ಕೊಲಂಬೊ: ಮಧ್ಯಪ್ರಾಚ್ಯ ಯುದ್ಧದಿಂದ ಇಂಧನ ಕೊರತೆ ಅನುಭವಿಸುತ್ತಿರುವ ಶ್ರೀಲಂಕಾದಲ್ಲಿ, ‘ಅಕ್ರಮವಾಗಿ’ 4 ಲೀ. ಪೆಟ್ರೋಲ್ ಸಂಗ್ರಹಿಸಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನಿಗೆ 21 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ನಿಕವೆರತಿಯ ತಾಲೂಕಿನ ಲಸಂತ ಕುಮಾರ ಬಾಲಸೂರ್ಯ (48) ಶಿಕ್ಷೆಗೊಳಗಾದವರು. ತಮ್ಮ ತಂದೆ ತಾಯಿಯ ಶ್ರಾದ್ಧಕ್ಕಾಗಿ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಲು ಆ ಪೆಟ್ರೋಲ್ ಬಳಸುವುದಾಗಿ ಕೋರ್ಟ್ಗೆ ತಿಳಿಸಿದರು. ಆದರೂ ನ್ಯಾಯಾಧೀಶರು 21 ದಿನಗಳ ಜೈಲುಶಿಕ್ಷೆ ಮತ್ತು 1,500 ಶ್ರೀಲಂಕಾ ರು. ದಂಡ ವಿಧಿಸಿದ್ದಾರೆ.
ಶ್ರೀಲಂಕಾ ಸರ್ಕಾರ ಕ್ಯೂಆರ್ ಕೋಡ್ ಆಧರಿತ ರೇಷನಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಪ್ರಕಾರ ಕಾರುಗಳಿಗೆ ವಾರಕ್ಕೆ 15 ಲೀ. ಮತ್ತು ಬಸ್ಗಳಿಗೆ ವಾರಕ್ಕೆ 60 ಲೀ. ಇಂಧನ ಮಾತ್ರ ಅನುಮತಿಸಲಾಗಿದೆ. ಇದಕ್ಕಿಂತ ಹೆಚ್ಚು ಖರೀದಿಸಿದರೆ ಅಪರಾಧ.
11:08 PM (IST) Mar 28
ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಆರ್ಸಿಬಿ ಗೆಲುವು ಕಂಡಿದೆ.
10:50 PM (IST) Mar 28
ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಕಂಪನಿಯು 2,000 'ಪ್ರಹಾರ' ಲೈಟ್ ಮೆಷಿನ್ ಗನ್ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಗ್ವಾಲಿಯರ್ನಲ್ಲಿ ತಯಾರಾದ ಈ 7.62 ಎಂಎಂ ಕ್ಯಾಲಿಬರ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಗದಿತ ಸಮಯಕ್ಕಿಂತ 11 ತಿಂಗಳು ಮುಂಚಿತವಾಗಿ ವಿತರಿಸಲಾಗಿದೆ.
10:37 PM (IST) Mar 28
10:09 PM (IST) Mar 28
09:52 PM (IST) Mar 28
ಐಪಿಎಲ್ 2026ರ ಮೊದಲ ಪಂದ್ಯದಲ್ಲಿ, ಆರಂಭಿಕ ಕುಸಿತದ ಹೊರತಾಗಿಯೂ ನಾಯಕ ಇಶಾನ್ ಕಿಶನ್ (80) ಮತ್ತು ಅನಿಕೇತ್ ವರ್ಮಾ (43) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಆರ್ಸಿಬಿ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
08:21 PM (IST) Mar 28
ತೆಲುಗಿನ ಕ್ಲಾಸಿಕ್ ಸಿನಿಮಾಗಳ ರೀಮೇಕ್ ಬಗ್ಗೆ ಮಾತನಾಡಿದ ನಟ ನಾಗಾರ್ಜುನ, ಸೂಪರ್ ಸ್ಟಾರ್ ಕೃಷ್ಣ ಅವರ ಫ್ಲಾಪ್ ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬಾಲಕೃಷ್ಣ ಬಗ್ಗೆಯೂ ಮಾತನಾಡಿದ್ದಾರೆ. ಏನಿದು ವಿಚಾರ? ಇಲ್ಲಿದೆ ವಿವರ.
