ಕೊಲಂಬೊ: ಮಧ್ಯಪ್ರಾಚ್ಯ ಯುದ್ಧದಿಂದ ಇಂಧನ ಕೊರತೆ ಅನುಭವಿಸುತ್ತಿರುವ ಶ್ರೀಲಂಕಾದಲ್ಲಿ, ‘ಅಕ್ರಮವಾಗಿ’ 4 ಲೀ. ಪೆಟ್ರೋಲ್ ಸಂಗ್ರಹಿಸಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನಿಗೆ 21 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ನಿಕವೆರತಿಯ ತಾಲೂಕಿನ ಲಸಂತ ಕುಮಾರ ಬಾಲಸೂರ್ಯ (48) ಶಿಕ್ಷೆಗೊಳಗಾದವರು. ತಮ್ಮ ತಂದೆ ತಾಯಿಯ ಶ್ರಾದ್ಧಕ್ಕಾಗಿ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಲು ಆ ಪೆಟ್ರೋಲ್ ಬಳಸುವುದಾಗಿ ಕೋರ್ಟ್ಗೆ ತಿಳಿಸಿದರು. ಆದರೂ ನ್ಯಾಯಾಧೀಶರು 21 ದಿನಗಳ ಜೈಲುಶಿಕ್ಷೆ ಮತ್ತು 1,500 ಶ್ರೀಲಂಕಾ ರು. ದಂಡ ವಿಧಿಸಿದ್ದಾರೆ.
ಶ್ರೀಲಂಕಾ ಸರ್ಕಾರ ಕ್ಯೂಆರ್ ಕೋಡ್ ಆಧರಿತ ರೇಷನಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಪ್ರಕಾರ ಕಾರುಗಳಿಗೆ ವಾರಕ್ಕೆ 15 ಲೀ. ಮತ್ತು ಬಸ್ಗಳಿಗೆ ವಾರಕ್ಕೆ 60 ಲೀ. ಇಂಧನ ಮಾತ್ರ ಅನುಮತಿಸಲಾಗಿದೆ. ಇದಕ್ಕಿಂತ ಹೆಚ್ಚು ಖರೀದಿಸಿದರೆ ಅಪರಾಧ.
10:11 AM (IST) Mar 28
09:55 AM (IST) Mar 28
ಪರಸ್ತ್ರೀಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ವೇಳೆ ಪತಿ, ಪತ್ನಿ ಹಾಗೂ ಪ್ರೇಯಸಿ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
09:52 AM (IST) Mar 28
09:17 AM (IST) Mar 28
08:48 AM (IST) Mar 28
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಈ ಪಂದ್ಯ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಬಲ್ ಶಾಕ್ ಎದುರಾಗಿದೆ.
07:50 AM (IST) Mar 28
ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ರಜತ್ ಪಾಟೀದಾರ್ ನಾಯಕತ್ವದ ಆರ್ಸಿಬಿ ಬಲಿಷ್ಠವಾಗಿದ್ದರೂ, ವಿದೇಶಿ ಆಟಗಾರರ ಆಯ್ಕೆಯ ಗೊಂದಲದಲ್ಲಿದೆ.