ನವದೆಹಲಿ : ಇನ್ನು ಮುಂದೆ ವಿಮಾನ ಟಿಕೆಟ್ ಅನ್ನು ಬುಕ್ ಮಾಡಿದ 48 ಗಂಟೆ ಒಳಗೆ ಟಿಕೆಟ್ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್ಲೈನ್ಸ್ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ! ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್ ಬುಕ್ಕಿಂಗ್ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಈ ಆದೇಶ ಹೊರಡಿಸಿದೆ.
07:30 AM (IST) Feb 27
ಮೇಘಾಲಯ ವಿಧಾನಸಭೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರನ್ನು ಅವರ ಪತ್ನಿಯೇ ಆದ ಶಾಸಕಿ ಮೆಹ್ತಾಬ್ ಚಾಂಡಿ ಎ ಸಂಗ್ಮಾ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಸ್ಥಗಿತಗೊಂಡಿರುವ ಜಾನುವಾರು ಸಾಕಾಣೆ ತರಬೇತಿ, ಪಶುವೈದ್ಯಕೀಯ ಕಾಲೇಜುಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ.
07:08 AM (IST) Feb 27
ವಾಹನ ಚಾಲನೆಯಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಜವಾಬ್ದಾರಿಯುತ ಚಾಲನೆಯನ್ನು ಉತ್ತೇಜಿಸಿ, ರಸ್ತೆ ಅಪಘಾತ ತಡೆವ ಉದ್ದೇಶದಿಂದ ದರ್ಜೆ ಆಧರಿತ ವಾಹನ ಚಾಲನಾ ಪರವಾನಗಿ ವ್ಯವಸ್ಥೆಯನ್ನು (ಗ್ರೇಡ್ ಬೇಸ್ಡ್ ಡ್ರೈವಿಂಗ್ ಲೈಸೆನ್ಸ್ ಸಿಸ್ಟಂ) ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
06:10 AM (IST) Feb 27
ತೆಲಂಗಾಣದ ವಿದ್ಯುತ್ ಪ್ರಸರಣಾ ಘಟಕಗಳಲ್ಲಿ ಕೆಲಸ ಮಾಡುವ 20 ವರ್ಷಕ್ಕೂ ಹೆಚ್ಚು ಅನುಭವ ಇರುವ ಹಿರಿಯ ಸ್ವಚ್ಛತಾ ಕಾರ್ಮಿಕ ಸೇರಿ ಇತರೆ ಕ್ಲಾಸ್-4 ದರ್ಜೆಯ ಹಿರಿಯ ನೌಕರರ ವೇತನ ಸುಮಾರು 2 ಲಕ್ಷ ರುಪಾಯಿ! ಇನ್ನು ವಿದ್ಯುತ್ ಪ್ರಸರಣಾ ಇಲಾಖೆಯ ಮುಖ್ಯ ಎಂಜಿನಿಯರ್ ವೇತನ 7 ಲಕ್ಷ ರುಪಾಯಿ!!
06:09 AM (IST) Feb 27
ಟಿ20 ವಿಶ್ವಕಪ್ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ, ಭಾರತವು ಜಿಂಬಾಬ್ವೆ ವಿರುದ್ಧ 72 ರನ್ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 256 ರನ್ಗಳ ಬೃಹತ್ ಮೊತ್ತ ಕಲೆಹಾಕಿದ ಭಾರತದ ಸೆಮೀಸ್ ಕನಸು ಜೀವಂತ.
06:04 AM (IST) Feb 27
ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 10 ಕೋಟಿ ಹಿಂಬಾಲಕರನ್ನು ಗಳಿಸಿದ್ದಾರೆ. ಈ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ವಿಶ್ವನಾಯಕ ಎನ್ನಿಸಿಕೊಂಡಿದ್ದಾರೆ.
05:57 AM (IST) Feb 27
ಪಂಚ ಗ್ಯಾರಂಟಿಗಳ ವಿಚಾರದಲ್ಲಿ ಗೊಂದಲದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಜನಸಾಮಾನ್ಯರು ಮತ್ತು ಯುವಜನರ ಹಿತಾಸಕ್ತಿ ಮರೆತಿದೆ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
05:52 AM (IST) Feb 27
ನಮಗೆ ಎಷ್ಟೇ ಕಷ್ಟವಾದರೂ ಜನರಿಗೆ ಸ್ವಾಭಿಮಾನದ ಬದುಕು ಕೊಡುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.