Published : Nov 27, 2025, 06:56 AM ISTUpdated : Nov 27, 2025, 10:57 PM IST

India Latest News Live: Video ಮದುವೆ ಮಂಟಪದಲ್ಲಿ ಚಿಪ್ಸ್ ಪ್ಯಾಕೆಟ್‌ಗಾಗಿ ಮುಗಿಬಿದ್ದ ಜನ, ರಂಪಾಟದಲ್ಲಿ ಹಲವರಿಗೆ ಗಾಯ

ಸಾರಾಂಶ

ನವದೆಹಲಿ: ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಸಂಪನ್ನವಾದ ನಿಮಿತ್ತ ಮಂಗಳವಾರ ಮಂದಿರದ ಶಿಖರದ ಮೇಲೆ ಹಾರಿಸಲಾದ ಭಗವಾಧ್ವಜಕ್ಕೆ ಪಾಕಿಸ್ತಾನ ಆಕ್ಷೇಪಿಸಿದೆ. ಈ ಕುರಿತು ಹೇಳಿಕೆ ಬಿಡು ಗಡೆ ಮಾಡಿರುವ ಪಾಕ್‌ನ ವಿದೇಶಾಂಗ ಸಚಿವಾಲಯ, 'ಇದು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಒತ್ತಡ ಹೇರುವ ತಂತ್ರ. ಬಹುಸಂಖ್ಯಾತ ಹಿಂದೂಗಳ ಪ್ರಭಾವದಿಂದ ಮುಸ್ಲಿಮರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ನಾಶಮಾಡುವ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ' ಎಂದಿದೆ. 

ಜತೆಗೆ, ಭಾರತದಲ್ಲಿ ಹೆಚ್ಚುತ್ತಿ ರುವ ಮುಸ್ಲಿಂ ದ್ವೇಷದತ್ತ ಅಂತಾರಾಷ್ಟ್ರೀಯ ಸಮುದಾಯ ಗಮನ ಹರಿಸಬೇಕು ಎಂದೂ ಆಗ್ರಹಿಸಲಾಗಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿ ಪಾಕ್‌ನಿಂದ ಪಾಠ ಕಲಿಯಬೇಕಿಲ್ಲ ಎಂದು ಕಪಾಳಮೋಕ್ಷ ಮಾಡಿದೆ.

10:57 PM (IST) Nov 27

Video ಮದುವೆ ಮಂಟಪದಲ್ಲಿ ಚಿಪ್ಸ್ ಪ್ಯಾಕೆಟ್‌ಗಾಗಿ ಮುಗಿಬಿದ್ದ ಜನ, ರಂಪಾಟದಲ್ಲಿ ಹಲವರಿಗೆ ಗಾಯ

Video ಮದುವೆ ಮಂಟಪದಲ್ಲಿ ಚಿಪ್ಸ್ ಪ್ಯಾಕೆಟ್‌ಗಾಗಿ ಮುಗಿಬಿದ್ದ ಜನ, ರಂಪಾಟದಲ್ಲಿ ಹಲವರಿಗೆ ಗಾಯ, ಅತಿಥಿಗಳು, ಕುಟುಂಬಸ್ಥರು ಬಾಕ್ಸ್‌ ಹರಿದು ಚಿಪ್ಸ್ ಪ್ಯಾಕೆಟ್ ಮಾಲೆಗಳನ್ನೇ ಹೊತ್ತೊಯ್ದಿದ್ದಾರೆ. ಈ ರಂಪಾಟದಲ್ಲಿ ಹಲವರು ಗಾಯಗಂಡಿದ್ದಾರೆ.

Read Full Story

09:54 PM (IST) Nov 27

ಒಂದಕ್ಕಿಂತ ಹೆಚ್ಚು ಮದುವೆಯಾದರೆ 7 ವರ್ಷ ಜೈಲು ಫಿಕ್ಸ್, ಅಸ್ಸಾಂನಲ್ಲಿ ಬಹುಪತ್ನಿತ್ವ ಮಸೂದೆ ಪಾಸ್!

ಅಸ್ಸಾಂ ಸರ್ಕಾರ ಬಹುಪತ್ನಿತ್ವ ಮಸೂದೆಯನ್ನು ಅಂಗೀಕರಿಸಿದ್ದು, ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಅಪರಾಧ ಎಂದು ಪರಿಗಣಿಸಿದೆ. ಅಪರಾಧಿಗೆ ಜೈಲು ಮತ್ತು ದಂಡ ವಿಧಿಸಬಹುದು. ಇದರೊಂದಿಗೆ, ಯಾರಾದರೂ ಕಾನೂನು ಮುರಿದರೆ, ಅವರ ಸರ್ಕಾರಿ ಉದ್ಯೋಗ ಮತ್ತು ಮತದಾನದ ಹಕ್ಕನ್ನು ಸಹ ಕಳೆದುಕೊಳ್ಳುತ್ತಾರೆ.

