Published : May 21, 2026, 07:13 AM ISTUpdated : May 21, 2026, 10:57 PM IST

India Latest News Live: ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಹಾಕಿ ಡ್ಯಾನ್ಸ್, ದಾಳಿ ಬದಲು ಆನೆಯಿಂದಲೂ ಸಖತ್ ಸ್ಟೆಪ್ಸ್ ವೈರಲ್

ಸಾರಾಂಶ

ಭೋಪಾಲ್: ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಕಳೆದ ವಾರ ತನ್ನ ವೈವಾಹಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ನೋಯ್ಡಾ ಮಹಿಳೆ ತ್ವಿಶಾ ಶರ್ಮಾ ಅವರ ಶವವನ್ನು ಸಂರಕ್ಷಿಸುವಂತೆ ಸ್ಥಳೀಯ ನ್ಯಾಯಾಲಯ ಬುಧವಾರ ಆದೇಶಿಸಿದೆ. ಆದರೆ ಎರಡನೇ ಶವಪರೀಕ್ಷೆ ನಡೆಸಬೇಕೆಂಬ ಅವರ ಕುಟುಂಬದ ಮನವಿಯನ್ನು ತಿರಸ್ಕರಿಸಿದೆ.ನಿವೃತ್ತ ನ್ಯಾಯಾಧೀಶರ ಸೊಸೆ ತ್ವಿಶಾ ಶರ್ಮಾ (33) ಇಲ್ಲಿನ ತಮ್ಮ ವೈವಾಹಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಸಾವು ಆಕ್ರೋಶದ ಅಲೆ ಎಬ್ಬಿಸಿತ್ತು.

Wild Elephant Viral Dance

10:57 PM (IST) May 21

ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಹಾಕಿ ಡ್ಯಾನ್ಸ್, ದಾಳಿ ಬದಲು ಆನೆಯಿಂದಲೂ ಸಖತ್ ಸ್ಟೆಪ್ಸ್ ವೈರಲ್

ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಪ್ಲೇ ಮಾಡಲಾಗಿದೆ. ಬಳಿಕ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಇತ್ತ ಕೆಲವೇ ದೂರದಲ್ಲಿ ಆನೆ ಕೂಡ ಆತನ ತಾಳಕ್ಕೆ ತಕ್ಕಂತೆ ಸ್ಟೆಪ್ಸ್ ಹಾಕಿದ ವಿಡಿಯೋ ಭಾರಿ ವೈರಲ್ ಆಗಿದೆ.

Read Full Story

09:56 PM (IST) May 21

ಪವನ್ ಕಲ್ಯಾಣ್‌ರನ್ನು ನೋಡಿ ಭಾವುಕರಾದ ಚಿರಂಜೀವಿ - ‘ಮೆಗಾ158’ ಮುಹೂರ್ತದಲ್ಲಿ ಏನಾಯ್ತು?

ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ 'ಮೆಗಾ158' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಅವರ ಸಹೋದರ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮಿಸಿದ್ದು ವಿಶೇಷವಾಗಿತ್ತು.

Read Full Story

09:54 PM (IST) May 21

ಚಿತೆಗೆ ಬೆಂಕಿ ಇಡುವ ಮೊದಲು ಸರಯು ನದಿಯಲ್ಲಿ ಮುಳುಗಿದವನ ಎಳೆದೊಯ್ದ ಮೊಸಳೆ, ವಿಡಿಯೋ

ಅತ್ತೆ ನಿಧನ ಸುದ್ದಿ ಕೇಳಿ ಕುಟುಂಬ ಸಮೇತ ಊರಿಗೆ ತೆರಳಿದ 30ರ ಹರೆಯದ ವ್ಯಕ್ತಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಚಿತೆಗೆ ಬೆಂಕಿ ಇಡುವ ಮೊದಲು ನದಿಯಲ್ಲಿ ಮುಳುಗೆಳಲು ನೀರಿಗೆ ಇಳಿದ ಬೆನ್ನಲ್ಲೇ ಮೊಸಳೆ ಎಳೆದೊಯ್ದಿದೆ.

 

Read Full Story

09:22 PM (IST) May 21

ಹಾಲಿವುಡ್‌ನಲ್ಲಿ ಮತ್ತೆ ಅರ್ನಾಲ್ಡ್ ಆ್ಯಕ್ಷನ್ - ‘ಕಿಂಗ್ ಕೋನಾನ್’ ಬಗ್ಗೆ ಹೊರಬಿದ್ದ ರಹಸ್ಯವೇನು?

ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ 'ಕಿಂಗ್ ಕೋನಾನ್' ಸೀಕ್ವೆಲ್ 2027ರಲ್ಲಿ ಶುರುವಾಗಲಿದೆ ಎಂದು ಖಚಿತಪಡಿಸಿದ್ದಾರೆ. ಕ್ರಿಸ್ಟೋಫರ್ ಮೆಕ್ವಾರಿ ಈ ಚಿತ್ರವನ್ನು ಬರೆದು ನಿರ್ದೇಶಿಸಲಿದ್ದಾರೆ. ವಯಸ್ಸಾದ, ರಾಜನಾಗಿ ಸುಖವಾಗಿದ್ದ ಕೋನಾನ್‌ನನ್ನು ಶತ್ರುಗಳು ಟಾರ್ಗೆಟ್ ಮಾಡುವುದೇ ಈ ಚಿತ್ರದ ಕಥೆ.

