LIVE NOW
Published : Apr 06, 2026, 05:17 AM ISTUpdated : Apr 06, 2026, 10:28 AM IST

India Latest News Live: IPL 2026 - ಇಂದಿನ ಕೆಕೆಆರ್‌-ಪಂಜಾಬ್‌ ಕಿಂಗ್ಸ್ ನಡುವಿನ ಮ್ಯಾಚ್ ನಡೆಯೋದೇ ಡೌಟ್!

ಸಾರಾಂಶ

ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೈವಾಡವಿದೆ ಎಂದು ಆರೋಪಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ‘ನಿಮಗೆ ಧೈರ್ಯವಿದ್ದರೆ ನೇರವಾಗಿ ಹೋರಾಡಿ’ ಎಂದು ಸವಾಲು ಹಾಕಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಜನರು ಮತ ಚಲಾಯಿಸಬೇಕು’ ಎಂದು ಕರೆ ನೀಡಿದರು.

10:28 AM (IST) Apr 06

IPL 2026 - ಇಂದಿನ ಕೆಕೆಆರ್‌-ಪಂಜಾಬ್‌ ಕಿಂಗ್ಸ್ ನಡುವಿನ ಮ್ಯಾಚ್ ನಡೆಯೋದೇ ಡೌಟ್!

ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಪಂಜಾಬ್‌ ಬಲಿಷ್ಠವಾಗಿದ್ದರೆ, ಕೆಕೆಆರ್‌ ದುರ್ಬಲ ಬೌಲಿಂಗ್‌ನಿಂದ ಕಂಗೆಟ್ಟಿದೆ.
Read Full Story

09:17 AM (IST) Apr 06

ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ! ಬುಮ್ರಾ, ಮಾಲಿಂಗ ಕೂಡಾ ಮಾಡಿರದ ದಾಖಲೆ ಬರೆದ ಭುವನೇಶ್ವರ್ ಕುಮಾರ್

ಆರ್‌ಸಿಬಿ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ ಅವರು, ಯುಜುವೇಂದ್ರ ಚಹಲ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
Read Full Story

08:55 AM (IST) Apr 06

IPL 2026 - ನಿನ್ನೆ ನಡೆದ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಮ್ಯಾಚ್ ಗೆದ್ದಿದ್ದು ಯಾರು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 250 ರನ್ ಗಳಿಸಿದರೆ, ಈ ಬೃಹತ್ ಮೊತ್ತ ಬೆನ್ನತ್ತಿದ ಸಿಎಸ್‌ಕೆ 207 ರನ್‌ಗಳಿಗೆ ಆಲೌಟಾಯಿತು.
Read Full Story

07:46 AM (IST) Apr 06

2 ಕೈ, 2 ಕಾಲು ಇಲ್ಲದಾಕೆ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌; ಬಿಲ್ಲು ಬಾಗಿಸಿ ಜಗತ್ತು ಗೆದ್ದ ಪಾಯಲ್

ವಿದ್ಯುತ್ ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಅನಾಥಾಶ್ರಮ ಸೇರಿದ್ದ ಒಡಿಶಾದ ಪಾಯಲ್ ನಾಗ್, ಇದೀಗ ಪ್ಯಾರಾ ಆರ್ಚರಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಕೋಚ್ ಕುಲ್ದೀಪ್ ವೆದ್ವಾನ್ ಅವರ ಮಾರ್ಗದರ್ಶನದಲ್ಲಿ, ವಿಶ್ವ ಚಾಂಪಿಯನ್ ಶೀತಲ್ ದೇವಿಯವರನ್ನೇ ಸೋಲಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
Read Full Story

07:29 AM (IST) Apr 06

ಇರಾನ್ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕದಿಂದ ತಯಾರಿ?