Read Full Story

08:54 PM (IST) Nov 27

ಟ್ರ್ಯಾಕ್ಟರ್ ಮೇಲೆ ನಡುಗುವ ಏಣಿ ಹತ್ತಿ ಎಸ್‌ಬಿಐ ಬ್ಯಾಂಕ್ ತಲುಪಿದ ಸಿಬ್ಬಂದಿ ಗ್ರಾಹಕರು..!

ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಎಸ್‌ಬಿಐ ಬ್ಯಾಂಕ್‌ನ ಮೆಟ್ಟಿಲುಗಳನ್ನು ಕೆಡವಲಾಯಿತು. ಇದರಿಂದಾಗಿ, ಸಿಬ್ಬಂದಿ ಮತ್ತು ಗ್ರಾಹಕರು ಏಣಿಯ ಸಹಾಯದಿಂದ ಬ್ಯಾಂಕ್ ಪ್ರವೇಶಿಸಬೇಕಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ತಮಾಷೆಯ ಕಾಮೆಂಟ್‌ಗಳಿಗೆ ಕಾರಣವಾಯಿತು.

Read Full Story

08:36 PM (IST) Nov 27

ದೇಶದ ಅತ್ಯಂತ ಶ್ರೀಮಂತ ಶಾಸಕರು ಯಾರು? ಟಾಪ್ 5 ರಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದ ಈ ನಾಯಕ ಯಾರು?

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯು ದೇಶದ 4,092 ಶಾಸಕರ ಸಂಪತ್ತಿನ ಅಂತರ ಬಹಿರಂಗಪಡಿಸಿದೆ. ಮಹಾರಾಷ್ಟ್ರದ ಪರಾಗ್ ಶಾ ₹3,383 ಕೋಟಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತರಾಗಿದ್ದರೆ, ಪ.ಬಂಗಾಳದ ನಿರ್ಮಲ್ ಕುಮಾರ್ ಧಾರ ಕೇವಲ ₹1,700 ಆಸ್ತಿಯೊಂದಿಗೆ ಅತ್ಯಂತ ಬಡ ಶಾಸಕರಾಗಿದ್ದ

Read Full Story

08:08 PM (IST) Nov 27

WPL Auction - ಬಿಗ್ ಹಿಟ್ಟರ್ ಕೈಬಿಟ್ಟ ಆರ್‌ಸಿಬಿ; ದೀಪ್ತಿ, ಕೆರ್ರ್‌ಗೆ ಜಾಕ್‌ಪಾಟ್‌! ಬೆಂಗಳೂರು ಪಾಲಾದ ಸ್ಟಾರ್ ಆಲ್ರೌಂಡರ್

ನಾಲ್ಕನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ, ಆರ್‌ಸಿಬಿ ತಂಡವು ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಕಳೆದುಕೊಂಡಿದೆ. ಮತ್ತೊಂದೆಡೆ, ದೀಪ್ತಿ ಶರ್ಮಾ ಅವರು 3.20 ಕೋಟಿ ರುಪಾಯಿಗೆ ಯುಪಿ ವಾರಿಯರ್ಸ್ ಪಾಲಾಗಿದ್ದಾರೆ. ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ವಿವರ ಇಲ್ಲಿದೆ.

Read Full Story

07:56 PM (IST) Nov 27

ಸುಮಾತ್ರಾದ ಕಾಡಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಹೂವು - 13 ವರ್ಷಗಳ ಹುಡುಕಾಟಕ್ಕೆ ತೆರೆ

13 ವರ್ಷಗಳ ಸುದೀರ್ಘ ಹುಡುಕಾಟದ ನಂತರ, ಜೀವಶಾಸ್ತ್ರಜ್ಞರೊಬ್ಬರು ಇಂಡೋನೇಷ್ಯಾದ ಸುಮಾತ್ರಾ ಕಾಡಿನಲ್ಲಿ ವಿಶ್ವದ ಅತಿದೊಡ್ಡ ಹೂವಾದ ರಾಫ್ಲೆಸಿಯಾ ಹ್ಯಾಸೆಲ್ಟಿಯನ್ನು ಪತ್ತೆಹಚ್ಚಿದ್ದಾರೆ. ಹುಲಿಗಳ ಭಯದ ನಡುವೆ ನಡೆದ ಈ ಸಂಶೋಧನೆಯು, ಅಳಿವಿನಂಚಿನಲ್ಲಿರುವ ಈ ಅಪರೂಪದ ಹೂವಿನ ಸಂರಕ್ಷಣೆಗೆ ನಿರ್ಣಾಯಕವಾಗಿದೆ.
Read Full Story

07:24 PM (IST) Nov 27

4ನೇ ಆವೃತ್ತಿಯ WPL ವೇಳಾಪಟ್ಟಿ ಪ್ರಕಟ; ಈ ಎರಡು ನಗರಗಳಲ್ಲಿ ನಡೆಯಲಿದೆ ಮಹಿಳಾ ಐಪಿಎಲ್!

