LIVE NOW
Published : May 23, 2026, 04:25 AM ISTUpdated : May 23, 2026, 06:06 AM IST

India Latest News Live: ರಾಜ್ಯಸಭೆ - ಎಚ್‌.ಡಿ.ದೇವೇಗೌಡರ ಮರು ಆಯ್ಕೆಗೆ ಒಪ್ತಾರಾ ಮೋದಿ? JDSಗಿಲ್ಲ ಸಂಖ್ಯಾಬಲ

ಸಾರಾಂಶ

ನವದೆಹಲಿ: ಯುಎಪಿಎ ಕಾಯ್ದೆಯಡಿ ಬಂಧಿತನಾಗಿರುವ ದೆಹಲಿ ಗಲಭೆ ಆರೋಪಿ ಉಮರ್‌ ಖಾಲೀದ್‌ಗೆ ದೆಹಲಿ ಹೈಕೋರ್ಟ್‌ 3 ದಿನಗಳ ಜಾಮೀನನ್ನು ಶುಕ್ರವಾರ ಮಂಜೂರು ಮಾಡಿದೆ. ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿರುವುದರಿಂದ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಇದನ್ನು ಮನ್ನಿಸಿದ ಹೈಕೋರ್ಟ್‌ ಜೂ.1ರಿಂದ 3ರವರೆಗೆ ಜಾಮೀನು ನೀಡಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್‌ನ ದ್ವಿಪಕ್ಷೀಯ ಪೀಠ ಉಮರ್‌ ಸೇರಿದಂತೆ ಇತರ ಆರೋಪಿಗಳ ಕಾಯಂ ಜಾಮೀನು ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ ಅಬ್ದುಲ್‌ ಖಾಲೀದ್‌ ಸೈಫಿ ಹಾಗೂ ತಸ್ಲೀಂ ಅಹ್ಮದ್‌ ಎಂಬ ಇಬ್ಬರು ಆರೋಪಿಗಳಿಗೆ 6 ತಿಂಗಳ ಮಧ್ಯಂತರ ಜಾಮೀನು ನೀಡಿದೆ.

06:06 AM (IST) May 23

ರಾಜ್ಯಸಭೆ - ಎಚ್‌.ಡಿ.ದೇವೇಗೌಡರ ಮರು ಆಯ್ಕೆಗೆ ಒಪ್ತಾರಾ ಮೋದಿ? JDSಗಿಲ್ಲ ಸಂಖ್ಯಾಬಲ

ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮರು ಆಯ್ಕೆಗೆ ಜೆಡಿಎಸ್ ಬಳಿ ಸಂಖ್ಯಾಬಲವಿಲ್ಲ. ಹೀಗಾಗಿ, ಮಿತ್ರಪಕ್ಷವಾದ ಬಿಜೆಪಿಯ ಬೆಂಬಲವನ್ನು ಜೆಡಿಎಸ್ ನಿರೀಕ್ಷಿಸುತ್ತಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವೇ ಅಂತಿಮವಾಗಲಿದೆ.
Read Full Story

05:51 AM (IST) May 23

74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?

ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಕರ್ನಾಟಕದ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಆದರೆ, ಕಳೆದ 74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಕೇವಲ 11 ಆಗಿದ್ದು, ಇದು ರಾಜಕೀಯ ಪಕ್ಷಗಳಿಂದ ಮಹಿಳೆಯರ ನಿರಂತರ ಕಡೆಗಣನೆಯನ್ನು ತೋರಿಸುತ್ತದೆ.
Read Full Story

05:33 AM (IST) May 23

ಜೆಇಇ, ನೀಟ್‌ ಪ್ರವೇಶ ಪರೀಕ್ಷೆ ರದ್ದು ಆಗುತ್ತಾ? ಕೇಂದ್ರ ಸರ್ಕಾರದ ಮುಂದೆ ಹೊಸ ಪ್ರಸ್ತಾಪ

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ರದ್ದುಗೊಳಿಸಿ, ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ನೀಟ್‌ ಪತ್ರಿಕೆ ಸೋರಿಕೆ ನಂತರ ಪರೀಕ್ಷಾ ಸುಧಾರಣೆಯ ಭಾಗವಾಗಿ ಈ ಚಿಂತನೆ ನಡೆದಿದೆ.

Read Full Story

More Trending News