JASSM-ER missile capabilities: ತನ್ನ ಎಫ್-35 ಯುದ್ಧ ವಿಮಾನಗಳ ಹಾನಿಯಿಂದ ಹತಾಶೆಗೊಂಡಿರುವ ಅಮೆರಿಕ, ಇದೀಗ ಇರಾನ್ ವಿರುದ್ಧ ತನ್ನ ಮಾರಕ JASSM-ER ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ. ಈ ಸ್ಟೆಲ್ತ್ ಕ್ಷಿಪಣಿಗಳು ರಾಡಾರ್‌ಗೆ ಕಾಣಿಸುವುದಿಲ್ಲ ಎಂದು ವರದಿಯಾಗಿದೆ.

Read Full Story

07:22 AM (IST) Apr 06

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಪತ್ನಿ ಬಳಿ 3 ದೇಶಗಳ ಪಾಸ್‌ಪೋರ್ಟ್ - ಕಾಂಗ್ರೆಸ್‌ ಆರೋಪ

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಬಳಿ 3 ದೇಶಗಳ ಪಾಸ್‌ಪೋರ್ಟ್‌ ಇದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದರೊಂದಿಗೆ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story

07:12 AM (IST) Apr 06

ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಜಡ್ಜ್‌ಗಳೂ ಸುರಕ್ಷಿತ ಅಲ್ಲ - ಪ್ರಧಾನಿ ಮೋದಿ ವಾಗ್ದಾಳಿ

ಪಶ್ಚಿಮ ಬಂಗಾಳದ ಮಾಲ್ಡಾ ಘಟನೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ, ಟಿಎಂಸಿ ಆಡಳಿತವನ್ನು 'ಮಹಾ ಜಂಗಲ್‌ರಾಜ್' ಎಂದು ಟೀಕಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ನೇರ ಹೋರಾಟಕ್ಕೆ ಸವಾಲು ಹಾಕಿದ್ದಾರೆ.

Read Full Story

07:00 AM (IST) Apr 06

ಭಾರತದಲ್ಲಿ ಜಿಹಾದ್‌ ನಡೆಸುತ್ತಿದ್ದ ಐಸಿಸ್‌ ನಂಟಿನ ಉಗ್ರಜಾಲ ಬಯಲು; ವಿದೇಶದಲ್ಲಿನ ಹ್ಯಾಂಡ್ಲರ್‌ಗಳ ಜತೆ ಸಂಪರ್ಕ

ಐಸಿಸ್ ಮತ್ತು ಅಲ್‌ ಖೈದಾದಂತಹ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಜಾಲವನ್ನು ಬಯಲು ಮಾಡಲಾಗಿದೆ. ಈ ಜಾಲವು ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಗುರಿಯೊಂದಿಗೆ, ವಿದೇಶಿ ಹ್ಯಾಂಡ್ಲರ್‌ಗಳ ಸಹಾಯದಿಂದ ಯುವಕರನ್ನು ಜಿಹಾದ್‌ಗೆ ಪ್ರೇರೇಪಿಸುತ್ತಿತ್ತು. .

Read Full Story

06:11 AM (IST) Apr 06

ಒಬ್ಬ ಯೋಧನಿಗಾಗಿ ₹1000 ಕೋಟಿ ವಿಮಾನಕ್ಕೆ ಬೆಂಕಿ; ಅಮೆರಿಕ ಇತಿಹಾಸದಲ್ಲೇ ರೋಚಕ ಸೇನಾ ಕಾರ್ಯಾಚರಣೆ

ಇರಾನ್‌ನಲ್ಲಿ ಹೊಡೆದುರುಳಿಸಲಾದ ಯುದ್ಧವಿಮಾನದ ಪೈಲಟ್‌ನನ್ನು ರಕ್ಷಿಸಲು ಅಮೆರಿಕವು ರೋಚಕ ಕಾರ್ಯಾಚರಣೆ ನಡೆಸಿತು. ಈ ಸಾಹಸಮಯ ಕಾರ್ಯಾಚರಣೆಯಲ್ಲಿ ಯೋಧನನ್ನು ಸುರಕ್ಷಿತವಾಗಿ ಕರೆತರಲಾಯಿತು, ಆದರೆ ರಹಸ್ಯ ಕಾಪಾಡಲು ಅಮೆರಿಕ ತನ್ನದೇ ಎರಡು ವಿಮಾನಗಳಿಗೆ ಬೆಂಕಿ ಹಚ್ಚಬೇಕಾಯಿತು.