ಬಿಸಿಸಿಐ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಟೂರ್ನಿಯು ಜನವರಿ 09 ರಿಂದ ಫೆಬ್ರವರಿ 05 ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಗಳು ನವಿ ಮುಂಬೈ ಹಾಗೂ ವಡೋದರಾದಲ್ಲಿ ಆಯೋಜನೆಯಾಗಲಿದ್ದು, ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿತ್ತು.
Read Full Story

07:19 PM (IST) Nov 27

ವಿಡಿಯೋ - ವಸತಿ ಯೋಜನೆ ಮನೆಗಳ ಪರಿಶೀಲನೆ ವೇಳೆ ನೆಲಮಾಳಿಗೆ ಕುಸಿತ, ಕಾಂಗ್ರೆಸ್ ಶಾಸಕ ಕೂದಲೆಳೆ ಅಂತರದಲ್ಲಿ ಪಾರು!

ತೆಲಂಗಾಣದ ವೇಮುಲವಾಡದಲ್ಲಿ ನಿರ್ಮಾಣ ಹಂತದ ಡಬಲ್ ಬೆಡ್‌ರೂಮ್ ಮನೆಗಳ ಪರಿಶೀಲನೆ ವೇಳೆ, ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಮತ್ತು ಅಧಿಕಾರಿಗಳಿದ್ದಾಗಲೇ ನೆಲಮಾಳಿಗೆ ಕುಸಿದುಬಿದ್ದಿದೆ. ಈ ಘಟನೆಗೆ ಹಿಂದಿನ ಬಿಆರ್‌ಎಸ್ ಸರ್ಕಾರ ಕಾರಣ ಎಂದು ಶಾಸಕರು ಆರೋಪಿಸಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

Read Full Story

07:03 PM (IST) Nov 27

ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು

ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು, ಬಡವರಿಗೆ, ಸೂರಿಲ್ಲದವರಿಗೆ ನಿರ್ಮಿಸುತ್ತಿರವ ಮನೆ ಇದಾಗಿದೆ. ಛಾವಣಿ ಕುಸಿತ ಘಟನೆ ಬೆನ್ನಲ್ಲೇ ಗುಣಮಟ್ಟ, ಸರ್ಕಾರದ ಭ್ರಷ್ಟಾಚಾರ ಕುರಿತು ಭಾರಿ ಟೀಕೆ ಕೇಳಿಬಂದಿದೆ.

 

Read Full Story

06:39 PM (IST) Nov 27

ದೀದೀ ನಾಡಲ್ಲಿ ಹೆಣ್ಣು ದೆವ್ವ - ರೈಲು ಓಡಾಟ ಸಂಪೂರ್ಣ ಬಂದ್​- ಮದುವೆಗೂ ಸಂಕಷ್ಟ - ಬೆಚ್ಚಿ ಬೀಳೋ ಸ್ಟೋರಿ ಇದು

ಪಶ್ಚಿಮ ಬಂಗಾಳದ ಬೇಗುಂಕೋಡರ್ ರೈಲು ನಿಲ್ದಾಣವು ಹೆಣ್ಣು ದೆವ್ವದ ಕಾಟದ ವದಂತಿಯಿಂದಾಗಿ ದಶಕಗಳ ಕಾಲ ಮುಚ್ಚಲ್ಪಟ್ಟಿತ್ತು. ಈ ಭಯದಿಂದಾಗಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂತಿಮವಾಗಿ, ಸಂಘ-ಸಂಸ್ಥೆಗಳ ಪ್ರಯತ್ನ ಮತ್ತು ವೈಚಾರಿಕ ಸವಾಲಿನ ನಂತರ, 2009ರಲ್ಲಿ ರೈಲು ಸೇವೆ ಪುನರಾರಂಭಗೊಂಡಿದೆ.

Read Full Story

06:34 PM (IST) Nov 27

ಮೇರಿ ಡಿಕೋಸ್ಟಾ ಬಳಿಕ ಪಲಾಶ್ ಜೊತೆ ಮತ್ತೊಬ್ಬ ಕೊರಿಯೋಗ್ರಾಫರ್ ಎಂಟ್ರಿ? ಯಾರೀಕೆ? ಏನಿದು ಹೊಸ ಕಥೆ?

ಮೇರಿ ಡಿಕೋಸ್ಟಾ ಈ ಹಿಂದೆ ಪಲಾಶ್ ಜೊತೆಗಿನ ಫ್ಲರ್ಟಿ ಚಾಟ್‌ಗಳ ಫೋಟೋಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದರು. ಈಗ, ಮತ್ತೊಬ್ಬ ಮಹಿಳೆಯ ಹೆಸರು ವೈರಲ್ ಆಗುತ್ತಿದ್ದು, ಪಲಾಶ್ ಜೊತೆ ತಳುಕು ಹಾಕಿಕೊಂಡಿದೆ.

