LIVE NOW
Published : Mar 28, 2026, 06:57 AM ISTUpdated : Mar 28, 2026, 10:11 AM IST

India Latest News Live: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನೋಡ ನೋಡುತ್ತಿದ್ದಂತೆ ಬಣ್ಣ ಬದಲಿಸಿದ ಚೆಂಡು! ಕಳಪೆ ಜೆರ್ಸಿ ಕ್ವಾಲಿಟಿ ಬಗ್ಗೆ ಜೋರಾಯ್ತು ಚರ್ಚೆ!

ಸಾರಾಂಶ

ಕೊಲಂಬೊ: ಮಧ್ಯಪ್ರಾಚ್ಯ ಯುದ್ಧದಿಂದ ಇಂಧನ ಕೊರತೆ ಅನುಭವಿಸುತ್ತಿರುವ ಶ್ರೀಲಂಕಾದಲ್ಲಿ, ‘ಅಕ್ರಮವಾಗಿ’ 4 ಲೀ. ಪೆಟ್ರೋಲ್ ಸಂಗ್ರಹಿಸಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನಿಗೆ 21 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನಿಕವೆರತಿಯ ತಾಲೂಕಿನ ಲಸಂತ ಕುಮಾರ ಬಾಲಸೂರ್ಯ (48) ಶಿಕ್ಷೆಗೊಳಗಾದವರು. ತಮ್ಮ ತಂದೆ ತಾಯಿಯ ಶ್ರಾದ್ಧಕ್ಕಾಗಿ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಲು ಆ ಪೆಟ್ರೋಲ್ ಬಳಸುವುದಾಗಿ ಕೋರ್ಟ್‌ಗೆ ತಿಳಿಸಿದರು. ಆದರೂ ನ್ಯಾಯಾಧೀಶರು 21 ದಿನಗಳ ಜೈಲುಶಿಕ್ಷೆ ಮತ್ತು 1,500 ಶ್ರೀಲಂಕಾ ರು. ದಂಡ ವಿಧಿಸಿದ್ದಾರೆ.

ಶ್ರೀಲಂಕಾ ಸರ್ಕಾರ ಕ್ಯೂಆರ್‌ ಕೋಡ್ ಆಧರಿತ ರೇಷನಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಪ್ರಕಾರ ಕಾರುಗಳಿಗೆ ವಾರಕ್ಕೆ 15 ಲೀ. ಮತ್ತು ಬಸ್‌ಗಳಿಗೆ ವಾರಕ್ಕೆ 60 ಲೀ. ಇಂಧನ ಮಾತ್ರ ಅನುಮತಿಸಲಾಗಿದೆ. ಇದಕ್ಕಿಂತ ಹೆಚ್ಚು ಖರೀದಿಸಿದರೆ ಅಪರಾಧ.

10:11 AM (IST) Mar 28

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನೋಡ ನೋಡುತ್ತಿದ್ದಂತೆ ಬಣ್ಣ ಬದಲಿಸಿದ ಚೆಂಡು! ಕಳಪೆ ಜೆರ್ಸಿ ಕ್ವಾಲಿಟಿ ಬಗ್ಗೆ ಜೋರಾಯ್ತು ಚರ್ಚೆ!

ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ, ಬಿಳಿ ಚೆಂಡು ಕೆಂಪು ಬಣ್ಣಕ್ಕೆ ತಿರುಗಿದ ವಿಚಿತ್ರ ಘಟನೆ ನಡೆದಿದೆ. ಆಟಗಾರರು ಧರಿಸಿದ್ದ ಕಳಪೆ ಗುಣಮಟ್ಟದ ಜೆರ್ಸಿಯ ಬಣ್ಣವೇ ಚೆಂಡಿಗೆ ಅಂಟಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಇದರೊಂದಿಗೆ, ಇಬ್ಬನಿಯ ಪರಿಣಾಮವನ್ನು ತಗ್ಗಿಸಲು ಜಾರಿಗೆ ತಂದಿರುವ ಹೊಸ ನಿಯಮವೂ ಚರ್ಚೆಗೆ ಗ್ರಾಸವಾಗಿದೆ.
Read Full Story

09:55 AM (IST) Mar 28

ಗೆಳತಿ ಜೊತೆ ಹಾಸಿಗೆಯಲ್ಲಿ ಮಜಾ ಮಾಡ್ತಿದ್ದ ಗಂಡನಿಗೆ ಶಾಕ್ ಕೊಟ್ಟ ಹೆಂಡ್ತಿ; ವಿಡಿಯೋ ವೈರಲ್

ಪರಸ್ತ್ರೀಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ವೇಳೆ ಪತಿ, ಪತ್ನಿ ಹಾಗೂ ಪ್ರೇಯಸಿ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Read Full Story

09:52 AM (IST) Mar 28

Viagra History - ವಯಾಗ್ರಾವನ್ನು ಕಂಡುಹಿಡಿದಿದ್ದು ಯಾವುದಕ್ಕೆ ಗೊತ್ತಾ? ಅಸಲಿ ಕಥೆ ಬೇರೇನೇ ಇದೆ!

ವಯಾಗ್ರಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಇದನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಇದು ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಮಾತ್ರೆಗಳಲ್ಲಿ ಒಂದು. ಆದರೆ, ಈ ವಯಾಗ್ರಾವನ್ನು ಮೂಲತಃ ಯಾವ ಉದ್ದೇಶಕ್ಕಾಗಿ ಕಂಡುಹಿಡಿಯಲಾಗಿತ್ತು ಗೊತ್ತಾ?
Read Full Story

09:17 AM (IST) Mar 28

ಸಮಯದ ವಿರುದ್ದ ಹೋರಾಡಿ ಐಪಿಎಲ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜುಗೊಳಿಸಿದ ಕೆಎಸ್‌ಸಿಎ!

ಕಳೆದ ಜೂನ್‌ನಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್‌ಗಾಗಿ ಸಂಪೂರ್ಣವಾಗಿ ಸಜ್ಜಾಗಿದೆ. ಕೆಎಸ್‌ಸಿಎಯು ಕಳೆದ 3 ತಿಂಗಳಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ಕ್ರೀಡಾಂಗಣಕ್ಕೆ ಹೊಸ ರೂಪ ನೀಡಿದೆ ಮತ್ತು ದುರಂತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ವಿಶೇಷ ಗೌರವವನ್ನೂ ಸಲ್ಲಿಸಿದೆ.
Read Full Story

08:48 AM (IST) Mar 28

IPL 2026 ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಡಬಲ್ ಶಾಕ್! ಇಬ್ಬರು ಸ್ಟಾರ್ ಬೌಲರ್‌ಗಳು ಮೊದಲ ಪಂದ್ಯದಿಂದ ಔಟ್

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಈ ಪಂದ್ಯ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಬಲ್ ಶಾಕ್ ಎದುರಾಗಿದೆ.

 

Read Full Story

07:50 AM (IST) Mar 28

RCB Vs SRH IPL 2026 - ಹೇಗಿರುತ್ತೆ ಆರ್‌ಸಿಬಿ ಟೀಂ ಸಂಯೋಜನೆ? ಸಂಭವನೀಯ ಆಟಗಾರರ ಪಟ್ಟಿ

ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ಬಲಿಷ್ಠವಾಗಿದ್ದರೂ, ವಿದೇಶಿ ಆಟಗಾರರ ಆಯ್ಕೆಯ ಗೊಂದಲದಲ್ಲಿದೆ. 

Read Full Story

More Trending News