08:08 PM (IST) Mar 28
ವೊಡಾಫೋನ್ ಐಡಿಯಾ ತನ್ನ 20 ಕೋಟಿ ಗ್ರಾಹಕರಿಗಾಗಿ ಹೊಸ ವಿಶೇಷ ಪ್ರಿಪೇಯ್ಡ್ ಪ್ಲಾನ್ಗಳನ್ನು ಪರಿಚಯಿಸಿದೆ. ₹670 ಮತ್ತು ₹1005 ಬೆಲೆಯ ಈ ಪ್ಲಾನ್ಗಳು ಕ್ರಮವಾಗಿ 56 ಮತ್ತು 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಹೈ-ಸ್ಪೀಡ್ ಡೇಟಾ, ಕಾಲಿಂಗ್ ಮತ್ತು ಹೆಚ್ಚುವರಿ OTT ಪ್ರಯೋಜನಗಳನ್ನು ನೀಡುತ್ತವೆ.
08:00 PM (IST) Mar 28
ನಟ ಪ್ರಭಾಸ್ ಅವರ ತಾಯಿ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದರ ಬಗ್ಗೆ ನಟಿ ರಾಶಿ ಸ್ಪಷ್ಟನೆ ನೀಡಿದ್ದಾರೆ. ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಮಾಡುತ್ತಾ ಬಂದಿರುವ ಈ ತಾರೆ, ಈ ವಿವಾದದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
07:37 PM (IST) Mar 28
ಬೆಂಗಳೂರು ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಪ್ರಯಾಣದ ಅವಧಿ ಒಂದು ಗಂಟೆ ಮೀರಿದ್ದು, ಇದು 'ಸ್ಕ್ರೀನ್-ಫ್ರೀ' ಸಮಯವನ್ನು ಸೃಷ್ಟಿಸಿದೆ. ಈ ದೀರ್ಘಾವಧಿಯ ಪ್ರಯಾಣದಲ್ಲಿ ರೇಡಿಯೋ ಪ್ರಯಾಣಿಕರ 'ದೈನಂದಿನ ಸಂಗಾತಿ'ಯಾಗಿದೆ.
06:56 PM (IST) Mar 28
06:23 PM (IST) Mar 28
ನಟ ವಿಜಯ್ ಕಟಕ ರಾಶಿಯಲ್ಲಿ ಜನಿಸಿದ್ದು, ಅವರ ಜಾತಕದಲ್ಲಿ ರಾಜಯೋಗವಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. 2026ರ ಚುನಾವಣೆಯಲ್ಲಿ ಅವರು ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾರಾ? ಈ ಕುರಿತ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ.
06:01 PM (IST) Mar 28
06:01 PM (IST) Mar 28
ತಮಿಳು ನಟ ಜಯಂ ರವಿ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ನಡುವಿನ ಸ್ನೇಹ ಹಾಗೂ ಆಸ್ತಿ ವ್ಯವಹಾರದ ಕುರಿತ ಇತ್ತೀಚಿನ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.
05:47 PM (IST) Mar 28
ಪ್ರತಿದಿನ ಒಂದು ಕಿಲೋಮೀಟರ್ ನಡೆಯುವುದು ಚಿಕ್ಕ ಅಭ್ಯಾಸದಂತೆ ಕಂಡರೂ, ಇದು ದೇಹದ ಚಲನೆಯನ್ನು ಉತ್ತೇಜಿಸಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ಆಗುವ ಬದಲಾವಣೆಗಳೇನು ಎಂಬುದನ್ನು ಇಲ್ಲಿ ನೋಡೋಣ.
05:31 PM (IST) Mar 28
ನಟ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಬಿಡುಗಡೆಯಾಗದೆ ಬಾಕಿ ಉಳಿದಿದೆ. ಇದೀಗ ಈ ಚಿತ್ರದ ರಿಲೀಸ್ ಬಗ್ಗೆ ಹೊಸ ಮಾಹಿತಿಯೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
05:20 PM (IST) Mar 28
04:55 PM (IST) Mar 28
ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್ಗಳ ಬೆಲೆ ₹5,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಪಲ್ ಸಂಸ್ಥೆಯು ರಿಟೇಲರ್ಗಳಿಗೆ ನೀಡುತ್ತಿದ್ದ 'ಡಿಮ್ಯಾಂಡ್ ಜನರೇಷನ್' ಪ್ರೋತ್ಸಾಹ ಧನವನ್ನು ಹಿಂತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ.