 

Read Full Story

06:24 PM (IST) Nov 27

ಟ್ರೇಡ್ ಫ್ರಾಡ್ - 4 ವರ್ಷದಲ್ಲಿ 35 ಕೋಟಿ ರೂಪಾಯಿ ಕಳೆದುಕೊಂಡ 72ರ ವೃದ್ಧ

stock market investment scam: ಮುಂಬೈನ 72 ವರ್ಷದ ಉದ್ಯಮಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಬ್ರೋಕರೇಜ್ ಸಂಸ್ಥೆಯೊಂದು ನಾಲ್ಕು ವರ್ಷಗಳಲ್ಲಿ 35 ಕೋಟಿ ರೂಪಾಯಿ ವಂಚಿಸಿದೆ. 

Read Full Story

06:15 PM (IST) Nov 27

ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ

ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ, ಕಸ್ತೂರಿ ಪರಿಮಳ, ಮಾಂಸಕ್ಕಾಗಿ ಕಸ್ತೂರಿ ಮೃಗವನ್ನು ಬೇಟೆಯಾಡಿದ ಪರಿಣಾಮ ಭಾರತದಲ್ಲಿ ಕಸ್ತೂರಿ ಮೃಗಗಳು ಸಂತತಿ ಅಳಿವಿನಂಚಿನಲ್ಲಿದೆ. ಈ ಕಸ್ತೂರಿ ಮೃಗ ಬಂಗಾಳ ಕಾಡಿನಲ್ಲಿ ಪತ್ತೆಯಾಗಿದೆ.

Read Full Story

06:07 PM (IST) Nov 27

ಸೋಶಿಯಲ್‌ ಮೀಡಿಯಾದಲ್ಲಿ ಹಾವಳಿ ಸೃಷ್ಟಿಸಿದ MMS; ಬಂಗಾಳಿ ಇನ್‌ಫ್ಲುಯೆನ್ಸರ್‌ Sofik SK ಫಾಲೋವರ್ಸ್‌ ಭಾರೀ ಏರಿಕೆ!

ಬಂಗಾಳದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಸೋಫಿಕ್ ಎಸ್‌ಕೆ ಅವರ ಖಾಸಗಿ ವಿಡಿಯೋ ವೈರಲ್ ಆದ ನಂತರ ಅವರ ಇನ್ಸ್‌ಸ್ಟಾಗ್ರಾಮ್‌ ಫಾಲೋವರ್‌ಗಳ ಸಂಖ್ಯೆ ಭಾರೀ ಏರಿಕೆಯಾಗಿದೆ. ಸ್ನೇಹಿತನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾಗಿ ಹೇಳಿಕೊಂಡಿರುವ ಸೋಫಿಕ್, ವಿಡಿಯೋ ಹಂಚದಂತೆ ಮನವಿ ಮಾಡಿ ಕ್ಷಮೆಯಾಚಿಸಿದ್ದಾರೆ.
Read Full Story

05:56 PM (IST) Nov 27

ಏರ್‌ ಇಂಡಿಯಾ ಮೇಲೆ ಅಸಮಾಧಾನ ಹೊರಹಾಕಿದ ಮೊಹಮ್ಮದ್ ಸಿರಾಜ್! ಕ್ಷಮೆ ಕೇಳಿದ ವಿಮಾನಯಾನ ಸಂಸ್ಥೆ!

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ಗುವಾಹಟಿಯಿಂದ ಹೈದರಾಬಾದ್‌ಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ನಾಲ್ಕು ಗಂಟೆಗಳ ಕಾಲ ವಿಳಂಬವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ಲೈನ್ಸ್‌ನಿಂದ ಸರಿಯಾದ ಮಾಹಿತಿ ಸಿಗದ ಕಾರಣ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story

05:51 PM (IST) Nov 27

ಕರಿಷ್ಮಾ ಕಪೂರ್​ ಮಗಳ ಫೀಸ್​ ಕಟ್ಟೋದು ಮಾಜಿ ಗಂಡನ 3ನೇ ಪತ್ನಿಯಂತೆ! ಆಕೆಯನ್ನೇ ಕೋರ್ಟಿಗೆಳೆದ ನಟಿ- ಛೀಮಾರಿ

ನಟಿ ಕರಿಷ್ಮಾ ಕಪೂರ್ ಮತ್ತು ಅವರ ದಿವಂಗತ ಮಾಜಿ ಪತಿ ಸಂಜಯ್ ಕಪೂರ್ ಅವರ ಪತ್ನಿ ಪ್ರಿಯಾ ಸಚ್‌ದೇವ್ ನಡುವೆ 30 ಸಾವಿರ ಕೋಟಿ ಆಸ್ತಿಗಾಗಿ ಕಾನೂನು ಹೋರಾಟ ನಡೆಯುತ್ತಿದೆ. ತಮ್ಮ ಮಗಳ ಕಾಲೇಜು ಶುಲ್ಕ ಪಾವತಿಸಿಲ್ಲವೆಂದು ಕರಿಷ್ಮಾ ಕೋರ್ಟ್ ಮೆಟ್ಟಿಲೇರಿದ್ದು, ಈ ಕ್ಷುಲ್ಲಕ ಕಾರಣಕ್ಕೆ ನ್ಯಾಯಾಲಯ ಗರಂ ಆಗಿದೆ.
Read Full Story

05:49 PM (IST) Nov 27

ಅಯೋಧ್ಯೆ ದೇಶದ ಅತಿ ಹೆಚ್ಚು ಲಾಭದಾಯಕ ಮಾರುಕಟ್ಟೆ; ರಿಯಲ್ ಎಸ್ಟೇಟ್‌ನಲ್ಲಿ ಹೊಸ ದಾಖಲೆ!