Read Full Story

05:59 AM (IST) Apr 06

ಇರಾನ್‌ನಲ್ಲಿದ್ದ ತನ್ನದೇ ಎರಡು ಅತ್ಯಾಧುನಿಕ ವಿಮಾನಗಳನ್ನು ನಾಶಪಡಿಸಿಕೊಂಡ ಅಮೆರಿಕಾ

ಇರಾನ್‌ನಲ್ಲಿ ತನ್ನ ಯೋಧರ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಎಂದ ಅಮೆರಿಕ, ಆದರೆ ದಾಳಿ ವಿಫಲಗೊಳಿಸಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ. ತಂತ್ರಜ್ಞಾನ ಶತ್ರುಗಳ ಕೈ ಸೇರಬಾರದೆಂದು ಅಮೆರಿಕ ತನ್ನದೇ ಎರಡು ವಿಮಾನಗಳನ್ನು ನಾಶಪಡಿಸಿದೆ.

Read Full Story

05:49 AM (IST) Apr 06

ಗುಜರಾತಿನ ಜನರು ಅನಕ್ಷರಸ್ಥರು, ಕೇರಳಂ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ - ಮಲ್ಲಿಕಾರ್ಜುನ ಖರ್ಗೆ

ಕೇರಳ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತಿನ ಅನಕ್ಷರಸ್ಥರನ್ನು ಮೋದಿ ಮೋಸಗೊಳಿಸಿರಬಹುದು ಆದರೆ ಅಕ್ಷರಸ್ಥ ಕೇರಳಿಗರನ್ನು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಗುಜರಾತ್ ಜನರಿಗೆ ಮಾಡಿದ ಅವಮಾನ ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.
Read Full Story

05:41 AM (IST) Apr 06

ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ - ಮಂಗಳವಾರದತ್ತ ಇಡೀ ವಿಶ್ವದ ಚಿತ್ತ

ಹೋರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಸೋಮವಾರಕ್ಕೆ ಅಂತ್ಯಗೊಳ್ಳಲಿದೆ. ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ, ಮಂಗಳವಾರದಂದು ದೇಶದ ತೈಲಾಗಾರಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಮಾಡಿ, ತೈಲವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Read Full Story

05:33 AM (IST) Apr 06

ವಿಚ್ಛೇದಿತ ಮಗಳನ್ನು ಅದ್ಧೂರಿಯ ಸ್ವಾಗತ ಮಾಡಿಕೊಂಡ ನಿವೃತ್ತ ನ್ಯಾಯಾಧೀಶ - ವಿಡಿಯೋ ನೋಡಿ

ನಿವೃತ್ತ ನ್ಯಾಯಾಧೀಶರೊಬ್ಬರು, ವಿಚ್ಛೇದನ ಪಡೆದು ಮನೆಗೆ ಮರಳಿದ ತಮ್ಮ ಮಗಳನ್ನು ಬಾಜಾ, ಬಜಂತ್ರಿಯೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ವಿಚ್ಛೇದನ ಎಂಬುದು ಕಳಂಕವಲ್ಲ, ಸಮಾಜಕ್ಕಿಂತ ಮಗಳ ಸಂತೋಷ ಮತ್ತು ಘನತೆಯೇ ಮುಖ್ಯ ಎಂದು ಅವರು ಸಮಾಜಕ್ಕೆ ಸಂದೇಶ ಸಾರಿದ್ದಾರೆ.

Read Full Story

More Trending News