Read Full Story

08:43 PM (IST) May 21

Melody ಚಾಕ್ಲೇಟ್ ವಿವಾದ ನಡುವೆ ಇಟಲಿ ಪ್ರಧಾನಿ ಜೊತೆಗಿನ ಹೊಸ ರೀಲ್ ಹಂಚಿಕೊಂಡ ಮೋದಿ

ಪ್ರಧಾನಿ ಮೋದಿಯ ಇಟಲಿ ಪ್ರವಾಸ, ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕ್ಲೇಟ್ ನೀಡಿರುವುದಕ್ಕೆ ವಿಪಕ್ಷ ಟೀಕಿಸಿದೆ. ಇದರ ಬೆನ್ನಲ್ಲೇ ಮೋದಿ ಹೊಸ ರೀಲ್ ಹಂಚಿಕೊಂಡಿದ್ದಾರೆ. ಈ ರೀಲ್ ವೈರಲ್ ಆಗಿದೆ.

Read Full Story

08:29 PM (IST) May 21

ಕೋಟ್ಯಧಿಪತಿ ಮಗಳು, ಆದರೂ ಸರಳ ಜೀವನ - ಸ್ಟಾರ್ ನಟನ ಪತ್ನಿ ಲೈಮ್‌ಲೈಟ್‌ನಿಂದ ದೂರವಿರುವುದೇಕೆ?

ಸೂಪರ್‌ಸ್ಟಾರ್ ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ, ಗಂಡನ ಸ್ಟಾರ್‌ಡಮ್ ನಡುವೆಯೂ ಸದಾ ಲೈಮ್‌ಲೈಟ್‌ನಿಂದ ದೂರವೇ ಇರುತ್ತಾರೆ. ಖಾಸಗಿ ಜೀವನ ಇಷ್ಟಪಡುವ ಇವರು, ಉದ್ಯಮಿ ಕುಟುಂಬದ ಹಿನ್ನೆಲೆಯುಳ್ಳವರು. ತಮ್ಮ ಮಕ್ಕಳೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ.

Read Full Story

07:47 PM (IST) May 21

ಬಿಸಿಲಿನಿಂದ ಬಸವಳಿದು ಬಸ್ ನಿಲ್ಲಿಸಿ ನೀರು ಕೇಳಿದ ಕೋತಿಗಳು, ಮನಕಲುಕುವ ದೃಶ್ಯ ಸೆರೆ

ಮನಕಲುಕುವ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಾಯಾರಿದ ಕೋತಿಗಳು ಬೇರೆ ದಾರಿ ಕಾಣದೆ ಕೊನೆಗೆ ಸಾರಿಗೆ ಬಸ್ ನಿಲ್ಲಿಸಿ ಪ್ರಯಾಣಿಕರಲ್ಲಿ ನೀರು ಕೇಳಿದ ಘಟನೆ ನಡೆದಿದೆ. ತಕ್ಷಣವೇ ಸ್ಪಂದಿಸಿದ ಪ್ರಯಾಣಿಕರು ಕೋತಿಗಳಿಗೆ ನೀರುಣಿಸಿದ ದೃಶ್ಯ ಭಾರಿ ವೈರಲ್ ಆಗಿದೆ.

Read Full Story

07:32 PM (IST) May 21

ನೇಪಾಳದ ಸೌಂದರ್ಯ ಸವಿಯಲು ವಿಶೇಷ ರೈಲು ಆರಂಭ - ದರ ಎಷ್ಟು, ಸೌಲಭ್ಯ ಏನು, ಫುಲ್​ ಡಿಟೇಲ್ಸ್​ ಇಲ್ಲಿದೆ

ಭಾರತೀಯ ರೈಲ್ವೆ ಮತ್ತು IRCTC ಮೊದಲ ಬಾರಿಗೆ ಮಧ್ಯ ಭಾರತದಿಂದ ನೇಪಾಳಕ್ಕೆ 'ಪಶುಪತಿನಾಥ ನೇಪಾಳ ದರ್ಶನ ಯಾತ್ರೆ' ಎಂಬ ಭಾರತ್ ಗೌರವ್ ಪ್ರವಾಸಿ ರೈಲನ್ನು ಪ್ರಾರಂಭಿಸುತ್ತಿವೆ.  10 ದಿನಗಳ ಪ್ರವಾಸವು, ಪಶುಪತಿನಾಥ ದೇವಾಲಯ, ಪೋಖರಾ ಮತ್ತು ಚಿತ್ವಾನ್ ರಾಷ್ಟ್ರೀಯ ಉದ್ಯಾನ ಇತ್ಯಾದಿ ಇರುವ  ಪ್ಯಾಕೇಜ್ ಆಗಿದೆ.

Read Full Story

07:32 PM (IST) May 21

Number 13 - 'ಅದೊಂದು ಪಾಪದ ನಂಬರ್, 13ನೇ ನಂಬರ್ ಅನ್‌ಲಕ್ಕಿ ಅಲ್ಲ;- ಅದೇ ನಂಬರ್ ಕೇಳಿ ಪಡೆದ ಸಚಿವರು!