Ayodhya real estate boom: ರಾಮ ಮಂದಿರ ನಿರ್ಮಾಣದ ನಂತರ ಅಯೋಧ್ಯೆ ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕೇಂದ್ರವಾಗಿ ಮಾರ್ಪಟ್ಟಿದೆ. ಬೃಹತ್ ಮೂಲಸೌಕರ್ಯ ಅಭಿವೃದ್ಧಿ  ಹೆಚ್ಚಿದ ಪ್ರವಾಸೋದ್ಯಮದಿಂದ, ಕಳೆದ 5 ವರ್ಷಗಳಲ್ಲಿ ಭೂಮಿಯ ಬೆಲೆಗಳು ಶೇ. 300-500ರಷ್ಟು ಏರಿಕೆ,  ಹೂಡಿಕೆದಾರರಿಗೆ ಲಾಭದಾಯಕ ತಾಣವಾಗಿದೆ.

Read Full Story

05:38 PM (IST) Nov 27

ಬ್ರಿಟನ್‌ ರಾಣಿ ವಿರುದ್ಧ ಬಟ್ಟೆ ಕದ್ದ ಆರೋಪ ಹೊರಿಸಿದ ಮೀಡಿಯಾ!

ಬ್ರಿಟನ್ ರಾಜಮನೆತನದ ಸೊಸೆ ಮೇಘನ್ ಮಾರ್ಕೆಲ್ ಮೇಲೆ ₹1.5 ಲಕ್ಷ ಮೌಲ್ಯದ ಉಡುಪನ್ನು ಕದ್ದ ಆರೋಪ ಕೇಳಿಬಂದಿದೆ. ನೆಟ್‌ಫ್ಲಿಕ್ಸ್ ಪ್ರೋಮೋದಲ್ಲಿ ಅವರು ಧರಿಸಿದ್ದ ಉಡುಪು ಮೂರು ವರ್ಷಗಳ ಹಿಂದಿನ ಫೋಟೋಶೂಟ್‌ನದ್ದು ಎಂದು ವರದಿಯಾಗಿದೆ. 

Read Full Story

05:09 PM (IST) Nov 27

ಹಾವನ್ನು ಉಳಿಸಲು ಹೋಗಿ ಪಲ್ಟಿಯಾದ ಶಾಲಾ ಆಟೋ - ಇಬ್ಬರು ಮಕ್ಕಳ ದುರಂತ ಅಂತ್ಯ

school auto Overturned: ರಸ್ತೆಯಲ್ಲಿ ಸಾಗುತ್ತಿದ್ದ ಹಾವನ್ನು ರಕ್ಷಿಸುವುದಕ್ಕೆ ಹೋಗಿ ಆಟೋವೊಂದು ಉರುಳಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಎರಡು ಪುಟಾಣಿ ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಕೇರಳದ ಪಟ್ಟಣತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

Read Full Story

04:46 PM (IST) Nov 27

ಲಕ್ಷ್ಮೀ ಮಿತ್ತಲ್‌ ಶಿಫ್ಟ್ ಆಗುತ್ತಿರುವ ರಹಸ್ಯ ದ್ವೀಪ ನಯಾ ಐಸ್ಲೆಂಡ್‌ ಎಲ್ಲಿದೆ?

ಪ್ರಸ್ತಾವಿತ ತೆರಿಗೆ ಬದಲಾವಣೆಗಳಿಂದಾಗಿ ಲಕ್ಷ್ಮಿ ಮಿತ್ತಲ್ ಇಂಗ್ಲೆಂಡ್‌ನಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ, ದುಬೈನಲ್ಲಿ ನಯಾ ದ್ವೀಪದಲ್ಲಿರುವ ಹೊಸ ಅಲ್ಟ್ರಾ-ಐಷಾರಾಮಿ ಎಸ್ಟೇಟ್‌ನಲ್ಲಿ ತಮ್ಮ ಮುಂದಿನ ಜೀವನ ಕಳೆಯಲಿದ್ದಾರೆ.

Read Full Story

04:36 PM (IST) Nov 27

ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ

ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ, ಪಲಾಶ್ ಮುಚ್ಚಾಲ್ ಹಾಗೂ ಸ್ಮೃತಿ ಮಂದನಾ ಮದುವೆ ಬಹುತೇಕ ಮುರಿದು ಬಿದ್ದಿದೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿ. ಇದಕ್ಕೆ ಕಾರಣವೂ ಬಹಿರಂಗವಾಗಿದೆ.

