರು ಮತ ಚಲಾಯಿಸಬೇಕು’ ಎಂದು ಕರೆ ನೀಡಿದರು.
10:28 AM (IST) Apr 06
09:17 AM (IST) Apr 06
08:55 AM (IST) Apr 06
07:46 AM (IST) Apr 06
07:29 AM (IST) Apr 06
JASSM-ER missile capabilities: ತನ್ನ ಎಫ್-35 ಯುದ್ಧ ವಿಮಾನಗಳ ಹಾನಿಯಿಂದ ಹತಾಶೆಗೊಂಡಿರುವ ಅಮೆರಿಕ, ಇದೀಗ ಇರಾನ್ ವಿರುದ್ಧ ತನ್ನ ಮಾರಕ JASSM-ER ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ. ಈ ಸ್ಟೆಲ್ತ್ ಕ್ಷಿಪಣಿಗಳು ರಾಡಾರ್ಗೆ ಕಾಣಿಸುವುದಿಲ್ಲ ಎಂದು ವರದಿಯಾಗಿದೆ.
07:22 AM (IST) Apr 06
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಬಳಿ 3 ದೇಶಗಳ ಪಾಸ್ಪೋರ್ಟ್ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರೊಂದಿಗೆ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
07:12 AM (IST) Apr 06
ಪಶ್ಚಿಮ ಬಂಗಾಳದ ಮಾಲ್ಡಾ ಘಟನೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ, ಟಿಎಂಸಿ ಆಡಳಿತವನ್ನು 'ಮಹಾ ಜಂಗಲ್ರಾಜ್' ಎಂದು ಟೀಕಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ನೇರ ಹೋರಾಟಕ್ಕೆ ಸವಾಲು ಹಾಕಿದ್ದಾರೆ.
07:00 AM (IST) Apr 06
ಐಸಿಸ್ ಮತ್ತು ಅಲ್ ಖೈದಾದಂತಹ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಜಾಲವನ್ನು ಬಯಲು ಮಾಡಲಾಗಿದೆ. ಈ ಜಾಲವು ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಗುರಿಯೊಂದಿಗೆ, ವಿದೇಶಿ ಹ್ಯಾಂಡ್ಲರ್ಗಳ ಸಹಾಯದಿಂದ ಯುವಕರನ್ನು ಜಿಹಾದ್ಗೆ ಪ್ರೇರೇಪಿಸುತ್ತಿತ್ತು. .
06:11 AM (IST) Apr 06
ಇರಾನ್ನಲ್ಲಿ ಹೊಡೆದುರುಳಿಸಲಾದ ಯುದ್ಧವಿಮಾನದ ಪೈಲಟ್ನನ್ನು ರಕ್ಷಿಸಲು ಅಮೆರಿಕವು ರೋಚಕ ಕಾರ್ಯಾಚರಣೆ ನಡೆಸಿತು. ಈ ಸಾಹಸಮಯ ಕಾರ್ಯಾಚರಣೆಯಲ್ಲಿ ಯೋಧನನ್ನು ಸುರಕ್ಷಿತವಾಗಿ ಕರೆತರಲಾಯಿತು, ಆದರೆ ರಹಸ್ಯ ಕಾಪಾಡಲು ಅಮೆರಿಕ ತನ್ನದೇ ಎರಡು ವಿಮಾನಗಳಿಗೆ ಬೆಂಕಿ ಹಚ್ಚಬೇಕಾಯಿತು.
05:59 AM (IST) Apr 06
ಇರಾನ್ನಲ್ಲಿ ತನ್ನ ಯೋಧರ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಎಂದ ಅಮೆರಿಕ, ಆದರೆ ದಾಳಿ ವಿಫಲಗೊಳಿಸಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ. ತಂತ್ರಜ್ಞಾನ ಶತ್ರುಗಳ ಕೈ ಸೇರಬಾರದೆಂದು ಅಮೆರಿಕ ತನ್ನದೇ ಎರಡು ವಿಮಾನಗಳನ್ನು ನಾಶಪಡಿಸಿದೆ.
05:49 AM (IST) Apr 06
05:41 AM (IST) Apr 06
ಹೋರ್ಮುಜ್ ಜಲಸಂಧಿ ತೆರೆಯಲು ಇರಾನ್ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಸೋಮವಾರಕ್ಕೆ ಅಂತ್ಯಗೊಳ್ಳಲಿದೆ. ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ, ಮಂಗಳವಾರದಂದು ದೇಶದ ತೈಲಾಗಾರಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಮಾಡಿ, ತೈಲವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
05:33 AM (IST) Apr 06
ನಿವೃತ್ತ ನ್ಯಾಯಾಧೀಶರೊಬ್ಬರು, ವಿಚ್ಛೇದನ ಪಡೆದು ಮನೆಗೆ ಮರಳಿದ ತಮ್ಮ ಮಗಳನ್ನು ಬಾಜಾ, ಬಜಂತ್ರಿಯೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ವಿಚ್ಛೇದನ ಎಂಬುದು ಕಳಂಕವಲ್ಲ, ಸಮಾಜಕ್ಕಿಂತ ಮಗಳ ಸಂತೋಷ ಮತ್ತು ಘನತೆಯೇ ಮುಖ್ಯ ಎಂದು ಅವರು ಸಮಾಜಕ್ಕೆ ಸಂದೇಶ ಸಾರಿದ್ದಾರೆ.