ಕೇರಳದ ಸ್ಥಳೀಯಾಡಳಿತ ಸಚಿವ ಕೆ.ಎಂ. ಷಾಜಿ, 'ಅಪಶಕುನ' ಎಂದು ಯಾರೂ ತೆಗೆದುಕೊಳ್ಳದ 13ನೇ ನಂಬರಿನ ಸರ್ಕಾರಿ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. '13 ಒಂದು ಪಾಪದ ನಂಬರ್, ನನಗೆ ಇಂತಹ ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲ' ಎಂದಿದ್ದಾರೆ. ಆದರೆ, ನಿಜವಾಗಿಯೂ 13 ನಂಬರ್ ಸಮಸ್ಯಾತ್ಕವೇ?

Read Full Story

07:28 PM (IST) May 21

ದೃಶ್ಯಂ 3 ಸಿನಿಮಾ ಹೇಗಿದೆ? ಮೋಹನ್‌ಲಾಲ್ ಅಭಿನಯ ಸೂಪರ್.. ಆದರೆ ದೊಡ್ಡ ಕೊರತೆ ಏನು?

ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತಿದೆಯಾ? ಕಥೆ, ಕ್ಲೈಮ್ಯಾಕ್ಸ್, ಸಸ್ಪೆನ್ಸ್, ಜೀತು ಜೋಸೆಫ್ ನಿರ್ದೇಶನ ಮತ್ತು ನಟನೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.

Read Full Story

07:17 PM (IST) May 21

Just Married ಕಾರಿನ ಒಳಗೆ ನೂತನ ಜೋಡಿ, ಪೊಲೀಸ್ರು ಚೆಕ್​ ಮಾಡಿದಾಗ ಮಾತ್ರ ಸಿಕ್ಕಿದ್ದೇ ಬೇರೆ!

ಬಿಹಾರದ ಸೀತಾಮರ್ಹಿಯಲ್ಲಿ, 'ಜಸ್ಟ್ ಮ್ಯಾರೀಡ್' ಎಂದು ಶೃಂಗರಿಸಿದ ಕಾರಿನಲ್ಲಿ ನಕಲಿ ವಧು-ವರರು ಡ್ರಗ್ಸ್ ಸಾಗಿಸುತ್ತಿದ್ದರು. ಪೊಲೀಸರು ಅನುಮಾನದ ಮೇಲೆ ಕಾರನ್ನು ತಡೆದು ಪರಿಶೀಲಿಸಿದಾಗ, ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
Read Full Story

06:57 PM (IST) May 21

ಆಸ್ಪತ್ರೆಗೆ ದಾಖಲಾದ್ರಾ ನಟ ಸಂಜಯ್ ದತ್? ಅಮೆರಿಕದಿಂದ ಬಂದ ಸುದ್ದಿಗೆ ಅಭಿಮಾನಿಗಳು ಆತಂಕ!

ಬಾಲಿವುಡ್ ನಟ ಸಂಜಯ್ ದತ್ ಅಮೆರಿಕದಲ್ಲಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಆಪ್ತರು ಸ್ಪಷ್ಟನೆ ನೀಡಿದ್ದಾರೆ.

Read Full Story

06:44 PM (IST) May 21

ಸ್ನೇಹಿತನ ಜೊತೆ ಹನಿಮೂನ್​, ಸ್ನಾನದ ವಿಡಿಯೋ ಹಂಚಿಕೊಂಡ Bigg Boss ತೇಜಸ್ವಿ; ಕಣ್ಣು ಕಿತ್ಕೊಳಪ್ಪಾ ಎಂದ ಫ್ಯಾನ್ಸ್​

ಬಿಗ್​ಬಾಸ್​ ಮೂಲಕ ಒಂದಾದ ಹಿಂದಿ ಕಿರುತೆರೆ ಜೋಡಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದ್ಯ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ, ಮದುವೆಗೂ ಮುನ್ನವೇ ಈ ಜೋಡಿ ಮಾರಿಷಸ್ ಪ್ರವಾಸದ ವ್ಲಾಗ್ ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವ ದೃಶ್ಯವಿದೆ.

Read Full Story

06:39 PM (IST) May 21

Jr NTR ಡ್ರ್ಯಾಗನ್ ಗ್ಲಿಂಪ್ಸ್ ನೋಡಿ ಅಲ್ಲು ಅರ್ಜುನ್-ರಿಷಬ್ ಶೆಟ್ಟಿ ಇಬ್ಬರೂ ಹೇಳಿದ್ದು ಒಂದೇ ಮಾತು!

ಜೂ.ಎನ್‌ಟಿಆರ್‌ ಹುಟ್ಟುಹಬ್ಬದಂದು ಬಿಡುಗಡೆಯಾದ ‘ಡ್ರ್ಯಾಗನ್’ ಗ್ಲಿಂಪ್ಸ್‌ಗೆ ಅಲ್ಲು ಅರ್ಜುನ್ ಮತ್ತು ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಡ್ರ್ಯಾಗನ್’ ಹಾಗೂ ‘ನಿಜವಾದ ಮ್ಯಾನ್ ಆಫ್ ಮಾಸಸ್’ ಎಂದು ಬಣ್ಣಿಸಿ ಶುಭಾಶಯ ಕೋರಿದ್ದಾರೆ.