Read Full Story

04:34 PM (IST) Nov 27

ತಾನೇ ಸಾಕಿದ ಪಿಟ್‌ಬುಲ್ ಶ್ವಾನದ ದಾಳಿಗೆ ಕಾಲೇಜು ಯುವತಿ ಬಲಿ

 banned dog breeds: 23 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತಾನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪಿಟ್‌ಬುಲ್ ಶ್ವಾನಗಳ ದಾಳಿಗೆ ಬಲಿಯಾಗಿದ್ದಾಳೆ. ಈ ಘಟನೆಯು ಪಿಟ್‌ಬುಲ್‌ಗಳಂತಹ ಅಪಾಯಕಾರಿ ತಳಿಗಳನ್ನು ಸಾಕುವುದು ಎಷ್ಟು ಮಾರಣಾಂತಿಕ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.

Read Full Story

04:02 PM (IST) Nov 27

ಬರೀ 10 ಸಾವಿರ ಹೂಡಿಕೆ ಮಾಡಿದ್ದವರಿಗೆ ಇಂದು 19 ಕೋಟಿ ಜಾಕ್‌ಪಾಟ್‌, ಜನರನ್ನು ಕೋಟ್ಯಧಿಪತಿ ಮಾಡಿದ 10 ಷೇರುಗಳು!

Wealth Creator Stocks: ನೀವು ಈ ಕಂಪನಿಗಳ ಪಟ್ಟಿಯನ್ನು ನೋಡಿದಾಗ, ಈ ಕಂಪನಿಗಳು ತುಂಬಾ ಸಾಮರ್ಥ್ಯವನ್ನು ಹೊಂದಿವೆ ಎಂದು ನೀವು ಭಾವಿಸಬಹುದು. ಬಹುಶಃ ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ಒಂದು ಅಥವಾ ಎರಡು ಇರಬಹುದು, ಆದರೆ ನೀವು ಬಹುಶಃ ಸಾಕಷ್ಟು ಸಮಯದವರೆಗೆ ಹೂಡಿಕೆ ಮಾಡಿಲ್ಲ.

Read Full Story

03:48 PM (IST) Nov 27

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ

ತಮಿಳುನಾಡು-ಆಂಧ್ರ ತೀರಕ್ಕೆ ಅಪ್ಪಳಿಸುತ್ತಿದೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ, ಬಂಗಾಳ ಕೊಲ್ಲಿಯಲ್ಲಿ ಈ ಚಂಡಮಾರುತ ರೂಪುಗೊಂಡಿದೆ. ನವೆಂಬರ್ 30ರಂದು ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿದೆ.

Read Full Story

03:26 PM (IST) Nov 27

ಗರ್ಭಿಣಿ 6 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣು

ಕೇರಳದ ತ್ರಿಶೂರ್‌ನಲ್ಲಿ 20 ವರ್ಷದ ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಅವರು ಪ್ರೇಮ ವಿವಾಹವಾಗಿದ್ದರು. ಆಕೆಯ ಸಾವಿಗೆ ಪತಿ ಶರೋನ್‌ನ ನಿರಂತರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story

03:13 PM (IST) Nov 27

ಡಾಕ್ಟರ್ ಆಯ್ತು ಈಗ ಲಾಯರ್, ಪಾಕ್ ಐಎಸ್ಐ ಪರ ಕೆಲಸ ಮಾಡುತ್ತಿದ್ದ ವಕೀಲ ರಿಜ್ವಾನ್ ಅರೆಸ್ಟ್

ಡಾಕ್ಟರ್ ಆಯ್ತು ಈಗ ಲಾಯರ್, ಪಾಕ್ ಐಎಸ್ಐ ಪರ ಕೆಲಸ ಮಾಡುತ್ತಿದ್ದ ವಕೀಲ ರಿಜ್ವಾನ್ ಅರೆಸ್ಟ್, ಆತಂಕದ ಬೆಳವಣಿಗೆ ಎಂದರೆ ಇದು ಕೆಲವೇ ತಿಂಗಳಲ್ಲಿ ದಾಖಲಾದ ಮೂರನೇ ಪ್ರಕರಣ. ದೆಹಲಿ ಸ್ಫೋಟದಲ್ಲಿ ವೈದ್ಯರೇ ಉಗ್ರರಾಗಿದ್ದರೆ, ಇಲ್ಲಿ ವಕೀಲರನ್ನು ಬಳಸಿಕೊಳ್ಳಲಾಗಿದೆ.

Read Full Story

03:04 PM (IST) Nov 27

ಸ್ಮೃತಿ ಮಂಧನಾರಿಗಾಗಿ ಮಹಿಳಾ ಬಿಗ್‌ಬ್ಯಾಷ್ ಲೀಗ್‌ ತೊರೆದ ಜೆಮಿಮಾ! ಅಲ್ಲಿಗೆ ಮದುವೆ ಸುದ್ದಿಗೆ ಪೂರ್ಣ ವಿರಾಮ?

ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಭಾರತ ಮಹಿಳಾ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗ್ಸ್‌, ಮಹಿಳಾ ಬಿಗ್‌ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಸ್ಮೃತಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

 

Read Full Story

02:51 PM (IST) Nov 27

ವಿಶ್ವಕಪ್‌ ಹೀರೋ ಪುತ್ರ, ಸಿಎಸ್‌ಕೆ ಮಾಜಿ ಪ್ಲೇಯರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ಇಬ್ಬರಿಗೂ ಇದು ಸೆಕೆಂಡ್‌ ಮ್ಯಾರೇಜ್‌!

ನಟಿ ಸಂಯುಕ್ತ ಷಣ್ಮುಗನಾಥನ್ ಮತ್ತು ಮಾಜಿ ಕ್ರಿಕೆಟಿಗ ಅನಿರುದ್ಧ ಶ್ರೀಕಾಂತ್ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಮದುವೆಯು ಇಬ್ಬರಿಗೂ ಎರಡನೇ ವಿವಾಹವಾಗಿದ್ದು, ಈ ಮೂಲಕ ತಮ್ಮ ಸಂಬಂಧದ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Read Full Story

02:06 PM (IST) Nov 27

ಮಹಿಳೆ ಮೇಲೆ ಸಾಕು ನಾಯಿ ದಾಳಿ - ಕ್ಷಮೆ ಬದಲು ಸಂತ್ರಸ್ತೆಯ ಕೆನ್ನೆಗೆ ಹೊಡೆದ ನಾಯಿ ಮಾಲಕಿ

Dog owner slaps woman: ಬೇರೆಯವರ ಸಾಕುನಾಯಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿದೆ. ಈ ವೇಳೆ, ಕ್ಷಮೆ ಕೇಳುವ ಬದಲು ನಾಯಿಯ ಮಾಲಕಿ ಸಂತ್ರಸ್ತ ಮಹಿಳೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

01:05 PM (IST) Nov 27

90 ಕೋಟಿ ರೂಪಾಯಿಯ ಸೈಬರ್ ವಂಚನೆ - ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

ಪುದುಚೇರಿಯಲ್ಲಿ 90 ಕೋಟಿ ರೂಪಾಯಿ ಮೌಲ್ಯದ ಬೃಹತ್ ಸೈಬರ್ ವಂಚನೆ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಆರೋಪಿಗಳಾಗಿದ್ದು,  ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ಎಂಬ ಡಿಟೇಲ್ ಇಲ್ಲಿದೆ.

Read Full Story

01:02 PM (IST) Nov 27

ಮದುವೆ ಹಿಂದಿನ ದಿನವೇ ಮಾಜಿ ಗೆಳತಿ ಜೊತೆ ಪಲಾಶ್‌ ಚಕ್ಕಂದ, ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದು ಕರ್ನಾಟಕದ ಶ್ರೇಯಾಂಕಾ ಪಾಟೀಲ್‌?

ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಸ್ಮೃತಿ ತಂದೆಯ ಅನಾರೋಗ್ಯದ ಕಾರಣ ಎನ್ನಲಾಗಿತ್ತಾದರೂ, ಮದುವೆಯ ಹಿಂದಿನ ದಿನ ಪಲಾಶ್ ತನ್ನ ಮಾಜಿ ಗೆಳತಿಯೊಂದಿಗೆ ಸಿಕ್ಕಿಬಿದ್ದಿದ್ದೇ ಕಾರಣ ಎಂಬ ಹೊಸ ವದಂತಿಗಳು ಹರಿದಾಡುತ್ತಿವೆ.

Read Full Story

12:07 PM (IST) Nov 27

ಗೋವಾ ಇನ್ನು ರಾಮಮಯ - ವಿಶ್ವದ ಅತಿ ಎತ್ತರದ ಪ್ರತಿಮೆ ಪ್ರಧಾನಿಯಿಂದ ಅನಾವರಣ- ರೋಚಕ ಮಾಹಿತಿ ಇಲ್ಲಿದೆ

ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ ಮಠದ 550ನೇ ಸಂಸ್ಥಾಪನಾ ವಾರ್ಷಿಕೋತ್ಸವದ ಅಂಗವಾಗಿ, ವಿಶ್ವದ ಅತ್ಯಂತ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯು ಅನಾವರಣಗೊಳ್ಳಲಿದೆ.  ಗೋವಾ ಮತ್ತು ಶ್ರೀರಾಮಚಂದ್ರನ ನಡುವಿನ ಅವಿನಾಭಾವ ಸಂಬಂಧ ಹೊಂದಿದೆ. 

Read Full Story

12:04 PM (IST) Nov 27

'ಉಸಿರಾಡೋಕೆ ಗಾಳಿ, ಕುಡಿಯೋಕೆ ನೀರು ಯೋಗ್ಯವಲ್ಲ..' ಭಾರತದ ಅರ್ಥಿಕ ಪ್ರಗತಿ ಪ್ರಶ್ನೆ ಮಾಡಿದ ಉದ್ಯಮಿ ಸಬೀರ್‌ ಭಾಟಿಯಾ!