04:41 PM (IST) Mar 28
ವಾರಣಾಸಿ ಸಿನಿಮಾದ್ದು ಬಹುದೊಡ್ಡ ಕ್ಯಾನ್ವಾಸ್. ಆ ಕಥೆಯನ್ನು ಮೂರು ಗಂಟೆಗಳಲ್ಲಿ ಹೇಳುವುದು ಕಷ್ಟಸಾಧ್ಯ. ಹೀಗಾಗಿ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ.
04:13 PM (IST) Mar 28
04:06 PM (IST) Mar 28
03:27 PM (IST) Mar 28
ಬಾಂಗ್ಲಾದೇಶ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ. ಹಿಂದಿನ ಮಧ್ಯಂತರ ಸರ್ಕಾರವು ಮುಸ್ತಾಫಿಜುರ್ ರಹಮಾನ್ ವಿವಾದದ ನಂತರ ಹೇರಿದ್ದ ನಿಷೇಧವನ್ನು, ಹೊಸ ಸರ್ಕಾರವು 'ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸುವುದಿಲ್ಲ' ಎಂದು ಹೇಳಿ ಹಿಂಪಡೆದಿದೆ.
01:54 PM (IST) Mar 28
01:42 PM (IST) Mar 28
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮೊದಲ ಪಂದ್ಯವಾಡಲು ಸಜ್ಜಾಗಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಓನರ್ ವಿಜಯ್ ಮಲ್ಯ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.
01:42 PM (IST) Mar 28
01:26 PM (IST) Mar 28
01:12 PM (IST) Mar 28
01:05 PM (IST) Mar 28
12:43 PM (IST) Mar 28
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಪ್ರಾಣಿ ಹಿಂಸೆಯ ಕಾರಣ ನೀಡಿ ಹಾಲು, ಚರ್ಮ ಮತ್ತು ರೇಷ್ಮೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ನಿರೂಪಕ ಅಮಿತಾಭ್ ಬಚ್ಚನ್ ಅವರು ಆಶ್ಚರ್ಯಚಕಿತರಾಗಿದ್ದಾರೆ.
11:59 AM (IST) Mar 28
ಚೆನ್ನೈ: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮೊದಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಚಾಣಾಕ್ಷ ವಿಕೆಟ್ ಕೀಪರ್ ಧೋನಿ, ಆರಂಭಿಕ ಐಪಿಎಲ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
11:29 AM (IST) Mar 28
ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ಗಳು ತುಂಡುಡುಗೆ ಧರಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೀರ್ಷಿಕೆಯನ್ನು ಸತ್ಯವೆಂದು ನಂಬಿ, ಆಕ್ರೋಶದಿಂದ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ವಿಡಿಯೋಗಳ ಅಸಲಿ ಸತ್ಯವೇ ಬೇರೆಯಾಗಿದೆ.
10:11 AM (IST) Mar 28
09:55 AM (IST) Mar 28
ಪರಸ್ತ್ರೀಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ವೇಳೆ ಪತಿ, ಪತ್ನಿ ಹಾಗೂ ಪ್ರೇಯಸಿ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
09:52 AM (IST) Mar 28
09:17 AM (IST) Mar 28
08:48 AM (IST) Mar 28
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಈ ಪಂದ್ಯ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಬಲ್ ಶಾಕ್ ಎದುರಾಗಿದೆ.
07:50 AM (IST) Mar 28
ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ರಜತ್ ಪಾಟೀದಾರ್ ನಾಯಕತ್ವದ ಆರ್ಸಿಬಿ ಬಲಿಷ್ಠವಾಗಿದ್ದರೂ, ವಿದೇಶಿ ಆಟಗಾರರ ಆಯ್ಕೆಯ ಗೊಂದಲದಲ್ಲಿದೆ.