Read Full Story

06:35 PM (IST) May 21

ಎಕ್ಸ್ ಖಾತೆ ಬ್ಲಾಕ್ ಬೆನ್ನಲ್ಲೇ ಹೊಸ ಅಕೌಂಟ್ ತರೆದು ಮಹತ್ವದ ಸಂದೇಶ ಕೊಟ್ಟ ಕಾಕ್ರೋಚ್ ಜನತಾ ಪಾರ್ಟಿ

ಯುವ ಸಮೂಹಗಳ ಸೋಶಿಯಲ್ ಮೀಡಿಯಾ ಸಂಚಲನ ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ನಿರ್ಬಂಧಿಸಿದ ಮಾಡಿದ ಬೆನ್ನಲ್ಲೇ ಹೊಸ ಅಕೌಂಟ್ ತೆರೆಯಲಾಗಿದೆ. ಇದೇ ವೇಳೆ ಮಹತ್ವದ ಸಂದೇಶ ರವಾನಿಸಲಾಗಿದೆ.

Read Full Story

06:09 PM (IST) May 21

ಟಾಕ್ಸಿಕ್ ಬೆಡಗಿಯ ಹೊಸ ಪೋಸ್ಟ್ ವೈರಲ್ - ಫೋಟೋದಲ್ಲಿ ಕಾಣಿಸಿದ್ದು ಮಗಳ ಮುಖವಲ್ಲ, ಆದರೆ..

ನಟಿ ಕಿಯಾರಾ ಅಡ್ವಾಣಿ ತಮ್ಮ ಮಗಳು ಸಾರಾಯಾಳ ಅಪರೂಪದ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಫ್ಲೈಟ್‌ನಲ್ಲಿ ತೆಗೆದ ಈ ಫೋಟೋದಲ್ಲಿ, ಮಗುವಿನ ಪುಟ್ಟ ಕೈ ಆಟಿಕೆಯೊಂದನ್ನು ಹಿಡಿಯಲು ಚಾಚಿದೆ. ಕಿಯಾರಾ, ಪತಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮಗಳು ಸದ್ಯ ಫ್ಯಾಮಿಲಿ ವೆಕೇಷನ್‌ನಲ್ಲಿದ್ದಾರೆ.

Read Full Story

06:05 PM (IST) May 21

IPL ಪ್ಲೇ ಆಫ್‌ಗೂ ಮೊದಲೇ ಆರ್‌ಸಿಬಿಗೆ ಗುಡ್ ನ್ಯೂಸ್! ರಣಬೇಟೆಗಾರನ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು ಫ್ರಾಂಚೈಸಿ

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ತಂಡವಾಗಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರು ತಂಡಕ್ಕೆ ಮತ್ತೊಂದು ಗುಡ್‌ ನ್ಯೂಸ್ ಸಿಕ್ಕಿದ್ದು, ಫ್ರಾಂಚೈಸಿಯು ರಣಬೇಟೆಗಾರನ ಸ್ವಾಗತಕ್ಕೆ ಸಜ್ಜಾಗಿದೆ.

 

Read Full Story

05:58 PM (IST) May 21

Jr. NTR Magic - ಸೃಷ್ಟಿಕರ್ತ ರೆಸ್ಟ್ ತಗೊಂಡಾಗ ಹುಟ್ಟಿದ ಕ್ರೂರಿ 'ಡ್ರ್ಯಾಗನ್'.. ಕಡುಗತ್ತಲೆ ಸಾಮ್ರಾಜ್ಯದಲ್ಲೇನು ನಡೆಯುತ್ತೆ?!

ಪ್ರಶಾಂತ್ ನೀಲ್ ಮತ್ತೊಮ್ಮೆ ಭಾರತೀಯ ಚಿತ್ರರಂಗ ಬೆರಗಾಗುವಂತಹ ಒಂದು ಕರಾಳ ಅಫೀ*ಮು ಲೋಕವನ್ನ ಸೃಷ್ಟಿ ಮಾಡಿದ್ದಾರೆ. ಜೂನಿಯರ್ ಎನ್.ಟಿ.ಆರ್ ರಗಡ್ ಲುಕ್, 1967ರ ಕಾಲಘಟ್ಟದ ಕಥೆ, ಕ್ರೂರ ವಿಲನ್‌ಗಳ ಅಟ್ಟಹಾಸ ಹಾಗೂ ನಮ್ಮ ರುಕ್ಮಿಣಿ ವಸಂತ್ ಪ್ರೆಸೆನ್ಸ್...

Read Full Story

05:46 PM (IST) May 21

ಸಾರಾ ತೆಂಡೂಲ್ಕರ್ ಖಡಕ್ ಉತ್ತರಕ್ಕೆ ಪಾಪರಾಝಿ ಪೋಸ್ಟ್ ಡಿಲೀಟ್ - ಅಸಲಿಗೆ ಆಗಿದ್ದೇನು?

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ, ತಮಗೆ 'ಮೋಟಿ ವಾಲಿ ಸಾರಾ' (ದಪ್ಪ ಇರುವ ಸಾರಾ) ಎಂದು ಕಾಮೆಂಟ್ ಮಾಡಿದ ಮುಂಬೈ ಪಾಪರಾಝಿ ವಿರುದ್ಧ ಕಿಡಿಕಾರಿದ್ದಾರೆ. ಸಾರಾ ಅವರ ಖಡಕ್ ಉತ್ತರಕ್ಕೆ ಹೆದರಿದ ಆತ ಪೋಸ್ಟ್ ಡಿಲೀಟ್ ಮಾಡಿದ್ದಾನೆ.