ಹಾಟ್‌ಮೇಲ್ ಸಹ-ಸಂಸ್ಥಾಪಕ ಸಬೀರ್ ಭಾಟಿಯಾ ಅವರು ಭಾರತದ ಆರ್ಥಿಕ ಪ್ರಗತಿಯನ್ನು ಪ್ರಶ್ನಿಸಿದ್ದಾರೆ. ದೇಶವು ಜಿಡಿಪಿಯಲ್ಲಿ ಬೆಳೆಯುತ್ತಿದ್ದರೂ, ನಾಗರಿಕರಿಗೆ ಶುದ್ಧ ಗಾಳಿ, ನೀರು ಮತ್ತು ಗೌರವಯುತ ಜೀವನದಂತಹ ಮೂಲಭೂತ ಸೌಕರ್ಯಗಳೇ ಇಲ್ಲದಿದ್ದರೆ ಆ ಬೆಳವಣಿಗೆಗೆ ಅರ್ಥವಿಲ್ಲ ಎಂದು ಅವರು ವಾದಿಸಿದ್ದಾರೆ.

Read Full Story

11:11 AM (IST) Nov 27

ಹಾಲಿ ಬಂಗಾಳ ಮತದಾರ ಪಟ್ಟಿಯಲ್ಲಿರುವ 26 ಲಕ್ಷ ಮತದಾರರು 2002ರ ಪಟ್ಟಿಗೆ ತಾಳೆ ಆಗುತ್ತಿಲ್ಲ - ಚುನಾವಣಾ ಆಯೋಗ

ಪಶ್ಚಿಮ ಬಂಗಾಳದ ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಸುಮಾರು 26 ಲಕ್ಷ ಹೆಸರುಗಳು 2002ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಚುನಾವಣಾ ಆಯೋಗ ವರದಿ ಮಾಡಿದೆ. SIR ಪ್ರಕ್ರಿಯೆಯಡಿ ನಡೆಯುತ್ತಿರುವ ಡಿಜಿಟಲೀಕರಣ ಮತ್ತು ಮ್ಯಾಪಿಂಗ್ ಕಾರ್ಯದಲ್ಲಿ ಈ ವ್ಯತ್ಯಾಸ ಕಂಡುಬಂದಿದೆ. 

Read Full Story

10:00 AM (IST) Nov 27

ಇಂದು WPL ಮೆಗಾ ಹರಾಜು - ಎಷ್ಟು ಗಂಟೆಯಿಂದ ಆರಂಭ? ಎಲ್ಲಿ ವೀಕ್ಷಿಸಬಹುದು? ಆರ್‌ಸಿಬಿ ಪರ್ಸ್‌ನಲ್ಲಿರೋ ಹಣ ಎಷ್ಟು?

ನವದೆಹಲಿ: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನಡೆಯಲಿದ್ದು, ಸಾಕಷ್ಟು ಕುತೂಹಲ ಗರಿಗೆದರಿದೆ. ಈ ಬಾರಿ ಹರಾಜಿನಲ್ಲಿ ಎಷ್ಟು ಆಟಗಾರ್ತಿಯರು ಪಾಲ್ಗೊಂಡಿದ್ದಾರೆ? ಹರಾಜು ಆರಂಭ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

 

Read Full Story

09:17 AM (IST) Nov 27

KSCA ಚುನಾವಣೆ - ಕೋರ್ಟ್‌ನಲ್ಲಿ₹200 ಬಾಕಿ ವಾದ-ಪ್ರತಿವಾದ!

ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಕೆ.ಎನ್. ಶಾಂತಕುಮಾರ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸದಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

Read Full Story

08:50 AM (IST) Nov 27

ಪಲಾಶ್ ಮುಚ್ಚಲ್ ಚೀಟಿಂಗ್ ನಿಜನಾ? ವೈರಲ್ ಚಾಟ್ ಬಗ್ಗೆ ಕೊನೆಗೂ ತುಟಿಬಿಚ್ಚಿದ ಮೇರಿ ಡಿಕೋಸ್ಟಾ!

ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಮದುವೆ ಮುಂದೂಡಲ್ಪಟ್ಟ ಸಮಯದಲ್ಲಿ ವೈರಲ್ ಆದ ಚಾಟ್‌ಗಳ ಬಗ್ಗೆ ಮೇರಿ ಡಿಕೋಸ್ಟಾ ಸ್ಪಷ್ಟನೆ ನೀಡಿದ್ದಾರೆ.  ಅಷ್ಟಕ್ಕೂ ಮೇರಿ ಡಿಕೋಸ್ಟಾ ಏನಂದ್ರು? ವೈರಲ್ ಚಾಟ್‌ ಸತ್ಯಾಸತ್ಯತೆ ಏನು ನೋಡೋಣ ಬನ್ನಿ

Read Full Story

07:42 AM (IST) Nov 27

ದಿಗ್ಗಜ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಮನೆಯಲ್ಲಿ ದುರಂತ!

ಟೀಂ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರ ಅವರ ಭಾವಮೈದುನ ಜೀತ್ ಪಬಾರಿ ರಾಜ್‌ಕೋಟ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

More Trending News