Read Full Story

05:33 PM (IST) May 21

ಬಲಭಾಗದ ಕಿಡ್ನಿಯಲ್ಲಿ ಸಮಸ್ಯೆ, ಎಡಭಾಗ ತೆಗೆದು ಮಹಿಳೆಯನ್ನು ಸಾಯಿಸಿದ ವೈದ್ಯರು - 2 ಕೋಟಿ ಪರಿಹಾರಕ್ಕೆ ಆದೇಶ

ಕಿಡ್ನಿ ಸಮಸ್ಯೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ, ವೈದ್ಯರು ತಪ್ಪು ಶಸ್ತ್ರಚಿಕಿತ್ಸೆ ನಡೆಸಿ ಆರೋಗ್ಯವಂತ ಕಿಡ್ನಿಯನ್ನು ತೆಗೆದುಹಾಕಿದ್ದಾರೆ. ಇದರಿಂದ ಮಹಿಳೆ ಮೃತಪಟ್ಟಿದ್ದು, ಈ ವೈದ್ಯಕೀಯ ನಿರ್ಲಕ್ಷ್ಯವನ್ನು ಪ್ರಶ್ನಿಸಿದ ಪತಿಗೆ ರಾಷ್ಟ್ರೀಯ ಗ್ರಾಹಕರ ವೇದಿಕೆಯು ಆಸ್ಪತ್ರೆಯಿಂದ 2 ಕೋಟಿ ರೂಪಾಯಿ ಪರಿಹಾರವನ್ನು ಕೊಡಿಸಿದೆ.
Read Full Story

05:26 PM (IST) May 21

ಗಂಡನ ಮುಂದೆ ಕುಡಿದು ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ ಪುಷ್ಪ ನಟಿ? ಅಷ್ಟಕ್ಕೂ ಅಂದು ರಾತ್ರಿ ಆಗಿದ್ದೇನು?

ಒಂದು ಘಟನೆಯಿಂದಾಗಿ ಪುಷ್ಪ ನಟಿ ಅನಸೂಯಾ ಭಾರದ್ವಾಜ್ ಮಧ್ಯರಾತ್ರಿ ಗಂಡನ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಕುಡಿದು ಅತ್ತಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ರಾತ್ರಿ ಆಗಿದ್ದೇನು?

Read Full Story

05:25 PM (IST) May 21

ಎಬೋಲಾ ವೈರಸ್ ಸ್ಫೋಟದಿಂದ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ ಆಫ್ರಿಕನ್ ಶೃಂಗಸಭೆ ಮುಂದೂಡಿಕೆ

ಕೊರೋನಾಗಿಂತ ಭೀಕರ ಎಬೋಲಾ ವೈರಸ್ ಸ್ಫೋಟಗೊಂಡ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ನಡಯಬೇಕಿದ್ದ ಭಾರತ ಆಫ್ರಿಕನ್ ಯೂನಿಯನ್ ಶೃಂಗಸಭೆಯನ್ನು ಮುಂದೂಡಲಾಗಿದೆ.

Read Full Story

05:07 PM (IST) May 21

ಹುಟ್ಟುಹಬ್ಬದ ದಿನವೇ ಜಾರ್ಜ್‌ಕುಟ್ಟಿಯ ಅಸಲಿ ಸೀಕ್ರೆಟ್ ಬಿಚ್ಚಿಟ್ರು ಮೋಹನ್‌ಲಾಲ್ - ಅಷ್ಟಕ್ಕೂ ಏನಂದ್ರು?

ದೃಶ್ಯಂ ಫ್ರಾಂಚೈಸ್‌ನ ಜಾರ್ಜ್‌ಕುಟ್ಟಿ ಪಾತ್ರವನ್ನು ನಿರ್ವಹಿಸುವಾಗ ಎದುರಾದ ಸವಾಲುಗಳ ಬಗ್ಗೆ ನಟ ಮೋಹನ್‌ಲಾಲ್ ಮಾತನಾಡಿದ್ದಾರೆ. ಹೊರಗಿನಿಂದ ಶಾಂತವಾಗಿ ಕಂಡರೂ, ಒಳಗೆ ಭಯ ಮತ್ತು ಸಂಘರ್ಷದಲ್ಲಿರುವ ವ್ಯಕ್ತಿ ಆತ ಎಂದು ಅವರು ಹೇಳಿದ್ದಾರೆ.

Read Full Story

05:01 PM (IST) May 21

ಸೋನಿಯಾ ತವರಲ್ಲಿ ಮೋದಿ ಮೋಡಿ​ - ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ

ಇಟಲಿ ಪ್ರವಾಸದಲ್ಲಿ ಪ್ರಧಾನಿ ಮೋದಿ, ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪಾರ್ಲೆ ಮೆಲೋಡಿ ಚಾಕಲೇಟ್ ಉಡುಗೊರೆಯಾಗಿ ನೀಡಿದರು. ಈ ಘಟನೆಯ ವೈರಲ್ ರೀಲ್ ದಾಖಲೆ ಸೃಷ್ಟಿಸಿದ್ದಲ್ಲದೆ, 'ಮೇಕ್ ಇನ್ ಇಂಡಿಯಾ'ಗೆ ಉತ್ತೇಜನ ನೀಡಿ ಪಾರ್ಲೆ ಕಂಪನಿಯ ಶೇರು ಮೌಲ್ಯವನ್ನು 5% ಹೆಚ್ಚಿಸಿತು. 

Read Full Story

04:54 PM (IST) May 21

ಬೆಂಗಳೂರಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಟೇಲ್ ಸ್ಟ್ರೈಕ್, ರಿಟರ್ನ್ ಫ್ಲೈಟ್ ರದ್ದು

ದೆಹಲಿ ಬೆಂಗಳೂರು ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ ಘಟನೆ ನಡೆದಿದೆ. ಲ್ಯಾಂಡಿಂಗ್ ವೇಳೆ ಟೇಲ್ ಸ್ಟೈಕ್ ಘಟನೆಯಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.

Read Full Story

04:53 PM (IST) May 21

Indian Railways - ರೈಲಲ್ಲಿ ಬ್ಯಾಗ್, ಫೋನ್ ಮರೆತು ಹೋಯ್ತಾ? ಈ ನಂಬರ್‌ಗೆ ಕಾಲ್ ಮಾಡಿದ್ರೆ ಸಾಕು!

ರೈಲಿನಲ್ಲಿ ಲಗೇಜ್ ಮರೆತು ಆತಂಕಪಡುತ್ತಿದ್ದೀರಾ? 'ರೈಲ್ ಮದದ್' ಆ್ಯಪ್ ಮತ್ತು 139 ಸಹಾಯವಾಣಿ ಮೂಲಕ ಕಳೆದುಹೋದ ವಸ್ತುಗಳನ್ನು ಸುಲಭವಾಗಿ ಮರಳಿ ಪಡೆಯುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
Read Full Story

04:47 PM (IST) May 21

ನನ್ನ ಕಣ್ಣಿನ ಹೊಳಪನ್ನ ಅವನೇ ವಾಪಸ್ ಕೊಟ್ಟಿದ್ದು - ಖುಷಿ ಹಂಚಿಕೊಂಡ ಬಿಗ್‌ಬಾಸ್ ಬೆಡಗಿ

ಬಿಗ್‌ಬಾಸ್ ಖ್ಯಾತಿಯ ಜಾಸ್ಮಿನ್ ಜಾಫರ್, ಡಿಪ್ರೆಶನ್ ಸಮಯದಲ್ಲಿ ತಮ್ಮ ಬದುಕನ್ನು ಬದಲಾಯಿಸಿದ ಸಾಕು ನಾಯಿ ರಿಯೋ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ರಿಯೋ ಬಂದ ಬಳಿಕ ಜೀವನದಲ್ಲಿ ಖುಷಿ ಮತ್ತು ಚೈತನ್ಯ ಮರಳಿದೆ ಎಂದು ಹೇಳಿದ್ದಾರೆ.

Read Full Story

04:21 PM (IST) May 21

ಒಳಗೆ ಕಾಲಿಟ್ಟಾಗ ಪ್ರಧಾನಿ ಮೋದಿ ಅಜ್ಜನಂತೆ ಕಂಡರು - ಆ ನಟಿಯ ಹೇಳಿಕೆ ವೈರಲ್!

ನಟಿ ಹಾಗೂ ಬಿಜೆಪಿ ನಾಯಕ ಕೃಷ್ಣಕುಮಾರ್ ಅವರ ಪುತ್ರಿ ಅಹಾನಾ ಕೃಷ್ಣ, ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ಭೇಟಿಯ ಅನುಭವವನ್ನು ಹಂಚಿಕೊಂಡಿರುವ ಅವರು, ಮೋದಿ ತಮಗೆ ಅಜ್ಜನಂತೆ ಕಂಡರು ಮತ್ತು ತುಂಬಾ ಸಲುಗೆಯಿಂದ ಮಾತನಾಡಿಸಿದರು ಎಂದು ಹೇಳಿದ್ದಾರೆ.

Read Full Story

04:18 PM (IST) May 21

ಪಾಕ್‌ನಲ್ಲಿ ಮತ್ತೆ ಧುರಂಧರ್ ಸದ್ದು, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಪರಿಚಿತನ ದಾಳಿಗೆ ಹತ್ಯೆ

ಪಾಕಿಸ್ತಾನದಲ್ಲಿ ಸೀಕ್ರೆಟ್ ಎಜೆಂಟ್‌ಗಳನ್ನು ನೇಮಿಸಿದರೂ ಧುರಂಧರ್ ಸದ್ದು ಮಾಡುತ್ತಿದೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಪರಿಚಿತನ ಗುಂಡಿನ ದಾಳಿಗೆ ಹತ್ಯೆಯಾಗಿದ್ದಾನೆ. ಈ ಹತ್ಯೆ ಬೆನ್ನಲ್ಲೇ ಪಾಕಿಸ್ತಾನ ಕಂಗಾಲಾಗಿದೆ.

 

Read Full Story

03:54 PM (IST) May 21

ಇನ್‌ಸ್ಟಾದಲ್ಲಿ ಬಿಜೆಪಿ ಹಿಂದಿಕ್ಕಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಬ್ಲಾಕ್

ಭಾರತದ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಪ್ರತಿಭಟನಾತ್ಮಕವಾಗಿ ಶುರುವಾದ ಕಾಕ್ರೋಚ್ ಜನತಾ ಪಾರ್ಟಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯತೆ ಪಡೆಯುತ್ತಿದೆ. ರಾಜಕೀಯ ಷಡ್ಯಂತ್ರಗಳ ಆರೋಪದ ಬೆನ್ನಲ್ಲೇ ಇದೀಗ ಕಾಕ್ರೋಚ್ ಪಾರ್ಟಿಯ ಎಕ್ಸ್ ಖಾತೆ ಬ್ಲಾಕ್ ಆಗಿದೆ.

Read Full Story

03:42 PM (IST) May 21

Jyotika - ದಕ್ಷಿಣ ಭಾರತದ ಸಿನಿಮಾರಂಗದ ಸೀಕ್ರೆಟ್ ಬಿಚ್ಚಿಟ್ಟು ಬಾಲಿವುಡ್‌ ಮಂದಿಗೆ ಶಾಕ್ ಕೊಟ್ಟ ಜ್ಯೋತಿಕಾ!

"ಇಂಡಸ್ಟ್ರಿಯಲ್ಲಿ ಎಷ್ಟೋ ಜನ ಪುರುಷ ನಟರಿದ್ದಾರೆ, ಅವರು 8 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುವುದಿಲ್ಲ. ಶಾಟ್ ಮುಗಿದಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಅವರು ತಮ್ಮ ಕಾರು ಹತ್ತಿ ಹೊರಟು ಹೋಗುತ್ತಾರೆ. ಅವರನ್ನು ಯಾರೂ ಪ್ರಶ್ನಿಸುವುದಿಲ್ಲ.

Read Full Story

03:23 PM (IST) May 21

ಬಿಯರ್, ಶ್ಯಾಂಪೇನ್,ಸಿಗರೇಟ್, 1983ರ ವಿಶ್ವಕಪ್ ಗೆಲುವಿನ ಪಾರ್ಟಿ ಬಿಲ್ ವೈರಲ್, ಕ್ರಿಕೆಟಿಗನ ಸ್ಪಷ್ಟನೆ

1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಮಾಡಿದ ಪಾರ್ಟಿ ಬಿಲ್ ಒಂದು ಭಾರಿ ಚರ್ಚೆಯಾಗುತ್ತಿದೆ. ಬಿಯರ್, ಶಾಂಪೇನ್, ಸಿಗರೇಟು ಸೇರಿದಂತೆ ಹಲವು ವಸ್ತುಗಳ ಬಿಲ್ ಇದಾಗಿದೆ. ಈ ಕುರಿತು ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಸ್ಪಷ್ಟನೆ ನೀಡಿದ್ದಾರೆ.

Read Full Story

02:49 PM (IST) May 21

ಸೋಲಿನ ಗಾಯದ ಮೇಲೆ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಬರೆ ಎಳೆದ ಬಿಸಿಸಿಐ..! ಮುಂಬೈ ಇಂಡಿಯನ್ಸ್ ನಾಯಕನಿಗೆ ಬಿಗ್ ಶಾಕ್

ಕೋಲ್ಕತಾ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪಾಲಿಗೆ 19ನೇ ಸೀಸನ್ ಐಪಿಎಲ್ ದುಸ್ವಪ್ನದಂತೆ ಕಾಡುತ್ತಿದೆ. ಇದೀಗ ಕೆಕೆಆರ್ ಎದುರು ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಬಿಸಿ ಮುಟ್ಟಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

02:09 PM (IST) May 21

Trisha - ದಳಪತಿ 'ದೊರೆ'ಯಾದ ಬೆನ್ನಲ್ಲೇ 'ಸೂರ್ಯ'ಗೆ ಶಾಪ ವಿಮೋಚನೆ ಮಾಡಿದ ತ್ರಿಷಾ; ಮುಂದೇನ್ ಗೊತ್ತಾ?

ವಿಜಯ್ ಪ್ರಮಾಣ ವಚನದ ದಿವಸ ತ್ರಿಷಾ ಸೀರೆಯುಟ್ಟು, ಮಲ್ಲಿಗೆ ಮುಡಿದು ಥೇಟ್ ವಿಜಯ್ ಪತ್ನಿಯ ರೀತಿ ಕಾಣಿಸಿಕೊಂಡಿದ್ರು. ಜಗತ್ತನ್ನೇ ಗೆದ್ದ ಖುಷಿ ಅವರ ಮೊಗದಲ್ಲಿ ಕಾಣ್ತಾ ಇತ್ತು. ಸೂರ್ಯನ ಗೆಲುವಿಗೂ ತ್ರಿಷಾ ಕಾರಣವಾದ್ರು. ಮುಂದೆ..?

 

Read Full Story

01:42 PM (IST) May 21

ಡೊನಾಲ್ಡ್ ಟ್ರಂಪ್ ಆ ಒಂದು ಹೇಳಿಕೆ ಬೆನ್ನಲ್ಲೇ ದಿಢೀರ್ ಏರಿಕೆ ಕಂಡ ಚಿನ್ನದ ಬೆಲೆ! ಬಂಗಾರ ಖರೀದಿಸುವ ಮುನ್ನ ಈ ಸ್ಟೋರಿ ನೋಡಿ

ಬೆಂಗಳೂರು: ಚಿನ್ನದ ಬೆಲೆ ಇಳಿಯಿತು ಅಂದುಕೊಳ್ಳುವಷ್ಟರಲ್ಲೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಡೊನಾಲ್ಡ್ ಟ್ರಂಪ್ ಅವರ ಒಂದು ಹೇಳಿಕೆ ಇಡೀ ಮಾರುಕಟ್ಟೆಯನ್ನೇ ಅಲುಗಾಡಿಸಿದೆ. ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಖರೀದಿದಾರರು ಶಾಕ್ ಆಗಿದ್ದಾರೆ.

 

Read Full Story

01:27 PM (IST) May 21

ಚೀನಾ ನಿರ್ಮಿತ ಪಾಕಿಸ್ತಾನದ ತರಬೇತಿ ಜೆಟ್‌ ಪತನ ಪಂಜಾಬ್‌ನಲ್ಲಿ ಪತನ, ಪತನವಾದ 7ನೇ ವಿಮಾನ ಇದು!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಚೀನಾ-ಪಾಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹೊಂಗ್ಡು ಜೆಎಲ್‌-8 ತರಬೇತಿ ಯುದ್ಧವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಪಾರಾಗಿದ್ದು, ಪಾಕ್ ವಾಯುಪಡೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಅಪಘಾತಗಳು ರಕ್ಷಣಾ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
Read Full Story

01:14 PM (IST) May 21

Rubina Khan - 'ಗಿಡ್ಡ-ಸಣ್ಣ ಬಟ್ಟೆ ಧರಿಸಿದ್ರೆ ನಮ್ಗೆ ಡಬಲ್ ಪೇಮೆಂಟ್ ಸಿಗ್ತಿತ್ತು; ಬಾಲಿವುಡ್ ಕರಾಳತೆ ಬಿಚ್ಚಿಟ್ಟ ಡಾನ್ಸರ್!

"ಒಂದು ಹಾಡಿನ ಚಿತ್ರೀಕರಣದ ವೇಳೆ ನಾವು ರಣಬಿಸಿಲಿನಲ್ಲಿ ಬರಿಗಾಲಿನಲ್ಲಿ ಕುಣಿಯಬೇಕಿತ್ತು. ನೆಲ ಎಷ್ಟು ಸುಡುತ್ತಿತ್ತು ಎಂದರೆ, ಚಿತ್ರೀಕರಣ ಮುಗಿಯುವಷ್ಟರಲ್ಲಿ ನಮ್ಮೆಲ್ಲರ ಪಾದಗಳಲ್ಲಿ ದೊಡ್ಡ ದೊಡ್ಡ ಗುಳ್ಳೆಗಳಾಗಿದ್ದವು. ನೋವಿನಿಂದ ನಾವು ನರಳುತ್ತಿದ್ದರೂ ಕುಣಿಯಲೇಬೇಕಾದ ಅನಿವಾರ್ಯತೆ ಇತ್ತು"

Read Full Story

01:07 PM (IST) May 21

ಚೆನ್ನೈ ಸೂಪರ್ ಕಿಂಗ್ಸ್‌ಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ; ಪ್ಲೇಆಫ್ ಕನಸು ನುಚ್ಚುನೂರು ಮಾಡಲು ಗಿಲ್ ಪಡೆ ರೆಡಿ!

ಐಪಿಎಲ್ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡಲಿದೆ. ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಬಲಿಷ್ಠ ಗುಜರಾತ್ ತಂಡವನ್ನು ಎದುರಿಸುವುದು ಚೆನ್ನೈಗೆ ದೊಡ್ಡ ಸವಾಲಾಗಿದ್ದು, ಈ ಪಂದ್ಯದಲ್ಲಿ ಸೋತರೆ ಸಿಎಸ್‌ಕೆ ಟೂರ್ನಿಯಿಂದ ಹೊರಬೀಳಲಿದೆ.
Read Full Story

12:25 PM (IST) May 21

ಅಹಮದಾಬಾದ್‌ ಏರ್ ಇಂಡಿಯಾ ದುರಂತ, ಕುಳಿತ ಸ್ಥಿತಿಯಲ್ಲೇ ಏರ್ ಇಂಡಿಯಾ ಕ್ಯಾಪ್ಟನ್ ಶವ ಇತ್ತು - ಪ್ರತ್ಯಕ್ಷದರ್ಶಿ ಹೇಳಿಕೆ

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಕಂಡ ಆಘಾತಕಾರಿ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹವು,  ಸ್ಟೀರಿಂಗ್ ಹಿಡಿದ ಸ್ಥಿತಿಯಲ್ಲೇ ಇತ್ತು ಎಂದು ಅವರು ವಿವರಿಸಿದ್ದಾರೆ.

Read Full Story

11:52 AM (IST) May 21

IPL 2026 - ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಈ 6 ಸ್ಟಾರ್ ಆಟಗಾರರಿಗೆ ತಂಡದಿಂದ ಗೇಟ್‌ಪಾಸ್ ಕನ್ಫರ್ಮ್‌!

ಬೆಂಗಳೂರು: 2026ರ ಐಪಿಎಲ್ ಟೂರ್ನಿಯು ಲೀಗ್‌ ಹಂತದ ಮುಕ್ತಾಯದ ಹೊಸ್ತಿಲಲ್ಲಿದೆ. ಹೀಗಿರುವಾಗಲೇ 2027ರ ಐಪಿಎಲ್ ಹರಾಜಿಗೂ ಮೊದಲೇ ಕೆಲ ಆಟಗಾರರಿಗೆ ತಂಡದಿಂದ ಗೇಟ್‌ಪಾಸ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಲಿಸ್ಟ್‌ನಲ್ಲಿರುವ ಆರು ಸ್ಟಾರ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

More Trending News